Skip to main content

Posts

Showing posts from 2025

3510. ಡಾಕ್ಟರ್ ಶಂಕರ್ ಲಾಲ್ ಗಾರ್ಗ್ ಇಂದೋರ್

#ಶಿವಮೊಗ್ಗ_ಜಿಲ್ಲೆಯ_ಈ_ರಾಷ್ಟ್ರೀಯ_ಪ್ರಶಸ್ತಿ #ಪ್ರತಿ_ವರ್ಷ_ನವರಾತ್ರಿಯಲ್ಲಿ #ಒಂದು_ಲಕ್ಷ_ನಗದು_ಮತ್ತು_ಪಾರಿತೋಷಕ #ಶಿವಮೊಗ್ಗದ_ಪತ್ರಕರ್ತ_ಸಿದ್ದಪ್ಪರ_ದೊಡ್ಡಮ್ಮ_ದೇವಿ_ಚಾರಿಟೇಬಲ್_ಟ್ರಸ್ಟ್_ನಿಂದ. #ಮೂರನೇ_ವರ್ಷದ_ಪ್ರಶಸ್ತಿ_ಮಧ್ಯಪ್ರದೇಶದ_ಡಾಕ್ಟರ್_ಶಂಕರ್_ಲಾಲ್_ಗರ್ಗ್_ಅವರಿಗೆ. #ಈ_ಪ್ರಶಸ್ತಿ_ಆಯ್ಕೆ_ಸಮಿತಿ_ಅಧ್ಯಕ್ಷರು_ಸುಂದರ್_ರಾಜ್ #ಇವರಿಬ್ಬರೂ_ನನ್ನ_ಅತಿಥಿಗಳು #shivamogga #siddappa #press #doddammacharitabletrust #nationalaward #sunderraj #karnatakasanga #Drshankarlalgarge #idore #MP     ಪ್ರತಿ ವರ್ಷ ಶಿವಮೊಗ್ಗದ #ದೊಡ್ಡಮ್ಮ_ದೇವಿ_ಚಾರಿಟೇಬಲ್_ಟ್ರಸ್ಟ್ ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಕಳೆದ ಮೂರು ವರ್ಷದಿಂದ ನೀಡುತ್ತಿದೆ.     ಈ ಪ್ರಶಸ್ತಿ ಒಂದು ಲಕ್ಷ ರೂಪಾಯಿ ನಗದು ಮತ್ತು ಪಾರಿತೋಷಕ ಇರುತ್ತದೆ.     ಈ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಪ್ರತಿಭಾವಂತರ ಸಮಿತಿ ಇದೆ ಈ ಆಯ್ಕೆ ಸಮಿತಿ ಅಧ್ಯಕ್ಷರು #ಎಂ_ಎನ್_ಸುಂದರ್_ರಾಜ್ ಇವರು ಶಿವಮೊಗ್ಗದ ಪ್ರತಿಷ್ಠಿತ #ಕರ್ನಾಟಕ_ಸಂಘದ ಮಾಜಿ ಅಧ್ಯಕ್ಷರು ಮತ್ತು ಸಾಹಿತಿಗಳು.     ಈ ವರ್ಷದ ರಾಷ್ಟ್ರೀಯ ಪ್ರಶಸ್ತಿ ಮಧ್ಯಪ್ರದೇಶದ ಇಂದೋರಿನ ಡಾಕ್ಟರ್ #ಶಂಕರ್_ಲಾಲ್_ಗರ್ಗೆ ಅವರನ್ನ ಪ್ರಶಸ್ತಿ ಸಮಿತಿ ಆಯ್ಕೆ ಮಾಡಿದೆ.    ಇವರು ಇಂದೋರ್ ಸಮೀಪದ #ಕೇಶರ್_ಪರ್ವತ ಪ್ರದೇಶದಲ...

3509. ನನ್ನ ಅತಿಥಿಗಳು

#ನನ್ನ_ಅತಿಥಿಗಳು #ಇತಿಹಾಸ_ಸಂಶೋದಕರು #myguest #historian #radio #sudeendra #dilipnadig     ಶಿವಮೊಗ್ಗದಿಂದ ಸಾಗರ ತಾಲೂಕಿನ ಇಕ್ಕೇರಿ ಅಘೋರೇಶ್ವರ ದೇವಾಲಯ ಮತ್ತು ಕಲ್ಸೆ ದೇವಾಲಯಗಳ ಶಿಲ್ಪ ರಚನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹೋಗಿ ವಾಪಾಸು ಬರುವಾಗ ಇವರೆಲ್ಲ ನನ್ನ ಕಛೇರಿಗೆ ಬಂದಿದ್ದರು.    ಇತಿಹಾಸ ಸಂಶೋಧಕರಾದ #ದಿಲೀಪ್_ನಾಡಿಗ್, ಆಕಾಶವಾಣಿಯ ನಿವೃತ್ತ ಕ್ರಿಯಾಶೀಲ ಅಧಿಕಾರಿ #ಸುದೀಂದ್ರ , ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಯೋಜನ ವಿಭಾಗ #ಶಂಕರಮಿತ್ರ #ಡಾ_ಚಂದ್ರಕಾಂತ್.ವೈದ್ಯಾಧಿಕಾರಿಗಳು ಶಿಕಾರಿಪುರ ತಾಲ್ಲೂಕಿನ ಚಿಕ್ಕಜೋಗಿಹಳ್ಳಿ ಸರಕಾರಿ ಆಸ್ಪತ್ರೆ ಮತ್ತು  ಶಿವಮೊಗ್ಗದ ತೋಟಗಾರಿಕಾ ಇಲಾಖಾ ಅಧಿಕಾರಿ #ಮದುಗೌಡರು ಬಂದಿದ್ದರು.     ಇವರೆಲ್ಲರ ಆಸಕ್ತಿ ಮತ್ತು ಉತ್ಸಾಹಕ್ಕೆ ಅಭಿನಂದನೆಗಳು.

3508. ವರ್ಷಗಳ ಪೋಟೋ

#ವರ್ಷಗಳ_ಹಿಂದಿನ_ಫೋಟೋ #ಅವತ್ತು_ನನ್ನ_ವಯಸ್ಸು_ಹದಿನೆಂಟು_ಇಪ್ಪತ್ನಾಲ್ಕು_ಇದ್ದಾಗಿನದ್ದು #ಈಗಿನ_60ನೇ_ವಯಸ್ಸಿನದ್ದೂ_ಇಲ್ಲಿದೆ. #Age #face #personality #experience #youngage #oldage  "ನಲವತ್ತರವರೆಗೆ ನಿಮ್ಮ ಮುಖದಲ್ಲಿ ನಿಮ್ಮ ಬದುಕನ್ನು ಧರಿಸುತ್ತೀರಿ...". 'ಐವತ್ತಕ್ಕೆ ನಿಮ್ಮ  ಬದುಕೇ ನಿಮ್ಮ ಮುಖವನ್ನು ಧರಿಸುತ್ತದೆ..."     ಹೀಗೆ ತರಹಾವಾರಿ ಅನುಭವಿಗಳ ಮಾತುಗಳಿದೆ ಅದರ ದಾರಿಯಲ್ಲೇ ಹೆಜ್ಜೆ ಹಾಕುತ್ತಾ ಬಂದು ತಿರುಗಿ ನೋಡಿದಾಗ ಈ ಫೋಟೋಗಳು ಸಿಕ್ಕಿದ್ದಾವೆ.

3507. ಸಾಹಿತ್ಯಾಸಕ್ತ ಕಿರಣ್ ಬೀಸು ವಿಮರ್ಷೆ

#ತೀರ್ಥಹಳ್ಳಿ_ಕಿರಣ್_ಬೀಸು #ಬಿಲಾಲಿ_ಬಿಲ್ಲಿ_ಅಭ್ಯಂಜನ #ನನ್ನ_ಕಥಾ_ಸಂಕಲನ_ಓದಿ_ಬರೆದ_ವಿಮರ್ಶೆ #ಸಾಹಿತ್ಯ_ರಾಜಕೀಯ_ಕೃಷಿ_ಕ್ಷೇತ್ರದಲ್ಲಿ_ವಿಶೇಷ_ಆಸಕ್ತಿ_ಹೊಂದಿದ_ಯುವಕರು. #ಸೋಷಿಯಲ್_ಎಕ್ಸ್ಪೆರಿಮೆಂಟ್_ಇವರ_ಹವ್ಯಾಸ #kiranbeesu #thirthahalli #Bilalibilliabyanjana  #patamakkirarnakar #besthararanichampaka    ಕಿರಣ್ ಬೀಸು ಸಾಹಿತ್ಯಾಸಕ್ತರು ಬಹುಶಃ ಕನ್ನಡದ ಬಹುತೇಕ ಪುಸ್ತಕ ಓದಿದ್ದಾರೆ ಬರಿ ಓದು ಅಲ್ಲ ಅದನ್ನು ಸಂದರ್ಭ ಬಂದಾಗ ನೆನಪಿನಿಂದ ಅದರ ಹೂರಣ ತೆಗೆದು ಹೊರಗಿಡುವ ಅಪಾರ ನೆನಪಿನ ಶಕ್ತಿ ಇವರದ್ದು.     ಸಮಾಜವಾದಿ ಹೊರಾಟಗಾರರನ್ನು ಬರಹಗಾರರನ್ನು ಪ್ರತ್ಯಕ್ಷ ಬೇಟಿ ಮಾಡಿದ್ದಾರೆ ಇನ್ನೊಂದು ವಿಶೇಷ ಅಂದರೆ ಇವರಿಗೆ ಇಷ್ಟವಾದ ವ್ಯಕ್ತಿ ಮತ್ತು ಸ್ಥಳಕ್ಕೆ ಎಷ್ಟೇ ದೂರ ಇದ್ದರು ಪ್ರಯಾಣ ಮಾಡಿ ಬೇಟಿ ಮಾಡುವ Social experiment ಇವರ ಹವ್ಯಾಸ.    ಇವರ ತಂದೆ ಮತ್ತು ತಾಯಿ ಕೂಡ ಕನ್ನಡ ಸಾಹಿತ್ಯದ ಓದುಗರು ಇವರು ಓದುವ ಪುಸ್ತಕ ಅವರೂ ಓದುತ್ತಾರೆ ಬಹುಶಃ ಅವರ ಓದಿನ ಆಸಕ್ತಿ ಮಗನಿಗೆ ಬಂದ ಬಳವಳಿ ಇರಬಹುದು.    ಖ್ಯಾತ ಚಲನ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ನೇರ ಸಂಪರ್ಕ ಇವರಿಗಿದೆ.    #ಕಿರಣ್_ಬೀಸು_ಬರೆದ_ವಿಮರ್ಶೆ_ಇಲ್ಲಿದೆ_ಓದಿ...    ದಿನ ಪತ್ರಿಕೆವೊಂದರಲ್ಲಿ ನಮ್ಮ‌ ಕ್ಷೇತ್ರದ ಮಾಜಿ ಶಾಸಕರಾಗಿದ್ದ ದಿವಂಗ...

