Skip to main content

ಆನಂದಪುರಂ ಇತಿಹಾಸ, ಭಾಗ - 61, ಆನಂದಪುರಂನ ಪುರಾತನ ಗಣಪತಿ ದೇವಾಲಯ ಏನಾಯಿತು? ಯಡೇಹಳ್ಳಿಯ ಕೆಂಡದ ಮಾಸ್ತಿಯಮ್ಮ ದೇವಾಲಯದ ಆವರಣ ಪುರಾತನ ಗಣಪತಿ ದೇವಾಲಯ ಆಗಿತ್ತಾ? ಕೆಳದಿ ಸೇನಾಧಿಕಾರಿ ವೀರ ಮರಣ ಹೊಂದಿದಾಗ ಸತಿ ಸಹಗಮನದ ಸ್ಥಳ ಉಪ್ಪಾರ ಸಮಾಜದ ಆರಾದ್ಯ ದೇವಾಲಯವಾಗಿದೆ.




#ಆನಂದಪುರಂ_ಇತಿಹಾಸ
#ಭಾಗ_61
 
#ಆನಂದಪುರಂನಲ್ಲಿದ್ದ_ಐತಿಹಾಸಿಕ_ಗಣಪತಿ_ದೇವಸ್ಥಾನ_ಏನಾಯಿತು?

#ಕೆಳದಿ_ಅರಸರು_ಕಾಲದಲ್ಲಿ_ಕೋಟೆಕಾರರ_ಪ್ರಕಾರ_ಗಣಪತಿ_ದೇವಸ್ಥಾನ_ಇರಲೇ_ಬೇಕಿತ್ತು.

#ಡಾ_ಎನ್_ಎಸ್_ವಿಶ್ವಪತಿಶಾಸ್ತ್ರೀಗಳ_ಪ್ರಕಾರ_ಕೇರಳದ_ಪಯ್ಯನೂರಿನ_ನಂಬೂದರಿಗಳ_ಅಷ್ಟಮಂಗಲದಲ್ಲೂ_ಉಲ್ಲೇಖ.

#ಕೆಳದಿ_ಸೈನ್ಯದ_ಅಧಿಕಾರಿ_ಬಿದನೂರಿನಲ್ಲಿ_ನಡೆದ_ಯುದ್ಧದಲ್ಲಿ_ವೀರಮರಣ_ಹೊಂದಿದ_ಸತಿಸಹಗಮನದ_ಪ್ರದೇಶ.

#ಉಪ್ಪಾರ_ಸಮಾಜದ_ಆರಾದನ_ಕೇಂದ್ರ_ಯಡೇಹಳ್ಳಿಯ_ಕೆಂಡದ_ಮಾಸ್ತಿಯಮ್ಮ_ದೇವಾಲಯ.

