Skip to main content

Blog number 2270. ಆನಂದಪುರಂ ಇತಿಹಾಸ.ಈ ಹೆಸರು ಬರಲು ಕಾರಣ ಏನು? ಆನಂದಪುರಂ ಅಥವ ಆನಂದಪುರಂ ಇದರಲ್ಲಿ ಸರಿ ಯಾವುದು?

#ಆನಂದಪುರಂ_ಇತಿಹಾಸ

#ನಮ್ಮ_ಊರು_ನಮಗೆ_ಹೆಮ್ಮೆ

#ಪ್ರತಿ_ಊರಿನ_ಹೆಸರಿಗೂ_ಇತಿಹಾಸ_ಇದೆ.

#ನಿಮ್ಮ_ಊರಿನ_ಇತಿಹಾಸ_ದಾಖಲಿಸಿ

#ಆನಂದಪುರಂ_ಅಥವ_ಆನಂದಪುರ_ಇದರಲ್ಲಿ_ಸರಿ_ಯಾವುದು?

#ಆನಂದಪುರಂ_ಎಂಬುದೇ_ಅದಿಕೃತ

#ಗೆಜೆಟಿಯರ್_ರೈಲ್ವೆ_ಮತ್ತು_ಅಂಚೆ_ಇಲಾಖೆಯಲ್ಲಿ_ಆನಂದಪುರಂ_ಖಾಯಂ_ಆಗಿದೆ

#ಪುರಂ_ಪದ_ಮೂಲ_ಹಿಂದಿ_ಮತ್ತು_ಸಂಸ್ಕೃತ_ಮೂಲ

#ಪುರಂ_ಎಂದರೆ_ನಗರ_ಪ್ರದೇಶ

#ಆನಂದಪುರಂ_ಮೂಲ_ಹೆಸರು_ಯಡೇಹಳ್ಳಿ_ಕೋಟೆ

#ಕೆಳದಿ_ರಾಜ_ವೆಂಕಟಪ್ಪ_ನಾಯಕರು_ಚಂಪಕ_ರಾಣಿ_ಸ್ಮರಣಾರ್ಥ

#ಚಂಪಕ_ಸರಸ್ಸು_ಪ್ರೇಮ_ಸ್ಮಾರಕ_ನಿರ್ಮಿಸಿ_ಈ_ಪ್ರದೇಶಕ್ಕೆ_ಆನಂದಪುರಂ_ಎಂದು_ನಾಮಕರಣ_ಮಾಡುತ್ತಾರೆ

#ಆನಂದಪುರಂ_ಹೆಸರಿಗೆ_400_ವರ್ಷ


  ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೋಬಳಿ ಕೇಂದ್ರ ಆನಂದಪುರಂ ಎಂಬ  ಸ್ಟಾತಂತ್ರ್ಯ ಪೂರ್ವದ ಬೋರ್ಡ ಆನಂದಪುರಂ ಕನಕಮ್ಮಾಳ್ ಆಸ್ಪತ್ರೆ ಎದುರು ಇತ್ತು.
  ಆನಂದಪುರಂ ರೈಲ್ವೆ ನಿಲ್ದಾಣದ ಬೋರ್ಡ್ ಕೂಡ ಇವತ್ತಿಗೆ ಆನಂದಪುರಂ ರೈಲ್ವೆ ನಿಲ್ದಾಣ ಎಂದೇ ಇದೆ.
    ಆನಂದಪುರಂ ಅಂಚೆ ಕೇಂದ್ರ ಕೂಡ ಆನಂದಪುರಂ 577 412 ಆಗಿದೆ.
   ಪುರಂ ಎಂದರೆ ವಿಶೇಷವಾಗಿ ರಾಜರ ಜೀವನ ಶೈಲಿ ಪ್ರತಿಬಿಂಬಿಸುತ್ತದೆ ಮತ್ತು ಬೌದ್ಧ, ಪಾಲಿ, ಹಿಂದೂ, ಸಂಸ್ಕೃತ, ಜೈನ, ಪ್ರಾಕೃತ ಪ್ರಾಚೀನ ಭಾರತದ ಇತಿಹಾಸ.
