Skip to main content

Posts

Blog number 3393. ಜಾರ್ಜ್ ಪರ್ನಾಂಡಿಸರ ಗೇಟಿಲ್ಲದ ದೆಹಲಿ ಮನೆ

#ದೇಶದ_ರಕ್ಷಣಾ_ಮಂತ್ರಿ_ಆಗಿದ್ದಾಗಲೂ #ದೆಹಲಿಯ_ಜಾಜ್೯ಪರ್ನಾಂಡೀಸರ_ಮನೆಯ_ಮೈನ್_ಗೇಟ್_ಯಾಕೆ_ಇರಲಿಲ್ಲ. #ಇದಕ್ಕೊಂದು_ಕಾರಣವಿದೆ_ಅಲ್ಲೊಂದು_ಪ್ರತಿಭಟನೆ_ಇದೆ  ಕೃಷ್ಣಮೆನನ್ ಮಾರ್ಗ ದೆಹಲಿಯ ಜಾರ್ಜ್ ಪನಾ೯ಂಡೀಸರ ಮನೆ ಈ ಮನೆಯ ಗೇಟು ನಾಪತ್ತೆ ಆಗಿದ್ದ ಪ್ರಕರಣಕ್ಕೆ ಕಾರಣ ಗೊತ್ತಾ? ಅದು ಜಾರ್ಜರು ಆಡಳಿತಶಾಹಿಯ ಅಂದಾನುಕರಣೆಗೆ ನೀಡಿದ ಪ್ರಹಾರ ಮತ್ತು ದಾಖಲಿಸಿದ ಪ್ರತಿಭಟನೆಯ ಹೊಸ ಮಾದರಿ. ಸುಮಾರು ಇಪ್ಪತ್ತೊಂಬತ್ತು ವರ್ಷ ಗೇಟ್ ಇಲ್ಲದ ಮನೆಯಲ್ಲಿ ಜಾರ್ಜ್ ವಾಸವಾಗಿದ್ದರು. #govtofindia #krishnamenanmarg #DehliCapitals #GeorgeFernandis #DefenceMinisterOfIndia #RailwayMinister      ರೈಲ್ವೆಮಂತ್ರಿ ರಕ್ಷಣಾಮಂತ್ರಿ ಆದರೂ 1990ರಿಂದ 2019 ಜನವರಿ ಕೊನೆಯವರೆಗೆ ಗೇಟು ಇರಲೇ ಇಲ್ಲ.    ಅದು 1990 ಆಗ ಜಾಜ್೯ ಬಿಹಾರದಿಂದ ಲೋಕಸಭೆಗೆ ಆಯ್ಕೆ ಆಗಿದ್ದರು, ತುತು೯ ಪರಿಸ್ಥಿತಿ ನಂತರದ ಸಕಾ೯ರದಲ್ಲಿ ಕೇಂದ್ರ ಮಂತ್ರಿ ಆಗಿದ್ದಾಗಿಂದ ಅವರು ವಾಸಿಸುತ್ತಿದ್ದು ನಂ 3 , ಕೃಷ್ಣ ಮೆನನ್ ಮಾಗ್೯ ನವದೆಹಲಿ.  ಒಂದು ದಿನ ಜಾಜ್೯ರು ತಮ್ಮ ನೀಲಿ ಬಣ್ಣದ ಪಿಯಟ್ ಕಾರು ಚಲಾಯಿಸಿಕೊಂಡು ಪಾಲಿ೯ಮೆಂಟ್ ನಿಂದ ಮನೆಗೆ ಬಂದಾಗ ಜಾಜ್೯ರ ಮನೆ ಗೇಟು ಹಾಕಿತ್ತು.   ಪ್ರತಿ ದಿನ ಬೆಳಿಗ್ಗೆ 6ಕ್ಕೆ ಗೇಟು ತೆರೆದರೆ ಮಧ್ಯದಲ್ಲಿ ಹಾಕುವುದಿಲ್ಲ ಹೀಗೇಕೆ ಎಂದು ವಿಚಾರಿಸಿದಾಗ ಅವರಿಗೆ ತಿಳಿದು ಬಂದ...
Recent posts

