Skip to main content

Blog number 2241. ಬಾಂಡ್ಯಾ ಮನೆತನದವರು ಬೂದಿ ಬಸಪ್ಪ ನಾಯಕರ ಹೋರಾಟಕ್ಕೆ ಆರ್ಥಿಕ ನೆರವು ನೀಡಿದ್ದರಿಂದ ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ದ್ವೇಷಕ್ಕೆ ಗುರಿಯಾದ ಕುಟುಂಬ

#ಕೆಳದಿ_ಸಂಸ್ಥಾನದ_ಅಳಿದುಳಿದ_ಅರಮನೆ

#ತೀರ್ಥಹಳ್ಳಿಯ_ಬಾಂಡ್ಯಾ_ಮನೆತನ

#ಬೂದಿಬಸಪ್ಪರ_ಹೋರಾಟಕ್ಕೆ_ಆರ್ಥಿಕ_ಬಲ_ನೀಡಿದವರು

#ಇದರಿಂದ_ಮೈಸೂರಿನ_ಮುಮ್ಮಡಿ_ಕೃಷ್ಣರಾಜ_ಒಡೆಯರ್_ಕೆಂಗಣ್ಣಿಗೆ_ಗುರಿ

#ಇಡೀ_ಸಂತತಿ_ಸಂಹರಿಸುವ_ಸತತ_ಪ್ರಯತ್ನ_ವಿಪಲಗೊಳಿಸಿ

#ಬದುಕುಳಿದ_ಬಾಂಡ್ಯಾ_ಮನೆತನ

#ಬಾಂಡ್ಯಾ_ಅರಮನೆಯ_ಒಂದು_ಲಾರಿಯಷ್ಟು_ಪುರಾತನವಾದ

#ಬೆಲೆಕಟ್ಟಲಾಗದ_ಅಮೂಲ್ಯ_ವಸ್ತು_ಧರ್ಮಸ್ಥಳ_ವಸ್ತು_ಸಂಗ್ರಹಾಲಯಕ್ಕೆ_ನೀಡಿದ್ದಾರೆ.

#ಕೆಳದಿ_ಅರಸರಿಂದ_ಅಪಾರ_ಸಹಾಯ_ರಕ್ಷಣೆ_ಪಡೆದ_ಶೃಂಗೇರಿ_ಮಠಕ್ಕೆ_ಕೆಳದಿ_ಇತಿಹಾಸ_ಸ್ಮಾರಕದ_ಬಗ್ಗೆ_ನಿರಾಸಕ್ತಿ

