Skip to main content

Posts

Showing posts from March, 2026

Blog 3587. 61 ವರ್ಷ

#ನಿನ್ನೆಗೆ_ನನ್ನ_ಜೀವಮಾನದ_61_ವರ್ಷ_ಪೂರ್ಣವಾಯಿತು. #ನಾನು_ಹುಟ್ಟಿದ್ದು_9_ಫೆಬ್ರುವರಿ_1965ರಂದು #ತಡವಾಗಿ_ನೆನಪಾಯಿತು_ಹುಟ್ಟಿದ_ಹಬ್ಬದ_ಆಚರಣೆ_ನಾನು_ಆಚರಿಸಿಕೊಳ್ಳುವುದಿಲ್ಲ. #ಕಾಲ_ಯಾರಿಗೂ_ಕಾಯುವುದಿಲ್ಲ #ಪ್ರಕೃತಿ_ಎಲ್ಲ_ಜೀವಿ_ಸಸ್ಯಗಳನ್ನು_ನಾಶಮಾಡಲು_ಹೊಸದನ್ನು_ಸೃಷ್ಟಿಸಲು_ನಿರತವಾಗಿರುತ್ತದೆ.   #ಇವತ್ತಿನಿಂದ_62ನೇ_ವಯಸ್ಸು_ಪೂರ್ಣ_ಮಾಡುವ_ಕಡೆಗೆ_ನಡಿಗೆ. #Birthday #wishes #Arunprasad #Hombujaresidency #yadehalli #Anandapuram #longwalk     ನಾನು ಹುಟ್ಟು ಹಬ್ಬ ಆಚರಿಸಿಕೊಳ್ಳವುದಿಲ್ಲ, ಉಡುಗೊರೆ ಸ್ವೀಕರಿಸುವುದಿಲ್ಲ ಆದ್ದರಿಂದ ಪ್ರತಿ ವರ್ಷ ನಾನು ಹುಟ್ಟಿದ ದಿನವಾದ #ಫೆಬ್ರುವರಿ_9 ಈ ಅರಿವು ಇಲ್ಲದೆ ಕಳೆದು ಹೋಗಿ ಬಿಡುತ್ತದೆ.    ಹಾಗೆಯೇ ನನ್ನ 61ನೇ ವರ್ಷ ಪೂರೈಸಿದ ದಿನ ಮರೆತು ಹೋಗಿತ್ತು ಅದು ನೆನಪಾಗಿದ್ದು ತಡವಾಗಿ.     ಆನಂದಪುರಂ ಬಿಜೆಪಿ ಶಕ್ತಿಕೇಂದ್ರದ #ನಾಡವಳ್ಳಿ_ನಾಗರಾಜ್ ಶುಭಾಷಯ ವಾಟ್ಸಪ್ ಮಾಡಿದ ಮೇಲೆ ನೆನಪಾಯಿತು.     61 ವರ್ಷ ಕಳೆದಾಯಿತು ಇನ್ನೇನಿದ್ದರು 62ನೇ ವಯಸ್ಸಿನ ಉಳಿದ 364 ದಿನಗಳ ಪೂರೈಸುವುದು.     50 ವರ್ಷ ತಲುಪುವ ತನಕ ಆಯಸ್ಸಿನ ವಾಸ್ತವ ಅರ್ಥವೇ ಆಗುವುದಿಲ್ಲ ಅದು 60 ಕ್ಕೆ ತಲುಪಿತು ಎಂದಾಗಲೇ ಎಚ್ಟರಿಕೆ ಆಗುತ್ತದೆ, ಭೂಮಿ ಮೇಲೆ ಇರುವ ದಿನಗಳು ಕಡಿಮೆ ಎಂದು ಆಗಲೇ ಅರಿವಾಗುವುದು.   ...

Blog 3588. ಅಲಂಕಾರ ಪ್ರವೀಣ ಸೂರಜ್ ಭಟ್

#ಇಡಗುಂಜಿ_ಮಹಾಗಣಪತಿ #ರಂಗೋಲಿಯಲ್ಲಿ_ಮೂಡಿಸಿದ #ಸೂರಜ್_ಕೊಡೂರು #ದೇವರ_ವಿಗ್ರಹಗಳಿಗೆ_ಬೆಣ್ಣೆ_ಅಲಂಕಾರ_ಪ್ರವೀಣರು. #Varasiddivinayaka #Siddivinayakatemple #yadehalli #Bennealankara #Rangoli #Rathotsava #Jatre #Idagunji #Mahaganapathi    ನಮ್ಮೂರ ಪುರ ದೈವ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವರ 20 ನೇ ವರ್ಷದ ಬ್ರಹ್ಮರಥೋತ್ಸವ ಕಳೆದ ಜನವರಿ ತಿಂಗಳ 22ನೇ ತಾರೀಖು ನೆರವೇರಿತು.    ಈ ಸಂದರ್ಭದಲ್ಲಿ ದೇವಾಲಯದಲ್ಲಿ #ಇಡಗುಂಜಿ_ಮಹಾಗಣಪತಿಯನ್ನ ರಂಗೋಲಿಯಲ್ಲಿ ಮೂಡಿಸಿದವರು ಅಪ್ರತಿಮ ಕಲಾವಿದರಾದ ಸೂರಜ್ ಅವರು.     ಇವರನ್ನ ನಮಗೆ ಪರಿಚಯಿಸಿ ಪ್ರೋತ್ಸಾಹಿಸಿದವರು ನಮ್ಮ ದೇವಾಲಯದ ರಥೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಸಮಿತಿ ಅಧ್ಯಕ್ಷರು ಮತ್ತು ಶಿವಮೊಗ್ಗದ ಸಿರಿ ಸೌಹಾರ್ದ ಬ್ಯಾಂಕಿನ ಉಪಾದ್ಯಕ್ಷರಾದ ಎಂ. ಜಿ. ಪ್ರಕಾಶ್ ಭಟ್ಟರು.    ಸೂರಜ್ ಭಟ್ಟರು ಪ್ರತಿ ವರ್ಷವೂ ಜಾತ್ರಾ ಮಹೋತ್ಸವದಲ್ಲಿ ದೇವಾಲಯದಲ್ಲಿ, ಹೋಮದ ಮಂಟಪದಲ್ಲಿ ವಿದಿ ವಿಧಾನದ ರೀತಿ ರಂಗೋಲೆಯಲ್ಲಿ ಮಂಡಲ, ಗಣಪತಿ ಮತ್ತು ಶ್ರೀಚಕ್ರಗಳ ಚಿತ್ರಿಸುತ್ತಾರೆ.    ರಂಗೋಲಿಯು ದೇವರನ್ನ ಒಲಿಸಿಕೊಳ್ಳುವ ಒಂದು ಆರಾದನಾ ಸಂಪ್ರದಾಯವೂ ಆಗಿದೆ.     ಹೋಮ ಹವನದಲ್ಲಿ, ಮದುವೆಯ ಹಸೆಮಣೆಯಲ್ಲಿ, ದೇವರ ಮಂಟಪಗಳಲ್ಲಿ ಪುರೋಹಿತರು ರಂಗೋಲಿ ಬಿಡಿಸುತ್ತಾರೆ.    ನಿ...

Blog 3586. ವಿಂಗ್ ಕಮಾಂಡರ್ ಮಂಜುನಾಥ್

#ಮೊದಲ_ವರ್ಷದ_ಸ್ಮರಣೆ #ವಾಯುದಳದಲ್ಲಿ_ತರಬೇತಿ_ನೀಡುವಾಗ #ಪ್ಯಾರಾಚೂಟ್_ತೆರೆಯದ_ದುರಂತದಲ್ಲಿ_ವೀರಮರಣ_ಹೊಂದಿದ. #ನಮ್ಮ_ಹೆಮ್ಮೆಯ_ಇಂಡಿಯನ್_ಏರ್ಫೋರ್ಸ್_ತರಬೇತಿದಾರ_ಮಂಜುನಾಥ್ #ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲ್ಲೂಕಿನ_ಪಟಗುಪ್ಪ_ಸಮೀಪದ_ಸಂಕೂರಿನವರು #ಈ_ದಂಪತಿಗಳ_ವಿವಾಹ_2019ರಲ್ಲಿ_ನಮ್ಮ_ಕಲ್ಯಾಣ_ಮಂಟಪದಲ್ಲೇ_ನೆರವೇರಿತ್ತು. #Airforce #India #Manjunath #Shivamogga #Hosanagara #sankuru #Assam #agraairforce #juniorwarrantofficer #indianairforce #shivamogga #hosanagara #manjunathgs #parachutes      ಭಾರತೀಯ ವಾಯುದಳದ ತರಬೇತಿ ಅಧಿಕಾರಿ ಆಗಿದ್ದ #ಮಂಜುನಾಥ್ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪಟಗುಪ್ಪೆ ಎಂಬ ಊರಿನ ಸಮೀಪದ ಸಂಕೂರು ಎಂಬ ಹಳ್ಳಿಯವರು.    ಇವರ ಪರಿಚಯ ನನಗೆ 2019ರ ಪ್ರಾರಂಭದಲ್ಲಿ ಆಯಿತು ಆಗ ಅವರು ತಮ್ಮ ಜೊತೆ ಏರ್ಪೋರ್ಸನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಅಸ್ಸಾಂ ಮೂಲದ #ಕಲ್ಪಿತಾ ಎಂಬ ಯುವತಿ ಜೊತೆ ಪ್ರೇಮ ವಿವಾಹದ ತಯಾರಿ ನಡೆಸಿದ್ದರು.    ಇವರ ಪತ್ನಿ ಶ್ರೀಮತಿ ಕಲ್ಪಿತಾ ಕೂಡ ಭಾರತೀಯ ಏರ್ಪೋರ್ಸ್ ಟ್ರೈನಿಂಗ್ ಅಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.    ಇವರ ಬಾವಿ ಪತ್ನಿ ತಂದೆ ತಾಯಿಯನ್ನ ಇವರ ಕುಟುಂಬದ ಪರಿಚಯ ಮಾಡಿಸಲು ಮತ್ತು ವಿವಾಹದ ಮಾತುಕಥೆಗಾಗಿ ಕರೆತಂದಿದ್ದಾಗ ಕೆಲವು ದಿನ ನಮ್ಮ ...

