Skip to main content

Posts

4121.ಶಂಕರಾಚಾಯ೯ರು_ದಲಿತ_ಶೂದ್ರ_ವಿರೋದಿಯೇ?.. ಹಾಗಿದ್ದರೆ ಅವರು ಕಾಶಿಯಲ್ಲಿ ಮನೀಷಾ ಪಂಚಕಂ ಯಾಕೆ ಬರೆಯುತ್ತಾರೆ...

ಶಂಕರಾಚಾಯ೯ರು_ದಲಿತ_ಶೂದ್ರ_ವಿರೋದಿಯೇ?..   ಹಾಗಿದ್ದರೆ ಅವರು  ಕಾಶಿಯಲ್ಲಿ ಮನೀಷಾ ಪಂಚಕಂ ಯಾಕೆ ಬರೆಯುತ್ತಾರೆ...    ಜ್ಞಾನವು ಯಾರಿಗೆ ಇರುತ್ತದೆಯೋ ಆತನು ಚಂಡಾಲನಾಗಿರಲಿ ಅಥವಾ ಬ್ರಾಹ್ಮಣನಾಗಿರಲಿ, ಆತನೇ ನನ್ನ ಗುರುಇದು ನನ್ನ ದೃಢವಾದ ನಂಬಿಕೆ ಎಂದು ಮನೀಷಾ ಪಂಚಕಂನಲ್ಲಿ ಬರೆದಿದ್ದಾರೆ ಆದಿ ಶಂಕರಾಚಾರ್ಯರು.  ಅವರ ಅನುಯಾಯಿಗಳು ಶಂಕರ ತತ್ವ ತಪ್ಪಾಗಿ ಅರ್ಥೈಸಿಕೊಂಡಿದ್ದರಾ? ... ಮೇಲೂ ಕೀಳು ಎಂಬ ಜಾತಿಗಳ ಆಚರಣೆಗೆ ಕಾರಣವೇನು ಹಾಗಾದರೆ ? ...   ಇಂತಹ ಅನುಮಾನ ಶಂಕರಾಚಾರ್ಯರನ್ನ ಆರಾದಿಸುವ ಶೂದ್ರ ದಲಿತ ವರ್ಗದಲ್ಲಿ ಉಳಿದುಬಿಟ್ಟಿದೆ ಈ ಬಗ್ಗೆ ಸರಿಯಾದ ವಿವರಣೆ ನೀಡುವವರು ಇದ್ದರೆ ಮಾಹಿತಿ ನೀಡಿ.   ಏನಿದು #ಮನೀಷಾ_ಪಂಚಕಂ?... ಆಸಕ್ತಿ ಇದ್ದರೆ ಕೆಳಗಿನ ಲೇಖನ ಪೂರ್ತಿ ಓದಿ.   ಮನೀಷಾ ಪಂಚಕಂ ಎಂಬುದು ಆದಿ ಶಂಕರಾಚಾರ್ಯರು ಸಂಸ್ಕೃತದಲ್ಲಿ ರಚಿಸಿದ ಅತ್ಯಂತ ಪ್ರಸಿದ್ಧವಾದ ಮತ್ತು ಕ್ರಾಂತಿಕಾರಕವಾದ ಐದು ಶ್ಲೋಕಗಳ ಸ್ತೋತ್ರವಾಗಿದೆ.   'ಮನೀಷಾ' ಎಂದರೆ 'ದೃಢವಾದ ನಂಬಿಕೆ' ಅಥವಾ 'ಅಭಿಪ್ರಾಯ' ಎಂದರ್ಥ ಅವರ ದೃಷ್ಟಿಯಲ್ಲಿ ಜಾತಿ, ವರ್ಗಗಳ ಭೇದವಿಲ್ಲ ಎಂಬುದನ್ನು ಸಾರುವ ಅದ್ವೈತ ವೇದಾಂತದ ಸಾರ ಇಲ್ಲಿದೆ.   ​ಐತಿಹಾಸಿಕ ಹಿನ್ನೆಲೆ (ಕಥೆ) ​ಒಮ್ಮೆ ಆದಿ ಶಂಕರಾಚಾರ್ಯರು ತಮ್ಮ ಶಿಷ್ಯರೊಂದಿಗೆ ಕಾಶಿಯ ಗಂಗಾನದಿಯಲ್ಲಿ ಸ್ನಾನ ಮುಗಿಸಿ, ವಿಶ್ವನಾಥನ ದರ್ಶನಕ್ಕೆ ಹೊರಟಿದ...
Recent posts

4120.ಮಲೆನಾಡಿನಲ್ಲಿ_2026_ ಜೋಗ್ ಫಾಲ್ಸ್ ತುಂಬಿ ತುಳುಕುತ್ತಾ?

