Skip to main content

Blog number 2233.ತೀರ್ಥಹಳ್ಳಿ ತಾಲ್ಲೂಕಿನ ಬಾಂಡ್ಯಾದ ಕಲ್ಯಾಣ ಕುಮಾರ್ ಕೆಳದಿ ಅರಸರ ವಂಶಸ್ಥರು.

#ಕೆಳದಿ_ರಾಜ_ವಂಶಸ್ಥ_ತೀರ್ಥಹಳ್ಳಿ_ಬಾಂಡ್ಯಾ_ಕುಟುಂಬ

#ಯಾವುದೇ_ಉತ್ಪ್ರೇಕ್ಷೆ_ಇಲ್ಲದೆ_ಶಾಂತ_ಚಿತ್ತತೆಯಿಂದ

#ವಿವರಿಸುತ್ತಿರುವ_ಕಲ್ಯಾಣಕುಮಾರ್_ಬಾಂಡ್ಯಾ 

#ಕೆಳದಿ_ಇತಿಹಾಸ_ಮತ್ತೊಮ್ಮೆ_ಜನಮಾನಸದಲ್ಲಿ_ವಿಜೃಂಬಿಸುತ್ತಿದೆ

#ಜನರ_ಮರೆವಿನ_ಮಣ್ಣು_ಸರಿಸುವ_ಕೆಲಸ_ಪ್ರಾರಂಭವಾಗಿದೆ

#ಇತಿಹಾಸ_ಸಂಶೋದನೆ_ಕೆಲಸದಲ್ಲಿ_ತೊಡಗಿರುವ_ಶಿವಮೊಗ್ಗ_ಜಿಲ್ಲೆಯ

#ಉದಯೋನ್ಮುಖ_ಇತಿಹಾಸ_ಸಂಶೋಧಕರು_ಅವರಿಂದ_ಕೆಳದಿ_ಇತಿಹಾಸ

#ಇನ್ನೊಮ್ಮೆ_ಎಕ್ಸ್_ಫ್ಲೋರ್_ಮಾಡುತ್ತಿರುವ_ರಾಜ್ಯದ

#ಪ್ರಖ್ಯಾತ_ಡಿಜಿಟಲ್_ಮಾಧ್ಯಮದ_ನಂದಿನಿ_ಆಕರ್ಷ_ದಂಪತಿಗಳು.
   ನೀವು ಈ ಕೆಳಗಿನ ಎರೆಡು ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ ನೋಡಿ ಈವರೆಗೂ ನಮಗೆ ಯಾವುದೇ ಕೆಳದಿ ಇತಿಹಾಸ ಸಂಶೋಧಕರು ತಿಳಿಸದ ಇತಿಹಾಸ ನೀವು ನೋಡಬಹುದು.
I).https://youtu.be/LrOkmE3S95k?si=PSKr7uPSjNvQJwXO.

2).https://youtu.be/tlyCXHF055A?si=TvCADQjQVMBW_nt_.

