Skip to main content

Posts

Showing posts from 2025

BN 3432. ಡಾಕ್ಟರ್ ಡಿ.ಸುರೇಶ್ ರಾವ್ ಕ್ಯಾನ್ಸರ್ ತಜ್ಞರು

#ನನ್ನ_ಇವತ್ತಿನ_ಅತಿಥಿ #ಡಾಕ್ಟರ್_ಡಿ_ಸುರೇಶ್ #ತೀರ್ಥಹಳ್ಳಿ_ಆಗುಂಬೆ_ಮೂಲದವರು #ಇವರ_ಶಿವಮೊಗ್ಗ_ಜಿಲ್ಲೆಯ_ತೀರ್ಥಹಳ್ಳಿಯಲ್ಲಿ_ಸುಸಜ್ಜಿತ #ಕ್ಯಾನ್ಸರ್_ಆಸ್ಪತ್ರೆ_ಶೀಘ್ರದಲ್ಲೇ_ಕಾರ್ಯಾರಂಭ_ಮಾಡಲಿದೆ #ಈಗಾಗಲೇ_ಮಂಗಳೂರಿನಲ್ಲಿ_ಇವರ_ಆಸ್ಪತ್ರೆ_MIO_HOSPITAL_ಪ್ರಸಿದ್ದಿ_ಪಡೆದಿದೆ #ಮಂಗಳೂರು_ಇನ್ಸ್ಟಿಟ್ಯೂಟ್_ಆಫ್_ಆಂಕಾಲಜಿ_ಉಡುಪಿಯಲ್ಲೂ_ಡೇ_ಕೇರ್_ಸೆಂಟರ್_ಇದೆ.    ಡಾಕ್ಟರ್ ಡಿ.ಸುರೇಶ್ ಮಂಗಳೂರಿನ ಕಂಕನಾಡಿಯ ಪಂಪ್ ವೆಲ್ ನಲ್ಲಿ ಸುಸಜ್ಜಿತವಾದ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಾಜಿ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ (MIO) ಪ್ರಸಿದ್ಧಿ ಮತ್ತು ಪ್ರಖ್ಯಾತಿ ಪಡೆದಿದೆ ಇವರ ಸಂಸ್ಥೆಯ ಬ್ರಾಂಚ್ ಉಡುಪಿಯಲ್ಲೂ ಇದೆ.   ಡಾಕ್ಟರ್ ಡಿ.ಸುರೇಶ್ ತೀರ್ಥಹಳ್ಳಿ ಮೂಲದವರು ಇವರಿಗೆ ಮಲೆನಾಡಿನ ಶಿವಮೊಗ್ಗ, ಉತ್ತರ ಕನ್ನಡ,ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಜನರಿಗೆ ಅನುಕೂಲವಾಗುವಂತೆ ತೀರ್ಥಹಳ್ಳಿಯಲ್ಲಿ 80 ಹಾಸಿಗೆಯ ಕ್ಯಾನ್ಸರ್ ಆಸ್ಪತ್ರೆ ಮಾಡಿದ್ದಾರೆ.    ಕಳೆದ ವರ್ಷ 15 ಮೇ 2023 ರಂದು ತೀಥ೯ಹಳ್ಳಿಯ ನೆರಟೂರು ಗ್ರಾಮ ಪಂಚಾಯಿತಿಯಲ್ಲಿ MIO HOSPITAL ತೀರ್ಥಹಳ್ಳಿಯ ಭೂಮಿ ಪೂಜೆ ಇವರು ನೆರವೇರಿಸಿದ್ದರು.    ಶಿವಮೊಗ್ಗ ಭದ್ರಾವತಿ ಮಧ್ಯದ #ಮಲ್ನಾಡ್_ಕ್ಯಾನ್ಸರ್_ಆಸ್ಪತ್ರೆ ಮತ್ತು ಸಧ್ಯದಲ್ಲೇ ಪ್ರಾರಂಭ ಆಗಲಿರುವ ಯಡ್ಯೂರಪ್ಪರ ನಾರಾಯಣ ಹೃದಯಾಲಯದ ಕ್ಯಾನ್ಸರ್ ಆ...

BN 3431. ಭಾಗ-1. ಹೊಳೆಬಾಗಿಲು ಸೇತುವೆ

#ಭಾಗ_ಒಂದು. #ಅಂಬಾರಗೋಡ್ಲು_ಕಳಸವಳ್ಳಿ_ಸೇತುವೆ_ಉದ್ಘಾಟನೆಯ_ಕ್ಷಣಗಣನೆಯಲ್ಲಿ #ನಾನು_ಮೊದಲ_ಬಾರಿಗೆ_ಹೊಳೆಬಾಗಿಲು_ಲಾಂಚ್_ನೋಡಿದ್ದು_ದಾಟಿದ್ದು. #sharavathiriver #linganamakkidam #ambargodlu #kalasavalli #cablebridge #prasannakereki #byraghavendra #kagoduthimmappa   1989 ಅಥವ 1990 ರಲ್ಲಿ ನಾನು ಕಾಗೋಡು ತಿಮ್ಮಪ್ಪನವರ ಕಪ್ಪುಅಂಬಾಸಡರ್ ಕಾರಿನಲ್ಲಿ ಮೊದಲ ಬಾರಿಗೆ ಹೊಳೆಬಾಗಿಲು ನೋಡಿದ್ದು ಮತ್ತು ಮೊದಲ ಬಾರಿಗೆ ಲಾಂಚಿನಲ್ಲಿ ದಾಟಿದ್ದು ನೆನಪುಗಳು.     ಗುಂಡೂರಾವ್ ಮತ್ತು ಬಂಗಾರಪ್ಪನವರ ರಾಜಕೀಯ ಸಂಘರ್ಷದಲ್ಲಿ ಜನತಾ ಪಕ್ಷದ ಕಾಗೋಡು ತಿಮ್ಮಪ್ಪನವರನ್ನು ಕಾಂಗ್ರೆಸ್ಸಿಗೆ ಸೇರಿಸಿ ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಮಂತ್ರಿನ್ನಾಗಿಸಿದ್ದು ಇತಿಹಾಸ.     ನಂತರ ಸುಮಾರು  ವರ್ಷಗಳ ಕಾಲ ಸಾಗರದ ರಾಜಕೀಯ ರಂಗದಲ್ಲಿ ಕಾಗೋಡು ತಿಮ್ಮಪ್ಪನವರು ಇಲ್ಲದ್ದರಿಂದ ಆಗಿನ ಕಾಂಗ್ರೆಸ್ ಪಕ್ಷದ ಕಟ್ಟಾ ಮುಖಂಡರಾದ ಅಹ್ಮದ್ ಅಲಿಖಾನ್ ಸಾಬ್ ಹೇಗಾದರೂ ಮಾಡಿ ಕಾಗೋಡು ತಿಮ್ಮಪ್ಪನವರನ್ನು ಸಾಗರ ತಾಲ್ಲೂಕಿನ ರಾಜಕಾರಣಕ್ಕೆ ಕರೆತರಬೇಕು ಎಂಬ ಪ್ರಯತ್ನ ಪ್ರಾರಂಬಿಸಿದ್ದರು.    1989 ರ ವಿಧಾನಸಭಾ ಚುನಾವಣೆಗೆ ಕಾಗೋಡು ತಿಮ್ಮಪ್ಪನವರನ್ನು ಕರೆ ತರುವ ಪ್ರಸ್ತಾವನೆಯನ್ನು ಮಾಡಿದರು ಇದಕ್ಕೆ ಅವರಿಗೆ ಸಾತ್ ಕೊಟ್ಟವರು ಪುತ್ತೂರಾಯರು ಮತ್ತು ಕುರುಬರ ಲಿಂಗಪ್ಪನವರು.   ಆಗ...

BN 3430. ಭಾಗ - 2 . ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ಜೊತೆ ಹೊಳೆಬಾಗಿಲು ಲಾಂಚ್ ಪ್ರಯಾಣ

#ಭಾಗ_ಎರಡು #ಸಂಸದರಾದ_ಮಾಜಿ_ಮುಖ್ಯಮಂತ್ರಿ_ಬಂಗಾರಪ್ಪನವರನ್ನೇ_ಬಿಟ್ಟು_ಹೋದ  #ಹೊಳೆಬಾಗಿಲು_ಲಾಂಚ್_ಸಿಬ್ಬಂದಿಗಳು. #sharavathirivet #sagar #govtofkarnataka #govtofindia #ambargodlu #kalasavalli #siganduru #cablebridge #SBangarappa #shivamogga #parlimentmember    1996ರಲ್ಲಿ ಬಂಗಾರಪ್ಪನವರು ಮಾಜಿ ಮುಖ್ಯಮಂತ್ರಿಗಳು ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದರು.    ಆಗ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕರಾದ ಕಾಗೋಡು ತಿಮ್ಮಪ್ಪನವರ ಲಕ್ಷ್ಮಣ ರೇಖೆ ದಾಟಲು ಸಾಧ್ಯವಿರಲಿಲ್ಲ.   ಅವರೆಲ್ಲ ಚುನಾವಣೆಯಲ್ಲಿ ಬಂಗಾರಪ್ಪನವರಿಗೆ ವಿರುದ್ಧವಾಗಿ ಕಾಂಗ್ರೇಸ್ ಅಭ್ಯರ್ಥಿ ಕೆ.ಜಿ. ಶಿವಪ್ಪನವರ ಪರವಾಗಿ ಕೆಲಸ ಮಾಡಿದ್ದರು.    ಸಾಗರ ತಾಲೂಕಿನಲ್ಲಿ ಹರುನಾಥರಾವ್, ಮೊಹಮ್ಮದ್ ಕೊಯಾ, ಮೊಹಮದ್ ಖಾಸಿಂ,ಕಾಗೋಡು ಹೋರಾಟದ ನೇತಾರಗಣಪತಿಯಪ್ಪ ಮತ್ತು ಅನೇಕರ ಜೊತೆ ನಾನು ಸೇರಿ ಬಂಗಾರಪ್ಪನವರ ಗೆಲುವಿಗೆ ಕಟಿಬದ್ಧರಾಗಿ ಚುನಾವಣೆ ಮಾಡಿದೆವು ಚುನಾವಣೆಯಲ್ಲಿ ಬಂಗಾರಪ್ಪನವರು ಗೆಲ್ಲುತ್ತಾರೆ ಸಾಗರ ತಾಲೂಕಿನಲ್ಲಿ ಅವರಿಗೆ ಲೀಡ್ ಬರುತ್ತದೆ.   ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಂಗಾರಪ್ಪನವರಿಗೆ ವಿರುದ್ಧ ಆಗಿದ್ದರೂ ಮತದಾರರು ಬಂಗಾರಪ್ಪನವರ ಕೈ ಬಿಡಲಿಲ್ಲ.    ಸಂಸದರಾಗಿ ಆಯ್ಕೆ ಆದ ಬಂಗ...

