Skip to main content

ಆನಂದಪುರಂ ಇತಿಹಾಸ, ಭಾಗ 63. ಶಿವಮೊಗ್ಗ ತಾಳಗುಪ್ಪ ಮೀಟರ್ ಗೇಜ್ ರೈಲು ಮಾರ್ಗ 1940 ರಲ್ಲಿ ಪ್ರಾರಂಭವಾಯಿತು.

#ಆನಂದಪುರಂ_ಇತಿಹಾಸ
#ಭಾಗ_63.

#ಆನ೦ದಪುರಂಗೆ_ರೈಲು_ಮಾರ್ಗ_ಶಿವಮೊಗ್ಗ_ತಾಳಗುಪ್ಪ_ಮೀಟರ್_ಗೇಜ್

#ಶಿವಮೊಗ್ಗ_ಆನಂದಪುರಂ_ರೈಲು_ಮಾರ್ಗ_ಕಾಮಗಾರಿ_1934ಕ್ಕೆ_ಮುಗಿಯಿತು.

#ಮೊದಲ_ರೈಲು_1940_ನವೆಂಬರ್_9ಕ್ಕೆ_ತಾಳಗುಪ್ಪದಿಂದ_ಬೆಳಿಗ್ಗೆ_ಪ್ರಾರಂಭ_ಆಯಿತು.

#ಈ_ಮಾರ್ಗದ_ಮೊದಲ_ರೈಲಿನ_ಸಂಖ್ಯೆ_SMET_SBC_EXP(20652).

