Skip to main content

Posts

3512. ಕರ್ನಲ್ ಕಾಲಿನ್ ಮೆಕೆಂಜಿ

#ಇತಿಹಾಸ_ಆಸಕ್ತರು_ತಪ್ಪದೇ_ಓದಿ #ಕರ್ನಲ್_ಕಾಲಿನ್_ಮೆಕೆಂಜೆ #ಭಾರತದ_ಭೂಪಟ_ದಾಖಲಿಸಿದವರು #ಮೆಕೆಂಜೆಯು_ಹೆಚ್ಚು_ಕಡಿಮೆ_ಗೆಜೆಟಿಯರ್_ಕೆಲಸವನ್ನೆ_ಮಾಡಿದ್ದಾರೆ. #ಕೈಪಿಯತ್_ಎಂದರೆ_ಸ್ಥಳ_ಪುರಾಣ, #ಮೆಕೆಂಜೆ_ದಾಖಲೆಯಲ್ಲಿ_ಶಿವಮೊಗ್ಗ_ಜಿಲ್ಲೆಯಲ್ಲಿ_ಏನೇನು_ದಾಖಲಾಗಿದೆ? #colonelmechenje #kaifiyath #shivamogga #map #survey #history    ಕರ್ನಲ್ ಕಾಲಿನ್ ಮೆಕೆಂಜೆ ದಾಖಲಿಸಿದ ಶಿವಮೊಗ್ಗದ ನಕ್ಷೆ ಹಿಡಿದು ಕೊಂಡು ಶಿವಮೊಗ್ಗದ ಕೆಲ ಇತಿಹಾಸ ಸಂಶೋದಕರು ಕೆಲ ಪ್ರದೇಶಗಳ ಸಂಶೋದನೆ ಮಾಡಿದ್ದಾರೆ.     ಆ ಸ್ಥಳಗಳು ದೇಶದ ಇತಿಹಾಸ ಆಸಕ್ತರಿಗೆ ಅತ್ಯಾಮೂಲ್ಯವಾದ ಮಾಹಿತಿಗಳು ಹೆಚ್ಚು ಕಡಿಮೆ ಅವುಗಳು ಜನಮಾನಸ ಮರೆತಿರುವ ಅಥವ ಕಾಲನ ಹೊಡೆತಕ್ಕೆ ಅಸ್ತಿತ್ವ ಕಳೆದು ಕೊಂಡಂತವು.     ಭಾರತದ ಇತಿಹಾಸ ಸಂಸ್ಕೃತಿಯ ಜ್ಞಾನ ಕೋಶವೇ ಆದ ಕರ್ನಲ್ ಕಾಲಿನ್ ಮೆಕೆಂಜಿ ಬಗ್ಗೆ ನಾವು ತಿಳಿಯದಿದ್ದರೆ ಭಾರತೀಯ ಇತಿಹಾಸವೇ ನಮಗೆ ತಿಳಿಯಲು ಸಾಧ್ಯವಿಲ್ಲ.      ಆದ್ದರಿಂದಲೇ ಕರ್ನಲ್ ಮೆಕೆಂಜಿಯ ವಿವರಗಳು ದೀರ್ಘವಾದರೂ ಇದನ್ನು ತಪ್ಪದೇ ಓದಿ.     ಮುಂದಿನ ದಿನಗಳಲ್ಲಿ ಕರ್ನಲ್ ಮೆಕಿಂಜೆ ನಕ್ಷೆ ಹಿಡಿದು ಶಿವಮೊಗ್ಗ ಜಿಲ್ಲೆಯ ಕೆಲ ಪ್ರಮುಖ ಸ್ಥಳ  ಸಂಶೋಧನೆ ಮಾಡಿದ ಸಂಶೋಧಕರ ಅನುಭವದ ಸಾಹಸ ತಿಳಿಯಲು ಸಹಾಯ ಆಗಲಿದೆ. ಕರ್ನಲ್ ಮೆಕೆಂಜಿ : ಕರ್ನಾಟಕದ ಇತಿಹಾಸ ಮತ್ತು ಕನ್ನಡ ಸಾಹಿ...
Recent posts

