Skip to main content

ವಂತಿಕೆ ಕೇಳಲು ಬಂದವರಿಗೆ ಅವಮಾನ ಆಗಬಾರದೆಂಬ ಬಾಗಿಸತ್ಯನಾರಾಯಣರ ತಂದೆಯವರ ಆಶಯ ಎಲ್ಲರಿಗೂ ನೀತಿ ಪಾಠ.

#ಕೆಲವು_ಸಂದರ್ಭ_ಘಟನೆ_ಜೀವನದ_ಪಾಠ_ಕಲಿಸುತ್ತವೆ.

 #ಹೆಗ್ಗೋಡಿನ_ಬಾಗಿಸತ್ಯನಾರಾಯಣರಿಂದ 

   ಹೆಗ್ಗೋಡಿನ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿದ್ದ (1995-2000) ಭಾಗಿ ಸತ್ಯನಾರಾಯಣರ ಮನೆಗೆ ನಾನು ಮತ್ತು ಆಗಿನ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದ ಬೀಮನೇರಿ ಶಿವಪ್ಪ ಒಂದು ಸಂಜೆ ಹೋಗಿದ್ದೆವು.
  ಲೋಕಾರೂಡಿ ಮಾತಾಡಿ ಹೋಗುವ ಉದ್ದೇಶವಾಗಿತ್ತು ಆ ಸಂದರ್ಭದಲ್ಲೇ ಅವರಿಗೆ ಪರಿಚಿತರೋರ್ವರು ಬಂದರು. ಅವರ ಬೇಟಿ ಉದ್ದೇಶ ಯಾವುದೋ ಕಾರಣಕ್ಕೆ ದೇಣಿಗೆಗಾಗಿ ರಶೀದಿ ಪುಸ್ತಕ ಮುಂದೆ ಮಾಡಿದರು.
  ನಾನು ಇದನ್ನು ಮೌನವಾಗಿ ವೀಕ್ಷಿಸುತ್ತಿದ್ದೆ ಅಲ್ಲಿಯವರೆಗೆ ನಾನು ಈ ರೀತಿ ದೇಣಿಗೆ ಕೇಳಲು ಬಂದವರಿಗೆ ಪ್ರಶ್ನೆ ಹಾಕುವುದು, ನನ್ನ ದೇಣಿಗೆ ಹಣ ಸದ್ವಿನಿಯೋಗ ಆದೀತಾ ಎಂಬ ಅನುಮಾನ, ಹೀಗೆ ಬರುವವರೆಲ್ಲ ಎ೦ತವರೋ ? ಇತ್ಯಾದಿ ಭಾವನೆಯಲ್ಲೇ ಸ್ವಲ್ಪ ಜುಗ್ಗತನದಿಂದ ದೇಣಿಗೆ ನೀಡುವುದು ಅನುಮಾನ ಅನ್ನಿಸಿದರೆ ನಿಮ್ಮ ಸಂಸ್ಥೆಗೆ ನೇರ ಜಮ ಮಾಡುತ್ತೇನೆ ಅಂತ ತಿರಸ್ಕರಿಸುವ, ನನಗೇ ಅರಿವಿಗೆ ಬಾರದೇ ಕುಹಕ ಮನಸ್ಥಿತಿಯವನಾಗಿದ್ದೆ.
