Skip to main content

Blog number 2077. ಶಾಂತವೇರಿ ಗೋಪಾಲಗೌಡರ ಆಪ್ತ ಹೊಸನಗರದ ಶೇಂದಿ ಗುತ್ತಿಗೆದಾರ ಸುಕುಮಾರ್

#ಸುಕುಮಾರನ್

#ಹೊಸನಗರ_ತಾಲ್ಲೂಕಿನ_ಶೇಂದಿ_ಗುತ್ತಿಗೆದಾರರು

#ಶಾಂತವೇರಿ_ಗೋಪಾಲಗೌಡರ_ಪರಮಾಪ್ತ_ಶಿಷ್ಯರು

#ಬಟ್ಟೆಮಲ್ಲಪ್ಪದಲ್ಲಿ_ಅವರ_ಕುಟುಂಬ_ಇದೆ.

#shantaverigopalgowda #swamiraohosanagara
#sagar #hosanagara #battemallappa #ripponpet #SocialistParty 

  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಜಿ ಶಾಸಕರಾದ ಬಿ ಸ್ವಾಮಿ ರಾವ್ ಸಾತ್ವಿಕ ರಾಜಕಾರಣಿ, ಅವರ #ಜೀವನ_ವೃತ್ತಾಂತ  #ನಾನು_ಹೇಳುವುದೆಲ್ಲ_ಸತ್ಯ ಎಂಬ ಪುಸ್ತಕ ಎಲ್ಲಾ ಜನಪ್ರತಿನಿಧಿಗಳು ಓದಬೇಕು ಅದರಲ್ಲಿ ಶಿವಮೊಗ್ಗ ಜಿಲ್ಲೆಯ ರಾಜಕಾರಣದ ಒಳಗುಟ್ಟುಗಳು ಇದೆ.
   ಈ ಪುಸ್ತಕದ ಪುಟ ನಂಬರ್ 33ರಲ್ಲಿ ಒಂದು ಘಟನೆ ಅವರು ದಾಖಲಿಸಿದ್ದಾರೆ ಅದನ್ನು ಓದುತ್ತೇನೆ ಕೇಳಿ....    