3511. ಕುಮುದ್ವತಿ ನದಿ ಉಗಮ ಸ್ಥಾನ ಬಿಲ್ಲೇಶ್ವರ

#ಶಿವಮೊಗ್ಗ_ಜಿಲ್ಲೆಯ_ಕುಮುದ್ವತಿ_ನದಿ #ತುಂಗಾಭದ್ರಾ_ನದಿಯ_ಉಪನದಿ #ಶಿಕಾರಿಪುರ_ತಾಲ್ಲೂಕಿನ_ಅಂಜನಾಪುರದ_ಆಣೆಕಟ್ಟು  #ಮದಗಮಾಸೂರು_ಕೆರೆಗೆ_ತುಂಬಿಸುತ್ತದೆ #ಹರಿಹರದ_ಮುದೇನೂರು_ಸಮೀಪ_ತುಂಗಾಭದ್ರಾ_ನದಿಗೆ_ಸೇರುತ್ತದೆ. #ಕುಮುದ್ವತಿ_ಅಂದರೆ_ಕಮಲದ_ಹೂವು_ಎಂಬ_ಅರ್ಥ_ಕೂಡ_ಇದೆ. #ಬಿಲ್ಲೇಶ್ವರ_ಐದು_ನದಿಗಳ_ಉಗಮ_ಸ್ಥಾನ_ಎಂಬುದು_ಆಶ್ಚಯ೯_ಆದರೂ_ಸತ್ಯ #shimogadistrictriver #kumadvathiriver #hosanagara #karnatakastateirrigationdept #Shikaripura #anjanapuradam #madagkere    ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಸಮೀಪದ ಬಿಲ್ಲೇಶ್ವರ ದೇವಾಲಯದ ಸಮೀಪದ ಬೆಟ್ಟದಲ್ಲಿ ಕುಮುದ್ವತಿ ನದಿ ಉಗಮವಾಗಿ 96 ಕಿ.ಮಿ. ಹರಿದು ತುಂಗಾಭದ್ರಾ ನದಿ ಸೇರುತ್ತದೆ.   ಈ ನದಿಗೆ ಶಿಕಾರಿಪುರ ತಾಲ್ಲೂಕಿನ ಅಂಜನಾಪುರದಲ್ಲಿ 1936 ರಲ್ಲಿ 1600 ಅಡಿ ಉದ್ದದ ಮತ್ತು 23 ಅಡಿ ಎತ್ತರದ ಮಣ್ಣಿನ ಏರಿಯಾ ಆಣೆಕಟ್ಟು ಮೈಸೂರು ಮಹಾರಾಜರು ನಿರ್ಮಿಸಿದ್ದರು.    1996-97 ರಲ್ಲಿ ಆಗಿನ ಜೆ.ಹೆಚ್.ಪಟೇಲರ ಸರ್ಕಾರ 200 ಕೋಟಿ ವೆಚ್ಚದಲ್ಲಿ ಈ ಅಣೆಕಟ್ಟು ನವೀಕರಣಗೊಂಡಿತು.   ಬಿಲ್ಲೇಶ್ವರದಲ್ಲಿ ಕುಮುದ್ವತಿ ನದಿ ಜೊತೆಗೆ ಕುಶಾವತಿ ನದಿ ಕೂಡ ಹುಟ್ಟುತ್ತದೆ ಅದು ತೀರ್ಥಹಳ್ಳಿ ಮೂಲಕ ತುಂಗಾ ನದಿ ಸೇರುತ್ತದೆ ಮತ್ತು ಇಲ್ಲಿನ ಆದಿಶೇಷನ ಹಿಂಬಾಗದಲ್ಲಿ ಶರಾವತಿ ನದಿ ಸೇರುವ ಹರಿದ್ರಾವತಿ, ಶರ್ಮಣ್ವತಿ...

