Skip to main content

Blog number 2293. ಅವಸಾನದ ಅಂಚಿನಲ್ಲಿರುವ ಮಲೆನಾಡಿನ ಗೋವಿನ ತಳಿ

#ಮಲೆನಾಡು_ಗಿಡ್ಡ_ತಳಿ_ಉಳಿದೀತೆ?

#ಮಲೆನಾಡು_ಗಿಡ್ಡ_ತಳಿ_ಅವಸಾನದ_ಅಂಚಿನಲ್ಲಿದೆ.

#ಪಶ್ಚಿಮ_ಘಟ್ಟದ_ಶಿವಮೊಗ್ಗ_ಜಿಲ್ಲೆ_ಉತ್ತರ_ಕನ್ನಡ_ಜಿಲ್ಲೆ_ಚಿಕ್ಕಮಗಳೂರು_ಜಿಲ್ಲೆಯ

#ಈ_ವಿಶೇಷ_ತಳಿಯ_ಜಾನುವಾರಿಗೆ_ಅವುಗಳ_ಸಣ್ಣ_ಗಾತ್ರಕ್ಕಾಗಿ_ಸ್ಥಳಿಯರು_ಮಲೆನಾಡು_ಗಿಡ್ಡ   

#ಎಂದೇ_ಕರೆಯುತ್ತಿದ್ದರಿಂದ_ಇದೇ_ಹೆಸರು_ಈ_ತಳಿಗೆ_ಉಳಿಯಿತು

#ನ್ಯಾಷನಲ್_ಬ್ಯೂರೋ_ಆಫ್_ಎನಿಮಲ್_ಜೆನಿಟಿಕ್_ರಿಸೋರ್ಸ್ಸ್_ಪಟ್ಟಿಯಲ್ಲಿ_ಕೂಡ 

#ಮಲೆನಾಡುಗಿಡ್ಡ_ಎಂದೇ_ನಮೂದಾನಿದೆ

#malenadugidda #cowbreed #desicow #dairy 


   ಪಶ್ಚಿಮಘಟ್ಟದ ಶಿವಮೊಗ್ಗ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆಯ ಈ ವಿಶೇಷ ತಳಿಯ ಜಾನುವಾರಿಗೆ ಅವುಗಳ ಸಣ್ಣ ಗಾತ್ರಕ್ಕಾಗಿ ಸ್ಥಳಿಯರು #ಮಲೆನಾಡು_ಗಿಡ್ಡ   ಎಂದೇ ಕರೆಯುತ್ತಿದ್ದರಿಂದ ಇದೇ ಹೆಸರು ಈ ತಳಿಗೆ ಉಳಿಯಿತು ಮತ್ತು ನ್ಯಾಷನಲ್ ಬ್ಯೂರೋ ಆಫ್ ಎನಿಮಲ್ ಜೆನಿಟಿಕ್ ರಿಸೋರ್ಸ್ಸ್ ಪಟ್ಟಿಯಲ್ಲಿ ಕೂಡ ಮಲೆನಾಡು ಗಿಡ್ಡ ತಳಿ ಎಂದೇ ನಮೂದಾಗಿದೆ....
  ನಮ್ಮ ಬಾಲ್ಯದಲ್ಲಿ ನಮ್ಮ ಕೊಟ್ಟೆಗೆ ತುಂಬಾ ಮಲೆನಾಡು ಗಿಡ್ದ ಜಾನುವಾರುಗಳೇ ತುಂಬಿತ್ತು ಅದರಲ್ಲಿ ಗಿಡ್ಡಿ ಎಂಬ ದನ ತುಂಬಾ ಸಾದು ಅದರ ಎದುರು ಕುಳಿತರೆ ನಮ್ಮ ತಲೆ ನೆಕ್ಕಲು ಪ್ರಾರಂಬಿಸಿ ಕೆಚ್ಚಲಿನಲ್ಲಿ ಹಾಲು ಸುರಿಸುತ್ತಿತ್ತು ಇದರ ಸ್ವಭಾವಕ್ಕೆ ವಿರುದ್ದವಾದ ಬೋಳಿ ಎಂಬ ತುಡುಗಿನ ದನವೂ ಇತ್ತು, ಬೋಳಿ ಅಂತ ಹೆಸರು ಬರಲು ಕಾರಣ ಅದಕ್ಕೆ ಮುರುಟಿಕೊಂಡ ಚಿಕ್ಕ ಕೋಡುಗಳು.
