Skip to main content

ಶಿವಮೊಗ್ಗ ಜಿಲ್ಲೆಯ ಕೆಳದಿ ರಾಜ ವೆಂಕಟಪ್ಪ ನಾಯಕರು 400 ವರ್ಷದ ಹಿಂದೆ ರಾಣಿ ಚಂಪಕಳ ಸ್ಮರಣಾರ್ಥ ನಿರ್ಮಿಸಿದ ಸ್ಮಾರಕ ಚಂಪಕ ಸರಸ್ಸು ಪುನರುಜ್ಜೀವನಕ್ಕೆ ಮುಂದಾಗಿರುವ ಖ್ಯಾತ ಚಲನಚಿತ್ರ ನಟ ಯಶ್ ಮತ್ತು ಇದರ ನೇತೃತ್ವ ವಹಿಸಿರುವ ಖ್ಯಾತ ಜಲ ತಜ್ಞ ಶಿವಾನಂದ ಕಳವೆ ಅಭಿನಂದನಾರ್ಹರು.

#ಆನಂದಪುರಂ_ಚಂಪಕಸರಸ್ಸು_ನಿರ್ಮಾಣವಾಗಿ_ನಾಲ್ಕು_ಶತಮಾನ.

#ಚಂಪಕಸರಸ್ಸು_ಪುನರುಜ್ಜೀವನಕ್ಕೆ_ಮುಂದಾಗಿರುವ_ಖ್ಯಾತ_ಚಲನಚಿತ್ರನಟ_ಯಶ್.

#ಪುನರುಜ್ಜೀವನದ_ಕಾರ್ಯದ_ಮುಖ್ಯ_ಪ್ರೇರಕರು_ಜಲತಜ್ಞ_ಶಿವಾನಂದಕಳವೆ .

#ಇವತ್ತಿಂದ_ಯಶೋಮಾರ್ಗದಿಂದ_ಪಾರಂಪರಿಕ_ಕಲ್ಯಾಣಿ_ಚಂಪಕಸರಸ್ಸು_ಪುನರುಜ್ಜೀವನ_ಕಾರ್ಯ_ಪ್ರಾರಂಭ.

  ಚಂಪಕ ಸರಸ್ಸು ಸುಂದರವಾದ ಕಲ್ಯಾಣಿ ಇದರ ಮಧ್ಯೆ ಶಿವಾಲಯ ಅಲ್ಲಿಗೆ ಹೋಗಲು ನೀರಿನ ಮೇಲೆ ಕಲ್ಲಿನದ್ದೇ ಸಂಕ, ಸುಂದರವಾದ ಶಿಲಾಮಯ ಆನೆಗಳು, ಸುತ್ತಲೂ ಪಗಾರ ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಬಸ್ ಸ್ಟಾಂಡಿನಿಂದ ಶಿಕಾರಿಪುರ ರಸ್ತೆಯಲ್ಲಿ ಸಿಗುವ ಮಲಂದೂರಿನ ಸಂತೋಷ್ ಕೋಲ್ಡ್ ಸ್ಟೋರೇಜ್ ಹಿಂಬಾಗದಲ್ಲಿದೆ.
  ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕರು ರಾಣಿ ಚಂಪಕಳ ನಿತ್ಯ ಬಿಡುಸುತ್ತಿದ್ದ ರಂಗೋಲಿಯಿಂದ ಪ್ರಾರಂಭವಾಗುವ ಪ್ರೇಮ ಕಥೆ, ವಿವಾಹವಾಗಿ ಆನಂದಪುರಂನ ಕೋಟೆಯ ಅರಮನೆಯಲ್ಲಿ ತನ್ನ ಆಹಾರ ಪದ್ಧತಿಗಾಗಿ ಪಟ್ಟದ ರಾಣಿ ಭದ್ರಮ್ಮಾಜಿಯ ಮತ್ತು ರಾಜ ವೆಂಕಟಪ್ಪ ನಾಯಕರ ಮಧ್ಯ ಉಂಟಾಗುವ ವಿರಹ ಇದಕ್ಕಾಗಿ  ರಾಜ್ಯದ ಪ್ರಜೆಗಳಲ್ಲಿ ರಾಜ ವೆಂಕಟಪ್ಪ ನಾಯಕರ ಮೇಲೆ ಹೆಚ್ಚಾಗುವ ಆಸಹನೆ ತಾಳಿಕೊಳ್ಳದೆ ರಾಣಿ ಚಂಪಕ ವಜ್ರದ ಪುಡಿ ಹಾಲಿನ ಜೊತೆ ಸೇವಿಸಿ ಜೀವ ತ್ಯಾಗ ಮಾಡುತ್ತಾಳೆ, ರಾಣಿ ಚಂಪಕಾಳ ಸ್ಮರಣೆಗಾಗಿ ನಿರ್ಮಿಸಿರುವುದೇ ಈ ಚಂಪಕ ಸರಸ್ಸು (ಸರಸ್ಸು ಎಂದರೆ ಕೊಳ).
  ಕೆಳದಿ ಇತಿಹಾಸದಲ್ಲಿ ದೀರ್ಘ ಕಾಲ ಆಳಿದ, ರಾಜ್ಯ ವಿಸ್ತಾರ ಮಾಡಿದ, ರಾಣಿ ಅಬ್ಬಕ್ಕ ಮತ್ತು ಕಾಳು ಮೆಣಸಿನ ರಾಣಿ ಬೈರಾದೇವಿಯವರ ರಾಜ್ಯವನ್ನೂ ವಶಪಡಿಸಿಕೊಂಡು ಇವತ್ತಿನ ಸಾಗರ ಪಟ್ಟಣವನ್ನೇ ನಿರ್ಮಿಸಿದ್ದರು ಕೂಡ ರಾಜ ವೆಂಕಟಪ್ಪ ನಾಯಕ ಮತ್ತ ರಾಣಿ ಚಂಪಕಳ ಅಂತರ್ಜಾತಿ ವಿವಾಹ ರಾಜ ವೆಂಕಟಪ್ಪ ನಾಯಕರನ್ನು ಉದ್ದೇಶ ಪೂರ್ವಕವಾಗಿ ಕತ್ತಲಲ್ಲಿ ಇಡಲಾಗಿದೆ.
   ಈ ಕಾರಣದಿಂದಲೇ ಈ ಸುಂದರ ಸ್ಮಾರಕ ನೇಪಥ್ಯಕ್ಕೆ ಸರಿದಿತ್ತಾ?.
  2024ರಲ್ಲಿ 400 ವಷಾ೯ಚಾರಣೆಯ ಸಂದರ್ಭದಲ್ಲಿ ಈ ಪಾರಂಪರಿಕ ಕಲ್ಯಾಣಿಯ ಪುನರುಜ್ಜೀವನ ಮಾಡುವ ಕೆಲಸ ಕನ್ನಡದ ಪ್ರಸಿದ್ಧ ನಟ ಯಶ್ ತೆಗೆದುಕೊಂಡಿದ್ದಾರೆ, ಈಗಾಗಲೇ ನಾಡಿನ ನೆಲ-ಜಲ-ಭಾಷೆಯ ಸಂರಕ್ಷಣೆಗಾಗಿ ಅವರು ಸ್ಥಾಪಿಸಿರುವ ಯಶೋ ಮಾಗ೯ (NGO) ಮೂಲಕ ಇವತ್ತಿನಿಂದ ಚಂಪಕ ಸರಸ್ಸು ಸುತ್ತಲೂ ಸ್ವಚ್ಚಗೊಳಿಸಿ, ಇಂಗು ಗುಂಡಿ ನಿರ್ಮಿಸಿ, ಈ ಸ್ಮಾರಕಕ್ಕೆ ಗೇಟ್ ನಿಮಿ೯ಸಿ, ಕಾವಲುಗಾರರ ಮನೆ ಇತ್ಯಾದಿ ಅವಶ್ಯವಾದ ಸಂರಕ್ಷಣೆಯ ಕೆಲಸಕ್ಕೆ  ಅವರ ಸಂಸ್ಥೆಯ ಜೊತೆ ಹೈದ್ರಾಬಾದ್ ಮೂಲದ ಪ್ರಖ್ಯಾತ ಖಾದ್ಯ ತೈಲ ಸಂಸ್ಥೆ ಪ್ರೀಡಂ ಆಯಿಲ್ ಕೂಡ ಕೈ ಜೋಡಿಸಿರುವುದು ಇತಿಹಾಸ ಪ್ರಿಯರಿಗೆ ಮತ್ತು ಆನಂದಪುರಂನ ನಿವಾಸಿಗಳಿಗೆ ಸಂತೋಷ ಉಂಟು ಮಾಡಿದೆ.
