Skip to main content

Posts

BN 3433. ಛಾಯಾ ಹೋಟೆಲ್ ಭೀಮಣ್ಣ

#ಸಾಗರದ_ಛಾಯಾ_ಹೋಟೆಲ್_ಬೀಮಣ್ಣರ_ಬಗ್ಗೆ #ಮಾಜಿ_ಶಾಸಕರಾದ_ಬಿ_ಸ್ವಾಮಿರಾವ್_ಆತ್ಮ_ಚರಿತ್ರೆ #ನಾನು_ಹೇಳುವುದೆಲ್ಲಾ_ಸತ್ಯ_ಪುಸ್ತಕದಲ್ಲಿ_ಉಲ್ಲೇಖಿಸಿದ್ದಾರೆ.  #ಪ್ರಚಂಡ_ವಾಗ್ಮಿ_ಅಭಿನವ_ಚಾಣಕ್ಯ_ಅವರು   ಸಾಗರ ಸೀಮೆಯಲ್ಲಿ #ಛಾಯಾ_ಹೋಟೆಲ್_ಬೀಮಣ್ಣ ಎಂದರೆ ಯಾರೂ ಗೊತ್ತಿಲ್ಲ ಅನ್ನುವುದಿಲ್ಲ ಈಗ ಅವರ ಪ್ರಖ್ಯಾತಿಗೆ ಕಾರಣ ಆಗಿದ್ದ ಸಾಗರದ ಮಾರಿಕಾಂಬಾ ದೇಗುಲ ದ ಹಿಂಬಾಗದ ಛಾಯಾ ಹೋಟೆಲ್ ಇಲ್ಲ ಆದರೆ ಅಗ್ರಹಾರದಲ್ಲಿ ಅವರ #ವರದಶ್ರೀ_ಲಾಡ್ಜ್ ಪ್ರಖ್ಯಾತವಾಗಿದೆ ಅವರ ಪುತ್ರರಾದ ಕವಲಕೋಡು ವೆಂಕಟೇಶ್ ಮತ್ತು ಪ್ರಸಾದ್ ನೋಡಿಕೊಳ್ಳುತ್ತಾರೆ.     ಹೊಸನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಿ. ಸ್ವಾಮಿ ರಾವ್ ಅವರ ಆತ್ಮವೃತ್ತಾಂತ #ನಾನು_ಹೇಳುವುದೆಲ್ಲಾ_ಸತ್ಯ ಹೊಸನಗರದ ಪತ್ರಕರ್ತ ಶ್ರೀಕಂಠ ಬರೆದಿದ್ದಾರೆ (ಪುಸ್ತಕ ಬೇಕಾದವರು ಅವರ ಫೋನ್ ನಂಬರ್ 9483016851 ಸಂಪರ್ಕಿಸಬಹುದು) ಅದರಲ್ಲಿ ಪುಟ ಸಂಖ್ಯೆ 20 ಮತ್ತು 21 ರಲ್ಲಿ #ಮೊದಲ_ಚುನಾವಣಾ_ಸ್ಪರ್ಧೆ ಅಧ್ಯಾಯದಲ್ಲಿ ಬೀಮಣ್ಣರ ಉಲ್ಲೇಖ ಮಾಡಿದ್ದಾರೆ...     1962ರಲ್ಲಿ ಬಿ. ಸ್ವಾಮಿ ರಾವ್ ಹೊಸನಗರ ವಿಧಾನ ಸಭಾ ಕ್ಷೇತ್ರದಿಂದ  ಸ್ವತಂತ್ರ್ಯ ಅಭ್ಯರ್ಥಿ ಆಗಿ ಸ್ಪರ್ಧಿಸಿದಾಗ ಬೀಮನಕೋಣೆ ವಾಸಿ ಬೀಮಣ್ಣ ಅವರ ಪೋರ್ಡ್ ಕಾರ್ ಬಾಡಿಗೆಗೆ ಪಡೆದಿದ್ದರಂತೆ ಅದಕ್ಕೆ ಬೀಮಣ್ಣರೇ ಚಾಲಕರು.    " ಅಂದು ಕ್ಷೇತ್ರದಾದ್ಯಂತ ತನ್ನ ಪರವಾಗಿ ಬ...
Recent posts

