Skip to main content

Blog number 2284. ಎಲ್ ಪಿ ಜಿ ಗ್ಯಾಸ್ ದುರಂತಗಳು ಇದನ್ನು ತಡೆಯಲು ನಮ್ಮ ಮನೆಗಳಿಂದಲೇ ಇವತ್ತಿನಿಂದಲೇ ನಾವು ಮುಂದಾಗಬೇಕು.

#ಶಿವಮೊಗ್ಗ_ಸಮೀಪದ_ಆಯನೂರಿನ_ಬೇಕರಿ_ದುರಂತ

#ಕೇವಲ_ಲಿಪ್_ಸಿಂಪತಿ_ವ್ಯಕ್ತಪಡಿಸ_ಬೇಡಿ

#ಇದರಿಂದ_ಎಲ್ಲರೂ_ಪಾಠ_ಕಲಿಯಬೇಕು

#ನಿಮ್ಮ_ಮನೆ_ವ್ಯವಹಾರದ_ಸ್ಥಳದ_ಅಡುಗೆ_ಮನೆಯ_ಒಳಗೆ_ಅಳವಡಿಸಿದ

#ಎಲ್_ಪಿ_ಜಿ_ಸಿಲೆಂಡರ್_ತಕ್ಷಣ_ಹೊರಗೆ_ಸ್ಥಳಾಂತರಿಸಿ

#ಸ್ನಾನದ_ಮನೆಯ_ಗ್ಯಾಸ್_ಗೀಜರ್_ಸಂಪರ್ಕ_ಕೂಡ

#ಯಾಕೆ_LPG_ಅವಘಡ_ತಡೆಯ_ಬೇಕು.

#LPG #lpggas #LPGGasCylinder #lpgfire #lpggeezer #FireAccident #kitchensafety #restaurantfiresafety #DomesticLPG #foodindustries 


