Skip to main content

Posts

Showing posts from 2025

3500. ದರ್ಬೆ ಹುಲ್ಲು

#ದರ್ಬೆ_ಹುಲ್ಲು #ಧಾರ್ಮಿಕ_ಆಚರಣೆಯಲ್ಲಿ_ಬಳಕೆ #ಹಿಂದೂ_ಬೌದ್ದ_ಜೈನ_ಧರ್ಮಿಯರಲ್ಲಿ_ಪವಿತ್ರವೆಂದು_ಪರಿಗಣಿಸಿದ್ದಾರೆ. #ವೇದ_ಕಾಲದಿಂದಲೂ_ಶ್ರೀಕೃಷ್ಣ_ಭಗವದ್ಗೀತೆಯಲ್ಲಿ_ದರ್ಬೆ_ಉಲ್ಲೇಖವಿದೆ. #ದ್ಯಾನಕ್ಕೆ_ಆಸನವಾಗಿ_ಪೂಜಾಕಾರ್ಯಗಳಲ್ಲಿ_ಆಯುರ್ವೇದದಲ್ಲಿಯೂ_ದರ್ಬೆ_ಬಳಕೆ. #Dharbe #Hindu #Buddist #Jainism #Bhagavadgeetha #Religion Yaga #Homa    ಪೂಜಾ ಕಾರ್ಯಕ್ರಮಗಳಲ್ಲಿ ಪುರೋಹಿತರು ಬರೆಸುವ ಪೂಜಾ ಸಾಮಾಗ್ರಿ ಪಟ್ಟಿಯಲ್ಲಿ ಹಣ್ಣು-ಕಾಯಿ - ಅರಿಶಿಣ-ಕುಂಕುಮಗಳ ಜೊತೆ ಈ #ದರ್ಬೆ_ಹುಲ್ಲು ಕಡ್ಡಾಯವಾಗಿ ಬರೆದಿರುತ್ತಾರೆ.   ದರ್ಬೆಯ ಉಂಗುರವನ್ನು ಸಾಮಾನ್ಯವಾಗಿ ಕುಶದ ಉಂಗುರ ಅಥವಾ ದರ್ಬೆಯ ಉಂಗುರ ಎಂದೇ ಕರೆಯುತ್ತಾರೆ.  ಇದು ವಾತಾವರಣದ ದುಷ್ಟ ಶಕ್ತಿಗಳನ್ನು ನಿಯಂತ್ರಿಸುವ ಪವಿತ್ರ ಶಕ್ತಿಯನ್ನು ಹೊಂದಿರುವುದರಿಂದ ಪೂಜೆಗಳು ಮತ್ತು ಯಜ್ಞಗಳಲ್ಲಿ ಬಳಸಲ್ಪಡುತ್ತದೆ.      ದರ್ಭೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ....     ದರ್ಬೆ ಹುಲ್ಲು, ವೈಜ್ಞಾನಿಕವಾಗಿ ಡೆಸ್ಮೊಸ್ಟ್ಯಾಕಿಯ ಬೈಪಿನೇಟ (Desmostachya bipinnata) ಎಂದು ಕರೆಯಲ್ಪಡುತ್ತದೆ, ಇದು ಭಾರತದಾದ್ಯಂತ ಬೆಳೆಯುವ ಒಂದು ಬಹುವಾರ್ಷಿಕ ಹುಲ್ಲು.    ಇದು ಧಾರ್ಮಿಕ, ಆಧ್ಯಾತ್ಮಿಕ ಮತ್ತು ಔಷಧೀಯ ಮಹತ್ವವನ್ನು ಹೊಂದಿದೆ. ಹಿಂದೂ, ಬೌದ್ಧ ಮತ್ತು ಜೈನ ಸಂಪ್ರದಾಯಗಳಲ್ಲಿ ಪವಿತ್ರವೆಂದು ...

3499. ಆಗುಂಬೆ ಕಾಡಾನೆ

#ಮಲೆನಾಡಿನಲ್ಲಿ_ಕಾಡಾನೆಗಳು_ಲಗ್ಗೆ_ಹಾಕುತ್ತಿರುವುದೇಕೆ? #ಶತಮಾನಗಳ_ನಂತರ_ಕಾಡಾನೆಗಳು. #ಕೊಪ್ಪ_ಶೃಂಗೇರಿಯಲ್ಲಿ_ಪ್ರತ್ಯಕ್ಷವಾದ_ಜೋಡಿ_ಕಾಡಾನೆ. #ಪ್ರತಿ_ವರ್ಷ_ಆಗುಂಬೆಗೆ_ಬರುವ_ಒಂಟೆ_ಕಾಡಾನೆ. #ಆನಂದಪುರಂ_ಭಾಗಕ್ಕೆ_ಪ್ರತಿ_ವರ್ಷ_ಬರುತ್ತಿರುವ_ಕಾಡಾನೆಗಳು #ವಿಜಯನಗರ_ಸಾಮ್ರಾಜ್ಯದ_ಅರಸು_ಪ್ರೌಡ_ಪ್ರತಾಪರಾಯನಿಗೆ #ಗಜಬೇಂಟೆಗಾರ_ಎಂಬ_ಬಿರುದು_ಬರಲು_ಕಾರಣ #ಹದಿನಾಲ್ಕನೇ_ಶತಮಾನದಲ್ಲಿ_ಅವರು_ಆರಗದ_ದಟ್ಟ_ಅರಣ್ಯದಲ್ಲಿ #ಕಾಡಾನೆ_ಹಿಡಿದು_ಪಳಗಿಸಿ_ತಮ್ಮ_ಸೇನೆಗೆ_ಸೇರಿಸುತ್ತಿದ್ದರು. #wildlifeplanet #agumbe #thirthahalli #ShivamoggaNews #wildelephants  ಶಿವಮೊಗ್ಗ ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿ ಇವತ್ತಿಗೂ ಕಾಡಾನೆಗಳು ಮತ್ತು ಅವುಗಳ ಕಾರಿಡಾರ್ ಇದೆ.      ಶರಾವತಿ ಅಭಯಾರಣ್ಯದಲ್ಲಿ ಶರಾವತಿ ನದಿಗೆ ಆಣೆಕಟ್ಟು ಕಟ್ಟಿದ ನಂತರ ಕಾಡಾನೆಗಳು ಈ ಭಾಗದಲ್ಲಿ ಇರಲಿಲ್ಲ.    ಆದರೆ ಒಂದು ಒಂಟಿ ಸಲಗ ತೀರ್ಥಹಳ್ಳಿಯ ಆಗು೦ಬೆ ಭಾಗದಲ್ಲಿ ಪ್ರತಿ ವರ್ಷ ನಿಗದಿತ ಸಮಯದಲ್ಲಿ ಜನವಸತಿ ಕೇಂದ್ರಗಳಲ್ಲಿ ಕಾಣಿಸುಕೊಳ್ಳುತ್ತಾ ಆ ಭಾಗದಲ್ಲಿನ ಜನರಲ್ಲಿ ಭಯ - ಆತಂಕ ಸೃಷ್ಟಿಸಿದೆ.    ಇದೇ ಆನೆ ಕೆಲವು ವರ್ಷದ ಹಿಂದೆ ಸಾಗರ ತಾಲ್ಲೂಕಿನ ಆವಿನಳ್ಳಿ ಸಮೀಪದ #ಗಿಣಿವಾರ ಎಂಬ ಗ್ರಾಮದಲ್ಲಿ ಈ ಆನೆ ಕಾಣಿಸಿಕೊಂಡಾಗ ಗ್ರಾಮಸ್ಥರೆಲ್ಲ ಒಂದು ರಾತ್ರಿ  ಕಾಡಾನೆಯ ಉಪಟಳ ನಿವಾರಿಸಲು ಸಭೆ ಆಯೋಜ...

3498. ಮಲೆನಾಡಿನ ಒಂಟಿ ಮನೆ ಸುರಕ್ಷತೆ

#ಹಳ್ಳಿಯಲ್ಲಿರುವ_ನಿಮ್ಮ_ಮನೆ_ತಂದೆ_ತಾಯಿಗಳ_ಸುರಕ್ಷತೆ_ಬಗ್ಗೆ_ಯೋಚಿಸಿ. #ಭಾರತದಲ್ಲಿನ_ತನ್ನ_ಮನೆಗೆ_ಕಳ್ಳರು_ಬಂದಿದ್ದನ್ನು_ಅಮೇರಿಕಾದಲ್ಲಿದ್ದ_ಅವರ_ಪುತ್ರಿ_ಎಚ್ಚರಿಸಿದ_ಘಟನೆ. #ಮಲೆನಾಡಿನ_ಒ೦ಟಿ_ಮನೆಗಳು_ದರೋಡೆಕೋರರಿಗೆ_ಸುಲಭ_ಟಾಗೆ೯ಟ್.   #ಸಕಾ೯ರ_ಮಲೆನಾಡಿನ_ಒ೦ಟಿ_ಮನೆ_ವಾಸಿಗಳಿಗೆ_ಬಂದೂಕು_ಲೈಸೆನ್ಸ್_ನೀಡಬೇಕು. #ಸಾಗರ_ತಾಲ್ಲೂಕಿನ_ಬ್ಯಾಕೋಡಿನ_ನಿವೃತ್ತ_ಪೋಸ್ಟ್_ಮಾಸ್ಟರ್_ದಂಪತಿ_ಹತ್ಯೆ_ಆಗಿ_ಐದು_ವರ್ಷ #Westernghats #Malenadu #Selfprotection #Docoits #Softtargets #cctv #Camera #Dogs       ಮಲೆನಾಡಿನ ಒಂಟಿ ಮನೆಗಳು ದರೋಡೆಕೋರರಿಗೆ ಸಾಫ್ಟ್ ಟಾಗೆ೯ಟ್ (ಸುಲಭ ಗುರಿ) ಆಗುತ್ತಿದೆ ಇದಕ್ಕೆ ಸರ್ಕಾರ ಏನು ಮಾಡಬಹುದು? ಸ್ವತಃ ನಾವೇನು ತಯಾರಿ ಮಾಡಿಕೊಳ್ಳಬಹುದು? ಇತ್ತೀಚಿನ ಈ ಕೆಳಗಿನ ಘಟನೆ ನೋಡಿ....    ಈಗಿನ ಕಾಲದಲ್ಲಿ ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ, ಅಮೆರಿಕಾದಲ್ಲಿ ಕುಳಿತು ದೂರದ ಬಾಗಲಕೋಟೆಯ ಮುಧೋಳ ನಗರದಲ್ಲಿ ಏನಾಗುತ್ತಿದೆ ತಮ್ಮ ಮನೆಯ ಹತ್ತಿರ ಯಾರು ಬಂದಿದ್ದಾರೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದು.     ಮುಧೋಳದಲ್ಲಿ ನಡೆಯುವ ಘಟನೆಯನ್ನು ದೂರದ ಅಮೆರಿಕಾದಲ್ಲಿ ನೋಡಿ ಅಪರಾಧ ಕೃತ್ಯವನ್ನು ತಪ್ಪಿಸಿದ ಚಾಣಾಕ್ಷ ಘಟನೆಯೊಂದು ನಡೆದಿದೆ.     ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಚಡ್ಡಿ ಗ್ಯಾಂಗ್ ಕಳ್ಳರ ಹಾವಳಿ ಹೆಚ್ಚಾಗಿ...

3497. ತಾಳಗುಂದ ಶಾಸನ ಸಂಶೋದಕರು

#ಡಾ_ತಿರುಮಲೈ_ಮದುರನಾಥ_ಕೇಶವ #ಇವರ_71ನೇ_ಹುಟ್ಟು_ಹಬ್ಬದ_ಶುಭಹಾರೈಕೆಗಳು #ತಾಳಗುಂದ_ಶಾಸನ_ಸಂಶೋಧನೆ_ಮಾಡಿದವರು #ಹಲ್ಮಿಡಿ_ಶಾಸನಕ್ಕಿಂತ_80_ವರ್ಷ_ಹಳೆಯ_ಶಾಸನ. #ಶಿವಮೊಗ್ಗ_ಜಿಲ್ಲೆಯ_ಶಿಕಾರಿಪುರ_ತಾಲ್ಲೂಕಿನ_ಶಿರಾಳಕೊಪ್ಪದಿಂದ_11_ಕಿಲೋಮೀಟರ್_ದೂರದಲ್ಲಿದೆ #Kannadasculpture #Talagunda #Halmidi #Researcher #DrTMKeshava #Shivamogga #Shikaripura     ಡಾಕ್ಟರ್ ತಿರುಮಲೈ ಮದುರನಾಥ ಕೇಶವರವರ 71 ನೇ ಹುಟ್ಟು ಹಬ್ಬದ ಶುಭಾಶಯಗಳು.     ಅವರ ಜನ್ಮ ದಿನಾಂಕ 19 -ಸೆಪ್ಟೆಂಬರ್-1954.   ಬೆಂಗಳೂರು ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞರಾಗಿದ್ದವರು.    ಈಗ ನಿವೃತ್ತರಾಗಿ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸಿದ್ದಾರೆ.   ಇವರೇ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತಾಳಗುಂದದ ಸಿಂಹ ಕಟಾಂಜನದ ಕನ್ನಡ ಶಾಸನ ಉತ್ಕನದಲ್ಲಿ ಸಂಶೋಧನೆ ಮಾಡಿದವರು.    ಈ ಶಾಸನ ಹಲ್ಮಿಡಿಯ ಶಾಸನಕ್ಕಿಂತ 80 ವರ್ಷ ಹಿಂದಿನದ್ದು.     ಅಂದರೆ ಕನ್ನಡದ ಮೊದಲ ಶಾಸನ ಎನ್ನಿಸಿಕೊಂಡ ಹಲ್ಮಿಡಿ ಶಾಸನಕ್ಕಿಂತ ಹಿಂದಿನದ್ದು.    ತಾಳಗುಂದ ಶಾಸನ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಪಠ್ಯವಾಗಿದೆ.    ಇತಿಹಾಸ ದರ್ಪಣ ಪುಸ್ತಕದಲ್ಲಿ ತಾಳಗುಂದ ಶಾಸನದ ವಿವರವಾದ ಲೇಖನ ಪ್ರಕಟವಾಗಿದೆ.   ಕೇಂದ್...

3496. ಯಡೇಹಳ್ಳಿ ಗ್ರಾಮ ಪಂಚಾಯತ್

#ಯಡೇಹಳ್ಳಿ_ಗ್ರಾಮ_ಪಂಚಾಯಿತಿ #ಸ್ವಚ್ಚ_ಸಂಕೀರ್ಣ_ಘಟಕದ_ಉದ್ಘಾಟನೆ. #ಆಹ್ವಾನ_ಪತ್ರಿಕೆ_ನೀಡಿದ್ದಾರೆ. #ಅಧ್ಯಕ್ಷೆ_ಉಪಾದ್ಯಕ್ಷ_ಪಂಚಾಯತ್_ಅಭಿವೃದ್ದಿ_ಅಧಿಕಾರಿ_ಮಾಜಿ_ಉಪಾಧ್ಯಕ್ಷರು. #Gramapanchayath #Yadehalli #Anandapuram #Sagar #Shivamogga.#Anandapuram     ದಿನಾಂಕ 20 - ಸೆಪ್ಟಂಬರ್ - 2025 ಶನಿವಾರ ನಮ್ಮ ಊರಿನ ಯಡೇಹಳ್ಳಿ ಗ್ರಾಮ ಪಂಚಾಯತ್ ನ  ಕಸವಿಲೇವಾರಿ ಘಟಕದ ನೂತನ ಸ್ವಚ್ಚ ಸಂಕೀರ್ಣ ಭವನದ ಉದ್ಘಾಟನಾ ಸಮಾರಂಭ ನೆರವೇರಲಿದೆ.    ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆ ನೀಡಲು ಬಂದವರು ಅಧ್ಯಕ್ಷೆ #ಶ್ರೀಮತಿ_ರತ್ನಮ್ಮ ಇವರು ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಕೊರಲಿಕೊಪ್ಪದ ದಿವಂಗತ ಕೆಂಚಣ್ಣರ ಪುತ್ರಿ ಕೆಂಚಣ್ಣ ನನ್ನ ಹಿರಿಯ ಗೆಳೆಯರು ಕೊರಲಿಕೊಪ್ಪದಿಂದ ಗೇರುಬೀಸಿಗೆ ಖಾತೆ ಜಮೀನಿನಲ್ಲಿ ರಸ್ತೆ ಮಾಡಿಸಲು ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಸಹಕರಿಸಿದವರು.    ಉಪಾಧ್ಯಕ್ಷರು #ಇರುವಕ್ಕಿ_ಗಣಪತಿ 1993ರಲ್ಲಿ ನಾವೆಲ್ಲ ಒಟ್ಟಿಗೆ ಚುನಾವಣೆ ಮಾಡಿ ಯಡೇಹಳ್ಳಿ ಗ್ರಾಮ ಪಂಚಾಯಿತಿ ಮೊದಲ ಸದಸ್ಯರಾದವರು.      ಕಳೆದ 32 ವರ್ಷದಿಂದ ಮೂರು ಬಾರಿ ಅಧ್ಯಕ್ಷ ಮತ್ತು ಮೂರು ಬಾರಿ ಉಪಾಧ್ಯಕ್ಷರಾಗಿರುವ ಗಣಪತಿ ರಾಜ್ಯದಲ್ಲಿೇ ಮೊದಲ #ಬಗರ್_ಹುಕುಂ_ಹಕ್ಕುಪತ್ರ ನೀಡಿದ ಗ್ರಾಮ ಪಂಚಾಯಿತಿ ಎಂಬ ದಾಖಲೆ ಮಾಡಲು ನನ್ನ ಜೊತೆ ಕೈಜೋಡಿಸಿದವರು ಅಷ್ಟೇ ಅಲ...