  ಆಗೆಲ್ಲ ಈಗಿನ ಕಾಲದಂತ ಬೇಲಿಗಳು ಅಪರೂಪ ರೈತರು ಕಾಡಿನಿಂದ ಮರದ ಗೂಟ, ಬಳ್ಳಿ, ಪರಗಿ ಹಣ್ಣಿನ ಮುಳ್ಳು , ಬಿದಿರು ಮುಳ್ಳು ಸಂಗ್ರಹಿಸಿ ಎತ್ತಿನ ಗಾಡಿಯಲ್ಲಿ ತಂದು ಪ್ರತಿ ವರ್ಷ ಬೇಲಿ ಕಟ್ಟುತ್ತಿದ್ದರು ಅಂತಹ ಬೇಲಿ ಹಾರಿ ನಮ್ಮ ಬೋಳಿ ದನ ಪಸಲು ತಿನ್ನುತ್ತಿತ್ತು, ಏನೇ ಮಾಡಿದರೂ ಅದನ್ನು ಹಿಡಿಯಲು ಸಾಧ್ಯವೇ ಆಗುತ್ತಿರಲಿಲ್ಲ.
   ಮನೆಯಲ್ಲೂ ನಮ್ಮ ತಾಯಿ ಬಿಟ್ಟು ಬೇರೆಯವರಿಗೆ ಹಾಲು ಕರೆಯಲು ಬಿಡುತ್ತಿರಲಿಲ್ಲ,ಒದೆಯುವ ಹವ್ಯಾಸ ಅದರದ್ದು ಒಮ್ಮೆ ನಮ್ಮ ಊರಿನ ಬಾಬುಲ್ ಸಾಹೇಬರ ತಂದೆ ನಮ್ಮ ಮನೆ ಹತ್ತಿರ ಬಂದು ನಿಮ್ಮ ಬೋಳಿ ದನ ಬಂದೋ ಬಸ್ತು ಮಾಡ್ತಿರೋ ಇಲ್ವೋ? ಅಂತ ಗಲಾಟೆ ಶುರು ಮಾಡಿದ್ದರು.
  ಪ್ರತಿದಿನ ಸಂಜೆ ನಮ್ಮ ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಕಟ್ಟುವ ಕೆಲಸ ನನ್ನದೆ ಆದ್ದರಿಂದ ಬೋಳಿ ದನ ನಾನು ಕಟ್ಟಿ ಹಾಕಿದ್ದ ನೆನಪು ಆದರೆ ಸಾಹೇಬರು ನನ್ನ ಸಮರ್ಥನೆ ಒಪ್ಪಲೇ ಇಲ್ಲ "ನಡಿ ತೋರಿಸು ನಿನ್ನ ಕೊಟ್ಟಿಗೆ" ಅಂದಾಗ ಅವರನ್ನು ನಮ್ಮ ಕೊಟ್ಟಿಗೆಗೆ ಕರೆದುಕೊಂಡು ಹೋಗಿದ್ದೆ.
  ಅಲ್ಲಿ ನಮ್ಮ ಬೋಳಿ ಒಣ ಹುಲ್ಲು ಮೆಲಕು ಹಾಕುತ್ತಾ ಮಲಗಿತ್ತು ಇದನ್ನು ನೋಡಿ ಸಾಹೇಬರು ಈಗಷ್ಟೆ ಬೋಳಿ ದನ ಹಿಡಿದು ಕಟ್ಟಿಹಾಕಿದ್ದೆ ಅಧ್ಯಾವುದು? ಅಂತ ತಲೆ ಕೆರೆದು ಕೊಂಡರು ಅವರು ಹಿಡಿದು ಹಾಕಿದ್ದು ನಮ್ಮ ಬೋಳಿ ತದ್ರೂಪದ ಬೇರೆ ದನ.
