Skip to main content

Posts

Showing posts from 2025

Blog number 3402. ರಂಜಾನ್ ಮಾಹಿತಿ

#ರಂಜಾನ್_ಹಬ್ಬದ_ಶುಭಾಷಯಗಳು #ಮುಸ್ಲಿಂ_ಧರ್ಮಿಯರಲ್ಲಿ_ರಂಜಾನ್_ಸಮಯದಲ್ಲಿ_ಹೆಚ್ಚಿನ_ಪ್ರತಿಫಲ_ದೊರೆಯುತ್ತದೆಂಬ_ನಂಬಿಕೆ #ಧರ್ಮಗ್ರಂಥ_ಕುರಾನ್_ಪೂರ್ಣ_ಈ_ತಿಂಗಳಲ್ಲಿ_ಪಠಣ_ಮಾಡುತ್ತಾರೆ #ಕುರಾನ್_ಜಗತ್ತಿಗೆ_ಬಹಿರಂಗ_ಪಡಿಸಿದ_ಶಕ್ತಿಯ_ರಾತ್ರಿ_ರಂಜಾನ್_27ನೇ_ರಾತ್ರಿ #ರಂಜಾನ್_ತಿಂಗಳ_ಕೊನೆಯಲ್ಲಿ_ದಾನ_ಕಡ್ಡಾಯ ಪ್ರತಿ ವರ್ಷ ರಂಜಾನ್ ಇಂಗ್ಲೀಷ್ ಕ್ಯಾಲೆಂಡರ್ ನ 11 ದಿನ ಹಿಂದೆ ಸರಿಯಲು ಕಾರಣ...   ರಂಜಾನ್ ಇಸ್ಲಾಮಿಕ್ ಕ್ಯಾಲೆಂಡರ್‌ನ 9 ನೇ ತಿಂಗಳು, ಇದು ಸುಮಾರು 354 ದಿನಗಳ 12 ತಿಂಗಳ ಚಂದ್ರ ವರ್ಷವನ್ನು ಆಧರಿಸಿದೆ.  ಚಂದ್ರ ವರ್ಷವು ಸೌರ ವರ್ಷಕ್ಕಿಂತ 11 ದಿನಗಳು ಕಡಿಮೆ ಇರುವುದರಿಂದ, ಪ್ರತಿ ಚಂದ್ರ ತಿಂಗಳು ಪ್ರತಿ ವರ್ಷ 11 ದಿನಗಳ ಹಿಂದೆ ಚಲಿಸುತ್ತದೆ.  ಚಂದ್ರ ತಿಂಗಳುಗಳು ಪೂರ್ಣ ಚಕ್ರವನ್ನು ಪೂರ್ಣಗೊಳಿಸಲು ಮತ್ತು ಅದೇ ಋತುವಿಗೆ ಮರಳಲು 33 ಸೌರ ವರ್ಷಗಳನ್ನು ತೆಗೆದುಕೊಳ್ಳುತ್ತದೆ.  ಸಾಂಪ್ರದಾಯಿಕವಾಗಿ ಅಮಾವಾಸ್ಯೆಯ ದರ್ಶನದ ಆಧಾರದ ಮೇಲೆ ತಿಂಗಳು ಪ್ರಾರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ. #RamadanMubarak #Ramadan #islam #kuran     ಮುಸ್ಲಿಂ ಸಮುದಾಯ ಆಚರಿಸುವ ರಂಜಾನ್ ಆಚರಣೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ಓದಿ...    ರಂಜಾನ್ ಅಥವ ರಮದಾನ್ (ಅರೇಬಿಕ್‌ ಭಾಷೆಯಲ್ಲಿ) ಇಸ್ಲಾಮ್ ಕ್ಯಾಲೆಂಡರ್‌ನಲ್ಲಿ ವರ್ಷದ ಒಂಬತ್ತನೇ ತಿಂಗಳು. ಸಿಯಾಮ್ ಅಥವಾ...

Blog number 3401. ಅಂದಾಸುರ ರುದ್ರಪ್ಪರ ಸಾಧನೆ

#ನಮ್ಮೂರಿನ_ಹೆಮ್ಮೆ_ರುದ್ರಪ್ಪ_ಅಂದಾಸುರ #ಕಷ್ಟದಿಂದ_ವಿದ್ಯಾಭ್ಯಾಸ_ಮಾಡಿ_ಉನ್ನತ_ಹುದ್ದೆ_ಪಡೆದವರು #ಹುಟ್ಟಿದ_ಊರಲ್ಲಿ_ಮನೆ_ಗೃಹಪ್ರವೇಶ #ಆಹ್ವಾನ_ನೀಡಲು_ಬಂದಿದ್ದರು    ನಮ್ಮ ತಂದೆ ರುದ್ರಪ್ಪರ ಬಗ್ಗೆ ಹೆಚ್ಚು ಅಭಿಮಾನ ಹೊಂದಿದ್ದರು.    ರುದ್ರಪ್ಪನವರು ಮತ್ತು ಕಾಳೇಶ್ವರದ ಕೆ.ಆರ್. ದರ್ಮಪ್ಪನವರು ಆನಂದಪುರಂನಲ್ಲಿ ವಿದ್ಯಾಬ್ಯಾಸದಲ್ಲಿ ಶಾಲಾ ಸಹಪಾಟಿಗಳು.        ರುದ್ರಪ್ಪನವರು ನಮ್ಮ ಆನಂದಪುರಂ ಹೋಬಳಿಯ ಈಗಿನ ಆಚಾಪುರ ಗ್ರಾಮ ಪಂಚಾಯಿತಿಗೆ ಸೇರಿದ ಅಂದಾಪುರ ಗ್ರಾಮದ ಶ್ರೀಮತಿ ರಾಮಕ್ಕ ಮತ್ತು ಸಿದ್ದಪ್ಪ ಕಟಗಾರ ದಂಪತಿ ಪುತ್ರ.    ಇವರ ಪತ್ನಿ ಶ್ರೀಮತಿ ಜಯಮ್ಮ ಸಮೀಪದ ಕೆರೆಹಿತ್ತಲು ಗ್ರಾಮದ ಶ್ರೀಮತಿ ಕೊಲ್ಲಮ್ಮ ಮತ್ತು ಗುಮ್ಮಿ ನಾಗಪ್ಪರ ಪುತ್ರಿ (ಗುಮ್ಮಿ ನಾಗಣ್ಣ ಅವರ ಊರಿನ ಶಾಲೆಗೆ ಭೂದಾನ ಮಾಡಿದವರು).    ನಿನ್ನೆ ದಂಪತಿಗಳು  ಅಂದಾಸುರದಲ್ಲಿ ನಿರ್ಮಿಸಿದ ನೂತನ ಗೃಹ ಪ್ರದೇಶದ ಆಹ್ವಾನ ಪತ್ರಿಕೆ ನೀಡಲು ಬಂದಿದ್ದರು ದಿನಾಂಕ 9 ಏಪ್ರಿಲ್ 2025 ಬುಧವಾರ ಇವರ ನೂತನ ಗೃಹ #ಶ್ರೀಅನುಗ್ರಹ_ನಿಲಯದ ಗೃಹ ಪ್ರವೇಶದ ಕಾರ್ಯಕ್ರಮ ಇದೆ.   ಚಹಾದ ಆತಿಥ್ಯದ ಜೊತೆ ರುದ್ರಪ್ಪರನ್ನ ಮಾತಿಗೆ ಎಳೆದಾಗ ನನ್ನ ತಂದೆ ಮತ್ತು ಅವರ ಒಡನಾಟ, ಅವರ ವಿದ್ಯಾಬ್ಯಾಸ -ಉದ್ಯೋಗದ ಬಗ್ಗೆ ಮತ್ತು ಆಗಿನ ಆನಂದಪುರಂ ಹೇಗಿತ್ತು ಅಂತಲೂ ಅ...