  2006 ರವರೆಗೆ ಆನಂದಪುರಂ ಹೋಬಳಿಯಲ್ಲೇ ಗಣಪತಿ ದೇವಸ್ಥಾನ ಇರಲಿಲ್ಲ, 2006ರಲ್ಲಿ ಯಡೇಹಳ್ಳಿಯ ಹೊಸನಗರ ರಸ್ತೆಯಲ್ಲಿ ಐತಿಹಾಸಿಕ ಕೆಂಡದ ಮಾಸ್ತಮ್ಮ ದೇವರ ಗುಡಿ ಅವರಣದಲ್ಲಿ ಶ್ರೀ ವರಸಿದ್ಧಿವಿನಾಯಕ ಸ್ವಾಮಿ ದೇವಾಲಯ ನಿರ್ಮಾಣವಾಗಿ ನಿತ್ಯ ಪೂಜೆ, ಸಂಕಷ್ಟಹರ ಚತುರ್ಥಿ ದಿನ ಗಣಹೋಮ, ಸಂಕಷ್ಟಹರ ಪೂಜೆ ಚಂದ್ರ ದರ್ಶನದ ನಂತರ ಅನ್ನ ಸಂತರ್ಪಣೆ, ಪ್ರತಿ ವರ್ಷ ವಿನಾಯಕ ಚತುರ್ಥಿಯಂದು ಬ್ರಹ್ಮ ರಥೋತ್ಸವ, ಪಲ್ಲಕ್ಕಿ ಉತ್ಸವ, ಸಾಮೂಹಿಕ ಗಣಹೋಮ, ಸಾಮೂಹಿಕ ಅನ್ನ ಸಂತರ್ಪಣೆ (ಹೋಳಿಗೆ ತುಪ್ಪದೊಂದಿಗೆ) ಮತ್ತು ವಿಶೇಷವಾಗಿ ರಂಗ ಪೂಜೆ ನಡೆಯುತ್ತದೆ.
   ದೇವಾಲಯ ನಿರ್ವಹಣೆಗಾಗಿ ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯ ಟ್ರಸ್ಟ್ 15 ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ.
 ಟ್ರಸ್ಟ್ ಗೌರವಾದ್ಯಕ್ಷರಾಗಿ ಬೆಂಗಳೂರಿನ ಪ್ರಖ್ಯಾತ ಜೋತಿಷಿ ಡಾ.ಎನ್. ಎಸ್.ವಿಶ್ವಪತಿ ಶಾಸ್ತ್ರೀಗಳು (ದೇವೇಗೌಡರು ಪ್ರದಾನ ಮಂತ್ರಿ ಆಗುವುದಾಗಿ ಜೋತಿಷ್ಯ ಹೇಳಿದವರು) ಈ ದೇವಾಲಯದ ಪ್ರತಿಷ್ಠಾಪನೆಯಿಂದ ಈವರೆಗೆ ವಾಸ್ತು ಮತ್ತು ಎಲ್ಲಾ ದಾಮಿ೯ಕ ಕಾರ್ಯಕ್ರಮ ಇವರ ಸಲಹೆ ಮೇರೆಗೆ ನಿರಾತಂಕವಾಗಿ ನೇರವೇರುತ್ತಿದೆ.
   ಇವರು ಆನಂದಪುರಂ ಹೋಬಳಿ ತ್ಯಾಗರ್ತಿಯ ಇನಾಂದಾರರಾದ ಗುರುಮೂರ್ತಿ ರಾಯರ ಅಳಿಯ ( ಗುರುಮೂರ್ತಿ ರಾಯರ ಪುತ್ರಿ ಶ್ರೀಮತಿ ಸುದಾ ಮಣಿ ಪತಿ) ಇವರು ಸುಂದರವಾದ ಪಂಚಲೋಹದ (ತಮಿಳುನಾಡಿನ ಪಂಪುಹಾರದಲ್ಲಿ ತಯಾರಾದ) ಉತ್ಸವ ಮೂರ್ತಿ ನೀಡಿದ್ದಾರೆ, ಇವರ ಅತ್ತೆ (ಗುರುಮೂರ್ತಿಯರ ಪತ್ನಿ) ಶ್ರೀಮತಿ ಗೋಪುರದ ಕಲಶ ನೀಡಿದ್ದಾರೆ.
