Skip to main content

Posts

Showing posts from 2025

Blog number 3322. ಖ್ಯಾತ ಪತ್ರಕರ್ತರುದ್ರಪ್ಪ ಚನ್ನಬಸಪ್ಪ

#ರುದ್ರಪ್ಪಚನ್ನಬಸಪ್ಪ #ಉದಯ_TVಯ_ಮೊದಲ_ಬ್ಯೂರೋ_ಚೀಪ್ #ಸಾಗರ_ತಾಲೂಕಿನ_ವಿಚಾರ_ಕ್ರಾಂತಿಯ_ಪಿತಾಮಹಾ #ಶರಾವತಿ_ನದಿ_ಮುಳುಗಡೆ_ಸಂತ್ರಸ್ಥರು  #ಸೊನ್ನೆಯಿಂದ_ದೊಡ್ಡ_ಸಾದನೆಗೈದ_ಸಾದಕರು. #UdayaTV #karnataka #journalism #DSS #socialist #press #sagar #shivamogga    70 ರ ದಶಕದಲ್ಲಿ ಸಮಾಜವಾದಿ ಯುವಜನ ಸಭಾದ ಸಕ್ರಿಯ ಕಾರ್ಯಕರ್ತರು ರುದ್ರಪ್ಪನವರು.    80ರ ದಶಕದಲ್ಲಿ ಸಾಗರ ತಾಲ್ಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ದಲಿತ ಸಂಘರ್ಷ ಸಮಿತಿ ಸಂಘಟಿಸಿದವರು.    ತೀ.ನಾ.ಶ್ರೀನಿವಾಸ್, ಶಿವಾನಂದ ಕುಗ್ವೆ, ಅದರಂತೆ ವಿಶ್ವನಾಥ್, ರಿಕ್ಷಾ ಮೋಹನ್, ಪೆಡರಿಕ್ , ಮಂಡಗಳಲೆ ನಾರಾಯಣಪ್ಪ, ಎಸ್.ಎಸ್.ನಾಗರಾಜ್,ವಸಂತಕುಗ್ವೆ  ಇವರನ್ನೆಲ್ಲ ಹೋರಾಟದ ಸಾಗರಕ್ಕೆ ದುಮುಕಲು ಈ ರುದ್ರಪ್ಪರ ಪ್ರೇರಣೆ ಕೂಡ ಆಗಿತ್ತೆಂಬುದು ಮರೆಯುವಂತಿಲ್ಲ.    ದಲಿತ ಸಂಘರ್ಷ ಸಮಿತಿಯ ಬಿ .ಕೃಷ್ಣಪ್ಪರಿಂದ ಶಿವಮೊಗ್ಗದ ಪ್ರೋ. ರಾಚಪ್ಪನವರು ಸಾಗರದ ಸಾಗರ್ ಹೋಟೆಲ್ ವೃತ್ತದ GGMS ಶಾಲೆಯಲ್ಲಿ ಸಂಜೆ ಹೊತ್ತಿಗೆ ಏರ್ಪಡಿಸುತ್ತಿದ್ದ ತರಬೇತಿ ಶಿಬಿರ ನನ್ನನ್ನೂ ಹೋರಾಟದ ಹಾದಿಗೆ ಹೊರಳಲು ಕಾರಣವಾಗಿತ್ತು.    ನಂತರ ದಿಡೀರನೆ 1984 ರ ನಂತರ ರುದ್ರಪ್ಪ ಸಾಗರದಿಂದ ನಾಪತ್ತೆ ನಂತರ 90 ರ ದಶಕದಲ್ಲಿ ಕನ್ನಡದ ಏಕೈಕ TV ಸಂಸ್ಥೆ ಬ್ಯೂರೋ ಚೀಪ್ ಆಗಿ ರುದ್ರಪ್ಪನವರು ಉದಯ TV ಪರದೆ ಮೇಲೆ ನೋಡಿದ...

Blog number 3321. ಮರಕಿಣಿ ನಾರಾಯಣ ಮೂರ್ತಿ

#ಮರಕಿಣಿ_ನಾರಾಯಣಮೂರ್ತಿಗಳು #ನಮ್ಮಿಬ್ಬರ_ಮುಖತಃ_ಬೇಟಿಗೆ_ಮಹೂರ್ತ_ಯಾವಾಗ ? #marakininarayanamurthy #facebookpost #tkrameshshetty #ninasam #kannada #drama #yakshgana #tvserial    ಸದಾ ನಗುಮೊಗದ ಕನ್ನಡದ ಸಾಹಿತಿಗಳಿಗೆ, ಯಕ್ಷಗಾನ - ನಾಟಕ - ದಾರಾವಾಹಿಗಳ ಲೋಕದವರಿಗೆ ಚಿರಪರಿಚಿತರು ಮರಕಿಣಿ ನಾರಾಯಣ ಮೂರ್ತಿಯವರು.  ಪ್ರತಿ ವರ್ಷ ನಮ್ಮ ಸಾಗರ ತಾಲ್ಲೂಕಿನ ಹೆಗ್ಗೋಡಿನ ನಿನಾಸಂ - ತುಮರಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದ ಕಾರ್ಯಕ್ರಮಕ್ಕೆ ತಪ್ಪದೆ ಬಂದು ಹೋಗುತ್ತಾರೆ.     ಆದರೂ ನಮ್ಮಿಬ್ಬರ ಬೇಟಿಗೆ ಮಹೂರ್ತ ಮೂಡಿಬಂದಿಲ್ಲ ಆದ್ದರಿಂದ ನಾನು ಅವರಿಗೆ ನನ್ನ ಸಂದೇಶ ಕಳಿಸಿದ್ದೇನೆ ... "ಸರ್ ನಾನು ನಿಮ್ಮ ಅಭಿಮಾನಿ ನನಗೂ ನಿಮ್ಮ ಅನಿರೀಕ್ಷಿತ ಬೇಟಿಯಲ್ಲಿ ಮುಖಾಮುಖಿ ಆಗಲಾಗದ್ದು ಬೇಸರ ಅನ್ನಿಸಿತು, ಅನೇಕ ವರ್ಷದಿಂದ ಬೇಟಿಯ ನಿರೀಕ್ಷೆ ಮುಂದು ಮುಂದು ಹೋಗುತ್ತಿದೆ ಆದ್ದರಿಂದ ಮುಂದಿನ ಬಾರಿ ಹೀಗೆ ದಿಡೀರ್ ಬರಬೇಡಿ,ಒಂದು ದಿನ ನನ್ನ ಅತಿಥಿ ಆಗಿ ಉಳಿದು ಹೋಗುವಂತೆ ಬಿಡುವು ಮಾಡಿಕೊಂಡು ಬನ್ನಿ ಮತ್ತುಬರಲೇ ಬೇಕು" ಅಂತ.     ನನ್ನ ಅಣ್ಣನಂತೆ ಇರುವ ಇವರು ನನ್ನಂತೆ ಪಂಚೆದಾರಿಗಳು ಆದರೆ ಬಾಯಿ ತುಂಬಾ ನನಗೆ "ಅರುಣಣ್ಣ" ಅನ್ನುತ್ತಾರೆ ಅದೊಂದು ತರ ಅಪ್ಯಾಯವಾಗಿ ನನಗೆ ಕೇಳುತ್ತದೆ ಮತ್ತು ಇಷ್ಟ ಆಗಿದೆ, ನಮ್ಮಿಬ್ಬರನ್ನ ಗೆಳೆಯರನ್ನಾಗಿ ಮಾಡಿದ ಪೇಸ್ ಬುಕ್ ಗೆ ಎಷ್ಟು ಧ...

