Skip to main content

Blog number 2279. ಚಿಕ್ಕಮಗಳೂರುಜಿಲ್ಲೆಯ ಮುಡಿಗೆರೆ ತಾಲ್ಲೂಕಿನ ಅಂಗಡಿ ಗ್ರಾಮ 10 ನೇ ಶತಮಾನದಲ್ಲಿ ಹೊಯ್ಸಳರ ಮೊದಲ ರಾಜದಾನಿ

#ಸಳ_ತನ್ನ_ಜೈನ_ಗುರು_ಸುದತ್ತಾಚಾಯ೯ರ_ಮೇಲೆ_ಎರಗಿ_ಬಂದ_ಹುಲಿ_ಕೊಲ್ಲುತ್ತಾನೆ

#ಇವರೇ_ಹೊಯ್ಸಳ_ರಾಜ_ವಂಶದ_ಸ್ಥಾಪಕರು

#ಈ_ಸ್ಥಳವೇ_ಈಗಿನ_ಚಿಕ್ಕಮಗಳೂರು_ಜಿಲ್ಲೆಯ_ಮುಡಿಗೆರೆ_ತಾಲ್ಲೂಕಿನ

#ಅಂಗಡಿ_ಗ್ರಾಮದ_ವಾಸಂತಿಕ_ದೇವಾಲಯ

#ಇಲ್ಲಿ_900_ವರ್ಷಗಳ_ಹಿಂದಿನ_ಎರಡು_ಬೃಹತ್_ಸಂಪಿಗೆ_ಮರವಿದೆ.