BN 3432. ಡಾಕ್ಟರ್ ಡಿ.ಸುರೇಶ್ ರಾವ್ ಕ್ಯಾನ್ಸರ್ ತಜ್ಞರು

#ನನ್ನ_ಇವತ್ತಿನ_ಅತಿಥಿ #ಡಾಕ್ಟರ್_ಡಿ_ಸುರೇಶ್ #ತೀರ್ಥಹಳ್ಳಿ_ಆಗುಂಬೆ_ಮೂಲದವರು #ಇವರ_ಶಿವಮೊಗ್ಗ_ಜಿಲ್ಲೆಯ_ತೀರ್ಥಹಳ್ಳಿಯಲ್ಲಿ_ಸುಸಜ್ಜಿತ #ಕ್ಯಾನ್ಸರ್_ಆಸ್ಪತ್ರೆ_ಶೀಘ್ರದಲ್ಲೇ_ಕಾರ್ಯಾರಂಭ_ಮಾಡಲಿದೆ #ಈಗಾಗಲೇ_ಮಂಗಳೂರಿನಲ್ಲಿ_ಇವರ_ಆಸ್ಪತ್ರೆ_MIO_HOSPITAL_ಪ್ರಸಿದ್ದಿ_ಪಡೆದಿದೆ #ಮಂಗಳೂರು_ಇನ್ಸ್ಟಿಟ್ಯೂಟ್_ಆಫ್_ಆಂಕಾಲಜಿ_ಉಡುಪಿಯಲ್ಲೂ_ಡೇ_ಕೇರ್_ಸೆಂಟರ್_ಇದೆ.    ಡಾಕ್ಟರ್ ಡಿ.ಸುರೇಶ್ ಮಂಗಳೂರಿನ ಕಂಕನಾಡಿಯ ಪಂಪ್ ವೆಲ್ ನಲ್ಲಿ ಸುಸಜ್ಜಿತವಾದ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಾಜಿ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ (MIO) ಪ್ರಸಿದ್ಧಿ ಮತ್ತು ಪ್ರಖ್ಯಾತಿ ಪಡೆದಿದೆ ಇವರ ಸಂಸ್ಥೆಯ ಬ್ರಾಂಚ್ ಉಡುಪಿಯಲ್ಲೂ ಇದೆ.   ಡಾಕ್ಟರ್ ಡಿ.ಸುರೇಶ್ ತೀರ್ಥಹಳ್ಳಿ ಮೂಲದವರು ಇವರಿಗೆ ಮಲೆನಾಡಿನ ಶಿವಮೊಗ್ಗ, ಉತ್ತರ ಕನ್ನಡ,ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಜನರಿಗೆ ಅನುಕೂಲವಾಗುವಂತೆ ತೀರ್ಥಹಳ್ಳಿಯಲ್ಲಿ 80 ಹಾಸಿಗೆಯ ಕ್ಯಾನ್ಸರ್ ಆಸ್ಪತ್ರೆ ಮಾಡಿದ್ದಾರೆ.    ಕಳೆದ ವರ್ಷ 15 ಮೇ 2023 ರಂದು ತೀಥ೯ಹಳ್ಳಿಯ ನೆರಟೂರು ಗ್ರಾಮ ಪಂಚಾಯಿತಿಯಲ್ಲಿ MIO HOSPITAL ತೀರ್ಥಹಳ್ಳಿಯ ಭೂಮಿ ಪೂಜೆ ಇವರು ನೆರವೇರಿಸಿದ್ದರು.    ಶಿವಮೊಗ್ಗ ಭದ್ರಾವತಿ ಮಧ್ಯದ #ಮಲ್ನಾಡ್_ಕ್ಯಾನ್ಸರ್_ಆಸ್ಪತ್ರೆ ಮತ್ತು ಸಧ್ಯದಲ್ಲೇ ಪ್ರಾರಂಭ ಆಗಲಿರುವ ಯಡ್ಯೂರಪ್ಪರ ನಾರಾಯಣ ಹೃದಯಾಲಯದ ಕ್ಯಾನ್ಸರ್ ಆ...