ಮಲೆನಾಡಿನಲ್ಲಿ_ಈ_ವರ್ಷ_ಮುಂಗಾರು...   ಜೂನ್ ಪ್ರಾರಂಭದಲ್ಲಿ ಮುಂಗಾರು ಕ್ಷೀಣವಾಗಿತ್ತಾದರೂ ಜುಲೈ ಅಂತ್ಯ ಮತ್ತು ಆಗಸ್ಟ್ ಮೊದಲ ವಾರದ ಮಳೆಯಿಂದ ವಾಡಿಕೆ ಮಳೆ ಪ್ರಮಾಣ ತಲುಪಿದೆ.    ಶಿವಮೊಗ್ಗ ಜಿಲ್ಲೆಯಲ್ಲಿ ಜೂನ್‌ನಿಂದ ಆಗಸ್ಟ್ ಆರಂಭದವರೆಗೆ ಜಿಲ್ಲೆಯ ವಾಡಿಕೆ ಮಳೆಯ ಪ್ರಮಾಣ ಸುಮಾರು 1,048.60 ಮಿ.ಮೀ ಇರಬೇಕಿರುತ್ತದೆ.  ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಋತುವಿನ ಮಳೆ ಪ್ರಮಾಣ ಇವತ್ತಿನವರೆಗೆ ​ಒಟ್ಟಾರೆ ಮಳೆ ಪ್ರಮಾಣ   ​ ಆಗಸ್ಟ್ ಮೊದಲ ವಾರದವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸರಾಸರಿ ವಾಡಿಕೆ ಮಳೆಯ ಪ್ರಮಾಣ ಸುಮಾರು 1,048.60 ಮಿ.ಮೀ (mm) ತಲುಪಿದೆ.   ​  ಜುಲೈ ಅಂತ್ಯದಲ್ಲಿ ಆರಂಭಿಕ ಕೊರತೆ ಕಂಡುಬಂದಿತ್ತಾದರೂ, ಜುಲೈ ಕೊನೆಯ ವಾರ ಮತ್ತು ಆಗಸ್ಟ್ ಮೊದಲ ವಾರದಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ಜಿಲ್ಲೆಯ ಮಳೆ ಪ್ರಮಾಣ ವಾಡಿಕೆ ಮಟ್ಟಕ್ಕೆ ಚೇತರಿಸಿಕೊಂಡಿದೆ. ​ ಕಳೆದೆರೆಡು ವರ್ಷಕ್ಕಿಂತ ಈ ವರ್ಷ ಮಳೆ ಪ್ರಮಾಣ ಪ್ರಾರಂಭದಲ್ಲಿ  ಕಡಿಮೆ ಆದರೂ ಜೋಗ್ ಜಲಪಾತ ಮೈ ತುಂಬಿ ಹರಿಯುತ್ತಿದೆ.    ಪ್ರವಾಸಿಗರು ಜೋಗ್ ಫಾಲ್ಸ್ ನೋಡಲು ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ.   ಕಳೆದ ವರ್ಷ ಇದೇ ದಿನ ಲಿಂಗನಮಕ್ಕಿ ಅಣೆಕಟ್ಟು 85% ತುಂಬಿತ್ತು ಅವತ್ತು ನೀರಿನ ಮಟ್ಟ 1812 ಅಡಿ .   ಇವತ್ತು ಬೆಳಿಗ್ಗೆ ಲಿಂಗನಮಕ್ಕಿ ಡ್ಯಾಮ್  ಶ...