Blog 3585. ಸಾಗರ ಮಾರಿಕಾಂಬಾ ಭಾಗ -11

#ಭಾಗ_11_ಸಾಗರ_ಮಾರಿಕಾಂಭಾ_ಚರಿತ್ರೆ #ಶಿವರಾಮ_ಕಾರಂತರ_ಚೋಮನ_ದುಡಿ_ಕಾದಂಬರಿ #ಸಿನಿಮಾವಾದಾಗ_ಅದರಲ್ಲಿ_ನಟಿಸಿ_ರಾಷ್ಟ್ರ_ಪ್ರಶಸ್ತಿಗೆ_ಬಾಜನರಾದ #ಸಾಗರದವರೇ_ಆದ_ಪದ್ಮಾಕುಮುಟಾ_2017ರ_ಸಾಗರದ #ಮಾರಿಕಾಂಬಾ_ಜಾತ್ರೆಗೆ_ಬಂದಿದ್ದು_ನೆನಪು_ಮಾತ್ರ #Sagara #Padmakumuta #Chomanadudi #Shivaramakaranth #Marikambhajatre    ಈ ಬಾರಿಯ ಸಾಗರದ ಮಾರಿಕಾಂಬಾ ಜಾತ್ರೆಗೆ ಮೂರು ಜಾತ್ರೆಯ ಹಿಂದೆ ಅಂದರೆ 9 ವರ್ಷದ ಹಿಂದೆ.   17 ಪೆಬ್ರವರಿ 2017ರ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಜಾತ್ರಾ ಸಮಿತಿ ಸಾಗರದವರೇ ಆದ   ಖ್ಯಾತ ರಾಷ್ಟ್ರ ಪ್ರಶಸ್ತಿ ವಿಜೇತೆ ಚೋಮನ ದುಡಿ ಸಿನಿಮಾ ಖ್ಯಾತಿಯ #ಪದ್ಮಾಕುಮುಟಾರನ್ನ ಸನ್ಮಾನಿಸಿತ್ತು.     ಪದ್ಮಾಕುಮುಟಾ ಖ್ಯಾತ ಸಮಾಜವಾದಿ ಹೋರಾಟಗಾರರಾದ #ಎಸ್_ಎಸ್_ಕುಮುಟಾರ ಪುತ್ರಿ.    ಎಸ್. ಎಸ್. ಕುಮುಟಾ #ಶಾಂತವೇರಿ_ಗೋಪಾಲಗೌಡರ ಸಹವರ್ತಿಗಳು.     #ಕಾಗೋಡು_ಸತ್ಯಾಗ್ರಹದ ಹೋರಾಟದಲ್ಲಿ #ರಾಮಮನೋಹರ_ಲೋಹಿಯಾ ಮತ್ತಿತರ ನಾಯಕರ ಹಿಂದಿ ಬಾಷಣ ಲೀಲಾಜಾಲವಾಗಿ ಅನುವಾದ ಮಾಡುತ್ತಿದ್ದವರು.   ಪ್ರಖ್ಯಾತ ಕನ್ನಡದ ಸಾಹಿತಿ #ಶಿವರಾಂಕಾರಂತರ #ಚೋಮನ_ದುಡಿ ಕಾದಂಬರಿ ಆಧಾರಿತ ಸಿನಿಮಾದ ನಟನೆಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಸಾಗರದ ರಾಜಕಾರಣದ ಗುರು S. S. ಕುಮುಟಾರ ಪುತ್ರಿ ಪದ್ಮಾ ಕುಮುಟಾ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ದೇವಿ ದಶ೯...

Blog 3584. ಸಾಗರ ಮಾರಿಕಾಂಬಾ ಭಾಗ 12

#ಭಾಗ_12_ಸಾಗರದ_ಮಾರಿಕಾಂಬಾ_ಚರಿತ್ರೆ #ಇವತ್ತಿಗೆ_2026ರ_ಮಾರಿಕಾಂಭಾ_ಜಾತ್ರೆ_ಸಂಪನ್ನ. #ಜನಸಂದಣಿ_ವಸ್ತುಪ್ರದರ್ಶನ_ಕೆಲವು_ದಿನ_ಮುಂದುವರಿಯಲಿದೆ. #ಮುಂದಿನ_ಸಾಗರದ_ಮಾರಿಕಾಂಬಾ_ಜಾತ್ರೆ_2029ಕ್ಕೆ. #ಕೆಳದಿ_ಅರಸ_ಹಿರಿಯ_ವೆಂಕಟಪ್ಪ_ನಾಯಕರು_ಕುಲದೇವತೆಯಾಗಿ_ಇಕ್ಕೇರಿ_ಕೋಟೆ_ಹೊರಗೆ #ಸಣ್ಣ_ಗುಡಿಯಲ್ಲಿದ್ದ_ಮಾರಿಕಾಂಬೆಯನ್ನ_ಸ್ವೀಕರಿಸುತ್ತಾರೆ. #ಯುದ್ದ_ಗೆದ್ದು_ಬಂದಾಗ_ಅಲ್ಲಿದ್ದ_ದೇವಿಯ_ಶಿಲಾಮಯ_ಪಾದದ_ವಿಗ್ರಹ_ಸಾಗರಕ್ಕೆ_ತಂದು_ಪ್ರತಿಷ್ಟಾಪಿಸಿದರು. #ಈ_ದೇವಾಲಯ_1950ರಲ್ಲಿ_ಪುನಃ_ಊರ_ಹೊರಗೆ_ಸ್ಥಳಾಂತರಿಸುವ_ಪ್ರಯತ್ನ_ಪ್ಲೇಗ್_ರೋಗ_ಹರಡಿದ್ದರಿಂದ_ಕೈಬಿಡಲಾಯಿತು. #ಸಾಗರದ_ಕುಲುಮೆ_ಪಾಪಣ್ಣ_1960ರಲ್ಲಿ_ಎಂಟು_ಸಾವಿರ_ರೂಪಾಯಿ_ವೆಚ್ಚದಲ್ಲಿ_ದೇವಾಲಯ_ಸ್ವರೂಪ_ನೀಡಿದರು. #ಶಿವಮೊಗ್ಗದ_ಪ್ರಖ್ಯಾತ_ಶಿಲ್ಪಿ_ಕಾಶೀನಾಥರಿಂದ_72ಸಾವಿರ_ವೆಚ್ಚದಲ್ಲಿ_ನೂತನ_ಗೋಪುರ_ನಿಮಾ೯ಣವಾಯಿತು. #ಪ್ರಮುಖರಾದ_ನೀಲಪ್ಪ_ಬೋಜಪ್ಪ_ಲಿಂಗಪ್ಪ_ಪುತ್ತೂರಾಯರು_ಜಿ_ಆರ್‌_ಜಿ_ನಗರ್_ಮುಂತಾದವರು #ಹೊರತಾಲ್ಲೂಕಿನ_ದಾನಿಗಳಿಂದಲೂ_ದೇಣಿಗೆ_ಸಂಗ್ರಹಿಸಿದ್ದರು. #ಉತ್ತರಕನ್ನಡ_ಜಿಲ್ಲೆಯ_ಸಿರ್ಸಿ #ಶಿವಮೊಗ್ಗ_ಜಿಲ್ಲೆಯ_ಸಾಗರದ_ಮಾರಿಕಾಂಭಾ_ಜಾತ್ರೆಗಳು_ರಾಜ್ಯದಲ್ಲೇ_ದೊಡ್ಡ_ಜಾತ್ರೆ. #sagara #Marikamba #Keladi #Hiriyavenkatappanayaka #Ikkeri    ಜಾತ್ರೆಯಿ೦ದ ಜಾತ್ರೆಗೆ ಸಾಗರದ ಇತಿಹಾಸ ಪ್ರಸಿದ್ಧ ಮಾರಿಕಾಂಬಾ ಜಾತ್ರೆಗೆ ಸೇರುವ ಜನಸ್ತೋಮ ಮತ್ತು ...

Blog 3583. ಯೆನೆಪೋಯ ಆಸ್ಪತ್ರೆ

#ಯೆನೆಪೋಯ_ವಿಶ್ವವಿದ್ಯಾಲಯ #ಮಂಗಳೂರಿನ_ಯೆನೆಪೋಯ_ಆಸ್ಪತ್ರೆ #ನಮ್ಮ_ರಾಜ್ಯ_ಮಾತ್ರವಲ್ಲ_ಕೇರಳ_ರಾಜ್ಯದಲ್ಲೂ_ಪ್ರಸಿದ್ಧಿ_ಪಡೆದಿದೆ. #Mangalore #yenopoya #Hospital #karnataka #kerala #University  #yenepoyauniversity #yenepoyahospital #Mangalore #medicaleducation #nursingschool  ಇದನ್ನು 2008 ರಲ್ಲಿ ಯೆನೆಪೋಯ ವಿಶ್ವವಿದ್ಯಾಲಯವಾಗಿ ಸ್ಥಾಪಿಸಲಾಯಿತು.  1992 ರಲ್ಲಿ ಯೆನೆಪೋಯ ದಂತ ಕಾಲೇಜು ಪ್ರಾರಂಭವಾದಾಗಿನಿಂದ ಅನೇಕ ಕಾಲೇಜುಗಳು ಸರಣಿಯಲ್ಲಿ ಪ್ರಾರಂಭವಾದವು.   ವಿಶ್ವವಿದ್ಯಾನಿಲಯವು ವೈದ್ಯಕೀಯ, ದಂತ, ಸಂಬಂಧಿತ ಆರೋಗ್ಯ ವಿಜ್ಞಾನಗಳು, ಭೌತಚಿಕಿತ್ಸೆ, ಫಾರ್ಮಸಿ, ನರ್ಸಿಂಗ್ , ಆಯುರ್ವೇದ, ಹೋಮಿಯೋಪತಿ, ಪ್ರಕೃತಿ ಚಿಕಿತ್ಸೆ, ಎಂಜಿನಿಯರಿಂಗ್ ಮತ್ತು ಕಲೆ, ವಿಜ್ಞಾನ, ವಾಣಿಜ್ಯ ಮತ್ತು ನಿರ್ವಹಣೆಗಾಗಿ ವಿವಿಧ ಘಟಕ ಕಾಲೇಜುಗಳನ್ನು ಹೊಂದಿದೆ.     ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ತಲುಪಲು ರೋಗಿಗಳಿಗೋಸ್ಕರ ರಾಜ್ಯ ಸಾರಿಗೆ  ಬಸ್ಸುಗಳನ್ನು ಕೂಡ ಬಿಡಲಾಗಿದೆ ಅಂದರೆ ಈ ಯೆನೆಪೋಯ ಆಸ್ಪತ್ರೆ ಎಷ್ಟು ಪ್ರಸಿದ್ಧಿ ಪಡೆದಿದೆ ಎಂದು ಅರ್ಥವಾದೀತು.  ಯೆನೆಪೋಯ ಆಸ್ಪತ್ರೆಯ ಹಾಲಿ ಚೇರ್ಮನ್ ಶ್ರೀಯೆನೆಪೋಯ ಅಬ್ದುಲ್ ಕುಂಜ್ಞ ಇವರು ಜನಿಸಿದ್ದು 1947 ರಲ್ಲಿ.   ಇವರ ವಿದ್ಯಾಭ್ಯಾಸ ಮೈಸೂರು ಯುನಿವರ್ಸಿಟಿಯಲ್ಲಿ...

Blog 3582. ಸಾಗರ ಮಾರಿಕಾಂಬಾ ಭಾಗ - 13

#ಭಾಗ_13_ಸಾಗರ_ಮಾರಿಕಾಂಭಾ_ಚರಿತ್ರೆ. #ಕೇರಳದ_ಇತಿಹಾಸ_ಸಂಶೋಧಕರಾದ #ಪಾಂಡು_ಪ್ರದ್ಯುಮ್ನ_ಅವರ_ಲೇಖನದಲ್ಲಿ #ಸಾಗರದ_ಮಾರಿಕಾಂಬಾ_ಬಗ್ಗೆ_ಇರುವ_ಉಲ್ಲೇಖಗಳು. #Historian #Kerala #Karnataka #Sagara #Marikhambha #keladi       ಕೆಳದಿ ಅರಸರ ಕುಲದೇವಿ ವರದಾಂಬಿಕೆ ಮತ್ತು ಕುಲದೇವರು ಅಘೋರೇಶ್ವರ ಇವು ಮುಖ್ಯ ಗ್ರಾಮದೇವರುಗಳು.     ಕೆಳದಿ ಅರಸರು  ಮೈಸೂರು ಪ್ರಾಂತ್ಯಕ್ಕೆ ಯುದ್ದಕ್ಕೆ ಹೋದಾಗ  ಮೈಸೂರು ಸೈನ್ಯ ಸೋಲುವ ಹಂತದಲ್ಲಿದ್ದಾಗ ಕೆಳದಿ ಸೈನ್ಯವನ್ನು ಈಗಲೂ ಅಲ್ಲಿರುವ  ಕೋಟೆ ಮಾರಿಕಾಂಬೆ ಚದುರಿಸಿ ಕೊಂಡು ಬಂದು ಸಾಗರಕ್ಕೆ ಬಂದಳು ಎಂಬುದು ನಿಜ ಇತಿಹಾಸ.    ಹಾಗಾಗಿ ಇಂದಿಗೂ ಮೈಸೂರು ಅರಮನೆಯಿಂದ ಸಾಗರದ ಮಾರಿಕಾಂಬೆಗೆ ಮೊದಲ ಉಡಿ ತುಂಬುತ್ತಾರೆ.          ಸದಾಶಿವಸಾಗರ ಪಟ್ಟಣಕ್ಕೆ (ಇಂದಿನ ಸಾಗರ)  ಕ್ಷಾಮ ಬಂದಾಗ ಕೆಳದಿ ರಾಜರು ಜ್ಯೋತಿಷಿಗಳ ಮೊರೆ ಹೋದಾಗ ಜ್ಯೋತಿಷಿಗಳ ಸೂಚನೆ ಮೇರೆಗೆ ತುಂಬಿದ ಬಸುರಿ ಬಲಿ ಕೊಡುವಂತೆ ತಿಳಿಸುತ್ತಾರೆ.    ಆಗ ಶಿಕಾರಿಪುರದ  ಈಸೂರಿನ ಭೋವಿ ಗಂಗಾಮತ ಜಾತಿಯ ಹೆಣ್ಣನ್ನು ಬಲಿಕೊಡುತ್ತಾರೆ ಅವರ ವಂಶದವರು ಈಗಲೂ ಇದ್ದಾರೆ.   ಆಗಲು ಕ್ಷಾಮ ಪರಿಹಾರವಾಗದ ಕಾರಣ  ಬಯಲು ಸೀಮೆಯಿಂದ ಸಾಧೀ ಜನಾಂಗದವರನ್ನು ಕರೆಯಿಸಿ ಕೆಳದಿ ಅರಸರು ಮಾರಿ ಸಂಪ್ರದಾಯವನ್ನು...

Blog 3581. ಪ್ರೋ ನಂಜುಂಡ ಸ್ವಾಮಿ

#ಮಹಾನ್_ರೈತ_ನಾಯಕ #ಪ್ರೋಪೆಸರ್_ನಂಜುಂಡಸ್ವಾಮಿ #ರೈತರ_ಹಕ್ಕುಗಳಿಗಾಗಿ_ಪ್ರತಿಪಾದಿಸಿದವರು. #ಕರ್ನಾಟಕ_ರಾಜ್ಯ_ರೈತ_ಸಂಘ_ಸಂಸ್ಧಾಪಕರು #ಇವತ್ತು_ಅವರ_90ನೇ_ಹುಟ್ಟು_ಹಬ್ಬದ_ಸ್ಮರಣೆ #professor #nanjundaswamy #raithasanga #KRRS #gandian #Karnataka      ಪೋಪೆಸರ್ ನಂಜುಂಡ ಸ್ವಾಮಿ ಎಂದೇ ಜನ ಕರೆಯುವ ಮಹಾನ್ ರೈತ ನಾಯಕ ಎಂ. ಡಿ. ನಂಜುಂಡ ಸ್ವಾಮಿ ಅವರ ಪೂರ್ಣ ಹೆಸರು ಮಹಾಂತ ದೇವರು ನಂಜುಂಡಸ್ವಾಮಿ,    13 - ಫೆಬ್ರವರಿ - 1936 ಅವರ ಜನ್ಮ ದಿನ,ಇವತ್ತು 13 -ಡೆಬ್ರುವರಿ- 2026 ಅವರ 90ನೇ ಜನ್ಮ ದಿನ.        ರೈತ ನಾಯಕ ಪ್ರೋಪೆಸರ್ ನಂಜುಂಡಸ್ವಾಮಿ ಗಾಂಧಿವಾದಿ ನಾಯಕರು, ಭಾರತದ ಪ್ರಮುಖ ರೈತ ನಾಯಕರು.      ಅಸಾಧಾರಣ ಬುದ್ಧಿಮತ್ತೆಯವಿದ್ವಾಂಸರಾಗಿದ್ದ ಪ್ರೋಪೆಸರ್ ನಂಜುಂಡಸ್ವಾಮಿ ಭಾರತದ ಪ್ರಮುಖ ಸಾಮಾಜಿಕ ಹೋರಾಟಗಾರರು.     ಅವರು ರೈತರ ಹಕ್ಕುಗಳಿಗಾಗಿ ಪ್ರತಿಪಾದಿಸಿದರು ಮತ್ತು ರಾಜ್ಯದಲ್ಲಿ ಬಲಿಷ್ಟ ರೈತ ಸಂಘಟನೆಯನ್ನ ಮುನ್ನಡೆಸಿದ್ದರು.     ಅವರು 1980 ರಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ (KRRS) ಸಂಸ್ಥಾಪಕ ತ್ರಿಮೂರ್ತಿಗಳಾದ #ರುದ್ರಪ್ಪನವರು, #ಸುಂದರೇಶ್ ಮತ್ತು  #ಪ್ರೋಪೆಸರ್_ಎಂ_ಡಿ_ನಂಜುಂಡಸ್ವಾಮಿ ಪ್ರಮುಖರು.  ಅವರು ಜಾಗತೀಕರಣ ವಿರೋಧಿ ಪ್ರಚಾರದ ಪ್ರಮುಖ ನಾಯಕರಾಗಿದ್ದರು.   ...

Blog 3580. ಬಚ್ಚಾಚಾರ್

#ನನ್ನ_ಜೀವಮಾನದ_ವಿಶೇಷ_ಘಟನೆ #ತನ್ನ_ತಂದೆಯ_ಪೋಟೋ_ಇಲ್ಲ_ಎಂಬ_ಕೊರಗಿನಲ್ಲಿದ್ದ_ಮಗಳಿಗೆ #ಮೂವತ್ತೈದು_ವರ್ಷದ_ನಂತರ_ತಂದೆ_ಫೋಟೋ_ಸಿಕ್ಕಾಗ.. #ಈ_ಘಟನೆ_ನನಗೂ_ಅವರಿಗೂ_ವಿಶೇಷವಾಯಿತು #ಅವರ_ಜೀವಿತಾವದಿಯಲ್ಲಿ_ನಿರೀಕ್ಷೆಯೇ_ಮಾಡದ #ಅವರ_ತಂದೆ_ಪೋಟೋ_ನೋಡಿದಾಗ #photo #memories #Anandapuram #yadehalli #gowthamapura #vishwakarma #Acharya #carpentar    1984ರಲ್ಲಿ(41 ವರ್ಷದ ಹಿಂದೆ) ನಾನು ಖರೀದಿಸಿದ್ದ ನಿಕಾನ್ ಕ್ಯಾಮೆರಾದಲ್ಲಿ ಬ್ಲಾಕ್ & ವೈಟ್ ಪೋಟೋದಲ್ಲಿ ನಾನು ಲಲಿತಕ್ಕನ ತಂದೆ ಬಚ್ಚಾಚಾರ್ ಫೋಟೋ ಒಂದು ತೆಗೆದಿದ್ದೆ.     ನಮ್ಮ ಮನೆ ಪಕ್ಕದ ರಾಮಾಚಾರರ ಕುಲುಮೆಯ ಕ್ಯಾಪ್ಟನ್ ಬಚ್ಚಾಚಾರ್.   ಅವರ ಮಗಳು ಲಲಿತಮ್ಮನಿಗೆ  ಸುಮಾರು 35 ವರ್ಷದ ನಂತರ  ಅವರ ತಂದೆಯ ಪೋಟೋ ನೋಡಿದಾಗ...   ಅವರ ಉದ್ಘಾರ "ತನ್ನ ತಂದೆ ಪೋಟೋ ತನ್ನ ಜೀವಮಾನದಲ್ಲೇ ನೋಡುತ್ತೇನೆ ಅಂದು ಕೊಂಡಿರಲಿಲ್ಲ"...   35 ವರ್ಷದ ಹಿಂದೆ ಮೃತರಾದ ಅವರ ಒಂದೇ ಒಂದು ಪೋಟೋ ಇರಲಿಲ್ಲ.... ಅಂತ ಸುಮಾರು ಅನೇಕ ವಷ೯ದ ನಂತರ 2020 ರಲ್ಲಿ ನನ್ನ ಕಛೇರಿಗೆ ಬಂದಿದ್ದ ಗೌತಮಪುರದ ಲಲಿತಕ್ಕ ಕಣ್ಣೀರಾಗಿದ್ದಳು.    ಇವರ ತಂದೆ ಬಚ್ಚಾಚಾರ್ ತಾಯಿ ಪದ್ದಮ್ಮ ಕುಂದಾಪುರ ಮೂಲದವರು.    ಈ ಬಚ್ಚಾಚಾರ್ ರನ್ನು ನಮ್ಮ ಪಕ್ಕದ ಮನೆಯ ರಾಮಾಚಾರ್ ತಮ್ಮ ಕುಲುಮೆ ಕೆಲಸಕ್ಕೆ ಕರೆತಂದಿದ್ದು. ...

Blog 3579. ತುಂಬೆ ಹೂವು

#ತುಂಬೆ_ಗಿಡದಲ್ಲಿ #ತುಂಬೆ_ಹೂವು_ಅರಳುವ_ಕಾಲ #ಶಿವರಾತ್ರಿಗೆ_ಶಿವನ_ಶಿರದ_ಮೇಲೆ_ತುಂಬೆ_ಹೂವು_ಮುಡಿಸುತ್ತಾರೆ. #ಶಿವನಿಗೆ_ಪ್ರಿಯವಾದ_ಸಸ್ಯ_ತುಂಬೆ. #ಶಿವನ_ದೇಹದ_ವಿಷ_ಶಮನ_ಮಾಡಲು_ಬಳಸಿದ_ಸಸ್ಯವಾದ್ದರಿಂದ #ತುಂಬೆಗೆ_ರುದ್ರ_ಪುಷ್ಪಾ_ಎಂಬ_ಹೆಸರೂ_ಇದೆ. #Thumba #Leucasaspera #Dronapushpa #Commonleucas #MahaShivaratri #Rudrapushpa   ಮಹಾ ಶಿವರಾತ್ರಿ ಇದೇ ಫೆಬ್ರುವರಿ 15 ರಂದು ಆಚರಿಸಲಾಗುತ್ತದೆ.     ಶಿವನಿಗೆ ಪ್ರಿಯವಾದ ಹೂವು ತುಂಬೆ ಹೂವು ಈ ಕಾಲದಲ್ಲಿ ಅರಳಿದೆ ಇದಕ್ಕೆ ರುದ್ರ ಪುಷ್ಪಾ ಎಂಬ ಹೆಸರೂ ಇದೆ.     ನನ್ನ ಮತ್ತು ಶಂಭೂರಾಮನ ವಾಕಿಂಗ್ ಪಾತ್ ನಲ್ಲಿರುವ ಗಾರ್ಡನ್ ನ ಕೆಲ ಹೂಕುಂಡದಲ್ಲಿ ತುಂಬೆ ಗಿಡಗಳು ಬಿಳಿಯ ತುಂಬೆ ಹೂವು ನಿತ್ಯ ಸೂರ್ಯೋದಯದಲ್ಲಿ ಅರಳುಸುತ್ತಿದೆ.    ತುಂಬೆ ಹೂವನ್ನು ಇಂಗ್ಲಿಷ್‌ನಲ್ಲಿ Leucas aspera (ಲ್ಯೂಕಾಸ್ ಆಸ್ಪೆರಾ) ಅಥವಾ Thumba Flower ಎಂದು ಕರೆಯುತ್ತಾರೆ.    ಇದು ಸಾಮಾನ್ಯವಾಗಿ ಬಿಳಿ ಬಣ್ಣದ, ಸಣ್ಣ ಗಂಟೆಯಾಕಾರದ ಹೂವುಗಳನ್ನು ಬಿಡುವ ಮೂಲಿಕೆ ಸಸ್ಯವಾಗಿದೆ..    ಸಂಸ್ಕೃತದಲ್ಲಿ ದ್ರೋಣ ಪುಷ್ಪಂ ಎನ್ನುತ್ತಾರೆ,ಸಾಂಪ್ರದಾಯಿಕ ಆಯುರ್ವೇದ ವೈದ್ಯಕೀಯದಲ್ಲಿ ಜ್ವರ, ಕೆಮ್ಮು ಮತ್ತು ಶೀತದ ಚಿಕಿತ್ಸೆಗಾಗಿ ಬಳಸಲಾಗುತ್ತದೆ.    ಇದು ಭಾರತದಾದ್ಯಂತ ಹೆಚ್ಚಾಗಿ ಕಳೆ ಸಸ್ಯವಾಗಿ ಕಂಡು...

Blog 3578. ಪಂಚೆ

#ಪಂಚೆ_ಧರಿಸಿ_ಬಂದರೆ_ಪ್ರತಿಷ್ಟಿತ_ಕ್ಲಬ್_ಪ್ರವೇಶ_ನಿರಾಕರಿಸುತ್ತದೆ. #ನಾನ್ಯಾಕೆ_ಪಂಚೆಗೆ_ಬದಲಾದೆ_ಗೊತ್ತಾ... #ನಾನು_ಪ್ಯಾಂಟಿನಿಂದ_ಪಂಚೆಗೆ_ಬದಲಾಗಿ_ಹನ್ನೊಂದು_ವರ್ಷ_ಆಯಿತು #ವಿಚಾರವಾದಿ_ಹೆಚ್_ಎನ್_ನರಸಿಂಹಯ್ಯ_ಮಾಜಿ_ಪ್ರಧಾನಿ_ದೇವೇಗೌಡರು #ಮುಖ್ಯಮಂತ್ರಿ_ಸಿದ್ಧರಾಮಯ್ಯ_ಪಂಚೆ_ಪ್ರಿಯರು #ಶಿವಮೊಗ್ಗದ_ಹಿರಿಯ_ಸಮಾಜವಾದಿ_ಪಿ_ಪುಟ್ಟಯ್ಯನವರ_ಉಡುಗೊರೆ_ಪಂಚೆಗಳು. #Dothi #Panche #Traditional #Ramraj #Sourhindian #Temple #Religious.    ಶೃಂಗೇಶ್ ಹತ್ತಿರ ಪುಸ್ತಕಗಳು ಮತ್ತು  ಬೆಲೆ ಬಾಳುವ ಎರೆಡು ಬಿಳಿ ಪಂಚೆಗಳನ್ನು ಉಡುಗೊರೆ ಆಗಿ ಕಳಿಸಿದ್ದಾರೆ ಅಂತ ಹಿಂದಿನ ಲೇಖನದಲ್ಲಿ ಬರೆದಿದ್ದೆ.    ಆಗಾಗ್ಗೆ ಪುಟ್ಟಯ್ಯನವರು ನೀಡುವ ಪಂಚೆಗಳು ನನಗೆ ಪಂಚ ಪ್ರಾಣ ಅಂತವರು ನೀಡುವ ವಸ್ತ್ರದಾನ ಸ್ಟೀಕಾರ ಶೇಷ್ಟವೂ ಹೌದು.    2013ರ ತನಕ ಪ್ಯಾಂಟ್ ಶರ್ಟ್, ಖಾದಿ ಜುಬ್ಬಾ ಪೈಜಾಮದಾರಿ ಆಗಿದ್ದೆ, 1980ರ ತನಕ SSLC ವರೆಗೆ ಚಡ್ಡಿ ಅಂಗಿದಾರಿ ಆಗಿದ್ದು ಮೊದಲ ವರ್ಷದ ಡಿಪ್ಲೋಮ ತರಗತಿಗೆ ಸೇರುವಾಗ ಆನಂದಪುರಂನ ಸರ್ಕಾರಿ ಆಸ್ಪತ್ರೆ ಎದುರಿನ ಖ್ಯಾತ ಟೈಲರ್ #ವಾಜೀದ್_ಸಾಬರಿಂದ ನನಗೆ ಪ್ಯಾಂಟ್ ಶರ್ಟ್ ನನ್ನಣ್ಣ ಹೊಲಿಸಿ ಕೊಟ್ಟಿದ್ದ.    2012ರಲ್ಲಿ ನಮ್ಮ ಮೊದಲ ಲಾಡ್ಜ್ ಪ್ರಾರಂಬಿಸಿದಾಗ ನಾನು ಬಣ್ಣ ಬಣ್ಣದ ಲುಂಗಿ ಧರಿಸಿ ಆಫೀಸಿಗೆ ಹೋಗುತ್ತಿದ್ದೆ.    ಒಂದು ದಿನ...