 ಶರಾವತಿ ನದಿ ಆಣೆಕಟ್ಟಿನಿಂದ ನಿರಾಶ್ರಿತರಾದ ಕುಟುಂಬಗಳು ಬೇರೆ ಊರಿಗೆ ಸ್ಥಳಾಂತರ ಆಗುವಾಗ ಈ ಮಲೆನಾಡು ಗಿಡ್ದ ಸ್ಥಳಾಂತರಕ್ಕೆ ತುಂಬಾ ಕಷ್ಟ ಪಟ್ಟಿದ್ದರು ಅವುಗಳಲ್ಲಿ ಸ್ಥಳಾಂತರಿಸಲು ಸಾಧ್ಯವಾಗದೆ ಉಳಿದದ್ದು ಆಣೆ ಕಟ್ಟಿನ ಹಿನ್ನಿರಿನ ನಡುಗಡ್ಡೆಗಳಲ್ಲಿ ಕಾಡು ದನಗಳಾಗಿ ಉಳಿದುಬಿಟ್ಟಿದೆ.
   ಆಗೆಲ್ಲ ಬೆಳಿಗ್ಗೆ ಹಾಲು ಕರೆದು ಕೊಟ್ಟಿಗೆಯಿಂದ ಹೊರಬಿಟ್ಟರೆ ಕಾಡಿನಲ್ಲಿ ಹುಲ್ಲು ಮೇಯ್ದು ಸಂಜೆ ಕೊಟ್ಟಿಗೆ ಸೇರಿ ಹಾಲು ನೀಡುವ ಮಲೆನಾಡು ಗಿಡ್ಡ ದನಗಳು ಕೆಲವೊಮ್ಮೆ ಕಾಡಿನಲ್ಲಿ ಕರ ಹಾಕಿದರೆ ಮರುದಿನ ಕರುವಿನ ಜೊತೆ ಊರು ಸೇರುವ ಮಲೆನಾಡು ಗಿಡ್ದ ತಾಯಿ ಕರು ನೋಡುವುದೇ ಒಂದು ಸೊಗಸು ಆಗಿರುತ್ತಿತ್ತು.
  ಈಗ ಮಲೆನಾಡು ಗಿಡ್ದ ತಳಿಯೂ ಇಲ್ಲ ಕೊಟ್ಟಿಗೆಯೂ ಇಲ್ಲ ನಂದಿನಿ ಹಾಲು ಹಳ್ಳಿಯ ಮೂಲೆ ಮೂಲೆಗೂ ಬಂದಿದೆ.
  1990 ರಲ್ಲಿ ಈ ಮಲೆನಾಡು ಗಿಡ್ಡದಿಂದ ಪ್ರಯೋಜನ ಇಲ್ಲ ಮಲೆನಾಡು ಗಿಡ್ದಕ್ಕೆ ಕೃತಕ ಗರ್ಭಧಾರಣೆ ಮಾಡಿ ಜೆರ್ಸಿ ತಳಿ ಅಭಿವೃದ್ಧಿ ಮಾಡಿ ಹಾಲಿನ ಉತ್ಪಾದನೆಯಿಂದ ಲಾಭ ಪಡೆಯಲು ರೈತರಿಗೆ ಪ್ರೋತ್ಸಾಹಿಸುವ ನಮ್ಮ ಊರಿನ ಮುಂಬಾಳಿನ ಗೋಕುಲ್ ಪಾರಂನ ಫಾದರ್ ಡಾಕ್ಟರ್ ಜೋಸೆಪ್ ಯೋಜನೆಯೊಂದು ಪ್ರಾರಂಬಿಸಿ ಉಚಿತ ಕೃತಕದಾರಣೆ ಕೇಂದ್ರ ಪ್ರಾರಂಬಿಸಿದ್ದಾಗ ನಾನು #ಮಲೆನಾಡು_ಗಿಡ್ದ_ತಳಿ_ಉಳಿಯಲಿ ಎಂಬ ಒಕ್ಕಣೆಯ ಕರ ಪತ್ರ ಪ್ರಕಟಿಸಿ ಹಂಚಿದ್ದೆ.
  ಈಗ ದೇಶಿ ತಳಿ ಸಂವರ್ಧನಾ ಕಾರ್ಯಕ್ರಮ ಸರ್ಕಾರ ಘೋಷಿಸಿ ಕೆಲ ವರ್ಷಗಳಾಗಿದೆ ಆದರೆ ರಾಷ್ಟ್ರೀಕೃತ ಬ್ಯಾಂಕ್ ಗಳು ದೇಶಿ ತಳಿ ಮಲೆನಾಡು ಗಿಡ್ಡ ಸಾಕಲು ಸಾಲ ನೀಡುವುದಿಲ್ಲ !!.
  ಪಶ್ಚಿಮ ಘಟ್ಟದ ಶಿವಮೊಗ್ಗ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆಯ ಈ ವಿಶೇಷ ತಳಿಯ ಜಾನುವಾರಿಗೆ ಅವುಗಳ ಸಣ್ಣ ಆಕೃತಿಗಾಗಿ ