Skip to main content

Blog number 2233.ತೀರ್ಥಹಳ್ಳಿ ತಾಲ್ಲೂಕಿನ ಬಾಂಡ್ಯಾದ ಕಲ್ಯಾಣ ಕುಮಾರ್ ಕೆಳದಿ ಅರಸರ ವಂಶಸ್ಥರು.

#ಕೆಳದಿ_ರಾಜ_ವಂಶಸ್ಥ_ತೀರ್ಥಹಳ್ಳಿ_ಬಾಂಡ್ಯಾ_ಕುಟುಂಬ

#ಯಾವುದೇ_ಉತ್ಪ್ರೇಕ್ಷೆ_ಇಲ್ಲದೆ_ಶಾಂತ_ಚಿತ್ತತೆಯಿಂದ

#ವಿವರಿಸುತ್ತಿರುವ_ಕಲ್ಯಾಣಕುಮಾರ್_ಬಾಂಡ್ಯಾ 

#ಕೆಳದಿ_ಇತಿಹಾಸ_ಮತ್ತೊಮ್ಮೆ_ಜನಮಾನಸದಲ್ಲಿ_ವಿಜೃಂಬಿಸುತ್ತಿದೆ

#ಜನರ_ಮರೆವಿನ_ಮಣ್ಣು_ಸರಿಸುವ_ಕೆಲಸ_ಪ್ರಾರಂಭವಾಗಿದೆ

#ಇತಿಹಾಸ_ಸಂಶೋದನೆ_ಕೆಲಸದಲ್ಲಿ_ತೊಡಗಿರುವ_ಶಿವಮೊಗ್ಗ_ಜಿಲ್ಲೆಯ

#ಉದಯೋನ್ಮುಖ_ಇತಿಹಾಸ_ಸಂಶೋಧಕರು_ಅವರಿಂದ_ಕೆಳದಿ_ಇತಿಹಾಸ

#ಇನ್ನೊಮ್ಮೆ_ಎಕ್ಸ್_ಫ್ಲೋರ್_ಮಾಡುತ್ತಿರುವ_ರಾಜ್ಯದ

#ಪ್ರಖ್ಯಾತ_ಡಿಜಿಟಲ್_ಮಾಧ್ಯಮದ_ನಂದಿನಿ_ಆಕರ್ಷ_ದಂಪತಿಗಳು.
   ನೀವು ಈ ಕೆಳಗಿನ ಎರೆಡು ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ ನೋಡಿ ಈವರೆಗೂ ನಮಗೆ ಯಾವುದೇ ಕೆಳದಿ ಇತಿಹಾಸ ಸಂಶೋಧಕರು ತಿಳಿಸದ ಇತಿಹಾಸ ನೀವು ನೋಡಬಹುದು.
I).https://youtu.be/LrOkmE3S95k?si=PSKr7uPSjNvQJwXO.

2).https://youtu.be/tlyCXHF055A?si=TvCADQjQVMBW_nt_.