3506. ಡಾಕ್ಟರ್ ಎಂ.ಸಿ.ಮೋದಿ ಅವರ 109ನೇ ಹುಟ್ಟು ಹಬ್ಬ

#ಡಾಕ್ಟರ್_ಎಂ_ಸಿ_ಮೋದಿ_ಅವರ_106ನೆ_ಹುಟ್ಟು_ಹಬ್ಬ. #ಮುರಿಗೆಪ್ಪ_ಚೆನ್ನಬಸಪ್ಪ_ಮೋದಿ #ಹಳ್ಳಿ_ಹಳ್ಳಿಗಳಲ್ಲಿ_ಉಚಿತ_ನೇತ್ರ_ಚಿಕಿತ್ಸಾ_ಶಿಭಿರ_ಏರ್ಪಡಿಸಿ_ಚಿಕಿತ್ಸೆ_ನೀಡಿದವರು.   #ನಮ್ಮೂರಲ್ಲಿ_ಅವರ_ಎರೆಡು_ನೇತ್ರ_ಚಿಕಿತ್ಸಾ_ಶಿಬಿರ #ಸ್ಥಳಿಯ_ಕನ್ನಡ_ಸಂಘ_ಏರ್ಪಡಿಸಿತ್ತು.   #DrMCModi #eyesurgeon #mahatmaghandi #birthanniversery #modihospital     ಇವತ್ತು ದಿನಾಂಕ 4-ಅಕ್ಟೋಬರ್ ಉಚಿತ ಕಣ್ಣಿನ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಭಿರ ಏರ್ಪಡಿಸಿ ಸುಮಾರು 40 ವರ್ಷ ಕಣ್ಣಿನ ಪೊರೆಯಿಂದ ದೃಷ್ಟಿ ಕಳೆದುಕೊಂಡವರಿಗೆ ಪುನಃ ದೃಷ್ಟಿ ಬರುವಂತೆ ಮಾಡುತ್ತಿದ್ದ ಡಾಕ್ಟರ್ ಎಂ.ಸಿ. ಮೋದಿ ಅವರ 109ನೇ ಹುಟ್ಟುಹಬ್ಬ.    ಡಾಕ್ಟರ್ ಎಂ.ಸಿ. ಮೋದಿ ಮಹಾತ್ಮಾ ಗಾಂದೀಜಿಯಿಂದ ಪ್ರೇರಿತರಾಗಿ ಕುಗ್ರಾಮಗಳಲ್ಲಿ ಉಚಿತವಾಗಿ ಮಾಡಿರುವ ಕಣ್ಣಿನ ಆಪರೇಷನ್ ಗಳು ಯಾರೂ ಅಳಿಸಲಾರದ ವಿಶ್ವ ದಾಖಲೆ.   ಡಾ.ಎಂ.ಸಿ. ಮೋದಿಯವರ ಕಣ್ಣಿನ ಶಸ್ತ್ರ ಚಿಕಿತ್ಸೆಯ ದಾಖಲೆ ಯಾರೂ ಮುರಿಯಲು ಸಾಧ್ಯವಿಲ್ಲ ಅದು ಸರ್ವಕಾಲಿಕ ವಿಶ್ವ ದಾಖಲೆ.    1968 ರಲ್ಲಿ ತಿರುಪತಿಯಲ್ಲಿ ಸತತ 14 ಗಂಟೆ ಕಣ್ಣಿನ ಚಿಕಿತ್ಸೆ ಮಾಡಿದ್ದರು.   ಒಂದೇ ದಿನ 833 ಜನರ ನೇತೃ ಶಸ್ತ್ರಚಿಕಿತ್ಸೆಗಾಗಿ1986 ರಲ್ಲಿ ಇವರ ಹೆಸರು ಗಿನ್ನೆಸ್ ದಾಖಲೆಯಲ್ಲಿದೆ.   ಒಮ್ಮೆಗೆ 4 ಜನರ೦ತೆ ಗ೦ಟೆಗೆ 40 ಶಸ್ತ್ರಚಿ...

3505. ನಮ್ಮೂರ ಶಾಂತಮ್ಮ ಸುಶೀಲಪ್ಪರ ಕುಟುಂಬದ ವಸಂತ್

#ನಿನ್ನೆಯ_ಘಟನೆ_ಮರೆಯಲಾರದ್ದು. #ಅವರು_ನಮ್ಮ_ಊರು_ಬಿಟ್ಟಿದ್ದು_1967 . #ನಾನು_ಹುಟ್ಟಿದ್ದು_1965. #ನಿನ್ನೆ_ನನ್ನ_ಆಫೀಸಿಗೆ_ಬಂದು_ನಾನ್ಯಾರು_ಗೊತ್ತಾ_ಅಂದಾಗ_ನೀವು_ವಸಂತಣ್ಣ_ಅಂದಾಗ #ನನ್ನ_ಮೆದುಳಿನ_ನೆನಪಿನ_ಕೋಶಗಳ_ಸಾಮರ್ಥ್ಯ_ನನಗೆ_ಅಚ್ಚರಿ. https://arunprasadhombuja.blogspot.com/2023/10/blog-number-1773-56.html    ನನಗೆ ನನ್ನ ನೆನಪಿನ ಶಕ್ತಿ ಬಗ್ಗೆ ಅಂತಹ ನಿರ್ಧಿಷ್ಟ ಸಾಮರ್ಥ್ಯ ಗೊತ್ತಿಲ್ಲ ಮತ್ತು ಕೆಲ ಸಂದರ್ಭದಲ್ಲಿ ಅದು ಬೆಳಕಿಗೆ ಬಂದಾಗ ನನಗೆ ಆಶ್ಚರ್ಯ.   ನಿನ್ನೆ ಬೆಳಿಗ್ಗೆ ನಮ್ಮ ಆನಂದಪುರ೦ನ ನಾಡ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ತಾವರೇಹಳ್ಳಿ ಗೋವಿಂದ ಮೂರ್ತಿ ಬಂದು ಈ ಹಿಂದೆ ಆನಂದಪುರಂನ ರೆವಿನ್ಯೂ ಇನ್ಸ್ಪೆಕ್ಟರ್ ಆಗಿದ್ದ ಈಗ ನಿವೃತ್ತರಾದ ಚೌಡಪ್ಪರ ಮಗ ಬಂದಿದ್ದಾರೆ ನಿಮ್ಮನ್ನು ಬೇಟಿ ಆಗಲು ಅಂದಾಗ 5-6 ಜನ ನನ್ನ ಅಪೀಸ್ ಒಳಗೆ ಬಂದರು.    ಅವರಲ್ಲಿ ಒಬ್ಬರು "ನಾನ್ಯಾರು ಗೊತ್ತಾಯಿತಾ?" ಅಂದರು ತಕ್ಷಣ ಬನ್ನಿ ಬನ್ನಿ ಅಂತ ಅನ್ನುತ್ತಾ ಅವರ ಪ್ರಶ್ನೆಗೆ ಉತ್ತರಿಸಲು ನನ್ನ ಮೆದುಳಿನ ನೆನಪಿನ ಕೋಶಗಳು ನೆನಪನ್ನು   ಹೊರಹಾಕಿತು.. "ವಸಂತಣ್ಣ.. ಶಾಂತಮ್ಮರ ಮಗ... ನಿಮ್ಮ ತಂದೆ ಪಾರೆಸ್ಟರ್ ಸುಶೀಲಪ್ಪ ಅವರ ಹ್ಯಾಟ್ ಬ್ರಿಟಿಷ ಕಾಲದ್ದು ... ನಿಮ್ಮ ತಂಗಿಯಂದಿರು ವಿಮಲಕ್ಕ ಮತ್ತು ಪ್ರೇಮಕ್ಕ" ಅಂದಾಗ ಅವರಿಗೆ ಒಂದು ಕ್ಷಣ ಶಾಕ್ ಆಯಿತು. ...