BN 3429. ಭಾಗ-4 ನನ್ನ ಪಾದಯಾತ್ರೆಗೆ 21 ವರ್ಷ

#ಭಾಗ_4 #ನನ್ನ_ಪಾದಯಾತ್ರೆಗೆ_21_ವರ್ಷ #ಹೊಳೆಬಾಗಿಲು_ಸೇತುವೆ #ಶಿವಮೊಗ್ಗ_ತಾಳಗುಪ್ಪ_ಬ್ರಾಡ್_ಗೇಜ್_ಹಣ_ಬಿಡುಗಡೆ #ಸಾಗರ_ಜಂಬಗಾರು_ರೈಲುನಿಲ್ದಾಣ_ಡಾಕ್ಟರ್_ರಾಮಮನೋಹರ್_ಲೋಹಿಯಾ_ರೈಲು_ನಿಲ್ದಾಣವಾಗಿ_ಪುನರ್_ನಾಮಕರಣ #ಜೋಗ್_ಜಲಪಾತ_ಪ್ರವಾಸಿತಾಣದ_ಅಭಿವೃದ್ಧಿ #ಹಂದಿಗೋಡು_ಕಾಯಿಲೆ_ಪೀಡಿತರಿಗೆ_ಪುನರ್ವಸತಿಗಾಗಿ   21 ಜನವರಿ 2004 ರಿಂದ 31 ಜನವರಿ 2004ರವರೆಗೆ ಹನ್ನೊಂದು ದಿನಗಳ ಕಾಲ ಸಾಗರ ತಾಲೂಕಿನಾದ್ಯಂತ ಮೇಲಿನ ಬೇಡಿಕೆಗಳ ಈಡೇರಿಕೆಗಾಗಿ ಪಾದಯಾತ್ರೆ ಮೂಲಕ ಜನ ಜಾಗೃತಿ ಮೂಡಿಸಿದ್ದು ಈವರೆಗೆ ಯಾರೂ ಮುರಿಯದ ದಾಖಲೆ ಆಗಿ ಉಳಿದಿದೆ.     ತಾಲ್ಲೂಕಿನ ಜನತೆ ರಾಜಕೀಯ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಒತ್ತಾಯಿಸ ಬೇಕು, ಮಗು ಅಳದಿದ್ದರೆ ತಾಯಿ ಹಾಲು ನೀಡುವುದಿಲ್ಲ ಅಂತ ಜನರಿಗೆ ತಿಳಿಸುತ್ತಿದ್ದೆ.    ಅನೇಕ ಕಡೆ #ನೀವು_ಹೇಳುವುದೆಲ್ಲ_ಸರಿ_ಆದರೆ_ತುಮರಿ_ಸೇತುವೆ_ಸಾಧ್ಯವೇ_ಇಲ್ಲ ಅಂತ ಗೇಲಿ ಮಾಡುತ್ತಿದ್ದ ಮುಖ೦ಡರುಗಳು ಸಿಗುತ್ತಿದ್ದರು ಅಲ್ಲಿವರೆಗೆ ಸಾಗರದ ಜನ ಮನದಲ್ಲಿ ತುಮರಿ ಸೇತುವೆ ಅಸಾಧ್ಯ ಎಂಬ ಬಾವನೆ ಮನೆ ಮಾಡಿತ್ತು.     ತುಮರಿ ಸೇತುವೆಗೆ 19 - ಪೆಬ್ರವರಿ -2018 ಶoಕು ಸ್ಥಾಪನೆ ಆಯಿತು ಈಗ ದಿನಾಂಕ 14- ಜುಲೈ-2025 ಸೋಮವಾರ ಉದ್ಘಾಟನೆ ಆಗಲಿದೆ.   ಈಗಾಗಲೆ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಆಗಿ ರೈಲು ಬರುತ್ತಿದೆ, ಜೋಗ ಅಭಿವೃದ್ಧಿ ಪ್ರಾಧಿ...

BN 3428. ಭಾಗ 3 ನನ್ನ ಪಾದಯಾತ್ರೆ

#ಭಾಗ_ 3 #ನನ್ನ_ಪಾದಯಾತ್ರೆಗೆ_21_ವರ್ಷ #ಹೊಳೆಬಾಗಿಲು_ಸೇತುವೆ #ಶಿವಮೊಗ್ಗ_ತಾಳಗುಪ್ಪ_ಬ್ರಾಡ್_ಗೇಜ್_ಹಣ_ಬಿಡುಗಡೆ #ಸಾಗರ_ಜಂಬಗಾರು_ರೈಲುನಿಲ್ದಾಣ_ಡಾಕ್ಟರ್_ರಾಮಮನೋಹರ್_ಲೋಹಿಯಾ_ರೈಲು_ನಿಲ್ದಾಣವಾಗಿ_ಪುನರ್_ನಾಮಕರಣ #ಜೋಗ್_ಜಲಪಾತ_ಪ್ರವಾಸಿತಾಣದ_ಅಭಿವೃದ್ಧಿ #ಹಂದಿಗೋಡು_ಕಾಯಿಲೆ_ಪೀಡಿತರಿಗೆ_ಪುನರ್ವಸತಿಗಾಗಿ   21 ಜನವರಿ 2004 ರಿಂದ 31 ಜನವರಿ 2004ರವರೆಗೆ ಹನ್ನೊಂದು ದಿನಗಳ ಕಾಲ ಸಾಗರ ತಾಲೂಕಿನಾದ್ಯಂತ ಮೇಲಿನ ಬೇಡಿಕೆಗಳ ಈಡೇರಿಕೆಗಾಗಿ ಪಾದಯಾತ್ರೆ ಮೂಲಕ ಜನ ಜಾಗೃತಿ ಮೂಡಿಸಿದ್ದು ಈವರೆಗೆ ಯಾರೂ ಮುರಿಯದ ದಾಖಲೆ ಆಗಿ ಉಳಿದಿದೆ.     ತಾಲ್ಲೂಕಿನ ಜನತೆ ರಾಜಕೀಯ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಒತ್ತಾಯಿಸ ಬೇಕು, ಮಗು ಅಳದಿದ್ದರೆ ತಾಯಿ ಹಾಲು ನೀಡುವುದಿಲ್ಲ ಅಂತ ಜನರಿಗೆ ತಿಳಿಸುತ್ತಿದ್ದೆ.     ಜನ ಸೇರಿದ ಜಾಗದಲ್ಲಿ ಸಭೆ ನಡೆಯುತ್ತಿತ್ತು ಮೊದಲಿಗೆ ಮೆಣಸಿನಸರದ ಕಲಾವಿದ ಚಂದ್ರಪ್ಪರಿOದ ಪ್ರಾಥ೯ನೆ ನಂತರ ಬಿ.ಡಿ.ರವಿಯಿ೦ದ ಸ್ವಾಗತ ಮತ್ತು ಪ್ರಸ್ತಾವನೆ ನಂತರ ನನ್ನ ಭಾಷಣ ಮೊದಲಿಗೆ ಸಭಿಕರಿಗೆ ಪ್ರಶ್ನೆ ಸಿಗಂದೂರು ಯಾರು ನೋಡಿಲ್ಲ? ಅಂದಾಗ ಸಭಿಕರೆಲ್ಲರೂ ಮೌನ, ಯಾರು ಯಾರು ನೋಡಿದ್ದೀರಿ? ಅಂದಾಗ ಎಲ್ಲರೂ ನಾವು ನೋಡಿದ್ದೇವೆ ಅನ್ನುತ್ತಿದ್ದರು ಸಿಗಂದೂರು ಹೇಗಿದೆ ಅಂದಾಗ? ಸುಂದರವಾಗಿದೆ, ಲಾಂಚ್ ಪ್ರಯಾಣ ಚೆನ್ನಾಗಿರುತ್ತೆ ಅಂತಿದ್ದರು ಆಗ ನನ್ನ ಜನಜಾಗೃತಿ ಮಾತು ಪ್ರಾ...

BN-3427. ಸಾಗರ ರೈಲು ನಿಲ್ದಾಣದ ಪುನರ್ ನಾಮಕರಣ

#ಅಂಬಾರಗೊಡ್ಲು_ಕಳಸವಳ್ಳಿ_ಸೇತುವೆಗೆ #ಸಿಗಂದೂರು_ಚೌಡೇಶ್ವರಿ_ಸೇತುವೆ_ಎಂದು_ಪುನರ್_ನಾಮಕರಣದ_ಸಂದರ್ಭದಲ್ಲಿ #ಸಾಗರ_ರೈಲು_ನಿಲ್ದಾಣದ_ನಾಮಕರಣ_25ವರ್ಷದಿಂದ_ವಿಳಂಬವಾದ_ಬಗ್ಗೆ_ಆಕ್ಷೇಪವಿದೆ #ಉದ್ದೇಶ_ಸದುದ್ದೇಶದ್ದು #ಅಂತಿಮ_ಅನುಮೋದನೆ_ನೀಡಿದವರು #ಉಪಪ್ರಧಾನಿ_ಲಾಲ್_ಕೃಷ್ಣ_ಅಡ್ವಾನಿ #ಕಳೆದ_25_ವರ್ಷದಿಂದ_ರೈಲ್ವೆ_ಸಚಿವಾಲಯದಲ್ಲಿ #ಕಡತ_ದೂಳಲ್ಲಿ_ಬಿದ್ದಿದೆ. #ಕಾರಣ_ಏನಿರ_ಬಹುದು? #naming #ambargodlu #tumar #siganduru #cablebridge #lohiya #railwaystation #memberofparliment      ಶಿವಮೊಗ್ಗ ಜಿಲ್ಲೆಯ ಸಂಸದರು ಅಂಬಾರ್ಗೊಡ್ಲು - ಕಳಸವಳ್ಳಿ ಸೇತುವೆಗೆ ನಾಮಕರಣವಾಗಿ  #ಸಿಗಂದೂರು_ಚೌಡೇಶ್ವರಿ ಸೇತುವೆ ಎಂದು ರಾಜ್ಯ ಸರ್ಕಾರ  ಒಪ್ಪಿಗೆ ನೀಡಿದರೆ ಕೇಂದ್ರ ಸರ್ಕಾರದಿಂದ ಈಗಿನ ಹೆಸರಾದ #ಅಂಬಾರಗೊಡ್ಲುಕಳಸವಳ್ಳಿ ಸೇತುವೆ ಎಂಬ ಹೆಸರು ತಕ್ಷಣ ಬದಲಿಸುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.    ಸಂಸದರು ಹೊಸನಗರ ತಾಲೂಕಿನ ಅರಸಾಳು ರೈಲು ನಿಲ್ದಾಣದ ಹೆಸರನ್ನ #ಮಾಲ್ಗುಡಿ_ಡೇಸ್ ರೈಲು ನಿಲ್ದಾಣ ಎಂದು ಬದಲಿಸಿ ಅಲ್ಲಿ ಶಂಕರ್ ನಾಗ್ ನಿರ್ದೇಶನದಲ್ಲಿ ಚಿತ್ರಿಕರಣ ಆಗಿದ್ದ RK ನಾರಾಯಣರ ಕೃತಿ ಆಧಾರದ ಟೀವಿ ಸೀರಿಯಲ್ ಸ್ಮರಣಾರ್ಥ ರೈಲ್ವೆ ಮ್ಯೂಸಿಯಂ ಕೂಡ ಮಾಡಿದ್ದಾರೆ.      ಆದರೆ ಇಡೀ ದೇಶದಲ್ಲೇ ಪ್ರಥಮ ಗೇಣಿ ಭೂಮಿ ಹೋರಾಟವಾದ #ಕಾಗೋಡು_ಸತ್ಯಾಗ್ರಹದಲ್...