3495. ವರದಾ ನದಿ

#ವರದಾ_ನದಿ #ಶಿವಮೊಗ್ಗ_ಜಿಲ್ಲೆಯ_ಸಾಗರ_ತಾಲ್ಲೂಕಿನ_ವರದಾಮೂಲದಲ್ಲಿ_ಉಗಮ. #ಬನವಾಸಿ_ಮೂಲಕ_ಹರಿದು_ಹಾವೇರಿ_ಜಿಲ್ಲೆಯ_ಗಳಗನಾಥದಲ್ಲಿ #ತುಂಗಭದ್ರ_ನದಿಗೆ_ಸಂಗಮ_ಅಗುತ್ತದೆ. #Varadariver #Shivamogga #Sagar #Uttarakannadadistrict #Banavasi #Galaganatha #Haveridistrict #Tungabadra   ವರದಾ ನದಿ ತುಂಗಭದ್ರಾ ನದಿಯ ಪ್ರಮುಖ ಉಪನದಿ ಇದರ ಉದ್ಭವ ಸ್ಥಳ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವರದಾ ಮೂಲ.    ಪುರಾಣದಲ್ಲಿ ವರದಾ ನದಿ ಉಗಮದ ಬಗ್ಗೆ ಎರೆಡು ಕಥೆಗಳಿದೆ...     ಮೊದಲನೆಯದು ಶೃಂಗಋಷಿ ಒಮ್ಮೆ ತೀವ್ರ ತಪಸ್ಸಿನಲ್ಲಿದ್ದು, ಬ್ರಹ್ಮಹತ್ಯಾದೋಷ ಮಾಡಿದ್ದಕ್ಕಾಗಿ ವಿಷ್ಣುವಿನಿಂದ ಕ್ಷಮೆ ಕೇಳುತ್ತಿದ್ದನು. ಶ್ರೀಮನ್ನಾರಾಯಣನು ಅವನ ಮುಂದೆ ಪ್ರತ್ಯಕ್ಷನಾಗಿ ಋಷಿಯ ತಲೆಯ ಮೇಲೆ ಗಂಗಾಜಲವನ್ನು ಸುರಿದನು. ಈ ಗಂಗಾಜಲವು ವರದಾ ನದಿಯನ್ನು ರೂಪಿಸಿತು.   ಇನ್ನೊಂದು ಪುರಾಣ ಕಥೆ ಶಿವ ರೌದ್ರವತಾರ ತಾಳಿದಾಗ ಅವನ ತಾಪವಿಳಿಸಲು ವಿಷ್ಣು ಶಂಖದಲ್ಲಿ ಭಾಗಿರಥಿ ಜಲ ಶಿವನಿಗೆ ಅಭಿಷೇಕ ಮಾಡಿದ ನೀರೆ ವರದಾ ನದಿ ಆಯಿತೆಂದು.       ಸಾಗರ ಪಟ್ಟಣದಿಂದ ಆವಿನಹಳ್ಳಿ ರಸ್ತೆಯ ಇಕ್ಕೇರಿ ಅಘೋರೇಶ್ವರ ದೇವಾಲಯದ ವೃತ್ತದಲ್ಲಿ ಎಡಕ್ಕೆ ಸಾಗಿದರೆ ವರದಾ ನದಿ ಉಗಮ ಸ್ಥಳ ವರದಾ ಮೂಲ ಇದೆ.     ಈ ನದಿಗೆ ಸಾಗರ ಪಟ್ಟಣದಲ್ಲಿ ಆಣೆಕಟ್ಟು ನಿರ್ಮಿಸಿ ಕೆಲ ದಶಕಗಳ ಕಾಲ ಸಾಗರದ ಪ...

3494. ಬ್ರಹ್ಮಕಮಲ ಮತ್ತು ರಾತ್ರಿರಾಣಿ ಹೂವು

#ರಾತ್ರಿ_ರಾಣಿ_ಹೂವು​ #ಇದು_ಬಳ್ಳಿಯಲ್ಲಿ_ಅರಳುವ_ಹೂವು​ #ನಮ್ಮ_ಮನೆಯಲ್ಲಿ_ಮಧ್ಯರಾತ್ರಿ_ಅರಳಿತ್ತು. #ರಾತ್ರಿರಾಣಿ_ಬ್ರಹ್ಮಕಮಲ_ಬೇರೆ_ಬೇರೆ #flowers​ #flowerlovers​ #nightqueen​ #brahmakamala​ #midnightmemories​     ನಾನು ಈ ರಾತ್ರಿ ರಾಣಿ ಹೂವನ್ನು ಬ್ರಹ್ಮ ಕಮಲ ಎಂದೇ ಭಾವಿಸಿದ್ದೆ, ಕಳೆದ ವರ್ಷ ರಾತ್ರಿ ರಾಣಿ ನಮ್ಮ ಮನೆಯಲ್ಲಿ ಅರಳಿದಾಗ ಬ್ರಹ್ಮ ಕಮಲ ಅರಳಿದೆ ಎಂದು ಪೋಟೋ ಪೋಸ್ಟ್ ಮಾಡಿದ್ದೆ ಆದರೆ ಇದು ರಾತ್ರಿ ರಾಣಿ ಅಂತ ಪ್ರತಿಕ್ರಿಯೆಗಳನ್ನು ಗೆಳೆಯರು ಬರೆದಾಗಲೇ ಗೊತ್ತಾಗಿದ್ದು ಇದು ಬೇರೆ ಬೇರೆ ಅಂತ.   ಹಿಮಾಲಯ ಶ್ರೇಣಿಯಲ್ಲಿರುವ ಇದೇ ಹೂವಿನ ಹೋಲಿಕೆ ಇರುವ #ಬ್ರಹ್ಮಕಮಲ ಹೂವು ಗಿಡದಲ್ಲಿ ಅರಳುವ ಹೂವು.      ಈ ಪ್ರಭೇದ ಬಿನ್ನತೆ ಗೊತ್ತಿಲ್ಲದೆ ರಾತ್ರಿ ರಾಣಿ ಹೂವಿಗೆ ಬ್ರಹ್ಮಕಮಲ ಎಂತಲೂ  ಕರೆಯುತ್ತಾರೆ.      ರಾತ್ರಿ ರಾಣಿ ಹೂವು ಮತ್ತು ಬ್ರಹ್ಮಕಮಲ ಹೂವಿನ ಬಟಾನಿಕಲ್ ನೇಮ್ ಬೇರೆ ಬೇರೆ ಇದೆ.     #ರಾತ್ರಿಯ_ರಾಣಿ ಹೂವು ವೈಜ್ಞಾನಿಕವಾಗಿ #ಸೆಲೆನಿಸೆರಿಯಸ್_ಗ್ರಾಂಡಿಫ್ಲೋರಸ್ ಎಂದು ಕರೆಯಲ್ಪಡುವ ರಾತ್ರಿಯಲ್ಲಿ ಅರಳುವ ಒಂದು ಹೂವು.     ಈ ಸುಂದರವಾದ ಕಳ್ಳಿ ಜಾತಿಯ ಮೂಲ ಉಷ್ಣವಲಯದ ಅಮೆರಿಕ ಮತ್ತು ಇದು ಅಪರೂಪದ ಮತ್ತು ವಿಲಕ್ಷಣ ಹೂವಾಗಿದೆ.       ರಾತ್ರಿ ರಾಣಿಯ ದೊಡ್ಡ...