3510. ಡಾಕ್ಟರ್ ಶಂಕರ್ ಲಾಲ್ ಗಾರ್ಗ್ ಇಂದೋರ್

#ಶಿವಮೊಗ್ಗ_ಜಿಲ್ಲೆಯ_ಈ_ರಾಷ್ಟ್ರೀಯ_ಪ್ರಶಸ್ತಿ #ಪ್ರತಿ_ವರ್ಷ_ನವರಾತ್ರಿಯಲ್ಲಿ #ಒಂದು_ಲಕ್ಷ_ನಗದು_ಮತ್ತು_ಪಾರಿತೋಷಕ #ಶಿವಮೊಗ್ಗದ_ಪತ್ರಕರ್ತ_ಸಿದ್ದಪ್ಪರ_ದೊಡ್ಡಮ್ಮ_ದೇವಿ_ಚಾರಿಟೇಬಲ್_ಟ್ರಸ್ಟ್_ನಿಂದ. #ಮೂರನೇ_ವರ್ಷದ_ಪ್ರಶಸ್ತಿ_ಮಧ್ಯಪ್ರದೇಶದ_ಡಾಕ್ಟರ್_ಶಂಕರ್_ಲಾಲ್_ಗರ್ಗ್_ಅವರಿಗೆ. #ಈ_ಪ್ರಶಸ್ತಿ_ಆಯ್ಕೆ_ಸಮಿತಿ_ಅಧ್ಯಕ್ಷರು_ಸುಂದರ್_ರಾಜ್ #ಇವರಿಬ್ಬರೂ_ನನ್ನ_ಅತಿಥಿಗಳು #shivamogga #siddappa #press #doddammacharitabletrust #nationalaward #sunderraj #karnatakasanga #Drshankarlalgarge #idore #MP     ಪ್ರತಿ ವರ್ಷ ಶಿವಮೊಗ್ಗದ #ದೊಡ್ಡಮ್ಮ_ದೇವಿ_ಚಾರಿಟೇಬಲ್_ಟ್ರಸ್ಟ್ ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಕಳೆದ ಮೂರು ವರ್ಷದಿಂದ ನೀಡುತ್ತಿದೆ.     ಈ ಪ್ರಶಸ್ತಿ ಒಂದು ಲಕ್ಷ ರೂಪಾಯಿ ನಗದು ಮತ್ತು ಪಾರಿತೋಷಕ ಇರುತ್ತದೆ.     ಈ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಪ್ರತಿಭಾವಂತರ ಸಮಿತಿ ಇದೆ ಈ ಆಯ್ಕೆ ಸಮಿತಿ ಅಧ್ಯಕ್ಷರು #ಎಂ_ಎನ್_ಸುಂದರ್_ರಾಜ್ ಇವರು ಶಿವಮೊಗ್ಗದ ಪ್ರತಿಷ್ಠಿತ #ಕರ್ನಾಟಕ_ಸಂಘದ ಮಾಜಿ ಅಧ್ಯಕ್ಷರು ಮತ್ತು ಸಾಹಿತಿಗಳು.     ಈ ವರ್ಷದ ರಾಷ್ಟ್ರೀಯ ಪ್ರಶಸ್ತಿ ಮಧ್ಯಪ್ರದೇಶದ ಇಂದೋರಿನ ಡಾಕ್ಟರ್ #ಶಂಕರ್_ಲಾಲ್_ಗರ್ಗೆ ಅವರನ್ನ ಪ್ರಶಸ್ತಿ ಸಮಿತಿ ಆಯ್ಕೆ ಮಾಡಿದೆ.    ಇವರು ಇಂದೋರ್ ಸಮೀಪದ #ಕೇಶರ್_ಪರ್ವತ ಪ್ರದೇಶದಲ...

3509. ನನ್ನ ಅತಿಥಿಗಳು

#ನನ್ನ_ಅತಿಥಿಗಳು #ಇತಿಹಾಸ_ಸಂಶೋದಕರು #myguest #historian #radio #sudeendra #dilipnadig     ಶಿವಮೊಗ್ಗದಿಂದ ಸಾಗರ ತಾಲೂಕಿನ ಇಕ್ಕೇರಿ ಅಘೋರೇಶ್ವರ ದೇವಾಲಯ ಮತ್ತು ಕಲ್ಸೆ ದೇವಾಲಯಗಳ ಶಿಲ್ಪ ರಚನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹೋಗಿ ವಾಪಾಸು ಬರುವಾಗ ಇವರೆಲ್ಲ ನನ್ನ ಕಛೇರಿಗೆ ಬಂದಿದ್ದರು.    ಇತಿಹಾಸ ಸಂಶೋಧಕರಾದ #ದಿಲೀಪ್_ನಾಡಿಗ್, ಆಕಾಶವಾಣಿಯ ನಿವೃತ್ತ ಕ್ರಿಯಾಶೀಲ ಅಧಿಕಾರಿ #ಸುದೀಂದ್ರ , ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಯೋಜನ ವಿಭಾಗ #ಶಂಕರಮಿತ್ರ #ಡಾ_ಚಂದ್ರಕಾಂತ್.ವೈದ್ಯಾಧಿಕಾರಿಗಳು ಶಿಕಾರಿಪುರ ತಾಲ್ಲೂಕಿನ ಚಿಕ್ಕಜೋಗಿಹಳ್ಳಿ ಸರಕಾರಿ ಆಸ್ಪತ್ರೆ ಮತ್ತು  ಶಿವಮೊಗ್ಗದ ತೋಟಗಾರಿಕಾ ಇಲಾಖಾ ಅಧಿಕಾರಿ #ಮದುಗೌಡರು ಬಂದಿದ್ದರು.     ಇವರೆಲ್ಲರ ಆಸಕ್ತಿ ಮತ್ತು ಉತ್ಸಾಹಕ್ಕೆ ಅಭಿನಂದನೆಗಳು.

