Skip to main content

Blog number 2273. ಛಾಯಾ ಹೋಟೆಲ್ ಬೀಮಣ್ಣ

#ಪ್ರಚಾರದ_ವಾಹನದ_ಚಾಲಕರು_ಮತ್ತು_ಬಾಷಣಕಾರರೂ_ಆಗಿದ್ದ

#ಸಾಗರದ_ಛಾಯಾ_ಹೋಟೆಲ್_ಬೀಮಣ್ಣರ_ಬಗ್ಗೆ

#ಮಾಜಿ_ಶಾಸಕರಾದ_ಬಿ_ಸ್ವಾಮಿರಾವ್_ಆತ್ಮ_ಚರಿತ್ರೆ

#ನಾನು_ಹೇಳುವುದೆಲ್ಲಾ_ಸತ್ಯ_ಪುಸ್ತಕದಲ್ಲಿ_ಉಲ್ಲೇಖಿಸಿದ್ದಾರೆ.

 #ಪ್ರಚಂಡ_ವಾಗ್ಮಿ_ಅಭಿನವ_ಚಾಣಕ್ಯ_ಅವರು.

  ಸಾಗರ ಸೀಮೆಯಲ್ಲಿ #ಛಾಯಾ_ಹೋಟೆಲ್_ಬೀಮಣ್ಣ ಎಂದರೆ ಯಾರೂ ಗೊತ್ತಿಲ್ಲ ಅನ್ನುವುದಿಲ್ಲ ಈಗ ಅವರ ಪ್ರಖ್ಯಾತಿಗೆ ಕಾರಣ ಆಗಿದ್ದ ಸಾಗರದ ಮಾರಿಕಾಂಬಾ ದೇಗುಲ ದ ಹಿಂಬಾಗದ ಛಾಯಾ ಹೋಟೆಲ್ ಇಲ್ಲ ಆದರೆ ಅಗ್ರಹಾರದಲ್ಲಿ ಅವರ #ವರದಶ್ರೀ_ಲಾಡ್ಜ್ ಪ್ರಖ್ಯಾತವಾಗಿದೆ ಅವರ ಪುತ್ರರಾದ ಕವಲಕೋಡು ವೆಂಕಟೇಶ್ ಮತ್ತು ಪ್ರಸಾದ್ ನೋಡಿಕೊಳ್ಳುತ್ತಾರೆ.
    ಹೊಸನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಿ. ಸ್ವಾಮಿ ರಾವ್ ಅವರ ಆತ್ಮವೃತ್ತಾಂತ #ನಾನು_ಹೇಳುವುದೆಲ್ಲಾ_ಸತ್ಯ ಹೊಸನಗರದ ಪತ್ರಕರ್ತ ಶ್ರೀಕಂಠ ಬರೆದಿದ್ದಾರೆ (ಪುಸ್ತಕ ಬೇಕಾದವರು ಅವರ ಫೋನ್ ನಂಬರ್ 9483016851 ಸಂಪರ್ಕಿಸಬಹುದು) ಅದರಲ್ಲಿ ಪುಟ ಸಂಖ್ಯೆ 20 ಮತ್ತು 21 ರಲ್ಲಿ #ಮೊದಲ_ಚುನಾವಣಾ_ಸ್ಪರ್ಧೆ ಅಧ್ಯಾಯದಲ್ಲಿ ಬೀಮಣ್ಣರ ಉಲ್ಲೇಖ ಮಾಡಿದ್ದಾರೆ... 