3493. ಕುಸುಮ ಸೊರಬರ ಅಭಿಮಾನ

#ಕುಸುಮ_ಸೊರಬ_ಪಶ್ಚಿಮಘಟ್ಟದ_ಪರಿಸರ_ಹೋರಾಟಗಾರ್ತಿ #ಅವರು_ಇಲ್ಲವಾದರೂ #ಅವರ_ಮೇಲಿನ_ಅಭಿಮಾನ_ಇವತ್ತಿಗೂ_ಕಡಿಮೆ_ಆಗಲೇ_ಇಲ್ಲ #Kusumasoraba #westernghats #Malenadu #Shivamogga #Uttarakannada #environmentprotection    ನಾನು ಕುಸುಮಾ ಸೊರಬರ ಸ್ಮರಣಾರ್ಥ ಉತ್ತರ ಕನ್ನಡ ಜಿಲ್ಲೆಯ ಪರಿಸರಾಸಕ್ತರು ಗೇರುಸೊಪ್ಪೆ ಸಮೀಪದ ಜಲಪಾತಕ್ಕೆ #ಬಂಗಾರ_ಕುಸುಮ_ಜಲಪಾತ ಎಂದು ನಾಮಕರಣ ಮಾಡಿದ ಚಿತ್ರ ಲೇಖನ ಪೇಸ್ ಬುಕ್ ನಲ್ಲಿ ಪ್ರಕಟಿಸಿದ್ದೆ.    16 ಸೆಪ್ಟೆಂಬರ್ 2025 ರಿಂದ 20 - ಸೆಪ್ಟೆಂಬರ್ ರಾತ್ರಿಗೆ ನಾಲ್ಕು ದಿನದಲ್ಲಿ ಇದು 6 ಲಕ್ಷ ಮಿಕ್ಕಿ ವೀಕ್ಷಣೆ ಆಗಿದೆ ಮತ್ತು 4 ಲಕ್ಷಕ್ಕೂ ಮಿಕ್ಕಿ ರೀಚ್ ಆಗಿದೆ.     ಕುಸುಮಾ ಸೊರಬರ ಮೇಲಿನ ಅಭಿಮಾನ,ಅವರ ಪರಿಸರದ ಹೋರಾಟಗಳನ್ನ ಜನ ಮರೆತಿಲ್ಲ ಅದಕ್ಕೆ ಉದಾಹರಣೆ 10 ಲಕ್ಷ ಮೀರಿದ ಜನರ ಪ್ರತಿಕ್ರಿಯೆಗಳು.   ಇಷ್ಟು ಜನರಿಗೆ ತಲುಪಿಸಿದ ಮಾಧ್ಯಮ #ಪೇಸ್_ಬುಕ್ ಜಾದು ನೋಡಿ.

3492. ಮಹಾಲಯ ಅಮಾವಾಸ್ಯೆ

#ಪಿತೃ_ಪಕ್ಷ #ಮಹಾಲಯ_ಅಮಾವಾಸ್ಯೆ  #ಸರ್ವಪಿತೃ_ಅಮಾವಾಸ್ಯೆ #Mahalayaamavasye #Pitrupaksha #Mahabharatha #Karna #Crow     ಇವತ್ತು ಮಹಾಲಯ ಅಮಾವಾಸ್ಯೆ ಇದು ಪಿತೃ ಪಕ್ಷದ ಕೊನೆಯ ದಿನ.    ಮಹಾಲಯ ಅಮಾವಾಸ್ಯೆ ದಿನ ಬಹಳ ವಿಶೇಷ, ಸಾಮಾನ್ಯವಾಗಿ ಪೂರ್ವಜರು ಮೃತಪಟ್ಟ ತಿಥಿ, ದಿನಗಳು ನೆನಪಿದ್ದರೆ ಅಂಥವರಿಗೆ ಆಯಾ ತಿಥಿಯಂದೇ ಶ್ರಾದ್ಧ ಕರ್ಮ ನೆರವೇರಿಸುತ್ತಾರೆ.    ಆದರೆ ಹಿಂದಿನ ಕಾಲದಲ್ಲಿ ಯಾರಾದರೂ ಮೃತಪಟ್ಟಿದ್ದು ಅವರು ಯಾವ ತಿಥಿಯಲ್ಲಿ ಮೃತರಾದರು ಎಂದು ತಿಳಿಯದೇ ಇದ್ದರೆ ಅಥವಾ ಹಿಂದೆ ಪೂರ್ವಜರು ಮೃತಪಟ್ಟ ದಿನಾಂಕಗಳು, ತಿಥಿಗಳು ನೆನಪಿರದೇ ಇದ್ದರೆ ಅಂಥವರಿಗೆ ಮಹಾಲಯ ಅಮಾವಾಸ್ಯೆ ಅಥವಾ ಸರ್ವಪಿತೃ ಅಮಾವಾಸ್ಯೆ ದಿನ ಶ್ರಾದ್ಧ ಕರ್ಮ, ಪಿಂಡ, ತರ್ಪಣ ಬಿಡುವುದು ವಾಡಿಕೆ.     ಈ ರೀತಿ ಮಾಡುವವರಿಗೆ ಸರ್ವಪಿತೃಗಳ ಆಶೀರ್ವಾದ ಇರುತ್ತದೆ ಮತ್ತು ಶುಭ ಫಲವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಆದ್ದರಿಂದ ಪ್ರತಿಯೊಬ್ಬ ಮನುಷ್ಯನೂ ವರ್ಷದ ಪ್ರತಿ ಮಹಾಲಯ ಅಮಾವಾಸ್ಯೆಯಂದು ಅಗಲಿದ ಪಿತೃ ದೇವತೆಗಳಿಗೆ ತರ್ಪಣವನ್ನು ಅರ್ಪಿಸಬೇಕು ಎಂಬ ನಂಬಿಕೆ ಮತ್ತು ಆಚರಣೆ ಇದೆ.     ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಅಂತ್ಯ ಮತ್ತು ದುರ್ಗಾ ಪೂಜೆಯ ಆರಂಭವನ್ನು ಸೂಚಿಸುವ ಪವಿತ್ರ ದಿನ.  ದುರ್ಗಾ ದೇವಿ ಭೂಮಿಗೆ ಆಗಮಿಸುವುದನ್ನು ಸಂಕೇತಿಸುವ ಈ ದಿನ ಅತ್ಯಂ...