  ಕೆಲವೇ ದಿನದ ಹಿಂದೆ ಶಿವಮೊಗ್ಗ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಅಯನೂರು ಊರಿನ ಮುಖ್ಯಪೇಟೆ ಸ್ಥಳದಲ್ಲಿ ಬೇಕರಿ ಒಂದು ಎಲ್ಪಿಜಿ ಸಿಲಿಂಡರ್ ಅವಘಡದಲ್ಲಿ ಬೆಂಕಿಗೆ ಆಹುತಿ ಆಯಿತು.
  ತಕ್ಷಣ ಬೇಕರಿಯ ಸಿಬ್ಬಂದಿಗಳು ಹೊರ ಬಂದರು ಅಕ್ಕಪಕ್ಕದವರು ಊರಿನವರು ಫೈರ್ ಇಂಜಿನ್ ಗೆ ಮಾಹಿತಿ ನೀಡಿದರು.
   ಅಷ್ಟರಲ್ಲಿ ಬೆಂಕಿಯ ಕೆನ್ನಾಲಿಗಳು ಚಾಚಿ ಇಡಿ ಅಂಗಡಿಯನ್ನು ಭಸ್ಮ ಮಾಡುತ್ತಿದ್ದು ಇದರ ಮಧ್ಯೆ ಬೇಕರಿ ಒಳಗಿನ ಎಲ್ ಪಿ ಜಿ ಸಿಲಿಂಡರ್ ಸಿಡಿದು ಆಕಾಶದೆತ್ತರಕ್ಕೆ ಹಾರಿ ಬೇಕರಿಯ ಮುಂದಿನ ಮೇಲ್ಚಾವಣಿ ಮೇಲೆ ಬಿದ್ದು ಕೆಳಗೆ ಬಿದ್ದಿತ್ತು.
  ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಆಗಲಿಲ್ಲ ಎನ್ನುವುದು ಒಂದು ಸಮಾಧಾನ ಅಷ್ಟೇ.
  ಲಕ್ಷಾಂತರ ರೂಪಾಯಿ ವಿನಿಯೋಗಿಸಿ ರೆಸ್ಟೋರೆಂಟ್ ಕ್ಯಾಂಟೀನ್ ಬೇಕರಿಗಳನ್ನು ಸ್ಥಾಪಿಸುತ್ತೇವೆ ಆದರೆ ನಾವುಗಳು ಅಲ್ಲಿ ಅಗ್ನಿ ಅನಾಹುತ ತಡೆಯುವ ಯಾವುದೇ ಸೇಫ್ಟಿ ಮೆಶರ್ಸ್ ಅಳವಡಿಸಿಕೊಂಡಿರುವುದಿಲ್ಲ.
  ಇದಕ್ಕೆ ಕಾನೂನು ಇದ್ದರೂ ಪಾಲಿಸುವುದಿಲ್ಲ ವಿಶೇಷವಾಗಿ ಉದ್ಯಮಿಗಳು ಯಾವ ಕಾರಣಕ್ಕೂ ಎಲ್ಪಿಜಿ ಸಿಲಿಂಡರ್ ಗಳನ್ನು ತಮ್ಮ ಕಿಚನ್ ಒಳಗೆ ಸ್ಥಾಪಿಸಲೇ ಬಾರದು ಇದು ಪ್ರತಿ ಮನೆಯ ಕಿಚನ್ ಗಳಿಗೂ ಅನ್ವಯಿಸುತ್ತದೆ.
  ಆದರೆ ನಾವು ನೀಡುವ ಕುಂಟು ನೆಪ ಸಿಲಿಂಡರ್ ಹೊರಗಡೆ ಇದ್ದರೆ ಕಳ್ಳತನವಾಗುತ್ತದೆ.... ಅದಕ್ಕೂ ಒಂದು ಪರಿಹಾರ ಇದೆ ನೀವು ಕಬ್ಬಿಣದ ಜಾಲರಿಯ ಗಟ್ಟಿ ಬೀಗ ಹಾಕುವ ಜಾಲರಿ ಒಂದನ್ನು ಹೊರಗೆ ಅಳವಡಿಸಿ ಅಲ್ಲಿನಿಂದ ಪೈಪು ಮುಖಾಂತರ ಗ್ಯಾಸ್ ಅಡುಗೆ ಮನೆಗೆ ತಲುಪಿಸಬಹುದು ಇದರ ಮಧ್ಯದಲ್ಲಿ ಒಂದೆರಡು ಸೇಫ್ಟಿ ವಾಲ್ವ್ ಗಳನ್ನು ಅಳವಡಿಸಬಹುದು.
  ಇದರಿಂದ ಯಾವುದೇ ಸಂದರ್ಭದಲ್ಲಿ ಅಗ್ನಿ ಅವಘಡ ಆದರೆ ತಕ್ಷಣ ವಾಲ್ವುಗಳನ್ನು ಬಂದು ಮಾಡಿ ದುರಂತ ತಡೆಯಲು ಸಾಧ್ಯವಿದೆ ಇದರಿಂದ ಅಗ್ನಿ ಅವರ್ಷಡ ಆದ ಇಂತಹ ಪ್ರದೇಶಗಳಲ್ಲಿ ಎಲ್ಪಿಜಿ ಸಿಲೆಂಡರ್ ಬಾಂಬಿನಂತೆ ಸಿಡಿಯುವುದನ್ನು ತಪ್ಪಿಸಬಹುದು.
