Skip to main content

Blog number 2281.ಕರ್ನಾಟಕದ ಕನ್ನಡಿಗ ವಾಗಿ ಲಿಂಗ್ ಹಿಮಾಲಯದ ಕೇದಾರನಾಥದ ಪ್ರಧಾನ ಪೂಜಾರಿ,

#ಎಲ್ಲಿಯ_ಕೇದಾರನಾಥ

#ಎಲ್ಲಿಯ_ವಾಗೀಶ್_ಲಿಂಗ್

#ದಾವಣಗೆರೆಜಿಲ್ಲೆ_ಹರಿಹರ_ತಾಲೂಕಿನ_ಭಾನುವಳ್ಳಿಯಲ್ಲಿ_ಜನಿಸಿದ 

#ವಾಗೀಶ್_ಲಿಂಗ್_ಕೇದಾರನಾಥದ_ದೇವಾಲಯದ_ಮುಖ್ಯ_ಪ್ರಧಾನ_ಪೂಜಾರಿ

#ಇವರು_ಶಿವಮೊಗ್ಗ_ಜಿಲ್ಲೆ_ಶಿಕಾರಿಪುರ_ತಾಲೂಕಿನ

#ಸಾಲೂರು_ಹಿರೇಮಠದ_ಗುರುಲಿಂಗ_ಶಿವಾಚಾರ್ಯಸ್ವಾಮೀಜಿಗಳ_ಶಿಷ್ಯ

#ಕೇದಾರನಾಥದ_ಪ್ರಧಾನ_ಪೂಜಾರಿ_ಮತ್ತು_ಜಗದ್ಗುರುಗಳು_ಆಗಬೇಕೆಂದರೆ 

#ಅವರು_ಕರ್ನಾಟಕದ_ವೀರಶೈವ_ಶುದ್ಧ_ಜಂಗಮ_ಹಿರೇಮಠದ_ಪರಂಪರೆಯವರು 

#ಆಗಿರಬೇಕೆಂಬ_ನಿಯಮ_ಇದೆ_ಇದು_3332_ವರ್ಷಗಳ_ಪರಂಪರೆ.