Blog number 3392. ಬಚ್ಚಾಚಾರ್ ಪೋಟೋ

#ಈ_ಘಟನೆ_ನನಗೂ_ಅವರಿಗೂ_ವಿಶೇಷವಾಯಿತು #ಅವರ_ಜೀವಿತಾವದಿಯಲ್ಲಿ_ನಿರೀಕ್ಷೆಯೇ_ಮಾಡದ #ಅವರ_ತಂದೆ_ಪೋಟೋ_ನೋಡಿದಾಗ   1984ರಲ್ಲಿ(41 ವರ್ಷದ ಹಿಂದೆ) ನಾನು ಖರೀದಿಸಿದ್ದ ನಿಕಾನ್ ಕ್ಯಾಮೆರಾದಲ್ಲಿ ಬ್ಲಾಕ್ & ವೈಟ್ ಪೋಟೋದಲ್ಲಿ ನಾನು ಬಚ್ಚಾಚಾರ್ ಫೋಟೋ ಒಂದು ತೆಗೆದಿದ್ದೆ.     ನಮ್ಮ ಮನೆ ಪಕ್ಕದ ರಾಮಾಚಾರರ ಕುಲುಮೆಯ ಕ್ಯಾಪ್ಟನ್ ಬಚ್ಚಾಚಾರ್ ಮಗಳು ಲಲಿತಮ್ಮನಿಗೆ  ಸುಮಾರು 35 ವರ್ಷದ ನಂತರ  ಅವರ ತಂದೆಯ ಪೋಟೋ ನೋಡಿದಾಗ... #photo #memories #Anandapuram #yadehalli #gowthamapura #vishwakarma #Acharya #carpentar    ಅವರ ಉದ್ಘಾರ "ತನ್ನ ತಂದೆ ಪೋಟೋ ತನ್ನ ಜೀವಮಾನದಲ್ಲೇ ನೋಡುತ್ತೇನೆ ಅಂದು ಕೊಂಡಿರಲಿಲ್ಲ"...  35 ವರ್ಷದ ಹಿಂದೆ ಮೃತರಾದ ಅವರ ಒಂದೇ ಒಂದು ಪೋಟೋ ಇರಲಿಲ್ಲ.... ಅಂತ ಸುಮಾರು ಅನೇಕ ವಷ೯ದ ನಂತರ ನನ್ನ ಕಛೇರಿಗೆ ಬಂದಿದ್ದ ಗೌತಮಪುರದ ಲಲಿತಕ್ಕ ಕಣ್ಣೀರಾಗಿದ್ದಳು.    ಇವರ ತಂದೆ ಬಚ್ಚಾಚಾರ್ ತಾಯಿ ಪದ್ದಮ್ಮ ಕುಂದಾಪುರ ಮೂಲದವರು, ಈ ಬಚ್ಚಾಚಾರ್ ರನ್ನು ನಮ್ಮ ಪಕ್ಕದ ಮನೆಯ ರಾಮಾಚಾರ್ ತಮ್ಮ ಕುಲುಮೆ ಕೆಲಸಕ್ಕೆ ಕರೆತಂದಿದ್ದು.        ನನ್ನ ಕಥಾ ಸಂಕಲನ #ಬಿಲಾಲಿ_ಬಿಲ್ಲಿ_ಅಭ್ಯಂಜನ ದಲ್ಲಿ ಬರುವ ಒಂದು ಕಥೆಯಾದ #ಮಂಜ_ಬ್ರಹ್ಮ_ರಾಕ್ಷಸನಾದರೆ... ಕಥೆಯಲ್ಲಿ ಬಚ್ಚಾಚಾರ್ ಮತ್ತು ಆ ಕಾಲದ ಕುಲಿಮೆ ನನ್ನ ಕಣ್ಣಲ್...

