Skip to main content

ಆನಂದಪುರಂ ಇತಿಹಾಸ, ಭಾಗ 63. ಶಿವಮೊಗ್ಗ ತಾಳಗುಪ್ಪ ಮೀಟರ್ ಗೇಜ್ ರೈಲು ಮಾರ್ಗ 1940 ರಲ್ಲಿ ಪ್ರಾರಂಭವಾಯಿತು.

#ಆನಂದಪುರಂ_ಇತಿಹಾಸ
#ಭಾಗ_63.

#ಆನ೦ದಪುರಂಗೆ_ರೈಲು_ಮಾರ್ಗ_ಶಿವಮೊಗ್ಗ_ತಾಳಗುಪ್ಪ_ಮೀಟರ್_ಗೇಜ್

#ಶಿವಮೊಗ್ಗ_ಆನಂದಪುರಂ_ರೈಲು_ಮಾರ್ಗ_ಕಾಮಗಾರಿ_1934ಕ್ಕೆ_ಮುಗಿಯಿತು.

#ಮೊದಲ_ರೈಲು_1940_ನವೆಂಬರ್_9ಕ್ಕೆ_ತಾಳಗುಪ್ಪದಿಂದ_ಬೆಳಿಗ್ಗೆ_ಪ್ರಾರಂಭ_ಆಯಿತು.

#ಈ_ಮಾರ್ಗದ_ಮೊದಲ_ರೈಲಿನ_ಸಂಖ್ಯೆ_SMET_SBC_EXP(20652).