BN 3426. ಮನಿ ಪ್ಲಾಂಟ್ ಗಿಡ ಅದೃಷ್ಟನಾ?

#ಮನಿಪ್ಲಾಂಟ್ #ಅದೃಷ್ಟ_ತರುತ್ತದಾ? #ಚೀನಾದ_ಪೆಂಗ್_ಶೂಯಿ_ಭಾರತದ_ವಾಸ್ತು_ಶಾಸ್ತ್ರದಲ್ಲಿ_ಹಾಗಿದೆ #moneyplant #vastu #pengshuyi #luckysign        ಮನಿ ಪ್ಲಾಂಟ್ ನ ಬೊಟಾನಿಕಲ್ ಹೆಸರು ಎಪಿಪ್ರೆಮ್ನಮ್ ಆರಿಯಮ್,ಫ್ರೆಂಚ್ ಪಾಲಿನೇಷ್ಯಾದ ಸೊಸೈಟಿ ದ್ವೀಪಗಳಲ್ಲಿರುವ ಮೂರಿಯಾ ಇದರ ಮೂಲ.    ಈ ಸಸ್ಯವು ಗೋಲ್ಡನ್ ಪೊಥೋಸ್ , ಸಿಲೋನ್ ಕ್ರೀಪರ್ , ಹಂಟರ್ಸ್ ರೋಬ್ , ಐವಿ ಅರಮ್ , ಸಿಲ್ವರ್ ವೈನ್ , ಸೊಲೊಮನ್ ಐಲ್ಯಾಂಡ್ಸ್ ಐವಿ ಮತ್ತು ಟ್ಯಾರೋ ವೈನ್ ಸೇರಿದಂತೆ ಹಲವಾರು ಸಾಮಾನ್ಯ ಹೆಸರುಗಳನ್ನು ಹೊಂದಿದೆ .    ಇದು ತುಂಬಾ ಗಟ್ಟಿಯಾಗಿರುತ್ತದೆ ಮತ್ತು ಕತ್ತಲೆಯಲ್ಲಿ ಇರಿಸಿದಾಗಲೂ ಹಸಿರಾಗಿರುತ್ತದೆ ಆದ್ದರಿಂದ ಇದನ್ನು ಡೆವಿಲ್ಸ್ ವೈನ್ ಅಥವಾ ಡೆವಿಲ್ಸ್ ಐವಿ ಎಂದೂ ಕರೆಯುತ್ತಾರೆ.     ಇದನ್ನು ಸಾಮಾನ್ಯವಾಗಿ ಭಾರತೀಯ ಉಪಖಂಡದ ಅನೇಕ ಭಾಗಗಳಲ್ಲಿ ಮನಿ ಪ್ಲಾಂಟ್ ಎಂದು ಕರೆಯಲಾಗುತ್ತದೆ.   ಮನಿಪ್ಲಾಂಟ್ ಗಿಡಗಳು ಮನೆಗಳಿಗೆ ಅದೃಷ್ಟ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯನ್ನು ತರುತ್ತವೆ ಎಂದು ವ್ಯಾಪಕವಾಗಿ ನಂಬಲಾಗಿದೆ.    ಈ ನಂಬಿಕೆಯು ವಾಸ್ತು ಶಾಸ್ತ್ರ (ಭಾರತೀಯ ಸಾಂಪ್ರದಾಯಿಕ ವಾಸ್ತುಶಿಲ್ಪ ವ್ಯವಸ್ಥೆ) ಮತ್ತು ಫೆಂಗ್ ಶೂಯಿ (ಚೀನೀ ತಾತ್ವಿಕ ವ್ಯವಸ್ಥೆ) ಎರಡರಲ್ಲೂ ಬೇರೂರಿದೆ.    ಇದನ್ನು ಸಾಬೀತುಪಡಿಸಲು ಯಾವುದೇ ...

BN 3425.NEET 2025.

#ಕನ್ನಡ_ಮಾಧ್ಯಮದಲ್ಲಿ_ವಿದ್ಯಾಬ್ಯಾಸ_ಮಾಡಿದವರಿಗೆ... #NEET_ಪರೀಕ್ಷೆ_ಪಾಸು_ಮಾಡಲು_ಸಾಧ್ಯವಿಲ್ಲ #ಡಾಕ್ಟರ್_ಆಗಲು_ಸಾಧ್ಯವಿಲ್ಲ #ಎಂಬುದು_ತಪ್ಪು_ಗ್ರಹಿಕೆ #NEET #medical #enginearing #kannadamediam      ಕನ್ನಡ ಮೀಡಿಯಂ ಮಕ್ಕಳು NEET ಪರೀಕ್ಷೆ ಉತ್ತೀರ್ಣರಾಗುತ್ತಿಲ್ಲ ಅವರಿಗೆ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಗುವುದಿಲ್ಲ ಅವರ ವೈದ್ಯರಾಗುವ ಕನಸು ನನಸಾಗುತ್ತಿಲ್ಲ ಎಂಬ ಲೇಖನ ಓದಿದವರಿಗೆ ತಕ್ಷಣ ಹೌದು ಅನ್ನಿಸಿ ಬಿಡುತ್ತದೆ ತಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಂನಲ್ಲೇ ಓದಿಸಬೇಕು ಅನ್ನಿಸುತ್ತದೆ.     ಆದರೆ ಇದು ತಪ್ಪು ಗ್ರಹಿಕೆ ಎನ್ನುವುದನ್ನು ಈ ಕೆಳಗಿನ ಲೇಖನ ಓದಿ... ಕರ್ನಾಟಕ ರಾಜ್ಯದಲ್ಲಿ 2025 ರಲ್ಲಿ ಸುಮಾರು 12,395 ಎಂಬಿಬಿಎಸ್ ಸೀಟುಗಳು ಲಭ್ಯವಿವೆ ಇವುಗಳಲ್ಲಿ, 3,800 ಸೀಟುಗಳು ಸರ್ಕಾರಿ ಕಾಲೇಜುಗಳಲ್ಲಿ ಮತ್ತು 6,000 ಕ್ಕಿಂತ ಹೆಚ್ಚು ಸೀಟುಗಳು ಖಾಸಗಿ ಕಾಲೇಜುಗಳಲ್ಲಿ ಲಭ್ಯವಿವೆ.   ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಎಂಬಿಬಿಎಸ್/ಬಿಡಿಎಸ್ ಸೀಟುಗಳ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತದೆ.  ಕರ್ನಾಟಕದ ಒಟ್ಟು 1,47,782 ಅಭ್ಯರ್ಥಿಗಳು ರೆ ಈ ವರ್ಷ (2025)  NEET ಪರೀಕ್ಷೆಗೆ ನೊಂದಾಯಿಸಿದ್ದರು ಆದರೆ 1,42,369 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 83,582 ಅರ್ಹತೆ ಪಡೆದುಕೊಂಡರು.    ಅಂದರೆ 8...

BN 3424.Lilliput story

#ಲಿಲ್ಲಿಪುಟ್_ಪಠ್ಯ_ಪುಸ್ತಕದಲ್ಲಿ_ಓದಿದ_ನೆನಪಿರಬಹುದು #ಗಲಿವರ್ಸ್_ಟ್ರಾವೆಲ್ಸನಲ್ಲಿ_ಬರುವ_ದ್ವೀಪ #ಅಲ್ಲಿನ_ನಿವಾಸಿಗಳು_ಕೇವಲ_ಆರು_ಇಂಚು_ಎತ್ತರ. #LILLIPUT #jonathanswift #gulliverstravels  #kannadatext #irish    70ರ ದಶಕದಲ್ಲಿ ಪ್ರೌಡಶಾಲೆಗಳ ಕನ್ನಡ ಭಾಷೆಯ ಪಠ್ಯ ಪುಸ್ತಕದಲ್ಲಿ ಇದು ಪಠ್ಯವಾಗಿತ್ತು ಇದನ್ನು ಕೇಳಿದವರಿಗೆ ಓದಿದವರಿಗೆ ಅಷ್ಟೇ ಅಲ್ಲ ಪಾಠ ಮಾಡುವ ಶಿಕ್ಷಕರಿಗೂ ಇದು ಕಾಲ್ಪನಿಕ ಅಂತ ಅನ್ನಿಸುತ್ತಿರಲಿಲ್ಲ.   ನನ್ನ ಅಣ್ಣ ಅಕ್ಕಂದಿರ ಪಠ್ಯಪುಸ್ತಕದ ಈ ಪಾಠ ಅವರು ಓದುವಾಗ ನನಗೆ ಪದೇ ಪದೇ ಕೇಳುವ ಮನಸ್ಸಾಗುತ್ತಿತ್ತು ಕೇಳಿದ ನಂತರ ಅದು ಪದೇ ಪದೇ ನೆನಪಾಗಿ ಕನಸಿನಲ್ಲೂ ಬರುತ್ತಿತ್ತು.    ಈ ಕಾಲ್ಪನಿಕ ಕಥೆಯ ಲೇಖಕ ಜೊನಾಥನ್ ಸ್ವಿಫ್ಟ್ (ಜನನ 30 ನವೆಂಬರ್ 1667 - ಮರಣ19 ಅಕ್ಟೋಬರ್ 1745) ಒಬ್ಬ ಆಂಗ್ಲೋ-ಐರಿಶ್ ಬರಹಗಾರ, ಪ್ರಬಂಧಕಾರ, ವಿಡಂಬನಕಾರ ಮತ್ತು ಆಂಗ್ಲಿಕನ್ ಪಾದ್ರಿಯಾಗಿದ್ದರು. ಗಲಿವರ್ಸ್ ಟ್ರಾವೆಲ್ಸ್‌ನಲ್ಲಿ  ಲಿಲ್ಲಿಪುಟ್ ಒಂದು ಭೂಮಿಯಾಗಿದ್ದು ಅಲ್ಲಿ ನಿವಾಸಿಗಳು ಕೇವಲ ಆರು ಇಂಚು ಎತ್ತರವಿರುತ್ತಾರೆ.  ಅವರು ಗಲಿವರ್ಸ್ ಟ್ರಾವೆಲ್ಸ್ (1726) ಎಂಬ ವಿಡಂಬನಾತ್ಮಕ ಪುಸ್ತಕವನ್ನು ಬರೆದರು , ಅದು ಅವರ ಅತ್ಯಂತ ಪ್ರಸಿದ್ಧ ಪ್ರಕಟಣೆಯಾಯಿತು ಮತ್ತು ಕಾಲ್ಪನಿಕ ದ್ವೀಪವಾದ ಲಿಲ್ಲಿಪುಟ್ ಅನ್ನು ಜನಪ್ರಿಯಗೊಳಿಸಿತು.  ಲಿಲಿಪಟ್"ಜೊನಾಥ...

