Skip to main content

Blog number 2274. ಜಮಖಂಡಿ ಗಜಾನನ ನಾಟಕ ಮಂಡಳಿ ಆನಂದಪುರಂನಲ್ಲಿ ಬರ್ಖಾಸ್ತಾಯಿತು.

#ಭಾಗ_52.
#ಆನಂದಪುರಂ_ಇತಿಹಾಸ.

#ಈ_ಕುಟುಂಬದ_ಕುಡಿ_ಖ್ಯಾತ_ಚಿತ್ರನಟ_ನಿರ್ದೇಶಕ_ಪವನ್_ಒಡೆಯರ್_ಕೂಡ_ಒಬ್ಬರು

#ಜಮಖಂಡಿ_ನಾಟಕ_ಸಂಸ್ಥೆ_ಶ್ರೀಗಜಾನನ_ನಾಟಕ_ಮಂಡಳಿ

#ಪ್ರಖ್ಯಾತ_ನಾಟಕ_ಕಂಪನಿ_ಅಂತಿಮ_ದಿನಗಳು_ಆನಂದಪುರಂನಲ್ಲಿ.

#ಆನಂದಪುರಂಗೆ_ಬಂದಾಗ_ಹಣ_ಸಹಾಯ_ಮಾಡಿ_ಆಶ್ರೀವದಿಸಿ_ಪ್ರೋತ್ಸಾಹಿಸಿದ_ವೆಂಕಟಾಚಲಯ್ಯಂಗಾರರು.

#ಕನ್ನಡ_ಚಲನಚಿತ್ರ_ನಟರಾದ_ಲೋಕೇಶ್_ದಿರೇಂದ್ರಗೋಪಾಲ್_ಆನಂದಪುರಂನಲ್ಲಿ_ತಿಂಗಳುಗಟ್ಟಲೆ_ಕ್ಯಾಂಪ್ 

#ಆನಂದಪುರಂ_ವಾಸಿಗಳೇ_ಆದ_ಜಮಖಂಡಿ_ರಾಮರಾವ್_ರಾಜ್ಯೋತ್ಸವ_ಪ್ರಶಸ್ತಿ_ಪಡೆದರು.


  ಪವನ್ ಒಡೆಯರ್ ಸಂದರ್ಶನ ಒಂದರಲ್ಲಿ ಈ ರೀತಿ ವಿವರಿಸಿದ್ದಾರೆ...
  "ಇದಕ್ಕಿಂತಲೂ ನಾನು ಹೇಳಲೇಬೇಕಾದ ವಿಷಯವೆಂದರೆ ನನ್ನ ಅಜ್ಜ ಅಂದರೆ ತಂದೆಯ ತಂದೆ ಡಿ. ಎನ್. ಒಡಿಯರ ಅಂತಾ ಅವರದೊಂದು ಗಜಾನನ ನಾಟಕ ಮಂಡಳಿ, ಜಮಖಂಡಿ ಅಂತಾ ಇತ್ತು. ಈ ಕಂಪನಿಯಿಂದ ಹಲವಾರು ನಾಟಕಗಳನ್ನು ಆಡಿಸ್ತಾಯಿದ್ದರು. ಅವರು ರಾಜ್ಯಪ್ರಶಸ್ತಿ ವಿಜೇಯಿರರು. ಅವರಾಡಿಸಿದ ’ಶ್ರೀ ಸತ್ಯನಾರಾಯಣ ಕಥೆ’ ನಾಟಕ ಸುಮಾರು ಸಾವಿರಕ್ಕಿಂತಲೂ ಹೆಚ್ಚು ಪ್ರಯೋಗಗಳನ್ನು ಕಂಡಿತು. ನಟ ವಿಷ್ಣುವರ್ಧನ ಅವರ ತಂದೆ ನಾಟಕಗಳನ್ನು ಬರೆದು ಕೊಡತಾಯಿದ್ದರಂತೆ. ಧೀರೆಂದ್ರ ಗೋಪಾಲ ಮುಂತಾದವರೆಲ್ಲ ಈ ಕಂಪನಿಯಲ್ಲಿ ನಟಿಸಿದ್ದಾರೆ. ಹೀಗೆ ರಕ್ತಗತವಾಗಿ ಬಂದ ಕಲೆಯೂ ಇದಾಗಿದೆಯಂದು ಹೇಳಬಹುದು."

