Skip to main content

Posts

3557. ಶಿಕಾರಿಪುರ ಗೋಣಿ ಮಾಲತೇಶ್

#ಶಿಕಾರಿಪುರದ_ಗೋಣಿ_ಮಾಲ್ತೇಶ್ #ಕೆ_ಪಿ_ಸಿ_ಸಿ_ಸದಸ್ಯರು #ಯಡ್ಯೂರಪ್ಪ_ಮತ್ತು_ಅವರ_ಪುತ್ರ_ವಿಜೇಂದ್ರರ_ವಿರುದ್ದ_ಕಾಂಗ್ರೇಸ್_ಅಭ್ಯರ್ಥಿ_ಆಗಿದ್ದವರು #ಶಿಕಾರಿಪುರದಲ್ಲಿ_ಯಡೂರಪ್ಪ_ಪ್ರಭಾವವ_ಪ್ರವಾಹದ_ವಿರುದ್ಧ_ಇವರ_ಹೋರಾಟ. #ಹಿಂದುಳಿದ_ವರ್ಗದ_ಜನನಾಯಕರ_ಹೋರಾಟದ_ಸರಣಿ_ಸಂದರ್ಶನದ_ಸರಣಿ. #Shikaripura #Gonimalthesh    #karnatakapradeshcongress  #Yadyurappa #Vijendrayadyurappa #Congress #BJP #siddaramiaha #DKShivakumar #Bangarappa.    ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲಿ ಶಿಕಾರಿಪುರದ ರಾಜಕಾರಣವೇ ಬೇರೆ ರೀತಿಯದ್ದು.    ಇಲ್ಲಿಯೇ ರಾಜ್ಯದ ಪ್ರಬಲ RSS ಜನಸಂಘಗಳು ಹುಟ್ಟಿದ್ದು ಇದರಿಂದ ಶಿಕಾರಿಪುರಕ್ಕೆ ಕರ್ನಾಟಕ ರಾಜ್ಯದ ನಾಗಪುರ ಎಂಬ ಹೆಸರು ಬಂದಿದೆ.    1983ರಲ್ಲಿ ಮೊದಲ ಬಾರಿಗೆ ಯಡೂರಪ್ಪನವರು ವಿಧಾನ ಸಭೆಗೆ ಆಯ್ಕೆ ಆಗುತ್ತಾರೆ ಅದೇ ಸಂದರ್ಭದಲ್ಲಿ ಯುವಕ ಗೋಣಿ ಮಾಲ್ತೇಶ್ ಪುರಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪ್ರಚಾರದಿಂದ ರಾಜಕಾರಣಕ್ಕೆ ಪ್ರವೇಶ ಮಾಡುತ್ತಾರೆ.   ಆ ವರ್ಷ ಯಡ್ಯೂರಪ್ಪರ ಪತ್ನಿ ಶ್ರೀ ಮತಿ #ಮೈತ್ರಾದೇವಿ ಕಾಂಗ್ರೇಸ್ ನ ನಾಗರತ್ನಮ್ಮ ಎನ್ನುವವರ ಎದುರು ಪುರಸಭಾ ಚುನಾವಣೆಯಲ್ಲಿ ಸೋಲುತ್ತಾರೆ.    ಕಳೆದ 42 ವರ್ಷದಿಂದ ಶಿಕಾರಿಪುರದಲ್ಲಿ ಯಡ್ಯೂರಪ್ಪರಂತ ಬಲಾಡ್ಯ ಚಾಣಾಕ್ಷ ರಾಜಕಾರಣಿ ವಿರುದ್ದ ಇವರು ...
Recent posts