4119.ಭಾಗ_2_ನಾಥಪಂಥದ_ಬಾರಾಪಂಥ್_ಯಾತ್ರೆಯಲ್ಲಿದರ್ಮ_ಸಂರಕ್ಷಕರಾಗಿ_ನಾಗ_ಸಾಧುಗಳು_ಬರುತ್ತಾರೆ

ಭಾಗ_2_ನಾಥಪಂಥದ_ಬಾರಾಪಂಥ್_ಯಾತ್ರೆಯಲ್ಲಿ ದರ್ಮ_ಸಂರಕ್ಷಕರಾಗಿ_ನಾಗ_ಸಾಧುಗಳು_ಬರುತ್ತಾರೆ    ನಾಗ ಸಾಧುಗಳನ್ನ ಹಿಂದೂ ಧರ್ಮದ ಎಲ್ಲಾ ಪಂಥಗಳೂ ಧರ್ಮದ ಸಂರಕ್ಷರು ಎಂದು ಹೇಳಲು ಕಾರಣ ಅವರು ಅದಕ್ಕಾಗಿ ಖಡ್ಗ ಹಿಡಿದು ಹೋರಾಡುತ್ತಾರೆ....  ನಾಥ ಪಂಥದ ಬಾರಾ ಪಂಥ್ ಯಾತ್ರೆ ಬಗ್ಗೆ ಇಷ್ಟೆಲ್ಲಾ ವಿವರ ಇರುವ ಪುಸ್ತಕ ಇದೇ ಮೊದಲು ಎನ್ನುತ್ತಾರೆ ಅಂತಹ ಅವಕಾಶಕ್ಕೆ ನಾನು ಧನ್ಯ ಅದಕ್ಕಾಗಿ ನಾನು ಅವರಿಗೆ ಸಮರ್ಪಿಸಿಕೊಂಡಿದ್ದರಿಂದ ಮಾತ್ರ ಅವರ ಆಂತರಿಕ ಲೋಕ ನನಗೆ ತೆರೆದು ಕೊಂಡಿತಾ?....     ಇದು ನಾನು 2027 ರ ಶಿವರಾತ್ರಿ ದಿನ ಬಿಡುಗಡೆ ಮಾಡುವ ನಾಥ ಪಂಥದ ಬಾರಾ ಪಂಥ್ ಯಾತ್ರೆ ಪುಸ್ತಕದ ಪುಟಗಳು ನಾಗ ಸಾದುಗಳ ಲೇಖನ ದೀರ್ಘವಾಗಿದುವುದರಿಂದ ಎರೆಡು ಭಾಗದಲ್ಲಿದೆ, ಮೊದಲ ಭಾಗ ಓದಿದ್ದೀರಿ ಈ ಎರಡನೆ ಭಾಗ ಓದಿ ನಿಮ್ಮ ಅಭಿಪ್ರಾಯ ತಿಳಿಸಿ.   ನಾಥಪಂಥದ ನಾಸಿಕ್‌ನಿಂದ ಕದ್ರಿ ತನಕದ ಬಾರಾ ಪಂಥ್ ಯಾತ್ರೆ ಯಲ್ಲಿ ನಾಗಾಸಾಧುಗಳ ಉಪಸ್ಥಿತಿ ಮತ್ತು ಅವರ ಪಾತ್ರದ ಕುರಿತಾದ ಮಾಹಿತಿ ಗುಪ್ತವಾಗಿರುತ್ತದೆ.   ನಾಥಪಂಥದಲ್ಲಿ ನಾಗಾಸಾಧುಗಳನ್ನು ಕೇವಲ ಆಧ್ಯಾತ್ಮಿಕ ಸಾಧಕರಾಗಿ ನೋಡದೆ 'ಧರ್ಮದ ರಕ್ಷಕರು' ಅಥವಾ 'ಸನಾತನ ಧರ್ಮದ ಸೈನಿಕರು' ಎಂದು ಪರಿಗಣಿಸಲಾಗುತ್ತದೆ.   ಇತಿಹಾಸದ ಕಾಲದಿಂದಲೂ ಇಂದಿನವರೆಗೂ ಅವರು ನಾಥಪಂಥ ಮತ್ತು ಸನಾತನ ಧರ್ಮದ ರಕ್ಷಣೆಯನ್ನು ಮೂರು ಪ್ರಮುಖ ಆಯಾಮಗಳಲ್ಲಿ ಮಾಡುತ್ತಾ ಬಂದಿದ್ದ...