https://panjumagazine.com/%E0%B2%AA%E0%B2%B5%E0%B2%A8%E0%B3%8D-%E0%B2%92%E0%B2%A1%E0%B3%86%E0%B2%AF%E0%B2%B0%E0%B3%8D-%E0%B2%B8%E0%B2%82%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B2%E0%B3%87%E0%B2%96%E0%B2%A8/

  ಜಮಖಂಡಿ ರಾಮಕೃಷ್ಣರನ್ನು ಕಲಾವಿದರು ರಾಮರಾವ್ ಒಡೆಯರ್ ಎಂದೇ ಕರೆಯುತ್ತಿದ್ದರು, ಇವರ ಊರು ಜಮಖಂಡಿ, ಇವರ ಮನೆತನದ ಉಪ ನಾಮ ಒಡೆಯರ್, ಶ್ರೀ ಗಜಾನನ ನಾಟಕ ಮಂಡಳಿ ಜಮಖಂಡಿ ಹೆಸರಿನಲ್ಲಿ ಇವರು ಪ್ರಾರಂಬಿಸಿದ ನಾಟಕ ಕಂಪನಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿ ಹೊಂದಿತ್ತು.
  ಶ್ರೀ ಗಜಾನನ ನಾಟಕ ಮಂಡಳಿ ಜಮಖಂಡಿ ನಾಟಕ ಕಂಪನಿ ಟಿಪ್ಪು ಸುಲ್ತಾನ್ ಎಂಬ ಐತಿಹಾಸಿಕ ನಾಟಕದಿಂದ ಅತ್ಯಂತ ಜನಪ್ರಿಯತೆ ಹೊಂದಿತ್ತು ಈ ನಾಟಕದಲ್ಲಿ ರಾಮರಾವ್ ರ ಬ್ರಿಟಿಷ್ ಕರ್ನಲ್ ಪಾತ್ರ ಕೂಡ ಮನೆ ಮಾತಾಗಿದ್ದ ಕಾಲವದು.
  ಈ ನಾಟಕ ಕಂಪನಿ ಪ್ರಾರಂಬಿಸಿದ ಸತ್ಯನಾರಾಯಣ ವೃತ ನಾಟಕ ಮತ್ತು ಈ ನಾಟಕದ ಸೀನರಿಗಳು ಸಿನಿಮಾವನ್ನು ಮೀರಿಸುವಂತ ಅದ್ದೂರಿ ಆಗಿತ್ತು, ಆಸ್ತಿಕರೆಲ್ಲ ಈ ನಾಟಕ ಎಷ್ಟು ಸಾರಿ ನೋಡಿದರೂ ಕಡಿಮೆ ಎಂಬಂತೆ ಪದೇ ಪದೇ ವೀಕ್ಷಿಸುತ್ತಿದ್ದರು.
  ಸತ್ಯನಾರಾಯಣ ವೃತ ನಾಟಕದಲ್ಲಿ ಬರುವ ಸೂರ್ಯೋದಯದಲ್ಲಿ ಜೀವ೦ತ ಸೂಯ೯ ಉದಯಿಸಿದಂತೆ, ಸಮುದ್ರದಲ್ಲಿ ಹಡಗು ಮುಳುಗುವುದು ಇತ್ಯಾದಿ ಸೀನರಿ ಜಮಖಂಡಿ ನಾಟಕ ಕಂಪನಿ ಬಿಟ್ಟರೆ ಬೇರಾರು ಮಾಡಲಿಲ್ಲ.