   1962ರಲ್ಲಿ ಬಿ. ಸ್ವಾಮಿ ರಾವ್ ಹೊಸನಗರ ವಿಧಾನ ಸಭಾ ಕ್ಷೇತ್ರದಿಂದ  ಸ್ವತಂತ್ರ್ಯ ಅಭ್ಯರ್ಥಿ ಆಗಿ ಸ್ಪರ್ಧಿಸಿದಾಗ ಬೀಮನಕೋಣೆ ವಾಸಿ ಬೀಮಣ್ಣ ಅವರ ಪೋರ್ಡ್ ಕಾರ್ ಬಾಡಿಗೆಗೆ ಪಡೆದಿದ್ದರಂತೆ ಅದಕ್ಕೆ ಬೀಮಣ್ಣರೇ ಚಾಲಕರು.
   " ಅಂದು ಕ್ಷೇತ್ರದಾದ್ಯಂತ ತನ್ನ ಪರವಾಗಿ ಬಾಷಣ ಮಾಡುವಂತ ಯಾವುದೇ ಭಾಷಣಕಾರ ಇಲ್ಲದಿದ್ದದ್ದು ನನ್ನ ಪಾಲಿನ ದೌರ್ಬಾಗ್ಯವಾಗಿತ್ತು... ನಾನೊಬ್ಬನೇ ಎಷ್ಟು ಭಾಷಣ ಮಾಡಲಿ? ಗಂಟಲು ಒಣಗಿ ಹೋಗುತ್ತಿತ್ತು ಆಗಷ್ಟೇ ನನ್ನ ರಾಜಕಾರಣದ ಬದುಕು ಆರಂಭಗೊಂಡಿತ್ತು ಈ ನಡುವೆ ಬೀಮಣ್ಣನವರೇ ಸಮಯ ಸಿಕ್ಕಾಗಲೆಲ್ಲಾ ನನ್ನ ಪರ ಪ್ರಚಾರ ಬಾಷಣ ಮಾಡಲು ಪ್ರಾರಂಬಿಸಿದ್ದರು, ಅವರೊಬ್ಬ ಅದ್ಭುತ ಭಾಷಣಕಾರ ಅಲ್ಲಲ್ಲಿ ಜನ ಗುಂಪು ಕಟ್ಟಿ ನಿಂತು ಬೀಮಣ್ಣರ ಬಾಷಣ ಆಲಿಸಿ ತಲೆ ತೂಗುತ್ತಿದ್ದರು.. ಅವರೇ ನನ್ನ ಪ್ರಚಾರದ ವಾಹನದ ಮಾಲಿಕ ಮತ್ತು ಚಾಲಕ, ಹಗಲು ರಾತ್ರಿ ಎನ್ನದೆ ನನ್ನ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಸಹನಾ ಮೂರ್ತಿ" ...... ಎಂದು ಸುಮಾರು 62 ವರ್ಷದ ಹಿಂದಿನ ತಮ್ಮ ಮೊದಲ ಚುನಾವಣೆ ನೆನಪಿನಲ್ಲಿ ಛಾಯಾ ಹೋಟೆಲ್ ಬೀಮಣ್ಣರ ಸಹಾಯ ಸ್ಮರಿಸಿದ್ದಾರೆ.
   ಬೀಮಣ್ಣ ಪರೋಪಕಾರಿ ಅವರು ನನಗೆ ಹೋಟೆಲ್ ಉದ್ಯಮದ ಬಗ್ಗೆ ಸಲಹೆ ಕೇಳಲು ಹೋದಾಗ ನೀಡಿದ ಸಲಹೆ ನಾನು ಜೀವಮಾನ ಪೂರ್ತಿ ಮರೆಯಲಾರೆ ಅದು ಎಲ್ಲಾ ಹೋಟೆಲ್ ಉದ್ಯಮ ಮಾಡುವವರಿಗೆ ನೀತಿ ಪಾಠ ಆಗಿದ್ದರಿಂದ ಇಲ್ಲಿ ನೆನಪಿನಿಂದ ದಾಖಲಿಸಿದ್ದೇನೆ ನೋಡಿ...

