Skip to main content

Blog number 2297. ಸಾಗರದಲ್ಲಿನ ಮಲೆನಾಡು ಗಿಡ್ಡ ರೈತ ಉತ್ಪಾದಕರ ಕಂಪನಿ

#ಮಲೆನಾಡು_ಗಿಡ್ಡ_ದನದ_ತುಪ್ಪ_ಸಾಗರದಲ್ಲಿ

#ಬ್ರಾಸಂ_ಸಮೀಪದ_ಡಾ_ಮಂಜಪ್ಪ_ಬಿಲ್ಡಿಂಗ್

#ಈಗ_ಮಲೆನಾಡು_ಗಿಡ್ಡ_ರೈತ_ಉತ್ಪಾದಕರ_ಕಂಪನಿ

#ನಾಗೇಂದ್ರಸಾಗರ್_ಮತ್ತು_ರಾಧಾಕೃಷ್ಣಬಂದಗದ್ದೆ_ಮುಖ್ಯಪ್ರವರ್ತಕರು

#ಪ್ರಾಯೋಜಕರು_ಪಶುಪಾಲನ_ಮತ್ತು_ಪಶುವೈದ್ಯ_ಸೇವಾ_ಇಲಾಖೆ_ಶಿವಮೊಗ್ಗ.

#pureghee #malenadugidda #organicfarming #sagara #farmerscompany 

  ಅವಸಾನದ ಅಂಚು ತಲುಪಿರುವ ಮಲೆನಾಡು ಗಿಡ್ಡ ಗೋವಿನ ತಳಿ ಸಂರಕ್ಷಣೆ ಮಾಡಲು ಮಲೆನಾಡು ಗಿಡ್ಡ ರೈತ ಉತ್ಪಾದಕರ ಕಂಪನಿ ಶಿವಮೊಗ್ಗ ಜಿಲ್ಲೆಯ ಸಾಗರಪೇಟೆಯಲ್ಲಿ ಕಾರ್ಯಾರಂಭ ಮಾಡಿದೆ.
  ಇದಕ್ಕಾಗಿ ಪ್ರಗತಿಪರ ಗೆಳೆಯರಾದ ನಾಗೇಂದ್ರ ಸಾಗರ್ ರಾಧಾಕೃಷ್ಣ ಬಂದಗದ್ದೆ ಕಟ್ಟಿಬದ್ಧರಾಗಿದ್ದಾರೆ, ಇವರ ಒಳ್ಳೆಯ ಉದ್ದೇಶಕ್ಕಾಗಿ ಸಾಗರದ ಖ್ಯಾತ ವೈದ್ಯರಾಗಿದ್ದ ಡಾಕ್ಟರ್ ಮಂಜಪ್ಪನವರ ಪುತ್ರ ಸಂಜಯ್ ಪಾಲಿಟೆಕ್ನಿಕ್ ಅಧ್ಯಾಪಕರಾದ ರವಿಪ್ರಕಾಶ್ ಜೋಸೆಫ್ ನಗರದ ಚರ್ಚ ರಸ್ತೆಯ ತಮ್ಮ ಹಳೆ ಮನೆಯನ್ನು ನೀಡಿದ್ದಾರೆ ಇದರ ಲ್ಯಾಂಡ್ ಮಾರ್ಕ್ ಬ್ರಾಸಂ ಹತ್ತಿರ.
   ಇಲ್ಲಿ ಶುದ್ಧ ಮಲೆನಾಡು ಗಿಡ್ಡದ ತುಪ್ಪದ ಜೊತೆ ಗಾಣದಿಂದ ತಯಾರಿಸಿದ ಖಾದ್ಯ ತೈಲಗಳು, ಉಪ್ಪಿನಕಾಯಿ, ಹಪ್ಪಳ, ಅರಿಶಿಣ ಪುಡಿ, ಸೀಗೆಪುಡಿ, ಗೋದಿ ಹಿಟ್ಟು,
 ಜೋಳದ ಹಿಟ್ಟು, ಅಕ್ಕಿ ಹಿಟ್ಟು, ರಾಗಿ ಹಿಟ್ಟು,ದೇಸಿ ತಳಿಯ ಕೆಂಪಕ್ಕಿ, ಸೆಮಿ ಪಾಲೀಶ್ ಅಕ್ಕಿ ಇತ್ಯಾದಿ ದೊರೆಯುತ್ತದೆ.    