   ಈ ನೂತನ ದೇವಾಲಯ ನಿರ್ಮಾಣ ಮಾಡಿರುವುದು ಕೆಂಡದ ಮಾಸ್ತಿಯಮ್ಮ ಮತ್ತು ಮಕ್ಕಳ ಮಾಸ್ತಿಯಮ್ಮ ಎಂಬ ಎರಡು ದೇಗುಲಗಳ ಅವರಣದಲ್ಲಿ, ಈ ದೇಗುಲಗಳು ಆ ಕಾಲದಲ್ಲಿ ಬಿದನೂರಿನ ಸೈನ್ಯಾಧಿಕಾರಿಗಳಾಗಿದ್ದ ಉಪ್ಪಾರ ಸಮಾಜದವರದ್ದಾಗಿದೆ ಎಂಬ ಮಾಹಿತಿ ಇದೆ ಅದರಂತೆ ಉಪ್ಪಾರ ಸಮಾಜದ ಈ ಸೇನಾಧಿಕಾರಿ ಕುಟುಂಬದವರು ಎಲ್ಲೆಲ್ಲೊ ನೆಲೆಸಿದ್ದಾರೆ,ವರ್ಷಕೊಮ್ಮೆ ಇಲ್ಲಿಗೆ ಬಂದು, ಈ ದೇವಾಲಯದ ಎದುರು ಇದ್ದಿಲಿಂದ ನಿಗಿನಿಗಿಸುವ ಕೆಂಡ  ಮಾಡಿ ಅದರ ಎದರು ಮೊಸರನ್ನ ನೈವೇದ್ಯ ಮಾಡಿ ಪೂಜೆ ಮಾಡಿ ಇಲ್ಲೇ ಆಹಾರ ತಯಾರಿಸಿ ಬೋಜನ ಮಾಡಿ ತೆರಳುತ್ತಾರೆ.
 ಈ ಪದ್ಧತಿ ಅನೇಕ ತಲೆಮಾರಿನಿಂದ ನಡೆದು ಬಂದಿದೆ, ಅವರಿಗೆ ನೆನಪಲ್ಲಿ ಉಳಿದಿರುವುದು ತಮ್ಮ ರಕ್ತ ಸಂಬಂದಿ ಕೆಳದಿ ಅರಸರ ಸೈನ್ಯದಲ್ಲಿ ಸೇನಾಧಿಕಾರಿ ಆಗಿದ್ದ ಅವರು ಯುದ್ಧದಲ್ಲಿ ವೀರ ಮರಣ ಹೊಂದಿದ್ದರಿಂದ ಇಲ್ಲಿ ಸತಿ ಸಹಗಮನ ನಡೆದ ಸ್ಮಾರಕ ಇದು ಅನ್ನುತ್ತಾರೆ ಮತ್ತೊಂದು ವದಂತಿ ಟಿಪ್ಪು ಬಿದನೂರು ಅಕ್ರಮಿಸಿದಾಗ ಅಲ್ಲಿದ್ದ ಸೇನಾಧಿಕಾರಿ ಸಮಾದಿ ಇಲ್ಲಿಗೆ ಸ್ಥಳಾಂತರಿಸಲಾಯಿತು ಅಂತಲು ಕೆಲವರ ನಂಬಿಕೆ.
  ಈ ದೇವಾಲಯದ ಎದರು ದೊಡ್ಡ ಆಳದ ಸಹಗಮನದ ಗುಂಡಿಯೊಂದಿತ್ತು ಈಗ ಮುಚ್ಚಲಾಗಿದೆ.
  ಪ್ರಖ್ಯಾತ ಜೋತಿಷಿ ಡಾ.ಎನ್.ಎಸ್.ವಿಶ್ವಪತಿ ಶಾಸ್ತ್ರಿಗಳ ಜೋತಿಷದ ಪ್ರಖಾರ ಈ ಜಾಗದಲ್ಲಿ ಪುರಾತನ ಗಣಪತಿ ದೇವಸ್ಥಾನ ಇತ್ತು ಅದು ಯಾವುದೋ ಕಾರಣದಿಂದ ನಶಿಸಿದೆ ಈಗ ಅಲ್ಲೇ ಪುನರ್ ನಿರ್ಮಾಣ ಆಗಿದೆ ಎನ್ನುತ್ತಾರೆ, ಕೇರಳದ ಪಯ್ಯನೂರಿನ ಪ್ರಖ್ಯಾತ ನಂಬೂದರಿಗಳಾದ ಅಷ್ಟಮಂಗಲ ಪ್ರಶ್ನೆಯಲ್ಲೂ ಇದೇ ಅಭಿಪ್ರಾಯ ಬಂದಿದೆ ಮತ್ತು ಈ ಸ್ಥಳದಲ್ಲಿ ಅಪಾರ ಪ್ರಮಾಣದ ನಿಧಿ ಇದೆ ಅದನ್ನು ತೆಗೆಯಲು ವಿಫಲ ಪ್ರಯತ್ನ ನೂರಾರು ವರ್ಷದ ಹಿಂದೆ ನಡೆದಿತ್ತು ಅನ್ನುತ್ತಾರೆ ಹಾಗಾಗಿದ್ದರೆ ಈ ಜಾಗದಲ್ಲಿದ್ದ ಬೃಹತ್ ಗುಂಡಿ ನಿಧಿಗಾಗಿ ಅಗೆದಿದ್ದಾಗಿರಬಹುದು.