Blog number 3391. ನನ್ನ 60 ವರ್ಷ ವಯಸ್ಸು ಪೂರ್ತಿ ಆದ ಕ್ಷಣ

#ಜೀವಿತಾವದಿಯ_60_ವಷ೯_ಕಳೆಯಿತು. #ನನ್ನ_ಅರವತ್ತೊಂದನೆ_ವಯಸ್ಸು_ಪ್ರಾರಂವಾಯಿತು #ನನ್ನ_ಜೀವನದ_ಹಿನ್ನೋಟ #ನನ್ನ_ಜನ್ಮ_ದಿನಾಂಕ_ಪೆಬ್ರವರಿ_9_ಮಂಗಳವಾರ_1965        ಭಾನುವಾರ 9 - ಫೆಬ್ರುವರಿ-2025  ನನ್ನ 60 ವಷ೯ದ ಆಯಸ್ಸು ದಾಟಲಿದೆ ಮತ್ತು 61 ಕ್ಕೆ ಪಾದಾರ್ಪಣ ಮಾಡಲಿದೆ.  ಈಗ  ನಾನು ಹಿರಿಯ ನಾಗರೀಕ ಎಂದು ಘೋಷಿಸಿಕೊಳ್ಳಬಹುದು.   ಅಂದರೆ ನನಗೆ ನನ್ನ ಜೀವಿತದ 60 ವರ್ಷ ಕಳೆದು 61ನೇ ವರ್ಷದ ಕಡೆ ಸಾಗಲು ಪ್ರಾರಂಭ ಆದಂತೆ. #birthdaywishes #birthdaycelebration #Age #sixty #memories #mylife #experience      ಸಾಗಿ ಬಂದ ದಾರಿಯ ಹಿನ್ನೋಟ ಮತ್ತು ಸಾಗಲಿರುವ ದಾರಿಯ ಮುನ್ನೋಟದ ಕಡೆ ಕಣ್ಣು ಹಾಯಿಸಿದರೆ ಗಳಿಸಿದ್ದೇನು? ಕಳೆದುಕೊಂಡಿದ್ದೇನು? ಎಂಬುದು ತಿಳಿಯುತ್ತದೆ.    ನಾನು ಹೋದಲ್ಲಿ ಜೀವನ ಬಂತೋ ಅಥವ ಜೀವನ ಕರೆದುಕೊಂಡು ಹೋದ ಮಾಗ೯ದಲ್ಲಿ ನಾನು ಹೋದೆನಾ? ಅಂತ ನೋಡಿದರೆ ನನ್ನ ಪ್ರಯತ್ನಗಳು ವಿಪಲವಾಗಿ,ಅದು ಹೋದಲ್ಲಿ ತಕರಾರು ಇಲ್ಲದೆ ನಾನು ಹೋದದ್ದರಿಂದ ಸಪಲತೆ ದೊರೆಯಿತೆನ್ನಿಸುತ್ತದೆ.    ಯಾವುದೂ ಅಂತ್ಯವೂ ಅಲ್ಲ... ಆರಂಭವೂ ಅಲ್ಲ... ರೂಪಾಂತರ ಮಾತ್ರ ಎಂಬಂತೆ ಉದರ ನಿಮಿತ್ತಂ ಬಹುಕೃತ ವೇಷಂ ಎಂಬಂತೆ ಅನೇಕ ಉದ್ಯೋಗಗಳನ್ನು ಮಾಡಿ ಅಪಾರ ಅನುಭವದ ಕಣಜಗಳನ್ನು ಕಟ್ಟಿದ್ದಾಯಿತು.  ಮಿತ್ರ ದ್ರೋಹದ ಫಲ ಕೂಡ ಸ್ವ...

