Skip to main content

Blog number 2284. ಎಲ್ ಪಿ ಜಿ ಗ್ಯಾಸ್ ದುರಂತಗಳು ಇದನ್ನು ತಡೆಯಲು ನಮ್ಮ ಮನೆಗಳಿಂದಲೇ ಇವತ್ತಿನಿಂದಲೇ ನಾವು ಮುಂದಾಗಬೇಕು.

#ಶಿವಮೊಗ್ಗ_ಸಮೀಪದ_ಆಯನೂರಿನ_ಬೇಕರಿ_ದುರಂತ

#ಕೇವಲ_ಲಿಪ್_ಸಿಂಪತಿ_ವ್ಯಕ್ತಪಡಿಸ_ಬೇಡಿ

#ಇದರಿಂದ_ಎಲ್ಲರೂ_ಪಾಠ_ಕಲಿಯಬೇಕು

#ನಿಮ್ಮ_ಮನೆ_ವ್ಯವಹಾರದ_ಸ್ಥಳದ_ಅಡುಗೆ_ಮನೆಯ_ಒಳಗೆ_ಅಳವಡಿಸಿದ

#ಎಲ್_ಪಿ_ಜಿ_ಸಿಲೆಂಡರ್_ತಕ್ಷಣ_ಹೊರಗೆ_ಸ್ಥಳಾಂತರಿಸಿ

#ಸ್ನಾನದ_ಮನೆಯ_ಗ್ಯಾಸ್_ಗೀಜರ್_ಸಂಪರ್ಕ_ಕೂಡ

#ಯಾಕೆ_LPG_ಅವಘಡ_ತಡೆಯ_ಬೇಕು.

#LPG #lpggas #LPGGasCylinder #lpgfire #lpggeezer #FireAccident #kitchensafety #restaurantfiresafety #DomesticLPG #foodindustries 