4118. ಭಾಗ_1_ನಾಥಪಂಥದ_ಬಾರಾ_ಪಂಥ್_ಯಾತ್ರೆಯಲ್ಲಿ #ದರ್ಮದ_ಸಂರಕ್ಷಕರಾಗಿ_ನಾಗಸಾಧುಗಳು_ಬರುತ್ತಾರೆ.

ಭಾಗ_1_ನಾಥಪಂಥದ_ಬಾರಾ_ಪಂಥ್_ಯಾತ್ರೆಯಲ್ಲಿ  #ದರ್ಮದ_ಸಂರಕ್ಷಕರಾಗಿ_ನಾಗಸಾಧುಗಳು_ಬರುತ್ತಾರೆ.   ನಾಗ ಸಾಧುಗಳು ಧರ್ಮದ ರಕ್ಷಕರು ಅಥವಾ ಸನಾತನ ಧರ್ಮದ ಸೈನಿಕರು ಎಂದೇ ಭಾರತೀಯ ಹಿಂದೂ ಧರ್ಮದ ಎಲ್ಲಾ ಅಖಾಡಗಳು ಹೇಳುತ್ತದೆ.   2027 ರ ಶಿವರಾತ್ರಿ ದಿನದಂದು ಲೋಕಾರ್ಪಣೆ ಆಗಲಿರುವ ನಾನು ಬರೆದ ನಾಥ ಪಂಥದ ಬಾರಾ ಪಂಥ್ ಯಾತ್ರೆ ಪುಸ್ತಕದಲ್ಲಿನ ಈ ಅಧ್ಯಾಯ ನಿಮಗಿಷ್ಟವಾಗಬಹುದು...   ಸ್ವಲ್ಪ ದೀರ್ಘವಾದ ನಾಗ ಸಾದು ಗಳ ಈ ಅದ್ಯಾಯ ಎರಡು ಭಾಗಗಳಾಗಿ ಇಲ್ಲದೆ ಓದಿ.   ನಾಥಪಂಥದ ನಾಸಿಕ್‌ನಿಂದ ಕದ್ರಿ ತನಕದ ಬಾರಾ ಪಂಥ್ ಯಾತ್ರೆ ಯಲ್ಲಿ ನಾಗಾಸಾಧುಗಳ ಉಪಸ್ಥಿತಿ ಮತ್ತು ಅವರ ಪಾತ್ರದ ಕುರಿತಾದ ಮಾಹಿತಿ ಗುಪ್ತವಾಗಿರುತ್ತದೆ.   2015 ರ ಆಗಸ್ಟ್‌ನಲ್ಲಿ ನಾಸಿಕ್ ತ್ರಿಯಂಬಕೇಶ್ವರದಲ್ಲಿ ನಡೆದ ಮಹಾ ಕುಂಭಮೇಳದ ಸಂದರ್ಭದಲ್ಲಿ ಜುಂಡಿ ಯಾತ್ರೆ ಹೊರಡುವ ಮುನ್ನ ನಡೆದ ಧಾರ್ಮಿಕ ವಿಧಿವಿಧಾನಗಳು ಹಾಗೂ ಶಾಹಿ ಸ್ನಾನಗಳಲ್ಲಿ ದಿಗಂಬರ (ನಗ್ನ) ನಾಗಾಸಾಧುಗಳು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.    ನಾಸಿಕ್‌ನಿಂದ ಮಂಗಳೂರಿನ ಕದ್ರಿ ತನಕ ಸಾಗಿದ 1,100 ಕಿ.ಮೀ. ಸುದೀರ್ಘ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಾಧುಗಳು ಪ್ರಧಾನವಾಗಿ ನಾಥಪಂಥದ 'ದೀಕ್ಷಿತ ಕನ್ಫಟಾ ಯೋಗಿಗಳು' (ಕೇಸರಿ ವಸ್ತ್ರಧಾರಿಗಳು).    ಯಾತ್ರೆಯ ಭದ್ರತೆ, ಶಿಸ್ತು ಮತ್ತು ಸಾಂಪ್ರದಾಯಿಕ ಧ್ವಜಗಳನ್ನು ಹಿಡಿದು ಮುನ್ನಡೆ...

