Skip to main content

Blog number 2300. ಎಸ್.ಚಂದ್ರಕಾಂತ್ ಶಿವಮೊಗ್ಗ ಜಿಲ್ಲೆಯ ಹಿರಿಯ ಪತ್ರಕರ್ತರು 74ರ ಹುಟ್ಟು ಹಬ್ಬದ ಶುಭಾಶಯಗಳು

#ಶಿವಮೊಗ್ಗದ_ಹಿರಿಯ_ಪತ್ರಕರ್ತ_ಎಸ್_ಚಂದ್ರಕಾಂತ್

#ಶಿವಮೊಗ್ಗ_ಟೈಮ್ಸ್_ಸಂಪಾದಕರು

#ರಾಜ್ಯೋತ್ಸವ_ಪ್ರಶಸ್ತಿ_ವಿಜೇತರು_ಮುಂದಿನ_ತಿಂಗಳು

#ಅಕ್ಟೋಬರ್_15_ಇವರ_74ನೇ_ಹುಟ್ಟು_ಹಬ್ಬ
 #ಶಿವಮೊಗ್ಗದಲ್ಲಿ_1978ರಲ್ಲಿ_ರಾಜ್ಯಮಟ್ಟದ_ಕಾರ್ಯನಿರತ_ಪತ್ರಕರ್ತರ_ಸಮ್ಮೇಳನ_ನಡೆಸಿದ್ದರು.

#ಕೇಂದ್ರ_ವಿದೇಶಾಂಗ_ಸಚಿವರಾಗಿದ್ದ_ವಾಜಪೇಯಿ_ಈ_ಸಮ್ಮೇಳನ_ಉದ್ಘಾಟಿಸಿದ್ದರು

#shimogatimes #ShivamoggaNews #PressConference #karnataka #pressclubbangalore #PressClub #stateworkingjournalist