   ಮರಾಠಿ, ಹಿಂದಿ ಮತ್ತು ತಮಿಳಿನಲ್ಲಿ ಪುರಂ ಎಂದರೆ ನಗರ ಪ್ರದೇಶ ಎಂದು ಅರ್ಥವಿದೆ.
  ಕೇರಳದ ಮಲಪುರಂ, ಆಂಧ್ರಪ್ರದೇಶದಲ್ಲಿ ಅನಂತಪುರಂ, ತಮಿಳುನಾಡಿನ ಕಾಂಚಿಪುರಂ, ದೆಹಲಿಯ ಆರ್.ಕೆ.ಪುರಂಗಳನ್ನ ಉದಾಹರಿಸ ಬಹುದು.
 ಹಿಂದಿ ಮತ್ತು ಸಂಸ್ಕೃತದಲ್ಲಿ ಪುರಂ ಹಳ್ಳಿ - ಕೋಟೆ-ಜನವಸತಿಗೆ ಇರುವ ಹೆಸರು.
   ಪುರ ಅಥವ ಪುರಂ ಭಾರತದ ನಗರಗಳಿಗೆ ಸಾಮಾನ್ಯ ಪ್ರತ್ಯಯವಾಗಿದೆ ಆದರೆ ಆನಂದಪುರಂನ ವಾಸಿಗಳು #ಆನಂದಪುರಂ ಎನ್ನುವುದನ್ನ ಬಳಕೆ ಮಾಡದೆ ಕೇವಲ ಆನಂದಪುರ ಎಂದೇ ಉಲ್ಲೇಖಿಸುವುದು ಊರಿನ ಹೆಸರಿನ ಅಪಭ್ರಂಶ ಆಗಿದೆ.
  ಇನ್ನೂ ಕೆಲವರು ಮುಂದುವರಿದು ತಮಿಳು ಭಾಷಾ ಮೂಲದ ನಮ್ಮ ಊರಿನ ಮಾಜಿ ಮಂತ್ರಿಗಳು ಜಮೀನ್ದಾರರಾದ ಬದರಿನಾರಾಯಣ ಅಯ್ಯಂಗಾರರ ಕುಟುಂಬ ತಮ್ಮ ಮಾತೃ ಬಾಷೆ ತಮಿಳು ಅಭಿಮಾನದಿಂದ ಆನಂದಪುರವನ್ನು ಆನಂದಪುರಂ ಎಂದು ಬದಲಿಸಿದರು ಎಂಬ ವಿತಂಡವಾದ ಮಾಡುತ್ತಿದ್ದಾರೆ ಆದರೆ ಬದರಿ ನಾರಾಯಣ ಅಯ್ಯಂಗಾರರ ತಂದೆ ರಾಮಕೃಷ್ಣ ಅಯ್ಯಂಗಾರ್ ತಂದೆ ಇಲ್ಲಿಗೆ ಬಂದು ನೆಲೆಸುವಾಗಲೇ ನಮ್ಮ ಊರು ಆನಂದಪುರಂ ಎಂದೇ ಹೆಸರಾಗಿತ್ತು.
  ಇವರ ಕುಟುಂಬದ ಎಲ್ಲರ ಹೆಸರಿನ ಮೊದಲಿನ ಇನ್ಷಿಯಲ್ A ಅಂದರೆ ಆನಂದಪುರಂ ಎಂದೇ ಆಗಿದ್ದು ಹೆಮ್ಮೆಯ ವಿಷಯ ಮತ್ತು ಬದರಿ ನಾರಾಯಣ ಅಯ್ಯಂಗಾರ್ ಅವರು ಮುಖ್ಯಮಂತ್ರಿ  ದೇವರಾಜ ಅರಸ್ ಅವರ ಸಂಪುಟದಲ್ಲಿ ವಿದ್ಯಾಮಂತ್ರಿ ಆಗಿದ್ದಾಗಲೇ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡುವಲ್ಲಿ ಪ್ರಮುಖ ಕಾರಣ ಕರ್ತರು ಎಂಬುದು ನೆನಪಿಸಿ ಕೊಳ್ಳಬೇಕು.