BN 3423 Part 1. Holebagilu story

#ಭಾಗ_ಒಂದು. #ಅಂಬಾರಗೋಡ್ಲು_ಕಳಸವಳ್ಳಿ_ಸೇತುವೆ_ಉದ್ಘಾಟನೆಯ_ಕ್ಷಣಗಣನೆಯಲ್ಲಿ #ನಾನು_ಮೊದಲ_ಬಾರಿಗೆ_ಹೊಳೆಬಾಗಿಲು_ಲಾಂಚ್_ನೋಡಿದ್ದು_ದಾಟಿದ್ದು. #sharavathiriver #linganamakkidam #ambargodlu #kalasavalli #cablebridge #prasannakereki #byraghavendra #kagoduthimmappa   1989 ಅಥವ 1990 ರಲ್ಲಿ ನಾನು ಕಾಗೋಡು ತಿಮ್ಮಪ್ಪನವರ ಕಪ್ಪುಅಂಬಾಸಡರ್ ಕಾರಿನಲ್ಲಿ ಮೊದಲ ಬಾರಿಗೆ ಹೊಳೆಬಾಗಿಲು ನೋಡಿದ್ದು ಮತ್ತು ಮೊದಲ ಬಾರಿಗೆ ಲಾಂಚಿನಲ್ಲಿ ದಾಟಿದ್ದು ನೆನಪುಗಳು.     ಗುಂಡೂರಾವ್ ಮತ್ತು ಬಂಗಾರಪ್ಪನವರ ರಾಜಕೀಯ ಸಂಘರ್ಷದಲ್ಲಿ ಜನತಾ ಪಕ್ಷದ ಕಾಗೋಡು ತಿಮ್ಮಪ್ಪನವರನ್ನು ಕಾಂಗ್ರೆಸ್ಸಿಗೆ ಸೇರಿಸಿ ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಮಂತ್ರಿನ್ನಾಗಿಸಿದ್ದು ಇತಿಹಾಸ.     ನಂತರ ಸುಮಾರು  ವರ್ಷಗಳ ಕಾಲ ಸಾಗರದ ರಾಜಕೀಯ ರಂಗದಲ್ಲಿ ಕಾಗೋಡು ತಿಮ್ಮಪ್ಪನವರು ಇಲ್ಲದ್ದರಿಂದ ಆಗಿನ ಕಾಂಗ್ರೆಸ್ ಪಕ್ಷದ ಕಟ್ಟಾ ಮುಖಂಡರಾದ ಅಹ್ಮದ್ ಅಲಿಖಾನ್ ಸಾಬ್ ಹೇಗಾದರೂ ಮಾಡಿ ಕಾಗೋಡು ತಿಮ್ಮಪ್ಪನವರನ್ನು ಸಾಗರ ತಾಲ್ಲೂಕಿನ ರಾಜಕಾರಣಕ್ಕೆ ಕರೆತರಬೇಕು ಎಂಬ ಪ್ರಯತ್ನ ಪ್ರಾರಂಬಿಸಿದ್ದರು.    1989 ರ ವಿಧಾನಸಭಾ ಚುನಾವಣೆಗೆ ಕಾಗೋಡು ತಿಮ್ಮಪ್ಪನವರನ್ನು ಕರೆ ತರುವ ಪ್ರಸ್ತಾವನೆಯನ್ನು ಮಾಡಿದರು ಇದಕ್ಕೆ ಅವರಿಗೆ ಸಾತ್ ಕೊಟ್ಟವರು ಪುತ್ತೂರಾಯರು ಮತ್ತು ಕುರುಬರ ಲಿಂಗಪ್ಪನವರು.   ಆಗ...

Blog number 3422. ಖ್ಯಾತ ಪತ್ರಕರ್ತರುದ್ರಪ್ಪ ಚನ್ನಬಸಪ್ಪ

#ರುದ್ರಪ್ಪಚನ್ನಬಸಪ್ಪ #ಉದಯ_TVಯ_ಮೊದಲ_ಬ್ಯೂರೋ_ಚೀಪ್ #ಸಾಗರ_ತಾಲೂಕಿನ_ವಿಚಾರ_ಕ್ರಾಂತಿಯ_ಪಿತಾಮಹಾ #ಶರಾವತಿ_ನದಿ_ಮುಳುಗಡೆ_ಸಂತ್ರಸ್ಥರು  #ಸೊನ್ನೆಯಿಂದ_ದೊಡ್ಡ_ಸಾದನೆಗೈದ_ಸಾದಕರು. #UdayaTV #karnataka #journalism #DSS #socialist #press #sagar #shivamogga    70 ರ ದಶಕದಲ್ಲಿ ಸಮಾಜವಾದಿ ಯುವಜನ ಸಭಾದ ಸಕ್ರಿಯ ಕಾರ್ಯಕರ್ತರು ರುದ್ರಪ್ಪನವರು.    80ರ ದಶಕದಲ್ಲಿ ಸಾಗರ ತಾಲ್ಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ದಲಿತ ಸಂಘರ್ಷ ಸಮಿತಿ ಸಂಘಟಿಸಿದವರು.    ತೀ.ನಾ.ಶ್ರೀನಿವಾಸ್, ಶಿವಾನಂದ ಕುಗ್ವೆ, ಅದರಂತೆ ವಿಶ್ವನಾಥ್, ರಿಕ್ಷಾ ಮೋಹನ್, ಪೆಡರಿಕ್ , ಮಂಡಗಳಲೆ ನಾರಾಯಣಪ್ಪ, ಎಸ್.ಎಸ್.ನಾಗರಾಜ್,ವಸಂತಕುಗ್ವೆ  ಇವರನ್ನೆಲ್ಲ ಹೋರಾಟದ ಸಾಗರಕ್ಕೆ ದುಮುಕಲು ಈ ರುದ್ರಪ್ಪರ ಪ್ರೇರಣೆ ಕೂಡ ಆಗಿತ್ತೆಂಬುದು ಮರೆಯುವಂತಿಲ್ಲ.    ದಲಿತ ಸಂಘರ್ಷ ಸಮಿತಿಯ ಬಿ .ಕೃಷ್ಣಪ್ಪರಿಂದ ಶಿವಮೊಗ್ಗದ ಪ್ರೋ. ರಾಚಪ್ಪನವರು ಸಾಗರದ ಸಾಗರ್ ಹೋಟೆಲ್ ವೃತ್ತದ GGMS ಶಾಲೆಯಲ್ಲಿ ಸಂಜೆ ಹೊತ್ತಿಗೆ ಏರ್ಪಡಿಸುತ್ತಿದ್ದ ತರಬೇತಿ ಶಿಬಿರ ನನ್ನನ್ನೂ ಹೋರಾಟದ ಹಾದಿಗೆ ಹೊರಳಲು ಕಾರಣವಾಗಿತ್ತು.    ನಂತರ ದಿಡೀರನೆ 1984 ರ ನಂತರ ರುದ್ರಪ್ಪ ಸಾಗರದಿಂದ ನಾಪತ್ತೆ ನಂತರ 90 ರ ದಶಕದಲ್ಲಿ ಕನ್ನಡದ ಏಕೈಕ TV ಸಂಸ್ಥೆ ಬ್ಯೂರೋ ಚೀಪ್ ಆಗಿ ರುದ್ರಪ್ಪನವರು ಉದಯ TV ಪರದೆ ಮೇಲೆ ನೋಡಿದ...

Blog number 3421. ಮರಕಿಣಿ ನಾರಾಯಣ ಮೂರ್ತಿ

#ಮರಕಿಣಿ_ನಾರಾಯಣಮೂರ್ತಿಗಳು #ನಮ್ಮಿಬ್ಬರ_ಮುಖತಃ_ಬೇಟಿಗೆ_ಮಹೂರ್ತ_ಯಾವಾಗ ? #marakininarayanamurthy #facebookpost #tkrameshshetty #ninasam #kannada #drama #yakshgana #tvserial    ಸದಾ ನಗುಮೊಗದ ಕನ್ನಡದ ಸಾಹಿತಿಗಳಿಗೆ, ಯಕ್ಷಗಾನ - ನಾಟಕ - ದಾರಾವಾಹಿಗಳ ಲೋಕದವರಿಗೆ ಚಿರಪರಿಚಿತರು ಮರಕಿಣಿ ನಾರಾಯಣ ಮೂರ್ತಿಯವರು.  ಪ್ರತಿ ವರ್ಷ ನಮ್ಮ ಸಾಗರ ತಾಲ್ಲೂಕಿನ ಹೆಗ್ಗೋಡಿನ ನಿನಾಸಂ - ತುಮರಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದ ಕಾರ್ಯಕ್ರಮಕ್ಕೆ ತಪ್ಪದೆ ಬಂದು ಹೋಗುತ್ತಾರೆ.     ಆದರೂ ನಮ್ಮಿಬ್ಬರ ಬೇಟಿಗೆ ಮಹೂರ್ತ ಮೂಡಿಬಂದಿಲ್ಲ ಆದ್ದರಿಂದ ನಾನು ಅವರಿಗೆ ನನ್ನ ಸಂದೇಶ ಕಳಿಸಿದ್ದೇನೆ ... "ಸರ್ ನಾನು ನಿಮ್ಮ ಅಭಿಮಾನಿ ನನಗೂ ನಿಮ್ಮ ಅನಿರೀಕ್ಷಿತ ಬೇಟಿಯಲ್ಲಿ ಮುಖಾಮುಖಿ ಆಗಲಾಗದ್ದು ಬೇಸರ ಅನ್ನಿಸಿತು, ಅನೇಕ ವರ್ಷದಿಂದ ಬೇಟಿಯ ನಿರೀಕ್ಷೆ ಮುಂದು ಮುಂದು ಹೋಗುತ್ತಿದೆ ಆದ್ದರಿಂದ ಮುಂದಿನ ಬಾರಿ ಹೀಗೆ ದಿಡೀರ್ ಬರಬೇಡಿ,ಒಂದು ದಿನ ನನ್ನ ಅತಿಥಿ ಆಗಿ ಉಳಿದು ಹೋಗುವಂತೆ ಬಿಡುವು ಮಾಡಿಕೊಂಡು ಬನ್ನಿ ಮತ್ತುಬರಲೇ ಬೇಕು" ಅಂತ.     ನನ್ನ ಅಣ್ಣನಂತೆ ಇರುವ ಇವರು ನನ್ನಂತೆ ಪಂಚೆದಾರಿಗಳು ಆದರೆ ಬಾಯಿ ತುಂಬಾ ನನಗೆ "ಅರುಣಣ್ಣ" ಅನ್ನುತ್ತಾರೆ ಅದೊಂದು ತರ ಅಪ್ಯಾಯವಾಗಿ ನನಗೆ ಕೇಳುತ್ತದೆ ಮತ್ತು ಇಷ್ಟ ಆಗಿದೆ, ನಮ್ಮಿಬ್ಬರನ್ನ ಗೆಳೆಯರನ್ನಾಗಿ ಮಾಡಿದ ಪೇಸ್ ಬುಕ್ ಗೆ ಎಷ್ಟು ಧ...