  ಶಿವಮೊಗ್ಗದ ಹಿರಿಯ ಪತ್ರಕರ್ತರಾದ ಶಿವಮೊಗ್ಗ ಟೈಮ್ಸ್ ಸಂಪಾದಕರಾದ #ಎಸ್_ಚಂದ್ರಕಾಂತ್ 74ರ ಹುಟ್ಟು ಹಬ್ಬದ ಹೊಸ್ತಿನಲ್ಲಿದ್ದಾರೆ ಇವರ ಜನ್ಮ ದಿನಾಂಕ 15 ಅಕ್ಟೋಬರ್ 1951.
   ಎಸ್ ಚಂದ್ರಕಾಂತ್ ರಾಜ್ಯ ಪ್ರಶಸ್ತಿ ಪುರಸ್ಕೃತರು ಕೂಡ
ಇವರು 1978ರಲ್ಲಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿಗಳಾಗಿದ್ದರು ಆಗ ಶಿವಮೊಗ್ಗ ಜಿಲ್ಲಾ ಕಾರ್ಯ 
ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದವರು #ಶರಾವತಿ_ವಾರಪತ್ರಿಕೆ ಸಂಪಾದಕರಾದ ಮಲ್ಲಾರಾಧ್ಯರು.
  ಆಗ ಕರ್ನಾಟಕ ರಾಜ್ಯ ಕಾರ್ಯನಿರತಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದವರು ವಡ್ದರ್ಸೇ ರಘುರಾಮ್ ಶೆಟ್ಟರು ಇವರೆಲ್ಲರೂ ಸೇರಿ 1978 ರಲ್ಲಿ #ಶಿವಮೊಗ್ಗದಲ್ಲಿ_ರಾಜ್ಯಮಟ್ಟದ_ಕಾರ್ಯನಿರತ_ಪತ್ರಕರ್ತರ_ಸಮ್ಮೇಳನ ನಡೆಸಿದ್ದರು.
  ಆಗ ಕೇಂದ್ರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ #ವಾಜಪೇಯಿ ಅವರನ್ನು ಮತ್ತು ಕಾರ್ಮಿಕ ಸಚಿವರಾಗಿದ್ದ ರವೀಂದ್ರರನ್ನು ಆಹ್ವಾನಿಸಿದ್ದರು.
   ಇವರು ಶಿವಮೊಗ್ಗದಲ್ಲಿ ಎಸ್ ಎಸ್ ಎಲ್ ಸಿ ಓದುವಾಗ  ಆಗಿನ ಪತ್ರಕರ್ತರಾದ ಮಲ್ಲರಾಧ್ಯರ ಶರಾವತಿ ವಾರಪತ್ರಿಕೆ ಕಾರ್ಯಾಲಯಕ್ಕೆ ಹೋಗಿ ಅವರಿಗೆ ಕಾಫಿ ಸಿಗರೇಟು ತಂದುಕೊಟ್ಟು ಒಂದು ಪೇಜ್ ವರದಿ ಬರೆದು ಶಾಲೆಗೆ ಹೋಗುತ್ತಿದ್ದರಂತೆ.
  ಮಲ್ಲಾರಾಧ್ಯರು ಆ ಕಾಲದಲ್ಲಿ ಬಿಎ- ಎಲ್ ಎಲ್ ಬಿ ವ್ಯಾಸಂಗ ಮಾಡಿ ಮೈಸೂರಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದವರು ಅವರು ಶಿವಮೊಗ್ಗ ಜಿಲ್ಲೆಯ ಮೊದಲ ಪತ್ರಿಕೋದ್ಯಮ ಪದವಿ ಪಡೆದವರು ಅವರ ವಾರಪತ್ರಿಕೆ ಶರಾವತಿ ವಾರಪತ್ರಿಕೆ.
  1977 ರಲ್ಲಿ ನಾವಿಕ ಪತ್ರಿಕೆ ಪ್ರಾರಂಭಿಸಿದ ಚಂದ್ರಕಾಂತ್ ಸ್ವತಃ ವರದಿಗಾರರು ಸಂಪಾದಕರು ಆಗಿದ್ದರು ಜೊತೆಗೆ ಪತ್ರಿಕೆಗೆ ಅಕ್ಷರ ಜೋಡಿಸುವ ಪ್ರಿಂಟಿಂಗ್ ಪ್ರೆಸ್ ನಲ್ಲಿ ಅಕ್ಷರ ಜೋಡಿಸಿ, ಆಕಾಲದ ಪೆಡಲು ತುಳಿದು ಪ್ರಿಂಟ್ ಮಾಡುವ ಪ್ರಿಂಟಿಂಗ್ ಯಂತ್ರದಲ್ಲಿ ನಾವಿಕ ಪತ್ರಿಕೆ ಪ್ರಿಂಟ್ ಮಾಡಿ ನಂತರ ಸೈಕಲ್ ಮೇಲೆ ಗಲ್ಲಿ ಗಲ್ಲಿಯಲ್ಲಿ ವಿತರಣೆ ಕೂಡ ಮಾಡಿದವರು ಈ ರೀತಿ ಪತ್ರಿಕೆಯ ಎಲ್ಲಾ ಹಂತದ ಕೆಲಸ ಮಾಡಿದ ಅನುಭವ ಇವರದ್ದು.
  ಆಗ ನಾವಿಕ ಪತ್ರಿಕೆಯ ಸರ್ಕ್ಯುಲೇಷನ್ 500ರಷ್ಟಿತ್ತು,ಬಿಡಿ ಪತ್ರಿಕೆ ಬೆಲೆ 10 ಪೈಸೆ ಮತ್ತು ಮಾಸಿಕ ಚೆಂದ ಎರಡು ರೂಪಾಯಿಆಗ ಪತ್ರಿಕೆಯ ಸೈಜ್ ಕ್ರೌನ್ ಸಣ್ಣ ಆಕೃತಿ ಆಗಿತ್ತು.
  ನಂತರ ಸತತ 25 ವರ್ಷ ನಾವಿಕ ಪತ್ರಿಕೆ ಶಿವಮೊಗ್ಗ ನಗರದ ನಂಬರ್ ಒನ್ ಸರ್ಕ್ಯುಲೇಶನ್ ಪತ್ರಿಕೆ ಆಯ್ತು 10,000ಕ್ಕೂ ಹೆಚ್ಚು ಪ್ರತಿ ಪ್ರತಿದಿನ ಮುದ್ರಣ ಆಗುತ್ತಿತ್ತು.