    1995 ರಿಂದ 2000 ಇಸವಿ ತನಕ ನಾನು ಆನಂದಪುರಂ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯನಾಗಿದ್ದೆ ಆಗ ಶಿಕಾರಿಪುರ ತಾಲೂಕಿನ ಸಾಲೂರು ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿಗಳನ್ನು ನಮ್ಮೂರ ಸಮೀಪದ ಗೇರುಬೀಸಿನ ಹೊಳೆ ಮಲ್ಲೇಶ್ವರ ಸ್ವಾಮಿಯ ವಾರ್ಷಿಕ ಜಾತ್ರಾ ಕಾರ್ಯಕ್ರಮಕ್ಕೆ ಅಹ್ವಾನ ನೀಡಲು ಹೋಗಿದ್ದಾಗಿಂದ ಸ್ವಾಮೀಜಿಗಳ ಸಂಪರ್ಕವಾಯಿತು.
   ನಂತರ ಅನೇಕ ಕಾರ್ಯಕ್ರಮಗಳಲ್ಲಿ ನಾವಿಬ್ಬರು ಜೊತೆಯಾಗಿ ಭಾಗವಹಿಸಿದ್ದು ಆಗ ಅವರ ಜೊತೆ ಹರಿಹರ ತಾಲೂಕಿನ ಭಾನುವಳ್ಳಿಯ ವಾಗೇಶ್ ಲಿಂಗ್ ಬರುತ್ತಿದ್ದರು ಅವರು ಸಾಲೂರು ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿಗಳ ಶಿಷ್ಯರಾಗಿದ್ದರು ಮತ್ತು ಸಾಲೂರಿನ ವೇದ ಪಾಠಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
  ನಂತರ ಅವರು ಹಿಮಾಲಯದ ಕೇದಾರನಾಥ ದೇವಾಲಯದಲ್ಲಿ ಪ್ರಧಾನ ಪೂಜಾರಿಗಳಾಗಿ ಇದ್ದಾರೆಂದು ಸುದ್ದಿ ಕೇಳಿದ್ದೆ.
   ಕೆಲವು ವರ್ಷದ ಹಿಂದೆ ನಮ್ಮ ಸಮೀಪದ ಹೊಸನಗರ ತಾಲೂಕಿನ ಬಟ್ಟೆ ಮಲ್ಲಪ್ಪದ #ಪಾಪು_ಗೌಡರೆಂದು ನಾವು ಕರೆಯುವ ವಿರೂಪಾಕ್ಷಗೌಡರು ಲಾರಿ ಮಾಲೀಕರು ಮತ್ತು ಹೊಸನಗರ ತಾಲೂಕು ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷರು ಅವರು ಕೇದಾರನಾಥಕ್ಕೆ ಹೋದಾಗ ಅವರ ಅನುಭವಗಳನ್ನು ಹೇಳಿಕೊಂಡಿದ್ದರು.
  ಅವರು ಅವತ್ತು ಕೇದಾರನಾಥ ತಲುಪಿದಾಗ ಅಂತಹ ಜನಜಂಗುಳಿ ಇರಲಿಲ್ಲವಂತೆ,ಸುಪ್ರೀಂ ಕೋರ್ಟ್ ನ್ಯಾಯಾಧೀಶರು ದರ್ಶನಕ್ಕೆ ಬಂದಿದ್ದರಿಂದ ಹೆಚ್ಚು ಸುರಕ್ಷೆ ನೀಡಲಾಗಿತ್ತಂತೆ.
  ನಂತರ ದೇವಾಲಯದ ಒಳ ಹೋಗಿ ದರ್ಶನ ಮಾಡುವಾಗ ಕನ್ನಡದಲ್ಲಿ ನೀವು ಹೊಸನಗರ ತಾಲೂಕಿನವರಾ? ಎಂಬ ಪ್ರಶ್ನೆ ಪ್ರಧಾನ ಪೂಜಾರಿಯವರು ಕೇಳಿದಾಗ ಪಾಪು ಗೌಡರಿಗೆ ದಿಗ್ಭ್ರಮೆ ಆಯಿತಂತೆ...ಹೌದು ಎಂದಾಗ ನೀವು ಬಟ್ಟೆ ಮಲ್ಲಪ್ಪದ ಪಾಪುಗೌಡರಲ್ಲವೇ ಎಂದರಂತೆ!! ಆಗ ಅವರಿಗೆ ಇನ್ನೂ ಆಶ್ಚಯ೯ ಆಯಿತಂತೆ.
  ನಂತರ ಅವರೇ ಸಾಲೂರು ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿಗಳ ಜೊತೆ ಅವರ ಮನೆಗೆ ಬಂದದ್ದನ್ನು ನೆನಪಿಸಿದರಂತೆ ನಂತರ ರುದ್ರಾಕ್ಷಿ ಮಾಲೆಗಳನ್ನು ಇವರ ಕೊರಳಿಗೆ ಹಾಕಿ ಹಾರೈಸಿದರಂತೆ.
   ಹೀಗೆ ಕೇದಾರನಾಥದ ಪ್ರಧಾನ ಪೂಜಾರಿ ಕರ್ನಾಟಕದವರು ಅವರು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿಯ ವಾಗೀಶ್ ಲಿಂಗ್ ಕಳೆದ 20 ವರ್ಷದಿಂದ ಅಲ್ಲಿದ್ದಾರೆ.
   ಕೇದಾರನಾಥದ ಪ್ರಧಾನ ಪೂಜಾರಿ ಮತ್ತು ಜಗದ್ಗುರುಗಳು ಆಗಬೇಕಾದವರು ಕರ್ನಾಟಕ ರಾಜ್ಯದ ವೀರಶೈವ ಶುದ್ಧ ಜಂಗಮ ಹಿರೇಮಠದವರೇ ಆಗಬೇಕೆಂಬ ನಿಯಮ ಕಳೆದ 3332 ವರ್ಷಗಳಿಂದ ನಡೆದು ಬಂದ ಪರಂಪರೆ.
   ಕೇದಾರನಾಥದ ಎಲ್ಲ ಮಠಗಳಲ್ಲಿ ದೇವಾಲಯಗಳು ಕನ್ನಡದ ಬೋರ್ಡ್ ಗಳು ಕೂಡ ಇದೆ ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...