BN 3431. ಭಾಗ-1. ಹೊಳೆಬಾಗಿಲು ಸೇತುವೆ

#ಭಾಗ_ಒಂದು. #ಅಂಬಾರಗೋಡ್ಲು_ಕಳಸವಳ್ಳಿ_ಸೇತುವೆ_ಉದ್ಘಾಟನೆಯ_ಕ್ಷಣಗಣನೆಯಲ್ಲಿ #ನಾನು_ಮೊದಲ_ಬಾರಿಗೆ_ಹೊಳೆಬಾಗಿಲು_ಲಾಂಚ್_ನೋಡಿದ್ದು_ದಾಟಿದ್ದು. #sharavathiriver #linganamakkidam #ambargodlu #kalasavalli #cablebridge #prasannakereki #byraghavendra #kagoduthimmappa   1989 ಅಥವ 1990 ರಲ್ಲಿ ನಾನು ಕಾಗೋಡು ತಿಮ್ಮಪ್ಪನವರ ಕಪ್ಪುಅಂಬಾಸಡರ್ ಕಾರಿನಲ್ಲಿ ಮೊದಲ ಬಾರಿಗೆ ಹೊಳೆಬಾಗಿಲು ನೋಡಿದ್ದು ಮತ್ತು ಮೊದಲ ಬಾರಿಗೆ ಲಾಂಚಿನಲ್ಲಿ ದಾಟಿದ್ದು ನೆನಪುಗಳು.     ಗುಂಡೂರಾವ್ ಮತ್ತು ಬಂಗಾರಪ್ಪನವರ ರಾಜಕೀಯ ಸಂಘರ್ಷದಲ್ಲಿ ಜನತಾ ಪಕ್ಷದ ಕಾಗೋಡು ತಿಮ್ಮಪ್ಪನವರನ್ನು ಕಾಂಗ್ರೆಸ್ಸಿಗೆ ಸೇರಿಸಿ ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಮಂತ್ರಿನ್ನಾಗಿಸಿದ್ದು ಇತಿಹಾಸ.     ನಂತರ ಸುಮಾರು  ವರ್ಷಗಳ ಕಾಲ ಸಾಗರದ ರಾಜಕೀಯ ರಂಗದಲ್ಲಿ ಕಾಗೋಡು ತಿಮ್ಮಪ್ಪನವರು ಇಲ್ಲದ್ದರಿಂದ ಆಗಿನ ಕಾಂಗ್ರೆಸ್ ಪಕ್ಷದ ಕಟ್ಟಾ ಮುಖಂಡರಾದ ಅಹ್ಮದ್ ಅಲಿಖಾನ್ ಸಾಬ್ ಹೇಗಾದರೂ ಮಾಡಿ ಕಾಗೋಡು ತಿಮ್ಮಪ್ಪನವರನ್ನು ಸಾಗರ ತಾಲ್ಲೂಕಿನ ರಾಜಕಾರಣಕ್ಕೆ ಕರೆತರಬೇಕು ಎಂಬ ಪ್ರಯತ್ನ ಪ್ರಾರಂಬಿಸಿದ್ದರು.    1989 ರ ವಿಧಾನಸಭಾ ಚುನಾವಣೆಗೆ ಕಾಗೋಡು ತಿಮ್ಮಪ್ಪನವರನ್ನು ಕರೆ ತರುವ ಪ್ರಸ್ತಾವನೆಯನ್ನು ಮಾಡಿದರು ಇದಕ್ಕೆ ಅವರಿಗೆ ಸಾತ್ ಕೊಟ್ಟವರು ಪುತ್ತೂರಾಯರು ಮತ್ತು ಕುರುಬರ ಲಿಂಗಪ್ಪನವರು.   ಆಗ...