3504. ಹುಲಿ ವೇಷ

#ಹುಲಿ_ವೇಷ #ಹುಲಿ_ನರ್ತನ #ಹುಲಿ_ವೇಷದ_ಮೂಲ_ಎಲ್ಲಿ ? #ದಸರಾ_ಕೃಷ್ಣಜನ್ಮಾಷ್ಟಮಿ_ಗಣೇಶಚತುರ್ಥಿ_ಓಣಂಗಳಲ್ಲಿ_ಹುಲಿವೇಷ #ದುರ್ಗಾದೇವಿಯ_ವಾಹನ_ಹುಲಿ #ಮನುಷ್ಯ_ಹುಲಿಯಾಗಿ_ಬದಲಾಗಿ_ದೇವರ_ಸೇವೆಯ_ಹುಲಿವೇಷ, #ಕರಾವಳಿಯ_ಹುಲಿವೇಷ_ಕೇರಳದ_ಪುಲಿಕಲಿ  #hulivesh #pulinalike #bhagnach #durgadevi #dussara #tiger    ದಸರಾ ಮಹೋತ್ಸವದಲ್ಲಿ ಹುಲಿ ವೇಷ ಹೆಚ್ಚು ಪ್ರಸಿದ್ಧಿ ಪಡೆದಿದೆ ಇದಕ್ಕೆ ಕಾರಣ ದುಗಾ೯ ದೇವಿ ವಾಹನ ಹುಲಿ ಕೂಡ ಆಗಿರುವುದು.    ಕರಾವಳಿಯ ಹುಲಿ ವೇಷ, ಕೇರಳದ ಪುಲಿ ನಲಿಕೆ, ಒಡಿಷಾದ ಬಾಗ್ ನಾಚ್, ನಾಗಪುರದ ಮಾನವೀ ವಾಗ್, ತಮಿಳುನಾಡಿನ ಪುಲಿಯಟ್ಟಮ್ ಗಳು ಮನುಷ್ಯ ಹುಲಿಯಾಗಿ ಬದಲಾಗಿ ದೇವಿಯ ಸೇವೆ ಮಾಡುವುದು ಆಗಿದೆ. ನಮ್ಮ ಆನಂದಪುರಂನಲ್ಲಿ ಪ್ರತಿ ದಸರಾದಲ್ಲಿ ಹುಲಿ ವೇಷ ಹಾಕುತ್ತಿದ್ದವರು ಸ್ಕೂಲ್ ಜಗನಾಥಣ್ಣ ಅದೂ ಆಯಿಲ್ ಪೇಯಿಂಟ್ ನಲ್ಲಿ ಹುಲಿಯಾಗಿ ಕುಣಿಯುತ್ತಿದ್ದರು ಜೊತೆಗೆ ಕುಪ್ಪಣ್ಣನ ಹಲಿಗೆಯ ನಕ್ಕ-ಚಕ್ಕ ಆಕರ್ಷಣೆ ಊರಿಗೆಲ್ಲ ಮನೋರಂಜನೆ ಆಗಿರುತ್ತಿತ್ತು. ಈ ಹುಲಿ ವೇಷ ಏಕೆ? ಅದರ ಮೂಲ ಎಲ್ಲಿ? ಎಂಬ ಪ್ರಶ್ನೆಗಳಿಗೆ ಉತ್ತರ ಕೂಡ ಆಸಕ್ತಿದಾಯಕವಾಗಿದೆ. ಕರಾವಳಿಯಲ್ಲಿ ನವರಾತ್ರಿಯಲ್ಲಿ ಮನುಷ್ಯ ಹುಲಿಯಾಗಿ ಬದಲಾಗಿ ದೇವಿ ಸೇವೆ ಮಾಡುವುದೇ ಹುಲಿ ವೇಷ ಮತ್ತು ದುರ್ಗಾ ದೇವಿಯ ವಾಹನ ಹುಲಿ ಎಂಬುದು ಇಲ್ಲಿ ಗಮನಾರ್ಹ ವಿಷಯವಾಗಿದೆ.    200 ವರ್ಷದ ಹಿಂದೆ ಕೇರಳದ ಮಹಾರ...

3503. ಕಾಗೋಡು ಹೋರಾಟದ ರೂವಾರಿ

#ಕಾಗೋಡು_ಸತ್ಯಾಗ್ರಹ #ರೂವಾರಿ_ಹೆಚ್_ಗಣಪತಿಯಪ್ಪರ_ಹನ್ನೊಂದನೆ_ಪುಣ್ಯಸ್ಮರಣೆ_ಇವತ್ತು #ಜನನ_3_ಆಗಸ್ಟ್_1924 #ಮರಣ_30_ಸೆಪ್ಟೆಂಬರ್_2014. #ನಮ್ಮೂರು_ಕೆಂಜಿಗಾಪುರದಿಂದ_ಮು೦ಡುಗೋಡಿಗೆ_ಟಿಬೆಟಿಯನ್_ಕ್ಯಾಂಪ್_ವರ್ಗಾಯಿಸಿದವರು #ಈ_ಸ್ಮರಣಾರ್ಥ_ನಮ್ಮ_ಊರಿನ_ಕೆಂಜಿಗಾಪುರ_ರಸ್ತೆಯ_ಸರ್ಕಾರಿ_ಶಾಲೆಯಲ್ಲಿ #ಗಣಪತಿಯಪ್ಪ_ರಂಗಮಂದಿರ_ನಿರ್ಮಾಣ_ಮಾಡಿಸಿದ್ದು #ಅವರ_ಆತ್ಮಚರಿತ್ರೆ_ಬರೆಸಿದ್ದು #ಕಾಗೋಡಿನಿಂದ_ಕಡಿದಾಳಿಗೆ_ಕಾಗೋಡು_ಸುವರ್ಣಜ್ಯೋತಿ_ಒಯ್ದಿದ್ದು_ನನಗೆ_ಬಂದ_ಭಾಗ್ಯ #Ganapathiyappa #kagaoduraithahorata #vadnala #shanthaverigopalagowda #ramamanoharalohiya #jayaprakashnarayan #KGVadeyar      ಕಾಗೋಡು ಸತ್ಯಾಗ್ರಹದ ಹೋರಾಟದ ರೂವಾರಿ ಹೆಚ್. ಗಣಪತಿಯಪ್ಪ ಭಾರತ ದೇಶದ ಭೂ ಹೋರಾಟದಲ್ಲಿ ಅಚ್ಚಳಿಯ ಶಾಶ್ವತ ಹೆಸರು.    ಅವರ ಜನನ 3- ಆಗಸ್ಟ್-1924:ಮರಣ 30 - ಸೆಪ್ಟೆಂಬರ್ -2014 .     ಇವತ್ತು ಅವರ 11 ನೇ ಪುಣ್ಯತಿಥಿಯ ಸ್ಮರಣೆಯ ದಿನ.      ಗಣಪತಿಯಪ್ಪರು ಬದುಕಿದ್ದಾಗ ಅವರಿಗೆ ಅವಮಾನ ಮಾಡಿದವರು, ಗೇಲಿ ಮಾಡಿದವರು, ವಿನಾಃ ತೊಂದರೆ ಕೊಟ್ಟವರು ನೂರಾರು ಮಂದಿ ಮತ್ತು ಅಂತಹ ನೂರಾರು ಘಟನೆ ನನ್ನ ಕಣ್ಣೆದುರು ಇದೆ.    ಅವರ ಹೋರಾಟವನ್ನೆ ಜನ ಮರೆತು ಬಿಟ್ಟ ಕಾಲದಲ್ಲಿ ಅವರ ಆತ್ಮಚರಿತ್ರೆ 2002 ರಲ್ಲಿ ಸಾಹಿತಿ ಕೋಣಂದೂರು ವೆಂಕಟಪ್...

3501. ಕಾಗೋಡು ಸುವರ್ಣ ಜ್ಯೋತಿ ಭಾಗ-1

#ಭಾಗ_1. #ಕಾಗೋಡು_ಸತ್ಯಾಗ್ರಹದ_ಸುವರ್ಣ_ಮಹೋತ್ಸವ #ಕಾಗೋಡಿನ_ಅರಳಿಕಟ್ಟೆಯಿಂದ_ಕಡಿದಾಳಿನ_ಮಂಜಪ್ಪಗೌಡರ_ಸಮಾದಿವರೆಗೆ #ಕಾಗೋಡು_ಸತ್ಯಾಗ್ರಹದ_ಸುವರ್ಣ_ಜ್ಯೋತಿ_ಜಾಥಾ #ಕಾಗೋಡು_ರೈತ_ಜ್ಯೋತಿ #kagodusatyagraha #HGanapathiyappa #Rammanoharalohiya #kagaoduraithahorata #KGVodeyar      ಕಾಗೋಡು ಸತ್ಯಾಗ್ರಹ ಇಡೀ ದೇಶದ ಭೂ ಹೋರಾಟದ ಚರಿತ್ರೆಯಲ್ಲಿ ಅಳಿಸಲಾರದ ಅಧ್ಯಾಯ ಇದು ನಡೆದದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಗೋಡಿನಲ್ಲಿ.     ಈ ಸತ್ಯಾಗ್ರಹದ ರೂವಾರಿ ಹೆಚ್. ಗಣಪತಿಯಪ್ಪನವರು, ಇಡೀ ಚಳವಳಿ ರೂಪುರೇಷೆ ಮಾಡಿದವರು ಶಾಂತವೇರಿ ಗೋಪಾಲಗೌಡರು.      ಈ ಚಳವಳಿ ಬೆಂಬಲಿಸಿ ಬಂದು ಬಂದನಕ್ಕೊಳಗಾದವರು ಆಗ ಜವಾಹರ ಲಾಲ್ ನೆಹರು ಸರ್ಕಾರದಲ್ಲಿ ಪ್ರಬಲ ವಿರೋದ ಪಕ್ಷ ಸಮಾಜವಾದಿ ಪಕ್ಷದ ಸಂಸದ #ರಾಮಮನೋಹರ_ಲೋಹಿಯಾ.      ಈ ಚಳವಳಿ ಬೆಂಬಲಿಸಿ ದೇಶದ ರಾಜದಾನಿ ದೆಹಲಿಯಿಂದ #ಜಯಪ್ರಕಾಶ್_ನಾರಾಯಣ್ , #ಮದುಲಿಮೆ #ಜಾರ್ಜ್_ಪರ್ನಾಂಡೀಸ್ ಮುಂತಾದ ಅತಿರಥ ಮಹಾರಥರು ಇದು ಇತಿಹಾಸ.     ಸಾಗರದ ಜೈಲಿನಲ್ಲಿದ್ದ ಗಣಪತಿಯಪ್ಪ ಮತ್ತವರ ಸಂಗಾತಿಗಳನ್ನ ಬೇಟಿ ಮಾಡಿ ಬೆಂಬಲಿಸಿ ಕಾಗೋಡಿಗೆ ಹೋಗಿ ಅಲ್ಲಿನ ಅರಳಿಕಟ್ಟೆ ಮೇಲೆ ಲೋಹಿಯ ಕಾಗೋಡು ಭೂಮಿ ಹೋರಾಟಗಾರರನ್ನ ಬೆಂಬಲಿಸಿ ಬಾಷಣ ಮಾಡಿ ರಾತ್ರಿ ಸಾಗರದ ರೈಲು ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ತಂಗ...