Blog number 3390. ಪ್ಯಾರಾಚ್ಯೂಟ್ ತರಬೇತಿಯಲ್ಲಿ ದುರಂತ ಅಂತ್ಯ ಜಿ.ಎಸ್.ಮಂಜುನಾಥ್

#ಶ್ರದ್ಧಾಂಜಲಿಗಳು #ನಮ್ಮ_ಹೆಮ್ಮೆಯ_ಇಂಡಿಯನ್_ಏರ್ಫೋರ್ಸ್_ತರಬೇತಿದಾರ_ಮಂಜುನಾಥ್_ಅವರಿಗೆ  #ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲ್ಲೂಕಿನ_ಪಟಗುಪ್ಪ_ಸಮೀಪದ_ಸಂಕೂರಿನವರು #ಈ_ದಂಪತಿಗಳ_ವಿವಾಹ_2019ರಲ್ಲಿ_ನಮ್ಮ_ಕಲ್ಯಾಣ_ಮಂಟಪದಲ್ಲೇ_ನೆರವೇರಿತ್ತು.      ಆನಂದಪುರಂನ ರೈಲ್ವೆ ನಿಲ್ದಾಣದ ರಸ್ತೆಯ ಮಣಿಕಂಠ ಇಂಡಸ್ಟ್ರೀಸ್ ಮಾಲಿಕ ಕೇಶವ ಅವರು ಮಂಜುನಾಥ್ ಸಹೋದರಿ ಪತಿ (ಇವರ ಬಾವ) ನಮ್ಮೂರಲ್ಲಿ ಪಿಠೋಪಕರಣ ಇತ್ಯಾದಿ ತಯಾರಿಸುವ ಇಂಡಸ್ಟಿ  ಮಾಡಿಕೊಂಡು ಪ್ರಸಿದ್ಧರಾಗಿದ್ದಾರೆ.   ಇವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪಟಗುಪ್ಪೆ ಎಂಬ ಊರಿನ ಸಮೀಪದ ಸಂಕೂರು ಎಂಬ ಹಳ್ಳಿಯವರು. #agraairforce #juniorwarrantofficer #indianairforce #shivamogga #hosanagara #manjunathgs #parachutes     ಇವರ ಪರಿಚಯ ನನಗೆ 2019ರ ಪ್ರಾರಂಭದಲ್ಲಿ ಆಯಿತು ಆಗ ಅವರು ತಮ್ಮ ಜೊತೆ ಏರ್ಪೋರ್ಸನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಅಸ್ಸಾಂ ಮೂಲದ ಕಲ್ಪಿತಾ ಎಂಬ ಯುವತಿ ಜೊತೆ ಪ್ರೇಮ ವಿವಾಹದ ತಯಾರಿ ನಡೆಸಿದ್ದರು.    ಇವರ ಪತ್ನಿ ಶ್ರೀಮತಿ ಕಲ್ಪಿತಾ ಕೂಡ ಭಾರತೀಯ ಏರ್ಪೋರ್ಸ್ ಟ್ರೈನಿಂಗ್ ಅಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.    ಇವರ ಬಾವಿ ಪತ್ನಿ ತಂದೆ ತಾಯಿಯನ್ನ ಇವರ ಕುಟುಂಬದ ಪರಿಚಯ ಮಾಡಿಸಲು ಮತ್ತು ವಿವಾಹದ ಮಾತುಕಥೆಗಾಗಿ ಕರೆತಂದಿದ್ದ...

Blog number 3389. ತೀರ್ಥಹಳ್ಳಿ ಧರ್ಮ ಕುಮಾರ್

#ತೀರ್ಥಹಳ್ಳಿ_ದಮ೯ಕುಮಾರ್ #ಕ್ರಿಯಾಶೀಲ_ವ್ಯಕ್ತಿ #ಸಮಾಜ_ಮುಖಿ_ಕಾರ್ಯದಲ್ಲಿ_ಸದಾ_ಮುಂದೆ    2019 ರಲ್ಲಿ  ರಾತ್ರಿ ನಮ್ಮ ಊರಿನ ವರಸಿದ್ಧಿವಿನಾಯಕ ಸ್ವಾಮಿ ಜಾತ್ರೆ ಮುಗಿಸಿ ನಾನು ಮನೆಗೆ ಬಂದು ಕುಳಿತಿದ್ದಾಗ ಧರ್ಮ ಕುಮಾರ್ ಬಂದಾಗ ತೆಗೆದ ಫೋಟೋ ಇದು.  ಈ ಬೇಟಿ ಸುಮಾರು 19 ವಷ೯ಗಳ ನಂತರದ ನನ್ನ ಮತ್ತು ಇವರ ಬೇಟಿ. #thirthahalli #sagar #krishi #AgricultureDepartment #darmakumar #sahityaparishath        ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನನ್ನ ಭಾಗದಲ್ಲಿನ ಉತ್ಸಾಹಿ ಮತ್ತು ಪ್ರಾಮಾಣಿಕ ಕೃಷಿ ಸೇವಕರಾಗಿ ಜನಾನುರಾಗಿಗಳಾಗಿದ್ದವರು.    ರೈತ ಸ್ನೇಹಿ ಆಗಿದ್ದ ಇವರಂತಹ ಕೃಷಿ ಸೇವಕರನ್ನ ನಾನು ಈ ವರೆಗೆ ನೋಡಿಲ್ಲ.   ಈಗೆಲ್ಲ ಕೃಷಿ ಸೇವಕರು ಯಾರೂ ಅಂತಲೇ ನನಗೆ ಗೊತ್ತಿಲ್ಲ.     ಆನಂದಪುರಂನಲ್ಲಿ ಆ ದಿನಗಳಲ್ಲಿ ನಾವೆಲ್ಲ ಯುವಕರು ಹಮ್ಮಿಕೊಳ್ಳುತ್ತಿದ್ದ ಯುವಜನ ಮೇಳ, ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪದೆ೯, ಮೋದಿ ಡಾಕ್ಟರ್ ಕಣ್ಣಿನ ಶಸ್ತ್ರಚಿಕಿತ್ಸಾ ಶಿಭಿರಗಳು ಯಶಸ್ವಿಗೊಳಿಸುವಲ್ಲಿ ತೆರೆ ಮರೆಯಲ್ಲಿ ಈ ದಮ೯ಕುಮಾರರ ಶ್ರಮ ಇರುತ್ತಿತ್ತು.      ಇವರ ಕಿರಿಯ ಸಹೋದರ ಶಿವಮೊಗ್ಗದ ಖ್ಯಾತ ವಕೀಲರಾದ ಜಿ.ನಾಗೇಶನ್ ನನಗೆ ಹಳೆ ಗೆಳೆಯರು.    ನಂತರ ಇವರ ಗೆಳೆತನ ಆಯಿತು, ದರ್ಮ ಕುಮಾರ್ ...