Blog number 3420. ಅಡಿಕೆ ಇತಿಹಾಸದ ಶಾಸನಗಳಲ್ಲಿ

#ಅಡಿಕೆ #ಹತ್ತನೆ_ಶತಮಾನದಲ್ಲಿನ_ಶಾಸನಗಳಲ್ಲಿ_ಅಡಿಕೆ_ಉಲ್ಲೇಖ #ಈಗಿನ_ಶಿಕಾರಿಪುರ_ತಾಲ್ಲೂಕಿನ_ಕಪ್ಪನಹಳ್ಳಿ #ಹೊನ್ನಾಳಿ_ತಾಲ್ಲೂಕಿನ_ನ್ಯಾಮತಿಯ_ಅಡಿಕೆಗೆ_ಹೆಚ್ಚು_ಬೇಡಿಕೆ_ಇತ್ತು. #ಸಂಶೋದಕರಾದ_ರಮೇಶ್_ಹಿರೇಜಂಬೂರ್_ಶಾಸನಗಳಲ್ಲಿ_ಅಡಿಕೆ_ಉಲ್ಲೇಖದ_ಬಗ್ಗೆ_ಬರೆದಿದ್ದಾರೆ. #areca #rameshhirejamburu #centuries #history #kappanalli #nyamathi      ಶಿರಾಳಕೊಪ್ಪದ ರಮೇಶ್ ಹಿರೇಜಂಬೂರ್ ನಮ್ಮ ಜಿಲ್ಲೆಯ ಖ್ಯಾತ ಇತಿಹಾಸ ಸಂಶೋದಕರು ಅವರು ಕದಂಬರ ತಾಳಗುಂದದ ಶಾಸನಗಳ ಸಂಶೋದನೆಗಾಗಿ ಹೆಚ್ಚು ಶ್ರಮಪಟ್ಟಿದ್ದಾರೆ.   ಅವರು ಅಡಿಕೆಗಳ ಉಲ್ಲೇಖ 10 ನೇ ಶತಮಾನ ಮತ್ತು 12 ನೇ ಶತಮಾನದ ಶಾಸನಗಳಲ್ಲಿ ಇರುವುದು ಸಂಗ್ರಹಿಸಿ ಸಂಶೋದನೆ ಮಾಡಿ ಪ್ರಕಟಿಸಿದ್ದಾರೆ ಅವರನ್ನ ಅಡಿಕೆ ಬೆಳೆಗಾರರು ಮತ್ತು  ಅಡಿಕೆ ಸಂಸ್ಕರಣ -ಮಾರಾಟ ಸಂಸ್ಥೆಗಳು ಅಭಿನಂದಿಸಬೇಕು.   #10ನೇ_ಶತಮಾನದಲ್ಲಿ_ನಮ್ಮ_ಜಿಲ್ಲೆಯ_ಶಿಕಾರಿಪುರ_ತಾಲ್ಲೂಕಿನ_ಕಪ್ಪನಳ್ಳಿ ಊರಿನ ಅಡಿಕೆ ಮತ್ತು ಹೊನ್ನಾಳಿ ತಾಲ್ಲೂಕಿನ ನ್ಯಾಮತಿ ಅಡಿಕೆಗೆ ಹೆಚ್ಚು ಬೇಡಿಕೆ ಇತ್ತೆಂಬ ಐತಿಹಾಸಿಕ ದಾಖಲೆ.   #12ನೇ_ಶತಮಾನದ_ಶಾಸನದಲ್ಲಿ_ಗೋಟು_ಅಡಿಕೆಯ_ಉಲ್ಲೇಖ   ಅಡಿಕೆ ಕೃಷಿ ಈಗ ವಾಣಿಜ್ಯ ಬೆಳೆಯಾಗಿ ರೈತರ ವರವಾಗಿ ಪರಿಣಮಿಸಿದೆ. ಇತಿಹಾಸ ಪುಟಗಳಲ್ಲಿ ಸಾವಿರಾರು ವರುಷಗಳಿಂದ ಈ ಭಾಗದಲ್ಲಿ ಅಡಿಕೆ ಮರಗಳ ಉಲ್ಲೇಖವಿದೆ.     #ಪೊನ್ನನ_ಶ...

Blog number 3419. ಕೆಂಪಿ ಶಾಪ

#ಕೆಳದಿ_ಅರಸರಿಗೆ_ಶಾಪ!? #ಕಾಳುಮೆಣಸಿನ_ರಾಣಿ_ಬಂದನ_ವಿರೋಧಿಸಿ #ಅಂತಿಮ_ಕ್ಷಣದವರೆಗೆ_ಕವಣೆ_ಕಲ್ಲಿಂದ_ದಾಳಿ_ಮಾಡಿದ_ಕುಣುಬಿ_ಜನಾಂಗದ_ಸೈನಿಕರು #ಕುಣುಬಿ_ಜನಾಂಗದ_ಕೆಂಪಿ_ಕೆಳದಿ_ಅರಸರಿಗೆ_ಹಾಕಿದ_ಶಾಪ #ಕುಣುಬಿ_ಜನಾಂಗದ_ಸ್ವಾಮಿ_ನಿಷ್ಟೆಗೆ_ಪ್ರತೀಕವಾದ_ಇತಿಹಾಸದ_ದಾಖಲೆ #ಯಮ_ಸಲ್ಲೇಖನ_ವೃತ_ಪಾಲಿಸಿ_ಇಕ್ಕೇರಿ_ಕೋಟೆಯಲ್ಲಿ_ಜಿನೈಕ್ಯಳಾಗುವ_ರಾಣಿಚೆನ್ನಬೈರಾದೇವಿ. #gerusoppe #keladi #kunubi #tribals #ikkerifort #avinahalli #chennabyaradevi       ಶರಾವತಿ ನದಿ ದಂಡೆಯ ಏಕೈಕ ಸಾಮ್ರಾಜ್ಯವಾದ ಗೇರುಸೊಪ್ಪೆ ಸಾಮ್ರಾಜ್ಯವನ್ನು 54 ವರ್ಷವಾಳಿದ ಜೈನ ರಾಣಿ ಚೆನ್ನಬೈರಾದೇವಿಯನ್ನು ಯುರೋಪಿನವರು ಕಾಳುಮೆಣಸಿನ ರಾಣಿ ಎಂದೇ ಕರೆದರು.    ವರದಾನದಿ ದಂಡೆಯ ಕೆಳದಿ ರಾಜವಂಶದ 43 ವರ್ಷ ಆಳ್ವಿಕೆ ಮಾಡುವ, ಸಾಗರ ಪಟ್ಟಣ ಸದಾಶಿವ ಸಾಗರ  ನಿರ್ಮಿಸಿದ ರಾಜ ಹಿರಿಯ ವೆಂಕಟಪ್ಪ ನಾಯಕ ರಾಣಿ ಚೆನ್ನಾಬೈರಾದೇವಿಯನ್ನು ಗೇರುಸೊಪ್ಪೆಯಲ್ಲಿ ಬಂದಿಸಿ ಇಕ್ಕೇರಿ ಕೋಟೆಯ ಜೈಲಿಗೆ ಕರೆತರುತ್ತಾರೆ.    ಇದನ್ನು ವಿರೋಧಿಸಿ ಕೊನೆ ತನಕ ಹೋರಾಟ ಮಾಡಿದವರು ಗುಡ್ಡಗಾಡು ಜನಾಂಗದ ಸ್ವಾಮಿ ನಿಷ್ಟೆಗೆ ಹೆಸರಾದ ಕುಣುಬಿ ಜನಾಂಗದವರು.    ಕಣಿವೆಯ ಮೇಲಿಂದ ಕವಣೆ ಕಲ್ಲಿನಿಂದ ದಾಳಿ ಮಾಡುವ ಕುಣುಬಿ ಜನಾಂಗದ ಪ್ರಜೆಗಳ ಹೋರಾಟದ ವಿವರಗಳು ಈ ಘಟನೆ ನಡೆದ ಸಾಗರ ತಾಲ್ಲೂಕಿನವರೇ ಆದ ನಮಗೆ ಗೊತ್ತೇ...

Blog number 3418. ಇತಿಹಾಸ ಸಂಶೋದಕ ರಮೇಶ್ ಹಿರೇಜಂಬೂರು

#ನಿನ್ನೆಯ_ಸಂಜೆ_ಅವಿಸ್ಮರಣೀಯಗೊಳಿಸಿದ #ಇತಿಹಾಸ_ಸಂಶೋಧಕ_ರಮೇಶ್_ಹಿರೇಜಂಬೂರ್ #ನಾನು_ಇವರ_ಅಭಿಮಾನಿ. #historian #rameshhirejamburu #kadamba #talagunda #kannada #shilashasana   ನಿನ್ನೆ ಸಂಜೆ ರಮೇಶ್ ಹಿರೇಜಂಬೂರ್ ನನ್ನ ಕಛೇರಿಗೆ ಬಂದಿದ್ದರು ಇದು ನನ್ನ ಅವರ ಮೊದಲ ಮುಖತಃ ಬೇಟಿ.    ಶಿವಮೊಗ್ಗ ಜಿಲ್ಲೆಯ ಖ್ಯಾತ ಇತಿಹಾಸ ಸಂಶೋದಕರಾದ  ಇವರ ಪೇಸ್ ಬುಕ್ ನ ಎಲ್ಲಾ ಲೇಖನ ತಪ್ಪದೆ ಓದುತ್ತೇನೆ ನಾನು ಇವರ ಸಂಶೋದನಾ ಲೇಖನಗಳ ಅಭಿಮಾನಿ.    ರಮೇಶ್ ಹಿರೇಜಂಬೂರ್ ಮತ್ತು ನವೀನ್ ಶಿರಾಳಕೊಪ್ಪ ಇವರಿಬ್ಬರು ತಾಳಗುಂದದ ಮೊದಲ ಕನ್ನಡ ಶಾಸನದ ಸಂಶೋಧನೆಯಲ್ಲಿ ಹೆಚ್ಚು ಶ್ರಮವಹಿಸಿದವರು ಇದಕ್ಕಾಗಿ ರಾಜ್ಯದ ಕನ್ನಡಿಗರು ಇವರನ್ನು ಅಭಿನಂದಿಸಬೇಕು.    ನಿನ್ನೆಯ ಸಂಜೆ ನನ್ನ ಕಛೇರಿಯಲ್ಲಿ ಜಿಲ್ಲೆಯ ಇತಿಹಾಸದ ವಿಚಾರವಾಗಿ ತುಂಬಾ ಹೊತ್ತು ಮಾತಾಡಿದೆವು ಇವರ ಪತ್ನಿ ತವರೂರು ಹೊಸನಗರದ ಸೋನಲೆಗೆ ಹೊರಡುವ ತನಕ.      ನನ್ನ ಕಾದಂಬರಿ #ಬೆಸ್ತರ_ರಾಣಿ_ಚಂಪಕಾ ಹಿಂದೆಯೇ  ಓದಿದ್ದಾರೆ, ಆ ಪುಸ್ತಕದ ವಿಚಾರವಾಗಿ ಕೆಲವು ಕಂತುಗಳ ನನ್ನ ಸಂದರ್ಶನ ಪೇಸ್ ಬುಕ್ ನಲ್ಲಿ ಪ್ರಕಟಿಸಲಿದ್ದಾರೆ.    ಚಹಾ ಮತ್ತು ಮಿರ್ಚಿ ಬೊಂಡದ ಆತಿಥ್ಯ ನೀಡಿದೆ ಹೊರಡುವಾಗ ನನ್ನ ಸಣ್ಣ ಕಥೆಗಳ #ಬಿಲಾಲಿ_ಬಿಲ್ಲಿ_ಅಭ್ಯಂಜನ ಕಥಾ ಸಂಕಲನ ನೀಡಿ ಸೆಲ್ಪಿ ತೆಗೆದುಕೊಂಡು ಬಿಳ್ಕೊಟ್ಟೆ. ...