Blog number 3399. ಕೆಂಜಿಗಾಪುರ ವೀರ ಭದ್ರ ದೇವರ ರಥೋತ್ಸವ

#ಕೆಂಜಿಗಾಪುರದ_ಶ್ರೀವೀರಭದ್ರಸ್ವಾಮಿ_ದೇವರ_ಜಾತ್ರೆ_ರಥೋತ್ಸವ. #ಆನಂದಪುರಂ_ಸಮೀಪದ_ಕೆಂಜಿಗಾಪುರದಲ್ಲಿ #ಪ್ರತಿವರ್ಷ_ಹೋಳಿಹುಣ್ಣಿಮೆ_ದಿನ_ರಥೋತ್ಸವ_ಆಚರಣೆ #ವಿಜಯನಗರದ_ಅರಸು_ಪ್ರೌಡ_ಪ್ರತಾಪ_ರಾಯ_606_ವರ್ಷದ_ಹಿಂದೆ_ನಿರ್ಮಿಸಿದ_ದಾಖಲೆಯಿದೆ #ಪ್ರೌಡ_ಪ್ರತಾಪರಿಗೆ_ಗಜ_ಬೇಟೆಗಾರ_ಎಂಬ_ಬಿರುದು_ಇತ್ತು. #shivamogga #sagar #ananandapuram #Yadehalli #kenjigapura #veerabadreshwara #temple     ವಿಜಯನಗರದ ಅರಸು ಪ್ರೌಡ ಪ್ರತಾಪರಾಯ ಆ ಕಾಲದಲ್ಲಿ ಅರಣ್ಯದಲ್ಲಿನ ಕಾಡಾನೆಗಳನ್ನು ಹಿಡಿದು ಪಳಗಿಸಿ ಅದನ್ನು ತನ್ನ ಸೈನ್ಯದಲ್ಲಿ ಬಳಸುತ್ತಿದ್ದಂತ ಸಾಹಸಿ ಆದ್ದರಿಂದ ಪ್ರೌಢ ಪ್ರತಾಪ ರಾಯರಿಗೆ #ಗಜ_ಬೇಟೆಗಾರ ಎಂಬ ಬಿರುದು ಇತ್ತು.    ಆರುನೂರು ವರ್ಷಗಳ ಹಿಂದೆ ಈ ಪ್ರದೇಶ ದೊಡ್ಡ ಜನ ವಸತಿ ಪ್ರದೇಶ ಆಗಿರಬೇಕು.    ಕೆಂಜಿಗಾಪುರದ ಶ್ರೀವೀರಭದ್ರೇಶ್ವರ ದೇವಾಲಯ ನಿರ್ಮಾಣವಾಗಿ ಇಲ್ಲಿನ ಶಾಸನಗಳ ಪ್ರಕಾರ 606 ವರ್ಷಗಳಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಚಿಕ್ಕ ಗ್ರಾಮ  ಕೆಂಜಿಗಾಪುರ ಈಗ ಯಡೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ.   ಈ ದೇವಾಲಯ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದೆ.    ಪ್ರತಿ ವರ್ಷ ಹೋಳಿ ಹುಣ್ಣಿಮೆಯಂದು ಶ್ರೀವೀರಭದ್ರ ದೇವರ ರಥೋತ್ಸವ ನೆರವೇರುತ್ತದೆ ಅದರ ಹಿಂದಿನ ದಿನ ಹೂವಿನ ಪಲ್ಲಕ್ಕಿ ಉತ್ಸವ ನ...

Blog number 3400. ಸುನೀತಾ ವಿಲಿಯಮ್ಸ್ ಭಾರತೀಯ ಮೂಲದ ಅಮೇರಿಕನ್ ಬಾಹ್ಯಾಕಾಶ ಯಾತ್ರಿ

#ಬಾಹ್ಯಾಕಾಶ_ನಿಲ್ದಾಣದಿಂದ_ಭೂಮಿಗೆ_ತಲುಪಲಿರುವ #ಸುನೀತಾವಿಲಿಯಂ_ಮತ್ತು_ಗ್ಯಾರಿವಿಲ್ಮೋರ್ #ಮಾರ್ಚ್_16ರಂದು_ಭೂಮಿಗೆ #spaceexploration #kenadyspacecentre #sunithawilliams #spacestation #Nyasa   ಸುನೀತಾ ಲಿನ್ #ಸುನಿ_ವಿಲಿಯಮ್ಸ್ ಒಬ್ಬ ಅಮೇರಿಕದ ಗಗನ ಯಾತ್ರಿ ಮತ್ತು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಪ್ರಸ್ತುತ ಕಮಾಂಡರ್.   2024 ಜೂನ್ 5 ರಂದು 10 ದಿನಗಳ ಕೆಲಸಕ್ಕಾಗಿ ಬಾಹ್ಯಾಕಾಶ ನಿಲ್ದಾಣ ತಲುಪುತ್ತಾರೆ.   ಇವರು ಪ್ರಯಾಣಿಸಿದ್ದ ಬೋಯಿಂಗ್ ಸ್ಟಾರ್ ಲೈನರ್ ನೌಕೆಯ ರಿಟರ್ನ್ ಕ್ಯಾಪ್ಸೂಲ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಿಂದ ಕಳೆದ 9 ತಿಂಗಳಿಂದ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದಿದ್ದಾರೆ.   ಕಳೆದ ಸೆಪ್ಟೆಂಬರ್ 2024ರಲ್ಲಿ ರಿಟರ್ನ್ ಕ್ಯಾಪ್ಸೂಲ್ ತಾಂತ್ರಿಕ ದೋಷವಿದ್ದರಿಂದ ಮಾನವ ರಹಿತ ಖಾಲಿ ಬಾಹ್ಯಾಕಾಶ ನೌಕೆ ಭೂಮಿಗೆ ಮರಳಿತ್ತು.   ಈ ವರ್ಷ ಫೆಬ್ರುವರಿ 2025ರಲ್ಲಿ ಸ್ಪೇಸ್ ಎಕ್ಸ್ ಕ್ರೂ-9 ಮಿಷನ್ ಲಾಂಚ್ ಮಾಡಲಾಗಿತ್ತು ಅದರಲ್ಲಿ ಗಗನಯಾತ್ರಿ ನಿಕ್ ಹೇಗ್ ಮತ್ತು ರೋಸ್ ಕಾಸ್ಮೇನ್ ಬಾಹ್ಯಾಕಾಶ ನಿಲ್ದಾಣ ತಲುಪಿದ್ದಾರೆ ಅವರ ಜೊತೆ ಸುನೀತಾ ವಿಲಿಯಮ್ಸ್ ಮತ್ತು ಗ್ಯಾರಿ ಎಲ್ಮೋರ್ ಭೂಮಿಗೆ ವಾಪಾಸಾಗಲಿದ್ದಾರೆ.  ಅಮೇರಿಕಾದ ಗಗನಯಾತ್ರಿ 60 ವರ್ಷದ ಸುನೀತಾ ವಿಲಿಯಂ ತಂದೆ ಭಾರತೀಯ ಮೂಲದ ನರರೋಗ ತಜ್ಞ ದೀಪಕ್ ಪಾಂಡ್ಯ ಗುಜರಾತಿನ ಮೆಹ್ಸಾನ ಜಿ...

Blog number 3398 ರಿಪ್ಪನಪೇಟೆ ವಿನಾಯಕ ಸರ್ಕಲ್ ನಿಂದ ಯಡೇಹಳ್ಳಿ ಅಂಬೇಡ್ಕರ್ ಸರ್ಕಲ್ ರಸ್ತೆ ಅಗಲಿಕರಣ

#ರಿಪ್ಪನಪೇಟೆ_ಆನಂದಪುರಂ_ರಸ್ತೆ_ಅಗಲೀಕರಣ  #ಎರಡೂ_ತಾಲೂಕುಗಳ_ಪ್ರಮುಖ_ಕೇಂದ್ರಗಳಿಗೆ_ಸಂಪರ್ಕ #ರಿಪ್ಪನಪೇಟೆ_ವಿನಾಯಕ_ವೃತ್ತದಿಂದ #ಆನಂದಪುರಂನ_ಯಡೇಹಳ್ಳಿ_ಅಂಬೇಡ್ಕರ್_ವೃತ್ತದವರೆಗೆ 14-march-2025 #yadehallicircle #Anandapuram #ripponpet #roadsafety     ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಮತ್ತು ಸಾಗರ ತಾಲೂಕಿನ ಆನಂದಪುರಂಗೆ ಇರುವ ಅಂತರ ಕೇವಲ 10 ಕಿ.ಮೀಟರ್.     ಇವೆರೆಡೂ ಊರುಗಳು ಆಯಾ ತಾಲೂಕಿನ ಪ್ರಮುಖ ವ್ಯಾಪಾರಿ ಕೇಂದ್ರ ಮತ್ತು ಹೋಬಳಿ ಕೇಂದ್ರಗಳಾಗಿದೆ.      ಇವೆರೆಡೂ ಊರುಗಳು ಈಗ ಗ್ರಾಮ ಪಂಚಾಯಿತಿ ಕೇಂದ್ರಗಳಾಗಿದೆ ಇದನ್ನು ಶೀಘ್ರವಾಗಿ  ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸಬಹುದಾಗಿದೆ.     ರಿಪ್ಪನ್ ಪೇಟೆ ವಿನಾಯಕ ವೃತ್ತದಿಂದ ಆನಂದಪುರಂನ ಯಡೇಹಳ್ಳಿಯ ಅಂಬೇಡ್ಕರ್ ವೃತ್ತದವರೆಗಿನ ರಸ್ತೆ ಕಾಮಗಾರಿ ಭರದಿಂದ ಸಾಗಿದೆ.

