Skip to main content

Blog number 2241. ಬಾಂಡ್ಯಾ ಮನೆತನದವರು ಬೂದಿ ಬಸಪ್ಪ ನಾಯಕರ ಹೋರಾಟಕ್ಕೆ ಆರ್ಥಿಕ ನೆರವು ನೀಡಿದ್ದರಿಂದ ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ದ್ವೇಷಕ್ಕೆ ಗುರಿಯಾದ ಕುಟುಂಬ

#ಕೆಳದಿ_ಸಂಸ್ಥಾನದ_ಅಳಿದುಳಿದ_ಅರಮನೆ

#ತೀರ್ಥಹಳ್ಳಿಯ_ಬಾಂಡ್ಯಾ_ಮನೆತನ

#ಬೂದಿಬಸಪ್ಪರ_ಹೋರಾಟಕ್ಕೆ_ಆರ್ಥಿಕ_ಬಲ_ನೀಡಿದವರು

#ಇದರಿಂದ_ಮೈಸೂರಿನ_ಮುಮ್ಮಡಿ_ಕೃಷ್ಣರಾಜ_ಒಡೆಯರ್_ಕೆಂಗಣ್ಣಿಗೆ_ಗುರಿ

#ಇಡೀ_ಸಂತತಿ_ಸಂಹರಿಸುವ_ಸತತ_ಪ್ರಯತ್ನ_ವಿಪಲಗೊಳಿಸಿ

#ಬದುಕುಳಿದ_ಬಾಂಡ್ಯಾ_ಮನೆತನ

#ಬಾಂಡ್ಯಾ_ಅರಮನೆಯ_ಒಂದು_ಲಾರಿಯಷ್ಟು_ಪುರಾತನವಾದ

#ಬೆಲೆಕಟ್ಟಲಾಗದ_ಅಮೂಲ್ಯ_ವಸ್ತು_ಧರ್ಮಸ್ಥಳ_ವಸ್ತು_ಸಂಗ್ರಹಾಲಯಕ್ಕೆ_ನೀಡಿದ್ದಾರೆ.

#ಕೆಳದಿ_ಅರಸರಿಂದ_ಅಪಾರ_ಸಹಾಯ_ರಕ್ಷಣೆ_ಪಡೆದ_ಶೃಂಗೇರಿ_ಮಠಕ್ಕೆ_ಕೆಳದಿ_ಇತಿಹಾಸ_ಸ್ಮಾರಕದ_ಬಗ್ಗೆ_ನಿರಾಸಕ್ತಿ

