Skip to main content

ಆನಂದಪುರಂ ಇತಿಹಾಸ ಭಾಗ 62, ಆನಂದಪುರಂನ ಪ್ರತಿಷ್ಟಿತ ಕನ್ನಡ ಸಂಘ ಮತ್ತು ಆನಂದಪುರಂನ ಹೆಸರನ್ನು ಸಾಂಸ್ಕೃತಿಕವಾಗಿ ಕೆಲ ದಶಕ ಶ್ರೀಮಂತಗೊಳಿಸಿದ ಪ್ರಖರ ವಾಗ್ಮಿ ಕಲಾವಿದ ಸಂಘಟನಾಕಾರ ದಿವಂಗತ ಹಾ.ಮೊ.ಬಾಷಾ ಸ್ಮರಣೆಯಲ್ಲಿ

#ಆನಂದಪುರಂ_ಇತಿಹಾಸ
#ಭಾಗ_62.

#ಆನಂದಪುರಂ_ಜನತೆಯ_ಸದಾನೆನಪಿನಲ್ಲಿ_ಉಳಿದಿರುವ
#ದಿವ೦ಗತ_ಹಾ_ಮೋ_ಭಾಷಾ .

#ಕನ್ನಡಸಂಘ_ಉತ್ತುಂಗಕ್ಕೆ_ತಲುಪಿಸಿದ_ಕನಸುಗಾರ.

#ಆನಂದಪುರಂನ_ಮೂಲ_ನಿವಾಸಿಗಳು_ಈ_ಮನೆತನದವರು.

#ಆನಂದಪುರಂನ_ಏಕೈಕ_ಬಾರೂದ್_ಮನೆತನ.

  ಒಂದು ಕಾಲದಲ್ಲಿ ಮಲೆನಾಡಿನಲ್ಲಿ ಸುತ್ತ ನೂರಾರು ಹಳ್ಳಿಗಳ ಮಧ್ಯೆ ಒಂದು ಪೇಟೆ ಸೃಷ್ಟಿ ಆಗುತ್ತಿತ್ತು, ಆ ಪೇಟೆಯಲ್ಲಿ ಸುತ್ತ ಹಳ್ಳಿಯ ಜನರ ಕೃಷಿ ಉಪಕರಣ ತಯಾರಿಸುವ, ದುರಸ್ತಿ ಮಾಡುವ ವಿಶ್ವಕರ್ಮಿಯರ ಕುಲುಮೆಗಳು, ಕ್ಷೌರಿಕರ ಅಂಗಡಿಗಳು, ಪಂಡಿತರುಗಳು, ನಿತ್ಯ ಉಪಯೋಗಿ ಹಿತ್ತಾಳೆ ಪಾತ್ರೆಗಳಿಗೆ ಕಲಾಯಿ ಹಾಕುವವರು, ಜೋಡು ಹೊಲೆದು ಕೊಡುವವರು, ದಿನಸಿ ಮಾರಾಟ ಮಾಡುವವರು, ಕಂಬಳಿ ಮಾರುವವರು, ಕುಂಬಾರರ ಮನೆಗಳು, ಪುರೋಹಿತರು, ಡಬ್ಬ - ಛತ್ರಿ- ಟಾರ್ಚ್ ದುರಸ್ತಿಗಾರರ ಮತ್ತು ಪಸಲು ರಕ್ಷಣೆಗಾಗಿ - ಶಿಕಾರಿಗಾಗಿ ಬಳಸುವ ಬಂದೂಕುಗಳಿಗೆ ಮದ್ದು ತಯಾರಿಸುವ ಬಾರೂದ್ ಮನೆತನಗಳು ಇದ್ದರೆ ಮಾತ್ರ ಅದು ಪೇಟೆಯ ಅರ್ಹತೆ ಪಡೆಯುತ್ತಿತ್ತು.
  ಇಂತಹ ಪೇಟೆಗಳಲ್ಲೆ ಬ್ರಿಟೀಷ್ ಆಡಳಿತದ ಪೋಲಿಸ್ ಠಾಣೆ ಇತ್ಯಾದಿಗಳು ಬಂದವು.
   ಆನಂದಪುರಂ ಇಂತಹ ಪೇಟೆ ಆಗಿ ಹೋಬಳಿ ಆಗಿ ನಂತರ ತಾಲ್ಲೂಕ್ ಕೂಡ ಕೆಲ ದಶಕ ಕಾಲ ಆಗಿದ್ದು ಇತಿಹಾಸ.
  ಆನಂದಪುರಂ ಸುತ್ತಮುತ್ತ ದಟ್ಟ ಅರಣ್ಯದಿಂದ ರೈತರ ಪಸಲು ರಕ್ಷಣೆಗಾಗಿ ಮದ್ದುಗುಂಡುಗಳನ್ನು ತಯಾರಿಸಿ ಕೊಡುವ ಉದ್ಯೋಗ ಮಾಡಲು ದೂರದ ಹೊನ್ನಾವರದಿಂದ ಬಂದ ಬಾರೂದ್ ಮೊಯಿದ್ದೀನ್ ಸಾಹೇಬರ ಕುಟುಂಬವೇ ಮೂಲವೋ ಅಥವ ಅದಕ್ಕಿಂತ ಮೊದಲೇ ಅವರ ಕುಟುಂಬದವರು ಬಂದಿದ್ದರಾ ಎಂಬ ನಿಖರ ಮಾಹಿತಿ ಈ ಕುಟುಂಬದ ಈಗಿನ ತಲೆಮಾರಿನವರಿಗೆ ಇಲ್ಲ.
  ಮದ್ದು ಗುಂಡು ತಯಾರಿಸಿ ಮಾರಾಟ ಮಾಡಲು ಬ್ರಿಟಿಷರ ಕಾಲದಲ್ಲಿ ಲೈಸೆನ್ಸ್ ಪಡೆದು ಈ ಕುಟು೦ಬ ಆನಂದಪುರಂನ ಆ ಕಾಲದ ಸರ್ ಮಿರ್ಜಾ ಇಸ್ಮಾಯಿಲ್ ತಂಗುದಾಣದ (ನಂತರ ಇದು ದೊಡ್ಡಿ ಆಯಿತು) ಪಕ್ಕದಲ್ಲಿ ಆಗಿನ ಪುರ ಪ್ರಮುಖರಾದ ಅಯ್ಯಂಗಾರ್ ಕುಟುಂಬದ ಅನುಮತಿಯಿಂದ ಈ ಕುಟುಂಬ ಆನಂದಪುರಂ ಕೆರೆ ಪಕ್ಕದಲ್ಲಿ ನೆಲೆಸಿತ್ತು.
  ಮದ್ದುಗುಂಡು ಮಾರಾಟ ಮಾಡುವವರಿಗೆ ಬಾರೂದ್ ಮನೆತನ ಎಂಬ ಅಡ್ಡಹೆಸರು ಇರುತ್ತಿತ್ತು, ವರ್ಷ ಪೂರ್ತಿ ಮದ್ದುಗುಂಡು ಅರೆದು ತಯಾರಿಸಿ ಮಾರಾಟ, ಹಬ್ಬ ಹರಿದಿನದಲ್ಲಿ ಆ ಕಾಲದ ದೇಸಿ ಸಿಡಿ ಮದ್ದು ಮಾರಾಟದಿಂದ ಅವರದ್ದು ಶ್ರೀಮಂತ ಜೀವನವೇ ಆಗಿತ್ತು.
  ಹೊನ್ನಾವರದ ಬಾರೂದ್ ಮೊಯಿದೀನ್ ಸಾಬ್ ರಿಗೆ ಐವರು ಮಕ್ಕಳು ಹಸನಾರ್, ಅಮೀನಾಬಿ, ಹಮೀದ್ ಸಾಬ್, ಆಹ್ಮದ್ ಖುನ್ನಿ, ಮತ್ತು ಇಬ್ರಾಹಿಂ.
   ಮನೆತನದ ಉದ್ಯೋಗವನ್ನು ಹಸನಾರ್ ಸಾಬ್ ಮತ್ತು ಹಮೀದ್ ಸಾಹೇಬರು ಮುಂದುವರೆಸುತ್ತಾರೆ, ಉಳಿದವರು ಸಾಗರ ಮತ್ತು ಗೋವಾದಲ್ಲಿ ಉದ್ಯೋಗ ಮಾಡುತ್ತಾರೆ, ಅಮೀನಾಬಿಯವರನ್ನು ಚಾಬು ಸಾಹೇಬರಿಗೆ ವಿವಾಹ ಮಾಡುತ್ತಾರೆ.