  ಕೋಟ್ಯಾಂತರ ರೂಪಾಯಿ ಕಟ್ಟಿ ಮನೆ ಕಟ್ಟುವ ಮಾಲೀಕರು ಈ ರೀತಿ ಎಲ್ಪಿಜಿ ಸಿಲಿಂಡರ್ ಗಳನ್ನು ಮನೆಯ ಹೊರಗೆ ಅಳವಡಿಸಿ ಅಲ್ಲಿಂದ ಪೈಪುಗಳ ಮುಖಾಂತರ ಗ್ಯಾಸ್ ಅಡುಗೆ ಮನೆಗಳಿಗೆತರಬೇಕು,ಸ್ನಾನದ ಮನೆಯ ಗ್ಯಾಸ್ ಗೀಜರ್ ಸಂಪರ್ಕ ಕೂಡ ಈ ರೀತಿ ಮಾಡ ಬೇಕು.
 ಆದರೆ ಸಾಮಾನ್ಯವಾಗಿ ಯಾರು ಈ ರೀತಿಯ ಮುಂಜಾಗ್ರತೆ ವಹಿಸುವುದಿಲ್ಲ.
  ನಾನು ನನ್ನ ಮನೆಯ, ನಮ್ಮ ಮಲ್ಲಿಕಾ ವಿಜ್ ರೆಸ್ಟೋರೆಂಟ್ ಮತ್ತು ಚಂಪಕ ಪ್ಯಾರಡೈಸ್ ಮತ್ತು ನಮ್ಮ ಕಲ್ಯಾಣ ಮಂಟಗಳಿಗೆ ಎಲ್‌ಪಿಜಿ ಗ್ಯಾಸ್ ಅನ್ನು ಹೊರಗಡೆ ಅಳವಡಿಸಿದ್ದೇನೆ ಇದರಿಂದ ಗ್ಯಾಸ್ ಲೀಕ್ ಆದರೂ ಅದು ಬಯಲಿನಲ್ಲೇ ಪರಿಸರಕ್ಕೆ ಸೇರಿ ಹೋಗುತ್ತದೆ ಮತ್ತು ಹೊರಗಡೆ ಮತ್ತು ಒಳಗಡೆ ಅಳವಡಿಸಿರುವ ವಾಲ್ವಗಳು ಯಾವುದೇ ಅವಘಡ ಸಂಭವಿಸಿದರೆ ತಕ್ಷಣ ಗ್ಯಾಸ್ ಹರಿವು ನಿಲ್ಲಿಸಲು ಸಾಧ್ಯವಿದೆ.
  ಅಯನೂರಿನಲ್ಲಿ ನಡೆದ ಈ ಒಂದು ಅವಘಡ ಬೇಕರಿ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಮಾಡಿಕೊಟ್ಟಿದೆ ಇದು ನಮಗೆಲ್ಲ ಒಂದು ಪಾಠವಾಗಬೇಕು.
  ನಿಮ್ಮ ಮನೆ ಕ್ಯಾಂಟೀನ್ ಹೋಟೆಲ್ ಕಲ್ಯಾಣ ಮಂಟಪಗಳಿಗೆ ಎಲ್‌ಪಿಜಿ ಸಿಲಿಂಡರನ್ನು ಕಟ್ಟಡದ ಹೊರಗಡೆ ಅಳವಡಿಸಿ ಸುರಕ್ಷತೆಯನ್ನು ಮಾಡಿಕೊಡುವ ಶಿವಮೊಗ್ಗದ ಸಂಸ್ಥೆಯ ಫೋನ್ ನಂಬರ್ ಇಲ್ಲೇ ನೀಡಿದ್ದೇನೆ ಇದನ್ನು ಸಂಪರ್ಕಿಸಿ ನಿಮ್ಮ ಪ್ರಾಪರ್ಟಿ ಸುರಕ್ಷತೆ ಕಾಪಾಡಬಹುದಾಗಿದೆ 90082 13138.

 #ಶಿವಮೊಗ್ಗ_ಸಮೀಪದ_ಆಯನೂರಿನ_ಬೇಕರಿ_ದುರಂತ

#ಕೇವಲ_ಲಿಪ್_ಸಿಂಪತಿ_ವ್ಯಕ್ತಪಡಿಸ_ಬೇಡಿ

#ಇದರಿಂದ_ಎಲ್ಲರೂ_ಪಾಠ_ಕಲಿಯಬೇಕು

#ನಿಮ್ಮ_ಮನೆ_ವ್ಯವಹಾರದ_ಸ್ಥಳದ_ಅಡುಗೆ_ಮನೆಯ_ಒಳಗೆ_ಅಳವಡಿಸಿದ

#ಎಲ್_ಪಿ_ಜಿ_ಸಿಲೆಂಡರ್_ತಕ್ಷಣ_ಹೊರಗೆ_ಸ್ಥಳಾಂತರಿಸಿ

#ಸ್ನಾನದ_ಮನೆಯ_ಗ್ಯಾಸ್_ಗೀಜರ್_ಸಂಪರ್ಕ_ಕೂಡ

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