Blog number 3320. ಅಡಿಕೆ ಇತಿಹಾಸದ ಶಾಸನಗಳಲ್ಲಿ

#ಅಡಿಕೆ #ಹತ್ತನೆ_ಶತಮಾನದಲ್ಲಿನ_ಶಾಸನಗಳಲ್ಲಿ_ಅಡಿಕೆ_ಉಲ್ಲೇಖ #ಈಗಿನ_ಶಿಕಾರಿಪುರ_ತಾಲ್ಲೂಕಿನ_ಕಪ್ಪನಹಳ್ಳಿ #ಹೊನ್ನಾಳಿ_ತಾಲ್ಲೂಕಿನ_ನ್ಯಾಮತಿಯ_ಅಡಿಕೆಗೆ_ಹೆಚ್ಚು_ಬೇಡಿಕೆ_ಇತ್ತು. #ಸಂಶೋದಕರಾದ_ರಮೇಶ್_ಹಿರೇಜಂಬೂರ್_ಶಾಸನಗಳಲ್ಲಿ_ಅಡಿಕೆ_ಉಲ್ಲೇಖದ_ಬಗ್ಗೆ_ಬರೆದಿದ್ದಾರೆ. #areca #rameshhirejamburu #centuries #history #kappanalli #nyamathi      ಶಿರಾಳಕೊಪ್ಪದ ರಮೇಶ್ ಹಿರೇಜಂಬೂರ್ ನಮ್ಮ ಜಿಲ್ಲೆಯ ಖ್ಯಾತ ಇತಿಹಾಸ ಸಂಶೋದಕರು ಅವರು ಕದಂಬರ ತಾಳಗುಂದದ ಶಾಸನಗಳ ಸಂಶೋದನೆಗಾಗಿ ಹೆಚ್ಚು ಶ್ರಮಪಟ್ಟಿದ್ದಾರೆ.   ಅವರು ಅಡಿಕೆಗಳ ಉಲ್ಲೇಖ 10 ನೇ ಶತಮಾನ ಮತ್ತು 12 ನೇ ಶತಮಾನದ ಶಾಸನಗಳಲ್ಲಿ ಇರುವುದು ಸಂಗ್ರಹಿಸಿ ಸಂಶೋದನೆ ಮಾಡಿ ಪ್ರಕಟಿಸಿದ್ದಾರೆ ಅವರನ್ನ ಅಡಿಕೆ ಬೆಳೆಗಾರರು ಮತ್ತು  ಅಡಿಕೆ ಸಂಸ್ಕರಣ -ಮಾರಾಟ ಸಂಸ್ಥೆಗಳು ಅಭಿನಂದಿಸಬೇಕು.   #10ನೇ_ಶತಮಾನದಲ್ಲಿ_ನಮ್ಮ_ಜಿಲ್ಲೆಯ_ಶಿಕಾರಿಪುರ_ತಾಲ್ಲೂಕಿನ_ಕಪ್ಪನಳ್ಳಿ ಊರಿನ ಅಡಿಕೆ ಮತ್ತು ಹೊನ್ನಾಳಿ ತಾಲ್ಲೂಕಿನ ನ್ಯಾಮತಿ ಅಡಿಕೆಗೆ ಹೆಚ್ಚು ಬೇಡಿಕೆ ಇತ್ತೆಂಬ ಐತಿಹಾಸಿಕ ದಾಖಲೆ.   #12ನೇ_ಶತಮಾನದ_ಶಾಸನದಲ್ಲಿ_ಗೋಟು_ಅಡಿಕೆಯ_ಉಲ್ಲೇಖ   ಅಡಿಕೆ ಕೃಷಿ ಈಗ ವಾಣಿಜ್ಯ ಬೆಳೆಯಾಗಿ ರೈತರ ವರವಾಗಿ ಪರಿಣಮಿಸಿದೆ. ಇತಿಹಾಸ ಪುಟಗಳಲ್ಲಿ ಸಾವಿರಾರು ವರುಷಗಳಿಂದ ಈ ಭಾಗದಲ್ಲಿ ಅಡಿಕೆ ಮರಗಳ ಉಲ್ಲೇಖವಿದೆ.     #ಪೊನ್ನನ_ಶ...

Blog number 3319. ಕೆಂಪಿ ಶಾಪ

#ಕೆಳದಿ_ಅರಸರಿಗೆ_ಶಾಪ!? #ಕಾಳುಮೆಣಸಿನ_ರಾಣಿ_ಬಂದನ_ವಿರೋಧಿಸಿ #ಅಂತಿಮ_ಕ್ಷಣದವರೆಗೆ_ಕವಣೆ_ಕಲ್ಲಿಂದ_ದಾಳಿ_ಮಾಡಿದ_ಕುಣುಬಿ_ಜನಾಂಗದ_ಸೈನಿಕರು #ಕುಣುಬಿ_ಜನಾಂಗದ_ಕೆಂಪಿ_ಕೆಳದಿ_ಅರಸರಿಗೆ_ಹಾಕಿದ_ಶಾಪ #ಕುಣುಬಿ_ಜನಾಂಗದ_ಸ್ವಾಮಿ_ನಿಷ್ಟೆಗೆ_ಪ್ರತೀಕವಾದ_ಇತಿಹಾಸದ_ದಾಖಲೆ #ಯಮ_ಸಲ್ಲೇಖನ_ವೃತ_ಪಾಲಿಸಿ_ಇಕ್ಕೇರಿ_ಕೋಟೆಯಲ್ಲಿ_ಜಿನೈಕ್ಯಳಾಗುವ_ರಾಣಿಚೆನ್ನಬೈರಾದೇವಿ. #gerusoppe #keladi #kunubi #tribals #ikkerifort #avinahalli #chennabyaradevi       ಶರಾವತಿ ನದಿ ದಂಡೆಯ ಏಕೈಕ ಸಾಮ್ರಾಜ್ಯವಾದ ಗೇರುಸೊಪ್ಪೆ ಸಾಮ್ರಾಜ್ಯವನ್ನು 54 ವರ್ಷವಾಳಿದ ಜೈನ ರಾಣಿ ಚೆನ್ನಬೈರಾದೇವಿಯನ್ನು ಯುರೋಪಿನವರು ಕಾಳುಮೆಣಸಿನ ರಾಣಿ ಎಂದೇ ಕರೆದರು.    ವರದಾನದಿ ದಂಡೆಯ ಕೆಳದಿ ರಾಜವಂಶದ 43 ವರ್ಷ ಆಳ್ವಿಕೆ ಮಾಡುವ, ಸಾಗರ ಪಟ್ಟಣ ಸದಾಶಿವ ಸಾಗರ  ನಿರ್ಮಿಸಿದ ರಾಜ ಹಿರಿಯ ವೆಂಕಟಪ್ಪ ನಾಯಕ ರಾಣಿ ಚೆನ್ನಾಬೈರಾದೇವಿಯನ್ನು ಗೇರುಸೊಪ್ಪೆಯಲ್ಲಿ ಬಂದಿಸಿ ಇಕ್ಕೇರಿ ಕೋಟೆಯ ಜೈಲಿಗೆ ಕರೆತರುತ್ತಾರೆ.    ಇದನ್ನು ವಿರೋಧಿಸಿ ಕೊನೆ ತನಕ ಹೋರಾಟ ಮಾಡಿದವರು ಗುಡ್ಡಗಾಡು ಜನಾಂಗದ ಸ್ವಾಮಿ ನಿಷ್ಟೆಗೆ ಹೆಸರಾದ ಕುಣುಬಿ ಜನಾಂಗದವರು.    ಕಣಿವೆಯ ಮೇಲಿಂದ ಕವಣೆ ಕಲ್ಲಿನಿಂದ ದಾಳಿ ಮಾಡುವ ಕುಣುಬಿ ಜನಾಂಗದ ಪ್ರಜೆಗಳ ಹೋರಾಟದ ವಿವರಗಳು ಈ ಘಟನೆ ನಡೆದ ಸಾಗರ ತಾಲ್ಲೂಕಿನವರೇ ಆದ ನಮಗೆ ಗೊತ್ತೇ...

Blog number 3318. ಇತಿಹಾಸ ಸಂಶೋದಕ ರಮೇಶ್ ಹಿರೇಜಂಬೂರು

#ನಿನ್ನೆಯ_ಸಂಜೆ_ಅವಿಸ್ಮರಣೀಯಗೊಳಿಸಿದ #ಇತಿಹಾಸ_ಸಂಶೋಧಕ_ರಮೇಶ್_ಹಿರೇಜಂಬೂರ್ #ನಾನು_ಇವರ_ಅಭಿಮಾನಿ. #historian #rameshhirejamburu #kadamba #talagunda #kannada #shilashasana   ನಿನ್ನೆ ಸಂಜೆ ರಮೇಶ್ ಹಿರೇಜಂಬೂರ್ ನನ್ನ ಕಛೇರಿಗೆ ಬಂದಿದ್ದರು ಇದು ನನ್ನ ಅವರ ಮೊದಲ ಮುಖತಃ ಬೇಟಿ.    ಶಿವಮೊಗ್ಗ ಜಿಲ್ಲೆಯ ಖ್ಯಾತ ಇತಿಹಾಸ ಸಂಶೋದಕರಾದ  ಇವರ ಪೇಸ್ ಬುಕ್ ನ ಎಲ್ಲಾ ಲೇಖನ ತಪ್ಪದೆ ಓದುತ್ತೇನೆ ನಾನು ಇವರ ಸಂಶೋದನಾ ಲೇಖನಗಳ ಅಭಿಮಾನಿ.    ರಮೇಶ್ ಹಿರೇಜಂಬೂರ್ ಮತ್ತು ನವೀನ್ ಶಿರಾಳಕೊಪ್ಪ ಇವರಿಬ್ಬರು ತಾಳಗುಂದದ ಮೊದಲ ಕನ್ನಡ ಶಾಸನದ ಸಂಶೋಧನೆಯಲ್ಲಿ ಹೆಚ್ಚು ಶ್ರಮವಹಿಸಿದವರು ಇದಕ್ಕಾಗಿ ರಾಜ್ಯದ ಕನ್ನಡಿಗರು ಇವರನ್ನು ಅಭಿನಂದಿಸಬೇಕು.    ನಿನ್ನೆಯ ಸಂಜೆ ನನ್ನ ಕಛೇರಿಯಲ್ಲಿ ಜಿಲ್ಲೆಯ ಇತಿಹಾಸದ ವಿಚಾರವಾಗಿ ತುಂಬಾ ಹೊತ್ತು ಮಾತಾಡಿದೆವು ಇವರ ಪತ್ನಿ ತವರೂರು ಹೊಸನಗರದ ಸೋನಲೆಗೆ ಹೊರಡುವ ತನಕ.      ನನ್ನ ಕಾದಂಬರಿ #ಬೆಸ್ತರ_ರಾಣಿ_ಚಂಪಕಾ ಹಿಂದೆಯೇ  ಓದಿದ್ದಾರೆ, ಆ ಪುಸ್ತಕದ ವಿಚಾರವಾಗಿ ಕೆಲವು ಕಂತುಗಳ ನನ್ನ ಸಂದರ್ಶನ ಪೇಸ್ ಬುಕ್ ನಲ್ಲಿ ಪ್ರಕಟಿಸಲಿದ್ದಾರೆ.    ಚಹಾ ಮತ್ತು ಮಿರ್ಚಿ ಬೊಂಡದ ಆತಿಥ್ಯ ನೀಡಿದೆ ಹೊರಡುವಾಗ ನನ್ನ ಸಣ್ಣ ಕಥೆಗಳ #ಬಿಲಾಲಿ_ಬಿಲ್ಲಿ_ಅಭ್ಯಂಜನ ಕಥಾ ಸಂಕಲನ ನೀಡಿ ಸೆಲ್ಪಿ ತೆಗೆದುಕೊಂಡು ಬಿಳ್ಕೊಟ್ಟೆ. ...