3502. ಮಹಾತ್ಮಾ ಗಾಂಧಿಜೀ ಶಿವಮೊಗ್ಗ ಪ್ರವಾಸ

#ಗಾಂಧಿ_ಜಯಂತಿ #ಮಹಾತ್ಮ_ಗಾಂಧಿ_ಮತ್ತು_ಶಿವಮೊಗ್ಗ_ಜಿಲ್ಲೆ_ನಂಟಿಗೆ_98_ವರ್ಷ. #ಶಿವಮೊಗ್ಗದ_ನ್ಯಾಷನಲ್_ಲಾಡ್ಜ್_ಶಿವಮೊಗ್ಗದ_ಕೇಂದ್ರ_ಅ0ಚೆ_ಕಛೇರಿ_ಎದರು  #ನಂತರ_ಅದು_ಬೃಂದಾವನ_ಹೋಟೆಲ್_ಆಗಿತ್ತು  #ಅಲ್ಲಿ_ಒಂದು_ವಾರ_ಗಾಂದೀಜಿ_ಮತ್ತು_ಕಸ್ತೂರಬಾ_ದಂಪತಿಗಳು_ತಂಗುತ್ತಾರೆ. #ಶಿವಮೊಗ್ಗದಲ್ಲಿ_ದಿನಾಂಕ_14_ಆಗಸ್ಟ್_1927ರಲ್ಲಿ_ಸಾವ೯ಜನಿಕ_ಸಭೆ_ನಡೆಸುತ್ತಾರೆ. #ಈ_ದಿನಾಂಕಕ್ಕೆ_ಸರಿಯಾಗಿ_20_ವರ್ಷದ_ನಂತರ_ದೇಶ_ಸ್ವಾತಂತ್ರ_ಪಡೆಯಿತು. #ಗಾಂಧೀಜಿ_ಶಿವಮೊಗ್ಗ_ಜಿಲ್ಲೆಗೆ_ಕರೆತಂದವರು_ಖ್ಯಾತ_ವಕೀಲರಾದ_ವೆಂಕಟಸುಬ್ಬ_ಶಾಸ್ತ್ರಿಗಳು #ಗಾಂಧೀಜಿ_ಸಾರ್ವಜನಿಕ_ಸಭೆ_ನಡೆಸಿದ_ಸ್ಥಳ_ಗಾಂಧೀ_ಪಾರ್ಕ್_ಆಗಿದೆ. #ಗಾಂಧೀಜಿ_ಶಿವಮೊಗ್ಗ_ಬೇಟಿ_ಸ್ಮರಣೆಗಾಗಿ_ಪುರ_ಪ್ರಮುಖರು #ಮುಖ್ಯ_ವ್ಯಾಪಾರಿ_ಕೇಂದ್ರಕ್ಕೆ_ಗಾಂಧೀಬಜಾರ್_ಎಂದು_ನಾಮಕರಣ_ಮಾಡುತ್ತಾರೆ #ಗಾಂಧೀ_ದಂಪತಿ_ತಂಗಿದ್ದ_ನ್ಯಾಷನಲ್_ಲಾಡ್ಜ್_ಎದುರು_ಎರೆಡು_ತೆಂಗಿನ_ಸಸಿ_ಗಾಂದೀಜಿ_ಮತ್ತು_ಕಸ್ತೂರಬಾ_ನೆಡುತ್ತಾರೆ. #ಭದ್ರಾವತಿಯಲ್ಲಿ_ಲಂಬಾಣಿ_ಮಹಿಳಾ_ಸಮಾವೇಶ_ನಡೆಸುತ್ತಾರೆ. #ಆನಂದಪುರಂ_ಸಾಗರ_ಬಿದನೂರುನಗರ_ತೀರ್ಥಹಳ್ಳಿಗಳಿಗೂ_ಬೇಟಿ_ನೀಡುತ್ತಾರೆ.. #ಜಿಲ್ಲೆಯ_ಈಗಿನ_ತಲೆಮಾರಿಗೆ_ಗಾಂಧೀಜಿ_ಶಿವಮೊಗ್ಗ_ಜಿಲ್ಲಾ_ಪ್ರವಾಸದ_ಮಾಹಿತಿ.   #mahatmaghandhi #shivamogga #lambanimahilasamavesha #sagar #Anandapuram #bidanurunagara #thirthhalli   #Badrava...

3500. ದರ್ಬೆ ಹುಲ್ಲು

#ದರ್ಬೆ_ಹುಲ್ಲು #ಧಾರ್ಮಿಕ_ಆಚರಣೆಯಲ್ಲಿ_ಬಳಕೆ #ಹಿಂದೂ_ಬೌದ್ದ_ಜೈನ_ಧರ್ಮಿಯರಲ್ಲಿ_ಪವಿತ್ರವೆಂದು_ಪರಿಗಣಿಸಿದ್ದಾರೆ. #ವೇದ_ಕಾಲದಿಂದಲೂ_ಶ್ರೀಕೃಷ್ಣ_ಭಗವದ್ಗೀತೆಯಲ್ಲಿ_ದರ್ಬೆ_ಉಲ್ಲೇಖವಿದೆ. #ದ್ಯಾನಕ್ಕೆ_ಆಸನವಾಗಿ_ಪೂಜಾಕಾರ್ಯಗಳಲ್ಲಿ_ಆಯುರ್ವೇದದಲ್ಲಿಯೂ_ದರ್ಬೆ_ಬಳಕೆ. #Dharbe #Hindu #Buddist #Jainism #Bhagavadgeetha #Religion Yaga #Homa    ಪೂಜಾ ಕಾರ್ಯಕ್ರಮಗಳಲ್ಲಿ ಪುರೋಹಿತರು ಬರೆಸುವ ಪೂಜಾ ಸಾಮಾಗ್ರಿ ಪಟ್ಟಿಯಲ್ಲಿ ಹಣ್ಣು-ಕಾಯಿ - ಅರಿಶಿಣ-ಕುಂಕುಮಗಳ ಜೊತೆ ಈ #ದರ್ಬೆ_ಹುಲ್ಲು ಕಡ್ಡಾಯವಾಗಿ ಬರೆದಿರುತ್ತಾರೆ.   ದರ್ಬೆಯ ಉಂಗುರವನ್ನು ಸಾಮಾನ್ಯವಾಗಿ ಕುಶದ ಉಂಗುರ ಅಥವಾ ದರ್ಬೆಯ ಉಂಗುರ ಎಂದೇ ಕರೆಯುತ್ತಾರೆ.  ಇದು ವಾತಾವರಣದ ದುಷ್ಟ ಶಕ್ತಿಗಳನ್ನು ನಿಯಂತ್ರಿಸುವ ಪವಿತ್ರ ಶಕ್ತಿಯನ್ನು ಹೊಂದಿರುವುದರಿಂದ ಪೂಜೆಗಳು ಮತ್ತು ಯಜ್ಞಗಳಲ್ಲಿ ಬಳಸಲ್ಪಡುತ್ತದೆ.      ದರ್ಭೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ....     ದರ್ಬೆ ಹುಲ್ಲು, ವೈಜ್ಞಾನಿಕವಾಗಿ ಡೆಸ್ಮೊಸ್ಟ್ಯಾಕಿಯ ಬೈಪಿನೇಟ (Desmostachya bipinnata) ಎಂದು ಕರೆಯಲ್ಪಡುತ್ತದೆ, ಇದು ಭಾರತದಾದ್ಯಂತ ಬೆಳೆಯುವ ಒಂದು ಬಹುವಾರ್ಷಿಕ ಹುಲ್ಲು.    ಇದು ಧಾರ್ಮಿಕ, ಆಧ್ಯಾತ್ಮಿಕ ಮತ್ತು ಔಷಧೀಯ ಮಹತ್ವವನ್ನು ಹೊಂದಿದೆ. ಹಿಂದೂ, ಬೌದ್ಧ ಮತ್ತು ಜೈನ ಸಂಪ್ರದಾಯಗಳಲ್ಲಿ ಪವಿತ್ರವೆಂದು ...