  ಮುಮ್ಮುಡಿ ಚಾಮರಾಜ ಒಡೆಯರು 1881 ರಿಂದ 13 ವರ್ಷದ ತಮ್ಮ ಆಳ್ವಿಕೆಯಲ್ಲಿ 164 ಲಕ್ಷ ವೆಚ್ಚದಲ್ಲಿ ರಾಜ್ಯದಲ್ಲಿ 315 ಮೈಲು ರೈಲು ಮಾರ್ಗ ನಿರ್ಮಿಸುತ್ತಾರೆ.
   ಮಹಾರಾಣಿ ವಾಣಿವಿಲಾಸರು 23 ಲಕ್ಷದಲ್ಲಿ ಬಿರೂರು ಶಿವಮೊಗ್ಗ ಮೀಟರ್ ಗೇಜ್ ರೈಲು ಮಾರ್ಗ ನಿರ್ಮಿಸುತ್ತಾರೆ ಈ ರೀತಿ ಆಗಿನ ಮೈಸೂರು ಅರಸರ ಪ್ರಯತ್ನ ಮತ್ತು ಸಹಕಾರದಲ್ಲಿ ಬ್ರಿಟೀಷರು ನಿರ್ಮಿಸಿದ ರೈಲು ಮಾರ್ಗಗಳು ಆಗ ಮೈಸೂರು ಸ್ಟೇಟ್ ರೈಲ್ವೆ ಇಲಾಖೆ ಹೆಸರಲ್ಲಿ ಸದರ್ನ ರೈಲ್ವೆ ಅಂಗ ಸಂಸ್ಥೆ ಆಗಿ 1891ರಿಂದ 1951ರವರೆಗೆ ಕಾಯ೯ನಿರ್ವಹಿಸಿತ್ತು  ಈಗ ಈ ಮಾರ್ಗ ಬ್ರಾಡ್ ಗೇಜ್ ಗಳಾಗಿ ಪ್ರಯಾಣಿಕರಿಗೆ, ಸರಕು ಸಾಗಾಣಿಕೆಗೆ ಅನುಕೂಲಕರವಾಗಿದೆ.
  1899 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ರಾಜರಾಗಿದ್ದಾಗ ಬೀರೂರು ಶಿವಮೊಗ್ಗ ರೈಲು ಮಾರ್ಗ ಆಗಿತ್ತಾದರೂ ಶಿವಮೊಗ್ಗದಿಂದ ಜೋಗ್ ಪಾಲ್ಸ್ ಗೆ ಸಂಪರ್ಕಿಸಲಿಕ್ಕಾಗಿ ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗ ಕಾಮಗಾರಿ ಪ್ರಾರಂಭ ಆಗುವುದು 1930ರಲ್ಲಿ.
  1934 ಕ್ಕೆ ಶಿವಮೊಗ್ಗದಿಂದ ಆನಂದಪುರಂ ವರೆಗಿನ ಮೀಟರ್ ಗೇಜ್ ಕಾಮಗಾರಿ ಮುಗಿಯುತ್ತದೆ, 1938 ಕ್ಕೆ ಸಾಗರದ ತನಕ ಕಾಮಗಾರಿ ಮುಗಿದು 1939 ಕ್ಕೆ ತಾಳಗುಪ್ಪ ತಲುಪುತ್ತದೆ.
  1938 ರಲ್ಲಿ ಮೈಸೂರಿನ ದಿವಾನರಾದ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಶಿವಮೊಗ್ಗದಿಂದ ಸಾಗರದವರೆಗೆ ಮೊದಲ ಪ್ರಯೋಗಾತ್ಮಕ ರೈಲು ಪ್ರಯಾಣ ಮಾಡುತ್ತಾರೆ.
  ಶಿವಮೊಗ್ಗ - ತಾಳಗುಪ್ಪ ಮೀಟರ್ ಗೇಜ್ ರೈಲು ಅಧಿಕೃತವಾಗಿ 9- ನವೆಂಬರ್ -1940 ರಲ್ಲಿ ಬೆಳಿಗ್ಗೆ 4.30 ಕ್ಕೆ ತಾಳಗುಪ್ಪದಿಂದ ಮೊದಲ ಪ್ರಯಾಣ ಪ್ರಾರಂಬಿಸುತ್ತದೆ ಈ ರೈಲಿನ ಸಂಖ್ಯೆ SMET SBC EXP (20652).
  1938 ರಲ್ಲಿ ಆನಂದಪುರದಿಂದ ಅಡ್ಡೇರಿ ಮದ್ಯದಲ್ಲಿ ಚನ್ನಶೆಟ್ಟಿಕೊಪ್ಪ ಸಮೀಪದಲ್ಲಿ ಆಂದ್ರದ ರೈಲ್ವೆ ಕಾರ್ಮಿಕರನ್ನು  ಸಾಗಿಸುತ್ತಿದ್ದ ರೈಲು ಅಪಘಾತವಾಗಿ ಬಿದ್ದು ಅನೇಕ ಕಾರ್ಮಿಕರ ಆಹುತಿ ಆಗಿದ್ದು ಈ ರೈಲು ಮಾರ್ಗದ ಒಂದು ಕಪ್ಪು ಚುಕ್ಕೆ.
  ಮಲೆನಾಡಿನಿಂದ ರೈಲ್ವೆ ಮಾರ್ಗದ ಸ್ಲೀಪರ್ ಗಾಗಿ ಮರ ಸಾಗಾಣಿಕೆಗಾಗಿ, ಜೋಗ ಜಲಪಾತ ವೀಕ್ಷಣೆಗಾಗಿ ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗವಾಯಿತು ನಂತರ ಭದ್ರಾವತಿ ಉಕ್ಕಿನ ಕಾರ್ಖಾನೆಗೆ ಆಗಿನ ಮರದ ಉರವಲುವಿನಿಂದ ಉಕ್ಕು ನಿರ್ಮಿಸಲು ಬಳಸುತ್ತಿದ್ದ ಪನೇ೯ಸ್ ಗಾಗಿ ಕಟ್ಟಿಗೆ ಸಾಗಾಣಿಕೆಗೆ, ಲಿಂಗನಮಕ್ಕಿ ಆಣೆಕಟ್ಟು ನಿರ್ಮಾಣ ಸಾಮಗ್ರಿ ಸಾಗಾಣಿಕೆಗಾಗಿ ಈ ಮಾರ್ಗ ಉಪಯುಕ್ತವಾಯಿತು.
  ಮೈಸೂರು ಸಂಸ್ಥಾನದ ಜೊತೆ ಅತ್ಯುತ್ತಮ ಸಂಬಂದ ಹೊಂದಿದ್ದ ಆನಂದಪುರಂನ ಇನಾಂದಾರರು, ದೊಡ್ಡ ಭೂ ಮಾಲಿಕರು ಆಗಿದ್ದ ರಾಮಕೃಷ್ಣ ಅಯ್ಯಂಗಾರರ ಪ್ರಯತ್ನವೂ ಸೇರಿ ಆನಂದಪುರಂಗೆ ರೈಲು ನಿಲ್ದಾಣಕ್ಕೆ ಕಾರಣವಾಗುತ್ತದೆ.
  ಇದೇ ಸಂದರ್ಭದಲ್ಲಿ ಸಮೀಪದ ರಿಪ್ಪನ್ ಪೇಟೆಯಲ್ಲಿ ರೈಲು ನಿಲ್ದಾಣ ಬೇಡವೇ ಬೇಡ ರೈಲು ಬಂದರೆ ಭಯಾನಿಕ ಸಾಂಕ್ರಮಿಕ ರೋಗ ಬರುತ್ತದೆಂಬ ತಪ್ಪು ಗ್ರಹಿಕೆಯಿಂದ ಅಲ್ಲಿನ ಪ್ರಮುಖರು ರೈಲು ನಿಲ್ದಾಣ ನಿರಾಕರಿಸಿದ್ದರಿಂದ ಅರಸಾಳಿನಿಂದ ರೈಲು ಮಾರ್ಗ ಆನಂದಪುರಂಗೆ ಮಾರ್ಗ ಬದಲಿಸಿತೆಂದು ಹೇಳುತ್ತಾರೆ.
  ಲಾರ್ಡ್ ರಿಪ್ಪನ್ ತಮ್ಮ ಅಧಿಕಾರದಲ್ಲಿದ್ದಾಗ ಈ ಪ್ರದೇಶದಲ್ಲಿ ವಿಹಾರ ಮಾಡಿದ್ದರಿಂದ ಲಾಡ್೯ ರಿಪ್ಪನ್ ಗೌರವಾರ್ಥ ರಿಪ್ಪನ್ ಪೇಟೆ ಎಂದು ಸ್ಥಳಿಯರು ಪುನರ್ ನಾಮಕರಣ ಮಾಡಿದ್ದರು ಈ ಕಾರಣದಿಂದ ರಿಪ್ಪನ್ ಪೇಟೆಯ ರೈಲು ಮಾರ್ಗ ಸುಲಭವಾಗಿ ಜನರ ಬೇಡಿಕೆಯಂತೆ ಕೈ ಬಿಡಲಾಯಿತಂತೆ ಆದರೆ ಇದು ತಮ್ಮ ಊರಿಗಾದ ದೊಡ್ಡ ನಷ್ಟ ಎಂದು ಈಗಿನ ರಿಪ್ಪನ್ ಪೇಟೆ ಜನತೆ ಬಾವಿಸುತ್ತಾರೆ.
  ಆದರೆ ಆನಂದಪುರಂನಲ್ಲಿ ರೈಲು ನಿಲ್ದಾಣ ಬೇಕೆ ಬೇಕು ಎನ್ನುವ ಬೇಡಿಕೆ ಅಯ್ಯಂಗಾರರಿಂದ ಇದ್ದಿದ್ದರಿಂದ ಆನಂದಪುರಂಗೆ ಸುಲಭವಾಗಿ ರೈಲು ನಿಲ್ದಾಣವಾಯಿತಾದರೂ ಐತಿಹಾಸಿಕ ಕೆಳದಿ ಅರಸರ ಕೋಟೆಯನ್ನೇ ಸೀಳಿ ರೈಲು ಮಾರ್ಗ ಮಾಡಿದ್ದು ಇತಿಹಾಸಕ್ಕಾದ ಅಪಚಾರವೇ ಸರಿ, ಈ ಕಾಮಗಾರಿ ನಿರ್ವಹಿಸಿದವರಿಗೆ ಈ ಕೋಟೆಯಲ್ಲಿ ಅಪಾರ ನಿದಿ ಸಿಕ್ಕಿತು ನಂತರ ಆ ಗುತ್ತಿಗೆದಾರರು ದೇಶದ ಪ್ರತಿಷ್ಟಿತ ಗುತ್ತಿಗೆದಾರ ಕಂಪನಿ ಮಾಡಿದ್ದರು ಇತ್ಯಾದಿ ದಂತಕಥೆಗಳು ಆ ಕಾಲದಲ್ಲಿ ಚಾಲ್ತಿ ಇತ್ತಂತೆ.
  ಈ ಮಾರ್ಗದ ರೈಲಿನಲ್ಲಿ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ, ಲೋಹಿಯಾ, ಲಾಲ್ ಬಹದ್ದೂರು ಶಾಸ್ತ್ರಿಗಳು, ಮೊರಾರ್ಜಿ ದೇಸಾಯಿ ಮುಂತಾದ ಗಣ್ಯರು ಪ್ರಯಾಣಿಸಿದ್ದಾರೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