BN 3430. ಭಾಗ - 2 . ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ಜೊತೆ ಹೊಳೆಬಾಗಿಲು ಲಾಂಚ್ ಪ್ರಯಾಣ

#ಭಾಗ_ಎರಡು #ಸಂಸದರಾದ_ಮಾಜಿ_ಮುಖ್ಯಮಂತ್ರಿ_ಬಂಗಾರಪ್ಪನವರನ್ನೇ_ಬಿಟ್ಟು_ಹೋದ  #ಹೊಳೆಬಾಗಿಲು_ಲಾಂಚ್_ಸಿಬ್ಬಂದಿಗಳು. #sharavathirivet #sagar #govtofkarnataka #govtofindia #ambargodlu #kalasavalli #siganduru #cablebridge #SBangarappa #shivamogga #parlimentmember    1996ರಲ್ಲಿ ಬಂಗಾರಪ್ಪನವರು ಮಾಜಿ ಮುಖ್ಯಮಂತ್ರಿಗಳು ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದರು.    ಆಗ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕರಾದ ಕಾಗೋಡು ತಿಮ್ಮಪ್ಪನವರ ಲಕ್ಷ್ಮಣ ರೇಖೆ ದಾಟಲು ಸಾಧ್ಯವಿರಲಿಲ್ಲ.   ಅವರೆಲ್ಲ ಚುನಾವಣೆಯಲ್ಲಿ ಬಂಗಾರಪ್ಪನವರಿಗೆ ವಿರುದ್ಧವಾಗಿ ಕಾಂಗ್ರೇಸ್ ಅಭ್ಯರ್ಥಿ ಕೆ.ಜಿ. ಶಿವಪ್ಪನವರ ಪರವಾಗಿ ಕೆಲಸ ಮಾಡಿದ್ದರು.    ಸಾಗರ ತಾಲೂಕಿನಲ್ಲಿ ಹರುನಾಥರಾವ್, ಮೊಹಮ್ಮದ್ ಕೊಯಾ, ಮೊಹಮದ್ ಖಾಸಿಂ,ಕಾಗೋಡು ಹೋರಾಟದ ನೇತಾರಗಣಪತಿಯಪ್ಪ ಮತ್ತು ಅನೇಕರ ಜೊತೆ ನಾನು ಸೇರಿ ಬಂಗಾರಪ್ಪನವರ ಗೆಲುವಿಗೆ ಕಟಿಬದ್ಧರಾಗಿ ಚುನಾವಣೆ ಮಾಡಿದೆವು ಚುನಾವಣೆಯಲ್ಲಿ ಬಂಗಾರಪ್ಪನವರು ಗೆಲ್ಲುತ್ತಾರೆ ಸಾಗರ ತಾಲೂಕಿನಲ್ಲಿ ಅವರಿಗೆ ಲೀಡ್ ಬರುತ್ತದೆ.   ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಂಗಾರಪ್ಪನವರಿಗೆ ವಿರುದ್ಧ ಆಗಿದ್ದರೂ ಮತದಾರರು ಬಂಗಾರಪ್ಪನವರ ಕೈ ಬಿಡಲಿಲ್ಲ.    ಸಂಸದರಾಗಿ ಆಯ್ಕೆ ಆದ ಬಂಗ...

