Skip to main content

Posts

Blog number 3322. ಖ್ಯಾತ ಪತ್ರಕರ್ತರುದ್ರಪ್ಪ ಚನ್ನಬಸಪ್ಪ

#ರುದ್ರಪ್ಪಚನ್ನಬಸಪ್ಪ #ಉದಯ_TVಯ_ಮೊದಲ_ಬ್ಯೂರೋ_ಚೀಪ್ #ಸಾಗರ_ತಾಲೂಕಿನ_ವಿಚಾರ_ಕ್ರಾಂತಿಯ_ಪಿತಾಮಹಾ #ಶರಾವತಿ_ನದಿ_ಮುಳುಗಡೆ_ಸಂತ್ರಸ್ಥರು  #ಸೊನ್ನೆಯಿಂದ_ದೊಡ್ಡ_ಸಾದನೆಗೈದ_ಸಾದಕರು. #UdayaTV #karnataka #journalism #DSS #socialist #press #sagar #shivamogga    70 ರ ದಶಕದಲ್ಲಿ ಸಮಾಜವಾದಿ ಯುವಜನ ಸಭಾದ ಸಕ್ರಿಯ ಕಾರ್ಯಕರ್ತರು ರುದ್ರಪ್ಪನವರು.    80ರ ದಶಕದಲ್ಲಿ ಸಾಗರ ತಾಲ್ಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ದಲಿತ ಸಂಘರ್ಷ ಸಮಿತಿ ಸಂಘಟಿಸಿದವರು.    ತೀ.ನಾ.ಶ್ರೀನಿವಾಸ್, ಶಿವಾನಂದ ಕುಗ್ವೆ, ಅದರಂತೆ ವಿಶ್ವನಾಥ್, ರಿಕ್ಷಾ ಮೋಹನ್, ಪೆಡರಿಕ್ , ಮಂಡಗಳಲೆ ನಾರಾಯಣಪ್ಪ, ಎಸ್.ಎಸ್.ನಾಗರಾಜ್,ವಸಂತಕುಗ್ವೆ  ಇವರನ್ನೆಲ್ಲ ಹೋರಾಟದ ಸಾಗರಕ್ಕೆ ದುಮುಕಲು ಈ ರುದ್ರಪ್ಪರ ಪ್ರೇರಣೆ ಕೂಡ ಆಗಿತ್ತೆಂಬುದು ಮರೆಯುವಂತಿಲ್ಲ.    ದಲಿತ ಸಂಘರ್ಷ ಸಮಿತಿಯ ಬಿ .ಕೃಷ್ಣಪ್ಪರಿಂದ ಶಿವಮೊಗ್ಗದ ಪ್ರೋ. ರಾಚಪ್ಪನವರು ಸಾಗರದ ಸಾಗರ್ ಹೋಟೆಲ್ ವೃತ್ತದ GGMS ಶಾಲೆಯಲ್ಲಿ ಸಂಜೆ ಹೊತ್ತಿಗೆ ಏರ್ಪಡಿಸುತ್ತಿದ್ದ ತರಬೇತಿ ಶಿಬಿರ ನನ್ನನ್ನೂ ಹೋರಾಟದ ಹಾದಿಗೆ ಹೊರಳಲು ಕಾರಣವಾಗಿತ್ತು.    ನಂತರ ದಿಡೀರನೆ 1984 ರ ನಂತರ ರುದ್ರಪ್ಪ ಸಾಗರದಿಂದ ನಾಪತ್ತೆ ನಂತರ 90 ರ ದಶಕದಲ್ಲಿ ಕನ್ನಡದ ಏಕೈಕ TV ಸಂಸ್ಥೆ ಬ್ಯೂರೋ ಚೀಪ್ ಆಗಿ ರುದ್ರಪ್ಪನವರು ಉದಯ TV ಪರದೆ ಮೇಲೆ ನೋಡಿದ...
Recent posts