4117 ಸಾಗರ_ಹೊಸನಗರ_ವಿಧಾನಸಭಾ_ಕ್ಷೇತ್ರಕ್ಕೆ_ಸಿಗದ_ಮಂತ್ರಿ_ಸ್ಥಾನ

ಸಾಗರ_ಹೊಸನಗರ_ವಿಧಾನಸಭಾ_ಕ್ಷೇತ್ರಕ್ಕೆ_ಸಿಗದ_ಮಂತ್ರಿ_ಸ್ಥಾನ.   ಭದ್ರಾವತಿಯ ಹಿರಿಯ ಶಾಸಕ ಸಂಗಮೇಶ್ವರರಿಗೂ ಮಂತ್ರಿ ಸ್ಥಾನ ಇಲ್ಲ, ಸೊರಬ ಕ್ಷೇತ್ರದ ಮಧು ಬಂಗಾರಪ್ಪರಿಗೆ ಮಂತ್ರಿ ಸ್ಥಾನ ದೊರಕಿರುವುದು ಜಿಲ್ಲೆಗೆ ನೀಡಿದ ಗೌರವ ಆಗಿದೆ.   ಬಹು ನಿರೀಕ್ಷೆಯಲಿದ್ದ ಶಾಸಕ ಗೋಪಾಲ ಕೃಷ್ಣ ಬೇಳೂರು ಅವರ ಹೆಸರು ಇವತ್ತು ಪ್ರಮಾಣ ವಚನ ಸ್ವೀಕಾರ ಮಾಡುವವರ ಪಟ್ಟಿಯಲ್ಲಿ ಇಲ್ಲದೆ ಇರುವುದು ಬೇಸರ ತಂದಿದೆ.    ಯಾವುದೇ ಪಕ್ಷದ ಸರ್ಕಾರ ಇರಲಿ ನಮ್ಮ ವಿಧಾನ ಸಭಾ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ಇರಲಿ ಎಂದು ನಾನು ಕೂಡ ಆಸೆ ಪಟ್ಟಿದ್ದೆ.    ಈ ಮೂಲಕ ಕ್ಷೇತ್ರದ ಅಭಿವೃದ್ಧಿಗೆ, ದೀರ್ಘಕಾಲದ ರಾಜಕಾರಣದಲ್ಲಿದ್ದ ಸ್ಥಳೀಯ ಶಾಸಕರಿಗೆ ಒಂದು ಅಧಿಕಾರ ಸಿಗಲಿ ಎನ್ನುವುದು.    ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಮನಸ್ಸು ಮಾಡ ಬೇಕಿತ್ತು ಶಿವಮೊಗ್ಗ ಜಿಲ್ಲೆಗೆ ಇಬ್ಬರು ಮಂತ್ರಿ ಮಾಡಬಹುದಿತ್ತು.    ಹಿಂದೆ ಜನತಾ ದಳ ಸರ್ಕಾರ ಇದ್ದಾಗ ಜೆ. ಹೆಚ್.ಪಟೇಲರು ಮತ್ತು ಬಸವಣ್ಯಪ್ಪ ಇಬ್ಬರು ಮಂತ್ರಿಗಳಿದ್ದರು.    ಬಿಜೆಪಿ ಸರ್ಕಾರ ಇದ್ದಾಗ ಯಡೂರಪ್ಪ, ಈಶ್ವರಪ್ಪ ಮತ್ತು ಹರತಾಳು ಹಾಲಪ್ಪ ಮೂವರು ಮಂತ್ರಿಗಳಿದ್ದರು.   ಶಿವಮೊಗ್ಗ ಜಿಲ್ಲೆಯ ಅಭಿವೃದ್ದಿಗಾಗಿ ಮತ್ತು ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ನಮ್ಮ ಕ್ಷೇತ್ರದ ಶಾಸಕ #ಗೋಪಾಲಕೃಷ್ಣ_ಬೇಳೂರು ಮತ್ತು ಭದ್ರಾವತಿ ಶಾಸಕ #ಸಂಗಮೇಶ...