Blog number 3317. ಚಿತಾಗಾರದ ಮುಂದೆ ಕೊರಾನಾ ಕಾಲದಲ್ಲಿ ಹೌಸ್ ಫುಲ್ ಬೋರ್ಡ್

#ಚಿತಾಗಾರಗಳು_ಹೌಸ್_ಪುಲ್_ಬೋರ್ಡ್_ಹಾಕಿದ್ದವು #ಇಂತಹ_ಘಟನೆ_ನಾಲ್ಕು_ವರ್ಷದ_ಹಿಂದೆ_ನಮ್ಮ_ದೇಶದಲ್ಲಿ_ನಡೆದಿತ್ತು #ಈಗ_ನಮಗೇ_ನಂಬಲು_ಆಗುತ್ತಿಲ್ಲ #ಕೊರಾನಾದಿಂದ_ಸತ್ತವರ_ಸಂಖ್ಯೆ_ಎಷ್ಟು? #housefullboard #cremetory   #covid19 #corana    ಹಾಗಾದರೆ ಕೋರಾನಾ ಕಾಲದಲ್ಲಿ ಸತ್ತವರ ಸಂಖ್ಯೆ ಎಷ್ಟು?...      ಅಕ್ಟೋಬರ್ 2021 ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು COVID-19 ಗೆ ನೇರವಾಗಿ ಮತ್ತು ಪರೋಕ್ಷವಾಗಿ ಸಂಬಂಧಿಸಿರುವ 4.7 ಮಿಲಿಯನ್(47 ಲಕ್ಷ ಸಾವು ) ಹೆಚ್ಚುವರಿ ಸಾವುಗಳು ಭಾರತದಲ್ಲಿ ಸಂಭವಿಸಿವೆ ಎಂದು ಅಂದಾಜಿಸಿದೆ.  ಭಾರತದಲ್ಲಿ ಕೋವಿಡ್-19 ನಿಂದ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ? ಇದು ಉತ್ತರಿಸಲು ತುಂಬಾ ಕಷ್ಟಕರವಾದ ಪ್ರಶ್ನೆ.    ದಾಖಲಾದ 220,000 ಸಾವುಗಳು (ಮೇ 3 ರ ಹೊತ್ತಿಗೆ) ಸ್ವತಃ ಒಂದು ಭಯಾನಕ ದುರಂತವಾಗಿದೆ. ಆದರೆ ದೇಶಾದ್ಯಂತದ ಹಲವಾರು ವರದಿಗಳು ದಾಖಲಾದ ಸಾವುಗಳು ಸಂಪೂರ್ಣ ಕಥೆಯಲ್ಲ ಎಂದು ದೃಢಪಡಿಸುತ್ತವೆ.   ಸ್ಮಶಾನವೊಂದರಲ್ಲಿ ಕೆಲಸ ಮಾಡುವ ಒಬ್ಬ ಸಿಬ್ಬಂದಿ ತಮ್ಮ ಜೀವನದಲ್ಲಿ ಇದೇ ಮೊದಲ ಬಾರಿಗೆ ಅಂತ್ಯಕ್ರಿಯೆ ಕೇಂದ್ರಗಳಲ್ಲಿ ಇಷ್ಟೊಂದು ಜನದಟ್ಟಣೆಯನ್ನು ನೋಡಿದ್ದಾರೆ . "ನಾನು ಸುಮಾರು 40 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಇಷ್ಟೊಂದು ದೊಡ್ಡ ಸಂಖ್ಯೆಯ ಶವಗಳನ್ನು ಅಂತ್ಯಕ್ರಿಯೆ ಕೇಂದ್ರಗಳಿಗೆ ತರುವುದನ್ನು ನ...

Blog number 3316. 2025 ಮೇ ತಿಂಗಳ ಭಾರತ ಪಾಕಿಸ್ಥಾನ ಯುದ್ಧ ಅಮೇರಿಕಾ ಅಧ್ಯಕ್ಷ ಟ್ರಂಪ್ ನಿಲ್ಲಿಸಿದರು

#ಖ್ಯಾತ_ಲೇಖಕ_ಅಂಕಣಕಾರರಾದ_ಅರವಿಂದಚೊಕ್ಕಾಡಿ #ಅವರ_ಫೇಸ್_ಬುಕ್_ಪೇಜಿನಲ್ಲಿ_ಕೇಳಿದ_ನನ್ನ_ಪ್ರತಿಕ್ರಿಯೆ #ಇಲ್ಲಿ_ಇನ್ನೊಮ್ಮೆ https://www.facebook.com/share/p/1QFSmbYTvN/ #indiavspakistan #warzone #america #PresidentTrump #narendramodi_primeminister #AravindChokkadi #facebookpost    ಅರವಿಂದ ಚೊಕ್ಕಾಡಿ ಅವರೆ ನೀವು  ನನ್ನ ಪ್ರತಿಕ್ರಿಯೆ ಕೇಳಿದ್ದೀರಿ...    ದೇಶದ ಹಿಂದಿನ ಸರ್ಕಾರಗಳು ಮತ್ತು ಅದರ ಚುಕ್ಕಾಣಿ ಹಿಡಿದಿದ್ದ ಎಲ್ಲಾ ಪ್ರದಾನ ಮಂತ್ರಿಗಳೂ ಭಾರತ ದೇಶದ ರಕ್ಷಣೆಗೆ ಮತ್ತು  ಸಾರ್ವಬೌಮತೆಗೆ ಅವರವರ ಅಂದಿನ ಪರಿಸ್ಥಿತಿ ಮತ್ತು ದೇಶದ ಆದಾಯ ಬಳಸಿ ಪ್ರಾಮಾಣಿಕ ಕೆಲಸ ಮಾಡಿದ್ದಾರೆ.     ಹಿಂದಿನ ಅವಧಿಯಲ್ಲಿ ನಾವು ಸಂಗ್ರಹಿಸುವ ಗುಪ್ತಚಾರ ಮಾಹಿತಿ ಮತ್ತು ಶಸ್ತ್ರಾಸ್ತ್ರಗಳು ಮುಂದಿನ ಅವದಿಯಲ್ಲಿ ಬಳಕೆ ಆಗಲೇ ಬೇಕು ಆದ್ದರಿಂದ ದೇಶದ ಎಲ್ಲಾ ಚುನಾಯಿತ ಸರ್ಕಾರಗಳೂ ದೇಶದ ಜನರ ಹಿತ ಚಿಂತಕರೆ ಅನ್ನಬೇಕಲ್ಲವೇ...   ಈಗಿನ ಯುದ್ಧದಲ್ಲಿ ಅಂತಹ ಕೊರತೆ ಆಗುವುದಿಲ್ಲ ಕಾರಣ ಆಹಾರ ದಾಸ್ತಾನು - ಇಂಧನ ದಾಸ್ತಾನುಗಳು ಸಾಕಷ್ಟು ಇರುವ ವ್ಯವಸ್ಥೆಗಳಿದೆ, ಉಕ್ರೇನ್ ಯುದ್ಧ ಪೀಡಿತ ದೇಶವಾದರೂ ಅಲ್ಲಿ ಸರಿ ಸಮಯದಲ್ಲಿ ರೈಲು ಸಂಚರಿಸುತ್ತಿದೆ ಅಂದರೆ ಈಗಿನ ಯುದ್ಧ ಶೈಲಿ ಬದಲಾಗಿದೆ.   ಯುದ್ಧದ ಉನ್ಮಾದಿಗಳು ಆಯಾ ದೇಶಗಳಲ್ಲಿ ಆಯಾ ಕಾಲದ ಪರಿಸ...