  ಶಾಂತವೇರಿ ಗೋಪಾಲಗೌಡರ ಪ್ರಚಾರ ಭಾಷಣಕ್ಕಾಗಿ ರಿಪನಪೇಟೆಯ ಶಾಲಾ ಮೈದಾನದಲ್ಲಿ ವೇದಿಕೆ ನಿರ್ಮಾಣವಾಗಿತ್ತು, ಸಾವಿರಾರು ಮಂದಿ ಗೌಡರ ಆಗಮನದ ನಿರೀಕ್ಷೆಯಲ್ಲಿದ್ದರು... ಜನ ಸೇರಿ ನಾಲ್ಕು ಐದು ಗಂಟೆಗಳೆ ಕಳೆದಿತ್ತು, ಆದರೆ ಗೋಪಾಲ ಗೌಡರು ಆಗಮಿಸಲೇ ಇಲ್ಲ... ಸಮಯ ಸರಿಯುತ್ತಿದ್ದಂತೆ ಆಯೋಜಕರಿಗೆ ದಿಕ್ಕು ತೋಚದಂತಾಗಿತ್ತು... ಆ ವೇಳೆ ಗೋಪಾಲಗೌಡರ ಅಭಿಮಾನಿಯಾಗಿದ್ದ ಕೇರಳ ಮೂಲದ #ಸುಕುಮಾರನ್ ಅಲ್ಲಿ ಸೇರಿದ್ದ ಬಾರಿ ಜನಸ್ಥೋಪ ಜನಸ್ತೋಮವನ್ನು ಕಂಡು  ಗೋಪಾಲ ಗೌಡರನ್ನು ದೂರದ ಕಮ್ಮರಡಿಯಿಂದ ಕರೆ ತರುವುದಾಗಿ ಹೊರಟು ನಿಂತರು.... ಅಲ್ಲಿನ ಚುನಾವಣಾ ಪ್ರಚಾರ ಭಾಷಣದಲ್ಲಿ ನಿರತರಾಗಿದ್ದ ಶಾಂತವೇರಿ ಗೋಪಾಲಗೌಡರಿಗೆ ಇಲ್ಲಿನ ವಾಸ್ತವ ಸ್ಥಿತಿ ಮನದಟ್ಟು ಮಾಡಿಕೊಟ್ಟು ಜೊತೆಯಲ್ಲೇ ಕರೆತಂದು ಪ್ರಚಾರ ಸಭೆಯಲ್ಲಿ ಗೌಡರು ಭಾಷಣ ಮುಗಿಸಿದಾಗ ಸಮಯ ರಾತ್ರಿ ಎರಡು ಗಂಟೆಯಾಗಿತ್ತು.
  ಇದು 1967 ರಲ್ಲಿ ಮೈಸೂರು ರಾಜ್ಯದ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ಘೋಷಣೆ ಆದಾಗ ಸೋಶಿಯಲಿಸ್ಟ್ ಪಾರ್ಟಿಯಿಂದ ಹೊಸನಗರ ತಾಲೂಕಿನಿಂದ ಸ್ಪರ್ಧಿಸಿದ್ದ ಬಿ ಸ್ವಾಮಿರಾವ್ ತಮ್ಮ ಎದುರಾಳಿ  ಮುಖ್ಯಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲರ ಅಳಿಯ ಕಾಂಗ್ರೇಸಿನ ಸೋಮಶೇಖರ್ ವಿರುದ್ಧ ಕೇವಲ 750 ಮತಗಳಿಂದ ಸೋತ ಚುನಾವಣೆ ಆಗಿತ್ತು.
   2002ರಲ್ಲಿ ಕಾಗೋಡು ಸತ್ಯಾಗ್ರಹದ ಸುವರ್ಣ ಮಹೋತ್ಸವದ ಅಂಗವಾಗಿ ಕಾಗೋಡಿನಿಂದ ಕಡಿದಾಳಿನ ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪನವರ ಸಮಾಧಿ ತನಕ ತೆಗೆದೊಯ್ದ ಕಾಗೋಡು ಸತ್ಯಾಗ್ರಹದ ಜ್ಯೋತಿಯ ಕಾರ್ಯಕ್ರಮದಲ್ಲಿ ರಿಪ್ಪನಪೇಟೆ ವಿನಾಯಕ ವೃತದಲ್ಲಿ  ಸಮಾಜವಾದಿ ಲೇಖಕರು ಕೋಣಂದೂರು ವೆಂಕಪ್ಪಗೌಡರು