Blog number 3388. ರೈತ ನಾಯಕ H.R. ಬಸವರಾಜಪ್ಪ ಶಿವಮೊಗ್ಗ

#ಹಸಿರು_ಹಾದಿಯ_ಕಥನ #ರೈತ_ನಾಯಕ_ಹೆಚ್_ಆರ್_ಬಸವರಾಜಪ್ಪನವರ #ಆತ್ಮಕಥೆ   ಮೊನ್ನೆ ಶಿವಮೊಗ್ಗದಲ್ಲಿ ಹಿರಿಯ ಸಮಾಜವಾದಿ ಪಿ.ಪುಟ್ಟಯ್ಯನವರ ಬೇಟಿಗೆ ಹೋದಾಗ ಅವರು ಈ ಪುಸ್ತಕ ನೀಡಿದ್ದರು.   ಕರ್ನಾಟಕ ರಾಜ್ಯದ ರೈತ ಚಳವಳಿಯ ತವರು ಶಿವಮೊಗ್ಗ ಇಲ್ಲಿಯೇ ಕರ್ನಾಟಕ ರಾಜ್ಯ ರೈತ ಸಂಘ ಸಂಸ್ಥಾಪಕ ಅಧ್ಯಕ್ಷ ರುದ್ರಪ್ಪನವರ ನೇತೃತ್ವದಲ್ಲಿ ಜನಿಸಿದ್ದು ಇತಿಹಾಸ. #FarmersProtest #RaithaSangha #hrbasavarajappa #shivamogga    ಶಿವಮೊಗ್ಗ ಜಿಲ್ಲೆಯ ಸುಂದರೇಶ್, ಕಡಿದಾಳು ಶಾಮಣ್ಣರ ಸಾಲಿನಲ್ಲಿ ಈ ಚಳವಳಿಯ ನೇತೃತ್ವ ವಹಿಸಿ ರೈತ ಚಳವಳಿ ಮುನ್ನಡೆಸಿದ್ದ ರೈತ ನಾಯಕರಾದ ಕೆ.ಟಿ.ಗಂಗಾಧರ್ ಮತ್ತು ಹೆಚ್.ಆರ್.ಬಸವರಾಜಪ್ಪರ ಹೋರಾಟಗಳು ಅಸಂಖ್ಯ.      ಜನಪರ ಹೋರಾಟಗಳು ಮತ್ತು ಅದರ ಮುಖಂಡತ್ವ ವಹಿಸಿದವರ ವಿವರಗಳು ಪುಸ್ತಕವಾಗಿ ಬರಬೇಕು ಆ ನಿಟ್ಟಿನಲ್ಲಿ ಬಸವರಾಜಪ್ಪನವರ ಆತ್ಮಚರಿತ್ರೆ ಬಂದಿರುವುದು ಖುಷಿ ಪಡುವಂತ ವಿಚಾರ.   ಹೊಸನಗರ ವಿಧಾನ ಸಭಾ ಕ್ಷೇತ್ರದಿಂದ ರೈತ ಸಂಘದಿಂದ ಬಸವರಾಜಪ್ಪನರು ಶಾಸಕರಾಗುತ್ತಾರೆಂದು ಆಸೆ ಪಟ್ಟವರಲ್ಲಿ ನಾನೂ ಒಬ್ಬನಾಗಿದ್ದೆ.