#Blog number 3315. ಅಡಿಕೆ ಹಾಳೆ ಉತ್ಪನ್ನ ತಯಾರಿಕರಿಗಾಗಿ

#ಕುಮಾರ_ಸುಬ್ರಮಣ್ಯ_ಮುಳಿಯಾಳ #ದೇಶ_ವಿದೇಶಗಳ_ಔಷದ_ಉತ್ಪಾದನೆ_ಮಾರಾಟ_ಕ್ಷೇತ್ರದಲ್ಲಿ_ದೊಡ್ಡ_ಹೆಸರು #ಅಡಿಕೆ_ವಿಶ್ವಸಂಸ್ಥೆ_ನಿರ್ಬಂದದ_ಬಗ್ಗೆ_ಅನೇಕ_ವರ್ಷದಿಂದ_ಜನಜಾಗೃತಿ_ಲೇಖನ_ಪ್ರಕಟಿಸುತ್ತಿದ್ದಾರೆ #ಅಮೇರಿಕಾ_ಅಡಿಕೆ_ಹಾಳೆ_ಉತ್ಪನ್ನ_ಆಮದು_ಬ್ಯಾನ್_ಮಾಡಿದೆ #ಆಡಿಕೆಹಾಳೆ_ಉತ್ಪನ್ನ_ತಯಾರಕರಿಗೆ_ಅವರು_ನೀಡಿದ_ಮಾರ್ಗದರ್ಶನದ_ಲೇಖನ_ಇಲ್ಲಿದೆ #arecanut #malenadu #westernghat #karnataka #FDA #palmleafdinnerware #arecacatachu  ಅಡಿಕೆ ಹಾಳೆಯ ಸಂಬಂದಿತ ಉತ್ಪನ್ನಗಳ ರಫ್ತ್ತುನಿಷೇಧ ದಿಂದ ಅಡಿಕೆ ಉದ್ಯಮದ ಮೇಲೆ ಆಗಬಹುದಾದ ಪರಿಣಾಮಗಳು  ******************************  ಅಡಿಕೆಯನ್ನು ಜಾಗತಿಕ ಮನ್ನಣೆಯನ್ನು ಪಡೆದ Food and Drug Administration (FDA) ಯು ಹಾನಿಕಾರಕ ಪಟ್ಟಿಯಲ್ಲಿ ಸೇರಿಸಿದ್ದಲ್ಲದೆ USA ಅಡಿಕೆ ಹಾಳೆಯ ಸಹಿತ  ಸಂಬಂದಿತ ಉತ್ಪನ್ನಗಳ ಆಮದನ್ನು ನಿಷೇಧಿಸಿದೆ.ಇದು ಹಂತ ಹಂತವಾಗಿ ಅಡಿಕೆಯನ್ನು ನಿರ್ಬಂಧಿತ ಪದಾರ್ಥಗಳ ಪಟ್ಟಿಯಲ್ಲಿ ಸೇರಿಸುವ ಮುಂದಿನ ಹಂತದ ಬೆಳವಣಿಗೆಯಂತೆ ತೋರುತ್ತದೆ.ಈಗಾಗಲೇ ಅಡಿಕೆ ನಿಷೇಧದ ಬಗ್ಗೆ WHO ಬೇರೆ ಬೇರೆ ರಾಜ್ಯಗಳ ಅಭಿಪ್ರಾಯವನ್ನು   ಕೇಳಿದ್ದನ್ನು ನಾವು ಗಮನಿಸಬಹುದು.    ಅಡಿಕೆಯ ಬಹುಪಯೋಗಿ ಅನುಕೂಲತೆಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಸರಿಯಾದ ಕ್ಲಿನಿಕಲ್ ಟ್ರಯಲ್ ನಡೆಯದೆ ಇದ್ದುದರ ಪರಿಣಾಮವನ್ನು ನಾವು ...

Blog number 3314. ಅಂಜಲಿ ಎಂಬ ಮಂಗ ಸಾಕಿದ್ದೆ...

#ಅಂಜಲಿ #ಒಂಬತ್ತು_ವರ್ಷದ_ಹಿಂದೆ_ಈ_ದಿನ_ನಮ್ಮ_ಮನೆಗೆ_ಬಂದಿದ್ದಳು #ಮೇ_17_2016 #ಅದೇ_ವರ್ಷದ_ಆಗಸ್ಟ್_15ಕ್ಕೆ_ಬಿಡುಗಡೆ_ಮಾಡಿದೆ #monkey #anjali #memories #petlovers    ಅಂಜಲಿ ಅದು ನಾವಿಟ್ಟ ಹೆಸರು ಅವಳ ಹೆಸರು ಬೇರೆ ಇರಬೇಕು ಅವಳು ನಮ್ಮೂರು ಬಂದು ಸೇರಿ ಊರಿನ ಬಾಲಕರ ಗಮನ ಸೆಳೆದದ್ದು ಹೇಗಂದರೆ...  ಅವಳಿಗೆ ಮನುಷ್ಯರ ಸಹವಾಸ ಚೆನ್ನಾಗಿತ್ತು ಆದ್ದರಿಂದ ಮಕ್ಕಳೆಲ್ಲ ಕಡಲೆಕಾಯಿ ಬಾಳೆಹಣ್ಣು ತೋರಿಸಿದರೆ ಅವರ ಹತ್ತಿರ ಯಾವುದೇ ಭಯ ಇಲ್ಲದೆ ಬಂದು ಕೈಯಿಂದ ಸ್ವೀಕರಿಸಿ ಹೋಗುತ್ತಿದ್ದಳಂತೆ, ಇದರಿಂದ ಇವಳು ನಮ್ಮೂರಿನ ಲಾರಿ ಮಾಲೀಕರಾದ ಅಮೀರ್ ಸಾಹೇಬರ ಮಕ್ಕಳ ಜೊತೆಯಾಗಿ ಅವರ ಮನೆ ಸೇರಿದಳು.    ಆದರೆ ಅವಳು ಕೆಲವೊಮ್ಮೆ ಜನರಿಗೆ ಕಚ್ಚಲು ಬರುವುದು ಸಿಟ್ಟಾಗುವುದು ಇವೆಲ್ಲ ಅವಳ ನೆಗೆಟಿವ್ ಅಂಶಗಳಾಗಿತ್ತು, ಅಮೀರ್ ಸಾಹೇಬರು ಅವರ ಮಗನ ಹತ್ತಿರ ಇದನ್ನು ನನಗೆ ಸಾಕಲು ಕಳಿಸಿ ಕೊಟ್ಟಿದ್ದರು, ನನಗೂ ಮಂಗ ಒಂದನ್ನು ಸಾಕುವ ಆಸೆ ಪೂರೈಸಿರಲಿಲ್ಲ ಇದು ಹೆಣ್ಣು ಮಂಗ ಆಗಿತ್ತು ತಕ್ಷಣ ಇದಕ್ಕೊಂದು ಬೋನು- ಚೈನು, ಬೋನಿನಿಂದ ಹೊರ ಬಿಟ್ಟಾಗ ನಮ್ಮ ಹಲಸಿನ ಮರ ಅಮಟೆ ಮರ ಮೇಲೆ ಹತ್ತಿ ಇಳಿಯುವಷ್ಟು ಉದ್ದದ ಸೊಂಟಕ್ಕೆ ಹಗ್ಗ ಹೀಗೆ ಎಲ್ಲ ವ್ಯವಸ್ಥೆ ಆಯಿತು.      ನಿತ್ಯ ಬೆಳಿಗ್ಗೆ ತಿನ್ನಲು ಹಸಿ ಶೇಂಗಾ, ಬಾಳೆಹಣ್ಣು - ಕ್ಯಾರೆಟ್ -ಸೌತೆಕಾಯಿ -ಪೇರಲೆ ಹಣ್ಣು ಇತ್ಯಾದಿ ಸಂಗ್ರಹವಾಯಿತು ನಂತ...