3499. ಆಗುಂಬೆ ಕಾಡಾನೆ

#ಮಲೆನಾಡಿನಲ್ಲಿ_ಕಾಡಾನೆಗಳು_ಲಗ್ಗೆ_ಹಾಕುತ್ತಿರುವುದೇಕೆ? #ಶತಮಾನಗಳ_ನಂತರ_ಕಾಡಾನೆಗಳು. #ಕೊಪ್ಪ_ಶೃಂಗೇರಿಯಲ್ಲಿ_ಪ್ರತ್ಯಕ್ಷವಾದ_ಜೋಡಿ_ಕಾಡಾನೆ. #ಪ್ರತಿ_ವರ್ಷ_ಆಗುಂಬೆಗೆ_ಬರುವ_ಒಂಟೆ_ಕಾಡಾನೆ. #ಆನಂದಪುರಂ_ಭಾಗಕ್ಕೆ_ಪ್ರತಿ_ವರ್ಷ_ಬರುತ್ತಿರುವ_ಕಾಡಾನೆಗಳು #ವಿಜಯನಗರ_ಸಾಮ್ರಾಜ್ಯದ_ಅರಸು_ಪ್ರೌಡ_ಪ್ರತಾಪರಾಯನಿಗೆ #ಗಜಬೇಂಟೆಗಾರ_ಎಂಬ_ಬಿರುದು_ಬರಲು_ಕಾರಣ #ಹದಿನಾಲ್ಕನೇ_ಶತಮಾನದಲ್ಲಿ_ಅವರು_ಆರಗದ_ದಟ್ಟ_ಅರಣ್ಯದಲ್ಲಿ #ಕಾಡಾನೆ_ಹಿಡಿದು_ಪಳಗಿಸಿ_ತಮ್ಮ_ಸೇನೆಗೆ_ಸೇರಿಸುತ್ತಿದ್ದರು. #wildlifeplanet #agumbe #thirthahalli #ShivamoggaNews #wildelephants  ಶಿವಮೊಗ್ಗ ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿ ಇವತ್ತಿಗೂ ಕಾಡಾನೆಗಳು ಮತ್ತು ಅವುಗಳ ಕಾರಿಡಾರ್ ಇದೆ.      ಶರಾವತಿ ಅಭಯಾರಣ್ಯದಲ್ಲಿ ಶರಾವತಿ ನದಿಗೆ ಆಣೆಕಟ್ಟು ಕಟ್ಟಿದ ನಂತರ ಕಾಡಾನೆಗಳು ಈ ಭಾಗದಲ್ಲಿ ಇರಲಿಲ್ಲ.    ಆದರೆ ಒಂದು ಒಂಟಿ ಸಲಗ ತೀರ್ಥಹಳ್ಳಿಯ ಆಗು೦ಬೆ ಭಾಗದಲ್ಲಿ ಪ್ರತಿ ವರ್ಷ ನಿಗದಿತ ಸಮಯದಲ್ಲಿ ಜನವಸತಿ ಕೇಂದ್ರಗಳಲ್ಲಿ ಕಾಣಿಸುಕೊಳ್ಳುತ್ತಾ ಆ ಭಾಗದಲ್ಲಿನ ಜನರಲ್ಲಿ ಭಯ - ಆತಂಕ ಸೃಷ್ಟಿಸಿದೆ.    ಇದೇ ಆನೆ ಕೆಲವು ವರ್ಷದ ಹಿಂದೆ ಸಾಗರ ತಾಲ್ಲೂಕಿನ ಆವಿನಳ್ಳಿ ಸಮೀಪದ #ಗಿಣಿವಾರ ಎಂಬ ಗ್ರಾಮದಲ್ಲಿ ಈ ಆನೆ ಕಾಣಿಸಿಕೊಂಡಾಗ ಗ್ರಾಮಸ್ಥರೆಲ್ಲ ಒಂದು ರಾತ್ರಿ  ಕಾಡಾನೆಯ ಉಪಟಳ ನಿವಾರಿಸಲು ಸಭೆ ಆಯೋಜ...

3498. ಮಲೆನಾಡಿನ ಒಂಟಿ ಮನೆ ಸುರಕ್ಷತೆ

#ಹಳ್ಳಿಯಲ್ಲಿರುವ_ನಿಮ್ಮ_ಮನೆ_ತಂದೆ_ತಾಯಿಗಳ_ಸುರಕ್ಷತೆ_ಬಗ್ಗೆ_ಯೋಚಿಸಿ. #ಭಾರತದಲ್ಲಿನ_ತನ್ನ_ಮನೆಗೆ_ಕಳ್ಳರು_ಬಂದಿದ್ದನ್ನು_ಅಮೇರಿಕಾದಲ್ಲಿದ್ದ_ಅವರ_ಪುತ್ರಿ_ಎಚ್ಚರಿಸಿದ_ಘಟನೆ. #ಮಲೆನಾಡಿನ_ಒ೦ಟಿ_ಮನೆಗಳು_ದರೋಡೆಕೋರರಿಗೆ_ಸುಲಭ_ಟಾಗೆ೯ಟ್.   #ಸಕಾ೯ರ_ಮಲೆನಾಡಿನ_ಒ೦ಟಿ_ಮನೆ_ವಾಸಿಗಳಿಗೆ_ಬಂದೂಕು_ಲೈಸೆನ್ಸ್_ನೀಡಬೇಕು. #ಸಾಗರ_ತಾಲ್ಲೂಕಿನ_ಬ್ಯಾಕೋಡಿನ_ನಿವೃತ್ತ_ಪೋಸ್ಟ್_ಮಾಸ್ಟರ್_ದಂಪತಿ_ಹತ್ಯೆ_ಆಗಿ_ಐದು_ವರ್ಷ #Westernghats #Malenadu #Selfprotection #Docoits #Softtargets #cctv #Camera #Dogs       ಮಲೆನಾಡಿನ ಒಂಟಿ ಮನೆಗಳು ದರೋಡೆಕೋರರಿಗೆ ಸಾಫ್ಟ್ ಟಾಗೆ೯ಟ್ (ಸುಲಭ ಗುರಿ) ಆಗುತ್ತಿದೆ ಇದಕ್ಕೆ ಸರ್ಕಾರ ಏನು ಮಾಡಬಹುದು? ಸ್ವತಃ ನಾವೇನು ತಯಾರಿ ಮಾಡಿಕೊಳ್ಳಬಹುದು? ಇತ್ತೀಚಿನ ಈ ಕೆಳಗಿನ ಘಟನೆ ನೋಡಿ....    ಈಗಿನ ಕಾಲದಲ್ಲಿ ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ, ಅಮೆರಿಕಾದಲ್ಲಿ ಕುಳಿತು ದೂರದ ಬಾಗಲಕೋಟೆಯ ಮುಧೋಳ ನಗರದಲ್ಲಿ ಏನಾಗುತ್ತಿದೆ ತಮ್ಮ ಮನೆಯ ಹತ್ತಿರ ಯಾರು ಬಂದಿದ್ದಾರೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದು.     ಮುಧೋಳದಲ್ಲಿ ನಡೆಯುವ ಘಟನೆಯನ್ನು ದೂರದ ಅಮೆರಿಕಾದಲ್ಲಿ ನೋಡಿ ಅಪರಾಧ ಕೃತ್ಯವನ್ನು ತಪ್ಪಿಸಿದ ಚಾಣಾಕ್ಷ ಘಟನೆಯೊಂದು ನಡೆದಿದೆ.     ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಚಡ್ಡಿ ಗ್ಯಾಂಗ್ ಕಳ್ಳರ ಹಾವಳಿ ಹೆಚ್ಚಾಗಿ...

3497. ತಾಳಗುಂದ ಶಾಸನ ಸಂಶೋದಕರು

#ಡಾ_ತಿರುಮಲೈ_ಮದುರನಾಥ_ಕೇಶವ #ಇವರ_71ನೇ_ಹುಟ್ಟು_ಹಬ್ಬದ_ಶುಭಹಾರೈಕೆಗಳು #ತಾಳಗುಂದ_ಶಾಸನ_ಸಂಶೋಧನೆ_ಮಾಡಿದವರು #ಹಲ್ಮಿಡಿ_ಶಾಸನಕ್ಕಿಂತ_80_ವರ್ಷ_ಹಳೆಯ_ಶಾಸನ. #ಶಿವಮೊಗ್ಗ_ಜಿಲ್ಲೆಯ_ಶಿಕಾರಿಪುರ_ತಾಲ್ಲೂಕಿನ_ಶಿರಾಳಕೊಪ್ಪದಿಂದ_11_ಕಿಲೋಮೀಟರ್_ದೂರದಲ್ಲಿದೆ #Kannadasculpture #Talagunda #Halmidi #Researcher #DrTMKeshava #Shivamogga #Shikaripura     ಡಾಕ್ಟರ್ ತಿರುಮಲೈ ಮದುರನಾಥ ಕೇಶವರವರ 71 ನೇ ಹುಟ್ಟು ಹಬ್ಬದ ಶುಭಾಶಯಗಳು.     ಅವರ ಜನ್ಮ ದಿನಾಂಕ 19 -ಸೆಪ್ಟೆಂಬರ್-1954.   ಬೆಂಗಳೂರು ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞರಾಗಿದ್ದವರು.    ಈಗ ನಿವೃತ್ತರಾಗಿ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸಿದ್ದಾರೆ.   ಇವರೇ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತಾಳಗುಂದದ ಸಿಂಹ ಕಟಾಂಜನದ ಕನ್ನಡ ಶಾಸನ ಉತ್ಕನದಲ್ಲಿ ಸಂಶೋಧನೆ ಮಾಡಿದವರು.    ಈ ಶಾಸನ ಹಲ್ಮಿಡಿಯ ಶಾಸನಕ್ಕಿಂತ 80 ವರ್ಷ ಹಿಂದಿನದ್ದು.     ಅಂದರೆ ಕನ್ನಡದ ಮೊದಲ ಶಾಸನ ಎನ್ನಿಸಿಕೊಂಡ ಹಲ್ಮಿಡಿ ಶಾಸನಕ್ಕಿಂತ ಹಿಂದಿನದ್ದು.    ತಾಳಗುಂದ ಶಾಸನ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಪಠ್ಯವಾಗಿದೆ.    ಇತಿಹಾಸ ದರ್ಪಣ ಪುಸ್ತಕದಲ್ಲಿ ತಾಳಗುಂದ ಶಾಸನದ ವಿವರವಾದ ಲೇಖನ ಪ್ರಕಟವಾಗಿದೆ.   ಕೇಂದ್...

