Skip to main content

ಲಂಡನ್ ನ ಶ್ರೀಮಂತ ನಗರಿ ಪ್ಲೀಟ್ ನ ಕೌನ್ಸಿಲರ್ ಆಗಿ ಆಯ್ಕೆ ಆದ ಕನ್ನಡಿಗ ಅನಿವಾಸಿ ಭಾರತೀಯ ಕುಮಾರ್ ಕುಂಟಿಕಾನಮಠ ಇವರಿಗೆ ಸಮಸ್ತ ಕನ್ನಡಿಗರ ಅಭಿನಂದನೆಗಳು.

#ಅಭಿನಂದನೆಗಳು

#ದೂರದ_ಇಂಗ್ಲೇಂಡ್_ಶ್ರೀಮ೦ತ_ನಗರ_ಪ್ಲೀಟ್_ಸಿಟಿ_ಕೌನ್ಸಿಲರ್_ಆಗಿ_ಆಯ್ಕೆ

#ಶ್ರೀರಾಮಕಥಾಮಂಜರಿ_ಶ್ರೀಕೃಷ್ಣಕಥಾಮಂಜರಿ_ಬರೆದ_ಕುಂಟಿಕಾನಮಠ_ಬಾಲಕೃಷ್ಣಭಟ್_ಪುತ್ರ

#ಕಲಾರಾದಕ_ಉದ್ಯಮಿ_ಹಠಗಾರ_ಅನಿವಾಸಿ_ಭಾರತೀಯ

#ಕುಮಾರ್_ಕುಂಠಿಕಾನಮಠ

   ನಿನ್ನೆ ಗೆಳಿಯರಾದ ಕುಮಾರ್ ಕುಂಟಿಕಾನಮಠ ದೂರದ ಇಂಗ್ಲೇಂಡ್ ನ ಶ್ರೀಮಂತ ನಗರ ಪ್ಲೀಟ್ ಸಿಟಿ ಕೌನ್ಸಿಲರ್ ಆದ ಸುದ್ದಿ ಕೇಳಿ ಅತ್ಯಂತ ಸಂತೋಷದಿಂದ ಅವರಿಗೆ ಅಭಿನಂದನೆ ಅರ್ಪಿಸಿದೆ ಮತ್ತು ಈ ಸಂತೋಷವನ್ನು ಪೇಸ್ ಬುಕ್ ಗೆಳೆಯರಿಗಾಗಿ ಮತ್ತೊಮ್ಮೆ ಹಂಚಿಕೊಳ್ಳುವ ಬಯಕೆ ನನ್ನದು.
  ಪುರಾತನವಾದ ಕುಂಟಿಕಾನಮಠ ಕೇರಳದ ಕಾಸರಗೋಡಿನ ಸಮೀಪ ಇದೆ, ಇವರ ಕುಟುಂಬದ್ದೇ ಆದ ಈ ಮಠವನ್ನು ಇವರ ಜಾತಿಯ ಹೊಸನಗರದ ಮಠಾದೀಶರು ತಮ್ಮ ಶಿಷ್ಯರ ಭುಜ ಭಲ ಮತ್ತು ಅವರ ಹಣ ಬಲದಿಂದ ವಶಪಡಿಸಿಕೊಂಡಿದ್ದರು.
 ಆ ಸಂದಭ೯ದಲ್ಲಿ ಇವರ ವಯೋವೃದ್ದರಾಗಿದ್ದ ಇವರ ತಂದೆ ಕನ್ನಡದಲ್ಲಿ ಶ್ರೀ ರಾಮಕಥಾ ಮಂಜರಿ ಮತ್ತು ಶ್ರೀ ಕೃಷ್ಣ ಕಥಾ ಮಂಜರಿ ಎಂಬ ಬೃಹತ್ ಗ್ರಂಥ ಬರೆದ ಬೆಂಗಳೂರಿನ ಎನ್.ಎಲ್.ಎನ್. ವಿದ್ಯಾಸಂಸ್ಥೆಯಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಕುಂಟಿಕಾನಮಠ ಬಾಲಕೃಷ್ಣ ಭಟ್ಟರ ಮೇಲೂ ಹಲ್ಲೆ ನಡೆಸಿದ್ದರಿಂದ ಈ ಕುಟುಂಬ ನೋವು ದುಃಖ ಅನುಭವಿಸಿತ್ತು.
  ಸದರಿ ಮಠಕ್ಕೆ ಲಕ್ಷಾಂತರ ದೇಣಿಗೆ ನೀಡಿದ್ದ ಕುಮಾರ್ ಲ೦ಡನ್ನಿಂದ ಸ್ವಾಮಿಗೆ ಪೋನಾಯಿಸಿದರೆ ಪೋನಿಗೆ ಸಿಗದ ಸ್ವಾಮಿ ನಂತರ ಇವರಿಗೆ ಬೆದರಿಕೆ ನೀಡಿದರು.