Blog number 3387. ಮಂಗಳೂರಿನ ಯೆನೆಪೋಯ ಆಸ್ಪತ್ರೆ

#ಯೆನೆಪೋಯ_ವಿಶ್ವವಿದ್ಯಾಲಯ #ಮಂಗಳೂರಿನ_ಯೆನೆಪೋಯ_ಆಸ್ಪತ್ರೆ #ನಮ್ಮ_ರಾಜ್ಯ_ಮಾತ್ರವಲ್ಲ_ಕೇರಳ_ರಾಜ್ಯದಲ್ಲೂ_ಪ್ರಸಿದ್ಧಿ_ಪಡೆದಿದೆ. ಇದನ್ನು 2008 ರಲ್ಲಿ ಯೆನೆಪೋಯ ವಿಶ್ವವಿದ್ಯಾಲಯವಾಗಿ ಸ್ಥಾಪಿಸಲಾಯಿತು.  1992 ರಲ್ಲಿ ಯೆನೆಪೋಯ ದಂತ ಕಾಲೇಜು ಪ್ರಾರಂಭವಾದಾಗಿನಿಂದ ಅನೇಕ ಕಾಲೇಜುಗಳು ಸರಣಿಯಲ್ಲಿ ಪ್ರಾರಂಭವಾದವು.   ವಿಶ್ವವಿದ್ಯಾನಿಲಯವು ವೈದ್ಯಕೀಯ, ದಂತ, ಸಂಬಂಧಿತ ಆರೋಗ್ಯ ವಿಜ್ಞಾನಗಳು, ಭೌತಚಿಕಿತ್ಸೆ, ಫಾರ್ಮಸಿ, ನರ್ಸಿಂಗ್ , ಆಯುರ್ವೇದ, ಹೋಮಿಯೋಪತಿ, ಪ್ರಕೃತಿ ಚಿಕಿತ್ಸೆ, ಎಂಜಿನಿಯರಿಂಗ್ ಮತ್ತು ಕಲೆ, ವಿಜ್ಞಾನ, ವಾಣಿಜ್ಯ ಮತ್ತು ನಿರ್ವಹಣೆಗಾಗಿ ವಿವಿಧ ಘಟಕ ಕಾಲೇಜುಗಳನ್ನು ಹೊಂದಿದೆ.     ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ತಲುಪಲು ರೋಗಿಗಳಿಗೋಸ್ಕರ ರಾಜ್ಯ ಸಾರಿಗೆ  ಬಸ್ಸುಗಳನ್ನು ಕೂಡ ಬಿಡಲಾಗಿದೆ ಅಂದರೆ ಈ ಯೆನೆಪೋಯ ಆಸ್ಪತ್ರೆ ಎಷ್ಟು ಪ್ರಸಿದ್ಧಿ ಪಡೆದಿದೆ ಎಂದು ಅರ್ಥವಾದೀತು. #yenepoyauniversity #yenepoyahospital #Mangalore #medicaleducation #nursingschool   ಯೆನೆಪೋಯ ಆಸ್ಪತ್ರೆಯ ಹಾಲಿ ಚೇರ್ಮನ್ ಶ್ರೀಯೆನೆಪೋಯ ಅಬ್ದುಲ್ ಕುಂಜ್ಞ ಇವರು ಜನಿಸಿದ್ದು 1947 ರಲ್ಲಿ.   ಇವರ ವಿದ್ಯಾಭ್ಯಾಸ ಮೈಸೂರು ಯುನಿವರ್ಸಿಟಿಯಲ್ಲಿ ಬಿಎ, 1992 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡ...