Skip to main content

Blog number 2266. ಕಾಗೋಡು ತಿಮ್ಮಪ್ಪನವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿ.

#ಈ_ವರ್ಷದ_ಕೃಷಿ_ವಿಶ್ವವಿದ್ಯಾಲಯದ_ಘಟಿಕೋತ್ಸವದಲ್ಲಿ_ಕಾಗೋಡು_ತಿಮ್ಮಪ್ಪನವರಿಗೆ

#ಗೌರವ_ಡಾಕ್ಟರೇಟ್_ಪದವಿ_ಪ್ರಧಾನ_ಮಾಡಲಿ.

#ಇದೇ_ಸಂದರ್ಭದಲ್ಲಿ_ಕೃಷಿ_ವಿಶ್ವವಿದ್ಯಾಲಯದವೃತ್ತಕ್ಕೆ_ದಿವಂಗತ_ಕುಂಬಾರ_ಪುಟ್ಟಶೆಟ್ಟರ
#ವೃತ್ತ_ಎಂದು_ನಾಮಕರಣ_ಕೂಡ_ಆಗಲಿ

#ಸಾಗರ_ತಾಲ್ಲೂಕಿನ_ಆನಂದಪುರಂ_ಹೋಬಳಿಯ_ಯಡೇಹಳ್ಳಿ_ಗ್ರಾಮ_ಪಂಚಾಯಿತಿಯ

#ಇರುವಕ್ಕಿ_ಗ್ರಾಮದ_ಶಿವಪ್ಪನಾಯಕ_ಕೃಷಿ_ತೋಟಗಾರಿಕಾ_ವಿಶ್ವವಿದ್ಯಾಲಯ

#ಇಲ್ಲಿ_ಸ್ಥಾಪಿಸಲು_ಕಾಗೋಡು_ತಿಮ್ಮಪ್ಪ_ಮತ್ತು_ಯಡೂರಪ್ಪ_ಮುಖ್ಯ_ಕಾರಣಕರ್ತರು.


