Skip to main content

Posts

4000. ನೀಟ್ ಪರೀಕ್ಷೆಯಲ್ಲಿ ಜನಿವಾರದ ವಿವಾದ

#ಪ್ರವೇಶ_ಪರೀಕ್ಷೆ #ಜನಿವಾರದ_ವಿವಾದ   ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) NEET UG 2026 ಪರೀಕ್ಷೆಯನ್ನು  ದಿನಾಂಕ ಮೇ 3, 2026 ಭಾನುವಾರ ನಡೆಸಲಿದೆ.      ಮಧ್ಯಾಹ್ನ 2:00 ರಿಂದ ಸಂಜೆ 5:20 ರವರೆಗೆ ಒಂದೇ ಪಾಳಿಯಲ್ಲಿ ಪೆನ್ನು-ಪೇಪರ್ (ಆಫ್‌ಲೈನ್) ಮೋಡ್‌ನಲ್ಲಿ ನಡೆಯಲಿದೆ.   ಈ ಪರೀಕ್ಷೆಗಳಲ್ಲಿ ವಾಮ ಮಾರ್ಗದಲ್ಲಿ ಇವತ್ತಿನ ಆಧುನಿಕ ತಂತ್ರಜ್ಞಾನ ಬಳಸಿ ನಕಲು ಇತ್ಯಾದಿ ವಂಚನೆ ಮಾಡುವುದನ್ನ ತಡೆಗಟ್ಟಲು, ಆಧುನಿಕ ತಂತ್ರಜ್ಞಾನದ ಗುಪ್ತ ಕ್ಯಾಮೆರಾ ಮತ್ತು ಮೈಕ್ರೋ ಫೋನ್ ಇತ್ಯಾದಿ ಪರೀಕ್ಷಾ ಕೇಂದ್ರದ ಒಳಗೆ ತರದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅನೇಕ ನಿಷೇಧಗಳನ್ನ ಹೇರಿದೆ ಮತ್ತು ಏನನ್ನ ತರಬಹುದು ಎಂದು ಮಾರ್ಗಸೂಚಿ ಪ್ರಕಟಿಸಿದೆ.    ಪರೀಕ್ಷ ಕೇಂದ್ರ ಪ್ರವೇಶದ ಮುನ್ನ ಕಡ್ಡಾಯ ತಪಾಸಣೆ ಮೂಲಕ ಪ್ರವೇಶ ನೀಡುತ್ತದೆ ಈ ಕಾರಣದಿಂದ ಸುಲಭ ತಪಾಸಣೆಗಾಗಿ ಡ್ರೆಸ್ ಕೋಡ್ ಮಾಡಿದೆ.    ಅನೇಕ ಧಾರ್ಮಿಕ ಕಾರಣದ ವಿನಾಯಿತಿ ಮತ್ತು ಆರೋಗ್ಯ ಕಾರಣದ ವಿನಾಯಿತಿಗಳನ್ನ ನೀಡಿದೆ  ಅಂತವರು ಪರೀಕ್ಷಾ ಕೇಂದ್ರಕ್ಕೆ ಆದಷ್ಟು ಮೊದಲಿಗೆ ಹೋಗಿ ತಮ್ಮ ತಪಾಸಣೆಗಳನ್ನು ಪೂರ್ಣಗೊಳಿಸಬೇಕು.   ನೀಟ್ ಪರೀಕ್ಷೆಯಲ್ಲಿ ಜನಿವಾರ ಧರಿಸುವ ಪ್ರಮುಖ ಅಂಶಗಳು ಮತ್ತು ವಿವಾದಗಳು ಹೆಚ್ಚು ಸುದ್ದಿ ಮಾಡುತ್ತಿದೆ.  ಏಪ್ರಿಲ್ 2026 ರಲ್ಲಿ ಕರ್ನಾಟಕದ ಕೆಲವು ಸಿಇಟಿ ಪರೀಕ್ಷಾ ಕೇಂದ...
Recent posts