Blog number 3413. ಅಮೇರಿಕಾ ಅಡಿಕೆ ಹಾಳೆ ಉತ್ಪನ್ನ ಆಮದು ರದ್ದು ಮಾಡಿದೆ

#ಅಡಿಕೆ_ಹಾಳೆಯ_ಉತ್ಪನ್ನ_ಅಮೇರಿಕಾದಲ್ಲಿ_ನಿಷೇದ #WHO_ಅಡಿಕೆಯಲ್ಲಿ_ಕ್ಯಾನ್ಸರ್_ಕಾರಕ_ಕಾರ್ಸಿನೋಜಿನ್_ಎಂಬ_ವರದಿ_ಕಾರಣ #USನ_FDA_ಅಮೇರಿಕಾಕ್ಕೆ_ಅಡಿಕೆ_ಉತ್ಪನ್ನ_ಆಮದು_ಮಾರಾಟ_ರದ್ದು_ಮಾಡಿದೆ. #arecafarmer #arecanuts #India #US #ban #arecaplates #dinnerwear    ಯುನಿಟೆಡ್ ಸ್ಟೇಟ್ ನ FDA (Foods & Drug Administration) ದಿನಾಂಕ 8 - ಮೇ - 2025 ರಂದು ಆದೇಶ ಹೊರಡಿಸಿದೆ ಏನೆಂದರೆ...    ಅಮೇರಿಕಾದಲ್ಲಿ ಪರಿಸರ ಸ್ನೇಹಿ, ತಕ್ಷಣ ಮಣ್ಣಿನಲ್ಲಿ ಗೊಬ್ಬರ ಆಗುವಂತ ಅಡಿಕೆ ಹಾಳೆಯ ಡಿನ್ನರ್ ವೇರ್ (ಪ್ಲೇಟ್ - ಬೊವ್ಲ್ - ಲೋಟ - ಕಟ್ಲರಿ )ಗಳನ್ನ ಬೇರೆ ದೇಶದಿಂದ ಆಮದು ಮಾಡಿಕೊಂಡು ಮಾರಾಟ ಮಾಡುತ್ತಿದೆ  (ಪ್ಲಾಸ್ಟಿಕ್ ನಿಂದ ಪರಿಸರಕ್ಕೆ ಹಾನಿ ಎಂಬ ಕಾರಣದಿಂದ).    ಆದರೆ ಅಡಿಕೆ ಗಿಡದಲ್ಲಿ ಮತ್ತು ಅದರ ಉತ್ಪನ್ನ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕವಾದ ಕಾರ್ಸಿನೋಜಿನ್ ಇರುವುದು ಸಂಶೋದನೆಯಿಂದ ದೃಡ ಪಟ್ಟಿರುವುದರಿಂದ ಈ ಅಡಿಕೆ ಹಾಳೆಯ ಉತ್ಪನ್ನಗಳನ್ನ ಅಮೇರಿಕಾದ ಮಾರುಕಟ್ಟೆಗೆ ಆಮದು ಮಾಡಿಕೊಳ್ಳುವುದಕ್ಕೆ ಮತ್ತು ಮಾರಾಟ ಮಾಡುವುದಕ್ಕೆ ಕಾನೂನು ರೀತ್ಯಾ ಅವಕಾಶ ಇಲ್ಲ ಎಂದಿದೆ.    ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ USನ FDA ಆದೇಶ ಓದಿ https://www.fda.gov/food/hfp-constituent-updates/fda-alerts-industry-and-consumers-about-palm-l...

Blog number 3412.ಕಾಳೇಶ್ವರ ಧರ್ಮಪ್ಪ ಸಾಹೇಬರ ಸಂದರ್ಶನ ಭಾಗ - 2

#ಕುಗ್ರಾಮದಿಂದ_KAS_ಸ್ಥಾನದವರೆಗೆ #ಕಾಳೇಶ್ವರ_ದರ್ಮಪ್ಪನವರ_ಸಂದರ್ಶನ_ಭಾಗ_2 https://youtu.be/41oArS_Pr7Q?si=SuefbjDydoxxMWLt #sagar #muncifhighschool #Riponpet #hosanagara    ಒಂದೇ ಬಾರಿಗೆ ಸಾಗರದ ಮುಸ್ಸಿಪ್ ಹೈಸ್ಕೂಲಿನ ನಾಲ್ಕು ಅಧ್ಯಾಪಕರು KAS ಪಾಸು ಮಾಡುತ್ತಾರೆ.     ಹೊಸನಗರ ತಾಲೂಕಿನ ಹರತಾಳು ಸಮೀಪದ #ನಂದಿಗದ_ಗುಂಡಪ್ಪನವರು ಸಾಗರದ ಮುನ್ಸಿಪ್ ಹೈಸ್ಕೂಲ್ ಉನ್ನತಿಗೆ ಶ್ರಮಿಸಿದ್ದರು.    ಹೀಗೆ ಅನೇಕ ವಿಚಾರಗಳನ್ನ ಈ ಸಂದರ್ಶನದಲ್ಲಿ ದರ್ಮಪ್ಪನವರು ನೆನಪು ಮಾಡಿದ್ದಾರೆ.

Blog number 3411. ಕಾಳೇಶ್ವರ ಧರ್ಮಪ್ಪ ಸಾಹೇಬರ ಸಂದರ್ಶನ ಭಾಗ 1

#ಸಂದರ್ಶನ_ಭಾಗ_1 #ನಮ್ಮ_ಹೆಮ್ಮೆ_ನಮ್ಮೂರ_ಕಾಳೇಶ್ವರ_ದರ್ಮಪ್ಪನವರು https://youtu.be/7g5Uz5g6Uts?si=cA6Qq3RUMk2-EnJ3 #KAS #dharmappa #ripponpet #hosanagara   ಕೆ.ದರ್ಮಪ್ಪನವರು ಈಗ ಚಿಕ್ಕಮಗಳೂರು ಉಡುಪಿ ಲೋಕಸಭಾ ಸದಸ್ಯರಾದ ಮಾಜಿ ಮಂತ್ರಿ ಕೋಟಾ ಶ್ರೀನಿವಾಸ ಪೂಜಾರಿ ಅವರ ಪ್ರೈವೇಟ್ ಸೆಕ್ರೆಟರಿ ಆಗಿ ಮುಂದುವರಿದಿದ್ದಾರೆ.    ಕುಗ್ರಾಮದಿಂದ  KAS ಪದವಿ ತನಕ ಅವರು ಸಾಗಿ ಬಂದ ಹಾದಿಯ ವಿವರಣೆಯ ಈ ಸಂದರ್ಶನ ಗ್ರಾಮೀಣ ಯುವ ಜನತೆಗೆ ಪ್ರೇರಣೆ ಮತ್ತು ಮಾರ್ಗದರ್ಶನ ನೀಡುವಂತದ್ದಾಗಿದೆ.    ಹುಟ್ಟಿದ ಊರು ಹೊಸನಗರ ತಾಲೂಕಿನ ರಿಪ್ಪನಪೇಟೆ ಸಮೀಪದ ಕಾಳೇಶ್ವರ,ತಾಯಿ ತವರು ಮನೆ ಸಾಗರ ತಾಲೂಕಿನ ಆನಂದಪುರಂ ಹೋಬಳಿ ಗಿಳಾಲಗುಂಡಿ.    ಪ್ರಾಥಮಿಕ ಶಿಕ್ಷಣ ಗಿಳಾಲಗುಂಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ಮಾಧ್ಯಮಿಕ ಶಿಕ್ಷಣ ರಿಪ್ಪನಪೇಟೆ ಸರ್ಕಾರಿ ಮಾದ್ಯಮಿಕ ಶಾಲೆ, ಪ್ರೌಡ ಶಿಕ್ಷಣ ಆನಂದ ಪುರಂ ಸರ್ಕಾರಿ ಪ್ರೌಡಶಾಲೆ, ಪಿಯುಸಿ ಶಿವಮೊಗ್ಗದ NES ಕಾಲೇಜಿನಲ್ಲಿ ಮತ್ತು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಆನರ್ಸ್.   ಕೆ.ದರ್ಮಪ್ಪನವರು ಈಗ ಚಿಕ್ಕಮಗಳೂರು ಉಡುಪಿ ಲೋಕಸಭಾ ಸದಸ್ಯರಾದ ಮಾಜಿ ಮಂತ್ರಿ ಕೋಟಾ ಶ್ರೀನಿವಾಸ ಪೂಜಾರಿ ಅವರ ಪ್ರೈವೇಟ್ ಸೆಕ್ರೆಟರಿ ಆಗಿ ಮುಂದುವರಿದಿದ್ದಾರೆ.    ಕುಗ್ರಾಮದಿಂದ  KAS ಪದವಿ ತನಕ ಅವರು ಸಾಗಿ ಬಂದ ಹಾದಿಯ ವಿವರಣ...