  ಕೆಲವೇ ದಿನದ ಹಿಂದೆ ಶಿವಮೊಗ್ಗ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಅಯನೂರು ಊರಿನ ಮುಖ್ಯಪೇಟೆ ಸ್ಥಳದಲ್ಲಿ ಬೇಕರಿ ಒಂದು ಎಲ್ಪಿಜಿ ಸಿಲಿಂಡರ್ ಅವಘಡದಲ್ಲಿ ಬೆಂಕಿಗೆ ಆಹುತಿ ಆಯಿತು.
  ತಕ್ಷಣ ಬೇಕರಿಯ ಸಿಬ್ಬಂದಿಗಳು ಹೊರ ಬಂದರು ಅಕ್ಕಪಕ್ಕದವರು ಊರಿನವರು ಫೈರ್ ಇಂಜಿನ್ ಗೆ ಮಾಹಿತಿ ನೀಡಿದರು.
   ಅಷ್ಟರಲ್ಲಿ ಬೆಂಕಿಯ ಕೆನ್ನಾಲಿಗಳು ಚಾಚಿ ಇಡಿ ಅಂಗಡಿಯನ್ನು ಭಸ್ಮ ಮಾಡುತ್ತಿದ್ದು ಇದರ ಮಧ್ಯೆ ಬೇಕರಿ ಒಳಗಿನ ಎಲ್ ಪಿ ಜಿ ಸಿಲಿಂಡರ್ ಸಿಡಿದು ಆಕಾಶದೆತ್ತರಕ್ಕೆ ಹಾರಿ ಬೇಕರಿಯ ಮುಂದಿನ ಮೇಲ್ಚಾವಣಿ ಮೇಲೆ ಬಿದ್ದು ಕೆಳಗೆ ಬಿದ್ದಿತ್ತು.
  ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಆಗಲಿಲ್ಲ ಎನ್ನುವುದು ಒಂದು ಸಮಾಧಾನ ಅಷ್ಟೇ.
  ಲಕ್ಷಾಂತರ ರೂಪಾಯಿ ವಿನಿಯೋಗಿಸಿ ರೆಸ್ಟೋರೆಂಟ್ ಕ್ಯಾಂಟೀನ್ ಬೇಕರಿಗಳನ್ನು ಸ್ಥಾಪಿಸುತ್ತೇವೆ ಆದರೆ ನಾವುಗಳು ಅಲ್ಲಿ ಅಗ್ನಿ ಅನಾಹುತ ತಡೆಯುವ ಯಾವುದೇ ಸೇಫ್ಟಿ ಮೆಶರ್ಸ್ ಅಳವಡಿಸಿಕೊಂಡಿರುವುದಿಲ್ಲ.
  ಇದಕ್ಕೆ ಕಾನೂನು ಇದ್ದರೂ ಪಾಲಿಸುವುದಿಲ್ಲ ವಿಶೇಷವಾಗಿ ಉದ್ಯಮಿಗಳು ಯಾವ ಕಾರಣಕ್ಕೂ ಎಲ್ಪಿಜಿ ಸಿಲಿಂಡರ್ ಗಳನ್ನು ತಮ್ಮ ಕಿಚನ್ ಒಳಗೆ ಸ್ಥಾಪಿಸಲೇ ಬಾರದು ಇದು ಪ್ರತಿ ಮನೆಯ ಕಿಚನ್ ಗಳಿಗೂ ಅನ್ವಯಿಸುತ್ತದೆ.
  ಆದರೆ ನಾವು ನೀಡುವ ಕುಂಟು ನೆಪ ಸಿಲಿಂಡರ್ ಹೊರಗಡೆ ಇದ್ದರೆ ಕಳ್ಳತನವಾಗುತ್ತದೆ.... ಅದಕ್ಕೂ ಒಂದು ಪರಿಹಾರ ಇದೆ ನೀವು ಕಬ್ಬಿಣದ ಜಾಲರಿಯ ಗಟ್ಟಿ ಬೀಗ ಹಾಕುವ ಜಾಲರಿ ಒಂದನ್ನು ಹೊರಗೆ ಅಳವಡಿಸಿ ಅಲ್ಲಿನಿಂದ ಪೈಪು ಮುಖಾಂತರ ಗ್ಯಾಸ್ ಅಡುಗೆ ಮನೆಗೆ ತಲುಪಿಸಬಹುದು ಇದರ ಮಧ್ಯದಲ್ಲಿ ಒಂದೆರಡು ಸೇಫ್ಟಿ ವಾಲ್ವ್ ಗಳನ್ನು ಅಳವಡಿಸಬಹುದು.
  ಇದರಿಂದ ಯಾವುದೇ ಸಂದರ್ಭದಲ್ಲಿ ಅಗ್ನಿ ಅವಘಡ ಆದರೆ ತಕ್ಷಣ ವಾಲ್ವುಗಳನ್ನು ಬಂದು ಮಾಡಿ ದುರಂತ ತಡೆಯಲು ಸಾಧ್ಯವಿದೆ ಇದರಿಂದ ಅಗ್ನಿ ಅವರ್ಷಡ ಆದ ಇಂತಹ ಪ್ರದೇಶಗಳಲ್ಲಿ ಎಲ್ಪಿಜಿ ಸಿಲೆಂಡರ್ ಬಾಂಬಿನಂತೆ ಸಿಡಿಯುವುದನ್ನು ತಪ್ಪಿಸಬಹುದು.