3491. ಆನಂದಪುರಂ ಹೆಸರಿಗೆ ಕಾರಣ

#ಆನಂದಪುರಂ #ಈ_ಹೆಸರಿಗಿದೆ_ನಾಲ್ಕು_ಶತಮಾನದ_ಇತಿಹಾಸ #ಪ್ರತಿ_ಊರಿನ_ಹೆಸರಿಗೂ_ಇತಿಹಾಸ_ಇದೆ. #ಆನಂದಪುರಂ_ಅಥವ_ಆನಂದಪುರ_ಇದರಲ್ಲಿ_ಸರಿ_ಯಾವುದು? #ಆನಂದಪುರಂ_ಸರಿ #ಆನಂದಪುರ_ಅಪಭ್ರಂಶ #ಗೆಜೆಟಿಯರ್_ರೈಲ್ವೆ_ಮತ್ತು_ಅಂಚೆ_ಇಲಾಖೆಯಲ್ಲಿ_ಆನಂದಪುರಂ #ಪುರಂ_ಪದ_ಮೂಲ_ಹಿಂದಿ_ಮತ್ತು_ಸಂಸ್ಕೃತ_ಮೂಲ #ಪುರಂ_ಎಂದರೆ_ನಗರ_ಪ್ರದೇಶ #ಆನಂದಪುರಂ_ಮೂಲ_ಹೆಸರು_ಯಡೇಹಳ್ಳಿ_ಕೋಟೆ. #Anandapuram #Keladi #Venkatappanayaka #Champakasarassu #Sagar #Shivamogga #Yadehalli #Badarinarayanaiyangar #Karnataka   ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೋಬಳಿ ಕೇಂದ್ರ ಆನಂದಪುರಂ.  #ಆನಂದಪುರಂ ಎಂಬ ಸ್ಟಾತಂತ್ರ್ಯ ಪೂರ್ವದ ಬೋರ್ಡ ಆನಂದಪುರಂ ಕನಕಮ್ಮಾಳ್ ಆಸ್ಪತ್ರೆ ಎದುರು ಇತ್ತು.    18ನೇ ಶತಮಾನದಲ್ಲಿ ಅನೇಕ ದಶಕಗಳ ಕಾಲ ಆನಂದಪುರಂ ತಾಲ್ಲೂಕು ಕೇಂದ್ರ ಆಗಿತ್ತು.     ಸಾಗರ ತಾಲೂಕಿನ ಮೊದಲ ನ್ಯಾಯಾಲಯ ಪ್ರಾರಂಭ ಆಗಿದ್ದು ಆನಂದಪುರಂನಲ್ಲಿ.   ಆನಂದಪುರಂ ರೈಲ್ವೆ ನಿಲ್ದಾಣದ ಬೋರ್ಡ್ ಕೂಡ ಇವತ್ತಿಗೆ ಆನಂದಪುರಂ ರೈಲ್ವೆ ನಿಲ್ದಾಣ ಎಂದೇ ಇದೆ.     ಆನಂದಪುರಂ ಅಂಚೆ ಕೇಂದ್ರ ಕೂಡ ಆನಂದಪುರಂ 577 412 ಆಗಿದೆ.    ಪುರಂ ಎಂದರೆ ವಿಶೇಷವಾಗಿ ರಾಜರ ಜೀವನ ಶೈಲಿ ಪ್ರತಿಬಿಂಬಿಸುತ್ತದೆ ಮತ್ತು ಬೌದ್ಧ, ಪಾಲಿ, ಹಿಂದೂ, ಸಂಸ್ಕೃತ, ಜೈನ, ಪ್ರಾಕೃತ ಪ್ರಾಚೀನ ಭಾರತದ ಇತ...

3490. ಅಮಿತ್ ಕುಮಾರ್

#ಅತ್ಯುತ್ತಮ_ಅಂಕಗಳೊಂದಿಗೆ_ಪದವಿ_ಶಿಕ್ಷಣ_ಪೂರೈಸಿದ #ನಮ್ಮೂರ_ಕಿರಿಯ_ಪತ್ರಕರ್ತ_ಸಾಹಿತಿ #ಅಮಿತ್_ದಾಸಕೊಪ್ಪ_ಇವರಿಗೆ_ಅಭಿನಂದನೆಗಳು #Bachulararts #Amithdasakoppa #Writer #Reporter #Anandapuram    ಅಮಿತ್ ದಾಸಕೊಪ್ಪ ನಮ್ಮ ಊರಿನ ಕಿರಿಯ ಪತ್ರಕರ್ತ ಮತ್ತು ಸಾಹಿತಿ, ಈಗಾಗಲೇ ಇವರು ನೂರಕ್ಕೂ ಹೆಚ್ಚು ಕವನಗಳನ್ನ ಬರೆದಿದ್ದಾರೆ ಅನೇಕ ವೈಚಾರಿಕ ಲೇಖನ ಪ್ರಕಟಿಸಿದ್ದಾರೆ.    ಅನೇಕ ಪತ್ರಿಕೆಗಳಿಗೆ ಪ್ರಿಲ್ಯಾನ್ಸ್ ವರದಿಗಾರರಾಗಿದ್ದಾರೆ, ಇವರದೇ #Amith_Times ಎಂಬ ನ್ಯೂಸ್ ವೆಬ್ ಚಾನಲ್ ಇದೆ, ಜಿಲ್ಲಾ ಪತ್ರಿಕೆ #ಎಚ್ಚರಿಕೆ ದಿನಪತ್ರಿಕೆ ವರದಿಗಾರರಾಗಿದ್ದಾರೆ ಮತ್ತು #ಹಾಯ್_ಬೆಂಗಳೂರು ಪತ್ರಿಕೆ ವಿತರಕರಾಗಿದ್ದಾರೆ.   ಆಯ್ದ ಪುಸ್ತಕಗಳನ್ನ ಹುಡುಕಿ ಓದುತ್ತಾರೆ ನನ್ನ ಸಂಗ್ರಹದ ಪುಸ್ತಕ ಒಯ್ದು ಓದಿ ವಾಪಾಸು ಮಾಡಿ ಅದರ ತಿರಳು ಚರ್ಚಿಸುತ್ತಾರೆ ಇವರ ಈ ಹವ್ಯಾಸ ನನಗೆ ಇವರ ಬಗ್ಗೆ ವಿಶೇಷ ಅಭಿಮಾನಕ್ಕೆ ಕಾರಣ.    ಚಿಕ್ಕವನಿದ್ದಾಗಲೇ ತಂದೆ ಆತ್ಮಹತ್ಯೆ ನಂತರ ಕುಟುಂಬದ ಆರ್ಥಿಕ ಸಂಕಷ್ಟಗಳು - ಅವಮಾನಗಳು ಈ ಯುವಕನಿಗೆ ಪರಿಸ್ಥಿತಿ ಎದುರಿಸುವ ಛಲಗಾರಿಕೆ ನೀಡಿದೆ.   ತಮ್ಮ BA ವ್ಯಾಸಂಗದ ಜೊತೆ ಇದೆಲ್ಲ ಇವರ ಹವ್ಯಾಸ ಆಗಿತ್ತು, ಈ ಹವ್ಯಾಸಗಳು ಇವರ ಓದಿಗೆ ಯಾವುದೇ ಅಡೆ ತಡೆ ಆಗಲಿಲ್ಲ ಅನ್ನುವುದಕ್ಕೆ ಮೊನ್ನೆ ಇವರ ಬಿ.ಎ. ಪದವಿ ಅಂಕ ಪಟ್ಟಿ ಸಾಕ್ಷಿ ಆಗಿದೆ.   ಈಗ ಜರ...

3489. ಶರಾವತಿ ಕೊಳ್ಳದಲ್ಲಿ

#ಹದಿನೆಂಟು_ಸಾವಿರ_ಟನ್_ಬ್ಲಾಸ್ಟಿಂಗ್_ಶರಾವತಿ_ಕೊಳ್ಳದಲ್ಲಿ_ಸ್ಟೋಟವಾಗಲಿದೆ #ಟೆಂಡರ್_ಹಿಡಿದ_ಕಂಪನಿ_1100_ಕೋಟಿ_ರಾಜಕೀಯ_ಪಕ್ಷಕ್ಕೆ_ಎಲೆಕ್ಟ್ರೋಲ್_ಬಾಂಡ್_ದೇಣಿಗೆ #ಶರಾವತಿ_ಪಂಪ್ಡ್_ಸ್ಟೋರೇಜ್_ವಿದ್ಯುತ್_ಯೋಜನೆ #ಗೇರುಸೊಪ್ಪೆಯ_ಜನಾಭಿಪ್ರಾಯದ_ಸಭೆಯಲ್ಲಿ #ಗೇರುಸೊಪ್ಪೆ_ಆಂಜನೆಯ_ದೇವಾಲಯದ_ಮಾರುತಿ_ಗುರೂಜಿ_ಮಾತುಗಳು #ಸಮಸ್ತ_ಪಶ್ಚಿಮ_ಘಟ್ಟದ_ಧ್ವನಿ #ಅವರ_ಧ್ವನಿ_ಪ್ರತಿಧ್ವನಿಯಾಗಿ_ವೈರಲ್_ಆಗಿದೆ. #Sharavathi #Pumpedstorage #Project #Gerusoppe #Maruthiguruji #Uttarakannadadistrict #Shivamogga #Govtofkarnataka #Govtofindia   ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಈ ಕಾಮಗಾರಿಗೆ ಬರೋಬ್ಬರಿ 18,000 ಟನ್ ಬ್ಲಾಸ್ಟಿಂಗ್ ಮೆಟೀರಿಯಲ್ ಸ್ಪೋಟಿಸಲಿದೆ...   2006ರಲ್ಲಿ ಈ ಪ್ರಾಜೆಕ್ಟ್ ಅಂದಾಜು ವೆಚ್ಚ ನಾಲ್ಕು ಸಾವಿರ ಕೋಟಿ ಈಗ 2025 ರಲ್ಲಿ 11 ಸಾವಿರ ಕೋಟಿ ಪ್ರಾಜೆಕ್ಟ್, ಮುಕ್ತಾಯವಾಗುವಾಗ ಎಷ್ಟೊ....    ಶರಾವತಿ ಸ್ಟೋರೇಜ್ ಪ್ರಾಜೆಕ್ಟ್ ಬಗ್ಗೆ ಈಗಾಗಲೇ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಗಲ್, ಉತ್ತರ ಕನ್ನಡ ಜಿಲ್ಲೆಯ ಕುಮುಟಾ,ಹೊನ್ನಾವರ ಮತ್ತು ಗೇರುಸೊಪ್ಪೆ ಭಾಗದಲ್ಲಿ ಜನ ಸಂಪರ್ಕ ಸಭೆಗಳನ್ನು ರಾಜ್ಯ ಸರ್ಕಾರ ನಡೆಸಿದೆ.    ಮೊನ್ನೆ ಗೇರುಸೊಪ್ಪೆಯಲ್ಲಿ #ಶರಾವತಿ_ಪಂಪ್ಡ್_ಸ್ಟೋರೇಜ್ ಯೋಜನೆ ಜನ ಸಂಪರ್ಕ ಸಭೆಯಲ್ಲಿ ಸುತ್ತಮುತ್ತಲಿನ 10,000ಕ್ಕೂ ಹ...