  ಈಗ ಎಸ್. ಚಂದ್ರಕಾಂತ್ ಶಿವಮೊಗ್ಗ ಟೈಮ್ಸ್ ಪತ್ರಿಕೆಯ ಸಂಪಾದಕರು ಈ ಪತ್ರಿಕೆ ಕೂಡ ಶಿವಮೊಗ್ಗದ ಇವತ್ತಿನ ನಂಬರ್ ಒನ್ ಸರ್ಕ್ಯುಲೇಶನ್ ಪತ್ರಿಕೆ, ಇದು ಪ್ರತಿದಿನ 8,000 ಪ್ರತಿ ಅಚ್ಚಾಗುತ್ತಿದೆ.
   ಇವತ್ತಿನ ಶಿವಮೊಗ್ಗ ಟೈಮ್ಸ್ ಬಿಡಿ ಪ್ರತಿ ಬೆಲೆ ಎರಡು ರೂಪಾಯಿ, ಮಾಸಿಕ ಚಂದಾ 50 ರೂಪಾಯಿ.
  ಎಸ್ ಚಂದ್ರಕಾಂತ್ ರಾಜ್ಯ ಪ್ರಶಸ್ತಿ ಪುರಸ್ಕೃತರು ಕೂಡ
ಇವರು 1978ರಲ್ಲಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿಗಳಾಗಿದ್ದರು ಆಗ ಶಿವಮೊಗ್ಗ ಜಿಲ್ಲಾ ಕಾರ್ಯ 
ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದವರು ಶರಾವತಿ ವಾರಪತ್ರಿಕೆ ಸಂಪಾದಕರಾದ ಮಲ್ಲಾರಾಧ್ಯರು.
  ಆಗ ಕರ್ನಾಟಕ ರಾಜ್ಯ ಕಾರ್ಯನಿರತಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದವರು ವಡ್ದರ್ಸೇ ರಘುರಾಮ್ ಶೆಟ್ಟರು ಎಲ್ಲರೂ ಸೇರಿ 1978 ರಲ್ಲಿ ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತರ ಸಮ್ಮೇಳನ ನಡೆಸಿದ್ದರು.
  ಆಗ ಕೇಂದ್ರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ವಾಜಪೇಯಿ ಅವರನ್ನು ಮತ್ತು ಕಾರ್ಮಿಕ ಸಚಿವರಾಗಿದ್ದ ರವೀಂದ್ರರನ್ನು ಆಹ್ವಾನಿಸಿದ್ದರು.
  ಅವತ್ತು ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಪ್ರದಾನ ಕಾರ್ಯದರ್ಶಿ ಬಿವಿ ಮೂರ್ತಿಯವರು ವಿಶ್ವ ಪತ್ರಿಕೆಗಳ ಪ್ರದರ್ಶನ ಹಮ್ಮಿಕೊಂಡಿದ್ದರು.
   ಎರಡು ದಿನದ ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತರ ಸಮಾವೇಶ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದಿತ್ತು. ವಾಜಪೇಯಿ ಅವರ ಉಪಸ್ಥಿತಿ ಈ ಸಮ್ಮೇಳನಕ್ಕೆ ವಿಶೇಷ ಕಳೆತಂದಿತ್ತು.
  ತುರ್ತು ಪರಿಸ್ಥಿತಿಯ ನಂತರದ ಜನತಾ ಪಕ್ಷದ ಸರ್ಕಾರದಲ್ಲಿ ಸನ್ಮಾನ್ಯ ವಾಜಪೇಯಿ ಅವರು ವಿದೇಶಾಂಗ ಮಂತ್ರಿಗಳಾಗಿದ್ದರು ಅವರನ್ನ ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ಸಮಾವೇಶಕ್ಕೆ ಕರೆತಂದದ್ದು ದೊಡ್ಡ ಸಂಚಲನದ ಸುದ್ದಿ ಆಗಿತ್ತು.
  ಈ ಸಮಾವೇಶದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಎಸ್ ಚಂದ್ರಕಾಂತ್ ಅವರ ಶ್ರಮ ಕಾರ್ಯಕ್ರಮದ ಯಶಸ್ವಿಗೆ ಕಾರಣ ಆಗಿತ್ತು.
  ಅವತ್ತು ಶಿವಮೊಗ್ಗದಲ್ಲಿ ಜಾಗೃತಿ -ಸಹ್ಯಾದ್ರಿ - ಮಿಂಚು - ನಾಗೇಂದ್ರರಾವ್ ಎಚ್ಚರಿಕೆ -ನಾವಿಕ -ಜನಾರ್ಧನ್ ರಾಯರ ಛಲಂಧಂಕಮಲ್ಲ- ಏಕಲವ್ಯ - ಮಲ್ಲಾರಾಧ್ಯರ ಶರಾವತಿ ವಾರಪತ್ರಿಕೆ- ರಾಮಪ್ಪನವರ ಶಿವಮೊಗ್ಗ ಟೈಮ್ಸ್ - ಭೂಪಾಳಂ ಚಂದ್ರಶೇಖರ್ ರವರ ಮಲೆನಾಡು ವಾರ್ತೆ ಪ್ರಮುಖ ಪತ್ರಿಕೆಗಳಾಗಿತ್ತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...