3496. ಯಡೇಹಳ್ಳಿ ಗ್ರಾಮ ಪಂಚಾಯತ್

#ಯಡೇಹಳ್ಳಿ_ಗ್ರಾಮ_ಪಂಚಾಯಿತಿ #ಸ್ವಚ್ಚ_ಸಂಕೀರ್ಣ_ಘಟಕದ_ಉದ್ಘಾಟನೆ. #ಆಹ್ವಾನ_ಪತ್ರಿಕೆ_ನೀಡಿದ್ದಾರೆ. #ಅಧ್ಯಕ್ಷೆ_ಉಪಾದ್ಯಕ್ಷ_ಪಂಚಾಯತ್_ಅಭಿವೃದ್ದಿ_ಅಧಿಕಾರಿ_ಮಾಜಿ_ಉಪಾಧ್ಯಕ್ಷರು. #Gramapanchayath #Yadehalli #Anandapuram #Sagar #Shivamogga.#Anandapuram     ದಿನಾಂಕ 20 - ಸೆಪ್ಟಂಬರ್ - 2025 ಶನಿವಾರ ನಮ್ಮ ಊರಿನ ಯಡೇಹಳ್ಳಿ ಗ್ರಾಮ ಪಂಚಾಯತ್ ನ  ಕಸವಿಲೇವಾರಿ ಘಟಕದ ನೂತನ ಸ್ವಚ್ಚ ಸಂಕೀರ್ಣ ಭವನದ ಉದ್ಘಾಟನಾ ಸಮಾರಂಭ ನೆರವೇರಲಿದೆ.    ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆ ನೀಡಲು ಬಂದವರು ಅಧ್ಯಕ್ಷೆ #ಶ್ರೀಮತಿ_ರತ್ನಮ್ಮ ಇವರು ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಕೊರಲಿಕೊಪ್ಪದ ದಿವಂಗತ ಕೆಂಚಣ್ಣರ ಪುತ್ರಿ ಕೆಂಚಣ್ಣ ನನ್ನ ಹಿರಿಯ ಗೆಳೆಯರು ಕೊರಲಿಕೊಪ್ಪದಿಂದ ಗೇರುಬೀಸಿಗೆ ಖಾತೆ ಜಮೀನಿನಲ್ಲಿ ರಸ್ತೆ ಮಾಡಿಸಲು ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಸಹಕರಿಸಿದವರು.    ಉಪಾಧ್ಯಕ್ಷರು #ಇರುವಕ್ಕಿ_ಗಣಪತಿ 1993ರಲ್ಲಿ ನಾವೆಲ್ಲ ಒಟ್ಟಿಗೆ ಚುನಾವಣೆ ಮಾಡಿ ಯಡೇಹಳ್ಳಿ ಗ್ರಾಮ ಪಂಚಾಯಿತಿ ಮೊದಲ ಸದಸ್ಯರಾದವರು.      ಕಳೆದ 32 ವರ್ಷದಿಂದ ಮೂರು ಬಾರಿ ಅಧ್ಯಕ್ಷ ಮತ್ತು ಮೂರು ಬಾರಿ ಉಪಾಧ್ಯಕ್ಷರಾಗಿರುವ ಗಣಪತಿ ರಾಜ್ಯದಲ್ಲಿೇ ಮೊದಲ #ಬಗರ್_ಹುಕುಂ_ಹಕ್ಕುಪತ್ರ ನೀಡಿದ ಗ್ರಾಮ ಪಂಚಾಯಿತಿ ಎಂಬ ದಾಖಲೆ ಮಾಡಲು ನನ್ನ ಜೊತೆ ಕೈಜೋಡಿಸಿದವರು ಅಷ್ಟೇ ಅಲ...

3495. ವರದಾ ನದಿ

#ವರದಾ_ನದಿ #ಶಿವಮೊಗ್ಗ_ಜಿಲ್ಲೆಯ_ಸಾಗರ_ತಾಲ್ಲೂಕಿನ_ವರದಾಮೂಲದಲ್ಲಿ_ಉಗಮ. #ಬನವಾಸಿ_ಮೂಲಕ_ಹರಿದು_ಹಾವೇರಿ_ಜಿಲ್ಲೆಯ_ಗಳಗನಾಥದಲ್ಲಿ #ತುಂಗಭದ್ರ_ನದಿಗೆ_ಸಂಗಮ_ಅಗುತ್ತದೆ. #Varadariver #Shivamogga #Sagar #Uttarakannadadistrict #Banavasi #Galaganatha #Haveridistrict #Tungabadra   ವರದಾ ನದಿ ತುಂಗಭದ್ರಾ ನದಿಯ ಪ್ರಮುಖ ಉಪನದಿ ಇದರ ಉದ್ಭವ ಸ್ಥಳ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವರದಾ ಮೂಲ.    ಪುರಾಣದಲ್ಲಿ ವರದಾ ನದಿ ಉಗಮದ ಬಗ್ಗೆ ಎರೆಡು ಕಥೆಗಳಿದೆ...     ಮೊದಲನೆಯದು ಶೃಂಗಋಷಿ ಒಮ್ಮೆ ತೀವ್ರ ತಪಸ್ಸಿನಲ್ಲಿದ್ದು, ಬ್ರಹ್ಮಹತ್ಯಾದೋಷ ಮಾಡಿದ್ದಕ್ಕಾಗಿ ವಿಷ್ಣುವಿನಿಂದ ಕ್ಷಮೆ ಕೇಳುತ್ತಿದ್ದನು. ಶ್ರೀಮನ್ನಾರಾಯಣನು ಅವನ ಮುಂದೆ ಪ್ರತ್ಯಕ್ಷನಾಗಿ ಋಷಿಯ ತಲೆಯ ಮೇಲೆ ಗಂಗಾಜಲವನ್ನು ಸುರಿದನು. ಈ ಗಂಗಾಜಲವು ವರದಾ ನದಿಯನ್ನು ರೂಪಿಸಿತು.   ಇನ್ನೊಂದು ಪುರಾಣ ಕಥೆ ಶಿವ ರೌದ್ರವತಾರ ತಾಳಿದಾಗ ಅವನ ತಾಪವಿಳಿಸಲು ವಿಷ್ಣು ಶಂಖದಲ್ಲಿ ಭಾಗಿರಥಿ ಜಲ ಶಿವನಿಗೆ ಅಭಿಷೇಕ ಮಾಡಿದ ನೀರೆ ವರದಾ ನದಿ ಆಯಿತೆಂದು.       ಸಾಗರ ಪಟ್ಟಣದಿಂದ ಆವಿನಹಳ್ಳಿ ರಸ್ತೆಯ ಇಕ್ಕೇರಿ ಅಘೋರೇಶ್ವರ ದೇವಾಲಯದ ವೃತ್ತದಲ್ಲಿ ಎಡಕ್ಕೆ ಸಾಗಿದರೆ ವರದಾ ನದಿ ಉಗಮ ಸ್ಥಳ ವರದಾ ಮೂಲ ಇದೆ.     ಈ ನದಿಗೆ ಸಾಗರ ಪಟ್ಟಣದಲ್ಲಿ ಆಣೆಕಟ್ಟು ನಿರ್ಮಿಸಿ ಕೆಲ ದಶಕಗಳ ಕಾಲ ಸಾಗರದ ಪ...

3494. ಬ್ರಹ್ಮಕಮಲ ಮತ್ತು ರಾತ್ರಿರಾಣಿ ಹೂವು

#ರಾತ್ರಿ_ರಾಣಿ_ಹೂವು​ #ಇದು_ಬಳ್ಳಿಯಲ್ಲಿ_ಅರಳುವ_ಹೂವು​ #ನಮ್ಮ_ಮನೆಯಲ್ಲಿ_ಮಧ್ಯರಾತ್ರಿ_ಅರಳಿತ್ತು. #ರಾತ್ರಿರಾಣಿ_ಬ್ರಹ್ಮಕಮಲ_ಬೇರೆ_ಬೇರೆ #flowers​ #flowerlovers​ #nightqueen​ #brahmakamala​ #midnightmemories​     ನಾನು ಈ ರಾತ್ರಿ ರಾಣಿ ಹೂವನ್ನು ಬ್ರಹ್ಮ ಕಮಲ ಎಂದೇ ಭಾವಿಸಿದ್ದೆ, ಕಳೆದ ವರ್ಷ ರಾತ್ರಿ ರಾಣಿ ನಮ್ಮ ಮನೆಯಲ್ಲಿ ಅರಳಿದಾಗ ಬ್ರಹ್ಮ ಕಮಲ ಅರಳಿದೆ ಎಂದು ಪೋಟೋ ಪೋಸ್ಟ್ ಮಾಡಿದ್ದೆ ಆದರೆ ಇದು ರಾತ್ರಿ ರಾಣಿ ಅಂತ ಪ್ರತಿಕ್ರಿಯೆಗಳನ್ನು ಗೆಳೆಯರು ಬರೆದಾಗಲೇ ಗೊತ್ತಾಗಿದ್ದು ಇದು ಬೇರೆ ಬೇರೆ ಅಂತ.   ಹಿಮಾಲಯ ಶ್ರೇಣಿಯಲ್ಲಿರುವ ಇದೇ ಹೂವಿನ ಹೋಲಿಕೆ ಇರುವ #ಬ್ರಹ್ಮಕಮಲ ಹೂವು ಗಿಡದಲ್ಲಿ ಅರಳುವ ಹೂವು.      ಈ ಪ್ರಭೇದ ಬಿನ್ನತೆ ಗೊತ್ತಿಲ್ಲದೆ ರಾತ್ರಿ ರಾಣಿ ಹೂವಿಗೆ ಬ್ರಹ್ಮಕಮಲ ಎಂತಲೂ  ಕರೆಯುತ್ತಾರೆ.      ರಾತ್ರಿ ರಾಣಿ ಹೂವು ಮತ್ತು ಬ್ರಹ್ಮಕಮಲ ಹೂವಿನ ಬಟಾನಿಕಲ್ ನೇಮ್ ಬೇರೆ ಬೇರೆ ಇದೆ.     #ರಾತ್ರಿಯ_ರಾಣಿ ಹೂವು ವೈಜ್ಞಾನಿಕವಾಗಿ #ಸೆಲೆನಿಸೆರಿಯಸ್_ಗ್ರಾಂಡಿಫ್ಲೋರಸ್ ಎಂದು ಕರೆಯಲ್ಪಡುವ ರಾತ್ರಿಯಲ್ಲಿ ಅರಳುವ ಒಂದು ಹೂವು.     ಈ ಸುಂದರವಾದ ಕಳ್ಳಿ ಜಾತಿಯ ಮೂಲ ಉಷ್ಣವಲಯದ ಅಮೆರಿಕ ಮತ್ತು ಇದು ಅಪರೂಪದ ಮತ್ತು ವಿಲಕ್ಷಣ ಹೂವಾಗಿದೆ.       ರಾತ್ರಿ ರಾಣಿಯ ದೊಡ್ಡ...