3556. ಕುಮ್ಕಿ ಆನೆಗಳು

#ಕುಮ್ಕಿ_ಆನೆ_ಎಂದರೆ_ಏನು? #ಕುಮ್ಕಿ_ಆನೆಗಳು_ಹೆಣ್ಣಾನೆಗಳೆ_ಹೆಚ್ಚು_ಯಾಕೆ? #ಸೊರಬದಲ್ಲಿ_ಎರೆಡು_ಕಾಡಾನೆಗಳನ್ನ_ಭದ್ರಾ_ಅಭಯಾರಣ್ಯಕ್ಕೆ_ಕಳಿಸಲು #ನಾಲ್ಕು_ಕುಮ್ಕಿ_ಆನೆಗಳು_ಬಂದಿದೆ. #ಎರಡನೆ_ದಿನದ_ಕಾರ್ಯಾಚರಣೆ_ಮುಗಿದಿದೆ. #ಕಾಡಾನೆಗಳು_ಬರಗಿ_ಕಾಡಿನಿಂದ_ಹೊರಬರುತ್ತಿಲ್ಲ #Kumki #Elephant #corridor #soraba #baragi #wildlife #karnatakaforest     ದಿನಾಂಕ 8- ಡಿಸೆಂಬರ್- 2025ರ ಸಂಜೆ ಸೊರಬ ತಾಲೂಕಿಗೆ ಸಕ್ರೆಬಯಲು ಆನೆ ಕ್ಯಾಂಪಿನಿಂದ ನಾಲ್ಕು ಕುಮ್ಕಿ ಆನೆಗಳನ್ನ ಕರೆತರಲಾಗಿತ್ತು.    ನಿನ್ನೆ ಮತ್ತು ಇವತ್ತು ಅಂದರೆ 9-ಡಿಸೆಂಬರ್- 2025 ಮಂಗಳವಾರ ಮತ್ತು 10-ಡಿಸೆಂಬರ್- 2025 ಬುಧವಾರ ಎರೆಡು ದಿನ ಸೊರಬ ತಾಲೂಕಿನ #ಬರಗಿ ಅರಣ್ಯದಲ್ಲಿರು ಎರೆಡು ಕಾಡಾನೆಗಳನ್ನ ಅವುಗಳು ಬಂದ ದಾರಿಯಲ್ಲೇ ವಾಪಾಸು ಭದ್ರಾ ಅಭಯಾರಣ್ಯಕ್ಕೆ ಕಳಿಸಲು ಪ್ರಯತ್ನಿಸುತ್ತಿದೆ..    ಆದರೆ ಈ ಎರೆಡು ಕಾಡಾನೆಗಳು ಬರಗಿ ಕಾಡಿನಿಂದ ಹೊರಬರುತ್ತಿಲ್ಲ ಮತ್ತು ಥರ್ಮಲ್ ಡ್ರೋನ್ ಕ್ಯಾಮೆರಾಗೆ ಮೊದಲ ದಿನ ದಾಖಲಾದ ಈ ಕಾಡಾನೆಗಳು, ಎರಡನೆ ದಿನ ದಾಖಲಾಗಿಲ್ಲ ಎಂಬ ಸುದ್ದಿ ಇದೆ.   ಈ ಸಕ್ರೆ ಬಯಲಿನಿಂದ ಕರೆ ತಂದಿರುವ ತರಬೇತಿ ಪಡೆದ ನಾಲ್ಕು ಸಾಕಾನೆಗಳಿಗೆ ಕುಮ್ಕಿ ಆನೆ ಅಂತ ಏಕೆ ಕರೆಯುತ್ತಾರೆ? ಎಂಬ ಕುತೂಹಲ ಎಲ್ಲರಿಗೂ ಇದೆ.     ಕುಮ್ಕಿ ಆನೆಗಳು ಎಂದರೆ ಕಾಡಾನೆಗಳನ್ನು ಹಿಡಿಯಲು, ನಿ...