#ವಿವಾನ್_ಪೂರ್ಣಯ್ಯರ_ಮೈಸೂರು_ಸಂಸ್ಥಾನದ_ಸ್ವಾಮಿ_ಭಕ್ತಿಯಿಂದ

#ಬೂದಿ_ಬಸಪ್ಪರ_ಹೋರಾಟದ_ದಂಗೆಗಾಗಿ_ಪ್ರತಿಕಾರ

https://youtu.be/T_e0TcsdRgw?si=TdHX6_GC_DuATTt4

   ಇದೆಲ್ಲ ನಡೆದು ಹೋದ ಘಟನೆಗಳು ಬೂತಕಾಲದ ಸತ್ಯವನ್ನ ವರ್ತಮಾನದಲ್ಲಿರುವ ಜನಗಳು ಸರಿಯಾಗಿ ಅರ್ಥ್ಯೆಯಿಸಿದರೆ ಅದು ಭವಿಷ್ಯ ಕಾಲದಲ್ಲೂ ನಿಜ ಚರಿತ್ರೆಯಾಗಿ ಉಳಿದೀತು.
   ಚರಿತ್ರೆ ಚರಿತ್ರೆ ಆಗಿ ನೋಡುವ ಸಂಶೋಧನ ಕಣ್ಣುಗಳು ನಮ್ಮದಾಗಬೇಕು ಕೆಳದಿ ಸಂಸ್ಥಾನ ಇಡೀ ರಾಜ್ಯವನ್ನ ದಕ್ಷತೆಯಿಂದ ಆಳಿದ ಸಾಗರದ ಹಳ್ಳಿಬೈಲು ಚೌಡಪ್ಪ ನಾಯಕರ ಸಂತತಿ.
  ತನ್ನ ಅಜ್ಜ ಕೆಳದಿ ರಾಜ ಸದಾಶಿವನಾಯಕರ ಹೆಸರಿನಲ್ಲಿ ರಾಜ ವೆಂಕಟಪ್ಪ ನಾಯಕರು ನಿರ್ಮಿಸಿದ ಸದಾಶಿವ ಸಾಗರ ಈಗ ಕೇವಲ ಸಾಗರ ಆಗಿದೆ, 43 ವರ್ಷ ದೀರ್ಘ ಆಡಳಿತ ನಡೆಸಿದ ಗೇರುಸೊಪ್ಪೆಯಂತ ಸಂಪತ್ಭರಿತ ರಾಜ್ಯ ಅಕ್ರಮಿಸಿ ಜೈನ ರಾಣಿ ಚೆನ್ನಬೈರಾದೇವಿ ಬಂದನದಲ್ಲಿಟ್ಟ ರಾಜ ವೆಂಕಟಪ್ಪ ನಾಯಕರ ಒಂದೇ ಒಂದು ಹೆಸರಿನ ರಸ್ತೆ ಕೂಡ ಸಾಗರದಲ್ಲಿಲ್ಲ.
   ಜಾತಿ ಕಾರಣದಿಂದ ರಾಜಕಾರಣದ ಬಲಗಳಿಂದ ಕೆಳದಿ ಅರಸರ ಇತಿಹಾಸ ತಿರುಚುವ, ಪುರಾತನ ವಿಗ್ರಹ ತೆರವು ಮಾಡುವ, ತಮ್ಮಿಷ್ಟದ ವಿಗ್ರಹ ಪ್ರತಿಷ್ಟಾಪಿಸುವ, ಬರುವ ಪ್ರವಾಸಿಗರಿಗೆ ಪ್ರವೇಶ ಶುಲ್ಕ ವಿಧಿಸುವ ಕೆಲಸಗಳು ಕೆಳದಿ ಇತಿಹಾಸದ ಸಂರಕ್ಷಣೆಯ ಕೆಲಸವಲ್ಲ ಅಂತ ಅವರಿಗೆಲ್ಲ ತಿಳಿಸುವವರು ಯಾರು?
  ಇತಿಹಾಸ ಆಸಕ್ತಿಯ ಉದಯೋನ್ಮುಖ ಸಂಶೋದಕರಿಗೆ "ನೀನು ಕೆಳದಿ ಇತಿಹಾಸ ಬರೆಯ ಬೇಡ ಹೇಳಬೇಡ ನೀನು ಬೇರೆ ಜಾತಿಯವನು" ಎಂದು ಅವಮಾನ ಮಾಡುವವರು ಕೂಡ ಆಧುನಿಕ ದಿವಾನ್ ಪೂರ್ಣಯ್ಯರೇ ಆಗಿದ್ದಾರೆ.
  23- ಆಗಸ್ಟ್ - 1830ರಂದು ಬೂದಿ ಬಸಪ್ಪ ನಾಯಕರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರO ಹೋಬಳಿಯ ತ್ಯಾಗರ್ತಿ, ನೀಚಡಿ ಮತ್ತು ಕೋಟೆಕೊಪ್ಪದ ಮಧ್ಯದಲ್ಲಿರುವ ಹೊಸಂತೆಯಲ್ಲಿ ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಅವೈಜ್ಞಾನಿಕ ತೆರಿಗೆ ಹೊರೆ ಮತ್ತು ಅದನ್ನು ವಸೂಲಿ ಮಾಡಲು ಮಧ್ಯವರ್ತಿ (ಸೀಸರ್ ) ನೇಮಕ ವಿರೋಧಿಸಿ ನಡೆಸಿದ ಬೃಹತ್ ಸಮಾವೇಶಕ್ಕೆ ಬರುವ ಆಗಸ್ಟ್ ತಿಂಗಳಿಗೆ 194 ವರ್ಷಾಚಾರಣೆ.
    ಈ ಬೂದಿ ಬಸಪ್ಪರ ಹೋರಾಟಕ್ಕೆ ಆರ್ಥಿಕ ಬಲ ನೀಡಿದ ಕೆಳದಿ ವoಶಸ್ಥರ ನಿರ್ವಂಶ ಮಾಡುವ ಪ್ರಯತ್ನದಲ್ಲಿ ಉಳಿದು ಬಂದು ತೀಥ೯ಹಳ್ಳಿಯ ಬಾಂಡ್ಯಾದ ಅರಮನೆಯಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ವಿವರಿಸುತ್ತಿರುವ ಕಲ್ಯಾಣ ಕುಮಾರ್ ಬಾಂಡ್ಯಾರಿಗೆ ಮತ್ತು ಆ ಕುಟುಂಬದವರಿಗೆ ದೇವರು ಎಲ್ಲಾ ಶ್ರೇಯಸ್ಸು ದಯಪಾಲಿಸಲಿ ಎಂದು ನಾವು ಕನ್ನಡಿಗರು ಪ್ರಾರ್ಥಿಸೋಣ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...