Blog number 3321. ಮರಕಿಣಿ ನಾರಾಯಣ ಮೂರ್ತಿ

#ಮರಕಿಣಿ_ನಾರಾಯಣಮೂರ್ತಿಗಳು #ನಮ್ಮಿಬ್ಬರ_ಮುಖತಃ_ಬೇಟಿಗೆ_ಮಹೂರ್ತ_ಯಾವಾಗ ? #marakininarayanamurthy #facebookpost #tkrameshshetty #ninasam #kannada #drama #yakshgana #tvserial    ಸದಾ ನಗುಮೊಗದ ಕನ್ನಡದ ಸಾಹಿತಿಗಳಿಗೆ, ಯಕ್ಷಗಾನ - ನಾಟಕ - ದಾರಾವಾಹಿಗಳ ಲೋಕದವರಿಗೆ ಚಿರಪರಿಚಿತರು ಮರಕಿಣಿ ನಾರಾಯಣ ಮೂರ್ತಿಯವರು.  ಪ್ರತಿ ವರ್ಷ ನಮ್ಮ ಸಾಗರ ತಾಲ್ಲೂಕಿನ ಹೆಗ್ಗೋಡಿನ ನಿನಾಸಂ - ತುಮರಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದ ಕಾರ್ಯಕ್ರಮಕ್ಕೆ ತಪ್ಪದೆ ಬಂದು ಹೋಗುತ್ತಾರೆ.     ಆದರೂ ನಮ್ಮಿಬ್ಬರ ಬೇಟಿಗೆ ಮಹೂರ್ತ ಮೂಡಿಬಂದಿಲ್ಲ ಆದ್ದರಿಂದ ನಾನು ಅವರಿಗೆ ನನ್ನ ಸಂದೇಶ ಕಳಿಸಿದ್ದೇನೆ ... "ಸರ್ ನಾನು ನಿಮ್ಮ ಅಭಿಮಾನಿ ನನಗೂ ನಿಮ್ಮ ಅನಿರೀಕ್ಷಿತ ಬೇಟಿಯಲ್ಲಿ ಮುಖಾಮುಖಿ ಆಗಲಾಗದ್ದು ಬೇಸರ ಅನ್ನಿಸಿತು, ಅನೇಕ ವರ್ಷದಿಂದ ಬೇಟಿಯ ನಿರೀಕ್ಷೆ ಮುಂದು ಮುಂದು ಹೋಗುತ್ತಿದೆ ಆದ್ದರಿಂದ ಮುಂದಿನ ಬಾರಿ ಹೀಗೆ ದಿಡೀರ್ ಬರಬೇಡಿ,ಒಂದು ದಿನ ನನ್ನ ಅತಿಥಿ ಆಗಿ ಉಳಿದು ಹೋಗುವಂತೆ ಬಿಡುವು ಮಾಡಿಕೊಂಡು ಬನ್ನಿ ಮತ್ತುಬರಲೇ ಬೇಕು" ಅಂತ.     ನನ್ನ ಅಣ್ಣನಂತೆ ಇರುವ ಇವರು ನನ್ನಂತೆ ಪಂಚೆದಾರಿಗಳು ಆದರೆ ಬಾಯಿ ತುಂಬಾ ನನಗೆ "ಅರುಣಣ್ಣ" ಅನ್ನುತ್ತಾರೆ ಅದೊಂದು ತರ ಅಪ್ಯಾಯವಾಗಿ ನನಗೆ ಕೇಳುತ್ತದೆ ಮತ್ತು ಇಷ್ಟ ಆಗಿದೆ, ನಮ್ಮಿಬ್ಬರನ್ನ ಗೆಳೆಯರನ್ನಾಗಿ ಮಾಡಿದ ಪೇಸ್ ಬುಕ್ ಗೆ ಎಷ್ಟು ಧ...