 ಶಿವಮೊಗ್ಗ ಮತ್ತು ಸಾಗರ ಮಧ್ಯದ ಆನಂದಪುರಂ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಯಡೇಹಳ್ಳಿ ವೃತ್ತದಲ್ಲಿ ದಿನಾಂಕ 28- ಸೆಪ್ಟೆಂಬರ್ -2012ರಲ್ಲಿ ನಾವು ಪ್ರಾರಂಭಿಸಿದ #ಮಲ್ಲಿಕಾ_ವೆಜ್ ಯಾವುದೇ ಪೂವ೯ಯೋಚಿತ ಪ್ರಾಜೆಕ್ಟ್ ಆಗಿರಲಿಲ್ಲ, ಅನಿರಿಕ್ಷಿತ ಮತ್ತು ಅನಿವಾಯ೯ದಿಂದ ಪ್ರಾರಂಬಿಸಿದ್ದು.
 ತಂದೆ ತಾಯಿ ಹೆಸರಲ್ಲಿ #ಕೃಷ್ಣ_ಸರಸ_ಕಲ್ಯಾಣ_ಮಂಟಪ (ಬಾಲ್ಯದ ಕನಸು) ನಿರ್ಮಿಸಿದ ಮೇಲೆ ಅದನ್ನು ನಿರ್ವಹಣೆ ಮಾಡಲು ನಿತ್ಯ ಕೆಲಸಗಾರರು ಬೇಕಾಯಿತು ಅದಕ್ಕಾಗಿ ಹತ್ತು ರೂಮಿನ ಲಾಡ್ಜ್ #ಹೊ೦ಬುಜ_ರೆಸಿಡೆನ್ಸಿ ಪ್ರಾರಂಬಿಸಿದೆ, ಲಾಡ್ಜನಲ್ಲಿ ತಂಗುವವರಿಗಾಗಿ ಊಟ ಉಪಹಾರಕ್ಕೆ ರೆಸ್ಟೋರೆಂಟ್ ಅನಿವಾಯ೯ ಆಯಿತು.
  ರೆಸ್ಟೋರೆಂಟ್ ನಡೆಸಲು ಅನೇಕರಿಗೆ ಆಹ್ವಾನಿಸಿದೆ ಆದರೆ ಅವರೆಲ್ಲರ ಅಭಿಪ್ರಾಯ ಯಡೇಹಳ್ಳಿ ಸರ್ಕಲ್ ನಲ್ಲಿ ಹೋಟೆಲ್ ನಡೆಯೊಲ್ಲ ಇತ್ಯಾದಿ... ಕುಂದಾಪುರದ ಗೆಳೆಯರೊಬ್ಬರ ಪರಿಚಯದಲ್ಲಿ ಹೈದ್ರಾಬಾದಿನಲ್ಲಿ ಹೋಟೆಲ್ ನಡೆಸುವವರೊಬ್ಬರು ಬಂದು ನೋಡಿ ಹೋಟೆಲ್ ಪ್ರಾರಂಬಿಸುವ ತೀರ್ಮಾನ ಮಾಡಿದರು ಅವರ ಕಂಡಿಷನ್ ರೆಸ್ಟೋರಂಟ್ ಪೀಠೋಪಕರಣ, ಕಿಚನ್ ಪೂರ್ಣ ಸೆಟ್ ಮಾಡಿ ಕೊಡಿ ದಿನಕ್ಕೆ ಇಷ್ಟು ಬಾಡಿಗೆ ಅಂತ.
  ಎಲ್ಲಾ ತಯಾರು ಮಾಡಿಸಿದೆ ಮುಂಗಡ ಕೊಡಲು ಬಂದವರು ಹೈದ್ರಾಬಾದಿನ ತಮ್ಮ ಹೋಟೆಲ್ ನಲ್ಲಿ ಸಪ್ಲೈ ಮಾಡುವವ ನಿಮ್ಮ ಊರಿನವ ಒಬ್ಬ ಇದ್ದ ಅಂತ ನೆನಪು ಮಾಡಿದರು ಆದರೆ ಅವರ ಹತ್ತಿರ ಅವನ ವಿಳಾಸ ಇರಲಿಲ್ಲ ಅವನ ಹೆಸರು ವಯಸ್ಸು ರೂಪದ ಅಂದಾಜಿನ ಮೇಲೆ ನಮ್ಮ ಹುಡುಗರು ಅವನನ್ನು ಪತ್ತೆ ಹಚ್ಚಿದರು, ಅವನು ಸಂತೆ ಮಾರ್ಕೆಟ್ ಹತ್ತಿರ ಸಣ್ಣ ಕ್ಯಾಂಟೀನ್ ಗಾಡಿ ಮಾಡಿಕೊಂಡಿದ್ದ ಮತ್ತು ಅಲ್ಲಿಗೆ ಇವರನ್ನು ಕರೆದುಕೊಂಡು ಹೋಗಿ ಬಿಟ್ಟರು.
