Skip to main content

#ಕೊರಾನಾ ವೈರಸ್ ನಿಮೂ೯ಲನೆಗೆ ಸಹಕರಿಸದೆ ಹಲ್ಲೆಗೆ ಮುಂದಾಗುತ್ತಿರುವ ದುರಂತ ಸನ್ನಿವೇಶ#

#ಕೊರಾನಾ ಲಾಕ್ ಡೌನ್ ಡೈರಿ - ಲೆಟರ್ ನಂ 5. 
(ಕೆ.ಅರುಣ್ ಪ್ರಸಾದ್)
(25-ಮಾಚ್೯ - 2020 ರಿಂದ 3-ಏಪ್ರಿಲ್
- 2020

 #ಕೊರಾನವೈರಸ್ ಗೆ ಸಾವು ನೋವಿನಲ್ಲೂ ಕೋಮು ಸೌಹಾದ೯ಕ್ಕೆ ಕಂದಕ ನಿಮಾ೯ಣ#
  
  ವಿಶ್ವದಾದ್ಯಂತ ಈ ವೈರಸ್ ನಿಂದ ಆಗುತ್ತಿರುವ ಸಾವಿನ ಸರಣಿ ಕಣ್ಣೆದುರಲ್ಲಿ ಕಾಣುತ್ತಿದೆ, ಶ್ರೀಮಂತ ದೇಶಗಳೆ ಇದನ್ನ ನಿಯಂತ್ರಿಸಲಾಗದೆ ಕೈಚೆಲ್ಲಿದೆ.
 ಇದಕ್ಕೆ ಇನ್ನೂ ಮದ್ದು ಕಂಡು ಹಿಡಿದಿಲ್ಲ ಯಾವುದೇ ರೋಗ ನಿರೋದಕ ಲಸಿಕೆ ಇಲ್ಲ ಇಂತಹ ಗಂಡಾ೦ತರಕಾರಿ ಸನ್ನಿವೇಷದಲ್ಲಿ  ಬಾರತ ಸಕಾ೯ರ ಕೆಲ ಕಾಲ ಲಾಕ್ ಡೌನ್ ಪ್ರಾರಂಬಿಸಿದೆ.
   ಇದರ ಉದ್ದೇಶ ಈ ವೈರಸ್ ಹರಡುವ ಕಾರಣವಾದ ಎಲ್ಲಾ ಸಾಮೂಹಿಕ ಪ್ರಾಥ೯ನೆ ಜಾತ್ರೆ ಸಂತೆ ಬಸ್ ರೈಲು ವಿಮಾನ ರದ್ದು ಮಾಡಿದೆ.
   ಪರಸ್ಪರ ಅಂತರ ಪದೇ ಪದೇ ಕೈ ಸೋಪಿನಿಂದ ತೊಳೆಯುವುದು, ಹೊರ ದೇಶ ಅಥವ ರಾಜ್ಯದಿಂದ ಬಂದವರು ಆಯಾ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರೆ ಅವರನ್ನ ಸೂಕ್ತ ಪರೀಕ್ಷೆ ಚಿಕಿತ್ಸೆಯಿಂದ ಈ ವೈರಾಣು ಬೇರೆಯವರಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಕೆಲಸ ಆರೋಗ್ಯ ಇಲಾಖೆ ಜಿಲ್ಲಾ ಆಡಳಿತ ನಡೆಸಿದೆ.
  ಇದೆಲ್ಲ ಜನ ಸಾಮಾನ್ಯರ ಆರೋಗ್ಯ ಕಾಪಾಡುವ ಮುನ್ನೆಚ್ಚರಿಕೆ ಆಗಿದೆ.