  ಕೋಟ್ಯಾಂತರ ರೂಪಾಯಿ ಕಟ್ಟಿ ಮನೆ ಕಟ್ಟುವ ಮಾಲೀಕರು ಈ ರೀತಿ ಎಲ್ಪಿಜಿ ಸಿಲಿಂಡರ್ ಗಳನ್ನು ಮನೆಯ ಹೊರಗೆ ಅಳವಡಿಸಿ ಅಲ್ಲಿಂದ ಪೈಪುಗಳ ಮುಖಾಂತರ ಗ್ಯಾಸ್ ಅಡುಗೆ ಮನೆಗಳಿಗೆತರಬೇಕು,ಸ್ನಾನದ ಮನೆಯ ಗ್ಯಾಸ್ ಗೀಜರ್ ಸಂಪರ್ಕ ಕೂಡ ಈ ರೀತಿ ಮಾಡ ಬೇಕು.
 ಆದರೆ ಸಾಮಾನ್ಯವಾಗಿ ಯಾರು ಈ ರೀತಿಯ ಮುಂಜಾಗ್ರತೆ ವಹಿಸುವುದಿಲ್ಲ.
  ನಾನು ನನ್ನ ಮನೆಯ, ನಮ್ಮ ಮಲ್ಲಿಕಾ ವಿಜ್ ರೆಸ್ಟೋರೆಂಟ್ ಮತ್ತು ಚಂಪಕ ಪ್ಯಾರಡೈಸ್ ಮತ್ತು ನಮ್ಮ ಕಲ್ಯಾಣ ಮಂಟಗಳಿಗೆ ಎಲ್‌ಪಿಜಿ ಗ್ಯಾಸ್ ಅನ್ನು ಹೊರಗಡೆ ಅಳವಡಿಸಿದ್ದೇನೆ ಇದರಿಂದ ಗ್ಯಾಸ್ ಲೀಕ್ ಆದರೂ ಅದು ಬಯಲಿನಲ್ಲೇ ಪರಿಸರಕ್ಕೆ ಸೇರಿ ಹೋಗುತ್ತದೆ ಮತ್ತು ಹೊರಗಡೆ ಮತ್ತು ಒಳಗಡೆ ಅಳವಡಿಸಿರುವ ವಾಲ್ವಗಳು ಯಾವುದೇ ಅವಘಡ ಸಂಭವಿಸಿದರೆ ತಕ್ಷಣ ಗ್ಯಾಸ್ ಹರಿವು ನಿಲ್ಲಿಸಲು ಸಾಧ್ಯವಿದೆ.
  ಅಯನೂರಿನಲ್ಲಿ ನಡೆದ ಈ ಒಂದು ಅವಘಡ ಬೇಕರಿ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಮಾಡಿಕೊಟ್ಟಿದೆ ಇದು ನಮಗೆಲ್ಲ ಒಂದು ಪಾಠವಾಗಬೇಕು.
  ನಿಮ್ಮ ಮನೆ ಕ್ಯಾಂಟೀನ್ ಹೋಟೆಲ್ ಕಲ್ಯಾಣ ಮಂಟಪಗಳಿಗೆ ಎಲ್‌ಪಿಜಿ ಸಿಲಿಂಡರನ್ನು ಕಟ್ಟಡದ ಹೊರಗಡೆ ಅಳವಡಿಸಿ ಸುರಕ್ಷತೆಯನ್ನು ಮಾಡಿಕೊಡುವ ಶಿವಮೊಗ್ಗದ ಸಂಸ್ಥೆಯ ಫೋನ್ ನಂಬರ್ ಇಲ್ಲೇ ನೀಡಿದ್ದೇನೆ ಇದನ್ನು ಸಂಪರ್ಕಿಸಿ ನಿಮ್ಮ ಪ್ರಾಪರ್ಟಿ ಸುರಕ್ಷತೆ ಕಾಪಾಡಬಹುದಾಗಿದೆ 90082 13138.

 #ಶಿವಮೊಗ್ಗ_ಸಮೀಪದ_ಆಯನೂರಿನ_ಬೇಕರಿ_ದುರಂತ

#ಕೇವಲ_ಲಿಪ್_ಸಿಂಪತಿ_ವ್ಯಕ್ತಪಡಿಸ_ಬೇಡಿ

#ಇದರಿಂದ_ಎಲ್ಲರೂ_ಪಾಠ_ಕಲಿಯಬೇಕು

#ನಿಮ್ಮ_ಮನೆ_ವ್ಯವಹಾರದ_ಸ್ಥಳದ_ಅಡುಗೆ_ಮನೆಯ_ಒಳಗೆ_ಅಳವಡಿಸಿದ

#ಎಲ್_ಪಿ_ಜಿ_ಸಿಲೆಂಡರ್_ತಕ್ಷಣ_ಹೊರಗೆ_ಸ್ಥಳಾಂತರಿಸಿ

#ಸ್ನಾನದ_ಮನೆಯ_ಗ್ಯಾಸ್_ಗೀಜರ್_ಸಂಪರ್ಕ_ಕೂಡ

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...