Blog number 3320. ಅಡಿಕೆ ಇತಿಹಾಸದ ಶಾಸನಗಳಲ್ಲಿ

#ಅಡಿಕೆ #ಹತ್ತನೆ_ಶತಮಾನದಲ್ಲಿನ_ಶಾಸನಗಳಲ್ಲಿ_ಅಡಿಕೆ_ಉಲ್ಲೇಖ #ಈಗಿನ_ಶಿಕಾರಿಪುರ_ತಾಲ್ಲೂಕಿನ_ಕಪ್ಪನಹಳ್ಳಿ #ಹೊನ್ನಾಳಿ_ತಾಲ್ಲೂಕಿನ_ನ್ಯಾಮತಿಯ_ಅಡಿಕೆಗೆ_ಹೆಚ್ಚು_ಬೇಡಿಕೆ_ಇತ್ತು. #ಸಂಶೋದಕರಾದ_ರಮೇಶ್_ಹಿರೇಜಂಬೂರ್_ಶಾಸನಗಳಲ್ಲಿ_ಅಡಿಕೆ_ಉಲ್ಲೇಖದ_ಬಗ್ಗೆ_ಬರೆದಿದ್ದಾರೆ. #areca #rameshhirejamburu #centuries #history #kappanalli #nyamathi      ಶಿರಾಳಕೊಪ್ಪದ ರಮೇಶ್ ಹಿರೇಜಂಬೂರ್ ನಮ್ಮ ಜಿಲ್ಲೆಯ ಖ್ಯಾತ ಇತಿಹಾಸ ಸಂಶೋದಕರು ಅವರು ಕದಂಬರ ತಾಳಗುಂದದ ಶಾಸನಗಳ ಸಂಶೋದನೆಗಾಗಿ ಹೆಚ್ಚು ಶ್ರಮಪಟ್ಟಿದ್ದಾರೆ.   ಅವರು ಅಡಿಕೆಗಳ ಉಲ್ಲೇಖ 10 ನೇ ಶತಮಾನ ಮತ್ತು 12 ನೇ ಶತಮಾನದ ಶಾಸನಗಳಲ್ಲಿ ಇರುವುದು ಸಂಗ್ರಹಿಸಿ ಸಂಶೋದನೆ ಮಾಡಿ ಪ್ರಕಟಿಸಿದ್ದಾರೆ ಅವರನ್ನ ಅಡಿಕೆ ಬೆಳೆಗಾರರು ಮತ್ತು  ಅಡಿಕೆ ಸಂಸ್ಕರಣ -ಮಾರಾಟ ಸಂಸ್ಥೆಗಳು ಅಭಿನಂದಿಸಬೇಕು.   #10ನೇ_ಶತಮಾನದಲ್ಲಿ_ನಮ್ಮ_ಜಿಲ್ಲೆಯ_ಶಿಕಾರಿಪುರ_ತಾಲ್ಲೂಕಿನ_ಕಪ್ಪನಳ್ಳಿ ಊರಿನ ಅಡಿಕೆ ಮತ್ತು ಹೊನ್ನಾಳಿ ತಾಲ್ಲೂಕಿನ ನ್ಯಾಮತಿ ಅಡಿಕೆಗೆ ಹೆಚ್ಚು ಬೇಡಿಕೆ ಇತ್ತೆಂಬ ಐತಿಹಾಸಿಕ ದಾಖಲೆ.   #12ನೇ_ಶತಮಾನದ_ಶಾಸನದಲ್ಲಿ_ಗೋಟು_ಅಡಿಕೆಯ_ಉಲ್ಲೇಖ   ಅಡಿಕೆ ಕೃಷಿ ಈಗ ವಾಣಿಜ್ಯ ಬೆಳೆಯಾಗಿ ರೈತರ ವರವಾಗಿ ಪರಿಣಮಿಸಿದೆ. ಇತಿಹಾಸ ಪುಟಗಳಲ್ಲಿ ಸಾವಿರಾರು ವರುಷಗಳಿಂದ ಈ ಭಾಗದಲ್ಲಿ ಅಡಿಕೆ ಮರಗಳ ಉಲ್ಲೇಖವಿದೆ.     #ಪೊನ್ನನ_ಶ...

