Skip to main content

ಉತ್ತರ ಪ್ರದೇಶದ ಆಲೀಘಡದ ಬೀಗ ಮಾರಾಟದಿಂದ ಜೀವನ ಸಾಗಿಸಿ ಮಕ್ಕಳಿಗೆ ವಿದ್ಯಾಬ್ಯಾಸ ಕೊಡಿಸಿ ಮಗನನ್ನ ಇಂಜಿನಿಯರ್ ಮಾಡಿರುವ ಶಿವಮೊಗ್ಗದ ಲಾಕ್ ಕಲಂದರ್ ಸಾಬ್, ಚೈನಾ ಬೀಗದ ಪೈಪೋಟಿಯಲ್ಲಿ ನಲುಗುತ್ತಿರುವ ಆಲೀಘಡ, ದಿಂಡಿಗಲ್ ಮತ್ತು ನಮ್ಮ ಶರಾವತಿ ನದಿ ದಂಡೆಯ ಮಾವಿನ ಕುರ್ವೆ ಬೀಗದ ಗೃಹ ಕೈಗಾರಿಕೆಗಳು.


#ಅತ್ಯುತ್ತಮ_ನಿತ್ಯಬಳಕೆ_ಬೀಗಗಳ_ಡೋರ್_ಡೆಲಿವರಿ_ಮಾಡುವ_ಶಿವಮೊಗ್ಗದ_ಕಲಂದರ್_ಸಾಬ್.

#ಬೀಗ_ಮಾರಾಟದಿಂದ_ಜೀವನ_ಪ್ರಾರಂಬಿಸಿ_ಮಗನನ್ನು_ಇಂಜನಿಯರ್_ಮಾಡಿದ_ಸಾದಕ

#ಚೈನಾದೇಶದ_ಬೀಗಗಳಿಂದ_ಸಾಂಪ್ರದಾಯಿಕ_ದೇಶಿಬೀಗ_ತಯಾರಕ_ಆಲೀಘಡ_ಮತ್ತು_ಮಾವಿನಕುವೆ೯ಗೆ_ಕಂಟಕ.