4116. ಡಾಕ್ಟರ್_ಎನ್_ಎಸ್_ವಿಶ್ವಪತಿಗಳ_ಸ್ಮರಣೆಸದ್ಗತಿಗಾಗಿ_ಪ್ರಾರ್ಥನೆ. ಆತ್ಮವು ಎಲ್ಲ ಲೌಕಿಕ ಬಂಧನಗಳಿಂದ ಮುಕ್ತವಾಗಿ ಭಗವಂತನ ಪಾದವನ್ನು ಸೇರಲಿ ಎಂದು ವೈಕುಂಠ ಸಮಾರಾಧನೆ ನಡೆಯುತ್ತದೆ.

ಡಾಕ್ಟರ್_ಎನ್_ಎಸ್_ವಿಶ್ವಪತಿಗಳ_ಸ್ಮರಣೆ ಸದ್ಗತಿಗಾಗಿ_ಪ್ರಾರ್ಥನೆ.   ಆತ್ಮವು ಎಲ್ಲ ಲೌಕಿಕ ಬಂಧನಗಳಿಂದ ಮುಕ್ತವಾಗಿ ಭಗವಂತನ ಪಾದವನ್ನು ಸೇರಲಿ ಎಂದು ವೈಕುಂಠ ಸಮಾರಾಧನೆ ನಡೆಯುತ್ತದೆ.  ​ಸಾಮಾನ್ಯವಾಗಿ ವ್ಯಕ್ತಿ ತೀರಿಕೊಂಡ 11, 12  ಅಥವಾ ೧೩ನೇ ದಿನದಂದು ವೈಕುಂಠ ಸಮಾರಾಧನೆಯನ್ನು ನೆರವೇರಿಸಲಾಗುತ್ತದೆ. (ಕೆಲವು ಸಮುದಾಯಗಳಲ್ಲಿ ಅವರವರ ಕುಲಾಚಾರಕ್ಕೆ ತಕ್ಕಂತೆ ದಿನಗಳು ಬದಲಾಗಬಹುದು). ​  ಪ್ರಮುಖ ಧಾರ್ಮಿಕ ವಿಧಿಗಳು ​ಧಾರ್ಮಿಕ ಪೂಜೆ ಹಾಗೂ ಪಿಂಡದಾನ ಪುರೋಹಿತರ ಮಾರ್ಗದರ್ಶನದಲ್ಲಿ ಮೃತರ ಹೆಸರಿನಲ್ಲಿ ತರ್ಪಣ, ಶ್ರಾದ್ಧ ಮತ್ತು ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ.   ​ಅನ್ನದಾನ (ಬ್ರಹ್ಮಸಂತರ್ಪಣೆ), ಆಗಮಿಸಿದ ಬಂಧು-ಮಿತ್ರರಿಗೆ ಹಾಗೂ ಅಭ್ಯಾಗತರಿಗೆ ಭೋಜನವನ್ನು ಏರ್ಪಡಿಸುವುದು ಈ ದಿನದ ಪ್ರಮುಖ ಭಾಗ.   ​ದಾನ ಧರ್ಮಗಳು,ಮೃತರ ಆತ್ಮದ ಶ್ರೇಯಸ್ಸಿಗಾಗಿ ಗೋದಾನ, ಭೂದಾನ, ವಸ್ತ್ರದಾನ, ಹಾಗೂ ದೀಪದಾನಗಳಂತಹ ಕಾರ್ಯಗಳನ್ನು ಮಾಡಲಾಗುತ್ತದೆ.   ಇವತ್ತು ನನ್ನ ಜೀವನದ ಮಾರ್ಗದರ್ಶಕ ಗುರುಗಳಾಗಿದ್ದ ಬೆಂಗಳೂರಿನ ವಿಜಯನಗರದ ಖ್ಯಾತ ಜೋತಿಷಿ ಆಗಿದ್ದ ಡಾಕ್ಟರ್ ಎನ್. ಎಸ್. ವಿಶ್ವಪತಿಗಳ 13 ನೇ ದಿನದ ವೈಕುಂಠ ಸಮಾರಾಧನೆ ( 3 - ಆಗಸ್ಟ್-2026 ಸೋಮವಾರ).   ನಮ್ಮೂರ ಪುರ ದೈವ ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯ ಅವರ ನೇತೃತ್ವದಲ್ಲಿ ಮಾರ್ಗದರ್ಶನದಲ್ಲಿ 21 ವರ್ಷದ ಹಿಂದೆ...