Blog number 3397. ಕೆಂಜಿಗಾಪುರದ ವೀರಭದ್ರ ಸ್ವಾಮಿ ದೇವರ ಇತಿಹಾಸ

#ದಿಲೀಪ್_ನಾಡಿಗ್ #ಶಿವಮೊಗ್ಗದ_ಇತಿಹಾಸ_ಸಂಶೋದಕರು #ಕೆಂಜಿಗಾಪುರದ_ವೀರಭದ್ರ_ದೇವರ_ರಥೋತ್ಸವದ_ಬಗ್ಗೆ_ತಿಳಿಸಿದ್ದಾರೆ. ನಮ್ಮೂರು ಆನಂದಪುರಂನ ಯಡೇಹಳ್ಳಿ ಸಮೀಪದ ಕೆಂಜಿಗಾಪುರದ ವೀರಭದ್ರ ದೇವರ ರಥೋತ್ಸವ ಹೋಳಿ ಹುಣ್ಣಿಮೆ ದಿನ ಭಕ್ತಿಪೂರ್ವಕವಾಗಿ ನೆರವೇರಿತು ಮಲ್ಲ ಸಮಾಜದವರು ಹಾಗೂ ಕೆಳದಿಯ ಸಂಬಂಧಿಕರಾದ ಆನಂದಪುರ ಮರಿಯಪ್ಪ  ಶೆಟ್ಟರು. ಚನ್ನಶೆಟ್ಟಿಕೊಪ್ಪದ  ದುಗ್ಗಾನಿ  ಶೆಟ್ಟರು.ಹಾಗೂ ಇತರೆ  ಮನೆತನದವರ ಆರಾಧ್ಯ ಮನೆದೇವರು  ಕೆಂಜಿಗಾಪುರ ಶ್ರೀ ವೀರಭದ್ರೇಶ್ವರ ಸ್ವಾಮಿ #kenjigapura #veerabadra #temple #keladi  ಇತಿಹಾಸ ಸಂಶೋದಕ ದಿಲೀಪ್ ನಾಡಿಗ್ ಲೇಖನ ಓದಿ ಮಲ್ಲ ಸಾಮ್ರಾಜ್ಯ  ವಿಜಯನಗರ ಸಾಮ್ರಾಜ್ಯ  ಸಂಗಮ ವಂಶಸ್ಥರು   "#ಕೆಂಜಿಗಾಪುರ_ಶ್ರೀವೀರಭದ್ರೇಶ್ವರ_ರಥೋತ್ಸವ " ಆನಂದಪುರ ಎಡೆಹಳ್ಳಿ ಸಮೀಪವಿರುವ ಕೆಂಜಿಗಾಪುರ ಶ್ರೀ ವೀರಭದ್ರೇಶ್ವರ ದೇವಸ್ಥಾನ ಹಾಗೂ ಕಣ್ಗಳ ವೀರಪ್ಪ ಗುರುಗಳ ಗದ್ದುಗೆ  ಪ್ರತಿ ವರ್ಷವೂ ಕೆಂಜಿಗಾಪುರ  ಶ್ರೀ  ವೀರಭದ್ರೇಶ್ವರ ದೇವಸ್ಥಾನದ ಹೋಳಿ ಹುಣ್ಣಿಮೆಯ ರಥೋತ್ಸವವು ಐತಿಹಾಸಿಕ ಹಾಗೂ ಬಹಳ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಂತಹ ಪದ್ಧತಿ ಅದೇ ರೀತಿ ಈ ವರ್ಷವೂ  ವಿಜೃಂಭಣೆಯಿಂದ ನೆರವೇರಿದೆ      ಕೆಂಜಗಾಪುರದ ಶ್ರೀ ವೀರಭದ್ರೇಶ್ವರ ದೇವಸ್ಥಾನವು ವಿಜಯನಗರ ಸಾಮ್ರಾಜ್ಯದ...

Blog number 3396. ದಿನಾಂಕ 9 - ಮಾರ್ಚ್- 2025 ರ ವರೆಗಿನ ರಾಮಚಂದ್ರಪುರ ಮಠದ ಸ್ವಾಮಿಗಳ ಮೇಲಿನ ಕೇಸುಗಳ update ನೋಡಿ

ಜೆಗಳೆಮನೆ ಗಣಪತಿ ಭಟ್ಟರ ಪೇಸ್ ಬುಕ್ ಪೋಸ್ಟ್ ದಿನಾಂಕ 9 - ಮಾರ್ಚ್- 2025. ರಾಮಚಂದ್ರಪುರ ಮಠದ ಸ್ವಾಮಿಗಳ ವಿರುದ್ಧದಎರಡು ಕೇಸ್ ಗಳ ವಿವರ. (ಶಂಕರಭಟ್ಟರ ಕೃಪೆಯಿಂದ) ಮೂಲ ಇಂಗ್ಲಿಷ್, ಭಾಷಾಂತರ ಕನ್ನಡದಲ್ಲಿ. "First Rape Case:  In August 2014, the daughter of the Shastri couple filed a complaint against Ragaveshwar Swami at the Banashankari police station in Bangalore, alleging her mother had been sexually assaulted (FIR 219/14). The case was transferred to the Girinagar police station (FIR 164/14). Prior to this, a blackmail case was registered against the Diwakar couple at the Honnavar police station (FIR 342/14). This case also pending in apex Court, case diary no 10408/19. The CID filed a charge sheet against Swamy (SC_1242/16). The Bangalore Sessions Court discharged Swamy, citing a "consensual relationship" without a trial. The CID and victim filed a revision petition in the High Court (CrlRP 550/16 and CrlRP 638/16). The Court held that the CID wasn't a "Police Station...

#Blog number 3395. ರಾಮಚಂದ್ರಾಪುರ ಮಠದ ಈಗಿನ ಫೀಠಾಧಿಪತಿ ರಾಘವೇಶ್ವರ ಭಾರತಿ ಸ್ವಾಮಿಗಳ ಶಾಲಾ TC ಮತ್ತು ಜಾತಕ ಬೇರೆ ಬೇರೆ ಯಾಕೆ?

ರಾಮಚಂದ್ರಾಪುರ ಮಠದ ಈಗಿನ ಫೀಠಾಧಿಪತಿ ರಾಘವೇಶ್ವರ ಭಾರತಿ ಸ್ವಾಮಿಗಳ ಶಾಲಾ TC ಮತ್ತು ಜಾತಕ ಬೇರೆ ಬೇರೆ ಯಾಕೆ? ಸಿ ಎಮ್ ಶ್ರೀನಿವಾಸಭಟ್ಟರ ಮಗ ಹರೀಶನ TC  ಹುಟ್ಟಿದ ತಾರೀಖು 15 5 75. ಹದಿನೈದು, ಐದು ಎಪ್ಪತ್ತೈದು. ಲಿಂಗನಮಕ್ಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ್ದು. 7 6 86 ರಂದು ಈ ಟಿಸಿ ಕೊಡಲ್ಪಟ್ಟಿದೆ. ಆರನೇ ತರಗತಿ ಮುಗಿಸಿ ಏಳನೇ ತರಗತಿಗೆ ಜಾಯಿನ್ ಆಗುವಾಗ  ಹನ್ನೊಂದು ವರ್ಷ.ಆವಾಗ ಕೊಟ್ಟಿದ್ದು. ಜಾತಕವೂ ಹರೀಶನದೇ. ಜಾತಕದಲ್ಲಿ ಹುಟ್ಟಿದ ತಾರೀಖು 25 7 75. ಇಪ್ಪತೈದು ಏಳು ಎಪ್ಪತ್ತೈದು. 15 5 75 ಕ್ಕು 25 7 75 ಕ್ಕು ಅಂತರ ಎರಡು ತಿಂಗಳು ಹತ್ತು ದಿನ ಮಾತ್ರ. ಜೂನ್‌ ತಿಂಗಳು ಶಾಲೆಗೆ ಸೇರಲು ಆವಾಗ ಐದು ವರ್ಷ ಹತ್ತು ತಿಂಗಳು ಆಗ ಬೇಕಾಗಿತ್ತು..25 7 75 ನೇ ತಾರೀಖು  ಇವರಿಗೆ ಶಾಲೆಗೆ ಸೇರಿಸಲು ಅಡ್ಡಿಯಾದ ತಾರೀಖಲ್ಲ.ಆ ತಾರೀಖು ಕೂಡ ಶಾಲೆಗೆ ಸೇರಿಸಿಕೊಳ್ಳಲು ಅರ್ಹವಾದ ತಾರೀಖೇ. ಹೀಗಿದ್ದರೂ ಜಾತಕದಲ್ಲಿ ಒಂದು ಹುಟ್ಟಿದ ತಾರೀಖು, ಶಾಲಾ ಸರ್ಟಿಫಿಕೇಟ್ ನಲ್ಲಿ ಒಂದು ಹುಟ್ಟಿದ ತಾರೀಖು ಯಾಕಾಯಿತು? ಯಾಕಾಯಿತು ಎಂದರೆ ನಿಜವಾಗಿ ಹುಟ್ಟಿದ್ದು 15 5 75 ರಂದೇ. ಆದರೆ ಆ ದಿನದ ಜಾತಕದಲ್ಲಿ ಸನ್ಯಾಸಯೋಗ ಇಲ್ಲ.ಪೀಠಾಧಿಪತಿ ಯಾಗಲು ತಯಾರಿಸಿದ ಜಾತಕ 25 7 75 ರಂದು ಸನ್ಯಾಸಯೋಗ ಇದೆ.ಅದಕ್ಕಾಗಿಯೇ ಆ ತಾರೀಖಿನ ಜಾತಕ ಮಾಡಿಸಿ 35ನೇ ಪೀಠಾಧಿಪತಿ ಗಳಾದ ಶ್ರೀ ರಾಘವೇಂದ್ರ ಭಾರತಿಯವರಿಗೆ ತಪ್...