3555. ಬದಲಾದ ಕೋಳಿ ಸಾಕಾಣಿಕೆ

#ಒಂದು_ಕಾಲದ_ನಮ್ಮ_ಹಳ್ಳಿಗಳ_ಕೋಳಿ_ಗೂಡಿನ_ಕೋಳಿಗಳು #ಈಗ_ಲಕ್ಷಾಂತರ_ಕೋಟಿ_ವಹಿವಾಟಿನ_ಬೃಹತ್_ಉದ್ಯಮ #ಸಂಪ್ರದಾಯಿಕ_ಗೃಹಬಳಕೆಯ_ಕೋಳಿ_ಸಾಕಾಣಿಕೆ. #ಒಂದು_ಕಾಲದಲ್ಲಿ_ಕುಟುಂಬದ_ಆರ್ಥಿಕ_ಬದ್ರತೆಗೆ_ಉರುಗೋಲಾಗಿತ್ತು. #ಕುಟುಂಬದ_ಆರ್ಥಿಕ_ಸಬಲತೆಗೆ_ಆಹಾರ_ಸ್ವಾವಲಂಬನೆಗೆ_ಕಾರಣವಾಗಿತ್ತು. #ಅದುನಿಕ_ಡೈರಿ_ಪೌಲ್ಟ್ರಿ_ಕೈಗಾರಿಕೆಗಳಾದ್ದರಿಂದ_ಗೃಹ_ಕೋಳಿ_ಸಾಕಾಣಿಕೆ_ನಶಿಸಿದೆ. #ಸಮ_ಪಾಲಿನ_ಕೋಳಿ_ಹಾವಿನ_ವಿಷ_ನಿವಾರಣೆಯ_ಕಪ್ಪು_ಕೋಳಿ #ಮಂತ್ರವಾದಿಗಳು_ಕೇಳುವ_ಕೆಂಪು_ಕೋಳಿ_ಹಳ್ಳಿಯ_ದೈವಕ್ಕೆ_ಹರಕೆಯ_ನಾಟಿ_ಕೋಳಿ. #Foultry #chicken #Magician #snakebite #naatichicken   ಆಗೆಲ್ಲ ಹಳ್ಳಿಯ ದೈವ ಬೂತಗಳು ಪಾರಂ ಕೋಳಿ ಬಲಿ ಒಪ್ಪಿಕೊಂಡಿರದ ಕಾಲ.    ಆಗೆಲ್ಲ ಅಂದರೆ ಬಹಳ ದಿನ ಆಗಿಲ್ಲ, ಕೇವಲ 30 ವರ್ಷದ ಹಿಂದೆ ಈ ಪಾಟಿ ಕೋಳಿ ಮಾಂಸದ ಪೋಲ್ಟ್ರಿ ಉದ್ಯಮ ಬೆಳೆದಿರಲಿಲ್ಲ.    ಹಳ್ಳಿಗಳ ದೈವಗಳು ಬೂತಗಳು ಪಾರಂ ಕೋಳಿ ಬಲಿ ಒಪ್ಪಿಕೊಂಡಿರದ ಆ ಕಾಲದಲ್ಲಿ ಹಳ್ಳಿಯ (ಮೇಲ್ಜಾತಿ ಹೊರತುಪಡಿಸಿ) ಪ್ರತಿ ಮನೆಯಲ್ಲೂ ಕೋಳಿ ಗೂಡು ಇರುತ್ತಿತ್ತು.    ಅದರಲ್ಲಿ ಕನಿಷ್ಟ ಹತ್ತಿಪ್ಪತ್ತು ಕೋಳಿಗಳು ಇರುತ್ತಿದ್ದವು.   ಮನೆಯ ಅತ್ಯಂತ ಕಿರಿಯ ವಯಸ್ಸಿನ ಸದಸ್ಯನಿಗೆ ಬೆಳಿಗ್ಗೆ ಕೋಳಿ ಗೂಡಿನ ಬಾಗಿಲು ತೆಗದು ಕೋಳಿ ಹೊರಬಿಡುವುದು ಅವು ಸೂರ್ಯ ಮುಳುಗುವ ಸಮಯದಲ್ಲಿ ಹೊಟ್ಟೆ ತುಂಬಿಸಿಕೊಂಡು ಗೂಡಿಗೆ ಮರಳು...