  ಆ ಕಾಲದಲ್ಲಿ ಕಂದಗಲ್ಲರು ಬರೆದ ನಾಟಕಗಳಿಗೆ ವಿಶೇಷ ಮಹತ್ವ ತಂದುಕೊಟ್ಟ ಕಂಪನಿಗಳು ಶ್ರೀ ಗಜಾನನ ನಾಟಕ ಮಂಡಳಿ ಜಮಖಂಡಿ ಮತ್ತು ಗೋಕಾಕ್ ನಾಟಕ ಕಂಪನಿಗಳು ಮಾತ್ರ.
  1970 ರ ದಶಕದಲ್ಲಿ ರಾಜ್ಯದ ನಾಟಕ ಕಂಪನಿಗಳೆಲ್ಲ ಪ್ರೇಕ್ಷಕರ ಸಿನಿಮಾ ಆಕರ್ಷಣೆಯಿಂದ ಆದಾಯ ಕುಂಟಿತವಾಗಿ ನಷ್ಟ ಅನುಭವಿಸಿದವು ಮತ್ತು ಹೊಸ ನಾಟಕಗಳ ಕೊರತೆಯೂ ನಾಟಕ ಕಂಪನಿಗಳ ಸ್ಥಗಿತಕ್ಕೆ ಕಾರಣ ಆಯಿತು.
  ನಾಟಕ ವೃತ್ತಿಯಿಂದಲೇ ಜೀವನ ಕಂಡುಕೊಂಡಿದ್ದ ಕಲಾವಿದರ ಪಾಲಿಗೆ ಇದು ಶೋಚನೀಯ ಪರಿಸ್ಥಿತಿ.
  ಇಂತಹ ಕಾಲ ಘಟ್ಟದಲ್ಲಿ ಅಂದಾಜು 1974-75 ರಲಿ ಜಮಖಂಡಿ ನಾಟಕ ಕಂಪನಿ ಮಾಲಿಕರು ಕಲಾವಿದರಾದ ರಾಮರಾಯರು ಆನಂದಪುರಂ ನಲ್ಲಿ ತಮ್ಮ ನಾಟಕದ ಕ್ಯಾಂಪ್ ಹಾಕುವ ಮನಸ್ಸು ಮಾಡುತ್ತಾರೆ, ಇವರ ಇಡೀ ಕುಟುಂಬ ಕಲಾವಿದರೇ ಆಗಿದ್ದು ಸಂಗೀತ ಸಾಧನ ನುಡಿಸುವುದು, ಹಿನ್ನೆಲೆ ಗಾಯನ, ಅಭಿನಯ, ಅನೌನ್ಸ್ ಮೆಂಟ್, ಟಿಕೇಟ್ ಕೊಡುವುದು, ಮೇಕಪ್, ಅಡಿಗೆ ಎಲ್ಲಾ ಕುಟುಂಬವೇ ನಿರ್ವಹಿಸುತ್ತಿತ್ತು.
  ಆಗ ಅಯ್ಯಂಗಾರ್ ಕುಟುಂಬದ ಯಜಮಾನರಾಗಿದ್ದ ಊರ ಪ್ರಮುಖರೂ ಆಗಿದ್ದ ವೆಂಕಟಾಚಲಯ್ಯಂಗಾರರನ್ನು ಬೇಟಿ ಮಾಡಿ ತಮ್ಮ ಉದ್ದೇಶ ತಿಳಿಸಿ ಸಹಾಯ ಯಾಚಿಸುತ್ತಾರೆ.
  ಜಮಖಂಡಿ ರಾಮರಾಯರಿಂದ ಜನಪ್ರಿಯ ಆಗಿದ್ದ ಜಮಖಂಡಿ ನಾಟಕ ಕಂಪನಿ ಈಗ ನಷ್ಟದಿಂದ ತತ್ತರಿಸುವುದನ್ನು ಕೇಳಿ ವೆಂಕಟಾಚಲಯ್ಯಂಗಾರ್ ಮರುಗುತ್ತಾರೆ, ರಾಮರಾಯರಿಗೆ ಆನಂದಪುರಂ ನಲ್ಲಿ ನಾಟಕ ಕ್ಯಾಂಪ್ ಹಾಕಲು ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ನೀಡಿ ತಮ್ಮ ಕೈಯಿಂದ ಎರೆಡು ಸಾವಿರ ರೂಪಾಯಿ ಪ್ರೋತ್ರಾಹ ಧನ ದಾನ ಮಾಡಿ ರಾಮರಾಯರಿಗೆ ಆತ್ಮಸ್ಥೆಯ೯ ನೀಡುತ್ತಾರೆ.