3599. ಶಿಕಾರಿಪುರದ ಇತಿಹಾಸದಲ್ಲಿ

#ದೊಂಡಿಯಾ_ವಾಘ್   ಶಿಕಾರಿಪುರದ ಹುಚ್ಚುರಾಯ ಸ್ವಾಮಿಗೆ ಅರ್ಪಿಸಿದ ವೀರ ಖಡ್ಗದ ಕಥೆ ಕೇಳಿ ಆ ಖಡ್ಗ ಈಗಲೂ ಶಿಕಾರಿಪುರದ ತಾಲ್ಲೂಕು ಖಜಾನೆಯಲ್ಲಿದೆ....   ನಮ್ಮ ಶಿವಮೊಗ್ಗ ಜಿಲ್ಲೆಯ ವೀರ ಸೇನಾನಿಯ 225 ವರ್ಷಗಳ ಹಿಂದಿನ ಕಥೆ.    ಶಿಕಾರಿಪುರದ ಬಂಜಾರ ಸಮಾಜದವರ ಆ ಕಾಲದ ಸಹಾಯ ... ಬ್ರಿಟೀಷರು ಮತ್ತು ಮರಾಠರ ದಾಳಿಯಿಂದ ಕುಮದ್ವತಿ ನದಿಗೆ ಹಾರಿ ತಪ್ಪಿಸಿಕೊಂಡು ಕಾಡು ಸೇರಿದ್ದ ವೀರ ದೊಂಡಿಯಾ ವಾಘ್ ಗೆ ಶಶ್ರೂಸೆ ನೀಡಿ ಸಹಾಯ ಮಾಡುತ್ತಾರೆ.   ಕೆಳದಿ ಸಾಮ್ರಾಜ್ಯದ ವೀರ ದೊಂಡಿಯಾ ವಾಘ್ ಕೆಳದಿ ಸಾಮ್ರಾಜ್ಯದ ಇತಿಹಾಸದ ಜೊತೆಗೆ ಹೈದರಾಲಿ ಸೈನ್ಯ ಸೇರಿ ದೊಡ್ಡ ಸ್ಥಾನ ಮಾನ ಪಡೆದು, ಹೈದರಾಲಿ ನಂತರ ಟಿಪ್ಪುಸುಲ್ತಾನರ ಸೈನ್ಯದಲ್ಲಿ ಸೇವೆ ಸಲ್ಲಿಸಿ ಅಲ್ಲಿಂದ ಸ್ವಂತ ಸೈನ್ಯ ಕಟ್ಟಿ ಅನೇಕ ಮರಾಠರ ಆಡಳಿತ ಪ್ರದೇಶ ವಶ ಪಡೆಯುತ್ತಾರೆ.   ಟಿಪ್ಪು ಸುಲ್ತಾನ್ ರ ಮಂತ್ರಿ ಮೀರ್ ಸಾದಿಕ್ ಕುತಂತ್ರದಿಂದ ಶ್ರೀರಂಗ ಪಟ್ಟಣದ ಜೈಲು ಸೇರುತ್ತಾರೆ, ಟಿಪ್ಪುಸುಲ್ತಾನರನ್ನ ಬ್ರಿಟೀಷರು ಸೋಲಿಸಿದಾಗ  ಅಲ್ಲಿಂದ ಐದು ವರ್ಷದ ಸೆರೆವಾಸದಿಂದ ತಪ್ಪಿಸಿಕೊಂಡು ಹೋಗಿ ಏನು ಮಾಡುತ್ತಾರೆ ಎಂಬ ವಿವರವಾದ ಈ ಲೇಖನ ಓದಿ.  ಚೆನ್ನಗಿರಿ ಮೂಲದ ವೀರ ಸೇನಾನಿ ಶಿಕಾರಿಪುರದ ಕಾಡಿನಲ್ಲಿ ಸ್ಥಳೀಯ ಬಂಜಾರ ಜನರಿಂದ ಶಶ್ರೂಸೆ ಸಹಕಾರ ಪಡೆದು ಶಿಕಾರಿಪುರದ ಪುರದೈವ ಹುಚ್ಚರಾಯ ಸ್ವಾಮಿಗೆ ತನ್ನ ವೀರಖಡ್ಗ ಅರ್ಪಿಸುವ ದೊಂಡಿಯಾ ...