BN 3429. ಭಾಗ-4 ನನ್ನ ಪಾದಯಾತ್ರೆಗೆ 21 ವರ್ಷ

#ಭಾಗ_4 #ನನ್ನ_ಪಾದಯಾತ್ರೆಗೆ_21_ವರ್ಷ #ಹೊಳೆಬಾಗಿಲು_ಸೇತುವೆ #ಶಿವಮೊಗ್ಗ_ತಾಳಗುಪ್ಪ_ಬ್ರಾಡ್_ಗೇಜ್_ಹಣ_ಬಿಡುಗಡೆ #ಸಾಗರ_ಜಂಬಗಾರು_ರೈಲುನಿಲ್ದಾಣ_ಡಾಕ್ಟರ್_ರಾಮಮನೋಹರ್_ಲೋಹಿಯಾ_ರೈಲು_ನಿಲ್ದಾಣವಾಗಿ_ಪುನರ್_ನಾಮಕರಣ #ಜೋಗ್_ಜಲಪಾತ_ಪ್ರವಾಸಿತಾಣದ_ಅಭಿವೃದ್ಧಿ #ಹಂದಿಗೋಡು_ಕಾಯಿಲೆ_ಪೀಡಿತರಿಗೆ_ಪುನರ್ವಸತಿಗಾಗಿ   21 ಜನವರಿ 2004 ರಿಂದ 31 ಜನವರಿ 2004ರವರೆಗೆ ಹನ್ನೊಂದು ದಿನಗಳ ಕಾಲ ಸಾಗರ ತಾಲೂಕಿನಾದ್ಯಂತ ಮೇಲಿನ ಬೇಡಿಕೆಗಳ ಈಡೇರಿಕೆಗಾಗಿ ಪಾದಯಾತ್ರೆ ಮೂಲಕ ಜನ ಜಾಗೃತಿ ಮೂಡಿಸಿದ್ದು ಈವರೆಗೆ ಯಾರೂ ಮುರಿಯದ ದಾಖಲೆ ಆಗಿ ಉಳಿದಿದೆ.     ತಾಲ್ಲೂಕಿನ ಜನತೆ ರಾಜಕೀಯ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಒತ್ತಾಯಿಸ ಬೇಕು, ಮಗು ಅಳದಿದ್ದರೆ ತಾಯಿ ಹಾಲು ನೀಡುವುದಿಲ್ಲ ಅಂತ ಜನರಿಗೆ ತಿಳಿಸುತ್ತಿದ್ದೆ.    ಅನೇಕ ಕಡೆ #ನೀವು_ಹೇಳುವುದೆಲ್ಲ_ಸರಿ_ಆದರೆ_ತುಮರಿ_ಸೇತುವೆ_ಸಾಧ್ಯವೇ_ಇಲ್ಲ ಅಂತ ಗೇಲಿ ಮಾಡುತ್ತಿದ್ದ ಮುಖ೦ಡರುಗಳು ಸಿಗುತ್ತಿದ್ದರು ಅಲ್ಲಿವರೆಗೆ ಸಾಗರದ ಜನ ಮನದಲ್ಲಿ ತುಮರಿ ಸೇತುವೆ ಅಸಾಧ್ಯ ಎಂಬ ಬಾವನೆ ಮನೆ ಮಾಡಿತ್ತು.     ತುಮರಿ ಸೇತುವೆಗೆ 19 - ಪೆಬ್ರವರಿ -2018 ಶoಕು ಸ್ಥಾಪನೆ ಆಯಿತು ಈಗ ದಿನಾಂಕ 14- ಜುಲೈ-2025 ಸೋಮವಾರ ಉದ್ಘಾಟನೆ ಆಗಲಿದೆ.   ಈಗಾಗಲೆ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಆಗಿ ರೈಲು ಬರುತ್ತಿದೆ, ಜೋಗ ಅಭಿವೃದ್ಧಿ ಪ್ರಾಧಿ...