  ಇದರಿಂದ ಹುಮ್ಮಸ್ಸಿನಿಂದ ಆನಂದಪುರಂ ಮಾರಿಕಾಂಬಾ ದೇವಾಲಯದ ಹಿಂಬಾಗದ ಮಾಧ್ಯಮಿಕ ಶಾಲಾ ಅವರಣದಲ್ಲಿ ಶ್ರೀ ಗಜಾನನ ನಾಟಕ ಮಂಡಳಿ ಜಮಖಂಡಿ ಕಂಪನಿ ಆನಂದಪುರಂ ನಿವಾಸಿಗಳ ಪ್ರೋತ್ಸಾಹ ಸಹಕಾರದಿಂದ ತನ್ನ ಹಿಂದಿನ ಜನಪ್ರಿಯತೆ ಗಳಿಸುತ್ತದೆ.
  ಅವರ ಮಕ್ಕಳೆಲ್ಲ ಇಲ್ಲೇ ವಿದ್ಯಾಬ್ಯಾಸ ಮುಂದುವರಿಸುತ್ತಾರೆ, ಕಂಪನಿಯ ಜನಪ್ರಿಯ ನಾಟಕಗಳು ಪ್ರದರ್ಶನವಾಗುತ್ತದೆ, ಸಿನಿಮಾ ನಟರಾದ ಲೋಕೇಶ್, ದೀರೇಂದ್ರ ಗೋಪಾಲ್ ತಿಂಗಳುಗಟ್ಟಲೆ ಆನಂದಪುರಂ ನಾಟಕ ಕ್ಯಾಂಪಿನಲ್ಲಿ ಭಾಗವಹಿಸಿ ಜಮಖಂಡಿ ನಾಟಕ ಕಂಪನಿಗೆ ಆರ್ಥಿಕ ಬಲ ತರುತ್ತಾರೆ.
  ನಂತರ ರಾಮರಾಯರ ವೃದ್ದಾಪ್ಯ ಅನಾರೋಗ್ಯ ಮತ್ತು ನಾಟಕ ವೃತ್ತಿ ಬಗ್ಗೆ ಕುಟುಂಬದ ಯುವಕರಲ್ಲಿ ನಿರಾಸಕ್ತಿಗಳಿಂದ ಜಮಖಂಡಿ ರಾಮರಾಯರು ತಮ್ಮ ಸುಪ್ರಸಿದ್ದ ಶ್ರೀ ಗಜಾನನ ನಾಟಕ ಮಂಡಳಿ ಜಮಖಂಡಿ  ಕಂಪನಿ ವಿಸರ್ಜಿಸುತ್ತಾರೆ.
  1992 ರಲ್ಲಿ ಬಂಗಾರಪ್ಪನವರು ಮುಖ್ಯಮಂತ್ರಿ ಆದಾಗ ಜಮಖಂಡಿ ರಾಮರಾವ್ ರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿ ಬೆಂಗಳೂರಿಗೆ ಕರೆಸಿ ಪ್ರಶಸ್ತಿ ವಿತರಿಸಿದ್ದು ಸಮಸ್ತ ನಾಟಕ ಕಲಾವಿದರಿಗೆ ನೀಡಿದ ಗೌರವ ಆಗಿತ್ತು.
  ತಮ್ಮ ಅಂತಿಮ ದಿನಗಳು ಆನಂದಪುರಂ ನಿವಾಸಿಗಳಾಗಿ ಕಳೆದ ಜಮಖಂಡಿ ರಾಮರಾವ್ ತಮ್ಮ ಮಕ್ಕಳ ವಿವಾಹ ಇತ್ಯಾದಿ ಆನಂದಪುರಂ ನಲ್ಲೇ ನೆರವೇರಿಸಿದ್ದಾರೆ. ಇವರ ಕೆಲ ಮಕ್ಕಳು ಇಲ್ಲೇ ನೆಲೆಸಿದ್ದಾರೆ.