Blog number 3319. ಕೆಂಪಿ ಶಾಪ

#ಕೆಳದಿ_ಅರಸರಿಗೆ_ಶಾಪ!? #ಕಾಳುಮೆಣಸಿನ_ರಾಣಿ_ಬಂದನ_ವಿರೋಧಿಸಿ #ಅಂತಿಮ_ಕ್ಷಣದವರೆಗೆ_ಕವಣೆ_ಕಲ್ಲಿಂದ_ದಾಳಿ_ಮಾಡಿದ_ಕುಣುಬಿ_ಜನಾಂಗದ_ಸೈನಿಕರು #ಕುಣುಬಿ_ಜನಾಂಗದ_ಕೆಂಪಿ_ಕೆಳದಿ_ಅರಸರಿಗೆ_ಹಾಕಿದ_ಶಾಪ #ಕುಣುಬಿ_ಜನಾಂಗದ_ಸ್ವಾಮಿ_ನಿಷ್ಟೆಗೆ_ಪ್ರತೀಕವಾದ_ಇತಿಹಾಸದ_ದಾಖಲೆ #ಯಮ_ಸಲ್ಲೇಖನ_ವೃತ_ಪಾಲಿಸಿ_ಇಕ್ಕೇರಿ_ಕೋಟೆಯಲ್ಲಿ_ಜಿನೈಕ್ಯಳಾಗುವ_ರಾಣಿಚೆನ್ನಬೈರಾದೇವಿ. #gerusoppe #keladi #kunubi #tribals #ikkerifort #avinahalli #chennabyaradevi       ಶರಾವತಿ ನದಿ ದಂಡೆಯ ಏಕೈಕ ಸಾಮ್ರಾಜ್ಯವಾದ ಗೇರುಸೊಪ್ಪೆ ಸಾಮ್ರಾಜ್ಯವನ್ನು 54 ವರ್ಷವಾಳಿದ ಜೈನ ರಾಣಿ ಚೆನ್ನಬೈರಾದೇವಿಯನ್ನು ಯುರೋಪಿನವರು ಕಾಳುಮೆಣಸಿನ ರಾಣಿ ಎಂದೇ ಕರೆದರು.    ವರದಾನದಿ ದಂಡೆಯ ಕೆಳದಿ ರಾಜವಂಶದ 43 ವರ್ಷ ಆಳ್ವಿಕೆ ಮಾಡುವ, ಸಾಗರ ಪಟ್ಟಣ ಸದಾಶಿವ ಸಾಗರ  ನಿರ್ಮಿಸಿದ ರಾಜ ಹಿರಿಯ ವೆಂಕಟಪ್ಪ ನಾಯಕ ರಾಣಿ ಚೆನ್ನಾಬೈರಾದೇವಿಯನ್ನು ಗೇರುಸೊಪ್ಪೆಯಲ್ಲಿ ಬಂದಿಸಿ ಇಕ್ಕೇರಿ ಕೋಟೆಯ ಜೈಲಿಗೆ ಕರೆತರುತ್ತಾರೆ.    ಇದನ್ನು ವಿರೋಧಿಸಿ ಕೊನೆ ತನಕ ಹೋರಾಟ ಮಾಡಿದವರು ಗುಡ್ಡಗಾಡು ಜನಾಂಗದ ಸ್ವಾಮಿ ನಿಷ್ಟೆಗೆ ಹೆಸರಾದ ಕುಣುಬಿ ಜನಾಂಗದವರು.    ಕಣಿವೆಯ ಮೇಲಿಂದ ಕವಣೆ ಕಲ್ಲಿನಿಂದ ದಾಳಿ ಮಾಡುವ ಕುಣುಬಿ ಜನಾಂಗದ ಪ್ರಜೆಗಳ ಹೋರಾಟದ ವಿವರಗಳು ಈ ಘಟನೆ ನಡೆದ ಸಾಗರ ತಾಲ್ಲೂಕಿನವರೇ ಆದ ನಮಗೆ ಗೊತ್ತೇ...