BN 3428. ಭಾಗ 3 ನನ್ನ ಪಾದಯಾತ್ರೆ

#ಭಾಗ_ 3 #ನನ್ನ_ಪಾದಯಾತ್ರೆಗೆ_21_ವರ್ಷ #ಹೊಳೆಬಾಗಿಲು_ಸೇತುವೆ #ಶಿವಮೊಗ್ಗ_ತಾಳಗುಪ್ಪ_ಬ್ರಾಡ್_ಗೇಜ್_ಹಣ_ಬಿಡುಗಡೆ #ಸಾಗರ_ಜಂಬಗಾರು_ರೈಲುನಿಲ್ದಾಣ_ಡಾಕ್ಟರ್_ರಾಮಮನೋಹರ್_ಲೋಹಿಯಾ_ರೈಲು_ನಿಲ್ದಾಣವಾಗಿ_ಪುನರ್_ನಾಮಕರಣ #ಜೋಗ್_ಜಲಪಾತ_ಪ್ರವಾಸಿತಾಣದ_ಅಭಿವೃದ್ಧಿ #ಹಂದಿಗೋಡು_ಕಾಯಿಲೆ_ಪೀಡಿತರಿಗೆ_ಪುನರ್ವಸತಿಗಾಗಿ   21 ಜನವರಿ 2004 ರಿಂದ 31 ಜನವರಿ 2004ರವರೆಗೆ ಹನ್ನೊಂದು ದಿನಗಳ ಕಾಲ ಸಾಗರ ತಾಲೂಕಿನಾದ್ಯಂತ ಮೇಲಿನ ಬೇಡಿಕೆಗಳ ಈಡೇರಿಕೆಗಾಗಿ ಪಾದಯಾತ್ರೆ ಮೂಲಕ ಜನ ಜಾಗೃತಿ ಮೂಡಿಸಿದ್ದು ಈವರೆಗೆ ಯಾರೂ ಮುರಿಯದ ದಾಖಲೆ ಆಗಿ ಉಳಿದಿದೆ.     ತಾಲ್ಲೂಕಿನ ಜನತೆ ರಾಜಕೀಯ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಒತ್ತಾಯಿಸ ಬೇಕು, ಮಗು ಅಳದಿದ್ದರೆ ತಾಯಿ ಹಾಲು ನೀಡುವುದಿಲ್ಲ ಅಂತ ಜನರಿಗೆ ತಿಳಿಸುತ್ತಿದ್ದೆ.     ಜನ ಸೇರಿದ ಜಾಗದಲ್ಲಿ ಸಭೆ ನಡೆಯುತ್ತಿತ್ತು ಮೊದಲಿಗೆ ಮೆಣಸಿನಸರದ ಕಲಾವಿದ ಚಂದ್ರಪ್ಪರಿOದ ಪ್ರಾಥ೯ನೆ ನಂತರ ಬಿ.ಡಿ.ರವಿಯಿ೦ದ ಸ್ವಾಗತ ಮತ್ತು ಪ್ರಸ್ತಾವನೆ ನಂತರ ನನ್ನ ಭಾಷಣ ಮೊದಲಿಗೆ ಸಭಿಕರಿಗೆ ಪ್ರಶ್ನೆ ಸಿಗಂದೂರು ಯಾರು ನೋಡಿಲ್ಲ? ಅಂದಾಗ ಸಭಿಕರೆಲ್ಲರೂ ಮೌನ, ಯಾರು ಯಾರು ನೋಡಿದ್ದೀರಿ? ಅಂದಾಗ ಎಲ್ಲರೂ ನಾವು ನೋಡಿದ್ದೇವೆ ಅನ್ನುತ್ತಿದ್ದರು ಸಿಗಂದೂರು ಹೇಗಿದೆ ಅಂದಾಗ? ಸುಂದರವಾಗಿದೆ, ಲಾಂಚ್ ಪ್ರಯಾಣ ಚೆನ್ನಾಗಿರುತ್ತೆ ಅಂತಿದ್ದರು ಆಗ ನನ್ನ ಜನಜಾಗೃತಿ ಮಾತು ಪ್ರಾ...