  ಹಳೇ ಕಾಲದ ಆಭರಣದ ಪೆಟ್ಟಿಗೆಗಳು ಈ ಕಾಲಕ್ಕೆ ಆಂಟಿಕ್  ವಸ್ತುಗಳು, ಹಿತ್ತಾಳೆ - ತಾಮ್ರ-ಕಬ್ಬಿಣ- ಮರದಲ್ಲಿ ತಯಾರಿಸುತ್ತಿದ್ದ ವಿಶ್ವಕರ್ಮಿಯರು ಇದಕ್ಕೆ ಒಳಗಿಂದ ಅಳವಡಿಸುತ್ತಿದ್ದ ಬೀಗಗಳು ಈಗಲೂ ವಿಸ್ಮಯ ಉಂಟು ಮಾಡುವ೦ತಹ ಕೌಶಲ್ಯವಿರುವ ಡಿಂಗ್ ಡಾಂಗ್ ಗಂಟೆ ನಿನಾದ ಉಂಟು ಮಾಡುವ ಅಥವ ಪೆಟ್ಟಿಗೆ ಮಾಲಿಕನಿಗೆ ಮಾತ್ರ ರಹಸ್ಯ ಗೊತ್ತಿರುವ ತಂತ್ರಜ್ಞಾನದ ನಮ್ಮ ಶರಾವತಿ ನದಿ ತೀರದ ಮಾವಿನ ಕುರ್ವೆ ದ್ವೀಪದ ಬೀಗಗಳು.
  ಉತ್ತರ ಪ್ರದೇಶದ ಆಲೀಘಡದ ಗೃಹ ಕೈಗಾರಿಕಾ ಬೀಗಗಳು  ಮತ್ತು ತಮಿಳು ನಾಡಿನ ದಿಂಡಿಗಲ್ ಲಾಕ್ ಗಳು ಜಗತ್ ಪ್ರಸಿದ್ದವಾಗಿದ್ದ ಬೀಗಗಳು.
   ಈಗ ಚೈನಾ ದೇಶದ ಬೀಗಗಳು ಇವುಗಳಿಗೆ ಪೈಪೋಟಿ ನೀಡಿ ಮಾರಾಟದ ಬಹುಪಾಲು ಅದರದ್ದೇ ಸಿಂಹಪಾಲು ಆಗಿದೆ.
  ನಮ್ಮ ದೇಶದ ಗೋದ್ರೇಜ್ ಕಂಪನಿ ಬೀಗಗಳು ಉತ್ಕೃಷ್ಣ ತಂತ್ರಜ್ಞಾನದ್ದಾಗಿ ಕ್ಲಾಸ್ ಬೀಗದ ಮಾರಾಟ ವಿಭಾಗದಲ್ಲಿ ಮುಂದಿದೆ.
  ಮೊನ್ನೆ ಶಿವಮೊಗ್ಗದ ಬೀಗ ಮಾರಾಟದ ಕಲಂದರ್ ಸಾಬ್ ಬಂದಿದ್ದರು ನಾನು ಇವರ ಬೀಗ ಖರೀದಿದಾರಲ್ಲಿ ಒಬ್ಬ ಮತ್ತು ದೊಡ್ಡ ಖರೀದಿದಾರ ನೀವು ಅಂತ ಇವರು ಹೇಳುತ್ತಾರೆ ಅದಕ್ಕೆ ಕಾರಣ ನನ್ನ ಸಂಸ್ಥೆಯಲ್ಲಿ 70 ಕ್ಕೂ ಹೆಚ್ಚಿನ ಬೀಗ ಬಳಕೆಯಲ್ಲಿದೆ ಇವುಗಳು ಮಳೆ ಗಾಳಿಗೆ ತುಕ್ಕು ಹಿಡಿದು ಹಾಳಾದಾಗ ಅಥವ ಬೀಗದ ಕೈ ಕಳೆದು ಹೋದಾಗ ಅನಿವಾರ್ಯವಾಗಿ ಬದಲಿಸಲು ಹತ್ತಿಪ್ಪತ್ತು ಸ್ಪೇರ್ ಆಗಿ ಇಟ್ಟುಕೊಳ್ಳುತ್ತೇನೆ ಕಲಂದರ್ ಸಾಹೇಬರ ಹತ್ತಿರ ಈವರೆಗೆ 500 ಕ್ಕೂ ಹೆಚ್ಚು ಬೀಗ ಖರೀದಿದಾರ ನಾನು.
  ಕಲಂದರ್ ಸಾಹೇಬರು ಅಯನೂರು ಸಮೀಪದ ಚಿನ್ಮನೆಯವರು ಸುಮಾರು 30 ವರ್ಷದ ಹಿಂದೆ ಆಲೀಘಡದ ಬೀಗ ಮಾರಾಟಗಾರರ ಸಹಾಯಕರಾಗಿ ಸೇರಿ ಗೋವಾ, ಆಂಧ್ರ ಮತ್ತು ಕರ್ನಾಟಕದ ಎಲ್ಲಾ ಊರು ತಿರುಗಾಡಿ ಬೀಗ ಮಾರಾಟ ಮಾಡುತ್ತಿದ್ದವರು ಈಗ ಪೈಪೋಟಿ ಎದುರಿಸಲಾರದೇ ಶಿವಮೊಗ್ಗ ಜಿಲ್ಲೆ ಮಾತ್ರ ಇವರ ಕಾರ್ಯಕ್ಷೇತ್ರ ಮಾಡಿಕೊಂಡಿದ್ದಾರೆ.
  ಎಲ್ಲದಕ್ಕಿಂತ ಇವರು ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದು. ಒಬ್ಬ ಮಗ ಮೆಕ್ಯಾನಿಕಲ್ ಇಂಜೀನಿಯರ್ ಓದಿದ್ದಾರೆ, ಇನ್ನೋವ೯ ಪುತ್ರ ಪಿಯುಸಿ ವಿಜ್ಞಾನ ಓದುತ್ತಿದ್ದಾರೆ, ಮಗಳು ಕೂಡ. "ಸಾರ್ ಬೀಗ ಮಾರಾಟದಿಂದ ಈ ವರೆಗೆ ಜೀವನ ಮಾಡಿಕೊಂಡು ಮಕ್ಕಳಿಗೆ ಓದಿಸಿದೆ ಅವರೂ ಜವಾಬ್ದಾರಿಯಿಂದ ಓದಿದ್ದು ದೇವರ ದಯೆ" ಅನ್ನುತ್ತಾರೆ.
  ಮುಂದಿನ ಸಾರಿ ಬರುವಾಗ ಮಾವಿನ ಕುವೆ೯ ಬೀಗ ತನ್ನಿ ಅಂದಿದ್ದೇನೆ ಹೆರಿಟೇಜ್ ಮಾವಿನ ಕುರ್ವೆ ಬೀಗ ಲಾಡ್ಜ್ ಗೆ ಬಳಸುವ ಉದ್ದೇಶ ಕೂಡ ಇದೆ.
  ನನ್ನ ಅನುಭವದಲ್ಲಿ ಚೈನಾ ಬೀಗಕ್ಕಿಂತ ಕಲಂದರ್ ಸಾಹೇಬರು ತರುವ ಆಲೀಘಡದ ಬೀಗ ಅತ್ಯುತ್ತಮ ಗುಣಮಟ್ಟದ್ದು ಮತ್ತು ಕಲಂದರ್ ಸಾಹೇಬರ ನೂರು ರೂಪಾಯಿ ಬೀಗ ಅಂಗಡಿಯಲ್ಲಿ ನಾನೂರು ರೂಪಾಯಿ! ಹಾಗಾಗಿ ನಾನು ಕಲಂದರ್ ಸಾಹೇಬರನ್ನ ನೆಚ್ಚಿಕೊಂಡಿದ್ದೇನೆ ಇನ್ನೊಂದು ಕಾರಣ ಅವರ ಡೋರ್ ಡೆಲಿವರಿ ವ್ಯವಸ್ಥೆ ಕೂಡ.
  ನಿಮಗೆ ಬೀಗ ಬೇಕಾದರೆ ಅವರ ಸಂಪರ್ಕ್ ಪೋನ್ ಸಂಖ್ಯೆ 9945211406ಗೆ ಕರೆ ಮಾಡಬಹುದು ನಿಮ್ಮ ಬಜೆಟ್ ಗೆ ತಕ್ಕ ಬೀಗ ಅವರಲ್ಲಿ ಸಿಗುತ್ತದೆ.
  ಬೀಗ ಮಾರಾಟದಿಂದ ಸಾಧನೆ ಮಾಡಿರುವ ಕಲಂದರ್ ಸಾಹೇಬರಿಗೆ ಹ್ಯಾಟ್ಸ್ ಆಪ್

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...