   ಕೆಳದಿ ಅರಸರ ಕಾಲದಲ್ಲಿ ಕೋಟೆಗಾರರಾಗಿದ್ದ ರಾಮಕ್ಷತ್ರಿಯರ ಅಭಿಪ್ರಾಯದಂತೆ ಕೋಟೆ ಒಳಗೆ ಆಂಜನೇಯ ದೇವಾಲಯ, ಕೋಟೆ ಹೊರಭಾಗದಲ್ಲಿ ದೇವಿ ದೇವಸ್ಥಾನ ಮತ್ತು ಗಣಪತಿ ದೇವಾಲಯ ಇರಲೇ ಬೇಕು ಅನ್ನುತ್ತಾರೆ ಆ ಪ್ರಕಾರ ಆನಂದಪುರಂ ಕೋಟೆ ಒಳಗೆ ಕೋಟೆ ಆಂಜನೇಯ ದೇವಸ್ಥಾನ, ಕೋಟೆ ಹೊರಬಾಗದಲ್ಲಿ ಕಡಲೇ ಹಂಕ್ಲು ಮಾರಿಕಾಂಬಾ ದೇವಾಲಯ ಇದೆ ಆದರೆ ಗಣಪತಿ ದೇವಸ್ಥಾನ ಮಾತ್ರ ಎಲ್ಲೂ ಇರದಿದ್ದರಿಂದ ಹಾಲಿ 15 ವರ್ಷದ ಹಿಂದೆ ಯಡೇಹಳ್ಳಿಯಲ್ಲಿ ನಿರ್ಮಿಸಿರುವ ಶ್ರೀ ವರಸಿದ್ಧಿವಿನಾಯಕ ದೇವಸ್ಥಾನದ ಸ್ಥಳ ಪುರಾತನ ಗಣಪತಿ ದೇವಸ್ಥಾನದ ಸ್ಥಳ ಎಂಬ ನಂಬಿಕೆ ಇದೆ.
  ಶ್ರೀ ವರಸಿದ್ಧಿವಿನಾಯಕ ಸ್ವಾಮಿ ದೇವಾಲಯದ ಟ್ರಸ್ಟ್ ಅಧ್ಯಕ್ಷರಾಗಿ ಸ್ಥಳಿಯ ಹೊಂಬುಜ ಲಾಡ್ಜ್ ಪಾಲುದಾರರಾದ ಕೆ.ನಾಗರಾಜ್, ಟ್ರಸ್ಟಿಗಳಾಗಿ ಕುಬೇರಪ್ಪ ಗೌಡರು, ಗಣಪತಿ ಮಾಸ್ತರ್, ಡ್ರೈವರ್ ನಾಗೇಂದ್ರಪ್ಪ, ಗೇರ್ ಬೀಸ್ ನಾಗರಾಜ್, ಲಾರಿ ಮಾಲಿಕ ಸೋಮಶೇಖರ್ ಇದ್ದಾರೆ, ಟ್ರಸ್ಟಿ ಕುಬೇರಪ್ಪ ಗೌಡರು ಪ್ರದಾನ ಪುರೋಹಿತರೂ ಆಗಿದ್ದಾರೆ.
  ಟ್ರಸ್ಟಿ ಸೋಮಶೇಖರ್ ಮತ್ತು ನಾಗೇಂದ್ರಪ್ಪ ಪಾರುಪತ್ಯದಾರರಾಗಿ ಕೂಡ ದೇವಾಲಯದ ಎಲ್ಲಾ ದಾಮಿ೯ಕ ಕಾರ್ಯಕ್ರಮ ನಡೆಸುತ್ತಾರೆ, ಗಣಪತಿ ಮಾಸ್ತರರು ವ್ಯವಸ್ಥಾಪಕರಾಗಿ ಜವಾಬ್ದಾರಿ ಹೊಂದಿದ್ದಾರೆ.
ನಾಳೆ ಭಾಗ-62.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...