Blog 3577. #ಬಾರಾಪಂಥ್ ಯಾತ್ರೆ ಭಾಗ - 6

#ಬಾರಾಪಂಥ್_ಯಾತ್ರೆ_ಭಾಗ_6 #ಹತ್ತು_ವರ್ಷದ_ಹಿಂದೆ #ನಾಥ_ಪಂಥದ #ಭಾರಾ_ಪಂಥ_ಯಾತ್ರೆ #Nathapanth #Bharapanthyatre #alagerimandri  #Gorakpura #YogiAdityanath #Uttarpradesh     ಹನ್ನೊಂದು ವರ್ಷದ ಹಿಂದೆ ದಿನಾಂಕ 15 - ಫೆಬ್ರುವರಿ 2015 ರಂದು ಭಾರಾಪಂಥ್ ಯಾತ್ರೆ ಹೊಸನಗರ ತಾಲೂಕಿನ ಆಲಗೇರಿ ಮಂಡ್ರಿಯಲ್ಲಿ ತಂಗಿದ ಚಿತ್ರ.  ಪ್ರತಿ 12 ವರ್ಷಕ್ಕೊಮ್ಮೆ ನಾಸಿಕ್ ನ ಕುಂಭಕೋಣ ಯಾತ್ರೆಯ ಮರುದಿನ ನೂರಾರು ಸಾದು ಸಂತರು ಪಶ್ಚಿಮ ಘಟ್ಟದ ಮಧ್ಯದಲ್ಲಿ ನಡೆದು ಕೊಂಡು ಬಂದು ಮಂಗಳೂರಿನ ಕದ್ರಿ ಮಠ ತಲುಪುತ್ತಾರೆ.     2027 ರ ನಾಸಿಕ್ ಕುಂಭಮೇಳದ ಮರುದಿನ ಈ ಯಾತ್ರೆ ಹೊರಡಲಿದೆ, ಸುಮಾರು ಆರು ತಿಂಗಳು ನಡೆದು ಮಂಗಳೂರು ತಲುಪಲಿದೆ.     ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಬಾರಾಪಂತ್ ಯಾತ್ರೆಯ ಗೋರಕ್ ನಾಥ್ ಪುರದ ಮುಖ್ಯಸ್ಥರೂ ಆಗಿದ್ದಾರೆ.      78 ಜನ್ಮ ಸನ್ಯಾಸಿ ಆದವರಿಗೆ ಮಾತ್ರ ಈ ಭಾರಾ ಪಂತ್ ಯಾತ್ರೆ ಮಾಡಲು ಅವಕಾಶ ದೊರೆಯುತ್ತದೆ ಎಂಬ ನಂಬಿಕೆ ಅವರಲ್ಲಿದೆ.

Blog number 3576. ಡಾಕ್ಟರ್ ಪ್ರೀತಮ್

#ತೇಜಸ್ವಿ_ಕಟ್ಟಾ_ಅಭಿಮಾನಿ_ಈ_ವೈದ್ಯರು. #ಕನ್ನಡ_ಸಾಹಿತ್ಯ_ಓದುವ_ಮತ್ತು_ಬರೆಯುವ_ಅಪರೂಪದ_ವೈದ್ಯರು #ಈಗಾಗಲೇ_ಡಯಾಬಿಟೀಸ್_ಬಗ್ಗೆ_ಮೂರು_ಪುಸ್ತಕ_ಪ್ರಕಟಿಸಿರುವ #ಡಾಕ್ಟರ್_ಪ್ರೀತಮ್_ಪೂರ್ಣಚಂದ್ರ_ತೇಜಸ್ವಿ_ಅಭಿಮಾನಿ #Mudigere #Niruthara #PurnachandraTejaswi #DrPreetham #Kannada books #Diabetesreveseltips #Shivamogga    ಕನ್ನಡ ಸಾಹಿತ್ಯ ಓದುವ ಮತ್ತು ಕನ್ನಡದಲ್ಲಿ ಬರೆಯುವ ವೈದ್ಯರ ಸಂಖ್ಯೆ ತುಂಬಾ ಕಡಿಮೆ ಮತ್ತು ಅಪರೂಪದಲ್ಲಿ ಅಪರೂಪ.    ಡಾಕ್ಟರ್ ಪ್ರೀತಮ್ ಶಿವಮೊಗ್ಗ ಕನ್ನಡ ಸಾಹಿತ್ಯದ ಅಭಿಮಾನಿಗಳು, ನಿರಂತರ ಓದು ಅವರ ಹವ್ಯಾಸ, ಇವರು ಎರೆಡು ಪುಸ್ತಕ ಡಯಾಬಿಟೀಸ್ ಬಗ್ಗೆ ಕನ್ನಡದಲ್ಲಿ ಪ್ರಕಟಿಸಿದ್ದಾರೆ ಹಾಗೂ ಒಂದು ಪುಸ್ತಕ ಇಂಗ್ಲೀಷ್ ನಲ್ಲಿ ಪ್ರಕಟಿಸಿದ್ದಾರೆ.    ಡಯಾಬಿಟಿಸ್ ರಿವರ್ಸಲ್ ಯಶಸ್ವಿ ತರಬೇತಿ ಮತ್ತು ಚಿಕಿತ್ಸೆಯಿಂದ ಕರ್ನಾಟಕ ರಾಜ್ಯ ಮಾತ್ರವಲ್ಲ ಬೇರೆ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲೂ ಇವರಿಂದ ಚಿಕಿತ್ಸೆ ಪಡೆದು ಡಯಾಬಿಟೀಸ್ ರಿವರ್ಸಲ್ ಮಾಡಿಕೊಂಡವರಿದ್ದಾರೆ.    ಇವರು ಈಗಾಗಲೇ ಮೂರು ಪುಸ್ತಕಗಳನ್ನ ಡಯಾಬಿಟೀಸ್ ಬಗ್ಗೆ ಬರೆದು ಪ್ರಕಟಿಸಿ ವೈದ್ಯಕೀಯ ಸಾಹಿತ್ಯ ಲೋಕದ ಜನಪ್ರಿಯ ವೈದ್ಯರಾಗಿದ್ದಾರೆ.    ಇವರ ಮೂರನೆ ಪುಸ್ತಕ #ಡಯಾಬಿಟೀಸ್_ರಿವರ್ಸಲ್_ಟಿಪ್ಸ್ ಪುಸ್ತಕದ ಮುಖಪುಟಕ್ಕೆ ಮೂಡಿಗೆರೆಯ ಪೂರ್ಣಚಂದ್ರ ತೇಜಸ್ವಿ ಅವ...

Blog 3575.ಕಸ್ತೂರಿ ರಂಗನ್ ವರದಿಯಲ್ಲಿ ಸಾಗರ ತಾಲ್ಲೂಕು

#ಕಸ್ತೂರಿ_ರಂಗನ್_ವರದಿ #ಈ_ವರದಿಯಲ್ಲಿ_ಸೇರಲ್ಪಟ್ಟ #ಶಿವಮೊಗ್ಗ_ಜಿಲ್ಲೆಯ_ಸಾಗರ_ತಾಲ್ಲೂಕಿನ_ಗ್ರಾಮಗಳು  #ಕಸ್ತೂರಿ_ರಂಗನ್_ವರದಿಯಲ್ಲಿ_ಅತಿಹೆಚ್ಚು_ಪ್ರದೇಶ_ಸೇರಿದ_ತಾಲ್ಲೂಕು #ಪಶ್ಚಿಮ_ಘಟ್ಟದ_ಶೇಕಡಾ_60_ಭಾಗ_ಕರ್ನಾಟಕದಲ್ಲಿದೆ #westernghats #malenadu #shivamogga #Hosanagara #kasturiranganreport #Gadgillreport    ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆಯ ಉದ್ದೇಶದಿಂದ, ಅದರ ಬಗೆಗೆ ಪರಿಸರ ತಜ್ಞ ಮಾದವ ಗಾಡ್ಗಿಲ್‍ರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ಒಂದು ಸಮಿತಿ ರಚಿಸಿ ಅವರನ್ನು ಈ ವಿಷಯದಲ್ಲಿ ಒಂದು ವರದಿ ಕೊಡಲು ಕೆಂದ್ರ ಸರ್ಕಾರ ನೇಮಿಸಿತು.     ಗಾಡ್ಗಿಳ್ ಅವರು ದಿನಾಂಕ - 31- ಆಗಸ್ಟ್- 2011ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದರು.   ಈ ವರದಿಯಲ್ಲಿ ಶೇ 94-97% ಪಶ್ಚಿಮ ಘಟ್ಟಗಳ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಬೇಕೆಂದೂ ಮತ್ತು ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳವಾಗ ಅದು ಅಲ್ಲಿಯ ಪರಿಸರವನ್ನು ಜೀವ ವೈವಿಧ್ಯತೆಯ ಕ್ರಮವನ್ನು ಕೆಡಿಸದಿರುವ ಷರತ್ತಿನ ಮೇಲೆ ಅನುಮತಿ ನೀಡಬೆಕೆಂದು ಶಿಪಾರಸು ಮಾಡಿತು.   ಈ ಭಾಗದಲ್ಲಿ ಬಹಳಷ್ಟು ತೋಟಗಳೂ, ವಸತಿ ಪ್ರದೇಶಗಳೂ, ಕೃಷಿ ಪ್ರದೇಶವೂ ಸೇರಿತ್ತು.     ಇದರಲ್ಲಿ ಆ ಪ್ರದೇಶದ ಮುಕ್ಕಾಲು ಭಾಗವನ್ನು ನಿರ್ಬಂಧಿತ ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿತ್ತು. ...