#ವಿವಾನ್_ಪೂರ್ಣಯ್ಯರ_ಮೈಸೂರು_ಸಂಸ್ಥಾನದ_ಸ್ವಾಮಿ_ಭಕ್ತಿಯಿಂದ

#ಬೂದಿ_ಬಸಪ್ಪರ_ಹೋರಾಟದ_ದಂಗೆಗಾಗಿ_ಪ್ರತಿಕಾರ

https://youtu.be/T_e0TcsdRgw?si=TdHX6_GC_DuATTt4

   ಇದೆಲ್ಲ ನಡೆದು ಹೋದ ಘಟನೆಗಳು ಬೂತಕಾಲದ ಸತ್ಯವನ್ನ ವರ್ತಮಾನದಲ್ಲಿರುವ ಜನಗಳು ಸರಿಯಾಗಿ ಅರ್ಥ್ಯೆಯಿಸಿದರೆ ಅದು ಭವಿಷ್ಯ ಕಾಲದಲ್ಲೂ ನಿಜ ಚರಿತ್ರೆಯಾಗಿ ಉಳಿದೀತು.
   ಚರಿತ್ರೆ ಚರಿತ್ರೆ ಆಗಿ ನೋಡುವ ಸಂಶೋಧನ ಕಣ್ಣುಗಳು ನಮ್ಮದಾಗಬೇಕು ಕೆಳದಿ ಸಂಸ್ಥಾನ ಇಡೀ ರಾಜ್ಯವನ್ನ ದಕ್ಷತೆಯಿಂದ ಆಳಿದ ಸಾಗರದ ಹಳ್ಳಿಬೈಲು ಚೌಡಪ್ಪ ನಾಯಕರ ಸಂತತಿ.
  ತನ್ನ ಅಜ್ಜ ಕೆಳದಿ ರಾಜ ಸದಾಶಿವನಾಯಕರ ಹೆಸರಿನಲ್ಲಿ ರಾಜ ವೆಂಕಟಪ್ಪ ನಾಯಕರು ನಿರ್ಮಿಸಿದ ಸದಾಶಿವ ಸಾಗರ ಈಗ ಕೇವಲ ಸಾಗರ ಆಗಿದೆ, 43 ವರ್ಷ ದೀರ್ಘ ಆಡಳಿತ ನಡೆಸಿದ ಗೇರುಸೊಪ್ಪೆಯಂತ ಸಂಪತ್ಭರಿತ ರಾಜ್ಯ ಅಕ್ರಮಿಸಿ ಜೈನ ರಾಣಿ ಚೆನ್ನಬೈರಾದೇವಿ ಬಂದನದಲ್ಲಿಟ್ಟ ರಾಜ ವೆಂಕಟಪ್ಪ ನಾಯಕರ ಒಂದೇ ಒಂದು ಹೆಸರಿನ ರಸ್ತೆ ಕೂಡ ಸಾಗರದಲ್ಲಿಲ್ಲ.
   ಜಾತಿ ಕಾರಣದಿಂದ ರಾಜಕಾರಣದ ಬಲಗಳಿಂದ ಕೆಳದಿ ಅರಸರ ಇತಿಹಾಸ ತಿರುಚುವ, ಪುರಾತನ ವಿಗ್ರಹ ತೆರವು ಮಾಡುವ, ತಮ್ಮಿಷ್ಟದ ವಿಗ್ರಹ ಪ್ರತಿಷ್ಟಾಪಿಸುವ, ಬರುವ ಪ್ರವಾಸಿಗರಿಗೆ ಪ್ರವೇಶ ಶುಲ್ಕ ವಿಧಿಸುವ ಕೆಲಸಗಳು ಕೆಳದಿ ಇತಿಹಾಸದ ಸಂರಕ್ಷಣೆಯ ಕೆಲಸವಲ್ಲ ಅಂತ ಅವರಿಗೆಲ್ಲ ತಿಳಿಸುವವರು ಯಾರು?
  ಇತಿಹಾಸ ಆಸಕ್ತಿಯ ಉದಯೋನ್ಮುಖ ಸಂಶೋದಕರಿಗೆ "ನೀನು ಕೆಳದಿ ಇತಿಹಾಸ ಬರೆಯ ಬೇಡ ಹೇಳಬೇಡ ನೀನು ಬೇರೆ ಜಾತಿಯವನು" ಎಂದು ಅವಮಾನ ಮಾಡುವವರು ಕೂಡ ಆಧುನಿಕ ದಿವಾನ್ ಪೂರ್ಣಯ್ಯರೇ ಆಗಿದ್ದಾರೆ.
  23- ಆಗಸ್ಟ್ - 1830ರಂದು ಬೂದಿ ಬಸಪ್ಪ ನಾಯಕರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರO ಹೋಬಳಿಯ ತ್ಯಾಗರ್ತಿ, ನೀಚಡಿ ಮತ್ತು ಕೋಟೆಕೊಪ್ಪದ ಮಧ್ಯದಲ್ಲಿರುವ ಹೊಸಂತೆಯಲ್ಲಿ ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಅವೈಜ್ಞಾನಿಕ ತೆರಿಗೆ ಹೊರೆ ಮತ್ತು ಅದನ್ನು ವಸೂಲಿ ಮಾಡಲು ಮಧ್ಯವರ್ತಿ (ಸೀಸರ್ ) ನೇಮಕ ವಿರೋಧಿಸಿ ನಡೆಸಿದ ಬೃಹತ್ ಸಮಾವೇಶಕ್ಕೆ ಬರುವ ಆಗಸ್ಟ್ ತಿಂಗಳಿಗೆ 194 ವರ್ಷಾಚಾರಣೆ.
    ಈ ಬೂದಿ ಬಸಪ್ಪರ ಹೋರಾಟಕ್ಕೆ ಆರ್ಥಿಕ ಬಲ ನೀಡಿದ ಕೆಳದಿ ವoಶಸ್ಥರ ನಿರ್ವಂಶ ಮಾಡುವ ಪ್ರಯತ್ನದಲ್ಲಿ ಉಳಿದು ಬಂದು ತೀಥ೯ಹಳ್ಳಿಯ ಬಾಂಡ್ಯಾದ ಅರಮನೆಯಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ವಿವರಿಸುತ್ತಿರುವ ಕಲ್ಯಾಣ ಕುಮಾರ್ ಬಾಂಡ್ಯಾರಿಗೆ ಮತ್ತು ಆ ಕುಟುಂಬದವರಿಗೆ ದೇವರು ಎಲ್ಲಾ ಶ್ರೇಯಸ್ಸು ದಯಪಾಲಿಸಲಿ ಎಂದು ನಾವು ಕನ್ನಡಿಗರು ಪ್ರಾರ್ಥಿಸೋಣ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