ಆ ದಿನ ಮಾಡಿದ ಭಾಷಣದಲ್ಲಿ ಈ ಸಮಾಜವಾದಿ ಹೋರಾಟದ ರಿಪ್ಪನ್ ಪೇಟೆಯ ಕ್ರಾಂತಿಕಾರಿಯ ಯುವಕ ಸುಕುಮಾರ್ ಬಗ್ಗೆ ಮಾತುಗಳನ್ನು ಆಡಿದ್ದರು.
 ಸಾಹಿತಿ ಕೊಣಂದೂರು ವೆಂಕಪ್ಪ ಗೌಡರು ಶಾಂತವೇರಿ ಗೋಪಾಲಗೌಡರ ಆತ್ಮ ಚರಿತ್ರೆ "ಜೀವಂತ ಜ್ವಾಲೆ ", ಕೆಂಗಲ್ ಹನುಮಂತಯ್ಯನವರ ಆತ್ಮ , ದೇವರಾಜ್ ಅರಸರ ಆತ್ಮ , ಹುಚ್ಚ ಮಾಸ್ತಿ ಗೌಡರ ಆತ್ಮ,ಚರಿತ್ರೆ ,ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪನವರ ಆತ್ಮ,ಚರಿತ್ರೆ ,ಜೆ.ಹೆಚ್. ಪಟಲರ ಆತ್ಮ ಚರಿತ್ರೆ ಮತ್ತು ಭಾರತದ ಪ್ರಧಾನಿ ದೇವೇಗೌಡರ ಆತ್ಮ ಚರಿತ್ರೆಗಳನ್ನು ಬರೆದವರು. 
  ಇದರಿಂದ ನನಗೆ ಈ ಸುಕುಮಾರ್ ಯಾರು? ಎಂಬ ಕುತೂಹಲ ಉಂಟಾಗಿತ್ತು, ನಂತರದ ದಿನಗಳಲ್ಲಿ ಹೊಸನಗರ ತಾಲೂಕಿನ #ಬಟ್ಟೆಮಲ್ಲಪ್ಪದಲ್ಲಿ ನೆಲೆಸಿದ್ದರು ಎಂಬ ಸುದ್ದಿ ಸಿಕ್ಕಿತ್ತು ಈಗ ಅವರಿಲ್ಲ ಅವರ ಪತ್ನಿ #ಶ್ರೀಮತಿ_ಭಾಗಿರಥಿ ಮತ್ತು ಪುತ್ರ #ಸುನೀಲ ಇದ್ದಾರೆ ಸುನೀಲ ಯುವಜನ ಮೇಳಗಳಲ್ಲಿ ಮಿಂಚಿದ್ದ ಕಲಾವಿದ.
   ಸುಕುಮಾರನ್ ಎರಡನೆ ಪತ್ನಿ ಪುತ್ರ #ಸುಮಂಗಲ ಸಾಗರದಲ್ಲಿ ನೆಲೆಸಿದ್ದಾರೆ JCB ಮಾಲಿಕರಾಗಿದ್ದಾರೆ.
  ಸುಕುಮಾರನ್ ಸಹೋದರಿ ಮೊಮ್ಮಗ #ಸುದೀರ್ (ಸುದಿ) ಬಿಜೆಪಿ ಪಕ್ಷದ ಮುಖಂಡರು ಆಗಿದ್ದಾರೆ, ರಿಪ್ಪನ್ ಪೇಟೆಯಲ್ಲಿದ್ದಾರೆ ಅವರ ಪತ್ನಿ ರಿಪನ್ ಪೇಟೆ ಗ್ರಾಮ ಪಂಚಾಯಿತಿ ಸದಸ್ಯೆ ಆಗಿದ್ದಾರೆ.
  ಆ ಕಾಲದಲ್ಲಿ ಹೊಸನಗರ ತಾಲೂಕಿನ ಶೇಂದಿ ಗುತ್ತಿಗೆದಾರರಾಗಿದ್ದ ಸುಕುಮಾರ್ ಸುಮಾಜವಾದಿ ಪಾರ್ಟಿಯ ಶಾಂತವೇರಿ ಗೋಪಾಲಗೌಡರ ಪರವಾಗಿದ್ದವರು ಮತ್ತು ಗೌಡರ ಆತ್ಮೀಯ ವಲಯದಲ್ಲಿದ್ದರು.
     ಸಮಾಜವಾದಿ ಕ್ರಾಂತಿಕಾರಿಯ ಯುವಕ #ಸುಕುಮಾರನ್ ಉಲ್ಲೇಖ ಹೊಸನಗರದ ಮಾಜಿ ಶಾಸಕರಾದ ಬಿ ಸ್ವಾಮಿರಾವ್ ಜೀವನ ವೃತ್ತಾಂತ ನಾನು ಹೇಳುವುದೆಲ್ಲಾ ಸತ್ಯ ಪುಸ್ತಕದಲ್ಲಿ ಉಲ್ಲೇಖವಾದದ್ದು ನೋಡಿ ಮತ್ತೆ ಸುಕುಮಾರ್ ಬಗ್ಗೆ ಬರೆಯಲು ಕಾರಣವಾಯಿತು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