3598. ಬಳ್ಳಿಗಾವೆ

#ಬಳ್ಳಿಗಾವೆ #ನಾಟ್ಯರಾಣಿ_ಶಾಂತಲಾದೇವಿ   ಸುಮಾರು ಕ್ರಿ.ಶ. 1108 ರಿಂದ 1152 ರವರೆಗೆ ಆಡಳಿತ ನಡೆಸಿದ ಹೊಯ್ಸಳ ರಾಜವಂಶದ ಅತ್ಯಂತ ಪ್ರಸಿದ್ಧ ದೊರೆ ವಿಷ್ಣುವರ್ಧನರ (ಬಿಟ್ಟಿಗ) ಪಟ್ಟದ ರಾಣಿ.  12ನೇ ಶತಮಾನದ ಪ್ರಸಿದ್ಧ ವಚನಕಾರ, ಶಿವಶರಣ ಮತ್ತು ಅನುಭಾವಿ ಅಲ್ಲಮಪ್ರಭು (ಸುಮಾರು ಕ್ರಿ.ಶ. 1160-1200)     ಇವರಿಬ್ಬರ ಜನ್ಮಸ್ಥಳ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ ಎಂಬುದು ವಿಶೇಷ.   ಬಳ್ಳಿಗಾವೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿರುವ ಒಂದು ಐತಿಹಾಸಿಕ ಸ್ಥಳ.    ದಕ್ಷಿಣದ ಕೇದಾರನಾಥವೆಂದು ಕರೆಯಲ್ಪಡುತ್ತದೆ, ಶಿಕಾರಿಪುರ ಪಟ್ಟಣದಿಂದ ಸುಮಾರು ೨೧ ಕಿ.ಮೀ ದೂರವಿರುವ ಈ ಪುಟ್ಟ ಹಳ್ಳಿ.   ಹೊಯ್ಸಳರ ವಿಷ್ಣುವರ್ಧನನ ರಾಣಿ ಶಾಂತಲಾದೇವಿಯ ತವರುಮನೆ.    ಬೇಲೂರಿನ ಚೆನ್ನಕೇಶವ ದೇವಾಲಯದಲ್ಲಿ ನಾಟ್ಯ ರಾಣಿ ಶಾಂತಲಾ ದೇವಿಯನ್ನು ಶಿಲಾ ಬಾಲಕಿಯಾಗಿ ಈಗಲೂ ನೋಡುತ್ತೇವೆ.    ಹೊಯ್ಸಳ ಶೈಲಿಯ ಕೇದಾರೆಶ್ವರ ದೇವಾಲಯದ ನಿರ್ಮಾಣ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಪ್ರಾರಂಭವಾಗಿ ಹೊಯ್ಸಳರ ಕಾಲದಲ್ಲಿ ಪೂರ್ಣಗೊಂಡಿತು.    ಬಳ್ಳಿಗಾವಿ (ಬಳ್ಳಿಗಾಮೆ) ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿರುವ ಸುಮಾರು 2000 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಪ್ರಾಚೀನ ನಗರ.   ಇದು ಶಾತವಾಹನರಿಂದ ಕದಂಬರು, ಚ...