  ನಂತರ ಹಮೀದ್ ಸಾಹೇಬರು ವಾಚ್ ಮತ್ತು ಗಡಿಯಾರ, ರೇಡಿಯೋ ಇತ್ಯಾದಿ ದುರಸ್ತಿಯಲ್ಲಿ ನಿಪುಣರಾಗಿ ರೈಸ್ ಮಿಲ್ ಮೆಕಾನಿಕ್ ಆಗಿ ಪ್ರಸಿದ್ಧರಾಗುತ್ತಾರೆ, ಸುಬ್ಬಣ್ಣ ನಾಯಕರ ರೈತ ಬಂದು ಗ್ರಾಮೋದ್ಯೋಗದಲ್ಲಿ ಪ್ರಮುಖ ಮೆಕ್ಯಾನಿಕ್ ಆಗಿ ಆಧುನಿಕ ನೈಲಾನ್ ಅವಲಕ್ಕಿ ತಯಾರಿಸುವ ಯಂತ್ರ ಕಂಡು ಹಿಡಿಯುತ್ತಾರೆ ಆದರೆ ಅದನ್ನು ಪೇಟೆಂಟ್ ಇತ್ಯಾದಿ ಮಾಡದಿದ್ದರಿಂದ ಇವರಿಗೆ ವೈಯಕ್ತಿಕ ಲಾಭ ದೊರೆಯುವುದಿಲ್ಲ ಆದರೆ ಇವರ ಮಾದರಿ ಯಂತ್ರವೇ ಈಗಲೂ ಎಲ್ಲೆಡೆ ಇದೆ.
    ಹಸನಾರ್ ಸಾಬ್ ಮತ್ತು ಶ್ರೀಮತಿ ಖತಿಜಾಬಿ ದಂಪತಿಗಳಿಗೆ ಬಾಬು (ಅಬ್ದುಲ್ ಖಾದರ್ ), ಖಾಸಿಂ, ಹಾ. ಮೊ. ಬಾಷಾ ಮತ್ತು ಷ೦ಷು ಎಂಬ ನಾಲ್ಕು ಗಂಡು ಮಕ್ಕಳು. ಜಾಯಿರಾಬಿ, ಆಲೀಮಾ, ಪಾತೀಮಾ ಮತ್ತು ನೇಬಾನು ಎಂಬ ನಾಲ್ಕು ಹೆಣ್ಣು ಮಕ್ಕಳು.
  ಇವರಲ್ಲಿ ಹಾ.ಮೊ. ಬಾಷಾ ಕನ್ನಡದ ಕಟ್ಟಾ ಅಭಿಮಾನಿ, ಸಂಘಟನಾ ಚತುರ, ಪ್ರಖರ ವಾಗ್ಮಿ, ಕಲಾವಿದರೂ ಆಗಿದ್ದರು.
  ಆನಂದಪುರಂನ ಕನ್ನಡ ಸಂಘದಲ್ಲಿಯೇ ಅವರ ಜೀವಮಾನದ ಹೆಚ್ಚಿನ ಕಾಲ ಕಳೆದು ಆ ಮೂಲಕ 1980 ರಿಂದ 2008ರವರೆಗೆ ಸುಮಾರು 3 ದಶಕ ಕಾಲ ಆನಂದಪುರಂನಲ್ಲಿ ನಿರಂತರ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳನ್ನು ನಡೆಸಿ ಊರಿಗೆ ಹೆಸರು ತಂದ ಖ್ಯಾತಿ ಇವರದ್ದು. ಹಾ.ಮೋ. ಬಾಷಾರ ನಾಟಕ ಇದೆ ಅಂದರೆ ಜನ ಕಿಕ್ಕಿರಿದು ಸೇರುತ್ತಿದ್ದರು ಅವರ ಹಾಸ್ಯಕ್ಕೆ ನಕ್ಕೂ ನಕ್ಕೂ ಹೊಟ್ಟೆ ನೋವಾಯಿತು ಅನ್ನುತ್ತಿದ್ದರು,ಭಾಷಣಕ್ಕೆ ನಿಂತರೆ ಪಿನ್ ಡ್ರಾಪ್ ಸೈಲೆನ್ಸ್ ಇವರ ಬಾಯಿಂದ ಬರುತ್ತಿದ್ದ ನಿರ್ಗಳ ವಚನ, ಗಾದೆ ಮತ್ತು ನುಡಿಮುತ್ತುಗಳು ಕೇಳುಗರಿಗೆ ಮಂತ್ರ ಮುಗ್ದರಾಗಿಸುತ್ತಿತ್ತು.
  ವಿಷದ ಹಾವು ಹಿಡಿದು ಕಾಡಿಗೆ ಬಿಡುತ್ತಿದ್ದರು ಈ ಹವ್ಯಾಸವೇ ಇವರ ಅಕಾಲಿಕ ಮೃತ್ಯುವಿಗೆ ಕಾರಣವಾಯಿತು ಎಂಬುದು ವಿಷಾದನೀಯ ಸಂಗತಿ.
 ಇವರ ಪತ್ನಿ ಕೂಡ ಇತ್ತೀಚಿಗೆ ಅಪಘಾತದಲ್ಲಿ ಮೃತರಾಗಿದ್ದಾರೆ ಇವರ ಮಗಳು ಮತ್ತು ಮಗ ಸಂಬಂದಿಕರ ನೆರವಿನಿಂದ ವಿದ್ಯಾಬ್ಯಾಸ ಮುಂದುವರಿಸಿದ್ದಾರೆ.
  ಇವತ್ತಿಗೂ ಹಾ.ಮೋ. ಭಾಷಾ ಅಂದರೆ ಜಿಲ್ಲೆಯಲ್ಲಿ ಕನ್ನಡ ಭಾಷಾಭಿಮಾನಿಗಳಿಗೆ ಹೆಮ್ಮೆಯ ವ್ಯಕ್ತಿತ್ವ ಮತ್ತು ನೆನಪು.

(ನಾಳೆ ಮುಂದಿನ ಭಾಗ - 63)

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