ಶಂಕರಾಚಾಯ೯ರು_ದಲಿತ_ಶೂದ್ರ_ವಿರೋದಿಯೇ?.. ಹಾಗಿದ್ದರೆ ಅವರು ಕಾಶಿಯಲ್ಲಿ ಮನೀಷಾ ಪಂಚಕಂ ಯಾಕೆ ಬರೆಯುತ್ತಾರೆ... ಜ್ಞಾನವು ಯಾರಿಗೆ ಇರುತ್ತದೆಯೋ ಆತನು ಚಂಡಾಲನಾಗಿರಲಿ ಅಥವಾ ಬ್ರಾಹ್ಮಣನಾಗಿರಲಿ, ಆತನೇ ನನ್ನ ಗುರುಇದು ನನ್ನ ದೃಢವಾದ ನಂಬಿಕೆ ಎಂದು ಮನೀಷಾ ಪಂಚಕಂನಲ್ಲಿ ಬರೆದಿದ್ದಾರೆ ಆದಿ ಶಂಕರಾಚಾರ್ಯರು. ಅವರ ಅನುಯಾಯಿಗಳು ಶಂಕರ ತತ್ವ ತಪ್ಪಾಗಿ ಅರ್ಥೈಸಿಕೊಂಡಿದ್ದರಾ? ... ಮೇಲೂ ಕೀಳು ಎಂಬ ಜಾತಿಗಳ ಆಚರಣೆಗೆ ಕಾರಣವೇನು ಹಾಗಾದರೆ ? ... ಇಂತಹ ಅನುಮಾನ ಶಂಕರಾಚಾರ್ಯರನ್ನ ಆರಾದಿಸುವ ಶೂದ್ರ ದಲಿತ ವರ್ಗದಲ್ಲಿ ಉಳಿದುಬಿಟ್ಟಿದೆ ಈ ಬಗ್ಗೆ ಸರಿಯಾದ ವಿವರಣೆ ನೀಡುವವರು ಇದ್ದರೆ ಮಾಹಿತಿ ನೀಡಿ. ಏನಿದು #ಮನೀಷಾ_ಪಂಚಕಂ?... ಆಸಕ್ತಿ ಇದ್ದರೆ ಕೆಳಗಿನ ಲೇಖನ ಪೂರ್ತಿ ಓದಿ. ಮನೀಷಾ ಪಂಚಕಂ ಎಂಬುದು ಆದಿ ಶಂಕರಾಚಾರ್ಯರು ಸಂಸ್ಕೃತದಲ್ಲಿ ರಚಿಸಿದ ಅತ್ಯಂತ ಪ್ರಸಿದ್ಧವಾದ ಮತ್ತು ಕ್ರಾಂತಿಕಾರಕವಾದ ಐದು ಶ್ಲೋಕಗಳ ಸ್ತೋತ್ರವಾಗಿದೆ. 'ಮನೀಷಾ' ಎಂದರೆ 'ದೃಢವಾದ ನಂಬಿಕೆ' ಅಥವಾ 'ಅಭಿಪ್ರಾಯ' ಎಂದರ್ಥ ಅವರ ದೃಷ್ಟಿಯಲ್ಲಿ ಜಾತಿ, ವರ್ಗಗಳ ಭೇದವಿಲ್ಲ ಎಂಬುದನ್ನು ಸಾರುವ ಅದ್ವೈತ ವೇದಾಂತದ ಸಾರ ಇಲ್ಲಿದೆ. ಐತಿಹಾಸಿಕ ಹಿನ್ನೆಲೆ (ಕಥೆ) ಒಮ್ಮೆ ಆದಿ ಶಂಕರಾಚಾರ್ಯರು ತಮ್ಮ ಶಿಷ್ಯರೊಂದಿಗೆ ಕಾಶಿಯ ಗಂಗಾನದಿಯಲ್ಲಿ ಸ್ನಾನ ಮುಗಿಸಿ, ವಿಶ್ವನಾಥನ ದರ್ಶನಕ್ಕೆ ಹೊರಟಿದ...
ಮಲೆನಾಡಿನಲ್ಲಿ_ಈ_ವರ್ಷ_ಮುಂಗಾರು... ಜೂನ್ ಪ್ರಾರಂಭದಲ್ಲಿ ಮುಂಗಾರು ಕ್ಷೀಣವಾಗಿತ್ತಾದರೂ ಜುಲೈ ಅಂತ್ಯ ಮತ್ತು ಆಗಸ್ಟ್ ಮೊದಲ ವಾರದ ಮಳೆಯಿಂದ ವಾಡಿಕೆ ಮಳೆ ಪ್ರಮಾಣ ತಲುಪಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಜೂನ್ನಿಂದ ಆಗಸ್ಟ್ ಆರಂಭದವರೆಗೆ ಜಿಲ್ಲೆಯ ವಾಡಿಕೆ ಮಳೆಯ ಪ್ರಮಾಣ ಸುಮಾರು 1,048.60 ಮಿ.ಮೀ ಇರಬೇಕಿರುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಋತುವಿನ ಮಳೆ ಪ್ರಮಾಣ ಇವತ್ತಿನವರೆಗೆ ಒಟ್ಟಾರೆ ಮಳೆ ಪ್ರಮಾಣ ಆಗಸ್ಟ್ ಮೊದಲ ವಾರದವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸರಾಸರಿ ವಾಡಿಕೆ ಮಳೆಯ ಪ್ರಮಾಣ ಸುಮಾರು 1,048.60 ಮಿ.ಮೀ (mm) ತಲುಪಿದೆ. ಜುಲೈ ಅಂತ್ಯದಲ್ಲಿ ಆರಂಭಿಕ ಕೊರತೆ ಕಂಡುಬಂದಿತ್ತಾದರೂ, ಜುಲೈ ಕೊನೆಯ ವಾರ ಮತ್ತು ಆಗಸ್ಟ್ ಮೊದಲ ವಾರದಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ಜಿಲ್ಲೆಯ ಮಳೆ ಪ್ರಮಾಣ ವಾಡಿಕೆ ಮಟ್ಟಕ್ಕೆ ಚೇತರಿಸಿಕೊಂಡಿದೆ. ಕಳೆದೆರೆಡು ವರ್ಷಕ್ಕಿಂತ ಈ ವರ್ಷ ಮಳೆ ಪ್ರಮಾಣ ಪ್ರಾರಂಭದಲ್ಲಿ ಕಡಿಮೆ ಆದರೂ ಜೋಗ್ ಜಲಪಾತ ಮೈ ತುಂಬಿ ಹರಿಯುತ್ತಿದೆ. ಪ್ರವಾಸಿಗರು ಜೋಗ್ ಫಾಲ್ಸ್ ನೋಡಲು ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕಳೆದ ವರ್ಷ ಇದೇ ದಿನ ಲಿಂಗನಮಕ್ಕಿ ಅಣೆಕಟ್ಟು 85% ತುಂಬಿತ್ತು ಅವತ್ತು ನೀರಿನ ಮಟ್ಟ 1812 ಅಡಿ . ಇವತ್ತು ಬೆಳಿಗ್ಗೆ ಲಿಂಗನಮಕ್ಕಿ ಡ್ಯಾಮ್ ಶ...