Blog number 3394. ಜ್ಯೋತಿಷಿ ಕಲ್ಮಕ್ಕಿ ಬೂಧ್ಯಪ್ಪ ಗೌಡರು ಕೆರೆಹಿತ್ತಲು

#ಶ್ರೀವರಸಿದ್ಧಿ_ವಿನಾಯಕ_ಸ್ವಾಮಿ_ದೇವಾಲಯದ_ಟ್ರಸ್ಟಿ #ಜಾತ್ರಾ_ಸಮಿತಿ_ಖಜಾಂಚಿ #ಜ್ಯೋತಿಷಿ_ಕಲ್ಮಕ್ಕಿ_ಬೂಧ್ಯಪ್ಪ_ಗೌಡರು #ನಮ್ಮೂರ_ಜಾತ್ರೆ_ಮುಗಿದರೂ #ಬೂದ್ಯಪ್ಪ_ಗೌಡರ_ಕೆಲಸ_ಮುಗಿಯುವುದಿಲ್ಲ   ನಮ್ಮೂರ ಶ್ರೀವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯದಲ್ಲಿ  ಪ್ರತಿ ವರ್ಷದಂತೆ ಈ ವರ್ಷ 19ನೇ ವರ್ಷದ ಬ್ರಹ್ಮರಥೋತ್ಸವ ಮತ್ತು ಪುನರಷ್ಟಬಂಧ ಕಾರ್ಯಕ್ರಮಗಳು ಭಕ್ತಿಪೂರ್ವಕವಾಗಿ ನೆರವೇರಿತು.   ಈ ದೇವಾಲಯದಲ್ಲಿ ಎಲೆ ಮರಿಯ ಕಾಯಿಯಂತೆ ಭಕ್ತಿಯಿಂದ ಶ್ರಮ ಪಡುವವರಲ್ಲಿ ಆಚಾಪುರ ಗ್ರಾಮ ಪಂಚಾಯಿತಿಯ ಕೆರೆಹಿತ್ತಲು ಗ್ರಾಮದ ಜ್ಯೋತಿಷಿ ಕಲ್ಮಕ್ಕಿ ಬೂದ್ಯಪ್ಪ ಗೌಡರು ಪ್ರಮುಖರು.   ಕಳೆದ 19 ವರ್ಷದಿಂದ ಇವರ ಸೇವೆ ಶ್ಲಾಘನೀಯವಾಗಿದೆ ಜಾತ್ರಾ ಸಮಿತಿಯ ಖಜಾಂಚಿ ಆಗಿ ಈವರೆಗೂ ಮುಂದುವರಿದಿದ್ದಾರೆ ಇವರ ಭಕ್ತಿ ಮತ್ತು ನಿಷ್ಟೆಯ ನಿರಂತರ ಸೇವೆಗಾಗಿ ದೇವಾಲಯದ ಗೌರವಾದ್ಯಕ್ಷರಾದ ಡಾ. N.S.ವಿಶ್ವಪತಿ ಶಾಸ್ತ್ರೀಗಳು ಇವರನ್ನು ಧರ್ಮದರ್ಶಿಗಳಾಗಿ ನೇಮಿಸಿದ್ದಾರೆ.   ಭಕ್ತರು ನೀಡುವ ಪ್ರತಿ ಪೈಸೆಯ ಲೆಖ್ಖ ಮಾಡಿ ಅಂತಿಮ ಜಾತ್ರಾ ಖರ್ಚು ವೆಚ್ಚಗಳ ಪಟ್ಟಿ ಸಮಿತಿಯಲ್ಲಿ ಅನುಮೋದನೆ ಪಡೆದು ದೇವಾಲಯದ ನೋಟೀಸು ಬೋರ್ಡಿಗೆ ಹಾಕುವ ತನಕ ಬೂಧ್ಯಪ್ಪ ಗೌಡರ ಕೆಲಸ ಇರುತ್ತದೆ ಆದ್ದರಿಂದಲೇ ಜಾತ್ರೆ ಮುಗಿದರೂ ಬೂಧ್ಯಪ್ಪ ಗೌಡರ ಕೆಲಸ ಜಾತ್ರೆ ನಂತರದ     ಕೆಲ ದಿನಗಳ ತನಕ ಇರುತ್ತದೆ.

Blog number 3393. ಜಾರ್ಜ್ ಪರ್ನಾಂಡಿಸರ ಗೇಟಿಲ್ಲದ ದೆಹಲಿ ಮನೆ

#ದೇಶದ_ರಕ್ಷಣಾ_ಮಂತ್ರಿ_ಆಗಿದ್ದಾಗಲೂ #ದೆಹಲಿಯ_ಜಾಜ್೯ಪರ್ನಾಂಡೀಸರ_ಮನೆಯ_ಮೈನ್_ಗೇಟ್_ಯಾಕೆ_ಇರಲಿಲ್ಲ. #ಇದಕ್ಕೊಂದು_ಕಾರಣವಿದೆ_ಅಲ್ಲೊಂದು_ಪ್ರತಿಭಟನೆ_ಇದೆ  ಕೃಷ್ಣಮೆನನ್ ಮಾರ್ಗ ದೆಹಲಿಯ ಜಾರ್ಜ್ ಪನಾ೯ಂಡೀಸರ ಮನೆ ಈ ಮನೆಯ ಗೇಟು ನಾಪತ್ತೆ ಆಗಿದ್ದ ಪ್ರಕರಣಕ್ಕೆ ಕಾರಣ ಗೊತ್ತಾ? ಅದು ಜಾರ್ಜರು ಆಡಳಿತಶಾಹಿಯ ಅಂದಾನುಕರಣೆಗೆ ನೀಡಿದ ಪ್ರಹಾರ ಮತ್ತು ದಾಖಲಿಸಿದ ಪ್ರತಿಭಟನೆಯ ಹೊಸ ಮಾದರಿ. ಸುಮಾರು ಇಪ್ಪತ್ತೊಂಬತ್ತು ವರ್ಷ ಗೇಟ್ ಇಲ್ಲದ ಮನೆಯಲ್ಲಿ ಜಾರ್ಜ್ ವಾಸವಾಗಿದ್ದರು. #govtofindia #krishnamenanmarg #DehliCapitals #GeorgeFernandis #DefenceMinisterOfIndia #RailwayMinister      ರೈಲ್ವೆಮಂತ್ರಿ ರಕ್ಷಣಾಮಂತ್ರಿ ಆದರೂ 1990ರಿಂದ 2019 ಜನವರಿ ಕೊನೆಯವರೆಗೆ ಗೇಟು ಇರಲೇ ಇಲ್ಲ.    ಅದು 1990 ಆಗ ಜಾಜ್೯ ಬಿಹಾರದಿಂದ ಲೋಕಸಭೆಗೆ ಆಯ್ಕೆ ಆಗಿದ್ದರು, ತುತು೯ ಪರಿಸ್ಥಿತಿ ನಂತರದ ಸಕಾ೯ರದಲ್ಲಿ ಕೇಂದ್ರ ಮಂತ್ರಿ ಆಗಿದ್ದಾಗಿಂದ ಅವರು ವಾಸಿಸುತ್ತಿದ್ದು ನಂ 3 , ಕೃಷ್ಣ ಮೆನನ್ ಮಾಗ್೯ ನವದೆಹಲಿ.  ಒಂದು ದಿನ ಜಾಜ್೯ರು ತಮ್ಮ ನೀಲಿ ಬಣ್ಣದ ಪಿಯಟ್ ಕಾರು ಚಲಾಯಿಸಿಕೊಂಡು ಪಾಲಿ೯ಮೆಂಟ್ ನಿಂದ ಮನೆಗೆ ಬಂದಾಗ ಜಾಜ್೯ರ ಮನೆ ಗೇಟು ಹಾಕಿತ್ತು.   ಪ್ರತಿ ದಿನ ಬೆಳಿಗ್ಗೆ 6ಕ್ಕೆ ಗೇಟು ತೆರೆದರೆ ಮಧ್ಯದಲ್ಲಿ ಹಾಕುವುದಿಲ್ಲ ಹೀಗೇಕೆ ಎಂದು ವಿಚಾರಿಸಿದಾಗ ಅವರಿಗೆ ತಿಳಿದು ಬಂದ...