3488. ಕುಂದಾದ್ರಿ ಪರ್ವತ ಜೈನರ ಪವಿತ್ರ ಸ್ಥಳ

#ಕುಂದಾದ್ರಿ #ಇಲ್ಲಿಂದ_360_ಡಿಗ್ರಿಯಲ್ಲಿ_ಪಶ್ಚಿಮ_ಘಟ್ಟದ_ಸುಂದರ_ದೃಶ್ಯ #ಸೂರ್ಯೋದಯ_ಸೂರ್ಯಾಸ್ತ_ವೀಕ್ಷಣೆ #ಕ್ಷಣ_ಕ್ಷಣಕ್ಕೂ_ಬದಲಾಗುವ_ದೃಶ್ಯಗಳು #ಕುವೆಂಪು_ಕುಂದಾದ್ರಿಗೆ_ಚಾರಣ_ಮಾಡಿದ್ದನ್ನ_ಬರೆದಿದ್ದಾರೆ. #ಕು೦ದಾದ್ರಿ_ಎಂಬ_ಸುಂದರ_ಪವ೯ತ_ಕುOದಾದ್ರಿ_ಬೆಟ್ಟ. #ಶಿವಮೊಗ್ಗ_ಜಿಲ್ಲೆಯ_ತೀರ್ಥಳ್ಳಿ_ತಾಲ್ಲೂಕಿನಲ್ಲಿದೆ #ತೀರ್ಥಹಳ್ಳಿ_ಆಗುಂಬೆ_ಮಾರ್ಗದಲ್ಲಿದೆ #kundadrihills #thirthahalli #augumbe #jainism    ಶಿವಮೊಗ್ಗದಿಂದ 80 ಕಿಮಿ ದೂರದಲ್ಲಿದೆ ಕುಂದಾದ್ರಿ ಹಿಲ್ಸ್ ಇದು ಸಮುದ್ರ ಮಟ್ಟದಿಂದ 826 ಮೀಟರ್ ಅಥವ 2783 ಅಡಿ  ಎತ್ತರದಲ್ಲಿದೆ.   ಇಲ್ಲಿಂದ ಪಶ್ಚಿಮ ಘಟ್ಟದ ಸುಂದರವಾದ ವಿಹಂಗಮ ದೃಶ್ಯ, ಸೂರ್ಯೋದಯ ಸೂರ್ಯಾಸ್ತ 360 ಡಿಗ್ರಿ ಕೋನದಲ್ಲಿ ವೀಕ್ಷಿಸಲು ಇಲ್ಲಿಗೆ ಹೆಚ್ಚು ಪ್ರವಾಸಿಗಳು ಬರುತ್ತಾರೆ.    ಒಂದು ವಿಶೇಷ ಅಂದರೆ ಪ್ರತಿ ಕ್ಷಣವೂ ಇಲ್ಲಿಂದ ಕಾಣುವ ದೃಶ್ಯ ನಿತ್ಯನೂತನ, ಮಳೆಗಾಲ - ಚಳಿಗಾಲ - ಬೇಸಿಗೆ - ಬೆಳಿಗ್ಗೆ - ಮದ್ಯಾಹ್ನ - ಸಂಜೆ ಕ್ಷಣ ಕ್ಷಣದ ಬದಲಾಗುತ್ತಿರುವ ದೃಶ್ಯ ವಿಶೇಷ.     ಮಳೆಗಾಲದ ಬೆಳಿಗ್ಗೆ ಮೋಡಗಳು ಕುಂದಾದ್ರಿಯ ಕೆಳಗೆ ಸಾಗುವ ದೃಶ್ಯ ರೋಮಾಂಚಕಾರಿ, ಇಲ್ಲಿಂದ ಶೃಂಗೇರಿ ಭಾಗದಿಂದ ಹರಿದು ಬರುವ ತುಂಗೆ ಕಾಣುತ್ತಾಳೆ ತಿರುಗಿದರೆ ವರಾಹಿಯೂ ಘೋಚರಿಸುತ್ತಾಳೆ.     ಕೆಳಗಿನಿಂದ ಚಾರಣ ಮಾಡಿದರೆ ಮೂರು ಗಂಟೆ ಕಾಲ ಬೇಕು ಇಲ್ಲ...

3487. ಕುಂದಾದ್ರಿ

#ಕುಂದಾದ್ರಿ_ಬೆಟ್ಟದಲ್ಲಿ #ಕ್ಷಣಕ್ಕೊಂದು_ದೃಶ್ಯ #Shivamogga #Thirthahalli #agumbe ##Malenadu #westernghats #Kundadrihillstation    ಮಳೆಗಾಲದಲ್ಲಿ.... ಲೊಕೇಶನ್ ಕಾಮೆಂಟ್ ನಲ್ಲಿದೆ.

3486. ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆ

#ಯಾರು_ಇದು_ಶೀಜಾ_ಚಕ್ರವರ್ತಿ. #ಏನಿದು_ಇವರ_LEAF_ಸಂಸ್ಥೆ?. #ದಿನಾಂಕ_18_ಸೆಪ್ಟೆಂಬರ್_2025ರಲ್ಲಿ_ಗೇರುಸೊಪ್ಪೆಯಲ್ಲಿ_ನಡೆದ #ಶರಾವತಿ_ಪಂಪ್ಡ್_ಸ್ಟೋರೇಜ್_ಯೋಜನೆಯ_ಜನಸಂಪರ್ಕ_ಸಭೆಯಲ್ಲಿ_ಇವರ_ವಾದ_ಏನು?. #LEAFನ_ಮೂಲ_ತತ್ವವೆಂದರೆ_ಮೊಕದ್ದಮೆ_ಕೊನೆಯ_ಉಪಾಯವಾಗಿರಬೇಕು. #LEAF #Sheejachakraborty #Gerusoppa #Karnataka #Environment #Karnatakapowercorporation #Govtofkarnataka #Govtofindia    ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುಮೊದನೆಯೊಂದಿಗೆ ಸುಮಾರು ಎಂಟು ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಯೋಜನೆ ಟೆಂಡರ್ ಪ್ರಕ್ರಿಯೆ ಮುಗಿದಿದೆ.   ಈ ಯೋಜನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ್ ಫಾಲ್ಸ್ ನಂತರದ AB ಸೈಟ್ ಹತ್ತಿರ ಶರಾವತಿ ಕೊಳ್ಳದಲ್ಲಿ ವಿದ್ಯುತ್ ಉತ್ಪಾದನೆ ನಂತರ ಹರಿಯುವ ನೀರನ್ನು ಬೃಹತ್ ವಿದ್ಯುತ್ ಮೋಟಾರುಗಳಿಂದ ಟನಲ್ ಮುಖಾಂತರ ತಲಕಳಲೆ ಆಣೆಕಟ್ಟಿನಲ್ಲಿ ಸಂಗ್ರಹಿಸಿ ಇನ್ನೊಂದು ಟನಲ್ ಮುಖಾಂತರ ನೀರು ಹಾಯಿಸಿ 2000 ಮೆಗಾ ವಾಟ್ಸ ವಿದ್ಯುತ್ ಉತ್ಪಾದನೆಯ ಯೋಜನೆ ಆಗಿದೆ.    ಪಶ್ಚಿಮ ಘಟ್ಟ ಪ್ರದೇಶದಲ್ಲಿ ಇಂತಹ ಯೋಜನೆಗಳನ್ನು ಜಾರಿ ಮಾಡ ಬಾರದೆಂದು ಪರಿಸರ ವಾದಿಗಳು ಹೋರಾಡುತ್ತಿದ್ದಾರೆ.    ಈ ಬಗ್ಗೆ ಈ ಪ್ರದೇಶದ ಜನರ ಅಹವಾಲು ಸ್ವೀಕಾರ ಮಾಡಲು ಸರ್ಕಾರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ...