Blog number 3318. ಇತಿಹಾಸ ಸಂಶೋದಕ ರಮೇಶ್ ಹಿರೇಜಂಬೂರು

#ನಿನ್ನೆಯ_ಸಂಜೆ_ಅವಿಸ್ಮರಣೀಯಗೊಳಿಸಿದ #ಇತಿಹಾಸ_ಸಂಶೋಧಕ_ರಮೇಶ್_ಹಿರೇಜಂಬೂರ್ #ನಾನು_ಇವರ_ಅಭಿಮಾನಿ. #historian #rameshhirejamburu #kadamba #talagunda #kannada #shilashasana   ನಿನ್ನೆ ಸಂಜೆ ರಮೇಶ್ ಹಿರೇಜಂಬೂರ್ ನನ್ನ ಕಛೇರಿಗೆ ಬಂದಿದ್ದರು ಇದು ನನ್ನ ಅವರ ಮೊದಲ ಮುಖತಃ ಬೇಟಿ.    ಶಿವಮೊಗ್ಗ ಜಿಲ್ಲೆಯ ಖ್ಯಾತ ಇತಿಹಾಸ ಸಂಶೋದಕರಾದ  ಇವರ ಪೇಸ್ ಬುಕ್ ನ ಎಲ್ಲಾ ಲೇಖನ ತಪ್ಪದೆ ಓದುತ್ತೇನೆ ನಾನು ಇವರ ಸಂಶೋದನಾ ಲೇಖನಗಳ ಅಭಿಮಾನಿ.    ರಮೇಶ್ ಹಿರೇಜಂಬೂರ್ ಮತ್ತು ನವೀನ್ ಶಿರಾಳಕೊಪ್ಪ ಇವರಿಬ್ಬರು ತಾಳಗುಂದದ ಮೊದಲ ಕನ್ನಡ ಶಾಸನದ ಸಂಶೋಧನೆಯಲ್ಲಿ ಹೆಚ್ಚು ಶ್ರಮವಹಿಸಿದವರು ಇದಕ್ಕಾಗಿ ರಾಜ್ಯದ ಕನ್ನಡಿಗರು ಇವರನ್ನು ಅಭಿನಂದಿಸಬೇಕು.    ನಿನ್ನೆಯ ಸಂಜೆ ನನ್ನ ಕಛೇರಿಯಲ್ಲಿ ಜಿಲ್ಲೆಯ ಇತಿಹಾಸದ ವಿಚಾರವಾಗಿ ತುಂಬಾ ಹೊತ್ತು ಮಾತಾಡಿದೆವು ಇವರ ಪತ್ನಿ ತವರೂರು ಹೊಸನಗರದ ಸೋನಲೆಗೆ ಹೊರಡುವ ತನಕ.      ನನ್ನ ಕಾದಂಬರಿ #ಬೆಸ್ತರ_ರಾಣಿ_ಚಂಪಕಾ ಹಿಂದೆಯೇ  ಓದಿದ್ದಾರೆ, ಆ ಪುಸ್ತಕದ ವಿಚಾರವಾಗಿ ಕೆಲವು ಕಂತುಗಳ ನನ್ನ ಸಂದರ್ಶನ ಪೇಸ್ ಬುಕ್ ನಲ್ಲಿ ಪ್ರಕಟಿಸಲಿದ್ದಾರೆ.    ಚಹಾ ಮತ್ತು ಮಿರ್ಚಿ ಬೊಂಡದ ಆತಿಥ್ಯ ನೀಡಿದೆ ಹೊರಡುವಾಗ ನನ್ನ ಸಣ್ಣ ಕಥೆಗಳ #ಬಿಲಾಲಿ_ಬಿಲ್ಲಿ_ಅಭ್ಯಂಜನ ಕಥಾ ಸಂಕಲನ ನೀಡಿ ಸೆಲ್ಪಿ ತೆಗೆದುಕೊಂಡು ಬಿಳ್ಕೊಟ್ಟೆ. ...

