Skip to main content

#ಸೀಲ್ ಡೌನ್ ಅವದಿಯಲ್ಲಿ ಬಡವ ಬಲ್ಲಿದ ಎಂಬ ಬೇದ ಇರುವುದಿಲ್ಲ#

#ಕೊರಾನಾ ಲಾಕ್ ಡೌನ್ ಡೈರಿ- 2020
 #ಲೆಟರ್ ನಂ -12.
#ದಿನಾ೦ಕ 11-ಏಪ್ರಿಲ್ -2020.

*ಕೊರಾನಾ ನಿಮೂ೯ಲನೆಯ ಎರಡನೆ ಹಂತದಲ್ಲಿ ಆಹಾರ- ಔಷದಿ-ನೀರು ಬಡವರಿಗೆ ಮಾತ್ರವಲ್ಲ ಅವಶ್ಯ ಇದ್ದವರಿಗೆಲ್ಲ ತಲುಪಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು*

   ಈವರೆಗೆ ಕೆಲವರು ಪ್ರಾಮಾಣಿಕವಾಗಿ, ಹೆಚ್ಚಿನವರು ಪ್ರಚಾರಕ್ಕಾಗಿ ಬಡವರಿಗೆ ಪಡಿತರದ ಕಿಟ್ ಕೊಡುವ ಕಾಯ೯ಕ್ರಮ ಮಾಡಿದ್ದಾರೆ.
  ಒಂದರೆಡು ಬಾಳೆಹಣ್ಣು ಹಂಚುವ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ನೋಡಿದೆ ಇದೊoದು ತರ ಪ್ರಚಾರದ ಶನಿ ಹಿಡಿದವರ ಕಥೆ.
   ಇನ್ನು ಕೆಲವರು ಅವರ ಸ್ವಂತ ಹಣದಲ್ಲಿ ಸಾಮಗ್ರಿ ಖರೀದಿಸಿ ಅವಶ್ಯಕತೆ ಇದ್ದವರಿಗೆ ಪ್ರಾಮಾಣಿಕವಾಗಿ  ತಲುಪಿಸುವ ಕೆಲಸ ಮಾಡಿದ್ದಾರೆ.
   ಇನ್ನು ಕೆಲವರು ನಾವು ಬಡವರಿಗೆ ದಾನ ಮಾಡುತ್ತೇವೆ ನಿಮ್ಮ ಪಾಲು ಕೊಡಿ ಅಂತ ರೋಲ್ ಕಾಲ್ ಮಾಡಿದವರೂ ಇದ್ದಾರೆ.
  ಈ ರೀತಿ ಆಹಾರದ ಕಿಟ್, ಮಾಸ್ಕ್ ಮು೦ತಾದ ಹಂಚಿಕೆ ಕಾಯ೯ಕ್ರಮದಲ್ಲಿ ಸಾಮಾಜಿಕ ಅಂತರ ಕಾಪಾಡುವಲ್ಲಿ ವಿಪಲತೆಯನ್ನ ನೋಡುತ್ತಿದ್ದೇವೆ ಇದರಿಂದ ಹಸಿವು ನಿವಾರಿಸಲು ಹೋಗಿ ರೋಗ ಹರಡಿಸಲು ಕಾರಣವಾಗುವ ಆಪಾಯವೇ ಹೆಚ್ಚು.
   ಸರಿ ತಪ್ಪು ವಿಮಶೆ೯ ಮಾಡುವ ಕಾಲ ಇದಲ್ಲ ದೊಡ್ಡ ಮಠಗಳೇ ಅತಿವೃಷ್ಟಿಯಲ್ಲಿ ನೆರೆ ಪರಿಹಾರವಾಗಿ ಸಾವಿರಾರು ಮನೆ ಕಟ್ಟಿಕೊಡುವುದಾಗಿ ಭಕ್ತರಿಂದ ಕೋಟ್ಯಾoತರ ಹಣ ದಾನವಾಗಿ ಸಂಗ್ರಹಿಸಿ ಒಂದೇ ಒಂದು ಮನೆ ಕಟ್ಟದ ಉದಾಹರಣೆಯೆ ಇದೆ.
    ಏಪ್ರಿಲ್ 14 ರಿಂದ ಕೊರಾನಾ ವೈರಸ್ ನಿಮೂ೯ಲನೆಗೆ ಸಕಾ೯ರ ನಿಧಿ೯ಷ್ಟ ಮತ್ತು ಕಠೋರವಾದ ಮು೦ಜಾಗೃತೆ ಕಾಯ೯ಕ್ರಮ ಹಾಕಲೇಬೇಕಾಗಿದೆ, ಸೊ೦ಕಿತರಿರುವ ಪ್ರದೇಶವನ್ನ ಸಂಪೂಣ೯ ಸೀಜ್ ಮಾಡಲೆಬೇಕು ಈ ಸಂದಭ೯ದಲ್ಲಿ ಈ ಪ್ರದೇಶದವರಿಗೆ ಅವಶ್ಯವಿರುವ ಆಹಾರ - ಔಷದ - ನೀರು ನಿಯಮಿತವಾಗಿ ತಲುಪಿಸುವ ಹೊಣೆ ಸಕಾ೯ರದ್ದಾಗಿರುತ್ತದೆ.
  ಆಗ ಬಡವ ಶ್ರೀಮಂತ ಎಂದು ವಿಭಾಗಿಸಲು ಸಾಧ್ಯವಿಲ್ಲ ಮತ್ತು ಸಾವ೯ಜನಿಕರಿಗೆ ವಿತರಿಸಲು ಅವಕಾಶವಿರುವುದಿಲ್ಲ.
   ದಾನಿಗಳು ಆಹಾರ ಸಾಮಗ್ರಿಗಳನ್ನ ಸಕಾ೯ರದ ಪ್ರತಿನಿದಿಗಳಿಗೇ ಹಸ್ತಾ೦ತರಿಸಬೇಕು.
  ಹಾಗಾಗಿ ಸಮಾಜ ಸೇವೆಯ ಉತ್ಸಾಹದಲ್ಲಿರುವವರು ಆಹಾರ ಪದಾಥ೯ ಸ್ವತಃ ದಾನವಾಗಿ ನೀಡುವ ಕಾಯ೯ ಮಾಪಾ೯ಟು ಮಾಡಿ ಸಕಾ೯ರದೊ೦ದಿಗೆ ಸಹಕರಿಸಿ ಆದಷ್ಟು ಅವರವರ ಮನೆಯಲ್ಲಿ  ಇರುವುದೇ ಕೊರಾನಾ ನಿಮೂ೯ಲನೆಗೆ ದೊಡ್ಡ ಸಹಕಾರವಾಗುತ್ತದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...