   ಕೆಳದಿ ಇತಿಹಾಸ ಸಂಶೋಧನೆಯನ್ನು ಸರ್ಕಾರ ಕೆಳದಿ ಮ್ಯೂಸಿಯಂ ಮೂಲಕ ಮಾಡುತ್ತಿತ್ತು ಅದಕ್ಕೆ ಸಾಕಷ್ಟು ಹಣ ಹರಿದು ಬಂದಿತ್ತು ಆದರೆ ಅಲ್ಲಿ ಸಮಗ್ರ ಕೆಳದಿ ಇತಿಹಾಸ ಅಧ್ಯಯನ ನಡೆಯಲಿಲ್ಲ ಎನ್ನಿಸುತ್ತದೆ.
  ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದರೂ ಅರಣ್ಯ ಭೂಮಿಯಲ್ಲೇ ಉಳಿದ ಕೆಳದಿ ಸ್ಮಾರಕ ಪುರಾತತ್ವ ಇಲಾಖೆಗೆ ಹಸ್ತಾಂತರಿಸುವ ಕೆಲಸ ಆಗಲೇ ಇಲ್ಲ.
   ಶಿವಪ್ಪ ನಾಯಕ ಮತ್ತು ರಾಣಿ ಚೆನ್ನಮ್ಮರಿಗೆ ಮಾತ್ರ ಹೆಚ್ಚು ಪ್ರಚಾರ ನೀಡಿ ಉಳಿದ ರಾಜರ ರಾಣಿಯರ ಸಾಧನೆಗಳನ್ನ ಜನಸಾಮಾನ್ಯರಿಗೆ ತಿಳಿಸುವ ಫುಸ್ತಕಗಳು ಬರಲಿಲ್ಲ.
   ಕೆಳದಿ ಅರಸರ ವಂಶಸ್ಥರು ಶಿವಮೊಗ್ಗ ಜಿಲ್ಲೆಯಲ್ಲೇ ಇಲ್ಲ ಎನ್ನುತ್ತಿದ್ದರು.... ಹಾಗಾದರೆ ಇತಿಹಾಸ ಸಂಶೋಧಕರೆ ತೀಥ೯ಹಳ್ಳಿಯ ಬಾಂಡ್ಯದಲ್ಲಿರುವ ಕಾಡಿನ ಅರಮನೆ ಅಲ್ಲಿ ವಾಸ ಇರುವ ರಾಜವಂಶಸ್ಥರು ಅವರಲ್ಲಿರುವ ಐತಿಹಾಸಿಕ ದಾಖಲೆಗಳನ್ನ ನೋಡಿ.
   ಕೆಳದಿ ವಂಶಸ್ಥರಾದ ಈಗಿನ ತಲೆಮಾರಿನ ಯುವಕ ಕಲ್ಯಾಣ ಕುಮಾರ್ ಬಾಂಡ್ಯ ಯಾವುದೇ ಉತ್ಪ್ರೇಕ್ಷೆ ಇಲ್ಲದೆ, ತಣ್ಣಗೆ ದಾಖಲಾಗದ ಕೆಳದಿ ಇತಿಹಾಸವನ್ನ ತನ್ನ ವಂಶಸ್ಥರ ಅರಮನೆಯಲ್ಲಿ ದಾಖಲೆ ಸಮೇತ #ಡಿಜಿಟಲ್_ಮಾಧ್ಯಮದ ಮೂಲಕ  ವಿವರಿಸುತ್ತಿರುವುದು ನನಗೆ ಖುಷಿ ಅನ್ನಿಸಿತು ಅವರಿಗೆ ಅಭಿನಂದಿಸುತ್ತೇನೆ.
   ಮಣ್ಣಿನಲ್ಲಿ ಮುಚ್ಟಿ ಹೋದ ಶಾಸನ ತೆಗೆಯುವುದು ಸಂಶೋದನೆ ಜೊತೆಗೆ ಜನಮಾನಸದಲ್ಲಿ ಮರೆವಿನಿಂದ ಮುಚ್ಚಿ ಹೋದ ಇತಿಹಾಸದ ಕಥೆ, ಕಳೆದು ಹೋದ ಜನಪದ ಕಥೆಯಲ್ಲಿರುವ ನಿಜ ಇತಿಹಾಸದ ಸಂಪರ್ಕದ ತಂತುಗಳನ್ನು ಜೋಡಿಸಿ ತಿಳಿಸುವ ತೋರಿಸುವ ಕೆಲಸ ಕೂಡ ಇತಿಹಾಸ ಸಂಶೋದನೆ ಆಗಿದೆ.
  #ಗುಣಕ್ಕೆ_ಮತ್ಸರ ಬೇಡ ಜಿಲ್ಲೆಯ ಇತಿಹಾಸ ಅತ್ಯುತ್ತಮವಾಗಿ ತಿಳಿಸುತ್ತಿರುವ ನಂದಿನಿ ಮತ್ತು ಆಕರ್ಷ ದಂಪತಿಗಳ #ಡಿಜಿಟಲ್_ಮಾಧ್ಯಮಕ್ಕೆ ಅಭಿನಂದಿಸೋಣ.
   ವೀರಶೈವ ಕೆಳದಿ ಸಂಸ್ಥಾನದ ಪತನಕ್ಕೆ ವೈಷ್ಣವರು ಕಾರಣ ಎಂಬ ಕಲ್ಯಾಣ ಕುಮಾರ್ ಬಾಂಡ್ಯ ಮಾತು ಸುಮಾರು 180 ವರ್ಷದ ಹಿಂದಿನ ದಿವಾನ್ ಪೂರ್ಣಯ್ಯರ ಕಾಲಕ್ಕೆ ಹೋಗುತ್ತದೆ ಇದು ಸತ್ಯವೂ ಕೂಡ ಕೇವಲ ಜಾತಿ ಕಾರಣದಿಂದ ಈಗ ನಾವು ಪರಸ್ಪರ ಕೆಸರೆರಚಾಟ ಮಾಡಬೇಕಾಗಿಲ್ಲ ಇತಿಹಾಸ ನಡೆದ ಕಾಲದಲ್ಲಿ ನಾವ್ಯಾರು ಹುಟ್ಟಿರಲಿಲ್ಲ.
   ಕೇವಲ ಜಾತಿ ಆಧಾರದಲ್ಲಿ ರಾಜರ ಇತಿಹಾಸ ನೋಡದೆ #ರಾಜ_ಪ್ರತ್ಯಕ್ಷ_ದೇವ ಎಂಬ ನಾಣ್ಣುಡಿಯಂತೆ ಕೆಳದಿ ರಾಜರು ನಮ್ಮನ್ನಾಳಿದ ರಾಜ ರೂಪದ ದೇವರೆಂದೆ ಗೌರವಿಸೋಣ ಜೊತೆಗೆ ದಾಖಲಾಗದ ಸಾವಿರಾರು ಕೆಳದಿ ಇತಿಹಾಸದ ಕುರುಹುಗಳನ್ನ ದಾಖಲಿಸಿ ಸಂರಕ್ಷಿಸುವ ಕೆಲಸವೂ ನಡೆಯಲಿ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...