  ಅಲ್ಲಿಗೆ ಹೋದವರು ಬರಲೇ ಇಲ್ಲ... ನಂತರ ಗೊತ್ತಾಗಿದ್ದು ಆತ ಪಿಟ್ಟಿಂಗ್ ಇಟ್ಟಿದ್ದ!! ಅವರೆಲ್ಲ ರವಡಿಗಳು ಕ್ರಿಮಿನಲ್ ಗಳು ಮತ್ತು ಅಲ್ಲಿ ವ್ಯಾಪಾರ ಬರುವುದಿಲ್ಲ ಅಂತ ವ್ಯಾಪಾರ ಮುರಿದುಬಿಟ್ಟಿದ್ದ !!.
  ನಂತರ ನಾನು ಒಂದು ತೀರ್ಮಾನ ಮಾಡಿದೆ ನನಗೆ ಅನುಭವ ಇಲ್ಲದಿದ್ದರೂ ಅನುಭವ ಇರುವ ಸಾಗರದ #ಛಾಯಾ_ಹೋಟೆಲ್_ಭೀಮಣ್ಣರಿಂದ ಮಾರ್ಗದರ್ಶನ ಪಡೆದು ಪ್ರಾರಂಬಿಸುವುದೆಂದು ಸಾಗರದಲ್ಲಿ ಅವರ ವರದಾ ಲಾಡ್ಜ್ ನಲ್ಲಿ ಬೇಟಿ ಮಾಡಿದೆ.
  ಬೀಮಣ್ಣ ಹೇಳಿದ್ದೇನೆಂದರೆ "ನೀವು ಹೋಟೆಲ್ ಪ್ರಾರಂಬಿಸಿ ಎರೆಡು ಮಳೆಗಾಲ ಕಳೆದರೆ ಮಾತ್ರ ನೀವು ನಿಜವಾಗಿ ಹೋಟೆಲ್ ಮಾಲಿಕರು " ಅಂದರು, ಅವರ ಮಾತುಗಳು ಒಗಟಿನಂತೆ ಪ್ರಾಸದ್ದು, ಇದರ ವಿವರ ಅವರು ವಿವರಿಸಿದ್ದು ಏನೆಂದರೆ, ಹೋಟೆಲ್ ಬೇಸಿಗೆ ಮಾರ್ಚ್ ಏಪ್ರಿಲ್ ನಲ್ಲಿ ಹುಡುಗರು ಪ್ರಾರಂಬಿಸುತ್ತಾರೆ ಅದು ಒಳೇ ಸೀಜನ್ ದಿನದಿಂದ ದಿನಕ್ಕೆ ಹೆಚ್ಚುವ ವ್ಯಾಪಾರ ಮತ್ತು ಸುತ್ತುವರಿಯುವ ಹೊಸ ಗೆಳೆಯರು, ಚೀಟಿ - ಪಿಗ್ಮಿ - ಗೆಳೆಯರ ಪಾರ್ಟಿಗಳು, ಗೆಳೆಯರ ಸಂಬಂದಿಗಳ ಮದುವೆಗೆಲ್ಲ ಹೊಸ ಹೋಟೆಲ್ ಮಾಲಿಕ ಅತಿಥಿ ಆಗಿ ಬೇಕೇ ಬೇಕು ಎನ್ನುವಷ್ಟು ಸಲಿಗೆ ಇದರ ಮಧ್ಯ ಹಣದ ಅಡಚಣೆ ಬಂದರೆ ಬಡ್ಡಿ ಸಾಲದವರೂ ದಾರಳ ಸಾಲ ನೀಡುತ್ತಾರಂತೆ.  
    ಹಾಗೆ ಮೇ ಜೂನ್ ನಲ್ಲಿ ಮಳೆಗಾಲ ಶುರುವಾಗುತ್ತೆ, ಪೇಟೆಗೆ ಬರುವವರು ಕ್ರಮೇಣ ಕಡಿಮೆ ಆಗುತ್ತಾರೆ, ವ್ಯಾಪಾರ ನಷ್ಟಕ್ಕೆ ಬರುತ್ತದೆ, ಗೆಳೆಯರು ದೂರಾಗುತ್ತಾರೆ. 
    ಕೆಲಸದವರಿಗೆ ಸಂಬಳ ಕೊಡಲೂ ಕಷ್ಟ ಇಂತ ಸಂದರ್ಭದಲ್ಲಿ ಬಡ್ಡಿ ಸಾಲದವರೂ ಒತ್ತಡ ಜಾಸ್ತಿ ಮಾಡುತ್ತಾರೆ ಹಾಗಾಗಿ ಆಗಸ್ಟ್ ಸೆಪ್ಟೆಂಬರ್ ನಲ್ಲಿ ಹೋಟೆಲ್ ಮಾಲಿಕ ಓಡಿ ಹೋಗುತ್ತಾನೆ....ಅದಕ್ಕೆ ಹೇಳುವುದು ಎರೆಡು ಮಳೆಗಾಲ ನಿರಂತರ ಹೋಟೆಲ್ ನಡೆಸಿದರೆ ಮಾತ್ರ ಗ್ಯಾರಂಟಿ ಮಾಲಿಕ ಅಂದಿದ್ದರು.
  ಇನ್ನೊಂದು ನೆಂಟರಿಷ್ಟರನ್ನು ವ್ಯವಹಾರದ ಹತ್ತಿರ ಇಡಬಾರದು ಇದಕ್ಕೆ ಅವರದ್ದೇ ಅನುಭವ ಹಾಸ್ಯಮಯವಾಗಿ ಅನುಭವಿ ಭೀಮಣ್ಣ ಹೇಳಿದ್ದು ಕೇಳಿ... 