3493. ಕುಸುಮ ಸೊರಬರ ಅಭಿಮಾನ

#ಕುಸುಮ_ಸೊರಬ_ಪಶ್ಚಿಮಘಟ್ಟದ_ಪರಿಸರ_ಹೋರಾಟಗಾರ್ತಿ #ಅವರು_ಇಲ್ಲವಾದರೂ #ಅವರ_ಮೇಲಿನ_ಅಭಿಮಾನ_ಇವತ್ತಿಗೂ_ಕಡಿಮೆ_ಆಗಲೇ_ಇಲ್ಲ #Kusumasoraba #westernghats #Malenadu #Shivamogga #Uttarakannada #environmentprotection    ನಾನು ಕುಸುಮಾ ಸೊರಬರ ಸ್ಮರಣಾರ್ಥ ಉತ್ತರ ಕನ್ನಡ ಜಿಲ್ಲೆಯ ಪರಿಸರಾಸಕ್ತರು ಗೇರುಸೊಪ್ಪೆ ಸಮೀಪದ ಜಲಪಾತಕ್ಕೆ #ಬಂಗಾರ_ಕುಸುಮ_ಜಲಪಾತ ಎಂದು ನಾಮಕರಣ ಮಾಡಿದ ಚಿತ್ರ ಲೇಖನ ಪೇಸ್ ಬುಕ್ ನಲ್ಲಿ ಪ್ರಕಟಿಸಿದ್ದೆ.    16 ಸೆಪ್ಟೆಂಬರ್ 2025 ರಿಂದ 20 - ಸೆಪ್ಟೆಂಬರ್ ರಾತ್ರಿಗೆ ನಾಲ್ಕು ದಿನದಲ್ಲಿ ಇದು 6 ಲಕ್ಷ ಮಿಕ್ಕಿ ವೀಕ್ಷಣೆ ಆಗಿದೆ ಮತ್ತು 4 ಲಕ್ಷಕ್ಕೂ ಮಿಕ್ಕಿ ರೀಚ್ ಆಗಿದೆ.     ಕುಸುಮಾ ಸೊರಬರ ಮೇಲಿನ ಅಭಿಮಾನ,ಅವರ ಪರಿಸರದ ಹೋರಾಟಗಳನ್ನ ಜನ ಮರೆತಿಲ್ಲ ಅದಕ್ಕೆ ಉದಾಹರಣೆ 10 ಲಕ್ಷ ಮೀರಿದ ಜನರ ಪ್ರತಿಕ್ರಿಯೆಗಳು.   ಇಷ್ಟು ಜನರಿಗೆ ತಲುಪಿಸಿದ ಮಾಧ್ಯಮ #ಪೇಸ್_ಬುಕ್ ಜಾದು ನೋಡಿ.

3492. ಮಹಾಲಯ ಅಮಾವಾಸ್ಯೆ

#ಪಿತೃ_ಪಕ್ಷ #ಮಹಾಲಯ_ಅಮಾವಾಸ್ಯೆ  #ಸರ್ವಪಿತೃ_ಅಮಾವಾಸ್ಯೆ #Mahalayaamavasye #Pitrupaksha #Mahabharatha #Karna #Crow     ಇವತ್ತು ಮಹಾಲಯ ಅಮಾವಾಸ್ಯೆ ಇದು ಪಿತೃ ಪಕ್ಷದ ಕೊನೆಯ ದಿನ.    ಮಹಾಲಯ ಅಮಾವಾಸ್ಯೆ ದಿನ ಬಹಳ ವಿಶೇಷ, ಸಾಮಾನ್ಯವಾಗಿ ಪೂರ್ವಜರು ಮೃತಪಟ್ಟ ತಿಥಿ, ದಿನಗಳು ನೆನಪಿದ್ದರೆ ಅಂಥವರಿಗೆ ಆಯಾ ತಿಥಿಯಂದೇ ಶ್ರಾದ್ಧ ಕರ್ಮ ನೆರವೇರಿಸುತ್ತಾರೆ.    ಆದರೆ ಹಿಂದಿನ ಕಾಲದಲ್ಲಿ ಯಾರಾದರೂ ಮೃತಪಟ್ಟಿದ್ದು ಅವರು ಯಾವ ತಿಥಿಯಲ್ಲಿ ಮೃತರಾದರು ಎಂದು ತಿಳಿಯದೇ ಇದ್ದರೆ ಅಥವಾ ಹಿಂದೆ ಪೂರ್ವಜರು ಮೃತಪಟ್ಟ ದಿನಾಂಕಗಳು, ತಿಥಿಗಳು ನೆನಪಿರದೇ ಇದ್ದರೆ ಅಂಥವರಿಗೆ ಮಹಾಲಯ ಅಮಾವಾಸ್ಯೆ ಅಥವಾ ಸರ್ವಪಿತೃ ಅಮಾವಾಸ್ಯೆ ದಿನ ಶ್ರಾದ್ಧ ಕರ್ಮ, ಪಿಂಡ, ತರ್ಪಣ ಬಿಡುವುದು ವಾಡಿಕೆ.     ಈ ರೀತಿ ಮಾಡುವವರಿಗೆ ಸರ್ವಪಿತೃಗಳ ಆಶೀರ್ವಾದ ಇರುತ್ತದೆ ಮತ್ತು ಶುಭ ಫಲವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಆದ್ದರಿಂದ ಪ್ರತಿಯೊಬ್ಬ ಮನುಷ್ಯನೂ ವರ್ಷದ ಪ್ರತಿ ಮಹಾಲಯ ಅಮಾವಾಸ್ಯೆಯಂದು ಅಗಲಿದ ಪಿತೃ ದೇವತೆಗಳಿಗೆ ತರ್ಪಣವನ್ನು ಅರ್ಪಿಸಬೇಕು ಎಂಬ ನಂಬಿಕೆ ಮತ್ತು ಆಚರಣೆ ಇದೆ.     ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಅಂತ್ಯ ಮತ್ತು ದುರ್ಗಾ ಪೂಜೆಯ ಆರಂಭವನ್ನು ಸೂಚಿಸುವ ಪವಿತ್ರ ದಿನ.  ದುರ್ಗಾ ದೇವಿ ಭೂಮಿಗೆ ಆಗಮಿಸುವುದನ್ನು ಸಂಕೇತಿಸುವ ಈ ದಿನ ಅತ್ಯಂ...