Blog number 3417. ಚಿತಾಗಾರದ ಮುಂದೆ ಕೊರಾನಾ ಕಾಲದಲ್ಲಿ ಹೌಸ್ ಫುಲ್ ಬೋರ್ಡ್

#ಚಿತಾಗಾರಗಳು_ಹೌಸ್_ಪುಲ್_ಬೋರ್ಡ್_ಹಾಕಿದ್ದವು #ಇಂತಹ_ಘಟನೆ_ನಾಲ್ಕು_ವರ್ಷದ_ಹಿಂದೆ_ನಮ್ಮ_ದೇಶದಲ್ಲಿ_ನಡೆದಿತ್ತು #ಈಗ_ನಮಗೇ_ನಂಬಲು_ಆಗುತ್ತಿಲ್ಲ #ಕೊರಾನಾದಿಂದ_ಸತ್ತವರ_ಸಂಖ್ಯೆ_ಎಷ್ಟು? #housefullboard #cremetory   #covid19 #corana    ಹಾಗಾದರೆ ಕೋರಾನಾ ಕಾಲದಲ್ಲಿ ಸತ್ತವರ ಸಂಖ್ಯೆ ಎಷ್ಟು?...      ಅಕ್ಟೋಬರ್ 2021 ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು COVID-19 ಗೆ ನೇರವಾಗಿ ಮತ್ತು ಪರೋಕ್ಷವಾಗಿ ಸಂಬಂಧಿಸಿರುವ 4.7 ಮಿಲಿಯನ್(47 ಲಕ್ಷ ಸಾವು ) ಹೆಚ್ಚುವರಿ ಸಾವುಗಳು ಭಾರತದಲ್ಲಿ ಸಂಭವಿಸಿವೆ ಎಂದು ಅಂದಾಜಿಸಿದೆ.  ಭಾರತದಲ್ಲಿ ಕೋವಿಡ್-19 ನಿಂದ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ? ಇದು ಉತ್ತರಿಸಲು ತುಂಬಾ ಕಷ್ಟಕರವಾದ ಪ್ರಶ್ನೆ.    ದಾಖಲಾದ 220,000 ಸಾವುಗಳು (ಮೇ 3 ರ ಹೊತ್ತಿಗೆ) ಸ್ವತಃ ಒಂದು ಭಯಾನಕ ದುರಂತವಾಗಿದೆ. ಆದರೆ ದೇಶಾದ್ಯಂತದ ಹಲವಾರು ವರದಿಗಳು ದಾಖಲಾದ ಸಾವುಗಳು ಸಂಪೂರ್ಣ ಕಥೆಯಲ್ಲ ಎಂದು ದೃಢಪಡಿಸುತ್ತವೆ.   ಸ್ಮಶಾನವೊಂದರಲ್ಲಿ ಕೆಲಸ ಮಾಡುವ ಒಬ್ಬ ಸಿಬ್ಬಂದಿ ತಮ್ಮ ಜೀವನದಲ್ಲಿ ಇದೇ ಮೊದಲ ಬಾರಿಗೆ ಅಂತ್ಯಕ್ರಿಯೆ ಕೇಂದ್ರಗಳಲ್ಲಿ ಇಷ್ಟೊಂದು ಜನದಟ್ಟಣೆಯನ್ನು ನೋಡಿದ್ದಾರೆ . "ನಾನು ಸುಮಾರು 40 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಇಷ್ಟೊಂದು ದೊಡ್ಡ ಸಂಖ್ಯೆಯ ಶವಗಳನ್ನು ಅಂತ್ಯಕ್ರಿಯೆ ಕೇಂದ್ರಗಳಿಗೆ ತರುವುದನ್ನು ನ...

Blog number 3416. 2025 ಮೇ ತಿಂಗಳ ಭಾರತ ಪಾಕಿಸ್ಥಾನ ಯುದ್ಧ ಅಮೇರಿಕಾ ಅಧ್ಯಕ್ಷ ಟ್ರಂಪ್ ನಿಲ್ಲಿಸಿದರು

#ಖ್ಯಾತ_ಲೇಖಕ_ಅಂಕಣಕಾರರಾದ_ಅರವಿಂದಚೊಕ್ಕಾಡಿ #ಅವರ_ಫೇಸ್_ಬುಕ್_ಪೇಜಿನಲ್ಲಿ_ಕೇಳಿದ_ನನ್ನ_ಪ್ರತಿಕ್ರಿಯೆ #ಇಲ್ಲಿ_ಇನ್ನೊಮ್ಮೆ https://www.facebook.com/share/p/1QFSmbYTvN/ #indiavspakistan #warzone #america #PresidentTrump #narendramodi_primeminister #AravindChokkadi #facebookpost    ಅರವಿಂದ ಚೊಕ್ಕಾಡಿ ಅವರೆ ನೀವು  ನನ್ನ ಪ್ರತಿಕ್ರಿಯೆ ಕೇಳಿದ್ದೀರಿ...    ದೇಶದ ಹಿಂದಿನ ಸರ್ಕಾರಗಳು ಮತ್ತು ಅದರ ಚುಕ್ಕಾಣಿ ಹಿಡಿದಿದ್ದ ಎಲ್ಲಾ ಪ್ರದಾನ ಮಂತ್ರಿಗಳೂ ಭಾರತ ದೇಶದ ರಕ್ಷಣೆಗೆ ಮತ್ತು  ಸಾರ್ವಬೌಮತೆಗೆ ಅವರವರ ಅಂದಿನ ಪರಿಸ್ಥಿತಿ ಮತ್ತು ದೇಶದ ಆದಾಯ ಬಳಸಿ ಪ್ರಾಮಾಣಿಕ ಕೆಲಸ ಮಾಡಿದ್ದಾರೆ.     ಹಿಂದಿನ ಅವಧಿಯಲ್ಲಿ ನಾವು ಸಂಗ್ರಹಿಸುವ ಗುಪ್ತಚಾರ ಮಾಹಿತಿ ಮತ್ತು ಶಸ್ತ್ರಾಸ್ತ್ರಗಳು ಮುಂದಿನ ಅವದಿಯಲ್ಲಿ ಬಳಕೆ ಆಗಲೇ ಬೇಕು ಆದ್ದರಿಂದ ದೇಶದ ಎಲ್ಲಾ ಚುನಾಯಿತ ಸರ್ಕಾರಗಳೂ ದೇಶದ ಜನರ ಹಿತ ಚಿಂತಕರೆ ಅನ್ನಬೇಕಲ್ಲವೇ...   ಈಗಿನ ಯುದ್ಧದಲ್ಲಿ ಅಂತಹ ಕೊರತೆ ಆಗುವುದಿಲ್ಲ ಕಾರಣ ಆಹಾರ ದಾಸ್ತಾನು - ಇಂಧನ ದಾಸ್ತಾನುಗಳು ಸಾಕಷ್ಟು ಇರುವ ವ್ಯವಸ್ಥೆಗಳಿದೆ, ಉಕ್ರೇನ್ ಯುದ್ಧ ಪೀಡಿತ ದೇಶವಾದರೂ ಅಲ್ಲಿ ಸರಿ ಸಮಯದಲ್ಲಿ ರೈಲು ಸಂಚರಿಸುತ್ತಿದೆ ಅಂದರೆ ಈಗಿನ ಯುದ್ಧ ಶೈಲಿ ಬದಲಾಗಿದೆ.   ಯುದ್ಧದ ಉನ್ಮಾದಿಗಳು ಆಯಾ ದೇಶಗಳಲ್ಲಿ ಆಯಾ ಕಾಲದ ಪರಿಸ...

#Blog number 3415. ಅಡಿಕೆ ಹಾಳೆ ಉತ್ಪನ್ನ ತಯಾರಿಕರಿಗಾಗಿ

#ಕುಮಾರ_ಸುಬ್ರಮಣ್ಯ_ಮುಳಿಯಾಳ #ದೇಶ_ವಿದೇಶಗಳ_ಔಷದ_ಉತ್ಪಾದನೆ_ಮಾರಾಟ_ಕ್ಷೇತ್ರದಲ್ಲಿ_ದೊಡ್ಡ_ಹೆಸರು #ಅಡಿಕೆ_ವಿಶ್ವಸಂಸ್ಥೆ_ನಿರ್ಬಂದದ_ಬಗ್ಗೆ_ಅನೇಕ_ವರ್ಷದಿಂದ_ಜನಜಾಗೃತಿ_ಲೇಖನ_ಪ್ರಕಟಿಸುತ್ತಿದ್ದಾರೆ #ಅಮೇರಿಕಾ_ಅಡಿಕೆ_ಹಾಳೆ_ಉತ್ಪನ್ನ_ಆಮದು_ಬ್ಯಾನ್_ಮಾಡಿದೆ #ಆಡಿಕೆಹಾಳೆ_ಉತ್ಪನ್ನ_ತಯಾರಕರಿಗೆ_ಅವರು_ನೀಡಿದ_ಮಾರ್ಗದರ್ಶನದ_ಲೇಖನ_ಇಲ್ಲಿದೆ #arecanut #malenadu #westernghat #karnataka #FDA #palmleafdinnerware #arecacatachu  ಅಡಿಕೆ ಹಾಳೆಯ ಸಂಬಂದಿತ ಉತ್ಪನ್ನಗಳ ರಫ್ತ್ತುನಿಷೇಧ ದಿಂದ ಅಡಿಕೆ ಉದ್ಯಮದ ಮೇಲೆ ಆಗಬಹುದಾದ ಪರಿಣಾಮಗಳು  ******************************  ಅಡಿಕೆಯನ್ನು ಜಾಗತಿಕ ಮನ್ನಣೆಯನ್ನು ಪಡೆದ Food and Drug Administration (FDA) ಯು ಹಾನಿಕಾರಕ ಪಟ್ಟಿಯಲ್ಲಿ ಸೇರಿಸಿದ್ದಲ್ಲದೆ USA ಅಡಿಕೆ ಹಾಳೆಯ ಸಹಿತ  ಸಂಬಂದಿತ ಉತ್ಪನ್ನಗಳ ಆಮದನ್ನು ನಿಷೇಧಿಸಿದೆ.ಇದು ಹಂತ ಹಂತವಾಗಿ ಅಡಿಕೆಯನ್ನು ನಿರ್ಬಂಧಿತ ಪದಾರ್ಥಗಳ ಪಟ್ಟಿಯಲ್ಲಿ ಸೇರಿಸುವ ಮುಂದಿನ ಹಂತದ ಬೆಳವಣಿಗೆಯಂತೆ ತೋರುತ್ತದೆ.ಈಗಾಗಲೇ ಅಡಿಕೆ ನಿಷೇಧದ ಬಗ್ಗೆ WHO ಬೇರೆ ಬೇರೆ ರಾಜ್ಯಗಳ ಅಭಿಪ್ರಾಯವನ್ನು   ಕೇಳಿದ್ದನ್ನು ನಾವು ಗಮನಿಸಬಹುದು.    ಅಡಿಕೆಯ ಬಹುಪಯೋಗಿ ಅನುಕೂಲತೆಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಸರಿಯಾದ ಕ್ಲಿನಿಕಲ್ ಟ್ರಯಲ್ ನಡೆಯದೆ ಇದ್ದುದರ ಪರಿಣಾಮವನ್ನು ನಾವು ...