3597. ಡಾಕ್ಟರ್ ಅಕ್ಷರ ನಿವಾಸಮ್ ಕೆ.ವಿ. ಸುಬ್ಬಣ್ಣ

#ಡಾಕ್ಟರ್_ಕೆ_ವಿ_ಅಕ್ಷರ ಹೆಗ್ಗೋಡಿನ ನೀನಾಸಂ #ಕೆ_ವಿ_ಸುಬ್ಬಣ್ಣರ ಪುತ್ರ ಕೆ.ವಿ.ಅಕ್ಷರ ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದೆ.   ಇದು ನಮ್ಮ ಸಾಗರ ತಾಲೂಕಿಗೆ ಸಂದ ಗೌರವವಾಗಿದೆ.   ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ 35ನೇ ಘಟಿಕೋತ್ಸವ ಮೇ.6ರಂದು ಬುಧವಾರ ಬೆಳಿಗ್ಗೆ 10-30ಕ್ಕೆ ಶಂಕರಘಟ್ಟದ ವಿವಿಯ ಜ್ಞಾನಸಹ್ಯಾದ್ರಿ ಆವರಣದಲ್ಲಿ ನಡೆಯಲಿದೆ.    ಈ ಸಮಾರಂಭದಲ್ಲಿಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ ಎಂದು ಕುವೆಂಪು ವಿವಿ ಕುಲಪತಿ #ಪ್ರೊ_ಶರತ್_ಅನಂತಮೂರ್ತಿ ತಿಳಿಸಿದ್ದಾರೆ.    ಖ್ಯಾತ ಸಮಾಜವಾದಿ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ #ಕೋಣಂದೂರು_ಲಿಂಗಪ್ಪ, ಹಿರಿಯ ರಂಗಕರ್ಮಿ ಮತ್ತು ನೀನಾಸಂ ನಿರ್ದೇಶಕ #ಕೆ_ವಿ_ಅಕ್ಷರ ಮತ್ತು ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ನ ಮಾಜಿ ನಿರ್ದೇಶಕ #ಪ್ರೊ_ಎಚ್_ಎ_ರಂಗನಾಥ್ ಅವರಿಗೆ ಕುವೆಂಪು ವಿವಿ ಘಟಿಕೋತ್ಸವದಲ್ಲಿ ಗೌರವ ಡಾಕ್ಟ ರೇಟ್ (ಡಿ. ಲಿಟ್) ಪದವಿ ನೀಡಿ ಗೌರವಿಸಲಿದೆ ಎಂದು ಘೋಷಿಸಿದ್ದಾರೆ.   ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕರು, ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳ...

3596. ಡಾಕ್ಟರ್ ಕೋಣಂದೂರು ಲಿಂಗಪ್ಪ

#ಡಾಕ್ಟರ್_ಕೋಣಂದೂರುಲಿಂಗಪ್ಪ.  ನಾಡಿನ ಪ್ರಖ್ಯಾತ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಕ್ಷೇತ್ರ ತೀರ್ಥಹಳ್ಳಿಯ ಉತ್ತರಾಧಿಕಾರಿ ಆದವರು.   ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ 35ನೇ ಘಟಿಕೋತ್ಸವ ಇವತ್ತು ಮೇ -6ರಂದು - ಬುದವಾರ ಬೆಳಿಗ್ಗೆ 10-30ಕ್ಕೆ ಶಂಕರಘಟ್ಟದ ವಿವಿಯ #ಜ್ಞಾನಸಹ್ಯಾದ್ರಿ ಆವರಣದಲ್ಲಿ ನಡೆಯಲಿದೆ.    ಈ ಸಮಾರಂಭದಲ್ಲಿಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.#ಶರತ್_ಅನಂತಮೂರ್ತಿ ತಿಳಿಸಿದ್ದಾರೆ.    ಖ್ಯಾತ ಸಮಾಜವಾದಿ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ #ಕೋಣಂದೂರುಲಿಂಗಪ್ಪ, ಹಿರಿಯ ರಂಗಕರ್ಮಿ ಮತ್ತು ನೀನಾಸಂ ನಿರ್ದೇಶಕ #ಕೆ_ವಿ_ಅಕ್ಷರ ಮತ್ತು ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ನ ಮಾಜಿ ನಿರ್ದೇಶಕ ಪ್ರೊ. #ಹೆಚ್_ಎ_ರಂಗನಾಥ್ ಅವರಿಗೆ ಕುವೆಂಪು ವಿವಿ ಘಟಿಕೋತ್ಸವದಲ್ಲಿ ಗೌರವ ಡಾಕ್ಟ ರೇಟ್ (ಡಿ. ಲಿಟ್) ಪದವಿ ನೀಡಿ ಗೌರವಿಸಲಿದೆ ಎಂದು ಘೋಷಿಸಿದ್ದಾರೆ. #ಕೋಣಂದೂರು_ಲಿಂಗಪ್ಪ   ಶ್ರೀ ಕೋಣಂದೂರು ಲಿಂಗಪ್ಪನವರು ಹುಟ್ಟಿದ ಸ್ಥಳ ಶಿವಮೊಗ್ಗ ಜಿಲ್ಲೆಯ #ಕೋಣಂದೂರು.    ಇವರ ಶೈಕ್ಷಣಿಕ ಅರ್ಹತೆ ಬಿಎ, ಬಿಎಲ್,ವೃತ್ತಿಯಲ್ಲಿ  ವಕೀಲರು  ಸಾಮಾಜಿಕ ಮತ್ತು ಇತರ ಚಟುವಟಿಕೆಗಳಲ್ಲಿ ನಿರತರು.  ವಿವಾಹಿತರು ಒಬ್ಬಳೇ ಮಗಳು ಇಸ್ರೋದಲ್ಲಿ ವಿಜ್ಞಾನಿ ಆಗಿದ್ದಾ...

3595. ಕಾಟು ಮಾವಿನ ಹಣ್ಣಿನ ಸಾಸಿವೆ

#ಕಾಟು_ಮಾವು.  ಇವತ್ತು ನಮ್ಮ ಆಸ್ತಾನದ ಜೋತಿಷಿ ಕಲ್ಮಕ್ಕಿ ಬೂದ್ಯಪ್ಪ ಗೌಡರು ತಂದದ್ದು.    ಇದರ ತಳಿ ಸಂರಕ್ಷಣೆ ಮಾಡ ಬೇಕು ಅಷ್ಟು ರುಚಿಕರವಾದ ಕಾಟು ಮಾವು ಇದು.   ಬೂದ್ಯಪ್ಪ ಗೌಡರ ಮನೆಯ ಈ ಕಾಟು ಮಾವು ತಳಿ ವಿಶಿಷ್ಟವಾದ ರುಚಿ - ಘಮ ಮತ್ತು ಗಾತ್ರದ್ದು.     ಜೀರಿಗೆ ಸುವಾಸನೆಯ, ಸಿಹಿ ಹುಳಿಯ ಸಮ್ಮಿಶ್ರದ ಗಾಡ ಬಣ್ಣದ ಚಿಕ್ಕ ಗಾತ್ರದ ಅದರಲ್ಲೂ ಗಿಳಿ ಮೂತಿಯ ಕಾಟು ಮಾವು.    ಇದು ವರ್ಷ ಬಿಟ್ಟು ವರ್ಷ ಫಸಲು ನೀಡುವ ಮರ ಈ ಕಾಟು ಮಾವಿನ ಸಿಪ್ಪೆ ಕೂಡ ನೀವು ತಿಂದರೆ ಬಿಡುವುದಿಲ್ಲ.   ಮಾವಿನ ತಳಿ ಸಂರಕ್ಷಣೆ ಮಾಡುವ ಮಲೆನಾಡಿನ ಅಪ್ಪೆ ಮಿಡಿ ನರ್ಸರಿಯವರು ಈ ಮರ ಒಮ್ಮೆ ಬಂದು ನೋಡ ಬೇಕು.    ಮಲೆನಾಡಿನಲ್ಲಿ ಕಾಟು ಮಾವುಗಳು ಸಾವಿರಾರು ರುಚಿ ಮತ್ತು ಗಾತ್ರದಲ್ಲಿ ಇದೆ.     ನೈಸರ್ಗಿಕವಾಗಿ ತಳಿ ಸಂಕಿರಣದಿಂದ ಹೊಸ ಹೊಸ ರುಚಿಯ ಕಾಟು ಮಾವಿನ ಹಣ್ಣು ಬರಬಹುದು.    ಕಾಟು ಮಾವಿನ ಹಣ್ಣುಗಳಿಗೆ ಕರಾವಳಿಯಲ್ಲಿ ಹೆಚ್ಚಿನ ಬೇಡಿಕೆ ಇದೆ ಆದ್ದರಿಂದ ಅಲ್ಲಿನ ತರಕಾರಿ ಅಂಗಡಿಗಳಲ್ಲಿ ತರಹೇವಾರಿ ಕಾಟು ಮಾವಿನ ಹಣ್ಣು ಮಾರಾಟಕ್ಕೆ ಇಟ್ಟಿರುತ್ತಾರೆ.    ಆದರೆ ಮಲೆನಾಡಿನಲ್ಲಿ ಅಷ್ಟೆಲ್ಲ ವಿದದ ಕಾಟು ಮಾವಿನ ಹಣ್ಣುಗಳ ಮರ ಇದ್ದರೂ ಅದು ಮಾರಾಟಕ್ಕೆ ಇಡುವುದಿಲ್ಲ ಇದಕ್ಕೆ ಮುಖ್ಯ ಕಾರಣ ಕಾಟು ಮಾವಿನ ಹಣ್ಣಿನ ಸಾಸಿವೆ ಹೆಚ್ಚಿನವರು ತಯಾರಿಸುವ...