  ಆದರೆ ಎಲ್ಲದಕ್ಕೂ ಜಾತಿ ದಮ೯ ಬೆರೆಸುವ ಭಾರತದಲ್ಲಿ ಕೊರಾನ ವೈರಸ್ ನಲ್ಲೂ ಇದನ್ನ ಬೆರೆಸಿ ಬಿಟ್ಟಿದ್ದಾರೆ, ಇನ್ನೂ ಮುಂದೆ ಹೋಗಿರುವ ಅಲ್ಪಸಂಖ್ಯಾತ ಸಮೂದಾಯದ ದಾಮಿ೯ಕ ಗುರುಗಳ ಉಪದೇಶ ಮೋದಿ ಮತ್ತು ಬಿಜೆಪಿ ಪಕ್ಷದ ಷಡ್ಯಂತ್ರ,ಕೊರಾನಾ ಸುಳ್ಳು ಅನ್ನುವ ಸಂದೇಶ ಬಿತ್ತರಿಸುತ್ತಿದ್ದಾರೆ ಇದರಿಂದ ಸಕಾ೯ರದ ಎಲ್ಲಾ ಮುOಜಾಗೃತ ಕ್ರಮ ವಿರೋದಿಸುವ ಸಹಕಾರ ನೀಡದ ಅನೇಕ ಘಟನೆಗಳನ್ನ ನೋಡುತ್ತಿದ್ದೇವೆ.
  ದೆಹಲಿಯ ನಿಜಾಮುದ್ದೀನ್ ಮಕಾ೯ಜ್ ನ ತಬ್ಲೀಕ್ ಸಮಾವೇಶದಲ್ಲಿ ಭಾಗವಹಿಸಿದವರಿಗೆ ಮತ್ತು ಇವರ ಸಂಪಕ೯ಕ್ಕೆ ಬಂದವರಿಗೆ ಹೆಚ್ಚಿನ ಜನಕ್ಕೆ 
ಕೊರಾನ ವೈರಸ್  ಹರಡುತ್ತಿರುವುದು  ಭಯ ಉoಟು ಮಾಡಿದೆ ಇಡೀ ದೇಶದಲ್ಲಿ .
 ಮುಸ್ಲಿಂ ಸಮಾಜದ ಮುಖಂಡರುಗಳು ಈ ಬಗ್ಗೆ ಹೆಚ್ಚು ಜನ ಜಾಗೃತಿ ಮಾಡಲು ಮುಂದಾಗಬೇಕು, ಪರೀಕ್ಷಿಸಲು ಮಾಹಿತಿ ಸಂಗ್ರಹಿಸಲು ಬರುವ ಆರೋಗ್ಯ ಇಲಾಖೆ ಸಿಬ್ಬ೦ದಿಯ ಮೇಲೆ ಹಲ್ಲೆ ಮಾಡುವುದು, ಸಹಕರಿಸದಂತ ಘಟನೆ ಮರುಕಳಿಸದಂತೆ ಜಾಗೃತಿ ವಹಿಸಿಬೇಕಾಗಿದೆ.
  ಮುಸ್ಲಿಂ ಸಮಾಜದ ವಿದ್ಯಾವಂತರು ಪ್ರಗತಿಪರರು ಈ ವಿಚಾರದಲ್ಲಿ ರಾಜಕೀಯ ಬೆರೆಸದೆ ಸಮೂದಾಯದ ಆರೋಗ್ಯಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು ಅವರೆಲ್ಲ ಎದ್ದು ಮುಂದೆ ಬಂದರೆ ಮೌಡ್ಯ ಬಿತ್ತುವ ಜನರ ಸಾವು ನೋವಿಗೆ ಕಾರಣರಾಗುವ ದಮ೯ದ ಹೆಸರಲ್ಲಿ ಸಾಮೂಹಿಕವಾಗಿ ಜನರನ್ನ ತಪ್ಪು ದಾರಿಗೆ ಒಯ್ಯುವವರನ್ನ ದೂರ ಮಾಡಿ ಭಾರತ ದೇಶದಲ್ಲಿನ ಈ ಗಂಡಾಂತರ ಪಾರು ಮಾಡಲು ಸಾಧ್ಯವಿದೆ.
  ಕೊರಾನದಂತ ವೈರಸ್ ಗೆ ಜಾತಿ ದಮ೯ದ ಹಂಗಿಲ್ಲ ನಿಲ೯ಕ್ಷಿಸಿದರೆ ಎಲ್ಲರನ್ನು ಸಂಹಾರ ಮಾಡಲಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...