3485. ಕುಂದಾದ್ರಿಬೆಟ್ಟ

#ಕುಂದಾದ್ರಿ_ಬೆಟ್ಟ #ಕ್ಷಣಕ್ಕೊಂದು_ದೃಶ್ಯ #Kundadrihillstation #Thirthahalli #Agumbe #Shivamogga #Malenadu #westernghatsofkarnataka    ಚಳಿಗಾಲದಲ್ಲಿ... ಲೊಕೇಶನ್ ಕಾಮೆಂಟ್ ನಲ್ಲಿದೆ.

3484. ದಿನೇಶ್ ಶಿರವಾಳ

ದಿನೇಶ್ ಶಿರವಾಳ ಉದಯೋನ್ಮುಖ ರೈತ ನಾಯಕ   ನಮ್ಮ ತಾಲ್ಲೂಕಿನಲ್ಲಿ ಸ್ಥಾಪಿತವಾದ ರೈತ ಸಂಘ ಮತ್ತು ಇದರ ನಾಯಕ ದಿನೇಶ್ ಶಿರವಾಳ ಈಗ ರಾಜ್ಯದಾದ್ಯಂತ ಲೈಮ್ ಲೈಟ್ ನಲ್ಲಿ ಎದ್ದು ಕಾಣುತ್ತಿದ್ದಾರೆ ಕಾರಣ ಅವರು ದಿನಾಂಕ 21-ಅಕ್ಟೋಬರ್ -2024 ರಿಂದ ಪ್ರಾರಂಬಿಸಿದ ಮಲೆನಾಡು ರೈತರ ಆಕ್ರೋಶ ಆಗಿರುವ ಮುುಳುಗಡೆ ಸಂತ್ರಸ್ಥರ, ಅರಣ್ಯ ಭೂಮಿ ಮತ್ತು ಬಗರ್ ಹುಕುಂ ಹೋರಾಟ ಅನೇಕ ಹೊರ ಜಿಲ್ಲೆಯ ಗೆಳೆಯರು ಇವರ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ ಅವರಿಗಾಗಿ ನಾನು ಈ ಹಿಂದೆ ಬರೆದ ಪೋಸ್ಟ್ (17 - ಡಿಸೆಂಬರ್-2022) ಅಲ್ಪ ಸ್ವಲ್ಪ ತಿದ್ದುಪಡಿಯೊಂದಿಗೆ ಮಾಹಿತಿಗಾಗಿ ಇಲ್ಲಿದೆ. #malenadu #westernghatsofindia #westernghat   #FarmersProtest #shivamogga #ShivamoggaNews #jogfalls #kargal #sharavathiriver #damsofindia  ಸಾಗರದ_ಹೋರಾಟದಲ್ಲಿ_ಹೊಸ_ಚಿಂತನೆಯ_ಹೋರಾಟಗಾರರಾದ ದಿನೇಶ್_ಶಿರವಾಳ_ಮತ್ತು_ಕೆಳದಿ_ರಮೇಶ್_ನಿನ್ನೆ_ಬಂದಿದ್ದರು. ಕಾಗೋಡು_ಹೋರಾಟದ_ರೂವಾರಿ_ಹೆಚ್_ಗಣಪತಿಯಪ್ಪರು_1_ಜನವರಿ_1948ರಲ್ಲಿ_ಸ್ಥಾಪಿಸಿದ್ದ ರೈತಸಂಘ_ಮರು_ಸ್ಥಾಪಿಸಿದ್ದಾರೆ. ಶ್ರಮಜೀವಿ_ಕೃಷಿಕ_ವಾಘ್ಮಿ_ಸಂಘಟನ_ಚತುರ_ಯುವ_ಪಡೆ_ಇವರದ್ದು. https://youtu.be/0qhIfPHSBGs   ಸುಮಾರು 75 ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಪ್ರಸಿದ್ಧ ನಾಯಕರಾದ ಕಡಿದಾಳು ಮಂಜಪ್ಪ ಗೌಡರ ನೇ...

3483. ಕಾಡಾನೆಗಳು

#ಮಲೆನಾಡಿನಲ್ಲಿ_ಕಾಡಾನೆಗಳು_ಲಗ್ಗೆ_ಹಾಕುತ್ತಿರುವುದೇಕೆ? #ಶತಮಾನಗಳ_ನಂತರ_ಕಾಡಾನೆಗಳು. #ಕೊಪ್ಪ_ಶೃಂಗೇರಿಯಲ್ಲಿ_ಪ್ರತ್ಯಕ್ಷವಾದ_ಜೋಡಿ_ಕಾಡಾನೆ. #ಪ್ರತಿ_ವರ್ಷ_ಆಗುಂಬೆಗೆ_ಬರುವ_ಒಂಟೆ_ಕಾಡಾನೆ. #ಆನಂದಪುರಂ_ಭಾಗಕ್ಕೆ_ಪ್ರತಿ_ವರ್ಷ_ಬರುತ್ತಿರುವ_ಕಾಡಾನೆಗಳು #ವಿಜಯನಗರ_ಸಾಮ್ರಾಜ್ಯದ_ಅರಸು_ಪ್ರೌಡ_ಪ್ರತಾಪರಾಯನಿಗೆ #ಗಜಬೇಂಟೆಗಾರ_ಎಂಬ_ಬಿರುದು_ಬರಲು_ಕಾರಣ #ಹದಿನಾಲ್ಕನೇ_ಶತಮಾನದಲ್ಲಿ_ಅವರು_ಆರಗದ_ದಟ್ಟ_ಅರಣ್ಯದಲ್ಲಿ #ಕಾಡಾನೆ_ಹಿಡಿದು_ಪಳಗಿಸಿ_ತಮ್ಮ_ಸೇನೆಗೆ_ಸೇರಿಸುತ್ತಿದ್ದರು. #wildlifeplanet #agumbe #thirthahalli #ShivamoggaNews #wildelephants  ಶಿವಮೊಗ್ಗ ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿ ಇವತ್ತಿಗೂ ಕಾಡಾನೆಗಳು ಮತ್ತು ಅವುಗಳ ಕಾರಿಡಾರ್ ಇದೆ.      ಶರಾವತಿ ಅಭಯಾರಣ್ಯದಲ್ಲಿ ಶರಾವತಿ ನದಿಗೆ ಆಣೆಕಟ್ಟು ಕಟ್ಟಿದ ನಂತರ ಕಾಡಾನೆಗಳು ಈ ಭಾಗದಲ್ಲಿ ಇರಲಿಲ್ಲ.    ಆದರೆ ಒಂದು ಒಂಟಿ ಸಲಗ ತೀರ್ಥಹಳ್ಳಿಯ ಆಗು೦ಬೆ ಭಾಗದಲ್ಲಿ ಪ್ರತಿ ವರ್ಷ ನಿಗದಿತ ಸಮಯದಲ್ಲಿ ಜನವಸತಿ ಕೇಂದ್ರಗಳಲ್ಲಿ ಕಾಣಿಸುಕೊಳ್ಳುತ್ತಾ ಆ ಭಾಗದಲ್ಲಿನ ಜನರಲ್ಲಿ ಭಯ - ಆತಂಕ ಸೃಷ್ಟಿಸಿದೆ.    ಇದೇ ಆನೆ ಕೆಲವು ವರ್ಷದ ಹಿಂದೆ ಸಾಗರ ತಾಲ್ಲೂಕಿನ ಆವಿನಳ್ಳಿ ಸಮೀಪದ #ಗಿಣಿವಾರ ಎಂಬ ಗ್ರಾಮದಲ್ಲಿ ಈ ಆನೆ ಕಾಣಿಸಿಕೊಂಡಾಗ ಗ್ರಾಮಸ್ಥರೆಲ್ಲ ಒಂದು ರಾತ್ರಿ  ಕಾಡಾನೆಯ ಉಪಟಳ ನಿವಾರಿಸಲು ಸಭೆ ಆಯೋಜ...