#vasantikatemple #mudigere #chikkamagalore #Angadi #jaintemple #jainhistory #belur #halebidu #hoysala #hoysalaarchitecture
#karnatakatourism
   ಹತ್ತರಿಂದ 14ನೇ ಶತಮಾನದ ನಡುವೆ ಕರ್ನಾಟಕದ ಹೆಚ್ಚಿನ ಭಾಗ ಆಳಿದ ಹೊಯ್ಸಳ ಸಾಮ್ರಾಜ್ಯವು ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಕನ್ನಡಿಗರ ಶಕ್ತಿ.
   ಹೊಯ್ಸಳರು ಪಶ್ಚಿಮ ಘಟ್ಟಗಳ ಎತ್ತರದ ಪ್ರದೇಶವಾದ ಮಲೆನಾಡಿನವರು, 13ನೇ ಶತಮಾನದ ವೇಳೆಗೆ ಹೊಯ್ಸಳರು ಕರ್ನಾಟಕದ ಬಹುಪಾಲು ಪ್ರದೇಶದಲ್ಲಿ, ವಾಯುವ್ಯ ತಮಿಳುನಾಡು ಮತ್ತು ಪಶ್ಚಿಮದ ಆಂಧ್ರಪ್ರದೇಶದ ಭಾಗಗಳನ್ನು ಹಾಗೂ ಡೆಕ್ಕನ್ ಪ್ರಸ್ಥಭೂಮಿಯನ್ನು ಆಳಿದರು.
   ಶಿಲ್ಪ ಕಲಾ ವೈಭವದ ಅದ್ಭುತ ಪ್ರದರ್ಶನದ ಪ್ರಸಿದ್ಧ 
 ದೇವಾಲಯಗಳಾದ ಬೇಲೂರಿನ ಚನ್ನಕೇಶವ ದೇವಾಲಯ, ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ಮತ್ತು ಸೋಮನಾಥಪುರದ ಚನ್ನಕೇಶವ ದೇವಾಲಯಗಳು ವಿನೆಸ್ಕೋ ವಿಶ್ವ ಪಾರಂಪರೆಯ ತಾಣಗಳನ್ನಾಗಿಸಿದೆ.
  ಈಗಿನ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ವಾಸಂತಿಕ ದೇವಿಯ ದೇವಸ್ಥಾನ ಆ ಕಾಲದಲ್ಲಿ ದಟ್ಟಡವಿಯ ಮಧ್ಯದ ದೇವಾಲಯವಾಗಿತ್ತು.
  ಶಾಸನಗಳ ಪ್ರಕಾರ ಸಳ ಹೊಯ್ಸಳ ಸಂತತಿಯ ಮೂಲಪುರುಷ, ಸಳ ಶಕಪುರದ ಅಂದರೆ ಈಗಿನ ಅಂಗಡಿ ಗ್ರಾಮದಲ್ಲಿ ಜೈನಮುನಿ ಸುಧತ್ತಾಚಾರ್ಯರ ಶಿಷ್ಯನಾಗಿದ್ದ ಅಲ್ಲಿನ ವಾಸಂತಿಕ ದೇವಾಲಯದಲ್ಲಿ ಒಂದು ದಿನ ಸುದತ್ತಾಚಾರ್ಯರು ಪೂಜೆಯಲ್ಲಿ ತೊಡಗಿರುವಾಗ ಹುಲಿ ಒಂದು ಹಾರಿ ಬಂತು ಮುನಿಗಳು ತಮ್ಮ ಕೈಯಲ್ಲಿದ್ದ ಕುಂಚವನ್ನು ಶಿಷ್ಯನ ಕೈಗಿತ್ತು #ಅದಂಪೋಯ್_ಸಳ ಎಂದು ಅಪ್ಪಣೆ ಮಾಡುತ್ತಾರೆ.
   ಸಳ ಧೈರ್ಯದಿಂದ ಹುಲಿಯ ಮೇಲೆರಿಗೆ ಅದನ್ನು ಕೊಲ್ಲುತ್ತಾನೆ,ಆ ಮುನಿವರ್ಯರು ಸಳನ ಧೈರ್ಯ ಸಾಹಸಗಳನ್ನು ಮೆಚ್ಚಿ ಅವನು ರಾಜನಾಗುವಂತೆ ವಾಸಂತಿಕ ದೇವಿಯಿಂದ ಹೊರ ಪಡೆದು ಅನುಗ್ರಹಿಸುತ್ತಾರೆ.
  ಹುಲಿಯನ್ನು ಕೊಲ್ಲುವ ಸಳನ ಚಿತ್ರವೇ ಹೊಯ್ಸಳರ ರಾಜವಂಶದ ಲಾಂಛನವಾಗಿ ಬಳಕೆಯಾಯಿತು.
  ಮೊದಲ ಹೊಯ್ಸಳ ರಾಜಧಾನಿ ಸೊಸ ಊರು / ಸಶಕಪುರ /ಸೊಸೆ ಊರು /ಸೊಸ ಊರು ಪಟ್ಟಣ ಅದೇ ಇಂದಿನ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮ.
  ರಾಜಧಾನಿ ಸ್ಥಳಾಂತರಿಸಿದ ನಂತರವೂ ಸೊಸ ಊರು ಪ್ರಮುಖ ವಾಣಿಜ್ಯ ಮತ್ತು ಆಡಳಿತ ಕೇಂದ್ರವಾಗಿ ಮತ್ತು ಜೈನ ಧಾರ್ಮಿಕ ಕೇಂದ್ರವಾಗಿ ಉಳಿಯಿತು.
  1026 ರಿಂದ 1048ರ ವರೆಗೆ ಹೊಯ್ಸಳರ ರಾಜಧಾನಿ ಆಗಿತ್ತು, 1048 ರಲ್ಲಿ ಎರಡನೇ ರಾಜಧಾನಿಯಾಗಿ ಬೇಲೂರಿಗೆ ಸ್ಥಳಾಂತರಿಸಲಾಯಿತು.
  1062ರಲ್ಲಿ ಬೇಲೂರಿನಿಂದ ಹಳೇಬೀಡಿಗೆ ರಾಜಧಾನಿಯನ್ನು ಸ್ಥಳಾಂತರಿಸಲಾಯಿತು,ಹಳೇಬೀಡು ಹೊಯ್ಸಳ ರಾಜ ವಂಶದ ಕೊನೆಯವರೆಗೂ ರಾಜಧಾನಿಯಾಗಿ ಉಳಿಯಿತು.
   ಈಗಿನ ಅಂಗಡಿಯಂದು ಕರೆಯುವ ಸೊಸ ಊರು ಹೊಯ್ಸಳರ ಮೊದಲ ರಾಜಧಾನಿ ಇಲ್ಲಿನ ಪುರಾತನ ದೇವಾಲಯ ವಾಸಂತಿಕ ದೇವಾಲಯ ಈ ದೇವಾಲಯದ ಎದುರು ಎರಡು ಬೃಹತ್ ಸಂಪಿಗೆ ಮರಗಳಿದೆ ಅಷ್ಟು ದೊಡ್ಡದಾದ ಸಂಪಿಗೆ ಮರಗಳು ವಿರಳ ಈ ಸಂಪಿಗೆ ಮರಗಳು ದೇವಾಲಯ ನಿರ್ಮಾಣದ ಸಮಯದಲ್ಲಿ ನಟ್ಟಿದಂತ ಸಂಪಿಗೆ ಮರ ಎಂಬ ಪ್ರತಿತಿಯಿದೆ.
   ಈ ನಂಬಿಕೆ ಪುರಸ್ಕರಿಸುವಂತೆ ಸಂಬಂಧಪಟ್ಟ ಇಲಾಖೆ ಈ ಎರಡು ಮರದ ಕಾರ್ಬನ್ ಡೇಟಿಂಗ್ ಟೆಸ್ಟಿಂಗ್ ಮಾಡಿಸಿದಾಗ ಈ ಮರಗಳು ಸುಮಾರು 900 ವರ್ಷಗಳಿಗಿಂತ ಹಿಂದಿನದೆಂದು ತಿಳಿದು ಬಂದಿದೆಯಂತೆ.
   ಈ ದೇವಾಲಯದ ಪ್ರಧಾನ ಅರ್ಚಕರಾದ ದತ್ತಾತ್ರೇಯ ಕುಮಕೂಡು ಎಲ್ಲವನ್ನು ವಿವರಿಸುತ್ತಾರೆ ಅವರು ಮೂಲತಃಃ ಶಿಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿ ಭಾಗದವರು ಈಗ ಇಲ್ಲೇ ನೆಲೆಸಿದ್ದಾರೆ ಈ ಸ್ಥಳಕ್ಕೆ ಬೇಟಿ ಮಾಡುವವರು ಇವರನ್ನು ಸಂಪರ್ಕಿಸ ಬಹುದು ಇವರ ಫೋನ್ ನಂಬರ್ 7760264332.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