  ಕರ್ನಾಟಕದ ಕಲಾವಿದರನ್ನು ದೂರದ ಲಂಡನ್ ನಲ್ಲಿ ಆದರಿಸಿ ಅವರ ಕಲಾ ಪ್ರದರ್ಶನಕ್ಕೆ ಸಹಕರಿಸುವ ಕುಮಾರ್ ನ್ಯಾಯಕ್ಕಾಗಿ ಎಂತಹ ಹೋರಾಟಕ್ಕು ಸಿದ್ಧರು ಅದರಂತೆ ಕೇರಳದ ನ್ಯಾಯಾಲಯಕ್ಕೆ ಇದನ್ನು ಒಯ್ದರು ಅಂತಿಮವಾಗಿ ಗೆಲುವು ಇವರದ್ದಾಗಿ ಪುನಃ ಇವರ ಸುಪರ್ದಿಯಲ್ಲಿ ದೇವಾಲಯ ನವೀಕರಣ ಆಗುತ್ತಿದೆ, ದೌರ್ಜನ್ಯ ಮಾಡಿದ ಮಠ ಈ ಮಠದ ಆಭರಣ, ಹಣ ಮತ್ತು ಪಂಚಲೋಹದ ವಿಗ್ರಹ ಇನ್ನೂ ಹಿಂದುರುಗಿಸುವ ಮನಸ್ಸು ಮಾಡಿಲ್ಲ.
  ಹಿಂದಿನ ಮುಖ್ಯಮಂತ್ರಿ ಯಡೂರಪ್ಪನವರು ಈ ಮಠದ ಅವರಣದಲ್ಲಿ ಇವರ ತಂದೆಯ ಸ್ಮರಣಾರ್ಥ ಸಭಾ ಭವನಕ್ಕೆ ಕರ್ನಾಟಕ ಸರ್ಕಾರದಿಂದ ಹಣ ಮಂಜೂರು ಮಾಡಿದ್ದಾರೆ.
  ಯಡೂರಪ್ಪರ ಕುಟುಂಬಕ್ಕೆ ಇವರು ಆಪ್ತರು, ಯಡೂರಪ್ಪರ ಪುತ್ರ ಸಂಸದ ರಾಘವೇಂದ್ರ ಮತ್ತು ಕುಮಾರ್ ಪ್ರೌಡ ಶಾಲಾ ವಿದ್ಯಾಬ್ಯಾಸದಲ್ಲಿ ಸಹಪಾಠಿಗಳು.
  ಸಾಹಿತ್ಯ ಸೇವೆ, ಕಲಾಸೇವೆ,ಸಮಾಜ ಸೇವೆ ಮತ್ತು ದಾರ್ಮಿಕ ಸೇವೆಯಲ್ಲಿ ಸದಾ ಮುಂದಿರುವ ಕುಮಾರ್ ಕುಂಟಿಕಾನಮಠರು ಈಗ ಲಂಡನ್ನಿನ ಪ್ಲೀಟ್ ನಗರದ ಕೌನ್ಸಿಲರ್ ಆಗಿ ಆಯ್ಕೆ ಆಗಿದ್ದಾರೆ ಮುಂದಿನ ದಿನದಲ್ಲಿ ಇಂಗ್ಲೇಂಡಿನ ಪಾರ್ಲಿಮೆಂಟ್ ಗೂ ಆಯ್ಕೆ ಆಗಿ ಕರ್ನಾಟಕ ರಾಜ್ಯದ ಕನ್ನಡಿಗರಿಗೆ ಹೆಮ್ಮೆ ಉಂಟು ಮಾಡುವ ಸಂದರ್ಭ ಬರಲಿ ಎಂದು ಅವರಿಗೆ ಶುಭ ಹಾರೈಸುತ್ತೇನೆ.
   ನಾನು ಬರೆದ ಮೊದಲ ಕಾದಂಬರಿ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ" #ಬೆಸ್ತರರಾಣಿ_ಚಂಪಕಾ           ಲಂಡನ್ ನ ಕನ್ನಡಿಗರಿಗೆ ತಲುಪಿಸಿದವರು ಇವರು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