3482. ದರ್ಬೆ ಹುಲ್ಲಿನ ಮಾಹಿತಿ

#ದರ್ಬೆ_ಹುಲ್ಲು #ಧಾರ್ಮಿಕ_ಆಚರಣೆಯಲ್ಲಿ_ಬಳಕೆ #ಹಿಂದೂ_ಬೌದ್ದ_ಜೈನ_ಧರ್ಮಿಯರಲ್ಲಿ_ಪವಿತ್ರವೆಂದು_ಪರಿಗಣಿಸಿದ್ದಾರೆ. #ವೇದ_ಕಾಲದಿಂದಲೂ_ಶ್ರೀಕೃಷ್ಣ_ಭಗವದ್ಗೀತೆಯಲ್ಲಿ_ದರ್ಬೆ_ಉಲ್ಲೇಖವಿದೆ. #ದ್ಯಾನಕ್ಕೆ_ಆಸನವಾಗಿ_ಪೂಜಾಕಾರ್ಯಗಳಲ್ಲಿ_ಆಯುರ್ವೇದದಲ್ಲಿಯೂ_ದರ್ಬೆ_ಬಳಕೆ. #Dharbe #Hindu #Buddist #Jainism #Bhagavadgeetha #Religion Yaga #Homa    ಪೂಜಾ ಕಾರ್ಯಕ್ರಮಗಳಲ್ಲಿ ಪುರೋಹಿತರು ಬರೆಸುವ ಪೂಜಾ ಸಾಮಾಗ್ರಿ ಪಟ್ಟಿಯಲ್ಲಿ ಹಣ್ಣು-ಕಾಯಿ - ಅರಿಶಿಣ-ಕುಂಕುಮಗಳ ಜೊತೆ ಈ #ದರ್ಬೆ_ಹುಲ್ಲು ಕಡ್ಡಾಯವಾಗಿ ಬರೆದಿರುತ್ತಾರೆ.   ದರ್ಬೆಯ ಉಂಗುರವನ್ನು ಸಾಮಾನ್ಯವಾಗಿ ಕುಶದ ಉಂಗುರ ಅಥವಾ ದರ್ಬೆಯ ಉಂಗುರ ಎಂದೇ ಕರೆಯುತ್ತಾರೆ.  ಇದು ವಾತಾವರಣದ ದುಷ್ಟ ಶಕ್ತಿಗಳನ್ನು ನಿಯಂತ್ರಿಸುವ ಪವಿತ್ರ ಶಕ್ತಿಯನ್ನು ಹೊಂದಿರುವುದರಿಂದ ಪೂಜೆಗಳು ಮತ್ತು ಯಜ್ಞಗಳಲ್ಲಿ ಬಳಸಲ್ಪಡುತ್ತದೆ.      ದರ್ಭೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ....     ದರ್ಬೆ ಹುಲ್ಲು, ವೈಜ್ಞಾನಿಕವಾಗಿ ಡೆಸ್ಮೊಸ್ಟ್ಯಾಕಿಯ ಬೈಪಿನೇಟ (Desmostachya bipinnata) ಎಂದು ಕರೆಯಲ್ಪಡುತ್ತದೆ, ಇದು ಭಾರತದಾದ್ಯಂತ ಬೆಳೆಯುವ ಒಂದು ಬಹುವಾರ್ಷಿಕ ಹುಲ್ಲು.    ಇದು ಧಾರ್ಮಿಕ, ಆಧ್ಯಾತ್ಮಿಕ ಮತ್ತು ಔಷಧೀಯ ಮಹತ್ವವನ್ನು ಹೊಂದಿದೆ. ಹಿಂದೂ, ಬೌದ್ಧ ಮತ್ತು ಜೈನ ಸಂಪ್ರದಾಯಗಳಲ್ಲಿ ಪವಿತ್ರವೆಂದು ...

3481. ಪಡಿತರ ಅಕ್ಕಿ ವರ್ಸಸ್ ಸೋನಾ ಮಸೂರಿ ಅಕ್ಕಿ

#ಅನ್ನಬಾಗ್ಯ_ಅಕ್ಕಿ_ವರ್ಸಸ್_ಸೋನಾಮಸೂರಿ_ಅಕ್ಕಿ #ವಿಬಿನ್ನ_ಮನಸ್ಥಿತಿಯ_ಅಂತಸ್ಥಿನ_ಸ್ಥಾನಮಾನ #ಅನ್ನಭಾಗ್ಯದ_ಅಕ್ಕಿಯಿಂದ_ಜನ_ಸೋಮಾರಿಗಳಾಗುತ್ತಾರೆ_ಎನ್ನುವವರೂ_ಇದ್ದಾರೆ #ಸೊಸೈಟಿ_ಅಕ್ಕಿ_ತಿನ್ನುವುದಿಲ್ಲ_ಎನ್ನುವುದು_ದೊಡ್ಡಸ್ಥಿಕೆ. #Rice #Sonamasoori #Annabhagya     ನುಚ್ಚಕ್ಕಿ - ನೆಲ್ಲಕ್ಕಿ - ಮುಗ್ಗುಲಕ್ಕಿಗಳಿಗೆಲ್ಲ ಒಂದು ಕಾಲದಲ್ಲಿ ಬೇದವಿರಲಿಲ್ಲ ಅಂತಹ ಎಲ್ಲಾ ಅನ್ನ ತಿಂದೇ  ದೊಡ್ಡವರಾಗಿದ್ದು ನಾನು ಮರೆತಿಲ್ಲ. #ಅನ್ನ_ದೇವರ_ಮುಂದೆ_ಅನ್ಯ_ದೇವರಿಲ್ಲ ಎಂಬ ಸರ್ವಜ್ಞ ವಚನ ಜನ ಮನದಲ್ಲಿತ್ತು.    ಈಗ ಮೇಲಿನ ಅಕ್ಕಿ ಬಿಡಿ, ಸೊಸೈಟಿ ಅಕ್ಕಿ ಎಂಬ ಅನ್ವರ್ಥ ನಾಮದ ಅನ್ನ ಭಾಗ್ಯದ ಅಕ್ಕಿ ಅಂದರೆ ಮೂಗು ಮುರಿಯುವ ಜನರ ಕಾಲ ಇದಾಗಿದೆ.    ಅನ್ನಭಾಗ್ಯದಿಂದ ಸೋಮಾರಿಗಳು ಸೃಷ್ಟಿ ಆಗುತ್ತಾರೆ ಅಂತ ಒಬ್ಬ ಮಠದ ಸ್ವಾಮಿಯ ಹೇಳಿಕೆ ನೋಡಿದೆ ಆತ ಸರ್ಕಾರದಿಂದ ನೂರಾರು ಕೋಟಿ ರೂಪಾಯಿ ಪಡೆಯುವ  ಹೈಟೆಕ್ ಬಿಪಿಎಲ್ ಕಾರ್ಡ್ ದಾರ.   ದಿನಕ್ಕೆ 150 ರೂಪಾಯಿಗಿಂತ ಕಡಿಮೆ ಆದಾಯದವರು ಬಡತನ ರೇಖೆಗಿಂತ ಕೆಳಗಿನವರೆಂಬ ಮಾನದಂಡದಲ್ಲಿ ಭಾರತದಲ್ಲಿ ಶೇಕಡಾ 12.4% ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪಡಿತರ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳಿದೆ ಇದಕ್ಕಾಗಿ ಆ ಕುಟುಂಬಗಳಿಗೆ ಬಿ.ಪಿ.ಎಲ್ ಕಾರ್ಡ್ ಗಳನ್ನು ವಿತರಿಸುತ್ತಾರೆ.     #ಅನ್ನ_ಬಾಗ್ಯ ...