4115. ಮಳೆಗಾಲದಲ್ಲಿ_ಮಲೆನಾಡಿನಲ್ಲಿ_ಭೂಕುಸಿತ. ಈ ರೀತಿ ಭೂಕುಸಿತಕ್ಕೆ ಕಾರಣ ಏನು?... ಸೆನ್ಸಾರ್ ಉಪಕರಣಗಳ ಬಳಕೆ ಇನ್ನು ಪ್ರಾರಂಭವಾಗಿಲ್ಲ ಏಕೆ?....

ಮಳೆಗಾಲದಲ್ಲಿ_ಮಲೆನಾಡಿನಲ್ಲಿ_ಭೂಕುಸಿತ.   ಈ ರೀತಿ ಭೂಕುಸಿತಕ್ಕೆ ಕಾರಣ ಏನು?...  ಸೆನ್ಸಾರ್ ಉಪಕರಣಗಳ ಬಳಕೆ ಇನ್ನು ಪ್ರಾರಂಭವಾಗಿಲ್ಲ ಏಕೆ?....   ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನೂತನ ಮನೆ ನಿರ್ಮಾಣ ಕಾಮಗಾರಿಗೆ ನಿರ್ಮಿಸಿದ್ದ ತಡೆಗೋಡೆ ಮಣ್ಣು ಕಾರ್ಮಿಕರ ಶೆಡ್ ಮೇಲೆ ಕುಸಿದು ಮೂವರು ಕಾರ್ಮಿಕ ಕುಟುಂಬ ಭಾನುವಾರ ಮೃತರಾದ ದುರಂತ ನಡೆದಿದೆ.   ಮಲೆನಾಡು ಪಶ್ಚಿಮ ಘಟ್ಟಗಳ ಭಾಗದಲ್ಲಿ ಮಳೆಗಾಲದಲ್ಲಿ ಗುಡ್ಡ ಕುಸಿತ,ಭೂಕುಸಿತ ಸಂಭವಿಸಲು ನೈಸರ್ಗಿಕ ಕಾರಣಗಳು ಮತ್ತು ಮಾನವಕೃತ ಕಾರಣಗಳು  ಪ್ರಮುಖ ಪಾತ್ರವಹಿಸುತ್ತವೆ.     ಮಲೆನಾಡಿನಲ್ಲಿ ಕೆಲವೇ ದಿನಗಳಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿದ್ದಾಗ ಮಣ್ಣು ಹೆಚ್ಚಿನ ಪ್ರಮಾಣದ ನೀರನ್ನು ಹೀರಿಕೊಂಡಾಗ,ಮಣ್ಣಿನ ಕಣಗಳ ನಡುವಿನ ಸಾಂದ್ರತೆ ಕಡಿಮೆಯಾಗಿ ಭಾರ ಹೆಚ್ಚುತ್ತದೆ. ​   ಗುಡ್ಡಗಳಲ್ಲಿ ಕೆಂಪು ಮಣ್ಣು  ಮತ್ತು ಜೇಡಿಮಣ್ಣಿನ ಅಂಶ ಹೆಚ್ಚಿರುವಾಗ ನೀರು ಬಿದ್ದಾಗ ಈ ಮಣ್ಣು ಬೇಗನೆ ಸಡಿಲಗೊಂಡು ಜಾರಲು ಪ್ರಾರಂಭಿಸುತ್ತದೆ. ​   ಪಶ್ಚಿಮ ಘಟ್ಟಗಳ ಭೂಪ್ರದೇಶವು ಕಡಿದಾದ ಇಳಿಜಾರುಗಳನ್ನು ಹೊಂದಿದ್ದು, ಗುರುತ್ವಾಕರ್ಷಣೆಯ ಬಲದಿಂದಾಗಿ ಸಡಿಲಗೊಂಡ ಮಣ್ಣು ಮತ್ತು ಬಂಡೆಗಳು ವೇಗವಾಗಿ ಕೆಳಗೆ ಜಾರುತ್ತವೆ.  ​ಅವೈಜ್ಞಾನಿಕ ರಸ್ತೆ ಮತ್ತು ಹೆದ್ದಾರಿ ನಿರ್ಮಾಣ,ಗುಡ್ಡಗಳನ್ನು ಕಡಿದು ರಸ್ತೆ ಅಗಲೀ...