3554. ದಕ್ಷಿಣದಿಂದ ಉತ್ತರಕ್ಕೆ ಆನೆ ಸಂಚಾರ

#ಆನೆ_ಕಾರಿಡಾರ್ #ದಕ್ಷಿಣದಿಂದ_ಉತ್ತರಕ್ಕೆ_ಕಾಡಾನೆ_ಸಂಚಾರ_ಏಕೆ? #ಈ_ಕಾಡಾನೆಗಳ_ಉತ್ತರ_ಪ್ರಯಣ_ಬಹಳ_ಮುಖ್ಯ_ಎನ್ನುತ್ತಾರೆ #ಆನೆಗಳ_ತಜ್ಞರಾದ_ಅಶ್ವಿನ್_ಭಟ್ #Elephantcorridor #Bhadrawildlife #Kaliwildlife #westernghats     ಇವರು ಅಶ್ವಿನ್ ಭಟ್ ಹಾಸನದ ನೇಚರ್ ಕನ್ಸರ್ವೇಷನ್ ಪೌಂಡೇಶನ್ ನಲ್ಲಿ ಕಾಡಾನೆಗಳ ಬಗ್ಗೆ ಕೆಲಸ ಮಾಡಿದ್ದಾರೆ.     ಈಗ ಪ್ರಾಜೆಕ್ಟ್ ಅಸಿಸ್ಟೆಂಟ್ ಆಗಿ Environmental Management and Policy Research Institute ಸಂಶೋಧನಾ ಕೆಲಸದಲ್ಲಿದ್ದಾರೆ.   ದಕ್ಷಿಣದಿಂದ ಉತ್ತರಕ್ಕೆ ಕಾಡಾನೆಗಳ ಸಂಚಾರದಲ್ಲಿ ಕಳೆದ ಮೂರು ವರ್ಷದಿಂದ ನಮ್ಮೂರಿನ ಮೂಲಕ ಸಂಚರಿಸುವ ಕಾಡಾನೆ ಬಗ್ಗೆ ನಾನು ಬರೆಯುತ್ತಿರುವ ಪೇಸ್ ಬುಕ್ ಲೇಖನಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.   ಇಂತಹ ಉಪಯುಕ್ತ ಮಾಹಿತಿ ಆನೆ ಕಾರಿಡಾರ್ ಪ್ರವೇಶದಲ್ಲಿ ವಾಸಿಸುವವರಿಗೆ ಮತ್ತು ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉಪಯುಕ್ತ ಮಾಹಿತಿ ಆಗಿದೆ ಒಮ್ಮೆ ಈ ಕೆಳಗಿನ ಲೇಖನ ಓದಿ. #ಅಶ್ವಿನ್_ಭಟ್_ಅವರ_ಪ್ರತಿಕ್ರಿಯೆ.....   ಅವು ಬೇರೆ ಹಿಂಡು ಸೇರಲೆಂದೇ ದೂರದಿಂದ ಕ್ರಮಿಸಿ ಬಂದಿರುವ ಸಾಧ್ಯತೆ ಹೆಚ್ಚಿದೆ.    ಉತ್ತರ ಕನ್ನಡದಲ್ಲಿರುವ ಸಣ್ಣ ಆನೆ ಗುಂಪು ದಕ್ಷಿಣದ ಬೇರೆ ಸಮೂಹಗಳಿಂದ ದಶಕಗಳಿಂದ ಸರಿಯಾದ ಸಂಪರ್ಕವಿಲ್ಲದೆ ಸೊರಗುತ್ತಿದೆ.     ಅವುಗಳ ಸಂಖ್ಯೆ ಹಾಗೂ genetic ...