Blog 3574. ಮಡಿವಾಳನಕಟ್ಟೆ ಕೆಂಪಣ್ಣನ ಕೆರೆ

#ಒಂದು_ಕೆರೆಯ_ಕಥೆ #ಮಡಿವಾಳನಕಟ್ಟೆ_ಕೆಂಪಣ್ಣನ_ಕೆರೆ #ಸಾಗರ_ತಾಲೂಕಿನ_ಬರೂರು_ಗ್ರಾಮಪಂಚಾಯತಿಯ_ಕುಂದೂರು_ಸಮೀಪ #ಶರಾವತಿ_ಮುಳುಗಡೆ_ಸಂತ್ರಸ್ಥ_ಕೆಂಪಣ್ಣನ_ಜೀವಮಾನದ_ಬೇಡಿಕೆ_ಈ_ಕೆರೆ_ನಿರ್ಮಾಣ #ನಾನು_ಆನಂದಪುರಂ_ಜಿಲ್ಲಾ_ಪಂಚಾಯಿತಿ_ಸದಸ್ಯನಾಗಿ_ಈಡೇರಿಸಿದ_ಸ0ತೃಪ್ತಿ #ಕೆಂಪಣ್ಣ_ಈ_ಕೆರೆಗೆ_ಅರುಣಪ್ಪನ_ಕೆರೆ_ಅಂತ_ಕರೆದರೆ #ನಾನು_ಮಾತ್ರ_ಕೆಂಪಣ್ಣನ_ಕೆರೆ_ಅಂತಾನೆ_ಕರೆದೆ_ಅದೇ_ಶಾಶ್ವತವಾಗಿದೆ #Madivalanakattekempannanakere #tankbund #kempanna #madivalanakatte #Kunduru #korlikoppa #baruru #sagar #shivamogga #malenadu     ನನ್ನ ಮಾಧ್ಯಮಿಕ ಶಾಲಾ ಸಹಪಾಟಿ #ಹೊಸಕೊಪ್ಪದ_ನಾಗಪ್ಪ _ಮಾಸ್ಟರ್ ಕಳಿಸಿದ ವಿಡಿಯೋ ಮತ್ತು ಪೋಟೋಗಳು 30 ವರ್ಷದ ಹಿಂದಿನ ಕಥೆ ನೆನಪಿಸಿತು.   #ಮಡಿವಾಳನಕಟ್ಟ_ಕೆಂಪಣ್ಣ ನನಗೆ ಪ್ರೀತಿಯಿಂದ ಕರೆಯುತ್ತಿದ್ದ ಹೆಸರು #ಅರುಣಪ್ಪ ಆದ್ದರಿಂದ ಈ ಕೆರೆಗೆ ಅವರು ಅರುಣಪ್ಪನ_ಕೆರೆ ಅಂತಲೇ  ಕರೆದರು.   ಆದರೆ ನಾನು ಒಪ್ಪಲಿಲ್ಲ ಈ ಕೆರೆಯ ಜಲಮೂಲ ಕಂಡು ಹಿಡಿದು, ಕೆರೆಯ ಬೇಡಿಕೆ ಇಟ್ಟುಕೊಂಡು ಇಷ್ಟು ವರ್ಷ ಕಾಯುತ್ತಿದ್ದ ಕೆಂಪಣ್ಣರಿಂದ ಈ ಕೆರೆಗೆ #ಕೆಂಪಣ್ಣನ_ಕೆರೆ ಎಂದೇ ಊರವರು ಕರೆಯ ಬೇಕೆಂದು ವಿನಂತಿಸಿದ್ದರಿಂದ ಇದು ಕೆಂಪಣ್ಣನ ಕೆರೆ ಅಂತಲೇ ಆಯಿತು.    1995ರಲ್ಲಿ ನಾನು ಆನಂದಪುರಂ ಜಿಲಾ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಕಾಂಗ್ರೇಸ್ ಪಕ್ಷದ...

#Blog 3573.ಬಾರಾಪಂಥ್ ಯಾತ್ರೆ ಭಾಗ - 1

#ಭಾಗ_1_ಉತ್ತರ_ಭಾರತದ_ನಾಥ_ಪಂಥದವರ_ಜೊತೆ_ನನ್ನ_ಸತ್ಸಂಗಗಳು. #ಹಿಂದಿನ_ಬಾರಾಪಂತ್_ಯಾತ್ರೆ_ನೇತೃತ್ವವಹಿಸಿದ್ದ #ಮಹಾಂತರಾದ_ಶ್ರೀಯೋಗಿ_ನಿರ್ಮಲಾನಂದ್_ಜೀ #ಯಾರಿಗೂ_ಸಂದರ್ಶನ_ನೀಡದವರು_ನನಗೆ_ನೀಡಿದ್ದರು. #ಇದು_ನನ್ನ_ಜೀವನದ_ಒಂದು_ಪವಾಡ_ಎಂದು_ಭಾವಿಸಿದ್ದೇನೆ. #ಕಾಲಬೈರವನ_ಅನುಗ್ರಹ_ಎಂದು_ಕೊಂಡಿದ್ದೇನೆ #ಉತ್ತರ_ಭಾರತದ_ನಾಥ_ಪಂಥದ_ಜೊತೆ_ವಿಚಿತ್ರ_ವಿಚಿತ್ರ_ಮತ್ತು_ವಿಶೇಷ_ಸತ್ಸಂಗದ_ಈ_ಲೇಖನ_ಸರಣಿ #ಇವತ್ತಿನಿಂದ... #Nathapantha #Gorakpura #Mahantharu #YogiAditynathjogi #YogiNirmalanandaji #Peeryogisomanathji #Barapanth #Jondi #Myexperience #withNathapanth #Nasilk #Trayambakesh #Kumbamela #Mangalore  #Kadribetta #Halawarimutt #Jogi #Balegar #Kunubi   ಪ್ರತಿ 12 ವರ್ಷಕ್ಕೆ ನಾಸಿಕ್ ತ್ರಯಂಬಕೇಶ್ವರದ ಕುಂಭ ಮೇಳದ ಮರುದಿನ  ಪಶ್ಚಿಮ ಘಟ್ಟದ ಮಧ್ಯದಲ್ಲಿ ಬರಿಗಾಲಿನಲ್ಲಿ ನಡೆದು ಮಂಗಳೂರಿನ ಕದ್ರಿ ಬೆಟ್ಟ ತಲುಪುವ ಭಾರಾ ಪಂತ್ ಯಾತ್ರೆ.   ಸಾಗರದ ಗಣಪತಿ ದೇವಸ್ಥಾನದಿಂದ ಹೊರಟು ಹೊಸನಗರ ತಾಲೂಕಿನ ಆಲಗೇರಿಮಂಡ್ರಿ ಎಂಬ ಹಳ್ಳಿಗೆ ತಲುಪುವ ಮೊದಲು ಹೆಬ್ಬೈಲು ಎಂಬಲ್ಲಿ ಚಿಕ್ಕ ಗುಡಿಯಲ್ಲಿ ಪಾತ್ರ ದೇವತೆ, ತಮ್ಮ ಅನುಯಾಯಿ ಶ್ವಾನಗಳು ಮತ್ತು ಆರು ನೂರಕ್ಕೂ ಹೆಚ್ಚಿನ ಸಾದು ಸಂತರ ಈ ಯಾತ್ರೆಯ ಸರ್ವಾಧ್ಯಕ್ಷರಾದ ಮಹಾಂತರಾದ ಶ್ರೀ ಯೋಗಿ ನಿರ್ಮಲಾನಂದಜೀ ಅವರ...

Blog 3572.ಬಾರಾಪಂತ್ ಯಾತ್ರೆ ಭಾಗ-2

#ಭಾಗ_2_ಉತ್ತರ_ಭಾರತದ_ನಾಥ_ಪಂಥದವರ_ಜೊತೆ_ನನ್ನ_ಸತ್ಸಂಗಗಳು. #ಬಾರಾಪಂಥ್_ಯಾತ್ರೆ #ಭಾರತದ_ಉತ್ತರ_ದಕ್ಷಿಣದ_ಧಾರ್ಮಿಕ_ಸಂಬಂಧ_ಸೇತು. #ಪ್ರತಿ_12_ವಷ೯ಕ್ಕೆ_ಒಮ್ಮೆ_ನಾಸಿಕ್_ಕು೦ಬಮೇಳ_ಮುಗಿದ_ಮರು_ದಿನ_ಪ್ರಾರಂಭ  #ಈ_ಯಾತ್ರೆ_ಪಶ್ಚಿಮ_ಘಟ್ಟದ_ಮಧ್ಯದಲ್ಲಿ_ನಡೆದು_ಬರುವನೂರಾರು_ಸಾಧು_ಸಂತರ_ಪಾದಯಾತ್ರೆ #ಐದು_ಸಾವಿರ_ವಷ೯ದಿOದ_ನಿರಂತರವಾಗಿ_ನಡೆದು_ಬರುತ್ತಿರುವ_ವಿಸ್ಮಯ_ನಿಗೂಡ_ಯಾತ್ರೆ. #ಶಿವಮೊಗ್ಗ_ಜಿಲ್ಲೆಯ_ಚಂದ್ರಗುತ್ತಿ_ಸಾಗರದ_ಗಣಪತಿ_ದೇವಸ್ಥಾನ #ಹೊಸನಗರ_ತಾಲ್ಲೂಕಿನ_ಆಲಗೇರಿಮಂಡ್ರಿ_ಬಿದನೂರುನಗರದಲ್ಲಿ_ತಂಗುತ್ತದೆ. #ಉತ್ತರ_ಭಾರತದ_ನಾಥ_ಪಂಥದ_ಜೊತೆ_ವಿಚಿತ್ರ_ವಿಚಿತ್ರ_ಮತ್ತು_ವಿಶೇಷ_ಸತ್ಸಂಗದ_ಈ_ಲೇಖನ_ಸರಣಿ. #UP #YogiAdityanath #Gorakpura #Halawarimutt #Somanathbavoji #Nathapantha #Bharapanthyatre #Nasik #Kumbamela             12 ವಷ೯ಕ್ಕೆ ಒಮ್ಮೆ ನಾಸಿಕ್ ನಿಂದ ತ್ರ್ಯಯಂಬಕೇಶ್ವರ ಕುಂಬಮೇಳ ಮುಗಿದ ಮರುದಿನ ಹೊರಡುವ ಈ ಬಾರ ಪ೦ಥ್ ಯಾತ್ರೆಯಲ್ಲಿ ನೂರಾರು ಸಾದು ಸಂತರು ಭಾಗವಹಿಸುತ್ತಾರೆ.    ನಾಸಿಕ್ ನಿಂದ ಬರಿಗಾಲಲ್ಲಿ ನಡೆದು ಕೊಂಡು ಹೊರಟು ಮಂಗಳೂರಿನ ಕದ್ರಿ ಬೆಟ್ಟಕ್ಕೆ ತಲುಪುತ್ತದೆ.     ಪಾತ್ರ ದೇವತೆ ಎಂಬ ದೇವಿಯನ್ನ ತಲೆ ಮೇಲೆ ಹೊತ್ತು ಬರುತ್ತಾರೆ, ನಾಥ ಪಂಥದ ಸಂಪ್ರದಾಯದಂತೆ ಇವರ ಜೊತೆ ಆಯ್ದ ಶ್ವಾನಗಳೂ ನಡೆ...