  ಮುಮ್ಮುಡಿ ಚಾಮರಾಜ ಒಡೆಯರು 1881 ರಿಂದ 13 ವರ್ಷದ ತಮ್ಮ ಆಳ್ವಿಕೆಯಲ್ಲಿ 164 ಲಕ್ಷ ವೆಚ್ಚದಲ್ಲಿ ರಾಜ್ಯದಲ್ಲಿ 315 ಮೈಲು ರೈಲು ಮಾರ್ಗ ನಿರ್ಮಿಸುತ್ತಾರೆ.
   ಮಹಾರಾಣಿ ವಾಣಿವಿಲಾಸರು 23 ಲಕ್ಷದಲ್ಲಿ ಬಿರೂರು ಶಿವಮೊಗ್ಗ ಮೀಟರ್ ಗೇಜ್ ರೈಲು ಮಾರ್ಗ ನಿರ್ಮಿಸುತ್ತಾರೆ ಈ ರೀತಿ ಆಗಿನ ಮೈಸೂರು ಅರಸರ ಪ್ರಯತ್ನ ಮತ್ತು ಸಹಕಾರದಲ್ಲಿ ಬ್ರಿಟೀಷರು ನಿರ್ಮಿಸಿದ ರೈಲು ಮಾರ್ಗಗಳು ಆಗ ಮೈಸೂರು ಸ್ಟೇಟ್ ರೈಲ್ವೆ ಇಲಾಖೆ ಹೆಸರಲ್ಲಿ ಸದರ್ನ ರೈಲ್ವೆ ಅಂಗ ಸಂಸ್ಥೆ ಆಗಿ 1891ರಿಂದ 1951ರವರೆಗೆ ಕಾಯ೯ನಿರ್ವಹಿಸಿತ್ತು  ಈಗ ಈ ಮಾರ್ಗ ಬ್ರಾಡ್ ಗೇಜ್ ಗಳಾಗಿ ಪ್ರಯಾಣಿಕರಿಗೆ, ಸರಕು ಸಾಗಾಣಿಕೆಗೆ ಅನುಕೂಲಕರವಾಗಿದೆ.
  1899 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ರಾಜರಾಗಿದ್ದಾಗ ಬೀರೂರು ಶಿವಮೊಗ್ಗ ರೈಲು ಮಾರ್ಗ ಆಗಿತ್ತಾದರೂ ಶಿವಮೊಗ್ಗದಿಂದ ಜೋಗ್ ಪಾಲ್ಸ್ ಗೆ ಸಂಪರ್ಕಿಸಲಿಕ್ಕಾಗಿ ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗ ಕಾಮಗಾರಿ ಪ್ರಾರಂಭ ಆಗುವುದು 1930ರಲ್ಲಿ.
  1934 ಕ್ಕೆ ಶಿವಮೊಗ್ಗದಿಂದ ಆನಂದಪುರಂ ವರೆಗಿನ ಮೀಟರ್ ಗೇಜ್ ಕಾಮಗಾರಿ ಮುಗಿಯುತ್ತದೆ, 1938 ಕ್ಕೆ ಸಾಗರದ ತನಕ ಕಾಮಗಾರಿ ಮುಗಿದು 1939 ಕ್ಕೆ ತಾಳಗುಪ್ಪ ತಲುಪುತ್ತದೆ.
  1938 ರಲ್ಲಿ ಮೈಸೂರಿನ ದಿವಾನರಾದ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಶಿವಮೊಗ್ಗದಿಂದ ಸಾಗರದವರೆಗೆ ಮೊದಲ ಪ್ರಯೋಗಾತ್ಮಕ ರೈಲು ಪ್ರಯಾಣ ಮಾಡುತ್ತಾರೆ.
  ಶಿವಮೊಗ್ಗ - ತಾಳಗುಪ್ಪ ಮೀಟರ್ ಗೇಜ್ ರೈಲು ಅಧಿಕೃತವಾಗಿ 9- ನವೆಂಬರ್ -1940 ರಲ್ಲಿ ಬೆಳಿಗ್ಗೆ 4.30 ಕ್ಕೆ ತಾಳಗುಪ್ಪದಿಂದ ಮೊದಲ ಪ್ರಯಾಣ ಪ್ರಾರಂಬಿಸುತ್ತದೆ ಈ ರೈಲಿನ ಸಂಖ್ಯೆ SMET SBC EXP (20652).
  1938 ರಲ್ಲಿ ಆನಂದಪುರದಿಂದ ಅಡ್ಡೇರಿ ಮದ್ಯದಲ್ಲಿ ಚನ್ನಶೆಟ್ಟಿಕೊಪ್ಪ ಸಮೀಪದಲ್ಲಿ ಆಂದ್ರದ ರೈಲ್ವೆ ಕಾರ್ಮಿಕರನ್ನು  ಸಾಗಿಸುತ್ತಿದ್ದ ರೈಲು ಅಪಘಾತವಾಗಿ ಬಿದ್ದು ಅನೇಕ ಕಾರ್ಮಿಕರ ಆಹುತಿ ಆಗಿದ್ದು ಈ ರೈಲು ಮಾರ್ಗದ ಒಂದು ಕಪ್ಪು ಚುಕ್ಕೆ.
  ಮಲೆನಾಡಿನಿಂದ ರೈಲ್ವೆ ಮಾರ್ಗದ ಸ್ಲೀಪರ್ ಗಾಗಿ ಮರ ಸಾಗಾಣಿಕೆಗಾಗಿ, ಜೋಗ ಜಲಪಾತ ವೀಕ್ಷಣೆಗಾಗಿ ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗವಾಯಿತು ನಂತರ ಭದ್ರಾವತಿ ಉಕ್ಕಿನ ಕಾರ್ಖಾನೆಗೆ ಆಗಿನ ಮರದ ಉರವಲುವಿನಿಂದ ಉಕ್ಕು ನಿರ್ಮಿಸಲು ಬಳಸುತ್ತಿದ್ದ ಪನೇ೯ಸ್ ಗಾಗಿ ಕಟ್ಟಿಗೆ ಸಾಗಾಣಿಕೆಗೆ, ಲಿಂಗನಮಕ್ಕಿ ಆಣೆಕಟ್ಟು ನಿರ್ಮಾಣ ಸಾಮಗ್ರಿ ಸಾಗಾಣಿಕೆಗಾಗಿ ಈ ಮಾರ್ಗ ಉಪಯುಕ್ತವಾಯಿತು.
  ಮೈಸೂರು ಸಂಸ್ಥಾನದ ಜೊತೆ ಅತ್ಯುತ್ತಮ ಸಂಬಂದ ಹೊಂದಿದ್ದ ಆನಂದಪುರಂನ ಇನಾಂದಾರರು, ದೊಡ್ಡ ಭೂ ಮಾಲಿಕರು ಆಗಿದ್ದ ರಾಮಕೃಷ್ಣ ಅಯ್ಯಂಗಾರರ ಪ್ರಯತ್ನವೂ ಸೇರಿ ಆನಂದಪುರಂಗೆ ರೈಲು ನಿಲ್ದಾಣಕ್ಕೆ ಕಾರಣವಾಗುತ್ತದೆ.
  ಇದೇ ಸಂದರ್ಭದಲ್ಲಿ ಸಮೀಪದ ರಿಪ್ಪನ್ ಪೇಟೆಯಲ್ಲಿ ರೈಲು ನಿಲ್ದಾಣ ಬೇಡವೇ ಬೇಡ ರೈಲು ಬಂದರೆ ಭಯಾನಿಕ ಸಾಂಕ್ರಮಿಕ ರೋಗ ಬರುತ್ತದೆಂಬ ತಪ್ಪು ಗ್ರಹಿಕೆಯಿಂದ ಅಲ್ಲಿನ ಪ್ರಮುಖರು ರೈಲು ನಿಲ್ದಾಣ ನಿರಾಕರಿಸಿದ್ದರಿಂದ ಅರಸಾಳಿನಿಂದ ರೈಲು ಮಾರ್ಗ ಆನಂದಪುರಂಗೆ ಮಾರ್ಗ ಬದಲಿಸಿತೆಂದು ಹೇಳುತ್ತಾರೆ.
  ಲಾರ್ಡ್ ರಿಪ್ಪನ್ ತಮ್ಮ ಅಧಿಕಾರದಲ್ಲಿದ್ದಾಗ ಈ ಪ್ರದೇಶದಲ್ಲಿ ವಿಹಾರ ಮಾಡಿದ್ದರಿಂದ ಲಾಡ್೯ ರಿಪ್ಪನ್ ಗೌರವಾರ್ಥ ರಿಪ್ಪನ್ ಪೇಟೆ ಎಂದು ಸ್ಥಳಿಯರು ಪುನರ್ ನಾಮಕರಣ ಮಾಡಿದ್ದರು ಈ ಕಾರಣದಿಂದ ರಿಪ್ಪನ್ ಪೇಟೆಯ ರೈಲು ಮಾರ್ಗ ಸುಲಭವಾಗಿ ಜನರ ಬೇಡಿಕೆಯಂತೆ ಕೈ ಬಿಡಲಾಯಿತಂತೆ ಆದರೆ ಇದು ತಮ್ಮ ಊರಿಗಾದ ದೊಡ್ಡ ನಷ್ಟ ಎಂದು ಈಗಿನ ರಿಪ್ಪನ್ ಪೇಟೆ ಜನತೆ ಬಾವಿಸುತ್ತಾರೆ.
  ಆದರೆ ಆನಂದಪುರಂನಲ್ಲಿ ರೈಲು ನಿಲ್ದಾಣ ಬೇಕೆ ಬೇಕು ಎನ್ನುವ ಬೇಡಿಕೆ ಅಯ್ಯಂಗಾರರಿಂದ ಇದ್ದಿದ್ದರಿಂದ ಆನಂದಪುರಂಗೆ ಸುಲಭವಾಗಿ ರೈಲು ನಿಲ್ದಾಣವಾಯಿತಾದರೂ ಐತಿಹಾಸಿಕ ಕೆಳದಿ ಅರಸರ ಕೋಟೆಯನ್ನೇ ಸೀಳಿ ರೈಲು ಮಾರ್ಗ ಮಾಡಿದ್ದು ಇತಿಹಾಸಕ್ಕಾದ ಅಪಚಾರವೇ ಸರಿ, ಈ ಕಾಮಗಾರಿ ನಿರ್ವಹಿಸಿದವರಿಗೆ ಈ ಕೋಟೆಯಲ್ಲಿ ಅಪಾರ ನಿದಿ ಸಿಕ್ಕಿತು ನಂತರ ಆ ಗುತ್ತಿಗೆದಾರರು ದೇಶದ ಪ್ರತಿಷ್ಟಿತ ಗುತ್ತಿಗೆದಾರ ಕಂಪನಿ ಮಾಡಿದ್ದರು ಇತ್ಯಾದಿ ದಂತಕಥೆಗಳು ಆ ಕಾಲದಲ್ಲಿ ಚಾಲ್ತಿ ಇತ್ತಂತೆ.
  ಈ ಮಾರ್ಗದ ರೈಲಿನಲ್ಲಿ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ, ಲೋಹಿಯಾ, ಲಾಲ್ ಬಹದ್ದೂರು ಶಾಸ್ತ್ರಿಗಳು, ಮೊರಾರ್ಜಿ ದೇಸಾಯಿ ಮುಂತಾದ ಗಣ್ಯರು ಪ್ರಯಾಣಿಸಿದ್ದಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...