3594. ಉಡುಪಿ ಹೋಟೆಲ್ ಕಥೆ ವ್ಯಥೆ.

#ಉಡುಪಿ_ಹೋಟೆಲ್_ಕಥೆ_ವ್ಯಥೆ #ಸುರೇಶ್_ಕುಮಾರ್_ಎಸ್ ನಮ್ಮ ಕನ್ನಡದ ಹುಡುಗರು ಎಲ್ಲಿ? ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತಿರಬಹುದು.... ಮಾಜಿ ಮಂತ್ರಿಗಳು ತಮ್ಮ ಪೇಸ್ ಬುಕ್ ನಲ್ಲಿ ಇವತ್ತು ಬರೆದ ಲೇಖನ ತುಂಬಾ ಪ್ರಸ್ತುತ ವಿಷಯ ಆಗಿದೆ....   ಅವರು ಈ ಬಗ್ಗೆ ಒಂದು ಚರ್ಚೆ ಹುಟ್ಟು ಹಾಕಿದ್ದಾರೆ ನಾನು 2012 ರಿಂದ ಈ ಉದ್ಯೋಗದಲ್ಲಿ ಇರುವುದರಿಂದ ಇವರ ಪೋಸ್ಟ್ ಗೆ ಬಂದ ಎಲ್ಲಾ ಪ್ರತಿಕ್ರಿಯೆ ನೋಡಿದೆ. #ಮಾಜಿ_ಸಚಿವರ_ಪೋಸ್ಟ್... ಶಿರಸಿ ಗೆ ಕಾರ್ಯನಿಮಿತ್ತ ಗೆಳೆಯರೊಂದಿಗೆ ಹೋಗುತ್ತಿದ್ದಾಗ ಇಂದು ಬೆಳಗ್ಗೆ ನನ್ನಲ್ಲಿ ಪ್ರಶ್ನೆ ಮೂಡಿಸಿದ ಅನುಭವ. ಸಿರಾ ದಾಟಿದ ನಂತರ, ಕಾಫಿ ಕುಡಿಯಲು ಒಂದು ದಕ್ಷಿಣ ಭಾರತೀಯ ಸಸ್ಯಾಹಾರಿ ಆಹಾರಕ್ಕೆ ಹೆಸರುವಾಸಿ ಎಂದು ಘೋಷಿಸಿಕೊಂಡಿರುವ ಹೋಟೆಲ್ ಗೆ ಪ್ರವೇಶಿಸಿದೆವು.  ನಮ್ಮ ಟೇಬಲ್ ಬಳಿ ಬಂದ ಎಲ್ಲ ಸಿಬ್ಬಂದಿ, ಉತ್ತರ ಭಾರತದ ರಾಜ್ಯದವರು. ಎಲ್ಲರ ವಿವರ ಕೇಳಿದ ನಂತರ, ಯಾರಾದರೂ ಒಬ್ಬರಾದರೂ ಕನ್ನಡ ಬಲ್ಲವರನ್ನು ಕರೆತನ್ನಿ ಎಂದು ನಾನು ಕೇಳಿದಾಗ ಬಹಳ ಹೊತ್ತು ಯಾರನ್ನೂ ಕರೆತರಲಿಲ್ಲ.  ಕೊನೆಗೆ ಸಿಕ್ಕ ಉತ್ತರ, ಈ ಶಿಫ್ಟ್ ನಲ್ಲಿ ಯಾರೂ ಇಲ್ಲವೆಂದು.  ಬಹುತೇಕ ಹೋಟೆಲ್ ಗಳಲ್ಲಿ ಎಲ್ಲರದೂ ಇದೇ ಅನುಭವ.  ನಮ್ಮ ಕನ್ನಡದ ಹುಡುಗರು ಎಲ್ಲಿ? ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತಿರಬಹುದು.   ಇದಕ್ಕೆ ಬಂದ ನೂರಾರು ಪ್ರತಿಕ್ರಿಯೆಯಲ್ಲಿ #ಆಯ್ದ_ಕೆಲ_ಪ್ರತಿಕ್ರಿಯೆ ನೋಡಿ... 1....