  ಜಮಖಂಡಿ ರಾಮಕೃಷ್ಣ (ರಾಮರಾವ್) ಮತ್ತು ಭಾಗಿರಥಿ ದಂಪತಿಗಳಿಗೆ ಮೂವರು ಗಂಡು ಮಕ್ಕಳು ಮತ್ತು ಆರು ಹೆಣ್ಣು ಮಕ್ಕಳು.
  ದೊಡ್ಡ ಪುತ್ರಿ ಲಲಿತ, ದ್ವಿತಿಯ ಪುತ್ರ ಚಂದ್ರಶೇಖರ್, ತೃತಿಯ  ವಿಶ್ವನಾಥ, ನಾಲ್ಕನೆಯವರು ಅನುಸೂಯ ಐದನೆಯವರು ಶಾರದಾ, ಆರನೆಯವರು ಶಾಕುಂತಲಾ, ಏಳನೆಯವರು ಗಾಯಿತ್ರಿ, ಎಂಟನೆಯವರು ವಿದ್ಯಾಶಂಕರ ಮತ್ತು ಒಂಬತ್ತನೆಯವರು ಗೀತಾ.
  ಇದೇ ಕುಟುಂಬದವರೇ ಆದ ಖ್ಯಾತ ನಟ ನಿರ್ದೇಶಕ ಪವನ್ ಒಡೆಯರ್ ತಮ್ಮ ಸಂದರ್ಶನದಲ್ಲಿ ತಮ್ಮ ತಾತನ ನಾಟಕ ಕಂಪನಿ ಜಮಖಂಡಿ ಗಜಾನನ ನಾಟಕ ಮಂಡಳಿ ನೆನಪಿಸಿ ಕೊಂಡಿದ್ದಾರೆ....
   "ಇದಕ್ಕಿಂತಲೂ ನಾನು ಹೇಳಲೇಬೇಕಾದ ವಿಷಯವೆಂದರೆ ನನ್ನ ಅಜ್ಜ ಅಂದರೆ ತಂದೆಯ ತಂದೆ ಡಿ. ಎನ್. ಒಡೆಯರ್ ಅಂತಾ ಅವರದೊಂದು ಗಜಾನನ ನಾಟಕ ಮಂಡಳಿ, ಜಮಖಂಡಿ ಅಂತಾ ಇತ್ತು. ಈ ಕಂಪನಿಯಿಂದ ಹಲವಾರು ನಾಟಕಗಳನ್ನು ಆಡಿಸ್ತಾಯಿದ್ದರು. ಅವರು ರಾಜ್ಯಪ್ರಶಸ್ತಿ ವಿಜೇತರರು. ಅವರಾಡಿಸಿದ ’ಶ್ರೀ ಸತ್ಯನಾರಾಯಣ ಕಥೆ’ ನಾಟಕ ಸುಮಾರು ಸಾವಿರಕ್ಕಿಂತಲೂ ಹೆಚ್ಚು ಪ್ರಯೋಗಗಳನ್ನು ಕಂಡಿತು. ನಟ ವಿಷ್ಣುವರ್ಧನ ಅವರ ತಂದೆ ನಾಟಕಗಳನ್ನು ಬರೆದು ಕೊಡತಾಯಿದ್ದರಂತೆ. ಧೀರೆಂದ್ರ ಗೋಪಾಲ ಮುಂತಾದವರೆಲ್ಲ ಈ ಕಂಪನಿಯಲ್ಲಿ ನಟಿಸಿದ್ದಾರೆ. ಹೀಗೆ ರಕ್ತಗತವಾಗಿ ಬಂದ ಕಲೆಯೂ ಇದಾಗಿದೆಯಂದು ಹೇಳಬಹುದು.