Blog number 3410. ಮಮತಾ ಸಾಗರ್ ವಾಚಿಸಿದ "ನಾನು ಅಂದರೆ...." ಕವನ ಬೆಂಕಿ ಬಿರುಗಾಳಿ

#ನಾನು_ಎಂದರೆ.... #ಮಮತಾಸಾಗರ್_ವಾಚಿಸಿದ_ಕವನ #ಬೆಂಕಿ_ಬಿರುಗಾಳಿ_ಆಗಿದೆ #ಕವನ_ವಾಚನ_ಪೂರ್ಣವಾಗಿ_ನೋಡಿ #ಮಮತಾಸಾಗರ್_ಬಗ್ಗೆ_ನಾನು_ಬರೆದ_ಲೇಖನ ಇನ್ನೊಮ್ಮೆ  #mamathasagar #Nanu #viral #poem #akhilakarnatakawriters   8ನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ ವಾಚಿಸಿದ #ನಾನು ಎಂಬ ಶಿರ್ಷಿಕೆಯ ಕವನದ ಬಗ್ಗೆ ಪರ- ವಿರೋದದ ಚರ್ಚೆ ನಡೆಯುತ್ತಿದೆ. World Organisation of Writer ಜಾಗತಿಕ ಸಾಹಿತ್ಯ ಪ್ರಶಸ್ತಿ ಪಡೆದ ಮಮತಾ ಜಿ. ಸಾಗರ್ ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರತಿಷ್ಟಿತ ನಿರ್ಮಲಾ ಗರ್ಲ್ಸ್ ಹೈಸ್ಕೂಲ್ ವಿದ್ಯಾರ್ಥಿನಿ ಆಗಿದ್ದವರು ಇವರ ತಾಯಿ ಡಾಕ್ಟರ್ ಶೇಖರಿಬಾಯಿ ಸಾಗರ ಪೇಟೆಯ ಮೊದಲ ಖಾಸಾಗಿ ಮಹಿಳಾ ವೈದ್ಯರು.  ಖ್ಯಾತ ಸಾಹಿತಿ ಅಂಕಣಕಾರ #ಅರವಿಂದಚೊಕ್ಕಾಡಿ ಅವರು ಈ ಕವನ ವಾಚನದ ಬಗ್ಗೆ  ಅವರ ಪೇಸ್ ಬುಕ್ ನಲ್ಲಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ... ಕವಿತೆ ನಿಗೂಢವಾಗಿರಬೇಕು ನಿಜ. ಕವಿತೆಯ ಕುರಿತ ವಿಮರ್ಶೆಯೂ ನಿಗೂಢವೇ ಆಗಿದ್ದರೆ ವಿಮರ್ಶೆಯನ್ನೂ ಕವಿತೆಯೆಂದೇ ಪರಿಗಣಿಸಬೇಕಾದೀತು.    ಕಡೆಗೂ ಚರ್ಚೆಯಾಗುತ್ತಿರುವ ಕವಿತೆಯನ್ನು ನೋಡಿದೆ. ಅದು ನವ್ಯ ಸ್ಕೂಲ್ ಆಫ್ ಥಾಟ್‌ನ ಕವಿತೆ.‌ ಸಮಾಜದ ಮಡಿವಂತ ಮನಸ್ಥಿತಿಯನ್ನು ಒಡೆಯುವ ಹಾಗೆಯೇ ಬರೆದು ಹಾಕುವ ಹಾಗೆ ಬರೆಯಬೇಕೆಂಬುದು ನವ್ಯದ ಸಿದ್ಧಾಂತ. ಬಹುಶಃ ನವ್ಯರಲ್ಲಿ ಅಡಿಗರೊಬ್ಬರೇ ಸೋಷಿಯಲ್ ಡೀಸೆನ್ಸಿಯನ್ನು ಸಾಹಿತ್ಯ...

Blog number 3409. ಎಕ್ಕದ ಗಿಡದ ಮಹತ್ವ

#ಎಕ್ಕದಗಿಡ #ಆಯುರ್ವೇದ_ಮತ್ತು_ಧಾರ್ಮಿಕದಲ್ಲಿ_ಮಹತ್ವದ_ಗಿಡ #ಶಿವನ_ಗಣಪತಿಯ_ಪೂಜೆಲ್ಲಿ_ಎಕ್ಕೆ_ಹೂವಿನ_ಬಳಕೆ #ಬಿಳಿಎಕ್ಕೆಗಿಡದ_ಬೇರಿನಿಂದ_ಗಣಪತಿ_ವಿಗ್ರಹ #ganapathi #lordshiva #ayurveda #calotropigigantea #KRSParty #ravikrishnareddy #lsumitra    ರೆಡ್ಡಿ ಅವರು ಒಂದು ಪೋಸ್ಟ್ ಹಾಕಿದ್ದರು ಓದಿ....  ಎಕ್ಕದ ಹೂವು. ಉತ್ತರ ಭಾರತದಲ್ಲಿ ಈ ಹೂವಿನ ಮಾಲೆಯನ್ನು ಶಿವನಿಗೆ ವಿಶೇಷವಾಗಿ ಅರ್ಪಿಸುತ್ತಾರೆ. ನಮ್ಮಲ್ಲಿ ಇದೊಂದು ಏನಕ್ಕೂ ಬಾರದ ಯಃಕಶ್ಚಿತ್ ಕಳೆ ಗಿಡ. ಇನ್ನೂ ಅರಳದ ಇದರ ಒಳಗೆ ಗಾಳಿ ತುಂಬಿದ ಮೊಗ್ಗಿನ ಬುಡ್ಡೆಯನ್ನು ಅಮುಕಿದರೆ ಅದು ಟಪ್ ಎಂದು ಶಬ್ದ ಮಾಡುತ್ತ ಒಡೆಯುತ್ತದೆ. ನಾನಂತೂ ಚಿಕ್ಕಂದಿನಿಂದ ಈ ಗಿಡ ಮತ್ತು ಅದರ ಅರಳದ ಮೊಗ್ಗಿನ ಬುಡ್ಡೆ ಕಂಡರೆ ಅದನ್ನು ಅಮುಕಿ, ಅದರಿಂದ ಹೊಮ್ಮುವ ಟಪ್ ಶಬ್ದವನ್ನು ಆನಂದಿಸುತ್ತೇನೆ. ನೀವೂ ಹಾಗೆ ಮಾಡಿದ್ದೀರಾ?... ಇದಕ್ಕೆ ನನ್ನ ಪ್ರತಿಕ್ರಿಯೆ... ಎಕ್ಕದ ಹೂವು ಶಿವನಿಗೆ ಗಣಪತಿಗೆ ಅರ್ಪಿಸಿದರೆ, ಎಕ್ಕದ ಎಲೆ ಶನೀಶ್ವರನಿಗೆ ಅರ್ಪಿಸುತ್ತಾರೆ.  ಶಿರಡಿ ಸಮೀಪದ ಶನಿ ಶಿಂಗಾಪುರದಲ್ಲಿ ಹೂವಿನ ಪ್ರಸಾದಕ್ಕಿಂತ ಎಕ್ಕದ ಎಲೆಯೇ ಪ್ರಸಾದವಾಗಿ ನೀಡುತ್ತಾರೆ.   ಮನೆ ಎದರು ಎಕ್ಕದ ಗಿಡ ಇದ್ದರೆ ಅದೃಷ್ಟ ಎಂಬ ನಂಬಿಕೆ ಇದೆ.   ಎಕ್ಕದ ಗಿಡ ಜಾನುವಾರುಗಳು ತಿನ್ನುವುದಿಲ್ಲ ಆದ್ದರಿಂದ ನಮ್ಮ ಸಂಸ್ಥೆ ಮತ್ತು ಮನೆ ಎದುರು ಈ ಗಿಡ ನೆಟ್ಟಿದ್...

Blog number 3408. ಕೋವಿಶೀಲ್ಡ್ ಮೊದಲ ಡೋಸ್ ಪಡೆದ ದಿನ

#ಕೋವಿಶೀಲ್ಡ_ವ್ಯಾಕ್ಸಿನ್_ಮೊದಲ_ಡೋಸ್_ಪಡೆದ_ನೆನಪುಗಳು #ನಾಲ್ಕು_ವರ್ಷದ_ಹಿಂದೆ_ಈ_ಲಸಿಕೆಗಾಗಿ_ಕಾಯುತ್ತಿದ್ದ_ನೆನಪು_ನಿಮಗೆ_ಇದೆಯಾ? #ಭಯಪಟ್ಟವರು_ಎಷ್ಟೋ_ಜನ_ಕಾರಣ_ಗೊತ್ತಾ?    ಆಗ ಲಸಿಕೆ ಬಗ್ಗೆ ಸುಳ್ಳು ಸುದ್ದಿಯೂ ಪ್ರಾರಂಭ ಆಗಿತ್ತು, ಲಸಿಕೆ ತೆಗೆದುಕೊಂಡರೆ ಜೀವಮಾನದಲ್ಲಿ ಒಮ್ಮೆಯೂ ಮದ್ಯಪಾನ ಮಾಡುವಂತಿಲ್ಲ ಎಂಬುದು ಅನೇಕ ಪಾನಪ್ರಿಯರಿಗೆ ಭಯ ಉಂಟು ಮಾಡಿತ್ತು, ಲಸಿಕೆ ಬೇಕಾದರೆ ಬಿಡುತ್ತೇವೆ ಆದರೆ ಮಧ್ಯಪಾನ ಬಿಡುವುದಿಲ್ಲ ಎಂಬ ಅವರ ತೀಮಾ೯ನ ಮತ್ತು ನಿರಾಶೆಯಿಂದ ಲಸಿಕೆಯಿ೦ದ ದೂರ ಉಳಿಯಲು ಒಂದು ಕಾರಣ ಆಗಿತ್ತು ನಂತರ ಕ್ರಮೇಣ ಈ ವಾತಾವರಣ ಸರಿ ಆಯಿತು.   ಇದು ತಮಾಷೆಗಾಗಿ ಕುಡಿಯುವವರ ಕಾಲೆಳೆಯಲು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಜೋಕು ನಿಜವೆಂದೇ ಅನೇಕರು ಬಾವಿಸಿದ್ದರು.   #ಆದರೆ_ಮದ್ಯಪಾನಕ್ಕೂ_ಲಸಿಕೆಗೂ_ಯಾವುದೇ_ಸಂಬಂದವಿಲ್ಲ_ಎಲ್ಲರೂ_ಕೊರಾನ_ಲಸಿಕೆ_ತೆಗೆದುಕೊಳ್ಳಬಹುದು #ಎನ್ನುವ_ಪ್ರಚಾರ_ಸಕಾ೯ರ_ಮಾಡಬೇಕಿತ್ತು_ಆದರೆ_ಮಾಡಲಿಲ್ಲ. #coronavirus2020 #covid #Covishield #vaccine #VaccineSideEffects       2020-21 ರ  ಸಮಯದಲ್ಲಿ ಇಡೀ ವಿಶ್ವವವೇ ಚಿಕಿತ್ಸೆ ಇಲ್ಲದ ಹೊಸ ಸೊಂಕು ಕೋವಿಡ್ -19 ನಿಂದ ತತ್ತರಿಸಲು ಪ್ರಾರಂಬಿಸಿತ್ತು.    ಆಗ ಕೇಳಿ ಬಂದಿದ್ದು ಇದಕ್ಕೆ ರೋಗ ನಿರೋದಕ ಲಸಿಕೆ ಚುಚ್ಚುಮದ್ದು ಒಂದೇ ಪರಿಹಾರ ಆದರೆ ಅದನ್ನು ಕಂಡು ...