    ಮುಂದಿನ ದಿನಗಳಲ್ಲಿ ಸಾವಯವ ತರಕಾರಿ, ಸೊಪ್ಪು ಮತ್ತು ಹಣ್ಣು ಮತ್ತಿತರ ವಸ್ತುಗಳನ್ನು ಮಾರಾಟಕ್ಕಿಡುವ ಉದ್ದೇಶ ಈ ಸಂಸ್ಥೆಯದಾಗಿದೆ.
  ಮಲೆನಾಡು ಗಿಡ್ಡದ ಗೋತಳಿ ಅವಸಾನದ ಅಂಚಿನಲ್ಲಿದೆ, ಸಣ್ಣ ಗಾತ್ರದ ಈ ಹಸುಗಳು ನೀಡುವ ಅತ್ಯಲ್ಪ ಹಾಲಿನಿಂದ ತುಪ್ಪ ತಯಾರಿಸುವುದು ಸುಲಭ ಅಲ್ಲ.
    ಅದು ದುಬಾರಿ ಕೂಡ ಬೇರೆ ಕಡೆ ಮಲೆನಾಡು ಗಿಡ್ಡದ ತುಪ್ಪದ ಬೆಲೆ ಕಿಲೋಗೆ  ರೂ.3,000 ತನಕ ಇದೆ ಆದರೆ ಇಲ್ಲಿ ಮಲೆನಾಡು ಗಿಡ್ಡದ ತುಪ್ಪ ಕೆಜಿಗೆ 1700 ರಂತೆ ರೈತರಿಂದ ನೇರವಾಗಿ ಖರೀದಿಸಿ ಲಾಭವಿಲ್ಲದೆ ಮಾರಾಟಕ್ಕಿಟ್ಟಿದ್ದಾರೆ.
  ನಾನು ಇವತ್ತು ಇಲ್ಲಿ ಅಪರೂಪದ ಅಕ್ಕಿ ತಳಿಯಾದ, ಒಂದು ಕಾಲದಲ್ಲಿ ಮಲೆನಾಡಿನ ಜನಪ್ರಿಯವಾಗಿದ್ದ ಸಣ್ಣವಾಳ್ಯ ಅಕ್ಕಿ (ಸೆಮಿ ಪಾಲಿಶ್) ಮತ್ತು ಕೆಂಪಕ್ಕಿ ಖರೀದಿಸಿದೆ ಜೊತೆಗೆ ಗಾಣದ ಎಳ್ಳು ಎಣ್ಣೆ ಹಾಗೂ ಮಲೆನಾಡು ಗಿಡ್ಡದ ತುಪ್ಪ ಖರೀದಿಸಿದೆ.
    ಎಲ್ಲಾ ವಸ್ತುಗಳು ಸೂಪರ್ ಕ್ವಾಲಿಟಿ ಹೊಂದಿದೆ ನನಗೆ ತೃಪ್ತಿ ತಂದಿದೆ.
  ಮಲೆನಾಡು ಗಿಡ್ಡದ ತುಪ್ಪ ಬೇಕಾದರೆ ಮೊದಲೇ ಆರ್ಡರ್ ಮಾಡಬೇಕು ಈ ಶುದ್ಧ ತುಪ್ಪದ ರುಚಿ ಮತ್ತು ಘಮ ನೋಡಿ ಒಂದು ಕೆಜಿ ಮಲೆನಾಡು ಗಿಡ್ಡ ತುಪ್ಪಕ್ಕಾಗಿ ಆರ್ಡರ್ ಮಾಡಿದ್ದೇನೆ.
  ಈ ಸಂಸ್ಥೆಯ ಬಗ್ಗೆ ಇಲ್ಲಿ ಮಾರಾಟಕ್ಕೆ ಸಿಗುವ ವಸ್ತುಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಮತ್ತು ಈ ಸಂಸ್ಥೆಯ ಜೊತೆ ಕೈಜೋಡಿಸಿ ಸಹಕರಿಸುವ ಆಸಕ್ತಿ ಇರುವವರು ನೇರವಾಗಿ ಈ ಸಂಸ್ಥೆಯ ಮುಖ್ಯ ಪ್ರವರ್ತಕರಾದ ನಾಗೇಂದ್ರ ಸಾಗರ್ ಅವರ ಫೋನ್ ನಂಬರ್ 9449501613 ಸಂಪರ್ಕಿಸಬೇಕಾಗಿ ವಿನಂತಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...