   ರಶೀದಿ ಪುಸ್ತಕದೊಂದಿಗೆ ಒಳ ಹೋದ ಭಾಗಿಸತ್ಯನಾರಾಯಣರು ಒ0ದು ನೂರು ರೂಪಾಯಿ ತಂದು ಅವರ ಕೈಗೆ ಇಟ್ಟು "ಇವತ್ತು ನನಗೆ ಇಷ್ಟು ನೀಡಲು ಸಾಧ್ಯವಾಗಿದೆ ಸ್ವೀಕರಿಸಿ" ಅಂತ ನಯವಾಗಿ ವಿನಂತಿಸಿದರು, ದೇಣಿಗೆ ಪಡೆದವರು ಹೋದ ನಂತರ ಕೇಳಿದಾಗ ಅವರು ಹೇಳಿದ್ದು ಇದು ಅವರ ತಂದೆಯವರ ನಿರ್ಧೇಶನವನ್ನು ಇವರು ಪಾಲಿಸಿಕೊಂಡು ಬಂದಿದ್ದಂತೆ.
   ಸಾರ್ವಜನಿಕ ಧಾರ್ಮಿಕ ಉದ್ದೇಶ ಒಳ್ಳೆಯದೇ ಆದರೆ ಇದರಲ್ಲಿ ಸದ್ವಿನಿಯೋಗ ಅಥವ ದುರ್ವಿನಿಯೋಗದ ಬಗ್ಗೆ ದಾನ ನೀಡುವವ ಪ್ರಶ್ನಿಸ ಭಾರದು ಮತ್ತು ಅನುಮಾನ ಪಡಬಾರದು ಏಕೆಂದರೆ ಬಂದವರು ಯಾರು ಯಾವ ಉದ್ದೇಶ ಅಂತ ಗೊತ್ತಾಗುವುದಿಲ್ಲ, ಒಳ್ಳೆಯವರೂ ಇರುತ್ತಾರೆ ಹಾಗೆ ಕೆಟ್ಟವರೂ ಇರುತ್ತಾರೆ ಇದರ ಮಧ್ಯ ಇದಾವುದು ಅರಿವಿರದ ಮುಗ್ದರೂ ಬಂದಿರುತ್ತಾರೆ ಆದ್ದರಿಂದ ಆಕ್ಷಣಕ್ಕೆ ಸರಿಯಾದ ಉದ್ದೇಶ ಅನ್ನಿಸಿದರೆ ಹೆಚ್ಚು ಕೊಡು, ಸರಿ ಅನ್ನಿಸದಿದ್ದರೂ ಕೊಡದೇ ಇರಬೇಡ ಸ್ವಲ್ಪವಾದರೂ ನೀಡಿ ಈ ರೀತಿ ಹೇಳು ಎಂದಿದ್ದರಂತೆ ಆ ಕ್ಷಣಕ್ಕೆ ನನ್ನ ಮೆದುಳಿನಲ್ಲಿದ್ದ ಬಹುಕಾಲದ ಪಾರ್ಮ್ಯಾಟ್ ಅಳಸಿ ಬಿಟ್ಟೆ.
  ಈ ವಿಚಾರದಲ್ಲಿ ಬಾಗಿಸತ್ಯನಾರಾಯಣರ ತಂದೆಯವರು ಅವರ ಪುತ್ರ ಭಾಗಿಸತ್ಯನಾರಾಯಣರಿಗೆ ಬೋದಿಸಿದ ನೀತಿ ಪಾಠ ನನ್ನ ಜೀವನದಲ್ಲಿ ಅಳವಡಿಸಿಕೊಂಡು ಈ ವರೆಗೆ ಆಚರಿಸುತ್ತಾ ಬಂದಿದ್ದೇನೆ.
   ಕೆಲವು ಘಟನೆ ಮತ್ತು ಸಂದಭ೯ಗಳು ನಮಗೆ ಜೀವನದ ಪಾಠ ಕಲಿಸುತ್ತದೆ ಒಳ್ಳೆಯದನ್ನು ಉಳಿಸಿ ಕೆಟ್ಟದ್ದನ್ನು ಬಿಡಲು ಇವು ಸಹಕಾರಿ ಹಾಗಾಗಿ ಯಾವುದೇ ದೇಣಿಗೆ ನೀಡುವ ಸಂದರ್ಭ ನನ್ನ ಮನ ಪಟದಲ್ಲಿ ಭಾಗಿಸತ್ಯನಾರಾಯಣರು ಗೋಚರಿಸುತ್ತಾರೆ ಅವರ ತಂದೆಯ ನೀತಿಪಾಠದೊಂದಿಗೆ

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...