   ಅವರ ಸಾಗರದ ಮಾರಿಕಾಂಭಾ ದೇವಾಲಯದ ಹಿಂಬಾಗದ #ಛಾಯಾ ಹೋಟೆಲ್ ಉತ್ತುಂಗದಲ್ಲಿದ್ದಾಗಲೇ ಅವರ ಶ್ರೀಮತಿ ತಮ್ಮ ತಮ್ಮನನ್ನು ಜೊತೆಗೆ ಇಟ್ಟುಕೊಳ್ಳಿ ನಿಮಗೆ ಸ್ವಲ್ಪ ವಿಶ್ರಾಂತಿ ಸಿಗುತ್ತೆ ಅಂತ ಸಲಹೆ ನೀಡಿದಾಗ ಇವರು ನೆಂಟರಿಷ್ಟರು ಬೇಡವೇ ಬೇಡ ಅಂದರೂ ಪತ್ನಿಯ ಒತ್ತಾಯಕ್ಕೆ ಒಪ್ಪಿದರಂತೆ.
  ಪ್ರಾರಂಭದ ದಿನಗಳಲ್ಲಿ ಬಾವನೆಂಟನ ಹುರುಪು ಶ್ರಮಗಳ ನೋಡಿ ಬೀಮಣ್ಣ ತಮ್ಮ ಅಭಿಪ್ರಾಯ ತಪ್ಪೆಂದು ಬಾವಿಸಿದರಂತೆ ಕ್ರಮೇಣ ಬಾವನೆಂಟನ ಮೇಲೆ ಅವಲಂಬಿಸಿ ನಿತ್ಯ ತಡವಾಗಿ ಬರಲು ಮತ್ತು ಹೆಚ್ಚು ವಿಶ್ರಾಂತಿ ಪಡೆಯಲು ಶುರುಮಾಡಿದ್ದರಂತೆ.
  ಒಂದು ದಿನ 12 ಗಂಟೆ ಸಮಯಕ್ಕೆ ಹೋಟೆಲ್ ಗೆ ಹೋದರೆ ಅಡುಗೆಯವರು ಯಾರೂ ಬಂದಿರಲಿಲ್ಲವಂತೆ, 1 ಗಂಟೆಗೆಲ್ಲ ಜನ ಊಟಕ್ಕೆ ಬರುತ್ತಾರೆ ಹೀಗಿರುವಾಗ ಇವರೆಲ್ಲ ಎಲ್ಲಿ ಹೋದರು?... ನೋಡಿದರೆ ಭಾವನೆಂಟ ಅಡುಗೆ ಭಟ್ಟರನ್ನೂ ಕರೆದುಕೊಂಡು ನಾಪತ್ತೆ (ಬಾವ ಭೀಮಣ್ಣನಿಗೆ ಬುದ್ಧಿ ಕಲಿಸುತ್ತೇನೆ ಅಂತ )ಅಂದರು.
  ಆಗ ನೀವೇನು ಮಾಡಿದರಿ? ಅಂತ ಕಥೆಯು ಕ್ಲೈಮಾಕ್ಸ್ ನಲ್ಲಿ ನಿಂತಿದಕ್ಕೆ ಪ್ರಶ್ನಿಸಿದೆ " ಇನ್ನೇನು ಮಾಡಲಿ ಯೋಚಿಸಲು ಸಮಯ ಇಲ್ಲ, ತಕ್ಷಣ ಬಟ್ಟೆ ಬದಲಿಸಿ ನಾನೊಬ್ಬನೆ ಅಡಿಗೆ ಪ್ರಾರಂಬಿಸಿದೆ,  ಸರಿಯಾಗಿ ಒಂದು ಗಂಟೆಗೆ ಬರಲು ಪ್ರಾರಂಬಿಸಿದ ಗಿರಾಕಿಗಳಿಗೆ ಅಂತೂ ಊಟ ಕೊಟ್ಟೆ ಅಂದರು.
  ನನಗೆ ಲಾಡ್ಜ್ ರೆಸ್ಟೋರಾಂಟ್ ನಡೆಸಲು ನನಗೆ ಅನೇಕ ಉಪಾಯಗಳ ಟಿಪ್ ಹೇಳಿಕೊಟ್ಟರು, ಅವರಿಗೆ ಕೃತಜ್ಞತೆ ಅರ್ಪಿಸುತ್ತೇನೆ.