3553. ದೂಗೂರು ಕಾಡಿನಿಂದ ಹೊರಬರದ ಕಾಡಾನೆಗಳು

#ಸೊರಬ_ತಾಲ್ಲೂಕಿನ_ದೂಗೂರು_ಕಾಡಿನಿಂದ #ಹೊರಬರದ_ಎರೆಡು_ಕಾಡಾನೆಗಳು #ಮೂರು_ದಿನದಿಂದ_ಸಕ್ರೆಬೈಲಿನ_ನಾಲ್ಕು_ಕುಮ್ಕಿ_ಆನೆಗಳು #ಅನೇಕ_ಅನುಭವಿ_ಮಾವುತರು #ನೂರಾರು_ಅರಣ್ಯ_ಇಲಾಖೆ_ಸಿಬ್ಬಂದಿ_ಶ್ರಮಿಸುತ್ತಿದ್ದಾರೆ #wildelephant #elephantcorridor #soraba #duguru #ulavi #barigi #kyasahuru.    ಭದ್ರಾ ಅಭಯಾರಣ್ಯದ ಕಾಡಾನೆಗಳು ಮಲೆನಾಡಿನಲ್ಲಿ ತಮ್ಮ ಆಹಾರ ಮತ್ತು ಸಂತಾನೋತ್ಪತ್ತಿಗಾಗಿ ಹೊಸ ಕಾರಿಡಾರ್ ವಿಸ್ತರಿಸಿಕೊಂಡು ಮೂರು ವರ್ಷ ಆಗಿದೆ.   ಅವುಗಳು ಸೊರಬ ತಾಲ್ಲೂಕಿನ ಮೂಲಕ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಭಾಗದ ಕಾಳಿ ಅಭಯಾರಣ್ಯದ ಆನೆಗಳ ಸಂಪರ್ಕಿಸಲು ಪ್ರಯತ್ನದಲ್ಲಿದೆ.      ಅವುಗಳನ್ನ ಓಡಿಸುವ ಪ್ರಯತ್ನ ಮಾಡದೆ ಅವುಗಳಷ್ಟಕ್ಕೇ ಬಿಟ್ಟಿದ್ದರೆ ಇನ್ನೂ ಕೆಲವು ಕಿಲೋ ಮೀಟರ್ ಮುಂದೆ ಸಾಗಿ ಈ ವರ್ಷವೇ ದಾಂಡೇಲಿ ಅಭಯಾರಣ್ಯ ಸೇರುತ್ತಿತ್ತು ಅಥವ ಅಲ್ಲಿಗೆ ಸೇರಿ ಕೆಲ ದಿನದ ನಂತರ ವಾಪಾಸು ಬರುವ ಸಾಧ್ಯತೆ ಇತ್ತು ಅಥವ ಉಳುವಿ ಕಾಡಿನಿಂದಲೇ ವಾಪಾಸು ಬಂದ ದಾರಿಯಲ್ಲೇ ವಾಪಾಸಾಗಿ ಮುಂದಿನ ವರ್ಷ ಇದೇ ತಿಂಗಳಲ್ಲಿ ಪುನಃ ದಾಂಡೇಲಿ ಅಭಯಾರಣ್ಯಕ್ಕೆ ಹೋಗುವು ಪ್ರಯತ್ನ ಮಾಡುತ್ತಿತ್ತು ಎಂದು ಆನೆಗಳ ತಜ್ಞರು ಮತ್ತು ಅರಣ್ಯ ಇಲಾಖೆಯ ಹೆಸರು ಹೇಳಿಕೊಳ್ಳದ ಕೆಲವು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.    ಇವತ್ತು ಬೆಳಿಗ್ಗೆ  ಥಮ೯ಲ್ ಡ್ರೋನ್ ಕ್ಯಾಮೆರಾದಲ್ಲಿ ದೂಗೂರು ಅರಣ್...