Blog number 3414. ಅಂಜಲಿ ಎಂಬ ಮಂಗ ಸಾಕಿದ್ದೆ...

#ಅಂಜಲಿ #ಒಂಬತ್ತು_ವರ್ಷದ_ಹಿಂದೆ_ಈ_ದಿನ_ನಮ್ಮ_ಮನೆಗೆ_ಬಂದಿದ್ದಳು #ಮೇ_17_2016 #ಅದೇ_ವರ್ಷದ_ಆಗಸ್ಟ್_15ಕ್ಕೆ_ಬಿಡುಗಡೆ_ಮಾಡಿದೆ #monkey #anjali #memories #petlovers    ಅಂಜಲಿ ಅದು ನಾವಿಟ್ಟ ಹೆಸರು ಅವಳ ಹೆಸರು ಬೇರೆ ಇರಬೇಕು ಅವಳು ನಮ್ಮೂರು ಬಂದು ಸೇರಿ ಊರಿನ ಬಾಲಕರ ಗಮನ ಸೆಳೆದದ್ದು ಹೇಗಂದರೆ...  ಅವಳಿಗೆ ಮನುಷ್ಯರ ಸಹವಾಸ ಚೆನ್ನಾಗಿತ್ತು ಆದ್ದರಿಂದ ಮಕ್ಕಳೆಲ್ಲ ಕಡಲೆಕಾಯಿ ಬಾಳೆಹಣ್ಣು ತೋರಿಸಿದರೆ ಅವರ ಹತ್ತಿರ ಯಾವುದೇ ಭಯ ಇಲ್ಲದೆ ಬಂದು ಕೈಯಿಂದ ಸ್ವೀಕರಿಸಿ ಹೋಗುತ್ತಿದ್ದಳಂತೆ, ಇದರಿಂದ ಇವಳು ನಮ್ಮೂರಿನ ಲಾರಿ ಮಾಲೀಕರಾದ ಅಮೀರ್ ಸಾಹೇಬರ ಮಕ್ಕಳ ಜೊತೆಯಾಗಿ ಅವರ ಮನೆ ಸೇರಿದಳು.    ಆದರೆ ಅವಳು ಕೆಲವೊಮ್ಮೆ ಜನರಿಗೆ ಕಚ್ಚಲು ಬರುವುದು ಸಿಟ್ಟಾಗುವುದು ಇವೆಲ್ಲ ಅವಳ ನೆಗೆಟಿವ್ ಅಂಶಗಳಾಗಿತ್ತು, ಅಮೀರ್ ಸಾಹೇಬರು ಅವರ ಮಗನ ಹತ್ತಿರ ಇದನ್ನು ನನಗೆ ಸಾಕಲು ಕಳಿಸಿ ಕೊಟ್ಟಿದ್ದರು, ನನಗೂ ಮಂಗ ಒಂದನ್ನು ಸಾಕುವ ಆಸೆ ಪೂರೈಸಿರಲಿಲ್ಲ ಇದು ಹೆಣ್ಣು ಮಂಗ ಆಗಿತ್ತು ತಕ್ಷಣ ಇದಕ್ಕೊಂದು ಬೋನು- ಚೈನು, ಬೋನಿನಿಂದ ಹೊರ ಬಿಟ್ಟಾಗ ನಮ್ಮ ಹಲಸಿನ ಮರ ಅಮಟೆ ಮರ ಮೇಲೆ ಹತ್ತಿ ಇಳಿಯುವಷ್ಟು ಉದ್ದದ ಸೊಂಟಕ್ಕೆ ಹಗ್ಗ ಹೀಗೆ ಎಲ್ಲ ವ್ಯವಸ್ಥೆ ಆಯಿತು.      ನಿತ್ಯ ಬೆಳಿಗ್ಗೆ ತಿನ್ನಲು ಹಸಿ ಶೇಂಗಾ, ಬಾಳೆಹಣ್ಣು - ಕ್ಯಾರೆಟ್ -ಸೌತೆಕಾಯಿ -ಪೇರಲೆ ಹಣ್ಣು ಇತ್ಯಾದಿ ಸಂಗ್ರಹವಾಯಿತು ನಂತ...

Blog number 3413. ಅಮೇರಿಕಾ ಅಡಿಕೆ ಹಾಳೆ ಉತ್ಪನ್ನ ಆಮದು ರದ್ದು ಮಾಡಿದೆ

#ಅಡಿಕೆ_ಹಾಳೆಯ_ಉತ್ಪನ್ನ_ಅಮೇರಿಕಾದಲ್ಲಿ_ನಿಷೇದ #WHO_ಅಡಿಕೆಯಲ್ಲಿ_ಕ್ಯಾನ್ಸರ್_ಕಾರಕ_ಕಾರ್ಸಿನೋಜಿನ್_ಎಂಬ_ವರದಿ_ಕಾರಣ #USನ_FDA_ಅಮೇರಿಕಾಕ್ಕೆ_ಅಡಿಕೆ_ಉತ್ಪನ್ನ_ಆಮದು_ಮಾರಾಟ_ರದ್ದು_ಮಾಡಿದೆ. #arecafarmer #arecanuts #India #US #ban #arecaplates #dinnerwear    ಯುನಿಟೆಡ್ ಸ್ಟೇಟ್ ನ FDA (Foods & Drug Administration) ದಿನಾಂಕ 8 - ಮೇ - 2025 ರಂದು ಆದೇಶ ಹೊರಡಿಸಿದೆ ಏನೆಂದರೆ...    ಅಮೇರಿಕಾದಲ್ಲಿ ಪರಿಸರ ಸ್ನೇಹಿ, ತಕ್ಷಣ ಮಣ್ಣಿನಲ್ಲಿ ಗೊಬ್ಬರ ಆಗುವಂತ ಅಡಿಕೆ ಹಾಳೆಯ ಡಿನ್ನರ್ ವೇರ್ (ಪ್ಲೇಟ್ - ಬೊವ್ಲ್ - ಲೋಟ - ಕಟ್ಲರಿ )ಗಳನ್ನ ಬೇರೆ ದೇಶದಿಂದ ಆಮದು ಮಾಡಿಕೊಂಡು ಮಾರಾಟ ಮಾಡುತ್ತಿದೆ  (ಪ್ಲಾಸ್ಟಿಕ್ ನಿಂದ ಪರಿಸರಕ್ಕೆ ಹಾನಿ ಎಂಬ ಕಾರಣದಿಂದ).    ಆದರೆ ಅಡಿಕೆ ಗಿಡದಲ್ಲಿ ಮತ್ತು ಅದರ ಉತ್ಪನ್ನ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕವಾದ ಕಾರ್ಸಿನೋಜಿನ್ ಇರುವುದು ಸಂಶೋದನೆಯಿಂದ ದೃಡ ಪಟ್ಟಿರುವುದರಿಂದ ಈ ಅಡಿಕೆ ಹಾಳೆಯ ಉತ್ಪನ್ನಗಳನ್ನ ಅಮೇರಿಕಾದ ಮಾರುಕಟ್ಟೆಗೆ ಆಮದು ಮಾಡಿಕೊಳ್ಳುವುದಕ್ಕೆ ಮತ್ತು ಮಾರಾಟ ಮಾಡುವುದಕ್ಕೆ ಕಾನೂನು ರೀತ್ಯಾ ಅವಕಾಶ ಇಲ್ಲ ಎಂದಿದೆ.    ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ USನ FDA ಆದೇಶ ಓದಿ https://www.fda.gov/food/hfp-constituent-updates/fda-alerts-industry-and-consumers-about-palm-l...

Blog number 3412.ಕಾಳೇಶ್ವರ ಧರ್ಮಪ್ಪ ಸಾಹೇಬರ ಸಂದರ್ಶನ ಭಾಗ - 2

#ಕುಗ್ರಾಮದಿಂದ_KAS_ಸ್ಥಾನದವರೆಗೆ #ಕಾಳೇಶ್ವರ_ದರ್ಮಪ್ಪನವರ_ಸಂದರ್ಶನ_ಭಾಗ_2 https://youtu.be/41oArS_Pr7Q?si=SuefbjDydoxxMWLt #sagar #muncifhighschool #Riponpet #hosanagara    ಒಂದೇ ಬಾರಿಗೆ ಸಾಗರದ ಮುಸ್ಸಿಪ್ ಹೈಸ್ಕೂಲಿನ ನಾಲ್ಕು ಅಧ್ಯಾಪಕರು KAS ಪಾಸು ಮಾಡುತ್ತಾರೆ.     ಹೊಸನಗರ ತಾಲೂಕಿನ ಹರತಾಳು ಸಮೀಪದ #ನಂದಿಗದ_ಗುಂಡಪ್ಪನವರು ಸಾಗರದ ಮುನ್ಸಿಪ್ ಹೈಸ್ಕೂಲ್ ಉನ್ನತಿಗೆ ಶ್ರಮಿಸಿದ್ದರು.    ಹೀಗೆ ಅನೇಕ ವಿಚಾರಗಳನ್ನ ಈ ಸಂದರ್ಶನದಲ್ಲಿ ದರ್ಮಪ್ಪನವರು ನೆನಪು ಮಾಡಿದ್ದಾರೆ.