  ನಂತರ ರೆಸ್ಟೋರಾಂಟ್ ಪ್ರಾರಂಬಿಸಿದೆ ಮೊದಲ ತಿಂಗಳು 49 ಸಾವಿರ ಕೈ ಬಿಟ್ಟಿತು ಎರಡನೇ ತಿಂಗಳೂ ನಷ್ಟ ಪುನಾರಾವರ್ತಿಸಿತು, ಭಯ ಉಂಟಾದರೂ ದೈರ್ಯದಿಂದ ಮುಂದುವರಿಸಿದೆ 3 ನೇ ತಿಂಗಳ ನಂತರವೇ  ಗೋವಾ ಕಾನುಕೋಣದ ಗಾಂವ್ಡೊಂಗ್ರಿಂ ನ ಮಲ್ಲಿಕಾಜು೯ನ ದೇವರ ಹೆಸರು ಸೇರಿಸಿ ಮಲ್ಲಿಕಾ ವೆಜ್ ಅಂತ ಬೋರ್ಡ್ ಹಾಕಿದೆ ಮಿತ್ರರಾದ ಗಂಗೊಳ್ಳಿ ರವೀಂದ್ರ ರಾವ್ ಪ್ರತಿ ಹಂತದಲ್ಲಿ ಹೆಚ್ಚಿನ ಸಲಹೆ ಸಹಕಾರ ನೀಡಿದ್ದರು.
  ಇದೆಲ್ಲ ಇವತ್ತು ನೆನಪಿಗೆ ಬಂತು ಇವತ್ತಿಗೆ 12 ಮಳೆಗಾಲ ಕಳೆದಿದೆ, ಎರೆಡು ಅವದಿಯ ಲಾಕ್ ಡೌನ್ ಕಳೆದು ಪುನಃ ನಮ್ಮ ಮಲ್ಲಿಕಾ ವೆಜ್ ಪ್ರಾರಂಭ ಆಗಿದೆ, ಪಿಲ್ಟರ್‌ ಕಾಫಿ,ಟೀ ಜೊತೆ ಇಡ್ಲಿ -ವಡ -ದೋಸೆ- ಬನ್ಸ್- ಎಣ್ಣೆ ತಿಂಡಿಗಳು-ಊಟದ ಜೊತೆ ಈಗಿನ ವಿಶೇಷ ಪ್ರತಿನಿತ್ಯ  ನಮ್ಮ ಪಶ್ಚಿಮ ಘಟ್ಟದ ಮಲೆನಾಡಿನ #ಹಲಸಿನ_ಎಲೆ_ಕಡಬು ಕಾಳಿನ ಪಲ್ಯ ಮತ್ತು ಕೆಂಪು ಚಟ್ನಿ  #ಅಕ್ಕಿ_ರೊಟ್ಟಿ ಹಾಗೂ #ರಾಗಿ_ರೊಟ್ಟಿ ಚಟ್ನಿ ಪಲ್ಯ, ಗಿರ್ಮಿಟ್, ಗಿಣ್ಣ ಮತ್ತು ಊಟ ದೊರೆಯುತ್ತದೆ
  ಸ್ತ್ರೀ-ಪುರುಷ ಗ್ರಾಹಕರಿಗೆ ಪ್ರತ್ಯೇಕ ಹೈಟೆಕ್ ಶೌಚಾಲಯ ವ್ಯವಸ್ಥೆ ಇದೆ ಇದೆಲ್ಲ ಛಾಯಾ ಹೋಟೆಲ್ ಬೀಮಣ್ಣರಿಂದ ಪಡೆದ ಸಲಹೆಯಿಂದ ಸಾಧ್ಯವಾಯಿತು.

 #varadasrilodgesagar #chayahotelbeemanna #kavalagoduvenkatesh #sagartaluk #hotelmanagement #karnatakahotelassociation

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