BN-3427. ಸಾಗರ ರೈಲು ನಿಲ್ದಾಣದ ಪುನರ್ ನಾಮಕರಣ

#ಅಂಬಾರಗೊಡ್ಲು_ಕಳಸವಳ್ಳಿ_ಸೇತುವೆಗೆ #ಸಿಗಂದೂರು_ಚೌಡೇಶ್ವರಿ_ಸೇತುವೆ_ಎಂದು_ಪುನರ್_ನಾಮಕರಣದ_ಸಂದರ್ಭದಲ್ಲಿ #ಸಾಗರ_ರೈಲು_ನಿಲ್ದಾಣದ_ನಾಮಕರಣ_25ವರ್ಷದಿಂದ_ವಿಳಂಬವಾದ_ಬಗ್ಗೆ_ಆಕ್ಷೇಪವಿದೆ #ಉದ್ದೇಶ_ಸದುದ್ದೇಶದ್ದು #ಅಂತಿಮ_ಅನುಮೋದನೆ_ನೀಡಿದವರು #ಉಪಪ್ರಧಾನಿ_ಲಾಲ್_ಕೃಷ್ಣ_ಅಡ್ವಾನಿ #ಕಳೆದ_25_ವರ್ಷದಿಂದ_ರೈಲ್ವೆ_ಸಚಿವಾಲಯದಲ್ಲಿ #ಕಡತ_ದೂಳಲ್ಲಿ_ಬಿದ್ದಿದೆ. #ಕಾರಣ_ಏನಿರ_ಬಹುದು? #naming #ambargodlu #tumar #siganduru #cablebridge #lohiya #railwaystation #memberofparliment      ಶಿವಮೊಗ್ಗ ಜಿಲ್ಲೆಯ ಸಂಸದರು ಅಂಬಾರ್ಗೊಡ್ಲು - ಕಳಸವಳ್ಳಿ ಸೇತುವೆಗೆ ನಾಮಕರಣವಾಗಿ  #ಸಿಗಂದೂರು_ಚೌಡೇಶ್ವರಿ ಸೇತುವೆ ಎಂದು ರಾಜ್ಯ ಸರ್ಕಾರ  ಒಪ್ಪಿಗೆ ನೀಡಿದರೆ ಕೇಂದ್ರ ಸರ್ಕಾರದಿಂದ ಈಗಿನ ಹೆಸರಾದ #ಅಂಬಾರಗೊಡ್ಲುಕಳಸವಳ್ಳಿ ಸೇತುವೆ ಎಂಬ ಹೆಸರು ತಕ್ಷಣ ಬದಲಿಸುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.    ಸಂಸದರು ಹೊಸನಗರ ತಾಲೂಕಿನ ಅರಸಾಳು ರೈಲು ನಿಲ್ದಾಣದ ಹೆಸರನ್ನ #ಮಾಲ್ಗುಡಿ_ಡೇಸ್ ರೈಲು ನಿಲ್ದಾಣ ಎಂದು ಬದಲಿಸಿ ಅಲ್ಲಿ ಶಂಕರ್ ನಾಗ್ ನಿರ್ದೇಶನದಲ್ಲಿ ಚಿತ್ರಿಕರಣ ಆಗಿದ್ದ RK ನಾರಾಯಣರ ಕೃತಿ ಆಧಾರದ ಟೀವಿ ಸೀರಿಯಲ್ ಸ್ಮರಣಾರ್ಥ ರೈಲ್ವೆ ಮ್ಯೂಸಿಯಂ ಕೂಡ ಮಾಡಿದ್ದಾರೆ.      ಆದರೆ ಇಡೀ ದೇಶದಲ್ಲೇ ಪ್ರಥಮ ಗೇಣಿ ಭೂಮಿ ಹೋರಾಟವಾದ #ಕಾಗೋಡು_ಸತ್ಯಾಗ್ರಹದಲ್...