   ಕೆಳದಿ ಇತಿಹಾಸ ಸಂಶೋಧನೆಯನ್ನು ಸರ್ಕಾರ ಕೆಳದಿ ಮ್ಯೂಸಿಯಂ ಮೂಲಕ ಮಾಡುತ್ತಿತ್ತು ಅದಕ್ಕೆ ಸಾಕಷ್ಟು ಹಣ ಹರಿದು ಬಂದಿತ್ತು ಆದರೆ ಅಲ್ಲಿ ಸಮಗ್ರ ಕೆಳದಿ ಇತಿಹಾಸ ಅಧ್ಯಯನ ನಡೆಯಲಿಲ್ಲ ಎನ್ನಿಸುತ್ತದೆ.
  ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದರೂ ಅರಣ್ಯ ಭೂಮಿಯಲ್ಲೇ ಉಳಿದ ಕೆಳದಿ ಸ್ಮಾರಕ ಪುರಾತತ್ವ ಇಲಾಖೆಗೆ ಹಸ್ತಾಂತರಿಸುವ ಕೆಲಸ ಆಗಲೇ ಇಲ್ಲ.
   ಶಿವಪ್ಪ ನಾಯಕ ಮತ್ತು ರಾಣಿ ಚೆನ್ನಮ್ಮರಿಗೆ ಮಾತ್ರ ಹೆಚ್ಚು ಪ್ರಚಾರ ನೀಡಿ ಉಳಿದ ರಾಜರ ರಾಣಿಯರ ಸಾಧನೆಗಳನ್ನ ಜನಸಾಮಾನ್ಯರಿಗೆ ತಿಳಿಸುವ ಫುಸ್ತಕಗಳು ಬರಲಿಲ್ಲ.
   ಕೆಳದಿ ಅರಸರ ವಂಶಸ್ಥರು ಶಿವಮೊಗ್ಗ ಜಿಲ್ಲೆಯಲ್ಲೇ ಇಲ್ಲ ಎನ್ನುತ್ತಿದ್ದರು.... ಹಾಗಾದರೆ ಇತಿಹಾಸ ಸಂಶೋಧಕರೆ ತೀಥ೯ಹಳ್ಳಿಯ ಬಾಂಡ್ಯದಲ್ಲಿರುವ ಕಾಡಿನ ಅರಮನೆ ಅಲ್ಲಿ ವಾಸ ಇರುವ ರಾಜವಂಶಸ್ಥರು ಅವರಲ್ಲಿರುವ ಐತಿಹಾಸಿಕ ದಾಖಲೆಗಳನ್ನ ನೋಡಿ.
   ಕೆಳದಿ ವಂಶಸ್ಥರಾದ ಈಗಿನ ತಲೆಮಾರಿನ ಯುವಕ ಕಲ್ಯಾಣ ಕುಮಾರ್ ಬಾಂಡ್ಯ ಯಾವುದೇ ಉತ್ಪ್ರೇಕ್ಷೆ ಇಲ್ಲದೆ, ತಣ್ಣಗೆ ದಾಖಲಾಗದ ಕೆಳದಿ ಇತಿಹಾಸವನ್ನ ತನ್ನ ವಂಶಸ್ಥರ ಅರಮನೆಯಲ್ಲಿ ದಾಖಲೆ ಸಮೇತ #ಡಿಜಿಟಲ್_ಮಾಧ್ಯಮದ ಮೂಲಕ  ವಿವರಿಸುತ್ತಿರುವುದು ನನಗೆ ಖುಷಿ ಅನ್ನಿಸಿತು ಅವರಿಗೆ ಅಭಿನಂದಿಸುತ್ತೇನೆ.
   ಮಣ್ಣಿನಲ್ಲಿ ಮುಚ್ಟಿ ಹೋದ ಶಾಸನ ತೆಗೆಯುವುದು ಸಂಶೋದನೆ ಜೊತೆಗೆ ಜನಮಾನಸದಲ್ಲಿ ಮರೆವಿನಿಂದ ಮುಚ್ಚಿ ಹೋದ ಇತಿಹಾಸದ ಕಥೆ, ಕಳೆದು ಹೋದ ಜನಪದ ಕಥೆಯಲ್ಲಿರುವ ನಿಜ ಇತಿಹಾಸದ ಸಂಪರ್ಕದ ತಂತುಗಳನ್ನು ಜೋಡಿಸಿ ತಿಳಿಸುವ ತೋರಿಸುವ ಕೆಲಸ ಕೂಡ ಇತಿಹಾಸ ಸಂಶೋದನೆ ಆಗಿದೆ.
  #ಗುಣಕ್ಕೆ_ಮತ್ಸರ ಬೇಡ ಜಿಲ್ಲೆಯ ಇತಿಹಾಸ ಅತ್ಯುತ್ತಮವಾಗಿ ತಿಳಿಸುತ್ತಿರುವ ನಂದಿನಿ ಮತ್ತು ಆಕರ್ಷ ದಂಪತಿಗಳ #ಡಿಜಿಟಲ್_ಮಾಧ್ಯಮಕ್ಕೆ ಅಭಿನಂದಿಸೋಣ.
   ವೀರಶೈವ ಕೆಳದಿ ಸಂಸ್ಥಾನದ ಪತನಕ್ಕೆ ವೈಷ್ಣವರು ಕಾರಣ ಎಂಬ ಕಲ್ಯಾಣ ಕುಮಾರ್ ಬಾಂಡ್ಯ ಮಾತು ಸುಮಾರು 180 ವರ್ಷದ ಹಿಂದಿನ ದಿವಾನ್ ಪೂರ್ಣಯ್ಯರ ಕಾಲಕ್ಕೆ ಹೋಗುತ್ತದೆ ಇದು ಸತ್ಯವೂ ಕೂಡ ಕೇವಲ ಜಾತಿ ಕಾರಣದಿಂದ ಈಗ ನಾವು ಪರಸ್ಪರ ಕೆಸರೆರಚಾಟ ಮಾಡಬೇಕಾಗಿಲ್ಲ ಇತಿಹಾಸ ನಡೆದ ಕಾಲದಲ್ಲಿ ನಾವ್ಯಾರು ಹುಟ್ಟಿರಲಿಲ್ಲ.
   ಕೇವಲ ಜಾತಿ ಆಧಾರದಲ್ಲಿ ರಾಜರ ಇತಿಹಾಸ ನೋಡದೆ #ರಾಜ_ಪ್ರತ್ಯಕ್ಷ_ದೇವ ಎಂಬ ನಾಣ್ಣುಡಿಯಂತೆ ಕೆಳದಿ ರಾಜರು ನಮ್ಮನ್ನಾಳಿದ ರಾಜ ರೂಪದ ದೇವರೆಂದೆ ಗೌರವಿಸೋಣ ಜೊತೆಗೆ ದಾಖಲಾಗದ ಸಾವಿರಾರು ಕೆಳದಿ ಇತಿಹಾಸದ ಕುರುಹುಗಳನ್ನ ದಾಖಲಿಸಿ ಸಂರಕ್ಷಿಸುವ ಕೆಲಸವೂ ನಡೆಯಲಿ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