3508. ವರ್ಷಗಳ ಪೋಟೋ

#ವರ್ಷಗಳ_ಹಿಂದಿನ_ಫೋಟೋ #ಅವತ್ತು_ನನ್ನ_ವಯಸ್ಸು_ಹದಿನೆಂಟು_ಇಪ್ಪತ್ನಾಲ್ಕು_ಇದ್ದಾಗಿನದ್ದು #ಈಗಿನ_60ನೇ_ವಯಸ್ಸಿನದ್ದೂ_ಇಲ್ಲಿದೆ. #Age #face #personality #experience #youngage #oldage  "ನಲವತ್ತರವರೆಗೆ ನಿಮ್ಮ ಮುಖದಲ್ಲಿ ನಿಮ್ಮ ಬದುಕನ್ನು ಧರಿಸುತ್ತೀರಿ...". 'ಐವತ್ತಕ್ಕೆ ನಿಮ್ಮ  ಬದುಕೇ ನಿಮ್ಮ ಮುಖವನ್ನು ಧರಿಸುತ್ತದೆ..."     ಹೀಗೆ ತರಹಾವಾರಿ ಅನುಭವಿಗಳ ಮಾತುಗಳಿದೆ ಅದರ ದಾರಿಯಲ್ಲೇ ಹೆಜ್ಜೆ ಹಾಕುತ್ತಾ ಬಂದು ತಿರುಗಿ ನೋಡಿದಾಗ ಈ ಫೋಟೋಗಳು ಸಿಕ್ಕಿದ್ದಾವೆ.

3507. ಸಾಹಿತ್ಯಾಸಕ್ತ ಕಿರಣ್ ಬೀಸು ವಿಮರ್ಷೆ

#ತೀರ್ಥಹಳ್ಳಿ_ಕಿರಣ್_ಬೀಸು #ಬಿಲಾಲಿ_ಬಿಲ್ಲಿ_ಅಭ್ಯಂಜನ #ನನ್ನ_ಕಥಾ_ಸಂಕಲನ_ಓದಿ_ಬರೆದ_ವಿಮರ್ಶೆ #ಸಾಹಿತ್ಯ_ರಾಜಕೀಯ_ಕೃಷಿ_ಕ್ಷೇತ್ರದಲ್ಲಿ_ವಿಶೇಷ_ಆಸಕ್ತಿ_ಹೊಂದಿದ_ಯುವಕರು. #ಸೋಷಿಯಲ್_ಎಕ್ಸ್ಪೆರಿಮೆಂಟ್_ಇವರ_ಹವ್ಯಾಸ #kiranbeesu #thirthahalli #Bilalibilliabyanjana  #patamakkirarnakar #besthararanichampaka    ಕಿರಣ್ ಬೀಸು ಸಾಹಿತ್ಯಾಸಕ್ತರು ಬಹುಶಃ ಕನ್ನಡದ ಬಹುತೇಕ ಪುಸ್ತಕ ಓದಿದ್ದಾರೆ ಬರಿ ಓದು ಅಲ್ಲ ಅದನ್ನು ಸಂದರ್ಭ ಬಂದಾಗ ನೆನಪಿನಿಂದ ಅದರ ಹೂರಣ ತೆಗೆದು ಹೊರಗಿಡುವ ಅಪಾರ ನೆನಪಿನ ಶಕ್ತಿ ಇವರದ್ದು.     ಸಮಾಜವಾದಿ ಹೊರಾಟಗಾರರನ್ನು ಬರಹಗಾರರನ್ನು ಪ್ರತ್ಯಕ್ಷ ಬೇಟಿ ಮಾಡಿದ್ದಾರೆ ಇನ್ನೊಂದು ವಿಶೇಷ ಅಂದರೆ ಇವರಿಗೆ ಇಷ್ಟವಾದ ವ್ಯಕ್ತಿ ಮತ್ತು ಸ್ಥಳಕ್ಕೆ ಎಷ್ಟೇ ದೂರ ಇದ್ದರು ಪ್ರಯಾಣ ಮಾಡಿ ಬೇಟಿ ಮಾಡುವ Social experiment ಇವರ ಹವ್ಯಾಸ.    ಇವರ ತಂದೆ ಮತ್ತು ತಾಯಿ ಕೂಡ ಕನ್ನಡ ಸಾಹಿತ್ಯದ ಓದುಗರು ಇವರು ಓದುವ ಪುಸ್ತಕ ಅವರೂ ಓದುತ್ತಾರೆ ಬಹುಶಃ ಅವರ ಓದಿನ ಆಸಕ್ತಿ ಮಗನಿಗೆ ಬಂದ ಬಳವಳಿ ಇರಬಹುದು.    ಖ್ಯಾತ ಚಲನ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ನೇರ ಸಂಪರ್ಕ ಇವರಿಗಿದೆ.    #ಕಿರಣ್_ಬೀಸು_ಬರೆದ_ವಿಮರ್ಶೆ_ಇಲ್ಲಿದೆ_ಓದಿ...    ದಿನ ಪತ್ರಿಕೆವೊಂದರಲ್ಲಿ ನಮ್ಮ‌ ಕ್ಷೇತ್ರದ ಮಾಜಿ ಶಾಸಕರಾಗಿದ್ದ ದಿವಂಗ...