  ಆದ್ದರಿಂದ ಆನಂದಪುರಂ ಎಂಬ ನಮ್ಮ ಊರಿನ ಅಸಲಿ ಹೆಸರಿಗೆ ಇತಿಹಾಸದ ನಂಟಿದೆ ಅದನ್ನು ಯಾರೂ ಬದಲಿಸಿಲ್ಲ ನಾವೂ ಅದನ್ನ ಬದಲಿಸ ಬಾರದು.
    ಕೆಳದಿ ರಾಜ ವೆಂಕಟಪ್ಪ ನಾಯಕರು ರಾಣಿ ಚಂಪಕಾಳ ನೆನಪಿಗಾಗಿಯೇ #ಯಡೇಹಳ್ಳಿ_ಕೋಟೆ ಎಂಬ ಪ್ರದೇಶವನ್ನು #ಆನಂದಪುರಂ ಎಂದೇ ನಾಮಕರಣ ಮಾಡುತ್ತಾರೆ.
  ಇದೆಲ್ಲ ಅಂದಾಜು ಕಾಲ ಮಾನ 1624-25 ಎಂದು ಪರಿಬಾವಿಸ ಬಹುದಾಗಿದ್ದು ಅಂದರೆ 2025 ಕ್ಕೆ ಚಂಪಕ ಸರಸ್ಸು ಸ್ಮಾರಕ ನಿರ್ಮಾಣವಾಗಿ 400 ವಷಾ೯ಚರಣೆಯ ದಿನವಾಗಲಿದೆ ಹಾಗೆಯೇ ಆನಂದಪುರಂ ಎಂದು ನಾಮಕರಣಕ್ಕೂ 400 ವರ್ಷ ಆಗಲಿದೆ.
  ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಚಂಪಕರಾಣಿಯ ದುರಂತ ಪ್ರೇಮ ಕಥೆ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತ " #ಬೆಸ್ತರರಾಣಿ_ಚಂಪಕ ಎಂಬ ನಾನು ಬರೆದ ಕಾದಂಬರಿಯಲ್ಲಿ ಹೆಚ್ಚಿನ ವಿವರಗಳಿದೆ.
     400 ವರ್ಷದ ಹಿಂದೆ ಈ ಪ್ರದೇಶದ ಹೆಸರು #ಯಡೇಹಳ್ಳಿ_ಕೋಟೆ ಎಂದೇ ಇತ್ತು, ಕೆಳದಿ ಇತಿಹಾಸದಲ್ಲಿ ಕೆಳದಿ ಅರಸರು ಯಡೇಹಳ್ಳಿ ಕೋಟೆ ಅಕ್ರಮಿಸಿದ್ದ ಹರತಾಳಿನ ಕಿರಾತಕರ ಮೇಲೆ ಯುದ್ಧ ಮಾಡಿ ಯಡೇಹಳ್ಳಿ ಕೋಟೆ ಬಿಡಿಸಿಕೊಳ್ಳುತ್ತಾರೆಂದು ಇದೆ ಮತ್ತು ಆನಂದಪುರಂನ ರಂಗನಾಥ ದೇವರನ್ನು ಯಡೇಹಳ್ಳಿ ತಿರುಮಲ ಎಂದು ಕರೆದಿರುವ ಉದಾಹರಣೆ ಇದೆ.
