Skip to main content

ಕೊರಾನ ಲಾಕ್ ಡೌನ್ ಡೈರಿ, ಸಣ್ಣ ಪುಟ್ಟ ಕಾಯಿಲೆ ಮಾಯ, ಸಾಯುವವರು ಕಡಿಮೆ ಆಸ್ಪತ್ರೆಗೆ ಹೋಗದೆ ಔಷದಿ ಕುಡಿಯದೆ ಜನರ ಆರೋಗ್ಯ ಸುಧಾರಿಸುತ್ತಿರುವುದಾದರು ಹೇಗೆ?

#ಕೊರಾನಾ_ಲಾಕ್_ಡೌನ್_ಡೈರಿ_2020
#ಲೆಟರ್_ನOಬರ್_20
#ದಿನಾ0ಕ_23_ಏಪ್ರಿಲ್_2020

* ಎಲ್ಲಿ ಹೋದವು ಜನರ ಜ್ವರ, ಹೊಟ್ಟೆನೋವು, ಕಾಲು ನೋವು ಎಂಬ ನಿತ್ಯ ಕಾಯಿಲೆ?.
 * ಶೇಕಡಾ 3% ಮಾತ್ರ ದೇಹದ ಕಾಯಿಲೆ ಉಳಿದ 97% ಮಾನಸಿಕ ಕಾಯಿಲೆ ಎಂಬುದು ಸಾಬೀತಾಯಿತು!
* ವೈದ್ಯರ ಬೇಟಿ ಮಾಡಲಿಲ್ಲ ಚಿಕಿತ್ಸೆ ಪಡೆಯಲಿಲ್ಲ ಆದರೂ ಸಾವಿನ ಸಂಖ್ಯೆ ಕಡಿಮೆ ಏಕೆ?!.
   
   ಇಂಥಹ ಪ್ರಶ್ನೆ ಒಂದು ಕೊರಾನ ವೈರಸ್ ನಿಯ೦ತ್ರಿಸಲಿಕ್ಕಾಗಿ ಲಾಕ್ ಡೌನ್ ಪ್ರಾರಂಭ ಆದ 15 ದಿನದಲ್ಲೇ ಸಾವ೯ಜನಿಕರಲ್ಲಿ ಉ೦ಟಾಗಿದೆ.
  ಹಳ್ಳಿಗಳಲ್ಲೂ ಕ್ಲೀನಿಕ್ ಗಳಲ್ಲಿ ಒಳಹೋಗಲಾರದಷ್ಟು ರೋಗಿಗಳಿರುತ್ತಿದ್ದದ್ದು ಮಾಮೂಲಾಗಿತ್ತು ಹಾಗಂತ ಹೊಬಳಿ ಕೇಂದ್ರದ ಹಳ್ಳಿಗಳಲ್ಲಿ 5-6 ಕ್ಲೀನಿಕ್ ಗಳು, ಸಕಾ೯ರಿ ಆಸ್ಪತ್ರೆ, ಮೆಡಿಕಲ್ ಶಾಪ್, ಲ್ಯಾಬೊರೇಟರಿಗಳಿಗೆ  ಪುರುಸೊತ್ತೆ ಇರಲಿಲ್ಲ.
  ಇಲ್ಲಿನ ವೈದ್ಯರು ಹೆಚ್ಚಿನ ಪರೀಕ್ಷೆ ಚಿಕಿತ್ಸೆ ಅಂತ ತಾಲ್ಲೂಕ್ ಕೇ೦ದ್ರಕ್ಕೆ ಅಲ್ಲಿನವರು ಜಿಲ್ಲಾ ಕೇಂದ್ರದ ಮಲ್ಟಿ ಸ್ಪೆಷಲ್ ಆಸ್ಪತ್ರೆಗಳಿಗೆ ರವಾನಿಸುತ್ತಿದ್ದರು.
   ಎಲ್ಲಾ ಜಿಲ್ಲಾ ಕೇಂದ್ರಗಳು ಮೆಡಿಕಲ್ ಹಬ್ ಗಳಾಗಿದೆ ಇದರ ಮಧ್ಯ ಖಾಸಾಗಿ ಮೆಡಿಕಲ್ ಕಾಲೇಜ್ ಗಳು ಸಕಾ೯ರಿ ಮೆಡಿಕಲ್ ಕಾಲೇಜ್ ಗಳು ಅವುಗಳ ಆಸ್ಪತ್ರೆ ಎಲ್ಲವೂ ಅಸಾಧ್ಯ ಜನಜಂಗುಳಿಯಿಂದ ತುಳುಕುತ್ತಿತ್ತು.
   ಜನ ಸಾಮಾನ್ಯರು ವೈದ್ಯಕಿಯ ಚಿಕಿತ್ಸೆ ಪರೀಕ್ಷೆಗೆ ಒಗ್ಗಿ ಬಿಟ್ಟಿದ್ದರು ಹಾಗೆ ವೈದ್ಯರು ನಿರಂತರ ರೋಗಿಗಳು ಬರುವ೦ತೆ ಒಂದು ಪರೀಕ್ಷೆ ನಂತರ ಇನ್ನೂoದು, 15 ದಿನ ಈ ಮಾತ್ರೆ ತಿಂದು ಪುನಃ ಬನ್ನಿ ಎನ್ನುವ ಅಸೈನ್ ಮೆ೦ಟ್ ಕೊಟ್ಟು ರೋಗಿಗಳು ತಪ್ಪಿಹೋಗದಂತೆ ಮಾಡುತ್ತಾರೆ ಅಂತ ಕೆಲ  ಒಳ್ಳೆ ವೈದ್ಯರು ಹೇಳುವುದು ಸುಳ್ಳು ಇರಲಿಕ್ಕಿಲ್ಲ.
  ಇದೇ ರೀತಿ 2018 ರ ಒಂದು ಸಮೀಕ್ಷೆ ಭಾರತದಲ್ಲಿ ವಷ೯ಕ್ಕೆ 16 ಲಕ್ಷ ಜನ ಸರಿಯಾದ ಚಿಕಿತ್ಸೆ ದೊರೆಯದೆ ಸಾಯುತ್ತಾರೆ ಅಂತ ವರದಿ ನೀಡಿದೆ ಆದರ ಪ್ರಕಾರ ದಿನಕ್ಕೆ 4500 ಜನ ಸಾಯುತ್ತಾರೆ.
  ಆದರೆ ಕೊರಾನಾ ಲಾಕ್ ಡೌನ್ ಪ್ರಾರಂಭದ ನಂತರ ಜನರು ವೈದ್ಯರ ಹತ್ತಿರ ಹೋಗಲಿಲ್ಲ ವೈದ್ಯರೂ ಕೊರಾನ ವೈರಸ್ ಗೆ ಹೆದರಿ ಕ್ಲೀನಿಕ್ ತೆರೆಯುತ್ತಿಲ್ಲ ಆದರೆ ಜನ ಮಾತ್ರ ಆರೋಗ್ಯದಿಂದ ಇದ್ದಾರೆ ಮೈ ಕೈ ನೋವು, ಜ್ವರ, ಹೊಟ್ಟೆ ನೋವು, ಕಾಲು ನೋವು ಮತ್ತು ಗ್ಯಾಸ್ಟ್ರಿಕ್ ಆಂತ ನಿತ್ಯ ವೈದ್ಯರನ್ನ ಹುಡುಕಿ ಹೋಗುತ್ತಿಲ್ಲ.
  ಇದರ ಮದ್ಯೆ ಸಾಯುವವರ ಸಂಖ್ಯೆ ಕಡಿಮೆ ಆಗಿದೆ ಅನ್ನುವ ಅಂಕಿ ಅಂಶಗಳನ್ನ ನೋಡಿದರೆ ನಾವು ತಿನ್ನುವ ಔಷದಿ ಮತ್ತು ಚಿಕಿತ್ಸೆ ನೀಡುವ ವೈದ್ಯ ಪದ್ಧತಿಯನ್ನೆ ಅನುಮಾನಿಸುವಂತಿದೆ.
  ಹಣದಾಹದ ಕಾಪೊ೯ರೇಟ್ ಆಸ್ಪತ್ರೆ ವ್ಯವಸ್ಥೆ 3% ಮಾತ್ರ ಇರುವ ರೋಗಿಗಳಿ೦ದ ಲಾಭವಿಲ್ಲ ಅಂತ 97% ಇರುವ ನಿರೋಗಿಗಳನ್ನು ಕಾಯಿಲೆ, ಪರೀಕ್ಷೆ ಮತ್ತು ಚಿಕಿತ್ಸೆ ಎನ್ನುವ ಜಾಲದಲ್ಲಿ ಸಿಲುಕಿಸಿರುವುದು ಇದರಿಂದ ಹೆಚ್ಚಿನ ಸಾವು ಸಂಬವಿಸುತ್ತಿದೆ ಅಂತ ಡಾ.ಬಿ.ಎಂ.ಹೆಗಡೆ ಉಪನ್ಯಾಸ ನೀಡುತ್ತಿರುವುದು ಸುಳ್ಳಲ್ಲ.
  ಕೊರಾನಾ ಲಾಕ್ ಡೌನ್ ಅವದಿಯಲ್ಲಿ ಇದು ಸಾಬೀತಾಗಿದೆ ಗಮನಿಸಿ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...