3506. ಡಾಕ್ಟರ್ ಎಂ.ಸಿ.ಮೋದಿ ಅವರ 109ನೇ ಹುಟ್ಟು ಹಬ್ಬ

#ಡಾಕ್ಟರ್_ಎಂ_ಸಿ_ಮೋದಿ_ಅವರ_106ನೆ_ಹುಟ್ಟು_ಹಬ್ಬ. #ಮುರಿಗೆಪ್ಪ_ಚೆನ್ನಬಸಪ್ಪ_ಮೋದಿ #ಹಳ್ಳಿ_ಹಳ್ಳಿಗಳಲ್ಲಿ_ಉಚಿತ_ನೇತ್ರ_ಚಿಕಿತ್ಸಾ_ಶಿಭಿರ_ಏರ್ಪಡಿಸಿ_ಚಿಕಿತ್ಸೆ_ನೀಡಿದವರು.   #ನಮ್ಮೂರಲ್ಲಿ_ಅವರ_ಎರೆಡು_ನೇತ್ರ_ಚಿಕಿತ್ಸಾ_ಶಿಬಿರ #ಸ್ಥಳಿಯ_ಕನ್ನಡ_ಸಂಘ_ಏರ್ಪಡಿಸಿತ್ತು.   #DrMCModi #eyesurgeon #mahatmaghandi #birthanniversery #modihospital     ಇವತ್ತು ದಿನಾಂಕ 4-ಅಕ್ಟೋಬರ್ ಉಚಿತ ಕಣ್ಣಿನ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಭಿರ ಏರ್ಪಡಿಸಿ ಸುಮಾರು 40 ವರ್ಷ ಕಣ್ಣಿನ ಪೊರೆಯಿಂದ ದೃಷ್ಟಿ ಕಳೆದುಕೊಂಡವರಿಗೆ ಪುನಃ ದೃಷ್ಟಿ ಬರುವಂತೆ ಮಾಡುತ್ತಿದ್ದ ಡಾಕ್ಟರ್ ಎಂ.ಸಿ. ಮೋದಿ ಅವರ 109ನೇ ಹುಟ್ಟುಹಬ್ಬ.    ಡಾಕ್ಟರ್ ಎಂ.ಸಿ. ಮೋದಿ ಮಹಾತ್ಮಾ ಗಾಂದೀಜಿಯಿಂದ ಪ್ರೇರಿತರಾಗಿ ಕುಗ್ರಾಮಗಳಲ್ಲಿ ಉಚಿತವಾಗಿ ಮಾಡಿರುವ ಕಣ್ಣಿನ ಆಪರೇಷನ್ ಗಳು ಯಾರೂ ಅಳಿಸಲಾರದ ವಿಶ್ವ ದಾಖಲೆ.   ಡಾ.ಎಂ.ಸಿ. ಮೋದಿಯವರ ಕಣ್ಣಿನ ಶಸ್ತ್ರ ಚಿಕಿತ್ಸೆಯ ದಾಖಲೆ ಯಾರೂ ಮುರಿಯಲು ಸಾಧ್ಯವಿಲ್ಲ ಅದು ಸರ್ವಕಾಲಿಕ ವಿಶ್ವ ದಾಖಲೆ.    1968 ರಲ್ಲಿ ತಿರುಪತಿಯಲ್ಲಿ ಸತತ 14 ಗಂಟೆ ಕಣ್ಣಿನ ಚಿಕಿತ್ಸೆ ಮಾಡಿದ್ದರು.   ಒಂದೇ ದಿನ 833 ಜನರ ನೇತೃ ಶಸ್ತ್ರಚಿಕಿತ್ಸೆಗಾಗಿ1986 ರಲ್ಲಿ ಇವರ ಹೆಸರು ಗಿನ್ನೆಸ್ ದಾಖಲೆಯಲ್ಲಿದೆ.   ಒಮ್ಮೆಗೆ 4 ಜನರ೦ತೆ ಗ೦ಟೆಗೆ 40 ಶಸ್ತ್ರಚಿ...