Blog number 3392. ಬಚ್ಚಾಚಾರ್ ಪೋಟೋ

#ಈ_ಘಟನೆ_ನನಗೂ_ಅವರಿಗೂ_ವಿಶೇಷವಾಯಿತು #ಅವರ_ಜೀವಿತಾವದಿಯಲ್ಲಿ_ನಿರೀಕ್ಷೆಯೇ_ಮಾಡದ #ಅವರ_ತಂದೆ_ಪೋಟೋ_ನೋಡಿದಾಗ   1984ರಲ್ಲಿ(41 ವರ್ಷದ ಹಿಂದೆ) ನಾನು ಖರೀದಿಸಿದ್ದ ನಿಕಾನ್ ಕ್ಯಾಮೆರಾದಲ್ಲಿ ಬ್ಲಾಕ್ & ವೈಟ್ ಪೋಟೋದಲ್ಲಿ ನಾನು ಬಚ್ಚಾಚಾರ್ ಫೋಟೋ ಒಂದು ತೆಗೆದಿದ್ದೆ.     ನಮ್ಮ ಮನೆ ಪಕ್ಕದ ರಾಮಾಚಾರರ ಕುಲುಮೆಯ ಕ್ಯಾಪ್ಟನ್ ಬಚ್ಚಾಚಾರ್ ಮಗಳು ಲಲಿತಮ್ಮನಿಗೆ  ಸುಮಾರು 35 ವರ್ಷದ ನಂತರ  ಅವರ ತಂದೆಯ ಪೋಟೋ ನೋಡಿದಾಗ... #photo #memories #Anandapuram #yadehalli #gowthamapura #vishwakarma #Acharya #carpentar    ಅವರ ಉದ್ಘಾರ "ತನ್ನ ತಂದೆ ಪೋಟೋ ತನ್ನ ಜೀವಮಾನದಲ್ಲೇ ನೋಡುತ್ತೇನೆ ಅಂದು ಕೊಂಡಿರಲಿಲ್ಲ"...  35 ವರ್ಷದ ಹಿಂದೆ ಮೃತರಾದ ಅವರ ಒಂದೇ ಒಂದು ಪೋಟೋ ಇರಲಿಲ್ಲ.... ಅಂತ ಸುಮಾರು ಅನೇಕ ವಷ೯ದ ನಂತರ ನನ್ನ ಕಛೇರಿಗೆ ಬಂದಿದ್ದ ಗೌತಮಪುರದ ಲಲಿತಕ್ಕ ಕಣ್ಣೀರಾಗಿದ್ದಳು.    ಇವರ ತಂದೆ ಬಚ್ಚಾಚಾರ್ ತಾಯಿ ಪದ್ದಮ್ಮ ಕುಂದಾಪುರ ಮೂಲದವರು, ಈ ಬಚ್ಚಾಚಾರ್ ರನ್ನು ನಮ್ಮ ಪಕ್ಕದ ಮನೆಯ ರಾಮಾಚಾರ್ ತಮ್ಮ ಕುಲುಮೆ ಕೆಲಸಕ್ಕೆ ಕರೆತಂದಿದ್ದು.        ನನ್ನ ಕಥಾ ಸಂಕಲನ #ಬಿಲಾಲಿ_ಬಿಲ್ಲಿ_ಅಭ್ಯಂಜನ ದಲ್ಲಿ ಬರುವ ಒಂದು ಕಥೆಯಾದ #ಮಂಜ_ಬ್ರಹ್ಮ_ರಾಕ್ಷಸನಾದರೆ... ಕಥೆಯಲ್ಲಿ ಬಚ್ಚಾಚಾರ್ ಮತ್ತು ಆ ಕಾಲದ ಕುಲಿಮೆ ನನ್ನ ಕಣ್ಣಲ್...

Blog number 3391. ನನ್ನ 60 ವರ್ಷ ವಯಸ್ಸು ಪೂರ್ತಿ ಆದ ಕ್ಷಣ

#ಜೀವಿತಾವದಿಯ_60_ವಷ೯_ಕಳೆಯಿತು. #ನನ್ನ_ಅರವತ್ತೊಂದನೆ_ವಯಸ್ಸು_ಪ್ರಾರಂವಾಯಿತು #ನನ್ನ_ಜೀವನದ_ಹಿನ್ನೋಟ #ನನ್ನ_ಜನ್ಮ_ದಿನಾಂಕ_ಪೆಬ್ರವರಿ_9_ಮಂಗಳವಾರ_1965        ಭಾನುವಾರ 9 - ಫೆಬ್ರುವರಿ-2025  ನನ್ನ 60 ವಷ೯ದ ಆಯಸ್ಸು ದಾಟಲಿದೆ ಮತ್ತು 61 ಕ್ಕೆ ಪಾದಾರ್ಪಣ ಮಾಡಲಿದೆ.  ಈಗ  ನಾನು ಹಿರಿಯ ನಾಗರೀಕ ಎಂದು ಘೋಷಿಸಿಕೊಳ್ಳಬಹುದು.   ಅಂದರೆ ನನಗೆ ನನ್ನ ಜೀವಿತದ 60 ವರ್ಷ ಕಳೆದು 61ನೇ ವರ್ಷದ ಕಡೆ ಸಾಗಲು ಪ್ರಾರಂಭ ಆದಂತೆ. #birthdaywishes #birthdaycelebration #Age #sixty #memories #mylife #experience      ಸಾಗಿ ಬಂದ ದಾರಿಯ ಹಿನ್ನೋಟ ಮತ್ತು ಸಾಗಲಿರುವ ದಾರಿಯ ಮುನ್ನೋಟದ ಕಡೆ ಕಣ್ಣು ಹಾಯಿಸಿದರೆ ಗಳಿಸಿದ್ದೇನು? ಕಳೆದುಕೊಂಡಿದ್ದೇನು? ಎಂಬುದು ತಿಳಿಯುತ್ತದೆ.    ನಾನು ಹೋದಲ್ಲಿ ಜೀವನ ಬಂತೋ ಅಥವ ಜೀವನ ಕರೆದುಕೊಂಡು ಹೋದ ಮಾಗ೯ದಲ್ಲಿ ನಾನು ಹೋದೆನಾ? ಅಂತ ನೋಡಿದರೆ ನನ್ನ ಪ್ರಯತ್ನಗಳು ವಿಪಲವಾಗಿ,ಅದು ಹೋದಲ್ಲಿ ತಕರಾರು ಇಲ್ಲದೆ ನಾನು ಹೋದದ್ದರಿಂದ ಸಪಲತೆ ದೊರೆಯಿತೆನ್ನಿಸುತ್ತದೆ.    ಯಾವುದೂ ಅಂತ್ಯವೂ ಅಲ್ಲ... ಆರಂಭವೂ ಅಲ್ಲ... ರೂಪಾಂತರ ಮಾತ್ರ ಎಂಬಂತೆ ಉದರ ನಿಮಿತ್ತಂ ಬಹುಕೃತ ವೇಷಂ ಎಂಬಂತೆ ಅನೇಕ ಉದ್ಯೋಗಗಳನ್ನು ಮಾಡಿ ಅಪಾರ ಅನುಭವದ ಕಣಜಗಳನ್ನು ಕಟ್ಟಿದ್ದಾಯಿತು.  ಮಿತ್ರ ದ್ರೋಹದ ಫಲ ಕೂಡ ಸ್ವ...

Blog number 3390. ಪ್ಯಾರಾಚ್ಯೂಟ್ ತರಬೇತಿಯಲ್ಲಿ ದುರಂತ ಅಂತ್ಯ ಜಿ.ಎಸ್.ಮಂಜುನಾಥ್

#ಶ್ರದ್ಧಾಂಜಲಿಗಳು #ನಮ್ಮ_ಹೆಮ್ಮೆಯ_ಇಂಡಿಯನ್_ಏರ್ಫೋರ್ಸ್_ತರಬೇತಿದಾರ_ಮಂಜುನಾಥ್_ಅವರಿಗೆ  #ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲ್ಲೂಕಿನ_ಪಟಗುಪ್ಪ_ಸಮೀಪದ_ಸಂಕೂರಿನವರು #ಈ_ದಂಪತಿಗಳ_ವಿವಾಹ_2019ರಲ್ಲಿ_ನಮ್ಮ_ಕಲ್ಯಾಣ_ಮಂಟಪದಲ್ಲೇ_ನೆರವೇರಿತ್ತು.      ಆನಂದಪುರಂನ ರೈಲ್ವೆ ನಿಲ್ದಾಣದ ರಸ್ತೆಯ ಮಣಿಕಂಠ ಇಂಡಸ್ಟ್ರೀಸ್ ಮಾಲಿಕ ಕೇಶವ ಅವರು ಮಂಜುನಾಥ್ ಸಹೋದರಿ ಪತಿ (ಇವರ ಬಾವ) ನಮ್ಮೂರಲ್ಲಿ ಪಿಠೋಪಕರಣ ಇತ್ಯಾದಿ ತಯಾರಿಸುವ ಇಂಡಸ್ಟಿ  ಮಾಡಿಕೊಂಡು ಪ್ರಸಿದ್ಧರಾಗಿದ್ದಾರೆ.   ಇವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪಟಗುಪ್ಪೆ ಎಂಬ ಊರಿನ ಸಮೀಪದ ಸಂಕೂರು ಎಂಬ ಹಳ್ಳಿಯವರು. #agraairforce #juniorwarrantofficer #indianairforce #shivamogga #hosanagara #manjunathgs #parachutes     ಇವರ ಪರಿಚಯ ನನಗೆ 2019ರ ಪ್ರಾರಂಭದಲ್ಲಿ ಆಯಿತು ಆಗ ಅವರು ತಮ್ಮ ಜೊತೆ ಏರ್ಪೋರ್ಸನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಅಸ್ಸಾಂ ಮೂಲದ ಕಲ್ಪಿತಾ ಎಂಬ ಯುವತಿ ಜೊತೆ ಪ್ರೇಮ ವಿವಾಹದ ತಯಾರಿ ನಡೆಸಿದ್ದರು.    ಇವರ ಪತ್ನಿ ಶ್ರೀಮತಿ ಕಲ್ಪಿತಾ ಕೂಡ ಭಾರತೀಯ ಏರ್ಪೋರ್ಸ್ ಟ್ರೈನಿಂಗ್ ಅಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.    ಇವರ ಬಾವಿ ಪತ್ನಿ ತಂದೆ ತಾಯಿಯನ್ನ ಇವರ ಕುಟುಂಬದ ಪರಿಚಯ ಮಾಡಿಸಲು ಮತ್ತು ವಿವಾಹದ ಮಾತುಕಥೆಗಾಗಿ ಕರೆತಂದಿದ್ದ...