   ಈ ಐತಿಹಾಸಿಕ ಸ್ಮಾರಕ ಪಾರಂಪರಿಕ ಕಲ್ಯಾಣಿಯನ್ನು ಸಂರಕ್ಷಿಸಿ ಮುಂದಿನ ತಲೆಮಾರಿಗೆ ಉಳಿಸುವ ಮಹತ್ವಾಕಾಂಕ್ಷೆಯಿಂದ ನಟ ಯಶ್ ರನ್ನು ಒಪ್ಪಿಸಿ ಕಾರ್ಯ ಸಾದು ಮಾಡಿದವರು ನಾಡಿನ ಪ್ರಖ್ಯಾತ ಜಲ ತಜ್ಞರಾದ, ಪರಿಸರ ವಿಜ್ಞಾನಿ ಮತ್ತು ಪತ್ರಕರ್ತರಾದ ಶಿವಾನಂದ ಕಳವೆಯವರನ್ನು ಕೆಳದಿ ಇತಿಹಾಸ ಬಲ್ಲವರೆಲ್ಲ ಮರೆಯುವಂತಿಲ್ಲ.
  ಇವತ್ತಿನ ಬೆಳಿಗ್ಗೆ ಪೂಜೆಯೊಂದಿಗೆ ಈ ಪುನರುಜ್ಜೀವನದ ಮಹತ್ವದ ಕೆಲಸ ಪ್ರಾರಂಭದ ಶುಭ ಸಂದರ್ಭದಲ್ಲಿ ಅಖಿಲ ಭಾರತ ಯಶ್ ಅಭಿಮಾನಿ ಸಂಘದ ಅಧ್ಯಕ್ಷರಾದ ರಾಕೇಶ್, ಕರ್ನಾಟಕ ರಾಜ್ಯ ಯಶ್ ಅಭಿಮಾನಿ ಸಂಘದ ಅಧ್ಯಕ್ಷರಾದ ಸತೀಶ್ ಶಿವಣ್ಣ, ಯಶ್ ಅಭಿಮಾನಿ ಸಂಘದ ಸಂಸ್ಥಾಪಕರಾದ ಶ್ರೀ ಗಂಧ ಭಾಗವಹಿಸುತ್ತಿದ್ದಾರೆ.
  ಆನಂದಪುರಂನ ಸ್ಥಳಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನವೀನಾ ರವೀಂದ್ರ ಗೌಡ, ಉಪಾದ್ಯಕ್ಷರಾದ ಮೋಹನ್ ಮತ್ತು ಸದಸ್ಯರು ಮತ್ತು ಇತಿಹಾಸ ಪರಂಪರೆ ಉಳಿಸಿ ಟ್ರಸ್ಟ್ ನ ರಾಜೇಂದ್ರ ಗೌಡರು, ಕಾಯ೯ದಶಿ೯ ಮತ್ತು ಪತ್ರಕರ್ತರಾದ ಬಿ.ಡಿ. ರವಿ ಮತ್ತು ಅವರೆಲ್ಲರ ಸಂಗಡಿಗರು ಭಾಗಿಯಾಗಿದ್ದಾರೆ ಮತ್ತು ಪುನರುಜ್ಜೀವನ ಕೆಲಸದ ನೇತೃತ್ವ ವಹಿಸಿದ್ದಾರೆ.