3491. ಆನಂದಪುರಂ ಹೆಸರಿಗೆ ಕಾರಣ

#ಆನಂದಪುರಂ #ಈ_ಹೆಸರಿಗಿದೆ_ನಾಲ್ಕು_ಶತಮಾನದ_ಇತಿಹಾಸ #ಪ್ರತಿ_ಊರಿನ_ಹೆಸರಿಗೂ_ಇತಿಹಾಸ_ಇದೆ. #ಆನಂದಪುರಂ_ಅಥವ_ಆನಂದಪುರ_ಇದರಲ್ಲಿ_ಸರಿ_ಯಾವುದು? #ಆನಂದಪುರಂ_ಸರಿ #ಆನಂದಪುರ_ಅಪಭ್ರಂಶ #ಗೆಜೆಟಿಯರ್_ರೈಲ್ವೆ_ಮತ್ತು_ಅಂಚೆ_ಇಲಾಖೆಯಲ್ಲಿ_ಆನಂದಪುರಂ #ಪುರಂ_ಪದ_ಮೂಲ_ಹಿಂದಿ_ಮತ್ತು_ಸಂಸ್ಕೃತ_ಮೂಲ #ಪುರಂ_ಎಂದರೆ_ನಗರ_ಪ್ರದೇಶ #ಆನಂದಪುರಂ_ಮೂಲ_ಹೆಸರು_ಯಡೇಹಳ್ಳಿ_ಕೋಟೆ. #Anandapuram #Keladi #Venkatappanayaka #Champakasarassu #Sagar #Shivamogga #Yadehalli #Badarinarayanaiyangar #Karnataka   ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೋಬಳಿ ಕೇಂದ್ರ ಆನಂದಪುರಂ.  #ಆನಂದಪುರಂ ಎಂಬ ಸ್ಟಾತಂತ್ರ್ಯ ಪೂರ್ವದ ಬೋರ್ಡ ಆನಂದಪುರಂ ಕನಕಮ್ಮಾಳ್ ಆಸ್ಪತ್ರೆ ಎದುರು ಇತ್ತು.    18ನೇ ಶತಮಾನದಲ್ಲಿ ಅನೇಕ ದಶಕಗಳ ಕಾಲ ಆನಂದಪುರಂ ತಾಲ್ಲೂಕು ಕೇಂದ್ರ ಆಗಿತ್ತು.     ಸಾಗರ ತಾಲೂಕಿನ ಮೊದಲ ನ್ಯಾಯಾಲಯ ಪ್ರಾರಂಭ ಆಗಿದ್ದು ಆನಂದಪುರಂನಲ್ಲಿ.   ಆನಂದಪುರಂ ರೈಲ್ವೆ ನಿಲ್ದಾಣದ ಬೋರ್ಡ್ ಕೂಡ ಇವತ್ತಿಗೆ ಆನಂದಪುರಂ ರೈಲ್ವೆ ನಿಲ್ದಾಣ ಎಂದೇ ಇದೆ.     ಆನಂದಪುರಂ ಅಂಚೆ ಕೇಂದ್ರ ಕೂಡ ಆನಂದಪುರಂ 577 412 ಆಗಿದೆ.    ಪುರಂ ಎಂದರೆ ವಿಶೇಷವಾಗಿ ರಾಜರ ಜೀವನ ಶೈಲಿ ಪ್ರತಿಬಿಂಬಿಸುತ್ತದೆ ಮತ್ತು ಬೌದ್ಧ, ಪಾಲಿ, ಹಿಂದೂ, ಸಂಸ್ಕೃತ, ಜೈನ, ಪ್ರಾಕೃತ ಪ್ರಾಚೀನ ಭಾರತದ ಇತ...

3490. ಅಮಿತ್ ಕುಮಾರ್

#ಅತ್ಯುತ್ತಮ_ಅಂಕಗಳೊಂದಿಗೆ_ಪದವಿ_ಶಿಕ್ಷಣ_ಪೂರೈಸಿದ #ನಮ್ಮೂರ_ಕಿರಿಯ_ಪತ್ರಕರ್ತ_ಸಾಹಿತಿ #ಅಮಿತ್_ದಾಸಕೊಪ್ಪ_ಇವರಿಗೆ_ಅಭಿನಂದನೆಗಳು #Bachulararts #Amithdasakoppa #Writer #Reporter #Anandapuram    ಅಮಿತ್ ದಾಸಕೊಪ್ಪ ನಮ್ಮ ಊರಿನ ಕಿರಿಯ ಪತ್ರಕರ್ತ ಮತ್ತು ಸಾಹಿತಿ, ಈಗಾಗಲೇ ಇವರು ನೂರಕ್ಕೂ ಹೆಚ್ಚು ಕವನಗಳನ್ನ ಬರೆದಿದ್ದಾರೆ ಅನೇಕ ವೈಚಾರಿಕ ಲೇಖನ ಪ್ರಕಟಿಸಿದ್ದಾರೆ.    ಅನೇಕ ಪತ್ರಿಕೆಗಳಿಗೆ ಪ್ರಿಲ್ಯಾನ್ಸ್ ವರದಿಗಾರರಾಗಿದ್ದಾರೆ, ಇವರದೇ #Amith_Times ಎಂಬ ನ್ಯೂಸ್ ವೆಬ್ ಚಾನಲ್ ಇದೆ, ಜಿಲ್ಲಾ ಪತ್ರಿಕೆ #ಎಚ್ಚರಿಕೆ ದಿನಪತ್ರಿಕೆ ವರದಿಗಾರರಾಗಿದ್ದಾರೆ ಮತ್ತು #ಹಾಯ್_ಬೆಂಗಳೂರು ಪತ್ರಿಕೆ ವಿತರಕರಾಗಿದ್ದಾರೆ.   ಆಯ್ದ ಪುಸ್ತಕಗಳನ್ನ ಹುಡುಕಿ ಓದುತ್ತಾರೆ ನನ್ನ ಸಂಗ್ರಹದ ಪುಸ್ತಕ ಒಯ್ದು ಓದಿ ವಾಪಾಸು ಮಾಡಿ ಅದರ ತಿರಳು ಚರ್ಚಿಸುತ್ತಾರೆ ಇವರ ಈ ಹವ್ಯಾಸ ನನಗೆ ಇವರ ಬಗ್ಗೆ ವಿಶೇಷ ಅಭಿಮಾನಕ್ಕೆ ಕಾರಣ.    ಚಿಕ್ಕವನಿದ್ದಾಗಲೇ ತಂದೆ ಆತ್ಮಹತ್ಯೆ ನಂತರ ಕುಟುಂಬದ ಆರ್ಥಿಕ ಸಂಕಷ್ಟಗಳು - ಅವಮಾನಗಳು ಈ ಯುವಕನಿಗೆ ಪರಿಸ್ಥಿತಿ ಎದುರಿಸುವ ಛಲಗಾರಿಕೆ ನೀಡಿದೆ.   ತಮ್ಮ BA ವ್ಯಾಸಂಗದ ಜೊತೆ ಇದೆಲ್ಲ ಇವರ ಹವ್ಯಾಸ ಆಗಿತ್ತು, ಈ ಹವ್ಯಾಸಗಳು ಇವರ ಓದಿಗೆ ಯಾವುದೇ ಅಡೆ ತಡೆ ಆಗಲಿಲ್ಲ ಅನ್ನುವುದಕ್ಕೆ ಮೊನ್ನೆ ಇವರ ಬಿ.ಎ. ಪದವಿ ಅಂಕ ಪಟ್ಟಿ ಸಾಕ್ಷಿ ಆಗಿದೆ.   ಈಗ ಜರ...

3489. ಶರಾವತಿ ಕೊಳ್ಳದಲ್ಲಿ

#ಹದಿನೆಂಟು_ಸಾವಿರ_ಟನ್_ಬ್ಲಾಸ್ಟಿಂಗ್_ಶರಾವತಿ_ಕೊಳ್ಳದಲ್ಲಿ_ಸ್ಟೋಟವಾಗಲಿದೆ #ಟೆಂಡರ್_ಹಿಡಿದ_ಕಂಪನಿ_1100_ಕೋಟಿ_ರಾಜಕೀಯ_ಪಕ್ಷಕ್ಕೆ_ಎಲೆಕ್ಟ್ರೋಲ್_ಬಾಂಡ್_ದೇಣಿಗೆ #ಶರಾವತಿ_ಪಂಪ್ಡ್_ಸ್ಟೋರೇಜ್_ವಿದ್ಯುತ್_ಯೋಜನೆ #ಗೇರುಸೊಪ್ಪೆಯ_ಜನಾಭಿಪ್ರಾಯದ_ಸಭೆಯಲ್ಲಿ #ಗೇರುಸೊಪ್ಪೆ_ಆಂಜನೆಯ_ದೇವಾಲಯದ_ಮಾರುತಿ_ಗುರೂಜಿ_ಮಾತುಗಳು #ಸಮಸ್ತ_ಪಶ್ಚಿಮ_ಘಟ್ಟದ_ಧ್ವನಿ #ಅವರ_ಧ್ವನಿ_ಪ್ರತಿಧ್ವನಿಯಾಗಿ_ವೈರಲ್_ಆಗಿದೆ. #Sharavathi #Pumpedstorage #Project #Gerusoppe #Maruthiguruji #Uttarakannadadistrict #Shivamogga #Govtofkarnataka #Govtofindia   ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಈ ಕಾಮಗಾರಿಗೆ ಬರೋಬ್ಬರಿ 18,000 ಟನ್ ಬ್ಲಾಸ್ಟಿಂಗ್ ಮೆಟೀರಿಯಲ್ ಸ್ಪೋಟಿಸಲಿದೆ...   2006ರಲ್ಲಿ ಈ ಪ್ರಾಜೆಕ್ಟ್ ಅಂದಾಜು ವೆಚ್ಚ ನಾಲ್ಕು ಸಾವಿರ ಕೋಟಿ ಈಗ 2025 ರಲ್ಲಿ 11 ಸಾವಿರ ಕೋಟಿ ಪ್ರಾಜೆಕ್ಟ್, ಮುಕ್ತಾಯವಾಗುವಾಗ ಎಷ್ಟೊ....    ಶರಾವತಿ ಸ್ಟೋರೇಜ್ ಪ್ರಾಜೆಕ್ಟ್ ಬಗ್ಗೆ ಈಗಾಗಲೇ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಗಲ್, ಉತ್ತರ ಕನ್ನಡ ಜಿಲ್ಲೆಯ ಕುಮುಟಾ,ಹೊನ್ನಾವರ ಮತ್ತು ಗೇರುಸೊಪ್ಪೆ ಭಾಗದಲ್ಲಿ ಜನ ಸಂಪರ್ಕ ಸಭೆಗಳನ್ನು ರಾಜ್ಯ ಸರ್ಕಾರ ನಡೆಸಿದೆ.    ಮೊನ್ನೆ ಗೇರುಸೊಪ್ಪೆಯಲ್ಲಿ #ಶರಾವತಿ_ಪಂಪ್ಡ್_ಸ್ಟೋರೇಜ್ ಯೋಜನೆ ಜನ ಸಂಪರ್ಕ ಸಭೆಯಲ್ಲಿ ಸುತ್ತಮುತ್ತಲಿನ 10,000ಕ್ಕೂ ಹ...