Blog number 3389. ತೀರ್ಥಹಳ್ಳಿ ಧರ್ಮ ಕುಮಾರ್

#ತೀರ್ಥಹಳ್ಳಿ_ದಮ೯ಕುಮಾರ್ #ಕ್ರಿಯಾಶೀಲ_ವ್ಯಕ್ತಿ #ಸಮಾಜ_ಮುಖಿ_ಕಾರ್ಯದಲ್ಲಿ_ಸದಾ_ಮುಂದೆ    2019 ರಲ್ಲಿ  ರಾತ್ರಿ ನಮ್ಮ ಊರಿನ ವರಸಿದ್ಧಿವಿನಾಯಕ ಸ್ವಾಮಿ ಜಾತ್ರೆ ಮುಗಿಸಿ ನಾನು ಮನೆಗೆ ಬಂದು ಕುಳಿತಿದ್ದಾಗ ಧರ್ಮ ಕುಮಾರ್ ಬಂದಾಗ ತೆಗೆದ ಫೋಟೋ ಇದು.  ಈ ಬೇಟಿ ಸುಮಾರು 19 ವಷ೯ಗಳ ನಂತರದ ನನ್ನ ಮತ್ತು ಇವರ ಬೇಟಿ. #thirthahalli #sagar #krishi #AgricultureDepartment #darmakumar #sahityaparishath        ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನನ್ನ ಭಾಗದಲ್ಲಿನ ಉತ್ಸಾಹಿ ಮತ್ತು ಪ್ರಾಮಾಣಿಕ ಕೃಷಿ ಸೇವಕರಾಗಿ ಜನಾನುರಾಗಿಗಳಾಗಿದ್ದವರು.    ರೈತ ಸ್ನೇಹಿ ಆಗಿದ್ದ ಇವರಂತಹ ಕೃಷಿ ಸೇವಕರನ್ನ ನಾನು ಈ ವರೆಗೆ ನೋಡಿಲ್ಲ.   ಈಗೆಲ್ಲ ಕೃಷಿ ಸೇವಕರು ಯಾರೂ ಅಂತಲೇ ನನಗೆ ಗೊತ್ತಿಲ್ಲ.     ಆನಂದಪುರಂನಲ್ಲಿ ಆ ದಿನಗಳಲ್ಲಿ ನಾವೆಲ್ಲ ಯುವಕರು ಹಮ್ಮಿಕೊಳ್ಳುತ್ತಿದ್ದ ಯುವಜನ ಮೇಳ, ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪದೆ೯, ಮೋದಿ ಡಾಕ್ಟರ್ ಕಣ್ಣಿನ ಶಸ್ತ್ರಚಿಕಿತ್ಸಾ ಶಿಭಿರಗಳು ಯಶಸ್ವಿಗೊಳಿಸುವಲ್ಲಿ ತೆರೆ ಮರೆಯಲ್ಲಿ ಈ ದಮ೯ಕುಮಾರರ ಶ್ರಮ ಇರುತ್ತಿತ್ತು.      ಇವರ ಕಿರಿಯ ಸಹೋದರ ಶಿವಮೊಗ್ಗದ ಖ್ಯಾತ ವಕೀಲರಾದ ಜಿ.ನಾಗೇಶನ್ ನನಗೆ ಹಳೆ ಗೆಳೆಯರು.    ನಂತರ ಇವರ ಗೆಳೆತನ ಆಯಿತು, ದರ್ಮ ಕುಮಾರ್ ...

Blog number 3388. ರೈತ ನಾಯಕ H.R. ಬಸವರಾಜಪ್ಪ ಶಿವಮೊಗ್ಗ

#ಹಸಿರು_ಹಾದಿಯ_ಕಥನ #ರೈತ_ನಾಯಕ_ಹೆಚ್_ಆರ್_ಬಸವರಾಜಪ್ಪನವರ #ಆತ್ಮಕಥೆ   ಮೊನ್ನೆ ಶಿವಮೊಗ್ಗದಲ್ಲಿ ಹಿರಿಯ ಸಮಾಜವಾದಿ ಪಿ.ಪುಟ್ಟಯ್ಯನವರ ಬೇಟಿಗೆ ಹೋದಾಗ ಅವರು ಈ ಪುಸ್ತಕ ನೀಡಿದ್ದರು.   ಕರ್ನಾಟಕ ರಾಜ್ಯದ ರೈತ ಚಳವಳಿಯ ತವರು ಶಿವಮೊಗ್ಗ ಇಲ್ಲಿಯೇ ಕರ್ನಾಟಕ ರಾಜ್ಯ ರೈತ ಸಂಘ ಸಂಸ್ಥಾಪಕ ಅಧ್ಯಕ್ಷ ರುದ್ರಪ್ಪನವರ ನೇತೃತ್ವದಲ್ಲಿ ಜನಿಸಿದ್ದು ಇತಿಹಾಸ. #FarmersProtest #RaithaSangha #hrbasavarajappa #shivamogga    ಶಿವಮೊಗ್ಗ ಜಿಲ್ಲೆಯ ಸುಂದರೇಶ್, ಕಡಿದಾಳು ಶಾಮಣ್ಣರ ಸಾಲಿನಲ್ಲಿ ಈ ಚಳವಳಿಯ ನೇತೃತ್ವ ವಹಿಸಿ ರೈತ ಚಳವಳಿ ಮುನ್ನಡೆಸಿದ್ದ ರೈತ ನಾಯಕರಾದ ಕೆ.ಟಿ.ಗಂಗಾಧರ್ ಮತ್ತು ಹೆಚ್.ಆರ್.ಬಸವರಾಜಪ್ಪರ ಹೋರಾಟಗಳು ಅಸಂಖ್ಯ.      ಜನಪರ ಹೋರಾಟಗಳು ಮತ್ತು ಅದರ ಮುಖಂಡತ್ವ ವಹಿಸಿದವರ ವಿವರಗಳು ಪುಸ್ತಕವಾಗಿ ಬರಬೇಕು ಆ ನಿಟ್ಟಿನಲ್ಲಿ ಬಸವರಾಜಪ್ಪನವರ ಆತ್ಮಚರಿತ್ರೆ ಬಂದಿರುವುದು ಖುಷಿ ಪಡುವಂತ ವಿಚಾರ.   ಹೊಸನಗರ ವಿಧಾನ ಸಭಾ ಕ್ಷೇತ್ರದಿಂದ ರೈತ ಸಂಘದಿಂದ ಬಸವರಾಜಪ್ಪನರು ಶಾಸಕರಾಗುತ್ತಾರೆಂದು ಆಸೆ ಪಟ್ಟವರಲ್ಲಿ ನಾನೂ ಒಬ್ಬನಾಗಿದ್ದೆ.