Blog number 3407. ನ್ಯಾಮತಿ ತರಕಾರಿ ಉಮೇಶಣ್ಣರ ನೆನಪುಗಳು

#ಶಿವಮೊಗ್ಗದ_ತರಕಾರಿ_ಉಮೇಶಣ್ಣ_ಇನ್ನು_ನೆನಪು_ಮಾತ್ರ #ನ್ಯಾಮತಿ_ಉಮೇಶ್_ಆಚಾರ್_ಅವರ_ನಿಜನಾಮ #ಅವರಿಂದ_22_ಅಕ್ಟೋಬರ್_2016_ರಂದು_ನಮ್ಮ_ಚಂಪಕಪ್ಯಾರಡೈಸ್_ಉದ್ಘಾಟನೆ_ಮಾಡಿಸಿದ್ದೆ. #vegetables #nyamathi #ಶಿವಮೊಗ್ಗ #apmcmarket #umeshanna        ಶಿವಮೊಗದ APMC ತರಕಾರಿ ಉಮೇಶಣ್ಣ ವಿಶೇಷ ವ್ಯಕ್ತಿಗಳು ಅವರ ಊರು ನ್ಯಾಮತಿ, ಅಸಾಧಾರಣ ನೆನಪಿನ ಶಕ್ತಿ, ವ್ಯವಹಾರದಲ್ಲಿ ಚತುರತೆ, ಎದುರಿನಲ್ಲಿರುವವರ ಮನಸ್ಸನ್ನು ರೀಡಿಂಗ್ ಮಾಡುವ ಚಾಕ ಚಕ್ಯತೆ ಅವರಲ್ಲಿತ್ತು.   ಅವರಿಗೆ ಪರಿಚಯ ಇಲ್ಲದವರೇ ಇಲ್ಲ ಅಷ್ಟು ಪಾದರಸದಂತ ಚಟುವಟಿಕೆಯ ವ್ಯಕ್ತಿ ಉಮೇಶಣ್ಣ.    ತರಕಾರಿ ಮಾರುಕಟ್ಟೆಯ ವಿಚಾರದಲ್ಲಿ ಇಡೀ ದೇಶದ ಮಾರುಕಟ್ಟೆಗಳನ್ನು ನೋಡಿ ಬಂದವರು ಅವರು,ವಿಶ್ವಕರ್ಮ ಸಮಾಜಕ್ಕೆ ಸೇರಿದ  ಅವರಿಗೆ  ಗೆಳೆಯರು ಮಾತ್ರ ಇಡೀ ರಾಜ್ಯಾದ್ಯಂತ ಇದ್ದರು.  ಅವರಿಗೆ ಪ್ರತಿ ವರ್ಷ ಅವರ ಕಾರು ಬದಲಿಸಲೇಬೇಕು ಅವರ ಕಾರು ಚಾಲನೆ ವೇಗ 120 ಕಿಲೋಮೀಟರ್ ಗಿಂತ ಹೆಚ್ಚಿನ ವೇಗ.   ಮಾಜಿ ಮಂತ್ರಿ ಬಳ್ಳಾರಿಯ ಲೋಕಸಭಾ ಸದಸ್ಯರಾಗಿದ್ದ  ರಾಮುಲು ಅವರನ್ನು ನಮ್ಮಲ್ಲಿಗೆ ಕರೆ ತಂದು ಪರಿಚಯಿಸಿದ್ದು ಇದೇ ಉಮೇಶಣ್ಣ, ರಾಮುಲು ಅವರಿಗೆ ಉಮೇಶಣ್ಣರ ಮೇಲೆ ವಿಶೇಷ ಗೌರವ ಇತ್ತು, ಇವರಿಬ್ಬರೂ ಬಳ್ಳಾರಿಯಲ್ಲಿ ಸರಾಯಿ ಕಂಪೆನಿಯಲ್ಲಿ ಒಟ್ಟಾಗಿ ನೌಕರಿ ಮಾಡಿದ್ದರಂತೆ.   ತ...

Blog number 3406. ಶ್ರೀ 108 ಕುಂತು ಸಾಗರ ಮಹಾರಾಜರು ಕೊಲಾಪುರ

#ಆಚಾರ್ಯಶ್ರೀ108_ಶ್ರೀಕುಂತುಸಾಗರಜೀ_ಮಹಾರಾಜರ #ಪುಣ್ಯಚರಣ_ಸ್ಪರ್ಶದ_ಬಾಗ್ಯ_ನಮ್ಮ_ಸಂಸ್ಥೆಗೆ #ನನ್ನ_ಪೂರ್ವ_ಜನ್ಮದ_ಪುಣ್ಯದ_ಫಲ_ಈ_ಸತ್ಸಂಗಳು ದೇಶದ ಅಗ್ರಗಣ್ಯ ಆಚಾರ್ಯ ಶ್ರೀ 108 ಶ್ರೀ ಕುಂತು ಸಾಗರಜಿ ಜೈನ ಮುನಿ ಮಹಾರಾಜರನ್ನ ದರ್ಶನ ಮಾಡುವ ಸದಾವಕಾಶ ನಾಳೆ ಸಾಗರದ ಭಕ್ತವೃಂದಕ್ಕೆ ಸಿಗಲಿದೆ ಈ ಸುವರ್ಣಾವಕಾಶ ಕಳೆದು ಕೊಳ್ಳಬಾರದು. https://youtu.be/Jrkz48Bo634?si=YhkDb8X_5Z77FdQQ #jainism #kunthusagarji #kunthugirikshetra #munimaharaj #sudeerpatil #Humcha    ಭಾರತ ದೇಶದ ಜೈನ ಮುನಿಗಳಲ್ಲಿ ಅಗ್ರಸ್ಥಾನದಲ್ಲಿರುವ ಮಹಾರಾಷ್ಟ್ರದ ಕೊಲ್ಲಾಪುರ ಸಮೀಪದ ಕುಂತು ಗಿರಿ ಕ್ಷೇತ್ರದ ಆಚಾರ್ಯ ಶ್ರೀ 108 ಶ್ರೀ ಕುಂತು ಸಾಗರ ಜಿ ಮಹಾರಾಜರು ಇವತ್ತು ತಮ್ಮ ಪರ್ಯಟನೆಯಲ್ಲಿ ಹುಂಚಾದಿಂದ ಸಾಗರ ಮಾರ್ಗವಾಗಿ ಸಂಚರಿಸುವಾಗ ತಮ್ಮ ಆಹಾರ ಸೇವನೆಗಾಗಿ ನಮ್ಮ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ಬಂದಿದ್ದರು.   ಕುಂತುಗಿರಿ ಕ್ಷೇತ್ರ ಮಹಾರಾಷ್ಟ್ರದ ಕೊಲ್ಲಾಪುರದಿಂದ ಸಾಂಗ್ಲಿ ಮಾರ್ಗವಾಗಿ 22 ಕಿ.ಮೀ ದೂರದಲ್ಲಿದೆ ಅಲ್ಲಿ 40 ಎಕರೆ ಪ್ರದೇಶದಲ್ಲಿ ಕುಂತುಗಿರಿ ಕ್ಷೇತ್ರ ಇದೆ ಇದರ ಸ್ಥಾಪಕರು ಆಚಾರ್ಯ ಶ್ರೀ 108 ಶ್ರೀ ಕುಂತು ಸಾಗರ್ ಜಿ. ಒಂದು ವಿಶೇಷವೆಂದರೆ 1961- 62 ರಲ್ಲಿ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕಕ್ಕಾಗಿ ಇವರು ತಮ್ಮ ಗುರು ಮಹಾವೀರ ಕೀರ್ತಿ ಮಹಾರಾಜರ ಜೊತೆ ಬಂದವರು ವಾಪಸು ಹೋಗುವಾಗ ಹುಂಚಾದ ಶ್ರೀ ಪದ್...