Blog 3571.ಬೆತ್ತಲೆ ಸೇವೆ ನಿಶೇದ

#ಶಿವಮೊಗ್ಗ_ಜಿಲ್ಲೆಯ_ಚಂದ್ರಗುತ್ತಿ_ಜಾತ್ರೆ #ಇದೇ_ತಿಂಗಳ_24_ಮತ್ತು_25_ನೆರವೇರಲಿದೆ #ಜಿಲ್ಲಾ_ಆಡಳಿತ_ಪ್ರತಿ_ವರ್ಷ_ಬೆತ್ತಲೆ_ಸೇವೆ_ನಿಶೇದಿಸಿ #ಕಳೆದ_40_ವರ್ಷದಿಂದ_ಆದೇಶ_ಹೊರಡಿಸುತ್ತದೆ #ಬೆತ್ತಲೆ_ಸೇವೆ_ನಿಶೇಧಕ್ಕಾಗಿ_ಹೋರಾಡಿದ_ದಲಿತ_ಸಂಘರ್ಷ_ಸಮಿತಿ_ಸಂಸ್ಥಾಪಕ_ಬಿ_ಕೃಷ್ಣಪ್ಪ #ರೈತ_ಸಂಘದ_ಕಡಿದಾಳು_ಶಾಮಣ್ಣ #ಇವರ_ಜೊತೆ_ಸಾವಿರಾರು_ಪ್ರಗತಿಪರ_ಹೋರಾಟಗಾರರ_ಶ್ರಮವಿದೆ #ಆಗಿನ_1986ರ_ಜನತಾದಳದ_ಸರ್ಕಾರದಲ್ಲಿ_ಮಂತ್ರಿ_ಆಗಿದ್ದ_ಜೆ_ಹೆಚ್_ಪಟೇಲರ_ಬೆಂಬಲ_ಮರೆಯುವಂತಿಲ್ಲ #Shivamogga #Soraba #Chandragutti #Bettaleseve #Govtofkarnataka #JHPatel #Dalithasangarshasamithee #BKrishnappa #Raithasanga #Kadidalshyamanna    ಇಂತಹದ್ದೊಂದು ಅನಾಗರೀಕ ಪದ್ಧತಿ ಆದ #ಬೆತ್ತಲೆ_ಸೇವೆ ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ವರ್ಷ ಸೊರಬ ತಾಲೂಕಿನ ಚಂದ್ರಗುತ್ತಿಯ ರೇಣುಕಾಂಬಾ ದೇವಿ ಜಾತ್ರೆಯಲ್ಲಿ ನಡೆಯುತ್ತಿತ್ತು.    ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಅನಾರೋಗ್ಯವಾದಾಗ ಗುಣವಾದರೆ  ಈ ದೇವರಿಗೆ ಬೆತ್ತಲೆ ಸೇವೆ ಸಲ್ಲಿಸುವ ಹರಕೆ ಹೊರುತ್ತಿದ್ದ ಪೋಷಕರು ಅದನ್ನು ತೀರಿಸಲಾಗದೆ ಮಕ್ಕಳು ಪ್ರಾಯಕ್ಕೆ ಬಂದಾಗ ಅವರನ್ನು ದೇವರ ಹರಕೆ ಬಾಕಿ ತೀರಿಸಲು ಕರೆತರುತ್ತಿದ್ದರು.    ಇದನ್ನು ನೋಡಲು ಸಾವಿರಾರು ಜನ ಬರುತ್ತಿದ್ದರು, ಬೆತ್ತಲೆ ಸೇವೆ ಸಲ್ಲಿಸುವ ಮಹಿಳೆಯರ ಫೋಟೋ ತೆಗೆದ...

Blog 3570. ರಿಚ್ ಡ್ಯಾಡ್ ಪೂರ್ ಡ್ಯಾಡ್ ಪುಸ್ತಕ

#ಈ_ಪುಸ್ತಕ_ಎಲ್ಲರೂ_ಓದಿ #ರಿಚ್_ಡ್ಯಾಡ್_ಪೂರ್_ಡ್ಯಾಡ್ #ಇವರು_ಬರೆದ_ವೈ_ರಿಚ್_ಆರ್_ಗೆಟಿಂಗ್_ರಿಚರ್_ಕೂಡ #ರಾಬರ್ಟ್_ಟಿ_ಕಿಯೋಸಾಕಿ_ಬರೆದ_ಈ_ಪುಸ್ತಕ_ಈಗಲೂ_ಟಾಪ್_ಒನ್ #ಬೇಕಲ್_ಕೋಟೆ_ಕೆಳದಿ_ಅರಸರ_ನಿರ್ಮಾಣ_ಎಂಬ_ಸಂಶೋಧನೆ_ಮಾಡಿದ #ಡಾಕ್ಟರ್_ಶಿವಾನಂದ_ಬೇಕಲ್_ಕನ್ನಡಕ್ಕೆ_ಅನುವಾದಿಸಿದ್ದಾರೆ. #Richdadpoordad #Whytherichgettingricher #DrShivanandabekal #Finance #Money #Wealth    ಈ ಪುಸ್ತಕ ಎಲ್ಲರೂ ಓದಬೇಕು ಇದರಲ್ಲಿ ತರ್ಕ ಇದೆ.     ಬಹುತೇಕ ಮಂದಿ ನಾಕಾರು ವರ್ಷ ಕಾಲೇಜು ಶಿಕ್ಷಣ ಮಾಡಿದಾಗ ಅಧ್ಯಯನ ಮುಗಿದುಬಿಡುತ್ತದೆ ಆದರೆ ದುಡ್ಡಿನ ವಿಷಯದಲ್ಲಿ ಅದ್ಯಯನ ಜೀವನ ಪೂರ್ತಿ ನಡೆಯುತ್ತದೆ.     ಬಡ ಮತ್ತು ಮದ್ಯಮ ವರ್ಗದ ಜನರು ಹಣಗಳಿಸಲು ಕೆಲಸ ಮಾಡುತ್ತಾರೆ... ಶ್ರೀಮಂತರು ತಮಗಾಗಿ ಕೆಲಸ ಮಾಡಿಸಿಕೊಳ್ಳುತ್ತಾರೆ.    ಅವಕಾಶ ಬರುತ್ತದೆ ಮತ್ತೆ ಬಂದು ಹೋಗುತ್ತದೆ ಹಾಗಾಗಿ ತಕ್ಷಣ ನಿರ್ಣಯ ತೆಗೆದುಕೊಳ್ಳುವ ಕ್ಷಮತೆ ಒಂದು ಮಹತ್ವದ ಯೋಗ್ಯತೆ ಆಗಿರುತ್ತದೆ.     ಹೀಗೆ ಈ ಪುಸ್ತಕದ ಮೊದಲ ಪುಟ ತೆರೆದರೆ ಇಡೀ ಪುಸ್ತಕದ 308 ಪುಟಗಳು ಓದಿಸಿಕೊಂಡು ಹೋಗುತ್ತದೆ.      ನನಗೆ ಈ ಪುಸ್ತಕ ಇಷ್ಟವಾಯಿತು ತುಂಬಾ ತಡವಾಗಿ ಓದಿದೆ ಎಂಬ ಬೇಸರ ಆಯಿತು.     ಈ ಪುಸ್ತಕ ಅಮೇಜಾನ್, ಸ್ಟಪ್ನ ಎಲ್ಲಾ ಕಡೆ ಲಭ್ಯ ಬೆಲೆ ರೂ 499.

Blog 3569. ಜೋಗ್ ಪಾಲ್ಸ್

#ನಾವು_ಗೆಳೆಯರು... #ಜೋಗ್_ಪಾಲ್ಸ್_ಗೆಳೆಯರು_ಈಗ #ಬೆಂಗಳೂರು_ನಿವಾಸಿಗಳು #ಜಾರ್ಜ್_ಪರ್ನಾಂಡೀಸ್_ಸಮತಾ_ಪಾರ್ಟಿ_ಬೆಂಬಲಿಸಿದವರು #ನನ್ನ_ಅತಿಥಿಗಳು #ಚಿನ್ನಾ_ಲೋಕೇಶ್ #Jogfalls #Kargal #Lokesh #Chinnu #Samathaparty #Georgefarnandis #Michelfarnandis #Srinivasprasad     ಆಗಷ್ಟೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಪ್ರಾಜೆಕ್ಟ್ ಏರಿಯಾ ಆಗಿದ್ದ ಜೋಗ್ ಮತ್ತು ಕಾರ್ಗಲ್ ಗೆ ಮೊದಲ ಸ್ಥಳೀಯ ಸಂಸ್ಥೆ ಆಗಿ #ಜೋಗ್_ಕಾರ್ಗಲ್ ಪಟ್ಟಣ ಪಂಚಾಯಿತಿ ಘೋಷಣೆ ಆಗಿತ್ತು.    ನಾನು ಆಗ ದೇಶದ ರಕ್ಷಣಾ ಮಂತ್ರಿಗಳಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರ ಕರ್ನಾಟಕ ರಾಜ್ಯ ಸಮತಾ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ.     ನಮ್ಮ ಸಾಗರ ತಾಲೂಕಿನ ಶರಾವತಿ ಯೋಜನ ಪ್ರದೇಶದಲ್ಲಿ ಜಾರ್ಜ್ ಫರ್ನಾಂಡಿಸ್ ಅವರ ಸಹೋದರ ಮೈಖೆಲ್ ಪರ್ನಾಂಡೀಸರ ಕೆಪಿಸಿ ಕಾರ್ಮಿಕ ಸಂಘಟನೆಗಳು ಹೆಚ್ಚು ಸಂಘಟಿತವಾಗಿತ್ತು.     ಆದ್ದರಿಂದ ನಾನು ಜೋಗ್ ಕಾರ್ಗಲ್ ಪಟ್ಟಣ ಪಂಚಾಯಿತಿಗೆ ಸಮತಾ ಪಾರ್ಟಿ ಅಭ್ಯರ್ಥಿಗಳನ್ನು ಚುನಾವಣೆಗೆ ಸ್ಪರ್ಧೆಗೆ ಇಳಿಸಿದ್ದೆ.    ಆ ಚುನಾವಣೆಯಲ್ಲಿ ನಮ್ಮ ಸಮತಾ ಪಾರ್ಟಿ ಅಭ್ಯರ್ಥಿಗಳು ಗೆಲ್ಲಲಿಲ್ಲ ಆದರೆ ಜೆ.ಹೆಚ್. ಪಟೇಲರ ನಾಯಕತ್ವದ ಜನತಾ ದಳದ ಅಭ್ಯರ್ಥಿಗಳು ಗೆದ್ದು ಕಾಗೋಡು ತಿಮ್ಮಪ್ಪನವರ ನೇತೃತ್ವದಲ್ಲಿನ ಕಾಂಗ್ರೇಸ್ ಪಕ್ಷದ ಸೋಲಿಗೆ ಕಾರಣ ಆಗಿತ್ತ...