Blog number 3387. ಮಂಗಳೂರಿನ ಯೆನೆಪೋಯ ಆಸ್ಪತ್ರೆ

#ಯೆನೆಪೋಯ_ವಿಶ್ವವಿದ್ಯಾಲಯ #ಮಂಗಳೂರಿನ_ಯೆನೆಪೋಯ_ಆಸ್ಪತ್ರೆ #ನಮ್ಮ_ರಾಜ್ಯ_ಮಾತ್ರವಲ್ಲ_ಕೇರಳ_ರಾಜ್ಯದಲ್ಲೂ_ಪ್ರಸಿದ್ಧಿ_ಪಡೆದಿದೆ. ಇದನ್ನು 2008 ರಲ್ಲಿ ಯೆನೆಪೋಯ ವಿಶ್ವವಿದ್ಯಾಲಯವಾಗಿ ಸ್ಥಾಪಿಸಲಾಯಿತು.  1992 ರಲ್ಲಿ ಯೆನೆಪೋಯ ದಂತ ಕಾಲೇಜು ಪ್ರಾರಂಭವಾದಾಗಿನಿಂದ ಅನೇಕ ಕಾಲೇಜುಗಳು ಸರಣಿಯಲ್ಲಿ ಪ್ರಾರಂಭವಾದವು.   ವಿಶ್ವವಿದ್ಯಾನಿಲಯವು ವೈದ್ಯಕೀಯ, ದಂತ, ಸಂಬಂಧಿತ ಆರೋಗ್ಯ ವಿಜ್ಞಾನಗಳು, ಭೌತಚಿಕಿತ್ಸೆ, ಫಾರ್ಮಸಿ, ನರ್ಸಿಂಗ್ , ಆಯುರ್ವೇದ, ಹೋಮಿಯೋಪತಿ, ಪ್ರಕೃತಿ ಚಿಕಿತ್ಸೆ, ಎಂಜಿನಿಯರಿಂಗ್ ಮತ್ತು ಕಲೆ, ವಿಜ್ಞಾನ, ವಾಣಿಜ್ಯ ಮತ್ತು ನಿರ್ವಹಣೆಗಾಗಿ ವಿವಿಧ ಘಟಕ ಕಾಲೇಜುಗಳನ್ನು ಹೊಂದಿದೆ.     ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ತಲುಪಲು ರೋಗಿಗಳಿಗೋಸ್ಕರ ರಾಜ್ಯ ಸಾರಿಗೆ  ಬಸ್ಸುಗಳನ್ನು ಕೂಡ ಬಿಡಲಾಗಿದೆ ಅಂದರೆ ಈ ಯೆನೆಪೋಯ ಆಸ್ಪತ್ರೆ ಎಷ್ಟು ಪ್ರಸಿದ್ಧಿ ಪಡೆದಿದೆ ಎಂದು ಅರ್ಥವಾದೀತು. #yenepoyauniversity #yenepoyahospital #Mangalore #medicaleducation #nursingschool   ಯೆನೆಪೋಯ ಆಸ್ಪತ್ರೆಯ ಹಾಲಿ ಚೇರ್ಮನ್ ಶ್ರೀಯೆನೆಪೋಯ ಅಬ್ದುಲ್ ಕುಂಜ್ಞ ಇವರು ಜನಿಸಿದ್ದು 1947 ರಲ್ಲಿ.   ಇವರ ವಿದ್ಯಾಭ್ಯಾಸ ಮೈಸೂರು ಯುನಿವರ್ಸಿಟಿಯಲ್ಲಿ ಬಿಎ, 1992 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡ...

Blog number 3386. ಪ್ರಬಂಧ ಅಂಬುತೀರ್ಥರ 8 ನೆ ಕಥೆ

#ಪ್ರಬಂದ_ಅಂಬೂತೀಥ೯ #ಮಳೆನಾಡಿನ_ಅದ್ಬುತ_ಕಥೆಗಾರ #ಅವರ_8ನೇ_ಕಥೆ_ಓದಿ ಎಲೆ ಮರೆಯ ಕಾಯಿಯಂತಹ ಈ ಉದಯೋನ್ಮುಖ ಕಥೆಗಾರ ಅನೇಕ ಕಥೆ ಬರೆದಿದ್ದಾರೆ, ಅವರು ಬರೆದ ಎಲ್ಲಾ ಕಥೆಗಳು ಪುಸ್ತಕವಾಗಿ ಪ್ರಕಟಿಸಲು ಯೋಗ್ಯವಾಗಿದೆ.              ಇವರು ಬರೆದ ಕಥೆಗಳಾದ ನೇಗಿಲೋಣಿ, ಸುಕುOಟು೦ಭ, ಪ್ರಥಮ ಪ್ರೀತಿ, ಶಿಕ್ಷೆ, ಹುತಾತ್ಮ, ಒಂಶಾಂತಿ, ಸ್ವರತಿ, ದಂಡಕಾರಣ್ಯ ಹೊಂ ಸ್ಟೇ, ನಾವುಡರ ಪ್ರೇಮ ಪ್ರಸಂಗ, ಸೀನು ರೆಡ್ಡಿ ಡಿಸ್ಕವರಿ, ವಕ್ಷಸ್ಥಲೆ, ಮರು, ಮೂಲ, ರುತುಮಾನ, ಭಾರತಿ ಪುರ, ಕನಕತ್ತೆ ಸ್ಟಾಟಿಸ್ಟಿಕ್, ನಾಗಮಂಡಲ, ವೇಣು ನಾಗನ, ಕೌಸಲ್ಯ ಬಾತ್, ಅನ್ನಪ್ರಸಾದ ಕೇಟರರ್ಸ್, ಅಕೇಶಿಯಾ ಕೊಪ್ಪ.... ಹೀಗೆ ಸಾಲು ಸಾಲು ಕಥೆ ಬರೆದಿದ್ದಾರೆ.        ಇದು ಅವರ 8ನೇ ಕಥೆ ನಾನು FB ಯಲ್ಲಿ ಪ್ರಕಟಿಸುತ್ತಿದ್ದೇನೆ ಓದಿ ಅಭಿಪ್ರಾಯ ತಿಳಿಸಿ #malenadu #westernghats #westernghatsofindia #thirthahalli #sringeri #koppa #cancerawareness #cancertreatment #cancersurvivor #cancerrecovery #cancercare #Cancer #breastcancersurvivor #ಶಿವಮೊಗ್ಗ #ShivamoggaNews ಆತ್ಮೀಯರೆ ಇದೊಂದು ಸುದೀರ್ಘ ರಾಜಕೀಯ ಆದಾರಿತ ಕಥೆ. ಯಾರನ್ನೂ ಹೋಲಿಸಿದ್ದಲ್ಲ.. ನಿಮ್ಮ ನಮ್ಮ  ಅನುಭವ ಕ್ಕೆ ಬಂದ  ಬರುತ್ತಿರುವ  ರಾಜಕೀಯ ವಿದ್ಯಮಾನದ ದ...

Blog number 3385. ಪ್ರೋ ನಂಜುಂಡ ಸ್ವಾಮಿ 89ನೆ ಹುಟ್ಟು ಹಬ್ಬ

#ಮಹಾನ್_ರೈತ_ನಾಯಕ_ಪ್ರೋಪೆಸರ್_ನಂಜುಂಡಸ್ವಾಮಿ #ಇವತ್ತು_ಅವರ_89ನೇ_ಹುಟ್ಟು_ಹಬ್ಬದ_ಸ್ಮರಣೆ  ಮಹಾಂತ ದೇವರು ನಂಜುಂಡಸ್ವಾಮಿ (13 ಫೆಬ್ರವರಿ 1936 - 3 ಫೆಬ್ರವರಿ 2004) ಒಬ್ಬ ಗಾಂಧಿವಾದಿ ನಾಯಕ.  ವಿದ್ವಾಂಸ ಮತ್ತು ಭಾರತದ ಪ್ರಮುಖ ಕಾರ್ಯಕರ್ತ ಅವರು ರೈತರ ಹಕ್ಕುಗಳಿಗಾಗಿ ಪ್ರತಿಪಾದಿಸಿದರು.    ಅವರು 1980 ರಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ (KRRS) ಸಂಸ್ಥಾಪಕರಲ್ಲಿ ಒಬ್ಬರು.  ಅವರು ಜಾಗತೀಕರಣ ವಿರೋಧಿ ಪ್ರಚಾರದ ಪ್ರಮುಖ ನಾಯಕರಾಗಿದ್ದರು. #professor #nanjundaswamy #raithasanga

Blog number 3384. ನಾರಿ ಲೋಕಪ್ಪ

#ನಾರಿ_ಲೋಕಪ್ಪ #ಮಾಜಿ_ಉಪಾದ್ಯಕ್ಷರು #ಯಡೇಹಳ್ಳಿ_ಗ್ರಾಮ_ಪಂಚಾಯಿತಿ #ಪುಣ್ಯ_ಪ್ರಾಪ್ತಿಗಾಗಿ_ದೇವರ_ಸೇವೆ_ನಿರಂತರ_ಮಾಡುತ್ತಿರುವ_ಸಜ್ಜನರು ಪ್ರತಿ ವರ್ಷ ದೇವಾಲಯದಲ್ಲಿ ನಡೆಯುವ ಬ್ರಹ್ಮ ರಥೋತ್ಸವಕ್ಕೆ ಭಕ್ತರಿಂದ ನಿರಂತರವಾಗಿ ದೇವಾಲಯಕ್ಕೆ ದೇಣಿಗೆ ಕಾಣಿಕೆ ಸಂಗ್ರಹಿಸಿ ತಲುಪಿಸುತ್ತಾರೆ. ರಥೋತ್ಸವದ ಮೂರೂ ದಿನ ದೇವರ ಸೇವೆಯ ಕೆಲಸ ನಿರಂತರ ಮಾಡುತ್ತಾರೆ ಆದರೆ ಎಲ್ಲೂ ಯಾವ ಕಾರಣಕ್ಕೂ ತೋರುಗಾಣಿಕೆ ಪ್ರದರ್ಶನ ಮಾತ್ರ ಅವರು ಮಾಡುವುದಿಲ್ಲ.  ತನ್ನ ಹೆಸರು ಖ್ಯಾತಿ ಸನ್ಮಾನಗಳಿಗೆ ಯಾವತ್ತೂ ಇಷ್ಟಪಡದೆ ಭಕ್ತಿಯಿಂದ ಶ್ರೀ ವರಸಿದ್ಧಿನಾಯಕ ಸ್ವಾಮಿಯ ಸೇವೆ ಮಾಡುವ ಕೆಲವೇ ಕೆಲವರಲ್ಲಿ ನಾರಿ ಲೋಕಪ್ಪನವರು ಒಬ್ಬರು. #yadehalli #Anandapuram #sagar #siddhivinayak #temple #jatra #narilokappa      ನಾರಿ ಲೋಕಪ್ಪ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಹಿರಿಯ ಸದಸ್ಯರು ಮತ್ತು ಒಂದು ಅವಧಿಯ ಉಪಾಧ್ಯಕ್ಷರು ಕೂಡ ಆಗಿದ್ದವರು    ದೇವಾಲಯದ ಪ್ರತಿಷ್ಠಾಪನೆಯ ಪ್ರಾರಂಭದ ದಿನದಿಂದ 19 ವರ್ಷದಲ್ಲಿ ಅಂದರೆ ಈ ವರ್ಷದ ಪುನರ್ ಪ್ರತಿಷ್ಠಾಪನೆಯ ತನಕ  ಅವರ ಸೇವೆ ಅನನ್ಯ.    ಅವರು ದೇವಾಲಯದ ಕಾಯಂ ಸಲಹಾ ಮಂಡಳಿ ಸದಸ್ಯರು ಆಗಿದ್ದಾರೆ.    ದೇವಾಲಯದಲ್ಲಿ15 ವರ್ಷದ ಹಿಂದೆ ನಡೆದ 1008 (ಸಾವಿರದ ಎಂಟು) #ನಾರಿ_ಕೇಳಾ_ಮಹಾಗಣ_ಯಾಗ ನಡೆದಾಗ ಈ ಮಹಾಯಾಗಕ್ಕೆ ಬೇಕಾದ ಕಟ್ಟಿಗೆ ಸರಬರಾ...