Blog number 3411. ಕಾಳೇಶ್ವರ ಧರ್ಮಪ್ಪ ಸಾಹೇಬರ ಸಂದರ್ಶನ ಭಾಗ 1

#ಸಂದರ್ಶನ_ಭಾಗ_1 #ನಮ್ಮ_ಹೆಮ್ಮೆ_ನಮ್ಮೂರ_ಕಾಳೇಶ್ವರ_ದರ್ಮಪ್ಪನವರು https://youtu.be/7g5Uz5g6Uts?si=cA6Qq3RUMk2-EnJ3 #KAS #dharmappa #ripponpet #hosanagara   ಕೆ.ದರ್ಮಪ್ಪನವರು ಈಗ ಚಿಕ್ಕಮಗಳೂರು ಉಡುಪಿ ಲೋಕಸಭಾ ಸದಸ್ಯರಾದ ಮಾಜಿ ಮಂತ್ರಿ ಕೋಟಾ ಶ್ರೀನಿವಾಸ ಪೂಜಾರಿ ಅವರ ಪ್ರೈವೇಟ್ ಸೆಕ್ರೆಟರಿ ಆಗಿ ಮುಂದುವರಿದಿದ್ದಾರೆ.    ಕುಗ್ರಾಮದಿಂದ  KAS ಪದವಿ ತನಕ ಅವರು ಸಾಗಿ ಬಂದ ಹಾದಿಯ ವಿವರಣೆಯ ಈ ಸಂದರ್ಶನ ಗ್ರಾಮೀಣ ಯುವ ಜನತೆಗೆ ಪ್ರೇರಣೆ ಮತ್ತು ಮಾರ್ಗದರ್ಶನ ನೀಡುವಂತದ್ದಾಗಿದೆ.    ಹುಟ್ಟಿದ ಊರು ಹೊಸನಗರ ತಾಲೂಕಿನ ರಿಪ್ಪನಪೇಟೆ ಸಮೀಪದ ಕಾಳೇಶ್ವರ,ತಾಯಿ ತವರು ಮನೆ ಸಾಗರ ತಾಲೂಕಿನ ಆನಂದಪುರಂ ಹೋಬಳಿ ಗಿಳಾಲಗುಂಡಿ.    ಪ್ರಾಥಮಿಕ ಶಿಕ್ಷಣ ಗಿಳಾಲಗುಂಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ಮಾಧ್ಯಮಿಕ ಶಿಕ್ಷಣ ರಿಪ್ಪನಪೇಟೆ ಸರ್ಕಾರಿ ಮಾದ್ಯಮಿಕ ಶಾಲೆ, ಪ್ರೌಡ ಶಿಕ್ಷಣ ಆನಂದ ಪುರಂ ಸರ್ಕಾರಿ ಪ್ರೌಡಶಾಲೆ, ಪಿಯುಸಿ ಶಿವಮೊಗ್ಗದ NES ಕಾಲೇಜಿನಲ್ಲಿ ಮತ್ತು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಆನರ್ಸ್.   ಕೆ.ದರ್ಮಪ್ಪನವರು ಈಗ ಚಿಕ್ಕಮಗಳೂರು ಉಡುಪಿ ಲೋಕಸಭಾ ಸದಸ್ಯರಾದ ಮಾಜಿ ಮಂತ್ರಿ ಕೋಟಾ ಶ್ರೀನಿವಾಸ ಪೂಜಾರಿ ಅವರ ಪ್ರೈವೇಟ್ ಸೆಕ್ರೆಟರಿ ಆಗಿ ಮುಂದುವರಿದಿದ್ದಾರೆ.    ಕುಗ್ರಾಮದಿಂದ  KAS ಪದವಿ ತನಕ ಅವರು ಸಾಗಿ ಬಂದ ಹಾದಿಯ ವಿವರಣ...

Blog number 3410. ಮಮತಾ ಸಾಗರ್ ವಾಚಿಸಿದ "ನಾನು ಅಂದರೆ...." ಕವನ ಬೆಂಕಿ ಬಿರುಗಾಳಿ

#ನಾನು_ಎಂದರೆ.... #ಮಮತಾಸಾಗರ್_ವಾಚಿಸಿದ_ಕವನ #ಬೆಂಕಿ_ಬಿರುಗಾಳಿ_ಆಗಿದೆ #ಕವನ_ವಾಚನ_ಪೂರ್ಣವಾಗಿ_ನೋಡಿ #ಮಮತಾಸಾಗರ್_ಬಗ್ಗೆ_ನಾನು_ಬರೆದ_ಲೇಖನ ಇನ್ನೊಮ್ಮೆ  #mamathasagar #Nanu #viral #poem #akhilakarnatakawriters   8ನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ ವಾಚಿಸಿದ #ನಾನು ಎಂಬ ಶಿರ್ಷಿಕೆಯ ಕವನದ ಬಗ್ಗೆ ಪರ- ವಿರೋದದ ಚರ್ಚೆ ನಡೆಯುತ್ತಿದೆ. World Organisation of Writer ಜಾಗತಿಕ ಸಾಹಿತ್ಯ ಪ್ರಶಸ್ತಿ ಪಡೆದ ಮಮತಾ ಜಿ. ಸಾಗರ್ ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರತಿಷ್ಟಿತ ನಿರ್ಮಲಾ ಗರ್ಲ್ಸ್ ಹೈಸ್ಕೂಲ್ ವಿದ್ಯಾರ್ಥಿನಿ ಆಗಿದ್ದವರು ಇವರ ತಾಯಿ ಡಾಕ್ಟರ್ ಶೇಖರಿಬಾಯಿ ಸಾಗರ ಪೇಟೆಯ ಮೊದಲ ಖಾಸಾಗಿ ಮಹಿಳಾ ವೈದ್ಯರು.  ಖ್ಯಾತ ಸಾಹಿತಿ ಅಂಕಣಕಾರ #ಅರವಿಂದಚೊಕ್ಕಾಡಿ ಅವರು ಈ ಕವನ ವಾಚನದ ಬಗ್ಗೆ  ಅವರ ಪೇಸ್ ಬುಕ್ ನಲ್ಲಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ... ಕವಿತೆ ನಿಗೂಢವಾಗಿರಬೇಕು ನಿಜ. ಕವಿತೆಯ ಕುರಿತ ವಿಮರ್ಶೆಯೂ ನಿಗೂಢವೇ ಆಗಿದ್ದರೆ ವಿಮರ್ಶೆಯನ್ನೂ ಕವಿತೆಯೆಂದೇ ಪರಿಗಣಿಸಬೇಕಾದೀತು.    ಕಡೆಗೂ ಚರ್ಚೆಯಾಗುತ್ತಿರುವ ಕವಿತೆಯನ್ನು ನೋಡಿದೆ. ಅದು ನವ್ಯ ಸ್ಕೂಲ್ ಆಫ್ ಥಾಟ್‌ನ ಕವಿತೆ.‌ ಸಮಾಜದ ಮಡಿವಂತ ಮನಸ್ಥಿತಿಯನ್ನು ಒಡೆಯುವ ಹಾಗೆಯೇ ಬರೆದು ಹಾಕುವ ಹಾಗೆ ಬರೆಯಬೇಕೆಂಬುದು ನವ್ಯದ ಸಿದ್ಧಾಂತ. ಬಹುಶಃ ನವ್ಯರಲ್ಲಿ ಅಡಿಗರೊಬ್ಬರೇ ಸೋಷಿಯಲ್ ಡೀಸೆನ್ಸಿಯನ್ನು ಸಾಹಿತ್ಯ...

Blog number 3409. ಎಕ್ಕದ ಗಿಡದ ಮಹತ್ವ

#ಎಕ್ಕದಗಿಡ #ಆಯುರ್ವೇದ_ಮತ್ತು_ಧಾರ್ಮಿಕದಲ್ಲಿ_ಮಹತ್ವದ_ಗಿಡ #ಶಿವನ_ಗಣಪತಿಯ_ಪೂಜೆಲ್ಲಿ_ಎಕ್ಕೆ_ಹೂವಿನ_ಬಳಕೆ #ಬಿಳಿಎಕ್ಕೆಗಿಡದ_ಬೇರಿನಿಂದ_ಗಣಪತಿ_ವಿಗ್ರಹ #ganapathi #lordshiva #ayurveda #calotropigigantea #KRSParty #ravikrishnareddy #lsumitra    ರೆಡ್ಡಿ ಅವರು ಒಂದು ಪೋಸ್ಟ್ ಹಾಕಿದ್ದರು ಓದಿ....  ಎಕ್ಕದ ಹೂವು. ಉತ್ತರ ಭಾರತದಲ್ಲಿ ಈ ಹೂವಿನ ಮಾಲೆಯನ್ನು ಶಿವನಿಗೆ ವಿಶೇಷವಾಗಿ ಅರ್ಪಿಸುತ್ತಾರೆ. ನಮ್ಮಲ್ಲಿ ಇದೊಂದು ಏನಕ್ಕೂ ಬಾರದ ಯಃಕಶ್ಚಿತ್ ಕಳೆ ಗಿಡ. ಇನ್ನೂ ಅರಳದ ಇದರ ಒಳಗೆ ಗಾಳಿ ತುಂಬಿದ ಮೊಗ್ಗಿನ ಬುಡ್ಡೆಯನ್ನು ಅಮುಕಿದರೆ ಅದು ಟಪ್ ಎಂದು ಶಬ್ದ ಮಾಡುತ್ತ ಒಡೆಯುತ್ತದೆ. ನಾನಂತೂ ಚಿಕ್ಕಂದಿನಿಂದ ಈ ಗಿಡ ಮತ್ತು ಅದರ ಅರಳದ ಮೊಗ್ಗಿನ ಬುಡ್ಡೆ ಕಂಡರೆ ಅದನ್ನು ಅಮುಕಿ, ಅದರಿಂದ ಹೊಮ್ಮುವ ಟಪ್ ಶಬ್ದವನ್ನು ಆನಂದಿಸುತ್ತೇನೆ. ನೀವೂ ಹಾಗೆ ಮಾಡಿದ್ದೀರಾ?... ಇದಕ್ಕೆ ನನ್ನ ಪ್ರತಿಕ್ರಿಯೆ... ಎಕ್ಕದ ಹೂವು ಶಿವನಿಗೆ ಗಣಪತಿಗೆ ಅರ್ಪಿಸಿದರೆ, ಎಕ್ಕದ ಎಲೆ ಶನೀಶ್ವರನಿಗೆ ಅರ್ಪಿಸುತ್ತಾರೆ.  ಶಿರಡಿ ಸಮೀಪದ ಶನಿ ಶಿಂಗಾಪುರದಲ್ಲಿ ಹೂವಿನ ಪ್ರಸಾದಕ್ಕಿಂತ ಎಕ್ಕದ ಎಲೆಯೇ ಪ್ರಸಾದವಾಗಿ ನೀಡುತ್ತಾರೆ.   ಮನೆ ಎದರು ಎಕ್ಕದ ಗಿಡ ಇದ್ದರೆ ಅದೃಷ್ಟ ಎಂಬ ನಂಬಿಕೆ ಇದೆ.   ಎಕ್ಕದ ಗಿಡ ಜಾನುವಾರುಗಳು ತಿನ್ನುವುದಿಲ್ಲ ಆದ್ದರಿಂದ ನಮ್ಮ ಸಂಸ್ಥೆ ಮತ್ತು ಮನೆ ಎದುರು ಈ ಗಿಡ ನೆಟ್ಟಿದ್...