3552. ಖ್ಯಾತ ಇತಿಹಾಸ ಬ್ಲಾಗರ್ ಆನಂದಪುರಂ ಬೇಟಿ

#ನಮ್ಮೂರು_ಆನಂದಪುರಂ_ಬ್ರಿಟೀಷರು_ಕಂಡಂತೆ. #ಸುಬಾಷ್_ಚಂದ್ರ_ಬೋಸ್_ಸೈನ್ಯದ_ಪ್ರಮುಖ_ಐಎನ್‌ಎ_ರಾಮರಾವ್_ಆನಂದಪುರಂಗೆ_ಬಂದಾಗ. #ಈ_ಐತಿಹಾಸಿಕ_ಕಾಯ೯ಕ್ರಮದಲ್ಲಿ_ವಾಚನೆ_ಮಾಡಿದ_ಸೆಕ್ಷನ್_V_ಮೈಸೂರು_ಗೆಜೆಟೆಯರ್. #ಆನಂದಪುರಂನಲ್ಲಿ_ನಡೆದ_ಘೋರ_ಹತ್ಯಾಕಾಂಡಕ್ಕೆ_ಬ್ರಿಟೀಷ್_ಸ್ಯೆನ್ಯಾದಿಕಾರಿ_ಜನರಲ್_ಮ್ಯಾಥ್ಯೂ_ಕಾರಣ. #ಇವರನ್ನು_ಸದೆಬಡಿದು_ಶ್ರೀರಂಗಪಟ್ಟಣದಲ್ಲಿ_ಕಾಲಪಾನಿ_ಶಿಕ್ಷೆ_ನೀಡಿದ್ದು_ಟಿಪ್ಪೂಸುಲ್ತಾನ್ #ನಾನೂರಕ್ಕೂ_ಹೆಚ್ಚು_ಸ್ತ್ರಿಯರು_ಬ್ರಿಟೀಷ್_ಸೈನಿಕರ_ಬಂದೂಕಿನಿಂದ_ತಿವಿಯಲ್ಪಟ್ಟು_ಜೀವತ್ಯಾಗ. #ಟಿಪ್ಪೂ_ಸುಲ್ತಾನರ_ಅನೇಕ_ಸೈನಿಕರು_ಜೀವತ್ಯಾಗವಾಗುತ್ತದೆ_ಅವರೆಲ್ಲರ_ಸಮಾದಿ_ಯಡೇಹಳ್ಳಿ_ಖಬರಸ್ಥಾನದಲ್ಲಿದೆ. #ಮೈಸೂರಿನ_ಕಥೆಗಳು #ಇದು_ಪ್ರಸಕ್ತ_ನಾಡಿನ_ಪ್ರಖ್ಯಾತ_ಚಾನಲ್ #ಇದು_ಮೈಸೂರಿನ_ಇಂಜಿನಿಯರ್_ಧರ್ಮೇಂದ್ರಕುಮಾರ್_ಅರೇನಳ್ಳಿ_ಅವರದ್ದು #ಅವರು_ಆನಂದಪುರಂ_ಬಗ್ಗೆ_ಮಾಡಿದ_ಟಿಪ್ಪು_ಸುಲ್ತಾನ್_ವಿಡಿಯೊ_ವೈರಲ್_ಆಗಿದೆ #Mysorinakathegalu #Dharmendrakumararenalli #Anandapuram #Tippusulthan #INA #Ramarao      ಮೈಸೂರಿನ ಕಥೆಗಳು ಎನ್ನುವ ಪ್ರಖ್ಯಾತ Youtuber ದರ್ಮೇಂದ್ರ ಕುಮಾರ್ ಅರೆಹಳ್ಳಿ ಕಳೆದ ವಾರ  ಸಾಗರ - ಅನಂದಪುರಂ -ರಿಪ್ಪನ್ ಪೇಟೆ - ಸಕ್ರೆಬೈಲ್ -ಶಿವಮೊಗ್ಗ ಒಟ್ಟು 122 ಕಿಮೀ ಸೈಕ್ಲಿಂಗ್ ಮಾಡಿ Vlog ಮಾಡಿದ್ದಾರೆ.    ಅದರಲ್ಲಿ ಅವರ ಆನಂದಪುರಂ ಬೇಟಿಯ ವಿಡ...