Blog number 3383. ಮಂಗನ ಕಾಯಿಲೆ

#ಮಂಗನ_ಕಾಯಿಲೆ #KFD_DISEASE #ಮಲೆನಾಡಿನ_ಕಾಡಿನಂಚಿನ_ಜನ_ಜಾಗೃತರಾಗಿರಬೇಕು #ಶಿವಮೊಗ್ಗ_ಜಿಲ್ಲೆಯ_ತೀರ್ಥಹಳ್ಳಯಲ್ಲಿ_ಮಂಗನಕಾಯಿಲೆ_ಹೆಚ್ಚಾಗುತ್ತಿರುವ_ಆರೋಗ್ಯ_ಇಲಾಖೆ_ವರದಿ_ಬಂದಿದೆ ಇದಕ್ಕೆ ಔಷದಿ ಕಂಡು ಹಿಡಿದಿದ್ದಾರಾ? ಲ್ಯಾಬ್ ಇದಿಯಾ? ಚಿಕಿತ್ಸೆ ಇದೀಯಾ? ಇದೆಲ್ಲ ಚರ್ಚೆ ಇಲ್ಲಿ ಅನಗತ್ಯ. #kfd #manganakayile #malenadu #thirthahalli #shivamogga #handigodusyndromdisease #govtofkarnataka #govtofindia #shivamoggahealth #District    ವಿಪರೀತ ತಾಪ ಮಾನದ ಬೇಸಿಗೆ, ಮಂಗನಿಂದ ಹರಡುವ ಉಗುಣಗಳು ಕಾಡಿಗೆ ಉರವಲು, ಜಮೀನಿನ ಬೇಲಿಗೆ ಬೇಕಾದ ಗೂಟ - ಮುಳ್ಳು ಸಂಗ್ರಹಿಸಲು ಹೋಗುವವರಿಗೆ, ಕಾಡಿಗೆ ಮೇಯಲು ಹೋಗುವ ಜಾನುವಾರುಗಳಿಂದ ಈ ಕಾಯಿಲೆ ಹರಡುತ್ತದೆ.    ಈ ಮಂಗನ ಕಾಯಿಲೆ / ಕೆ.ಎಫ್.ಡಿ/ ಕ್ಯಾಸನೂರು ಪಾರೆಸ್ಟ್ ಡಿಸೀಸ್ ಹರಡುವ ಸಂಕೇತ ಮಂಗಗಳ ಸರಣಿ ಸಾವುಗಳು.   ಮಂಗಗನ ಕಾಯಿಲೆ  ಕೆ.ಎಫ್ ಡಿ. ಕ್ಯಾಸನೂರು ಪಾರೆಸ್ಟ್ ಡಿಸೀಸ್     ನಮ್ಮ ಜಿಲ್ಲೆ ಶಿವಮೊಗ್ಗದಲ್ಲಿ ಕ್ಯಾಸನೂರು ಪಾರೆಸ್ಟ್ ಡಿಸೀಸ್ ಪ್ರತಿ ವರ್ಷ ಬೇಸಿಗೆಯಲ್ಲಿ ಕಾಣಿಸುಕೊಳ್ಳುತ್ತದೆ.   2019ರಲ್ಲಿ ಈ ಕಾಯಿಲೆಯಿಂದ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 29.   ಪಶ್ಚಿಮ ಘಟ್ಟ ಶ್ರೇಣಿಯ ಸಿರ್ಸಿ ಸಿದ್ದಾಪುರದಲ್ಲೂ ಇದರಿಂದ ಸಾವು ನೋವು ವರದಿ ಆಗಿತ್ತು. #ಮಂಗನ_ಕಾಯಿಲೆಗೆ_...

Blog number 3382. ಲಕ್ಷ್ಮೀಶ್ ವಾರ ಪತ್ರಿಕೆ ಸಂಪಾದಕರಾದ ಲಕ್ಷ್ಮೀಶ್ ನನ್ನ ಬಗ್ಗೆ ಬರೆದ ಲೇಖನ

ತೀರ್ಥಹಳ್ಳಿಯ ಖ್ಯಾತ ಲಕ್ಷ್ಮೀಶ್ ವಾರ ಪತ್ರಿಕೆ ಸಂಪಾದಕರಾದ ಲಕ್ಷ್ಮೀಷ್ ಹೊಸ ವರ್ಷದ ಹಿಂದಿನ ದಿನ ಇಹ ಲೋಕ ತ್ಯಜಿಸಿದರು ಅವರ ಶ್ರದ್ದಾಂಜಲಿ ಲೇಖನ ನೋಡಿದವರು ಲಕ್ಷೀಷರು ಮತ್ತು ನನ್ನ ಬೇಟಿ ಬಗ್ಗೆ ಅವರು ಬರೆದ ಲೇಖನದ ಪೂಣ೯ ಬಾಗ ಹಾಕಲು ಗೆಳೆಯರು ಕೋರಿದ್ದಾರೆ.... #June_11_2022. #ಮಿತ್ರ_ಅರುಣ್_ಪ್ರಸಾದ್  #ಸ್ಮೃತಿ_ಲಕ್ಷ್ಮೀಶಪತ್ರಿಕೆ_ತೀರ್ಥಹಳ್ಳಿ #shivamogga #thirthahalli #koppa #sringeri  #press #PressClub #weekly #laxmish #laxmishvarapatrike #chalagara #Journalism #hibengalore #sringesh #janahorat #tungariver   1996 ನೇ ಇಸವಿಯ ಒಂದು ದಿನ ಮತ್ತು ಒಂದು ತಿಂಗಳು, ತೀರಾ ಖಚಿತವಾಗಿ ನೆನಪಿಲ್ಲ ಅನ್ನುವಾಗ ಅರುಣ್ ಪ್ರಸಾದ್ ಎಂಬ ಜಿಲ್ಲಾ ಪಂಚಾಯತಿ ಸದಸ್ಯರ ಬಗ್ಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳಲ್ಲಿ, ಕುತೂಹಲಕಾರಿ ಸುದ್ದಿ ಪ್ರಕಟವಾಗಿದ್ದವು.  ನಾನು ಪತ್ರಿಕೆ ಆರಂಭಿಸಿ ಎರಡು ವರ್ಷ ಕಳೆದಿತ್ತಷ್ಟೇ, ಸ್ಥಳೀಯ ಲಕ್ಷ್ಮೀ ಮೆಡಿಕಲ್ಸಿನಲ್ಲಿ ಕುಂತು ಲೋಕಾಭಿರಾಮ ಹರಟುತ್ತಾ  ಗುರು ಶಿಷ್ಯ ಛಲಗಾರ ಗಣಪತಿ ಮತ್ತು ನಾನು ಇರುವಾಗ, ಗುರುಗಳಿಂದ ಈ #ಅರುಣಪ್ರಸಾದ್ ನನ್ನ ಶಿಷ್ಯ ಕಣೋ ಎಂಬ ಉದ್ಗಾರ ಹೊರಬಿತ್ತು.    ಇವನಣ್ಣ ನಾಗರಾಜ್ ಆನಂದಪುರಂ ನಲ್ಲಿ ನನ್ನ ಪತ್ರಿಕೆ ವರದಿಗಾರ ಮತ್ತು ವಿತರಕನಾಗಿದ್ದ, ಇವನು ಅರುಣ ಬೆಳಿಗ್ಗೆ ...