   ರಾಜ್ಯದ ಭೂ ಸುದಾರಣಾ ಕಾಯ್ದೆ ಸಾಗರ ತಾಲೂಕಿನಲ್ಲಿ ಪರಿಣಾಮಕಾರಿ ಅನೂಷ್ಟಾನ ಮಾಡಿದವರು ಕಾಗೋಡು ತಿಮ್ಮಪ್ಪನವರು ನಂತರ ಬಗರ್ ಹುಕುಂ ಭೂ ಮಂಜೂರಾತಿಯಲ್ಲಿ ಕೂಡ ಇವರ ಶ್ರಮದ ಫಲಾನುಭವಿಗಳು ಸಾವಿರಾರು ಕುಟುಂಬಗಳು.
   ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಇರುವಕ್ಕಿ ಗ್ರಾಮದಲ್ಲಿ ಕಾಗೋಡು ತಿಮ್ಮಪ್ಪನವರು ಮತ್ತು ಯಡೂರಪ್ಪರ ಪ್ರಯತ್ನದಿಂದ ಆರು ಜಿಲ್ಲೆಗಳ ವ್ಯಾಪ್ತಿಗೆ ಬರುವ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ದಿನಾಂಕ 17 - ಜೂನ್ - 2017 ರಂದು ಆಗಿನ ಕೃಷಿ ಮಂತ್ರಿ ಕೃಷ್ಣ ಬೈರೇಗೌಡರಿಂದ ಶಂಕುಸ್ಥಾಪನೆ ಆಯಿತು.
   23- ಜುಲೈ-2021 ರಂದು ಮುಖ್ಯಮಂತ್ರಿ ಯಡೂರಪ್ಪನವರಿಂದ ಬೆಂಗಳೂರಿಂದ ವಿಡಿಯೊ ಕಾನ್ಪರೆನ್ಸ್ ಮೂಲಕ ಉದ್ಫಾಟನೆ ಮಾಡಿದ್ದರು.
    ಕಳೆದ ವರ್ಷ 21-ಜುಲೈ- 2023ರಂದು ಕೃಷಿ ವಿಶ್ವವಿದ್ಯಾಲಯದಿಂದ ಯಡೂರಪ್ಪನವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು
    94ರ ವಯೋಮಾನದ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪನವರು ಬಹುತೇಕ ರಾಜಕಾರಣದಿಂದ ದೂರವಿದ್ದಾರೆ ಅವರ ರೈತ ಪರ ಹೋರಾಟಗಳು, ಜನಪರ ಆಡಳಿತಗಳನ್ನು ನೋಡಿದ ಸಾಗರ ತಾಲ್ಲೂಕಿನ ನಮಗೆಲ್ಲ ನಮ್ಮ ತಾಲ್ಲೂಕಿನ ಕೃಷಿ ವಿದ್ಯಾಲಯದ ಈ ವರ್ಷದ ಘಟಿಕೋತ್ಸವದಲ್ಲಿ ಕಾಗೋಡು ತಿಮ್ಮಪ್ಪನವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿ ಎಂಬ ವಿನಮ್ರವಾದ ಮನವಿ ಮಾಡುತ್ತೇನೆ.
  ಸಾಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗೋಪಾಲ ಕೃಷ್ಣ ಬೇಳೂರು ಮತ್ತು ಜಿಲ್ಲಾ ಮಂತ್ರಿ ಮದುಬಂಗಾರಪ್ಪನವರು ಈ ಬಗ್ಗೆ ಪ್ರಯತ್ನಿಸಲು ವಿನಂತಿಸುತ್ತೇನೆ.
  ಇದೇ ಸಂದರ್ಭದಲ್ಲಿ ಈ ಕೃಷಿ ವಿಶ್ವವಿದ್ಯಾಲಯದ ವೃತ್ತಕ್ಕೆ ದಿವಂಗತ #ಕುಂಬಾರ_ಪುಟ್ಟಶೆಟ್ಟರ_ವೃತ್ತ ಎಂದು ನಾಮಕರಣ ಕೂಡ ಮಾಡಿಸಲು ನೆನಪಿಸುತ್ತೇನೆ.
  ಕುಂಬಾರ ಪುಟ್ಟ ಶೆಟ್ಟರ ಪರಿಚಯ ಇಲ್ಲಿದೆ
   #ಇರುವಕ್ಕಿ ನಮ್ಮದೇ ಯಡೇಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮ ಇದು ಒಂದು ಕಾಲದಲ್ಲಿ ಮಡಿಕೆ ತಯಾರಿಸುತ್ತಿದ್ದ ಕುಂಬಾರ ಜನಾಂಗದವರು ವಲಸೆ ಬಂದು ನೆಲೆ ನಿಂತ ದಟ್ಟ ಅರಣ್ಯ ಪ್ರದೇಶ.
#ವಿನೋಬಾ_ಬಾವೆ_ಭೂದಾನ_ಚಳವಳಿಯಲ್ಲಿ_ಭಾಗವಹಿಸಿ_ಭೂದಾನ_ಮಾಡಿದ_ಇರುವಕ್ಕಿ_ಪುಟ್ಟಶೆಟ್ಟರು
    ಇಲ್ಲಿನ ಪುಟ್ಟ ಶೆಟ್ಟರೊಬ್ಬರೆ ಆ ಕಾಲದ ಕುಂಬಾರ ಸಮೂದಾಯದ ಖಾತೆ ಜಮೀನುದಾರರು ಇವರು ಆಗಿನ ವಿದ್ಯಾ ಮಂತ್ರಿ ಆಗಿದ್ದ  ಬದರಿನಾರಾಯಣ ಆಯ್ಯಂಗಾರ ತಂದೆ ಜಮೀನ್ದಾರ್, ಇನಾಂದಾರ್ ಮತ್ತು ಕೊಡುಗೈ ದಾನಿ ಆಗಿದ್ದ ರಾಮಕೃಷ್ಣ ಅಯ್ಯಂಗಾರ್ ಮತ್ತು ಬದರಿನಾರಾಯಣ ಅಯ್ಯಂಗಾರರ ಅಣ್ಣ ವೆಂಕಟಾಚಲ ಆಯ್ಯಂಗಾರರ ಆಪ್ತರು ಅವರೆಲ್ಲರ ಸಲಹೆ ಮತ್ತು ಸಹಕಾರದಿಂದ ಅಡಿಕೆ ಕೃಷಿ ಮಾಡುತ್ತಾರೆ.
  ವಿನೋಬಾ ಭಾವೆಯವರು ಭೂದಾನ ಚಳವಳಿಗೆ ಆನಂದಪುರಂಗೆ ಬಂದಾಗ ತಮ್ಮ ಭತ್ತ ಬೆಳೆಯುವ 5 ಎಕರೆ ತರಿ ಜಮೀನು ದಾನ ಮಾಡಿದ ಮಹಾನುಭಾವರು, ಅವರು ಆ ಕಾಲದಲ್ಲಿ ಅತ್ಯಂತ ಹಿಂದುಳಿದ ಕುಂಬಾರ ಜನಾಂಗದ ಪುಟ್ಟ ಶೆಟ್ಟರ ಭೂದಾನವನ್ನು ಅವತ್ತಿನ ಸಭೆಯಲ್ಲಿ ಸರ್ದಾರ್ ಎಣ್ಣೆಕೊಪ್ಪದ ಮಲ್ಲಿಕಾರ್ಜುನ ಗೌಡರು ವಿನೋಬಾ ಭಾವೆ ಎದರು ಹೊಗಳಿದ್ದರಂತೆ, ಇವರ ಮಗ ಕುಂಬಾರ್ ಬಸಪ್ಪ ಕೂಡ ಪ್ರಗತಿ ಪರ ಕೃಷಿಕರು ಮತ್ತು ಯಡೇಹಳ್ಳಿ ಮಂಡಲ್ ಪಂಚಾಯ್ತಿ ಸದಸ್ಯರಾಗಿದ್ದರು.
 ಈ ಗ್ರಾಮದಲ್ಲಿ ಸುಮಾರು ಸಾವಿರ ಎಕರೆ ದಟ್ಟ ಅರಣ್ಯ ಪ್ರದೇಶ ಕಂದಾಯ ಭೂಮಿ ಆಗಿಯೇ ಉಳಿದಿದ್ದು ಆಶ್ಚಯ೯ವೇ ಇದನ್ನು ಮಂಜೂರಾತಿ ಕೇಳಿದ ನೂರಾರು ಸಂಸ್ಥೆಗಳು ಮಠಗಳಿಗೆ ಮಂಜೂರಾಗದೇ ಉಳಿಯಲು ಕಾರಣ ಇಲ್ಲಿದ್ದ ದಟ್ಟ ಅರಣ್ಯವೇ ಆಗಿತ್ತು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