Blog number 3404. ಕುಂತುಗಿರಿ ಶ್ರೀ ಕ್ಷೇತ್ರದ ಮ್ಯಾನೇಜಿಂಗ್ ಡೈರೆಕ್ಟರ್ ಸುದೀರ್ ಪಾಟೀಲ್

#ದೇಶದ_ಅಗ್ರಗಣ್ಯ_ಜೈನಮುನಿಗಳಾದ #ಆಚಾರ್ಯ_ಶ್ರೀ108_ಶ್ರೀಕುಂತುಸಾಗರಜೀ_ಮಹಾರಾಜರ #ಮಹಾರಾಷ್ಟ್ರದ_ಕೊಲ್ಲಾಪುರ_ಸಮೀಪದ #ಶ್ರೀಕ್ಷೇತ್ರ_ಕುಂತಗಿರಿ_ಟ್ರಸ್ಟ್_ಮ್ಯಾನೇಜಿಂಗ್_ಟ್ರಸ್ಟಿ #ಸುದೀರ್_ಪಾಟೀಲ್_ನನ್ನ_ಅಥಿತಿ https://youtu.be/BEFHmT5-9wk?si=kBZ3ZLJl52Wywf0q   ನನ್ನ 15 ವರ್ಷದ ಗೆಳೆಯರು ಸುದೀರ್ ಪಾಟೀಲರು ಯು ಇವತ್ತು ಅವರು ಸೇವೆ ಮಾಡುತ್ತಿರುವ ದೇಶದ ಅಗ್ರಗಣ್ಯ ಜೈನ ಮುನಿಗಳಾದ ಆಚಾರ್ಯ_ಶ್ರೀ108_ಶ್ರೀಕುಂತುಸಾಗರಜೀ_ಮಹಾರಾಜರ ದೇಶ ಭ್ರಮಣ ಯಾತ್ರೆಯಲ್ಲಿ ನಮ್ಮಲ್ಲಿ ಬಂದಾಗ ಮಾಡಿದ ಸಂದರ್ಶನ ನೋಡಿ. #maharashtra #kollapur #sangli #Srikshetra #kunthagiri #kunthusagarji #jainreligion

Blog number 3405. ಶಿವಮೊಗ್ಗ ಜಿಲ್ಲಾ ಸಾಹಿತ್ಯ ಪರಿಷತ್ V/S ರಾಜ್ಯ ಸಾಹಿತ್ಯ ಪರಿಷತ್

#ಶಿವಮೊಗ್ಗ_ಜಿಲ್ಲಾ_ಸಾಹಿತ್ಯ_ಪರಿಷತ್_ಅಧ್ಯಕ್ಷರಿಗೆ_ಶೋಕಾಸ್_ನೋಟೀಸ್ #ನಾಲ್ಕು_ಬಾರಿ_ಜಿಲ್ಲಾ_ಸಾಹಿತ್ಯ_ಪರಿಷತ್_ಅದ್ಯಕ್ಷರಾಗಿರುವ_ಮಂಜುನಾಥರು #ನಿರಂತರವಾಗಿ_ಕಾಯ೯ಕ್ರಮಗಳನ್ನ_ನಡೆಸುತ್ತಾರೆ  ಶಿವಮೊಗ್ಗ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ನಡೆಸುವ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಓಓಡಿ ಸೌಲಭ್ಯ ಕಲ್ಪಿಸಲು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಂಜುನಾಥರು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದು ಅಪರಾದ ಅಂತ ಜೋಷಿ ಶೋಕಾಸ್ ನೋಟೀಸ್ ನೀಡಿದ್ದಾರೆ.   ಶಿವಮೊಗ್ಗ ಮಕ್ಕಳ ಸಾಹಿತ್ಯ ಪರಿಷತ್ ಮತ್ತು ಅದು ನಡೆಸುವ ಸಮ್ಮೇಳನಗಳು ಮಹೇಶ್ ಜೋಷಿ ಅವರಿಂದ ಸ್ಥಗಿತವಾಗಬಾರದು.   ಸದಾ ಒಂದಲ್ಲ ಒಂದು ಸಾಹಿತ್ಯದ ಕಾರ್ಯಕ್ರಮ ಹಮ್ಮಿಕೊಳ್ಳುವ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರ ಜೊತೆ ಶಿವಮೊಗ್ಗ ಜಿಲ್ಲೆಯಲ್ಲಿ ಇವರಷ್ಟೆ ಕ್ರಿಯಾಶೀಲರಾದ ದೊಡ್ಡ ಸಂಖ್ಯೆಯ ಕಾರ್ಯಪಡೆ ಇವರ ಜೊತೆ ಇದೆ.    ಈಗ ರಾಜ್ಯ ಅಧ್ಯಕ್ಷರಾಗಿರುವ ಮಹೇಶ್ ಜೋಷಿ ರಾಜ್ಯ ಸರ್ಕಾರದಿಂದ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಪಡೆದು ರಾಜ್ಯದ ಮಂತ್ರಿಯಂತೆ ಆಗಿದ್ದಾರೆ ಅವರ ವೈಯಕ್ತಿಕ ದ್ವೇಷ ಸಾಧನೆಗಾಗಿ ಶಿವಮೊಗ್ಗ ಜಿಲ್ಲೆಯ ಸಾಹಿತ್ಯ ಚಟುವಟಿಕೆಗಳಿಗೆ ತೊಂದರೆ ಆಗಬಾರದು. #kannada #sahitya #parishath #maheshjoshi #Manjunath #shivamogga #...

Blog number 3403. ಶ್ರೀ 108 ಸಮರ್ಥ ಭದ್ರ ಜೀ ಮಹಾರಾಜರು

#ಈ_ತರುಣ_ಜೈನ_ಮುನಿಗಳ_ಕಣ್ಣಿನ_ಕಾಂತಿ_ನೋಡಿ #ಬ್ರಹ್ಮಚರ್ಯ_ಸನ್ಯಾಸ #ಅಷ್ಟು_ಸುಲಭವೆ? #ಜೈನ_ಮುನಿಗಳು_ಈ_ಸಾಧನೆ_ಮಾಡುತ್ತಾರೆ. https://youtube.com/shorts/wrtHlX6iaGI?si=KnzFsE5AiMvzDgoS #jainmuni #Sanyas #brahnacharya #digambar  ಹಂತ ಹಂತವಾಗಿ ಪಂಚೇಂದ್ರಿಯಗಳನ್ನ_ನಿಷ್ಕ್ರಿಯಗೊಳಿಸಿ ಚಳಿ ಮಳೆ ಬಿಸಿಲುಗಳಿಗೆ ದಿಗಂಬರರಾಗಿ ಮಾನವ ಜನ್ಮದ ದೇಹ ಒಡ್ಡಿಕೊಂಡು ಆದ್ಯಾತ್ಮದ ಸಾಧನೆಗೈಯುವುದು ಎಷ್ಟು ಸನ್ಯಾಸಿಗಳಿಗೆ ಸಾಧ್ಯ? ಆದರೆ ಜೈನ ಧರ್ಮದಲ್ಲಿ ಇದನ್ನು ಸಾದಿಸುತ್ತಾರೆ.  ಜೈನ ಧರ್ಮದಲ್ಲಿ ದಿಗಂಬರ ಸನ್ಯಾಸಿಗಳು ಸಂಪೂರ್ಣ ವಸ್ತ್ರ ತ್ಯಾಗ, ಜೀವಮಾನ ಪೂರ್ತಿ ಬರಿಗಾಲ ಸಂಚಾರ, ದಿನಕ್ಕೆ ಒಮ್ಮೆ ಮಾತ್ರ ನೀರು ಆಹಾರ, ತಮ್ಮ ದೇಹದ ಕೂದಲು ತಮ್ಮ ಕೈಯಿಂದಲೇ ಕಿತ್ತು ತೆಗೆಯುವ ಕೇಶ ಲೋಚ, ಇಚ್ಚಾ ಮರಣದ ಸಲ್ಲೇಖನ ವೃತ ಹೀಗೆ ಇವೆಲ್ಲ ಕಠೋರ ಸಾಧನೆ ತಿಳಿಯದೇ ಇದ್ದರೆ ಜೈನ ಧರ್ಮ ತಿಳಿಯಲು ಸಾಧ್ಯವಿಲ್ಲ.  ಈ ಸಂತರನ್ನ ನೋಡಿ ಎಷ್ಟು ಚಿಕ್ಕ ವಯಸ್ಸು ಆಗಲೇ ದಿಗಂಬರರಾಗಿ ದೀಕ್ಷೆ ಪಡೆದಿದ್ದಾರೆಂದರೆ ಇವರ ಸಾಧನೆ ಸಾಮಾನ್ಯವಲ್ಲ ದೀಕ್ಷೆ ಪಡೆಯಲು ಅನೇಕ ಹಂತಗಳ ಮನೋನಿಗ್ರಹದ ಪರೀಕ್ಷೆಗಳನ್ನ ದಾಟಿ ಬರಬೇಕು ಅದೆಲ್ಲ ದಾಟಿದ ಮೇಲೆಯೇ ಇವರು ಅರ್ಹರೆಂದರೆ ಮಾತ್ರ ಇವರ ಗುರು ಇವರಿಗೆ ದೀಕ್ಷೆ ನೀಡುತ್ತಾರೆ.   ಇವತ್ತು ನಮ್ಮ ಶ್ರೀಕೃಷ್ಣ ಸರಸ ಕನ್ವೆನ್ಷನ್ ಹಾಲ್ ನಲ್ಲಿ ಆಚಾಯ೯ ಶ್ರೀ 108 ಶ್ರೀ ಕುಂತು ಸಾಗರ...