Blog number 3317. ಚಿತಾಗಾರದ ಮುಂದೆ ಕೊರಾನಾ ಕಾಲದಲ್ಲಿ ಹೌಸ್ ಫುಲ್ ಬೋರ್ಡ್

#ಚಿತಾಗಾರಗಳು_ಹೌಸ್_ಪುಲ್_ಬೋರ್ಡ್_ಹಾಕಿದ್ದವು #ಇಂತಹ_ಘಟನೆ_ನಾಲ್ಕು_ವರ್ಷದ_ಹಿಂದೆ_ನಮ್ಮ_ದೇಶದಲ್ಲಿ_ನಡೆದಿತ್ತು #ಈಗ_ನಮಗೇ_ನಂಬಲು_ಆಗುತ್ತಿಲ್ಲ #ಕೊರಾನಾದಿಂದ_ಸತ್ತವರ_ಸಂಖ್ಯೆ_ಎಷ್ಟು? #housefullboard #cremetory   #covid19 #corana    ಹಾಗಾದರೆ ಕೋರಾನಾ ಕಾಲದಲ್ಲಿ ಸತ್ತವರ ಸಂಖ್ಯೆ ಎಷ್ಟು?...      ಅಕ್ಟೋಬರ್ 2021 ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು COVID-19 ಗೆ ನೇರವಾಗಿ ಮತ್ತು ಪರೋಕ್ಷವಾಗಿ ಸಂಬಂಧಿಸಿರುವ 4.7 ಮಿಲಿಯನ್(47 ಲಕ್ಷ ಸಾವು ) ಹೆಚ್ಚುವರಿ ಸಾವುಗಳು ಭಾರತದಲ್ಲಿ ಸಂಭವಿಸಿವೆ ಎಂದು ಅಂದಾಜಿಸಿದೆ.  ಭಾರತದಲ್ಲಿ ಕೋವಿಡ್-19 ನಿಂದ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ? ಇದು ಉತ್ತರಿಸಲು ತುಂಬಾ ಕಷ್ಟಕರವಾದ ಪ್ರಶ್ನೆ.    ದಾಖಲಾದ 220,000 ಸಾವುಗಳು (ಮೇ 3 ರ ಹೊತ್ತಿಗೆ) ಸ್ವತಃ ಒಂದು ಭಯಾನಕ ದುರಂತವಾಗಿದೆ. ಆದರೆ ದೇಶಾದ್ಯಂತದ ಹಲವಾರು ವರದಿಗಳು ದಾಖಲಾದ ಸಾವುಗಳು ಸಂಪೂರ್ಣ ಕಥೆಯಲ್ಲ ಎಂದು ದೃಢಪಡಿಸುತ್ತವೆ.   ಸ್ಮಶಾನವೊಂದರಲ್ಲಿ ಕೆಲಸ ಮಾಡುವ ಒಬ್ಬ ಸಿಬ್ಬಂದಿ ತಮ್ಮ ಜೀವನದಲ್ಲಿ ಇದೇ ಮೊದಲ ಬಾರಿಗೆ ಅಂತ್ಯಕ್ರಿಯೆ ಕೇಂದ್ರಗಳಲ್ಲಿ ಇಷ್ಟೊಂದು ಜನದಟ್ಟಣೆಯನ್ನು ನೋಡಿದ್ದಾರೆ . "ನಾನು ಸುಮಾರು 40 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಇಷ್ಟೊಂದು ದೊಡ್ಡ ಸಂಖ್ಯೆಯ ಶವಗಳನ್ನು ಅಂತ್ಯಕ್ರಿಯೆ ಕೇಂದ್ರಗಳಿಗೆ ತರುವುದನ್ನು ನ...

