#ಸಾಗರದ_ಛಾಯಾ_ಹೋಟೆಲ್_ಬೀಮಣ್ಣರ_ಬಗ್ಗೆ #ಮಾಜಿ_ಶಾಸಕರಾದ_ಬಿ_ಸ್ವಾಮಿರಾವ್_ಆತ್ಮ_ಚರಿತ್ರೆ #ನಾನು_ಹೇಳುವುದೆಲ್ಲಾ_ಸತ್ಯ_ಪುಸ್ತಕದಲ್ಲಿ_ಉಲ್ಲೇಖಿಸಿದ್ದಾರೆ. #ಪ್ರಚಂಡ_ವಾಗ್ಮಿ_ಅಭಿನವ_ಚಾಣಕ್ಯ_ಅವರು ಸಾಗರ ಸೀಮೆಯಲ್ಲಿ #ಛಾಯಾ_ಹೋಟೆಲ್_ಬೀಮಣ್ಣ ಎಂದರೆ ಯಾರೂ ಗೊತ್ತಿಲ್ಲ ಅನ್ನುವುದಿಲ್ಲ ಈಗ ಅವರ ಪ್ರಖ್ಯಾತಿಗೆ ಕಾರಣ ಆಗಿದ್ದ ಸಾಗರದ ಮಾರಿಕಾಂಬಾ ದೇಗುಲ ದ ಹಿಂಬಾಗದ ಛಾಯಾ ಹೋಟೆಲ್ ಇಲ್ಲ ಆದರೆ ಅಗ್ರಹಾರದಲ್ಲಿ ಅವರ #ವರದಶ್ರೀ_ಲಾಡ್ಜ್ ಪ್ರಖ್ಯಾತವಾಗಿದೆ ಅವರ ಪುತ್ರರಾದ ಕವಲಕೋಡು ವೆಂಕಟೇಶ್ ಮತ್ತು ಪ್ರಸಾದ್ ನೋಡಿಕೊಳ್ಳುತ್ತಾರೆ. ಹೊಸನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಿ. ಸ್ವಾಮಿ ರಾವ್ ಅವರ ಆತ್ಮವೃತ್ತಾಂತ #ನಾನು_ಹೇಳುವುದೆಲ್ಲಾ_ಸತ್ಯ ಹೊಸನಗರದ ಪತ್ರಕರ್ತ ಶ್ರೀಕಂಠ ಬರೆದಿದ್ದಾರೆ (ಪುಸ್ತಕ ಬೇಕಾದವರು ಅವರ ಫೋನ್ ನಂಬರ್ 9483016851 ಸಂಪರ್ಕಿಸಬಹುದು) ಅದರಲ್ಲಿ ಪುಟ ಸಂಖ್ಯೆ 20 ಮತ್ತು 21 ರಲ್ಲಿ #ಮೊದಲ_ಚುನಾವಣಾ_ಸ್ಪರ್ಧೆ ಅಧ್ಯಾಯದಲ್ಲಿ ಬೀಮಣ್ಣರ ಉಲ್ಲೇಖ ಮಾಡಿದ್ದಾರೆ... 1962ರಲ್ಲಿ ಬಿ. ಸ್ವಾಮಿ ರಾವ್ ಹೊಸನಗರ ವಿಧಾನ ಸಭಾ ಕ್ಷೇತ್ರದಿಂದ ಸ್ವತಂತ್ರ್ಯ ಅಭ್ಯರ್ಥಿ ಆಗಿ ಸ್ಪರ್ಧಿಸಿದಾಗ ಬೀಮನಕೋಣೆ ವಾಸಿ ಬೀಮಣ್ಣ ಅವರ ಪೋರ್ಡ್ ಕಾರ್ ಬಾಡಿಗೆಗೆ ಪಡೆದಿದ್ದರಂತೆ ಅದಕ್ಕೆ ಬೀಮಣ್ಣರೇ ಚಾಲಕರು. " ಅಂದು ಕ್ಷೇತ್ರದಾದ್ಯಂತ ತನ್ನ ಪರವಾಗಿ ಬ...