3551. ಸೊರಬ ತಾಲೂಕು ಪ್ರವೇಶ ಮಾಡಿದ ಕಾರಿಡಾರ್ ಆನೆ

#ಮಲೆನಾಡಿನ_ಆನೆ_ಕಾರಿಡಾರ್ #ಸೊರಬ_ತಾಲ್ಲೂಕಿನ_ಉಳುವಿ_ಕಾಡಿನಿಂದ #ಸಾಗರ_ತಾಲ್ಲೂಕಿನ_ಅಂಬ್ಲಿಗೋಳ_ರೇಂಜಿಗೆ #ಅರಣ್ಯ_ಇಲಾಖೆ_ಎರಡು_ಕಾಡಾನೆ_ಓಡಿಸಲಾಗಿದೆ #ಒಂದೇ_ರಾತ್ರಿ_40_ಕಿಮಿ_ಓಡಿಸಿದ್ದಾರೆ #ನಾಲ್ಕು_ಕುಮ್ಕಿ_ಆನೆ_ಸಿಬ್ಬಂದಿಗಳು_ಪಟಾಕಿ_ಬಳಿಸಿ_ಓಡಿಸಲಾಗಿದೆ #wildlifeconservation #elephants #corridor #soraba #ulavi #Ambligola    ಆನಂದಪುರಂ ಆನೆ ಕಾರಿಡಾರ್ ಗೆ ಮೂರು ವರ್ಷದಿಂದ ಭದ್ರಾ ಅಭಯಾರಣ್ಯದಿಂದ ಕೆಲವು ತಂಡಗಳಲ್ಲಿ ಕಾಡಾನೆಗಳು ಈ ಪ್ರದೇಶದಲ್ಲಿ ಸಂಚರಿಸುತ್ತಿದೆ.   ಪ್ರತಿ ವರ್ಷ ಹತ್ತಿಪ್ಪತ್ತು ಕಿಲೋ ಮೀಟರ್ ವಿಸ್ತರಿಸುತ್ತಾ ಉತ್ತರದ ಕಡೆ ಸಾಗಿ ವಾಪಾಸಾಗುತ್ತಿದೆ.   ಕಳೆದ ವರ್ಷ ಲಾವಿಗೆರೆಗೆ ತಲುಪಿದ್ದ ಈ ಕಾಡಾನೆ ತಂಡದಲ್ಲಿ ಈ ವರ್ಷದ ಮೊದಲ ತಂಡ ಸೊರಬ ತಾಲೂಕಿನ ಉಳುವಿ ತನಕ ತಲುಪಿತ್ತು.   ಅಲ್ಲಿಂದ ಅರಣ್ಯ ಇಲಾಖೆ ಸತತ ನಾಲ್ಕು ದಿನಗಳಿಂದ ನಾಲ್ಕು ಕುಮ್ಕಿ ಆನೆ, ಮಾವುತರು ಮತ್ತು ಸಿಬ್ಬಂದಿಗಳ ಪ್ರಯತ್ನದಿಂದ ನಿನ್ನೆ ಒಂದೇ ರಾತ್ರಿ 40 ಕಿಲೋ ಮೀಟರ್ ಗಳಷ್ಟು ದೂರ ಓಡಿಸಿದ್ದಾರೆ.    ಸೊರಬ ತಾಲ್ಲೂಕಿನ ರೇಂಜ್ ಫಾರೆಸ್ಟ್ ಗಡಿ ದಾಟಿಸಿ ಸಾಗರ ತಾಲೂಕಿನ ಅಂಬ್ಲಿಗೋಳ ರೇಂಜ್ ಫಾರೆಸ್ಟ್ ತಲುಪಿರುವ ಈ ಕಾಡಾನೆಗಳು ಇಲ್ಲಿಂದ ಎಲ್ಲಿಗೆ ಹೋಗುತ್ತದೆ ಕಾದು ನೋಡ ಬೇಕು.    ಈ ಕಾರಿಡಾರ್ ಗೆ ಬರುವ ಪ್ರಯತ್ನದಲ್ಲಿ ಎರಡನೆ ತಂಡ ಪ್ರಯತ್ನಿಸುತ್ತಿರುವ ಸು...