Blog number 3316. 2025 ಮೇ ತಿಂಗಳ ಭಾರತ ಪಾಕಿಸ್ಥಾನ ಯುದ್ಧ ಅಮೇರಿಕಾ ಅಧ್ಯಕ್ಷ ಟ್ರಂಪ್ ನಿಲ್ಲಿಸಿದರು

#ಖ್ಯಾತ_ಲೇಖಕ_ಅಂಕಣಕಾರರಾದ_ಅರವಿಂದಚೊಕ್ಕಾಡಿ #ಅವರ_ಫೇಸ್_ಬುಕ್_ಪೇಜಿನಲ್ಲಿ_ಕೇಳಿದ_ನನ್ನ_ಪ್ರತಿಕ್ರಿಯೆ #ಇಲ್ಲಿ_ಇನ್ನೊಮ್ಮೆ https://www.facebook.com/share/p/1QFSmbYTvN/ #indiavspakistan #warzone #america #PresidentTrump #narendramodi_primeminister #AravindChokkadi #facebookpost    ಅರವಿಂದ ಚೊಕ್ಕಾಡಿ ಅವರೆ ನೀವು  ನನ್ನ ಪ್ರತಿಕ್ರಿಯೆ ಕೇಳಿದ್ದೀರಿ...    ದೇಶದ ಹಿಂದಿನ ಸರ್ಕಾರಗಳು ಮತ್ತು ಅದರ ಚುಕ್ಕಾಣಿ ಹಿಡಿದಿದ್ದ ಎಲ್ಲಾ ಪ್ರದಾನ ಮಂತ್ರಿಗಳೂ ಭಾರತ ದೇಶದ ರಕ್ಷಣೆಗೆ ಮತ್ತು  ಸಾರ್ವಬೌಮತೆಗೆ ಅವರವರ ಅಂದಿನ ಪರಿಸ್ಥಿತಿ ಮತ್ತು ದೇಶದ ಆದಾಯ ಬಳಸಿ ಪ್ರಾಮಾಣಿಕ ಕೆಲಸ ಮಾಡಿದ್ದಾರೆ.     ಹಿಂದಿನ ಅವಧಿಯಲ್ಲಿ ನಾವು ಸಂಗ್ರಹಿಸುವ ಗುಪ್ತಚಾರ ಮಾಹಿತಿ ಮತ್ತು ಶಸ್ತ್ರಾಸ್ತ್ರಗಳು ಮುಂದಿನ ಅವದಿಯಲ್ಲಿ ಬಳಕೆ ಆಗಲೇ ಬೇಕು ಆದ್ದರಿಂದ ದೇಶದ ಎಲ್ಲಾ ಚುನಾಯಿತ ಸರ್ಕಾರಗಳೂ ದೇಶದ ಜನರ ಹಿತ ಚಿಂತಕರೆ ಅನ್ನಬೇಕಲ್ಲವೇ...   ಈಗಿನ ಯುದ್ಧದಲ್ಲಿ ಅಂತಹ ಕೊರತೆ ಆಗುವುದಿಲ್ಲ ಕಾರಣ ಆಹಾರ ದಾಸ್ತಾನು - ಇಂಧನ ದಾಸ್ತಾನುಗಳು ಸಾಕಷ್ಟು ಇರುವ ವ್ಯವಸ್ಥೆಗಳಿದೆ, ಉಕ್ರೇನ್ ಯುದ್ಧ ಪೀಡಿತ ದೇಶವಾದರೂ ಅಲ್ಲಿ ಸರಿ ಸಮಯದಲ್ಲಿ ರೈಲು ಸಂಚರಿಸುತ್ತಿದೆ ಅಂದರೆ ಈಗಿನ ಯುದ್ಧ ಶೈಲಿ ಬದಲಾಗಿದೆ.   ಯುದ್ಧದ ಉನ್ಮಾದಿಗಳು ಆಯಾ ದೇಶಗಳಲ್ಲಿ ಆಯಾ ಕಾಲದ ಪರಿಸ...