Blog 3568. ಚಂದ್ರಗುತ್ತಿ

#ಚಂದ್ರಗುತ್ತಿ_ಜಾತ್ರಾ_ಮಹೋತ್ಸವ #ದಂತಕಥೆಯಲ್ಲಿ_ಚಂದ್ರಗುತ್ತಿ_ರೇಣುಕಾಂಬಾ_ಚರಿತ್ರೆ #ಮಾತಂಗಿ_ಎಂಬ_ದಾಸಿ #ಮಾತಂಗಿ_ರಕ್ಷಕಿ_ಎಂಬ_ಜಾನಪದ_ಕಥೆ_ಚಂದ್ರಗುತ್ತಿಯಲ್ಲಿದ್ದ_ಬೆತ್ತಲೆ_ಸೇವೆಗೆ_ಕಾರಣ.  #ಬೆತ್ತಲೆ_ಸೇವೆ_1986_ರಿಂದ_ಸರ್ಕಾರ_ರದ್ದು_ಮಾಡಿದೆ. #Shivamogga #Soraba #Chandragutti #Renukamba  #Bettaleseva #Rathotsava #Jatramahotsava   ಚಂದ್ರಗುತ್ತಿ ರೇಣುಕಾಂಬಾ ಚರಿತ್ರೆ     ಚಂದ್ರಗುತ್ತಿ ರೇಣುಕಾಂಬ ದೇವಾಲಯವು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿದೆ.    ದಟ್ಟವಾದ ಮಲೆನಾಡು ಕಾಡಿನ ಬೆಟ್ಟದ ಮೇಲಿರುವ ಪ್ರಸಿದ್ಧ ಪುರಾತನ ಗುಹಾಂತರ ದೇವಾಲಯವಾಗಿದೆ.   ಪರಶುರಾಮನ ತಾಯಿ ರೇಣುಕಾ ದೇವಿಗೆ ಅರ್ಪಿತವಾದ ಈ ಸ್ಥಳವು, ಅವಳು ತಪಸ್ಸು ಮಾಡಿದ ಮತ್ತು ಪುನರ್ಜನ್ಮ ಪಡೆದ ಸ್ಥಳವೆಂದು ನಂಬಲಾಗಿದೆ.    ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ಸೊರಬದಿಂದ 19 ಕಿ.ಮಿ. ದೂರದಲ್ಲಿದೆ.    ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮತ್ತು ಸಿದ್ದಾಪುರದಿಂದ ಸುಮಾರು 19 ಕಿ.ಮೀ ದೂರದಲ್ಲಿದೆ.      1986 ರಲ್ಲಿ ದಲಿತ ಸಂಘರ್ಷ ಸಮಿತಿ, ಸರ್ಕಾರೇತರ ಸಂಸ್ಥೆಗಳು ಮತ್ತು ಮಹಿಳಾ ಸಂಘಟನೆಗಳು ಬೆತ್ತಲೆ ಸೇವೆಯನ್ನು ವಿರೋಧಿಸಿದವು.     ಕಾರ್ಯಕರ್ತರು ವರದಾ ನದಿಯಲ್ಲಿ ಮಹಿಳೆಯರ...

Blog 3567. ಜನವಾರ್ತೆ

#ಶಿವಮೊಗ_ಜಿಲ್ಲೆಯ_ಮೊದಲ_ಬ್ರಾಡ್_ಶೀಟ್_ದಿನಪತ್ರಿಕೆ #ಜನವಾರ್ತೆ_ದಿನಪತ್ರಿಕೆ. #ಜನವಾರ್ತೆ_ಸಂಪಾದಕ_ನಾಗರಾಜ್_ಅವರ_ಮೂರನೆ_ಪುಣ್ಯ_ಸ್ಮರಣೆ #ಶಿವಮೊಗ್ಗದ_ಮೊದಲ_ಅಂತರ್_ಜಿಲ್ಲಾ_ನಾಲ್ಕು_ಪುಟಗಳ_ಬ್ರಾಡ್_ಶೀಟ್_ದಿನಪತ್ರಿಕೆ_ಪ್ರಾರಂಬಿಸಿದವರು. #ಸ್ವಂತ_ಆಫ್_ಸೆಟ್_ಮುದ್ರಣ_ಯಂತ್ರ_ಹೊಂದಿದ್ದ_ಪತ್ರಿಕೆ_ಜನವಾರ್ತೆ #ಕನಸುಗಾರ_ಉದ್ಯಮಿಯನ್ನು_ದಾರಿತಪ್ಪಿಸಿದ_ಜಿಲ್ಲೆಯ_ರಾಜಕಾರಣಿಗಳು #ಆಶ್ರಯ_ಹಗರಣದಲ್ಲಿ_ಬಲಿಪಶು #ಕೊನೆಯವರೆಗೂ_ಇವರೊಂದಿಗೆ_ಉಳಿದವರು_SPಶೇಷಾದ್ರಿ_ಮಾತ್ರ. #ದುರಂತ_ಕಥಾ_ನಾಯಕ_ಜಿ_ಎಸ್_ನಾಗರಾಜ್ #ಯಶಸ್ಸಿಗೆ_ಹಲವು_ಅಪ್ಪಂದಿರು_ಇರುತ್ತಾರೆ_ಸೋಲು_ಅನಾಥ_ಎಂಬ_ಗಾದೆ_ಸುಳ್ಳಲ್ಲ. #Janavarthe #GSNagaraj #Sheshadri #Shivamogga  #Broadsheetdaily #Newspaper    ಶಿವಮೊಗ್ಗ ಜಿಲ್ಲೆಯ ಮೊದಲ ಬ್ರಾಡ್ ಶೀಟ್ ದಿನ ಪತ್ರಿಕೆ #ಜನವಾರ್ತೆ ಇದು ಮೊದಲ ಅಂತರ್ ಜಿಲ್ಲಾ ಪತ್ರಿಕೆ ಕೂಡ ಆಗಿತ್ತು.   ಇದನ್ನು ಪ್ರಾರಂಬಿಸಿದವರು ಶಿವಮೊಗ್ಗ ಜಿಲ್ಲೆಯ #ತೀರ್ಥಹಳ್ಳಿ ಮೂಲದ ಶಿವಮೊಗ್ಗದ ಉದ್ಯಮಿ #ಜಿ_ಎಸ್_ನಾಗರಾಜ್.   ಇಂತಹ ಅಮೋಘ ದಾಖಲೆ ಮಾಡಿದ ಜಿ.ಎಸ್. ನಾಗರಾಜ್ ಒಬ್ಬ ಸಾಹಸಿ ಉದ್ದಿಮೆದಾರರು.    ಕನ್ನಡದ ಮೊದಲ ಬ್ರಾಡ್‌ಶೀಟ್ ದಿನಪತ್ರಿಕೆ ಮತ್ತು ಮೊದಲ ಕನ್ನಡ ಪತ್ರಿಕೆ #ಮಂಗಳೂರು_ಸಮಾಚಾರ (Mangaluru Samachara).   ಇದು ಜರ್ಮನಿಯ ಹರ್ಮನ್ ಮೋಗ್ಲಿಂಗ್ (Hermann Mö...

Blog 3566. ಬಾರಾಪಂಥ್ ಯಾತ್ರೆ ಭಾಗ - 3

#ಭಾಗ_3 #ಭಾರಾ_ಪಂಥ_ಯಾತ್ರೆ #ಉತ್ತರಪ್ರದೇಶದ_ಗೋರಕ್_ಪುರದ_ಶಾಖಾ_ಮಠ #ಸಿದ್ದಾಪುರದ_ಕಮಲಶಿಲೆ_ಸಮೀಪದ_ಹಲವಾರಿಮಠ #ನಾಸಿಕ್_ಕುಂಭಮೇಳದಿಂದ_ಪ್ರತಿ_12_ವರ್ಷಕ್ಕೊಮ್ಮೆ_ಹೊರಡುತ್ತದೆ. #ಮುಂದಿನ_ಬಾರಾಪಂಥ್_ಯಾತ್ರೆ_2027ಕ್ಕೆ_ನಾಸಿಕ್_ನಿಂದ_ಹೊರಟು #ಮಂಗಳೂರು_ಕದ್ರಿಗೆ_2028_ಜನವರಿಯಲ್ಲಿ_ತಲುಪಲಿದೆ. #ಬಾರಾಪಂಥ_ಯಾತ್ರೆ_ಹಲವಾರಿ_ಮಠದಲ್ಲಿ_ತಂಗುತ್ತದೆ. #nathapanth #barapanth #jondiyatre #gorakpura #nasik #kumbamela #siddapeeta #kodachadri #halavarimutt #YogiAdityanath     ಗೋರಖ್‌ಪುರ ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿರುವ ಪ್ರಮುಖ ಐತಿಹಾಸಿಕ ಮತ್ತು ಸಾಂಸ್ಕೃತಿಕ ನಗರವಾಗಿದೆ.    ರಪ್ತಿ ನದಿಯ ದಡದಲ್ಲಿರುವ ಇದು ನಾಥ ಪಂಥದ ಪ್ರಸಿದ್ಧ ಸಂತ ಗೋರಕ್ಷನಾಥರ ಹೆಸರಿನಿಂದ (ಗೋರಕ್ಷಾಪುರ) ಬಂದಿದೆ.    ಇದು ಪ್ರಸಿದ್ಧ ಗೋರಖನಾಥ ಮಠ ಈ ಮಠದ ಮಹಾಂತರೇ ಬಾರಾಪಂತ್ ಯಾತ್ರೆಯ ರೂವಾರಿಗಳು ಆಗಿರುತ್ತಾರೆ.     ಗೋರಖ್ ನಾಥ ಮಠದ ಈಗಿನ ಮಹಾಂತರು ಯೋಗಿ ಆದಿತ್ಯನಾಥ್ ಜೋಗಿ ಇವರು ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿಗಳೂ ಆಗಿದ್ದಾರೆ.   ಪಶ್ಚಿಮ ಘಟ್ಟದ ತಪ್ಪಲಿನ ಮಧ್ಯ ನಡೆದು ಬರುವ ನಾಥ ಪಂಥದ ಸಾದು ಸಂತರ ಈ ಬಾರಾಪಂಥ್ ಯಾತ್ರೆಗೆ ಸಾವಿರರಾರು ವರ್ಷದ ಇತಿಹಾಸವಿದೆ.  ನಾಥಪ೦ಥದ ಶ್ರೀ ಕ್ಷೇತ್ರ ಸಿದ್ದ ಪೀಠ ಕೊಡಚಾದ್ರಿ ಹಲವಾರಿ ಮಠ ಎಡಮೊಗೆ (ಕಮಲಶಿಲ...