  ಕೆಳದಿ ರಾಜ ವೆಂಕಟಪ್ಪ ನಾಯಕರು ಯಡೇಹಳ್ಳಿ ಕೋಟೆಯಿಂದ ಸೂಯೋ೯ದಯಕ್ಕೆ ಮೊದಲೆ ರಾಜ ಮಾರ್ಗದಲ್ಲಿ ಕವಲೇದುರ್ಗ ಮತ್ತು ಬಿದನೂರು ಕೋಟೆಗೆ ಹೋಗುವಾಗ ಪೇಟೆಯ ಗಂಗಾ ಮಠದ ಗುತ್ಯಮ್ಮ ದೇವಸ್ಥಾನದ ಎದರು ಮನೆಯ ಅಂಗಳದಲ್ಲಿ ಪ್ರತಿನಿತ್ಯ ಆಕರ್ಷಕವಾದ ಸುಂದರವಾದ ಬೃಹತ್ ರಂಗೋಲಿಯಿಂದ ಗಮನ ಸೆಳೆಯುವ ಬೆಸ್ತರ ಕನ್ಯೆ ಚಂಪಕಳ ಮೇಲೆ ಮನಸೋತು ವಿವಾಹವಾಗಿ ಆನಂದಪುರಂನ ಕೋಟೆಯ ಅರಮನೆಯಲ್ಲಿಡುತ್ತಾರೆ ಇದು ಅವರ ಕುಟುಂಬದಲ್ಲಿ ಕೋಲಾಹಲವಾಗಿ ಮಹಾರಾಣಿ ಭದ್ರಮ್ಮಾಜಿ ಊಟ ಆಹಾರ ತ್ಯಜಿಸಿ ಕಾಯಿಲೆಯಿಂದ ದೇಹಾಂತ್ಯವಾಗುತ್ತದೆ ಇದರಿಂದ ರಾಜ ವೆಂಕಟಪ್ಪ ನಾಯಕರಿಗೆ ಕೆಟ್ಟ ಹೆಸರು ಉಂಟಾಗುತ್ತದೆ ಇದಕ್ಕೆಲ್ಲ ಅನ್ಯ ಜಾತಿಯ ಚಂಪಕಳ ಮದುವೆ ಆದದ್ದೇ ಕಾರಣ ಎಂದು ಪ್ರಜೆಗಳು ಭಾವಿಸುತ್ತಾರೆ, ಇದರಿಂದ ನೊಂದ ಚಂಪಕ ಹಾಲಿನೊಂದಿಗೆ ವಜ್ರದ ಪುಡಿ ಬೆರೆಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
   ರಾಜ ವೆಂಕಟಪ್ಪ ನಾಯಕ ಚಂಪಕಳ ಸ್ಮರಣಾರ್ಥ ಸುಂದರ ಕೊಳ ಅದರ ಮಧ್ಯೆ ಚಂಪಕ ನಿತ್ಯ ಪೂಜಿಸುತ್ತಿದ್ದ ಶಿವಲಿಂಗ ಸ್ಥಾಪಿಸಿ ಅಲ್ಲಿಗೆ ಹೋಗಲು ಕಲ್ಲಿನ ಸಂಕ ನಿರ್ಮಿಸುತ್ತಾರೆ ಅದರ ಎದರು ಸುಂದರ ಕಲ್ಲಿನ ಎರೆಡು ಆನೆಯ ಮಧ್ಯದ ಪಾವಟಿಗೆ ದಾಟಿದರೆ ಸುತ್ತು ಪಗಾರದ ಮಧ್ಯ ಚಂಪಕಾಳ ಸಮಾದಿ ಇದೆ.
  ಆದ್ದರಿಂದ ಆನಂದಪುರಂ ಎಂಬ ನಮ್ಮ ಊರಿನ ಅಸಲಿ ಹೆಸರಿಗೆ ಇತಿಹಾಸದ ನಂಟಿದೆ ಅದನ್ನು ಯಾರೂ ಬದಲಿಸಿಲ್ಲ ನಾವೂ ಅದನ್ನ ಬದಲಿಸ ಬಾರದು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