  ಪ್ರೀತಿ ಗೀತಿ ಇತ್ಯಾದಿ ಚಿತ್ರದ ಮುಖ್ಯಪಾತ್ರಧಾರಿ ಪವನ ಒಡೆಯರ್ ನಿರ್ದೇಶಕ ಯೋಗರಾಜ್ ಭಟ್ ತಂಡದದಿಂದ ಬಂದವರು. ಪವನ್ ಈಗಾಗಲೇ ಕೋಮಲ್ ಕುಮಾರ್ ಅಭಿನಯದ ಗೋವಿಂದಾಯ ನಮಃ ಚಿತ್ರವನ್ನು ನಿರ್ದೇಶಿಸಿ, ಆ ಚಿತ್ರದ "ಪ್ಯಾರ್ಗೆ ಆಗ್ಬಿಟೈತೆ" ಹಾಡಿನ ಮೂಲಕ ಸಂಚಲನ ಸೃಷ್ಟಿಸಿದವರು ನಂತರ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಗೂಗ್ಲಿ ಗೋವಿಂದಾಯ ನಮಃ ಚಿತ್ರದ ತೆಲುಗು ಅವತರಣಿಕೆ “ಪೋಟುಗಾಡು” ನಿರ್ದೇಶಿಸಿ ಎಲ್ಲದರಲ್ಲೂ ಯಶಸ್ಸು ಕಂಡ ನಿರ್ದೇಶಕ. ಪವನ ಒಡೆಯರ್ ಮೂಲತಃ ನಾಟಕದ ಕುಟುಂಬದವರು. ಪವನ್ ಅವರ ತಾತ "ಜಮಖಂಡಿ ಗಜಾನನ ನಾಟಕ ಮಂಡಳಿ" ಯ ಸಂಸ್ಥಾಪಕರು.
  ಉತ್ತರ ಕರ್ನಾಟಕದ ಜನರು, ಆನಂದಪುರಂನ ಜನರು ಜಮಖಂಡಿ ನಾಟಕ ಕಂಪನಿ ಈಗಲೂ ನೆನಪಿಸಿಕೊಳ್ಳುತ್ತಾರೆ, ಕನ್ನಡ ಚಲನಚಿತ್ರರಂಗದ ಹಿರಿಯ ಕಲಾವಿದರೆಲ್ಲಾ ಜಮಖಂಡಿ ನಾಟಕ ಕಂಪನಿ ಸದಾ ಸ್ಮರಿಸುತ್ತಾರೆ ಇಂತಹ ಕಲಾ ಶ್ರೀಮಂತಿಕೆಯ ಶ್ರೀ ಗಜಾನನ ನಾಟಕ ಮಂಡಳಿ ಜಮಖಂಡಿ ನಾಟಕ ಕಂಪನಿ ಆನಂದಪುರಂನಲ್ಲಿ ತನ್ನ ಅಂತ್ಯ ಕಂಡಿದ್ದು ವಿಷಾದನೀಯ ಆದರೂ ಕಲಾವಿದರ ಕುಟುಂಬ ಇಲ್ಲಿ ನೆಲೆಸಿ ನೆಮ್ಮದಿಯ ಹೊಸ ಜೀವನ ಆನಂದಪುರಂ ನಲ್ಲಿ ಪ್ರಾರಂಬಿಸಿದ್ದು ಸಂತೋಷದ ವಿಷಯವೇ ಆಗಿದೆ.

https://arunprasadhombuja.blogspot.com/2021/07/52.html
(ಹೆಚ್ಚಿನ ಚಿತ್ರ ಸಹಿತ ಲೇಖನ ಮೇಲಿನ ಬ್ಲಾಗ್ ನಲ್ಲಿದೆ)

#drama #ನಾಟಕ #NationalSchoolOfDrama #ಕರ್ನಾಟಕನಾಟಕಮಂಡಳಿ

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