   ಮುಂದಿನ ದಿನದಲ್ಲಿ ಇಲ್ಲಿಗೆ ಸುಸಜ್ಜಿತ ರಸ್ತೆ ನಿರ್ಮಾಣ ಆಗಬೇಕು ಇದಕ್ಕೆ ಸ್ಥಳಿಯ ಶಾಸಕರಾದ ಹರತಾಳು ಹಾಲಪ್ಪನವರು ಇಂತಹ ಜನಪರ ಕೆಲಸಕ್ಕೆ ಯಾವತ್ತೂ ಸಹಕರಿಸುತ್ತಾರೆ.
  ಇದು ಒಂದು ಪ್ರವಾಸೋದ್ಯಮ ಕೇಂದ್ರವಾಗಿಸಲು ಸಂಸದರಾದ ರಾಘವೇಂದ್ರ, ಜಿಲ್ಲಾ ಮಂತ್ರಿಗಳಾದ ಈಶ್ವರಪ್ಪ ಮತ್ತು ಗೃಹ ಸಚಿವರಾದ ಆರಗ ಜ್ಞಾನೇಂದ್ರರು ಮುಂದಾಗುವ ವಿಶ್ವಾಸವಿದೆ.
   ಕೆಳದಿ ಅರಸರಿಂದ ನಿಮಾ೯ಣವಾಗಿರುವ ಸುಮಾರು ನಾಲ್ಕುನೂರು ವರ್ಷದ ಇತಿಹಾಸ ಇರುವ ಈ ಸುಂದರ ಸ್ಮಾರಕದ ಪುನರುಜ್ಜೀವನಕ್ಕೆ ಮುಂದಾದ ಕನ್ನಡದ ಪ್ರಖ್ಯಾತ ನಟ ಯಶ್ ರವರಿಗೆ ಇನ್ನೊಮ್ಮೆ ಇತಿಹಾಸಕ್ತರು ಮತ್ತು ಶಿವಮೊಗ್ಗ ಜಿಲ್ಲೆಯ ಸಮಸ್ತ ನಾಗರೀಕರ ಪರವಾಗಿ ಅಭಿನಂದಿಸುತ್ತೇನೆ, ದೇವರು ಅವರಿಗೆ ಆಯುರಾರೋಗ್ಯ - ಆಯಸ್ಸು- ಐಶ್ವರ್ಯ ಮತ್ತು ಯಶಸ್ಸು ದಯಪಾಲಿಸಲಿ ಎಂದು ಹಾರೈಸುತ್ತೇನೆ.
  ಈ ಮಹತ್ವದ ಕಾರ್ಯಕ್ಕೆ ಕಾರಣರಾದ ಜಲ ತಜ್ಞ ಶಿವಾನಂದ ಕಳವೆ ಆದಿಯಾಗಿ ಎಲ್ಲರಿಗೂ ಶುಭ ಹಾರೈಸುತ್ತೇನೆ.
  ನಾನೂರು ವರ್ಷದಿಂದ  ಕೆಳದಿ ಇತಿಹಾಸ ಮರೆತಿರುವ ದುರ೦ತ ಪ್ರೇಮದ ರಾಣಿ ಚಂಪಕಳ ಆತ್ಮ ಮುಕ್ತಿಗಾಗಿ ಕಾದಿದೆ ಎಂಬುದು ಸುಳ್ಳಲ್ಲ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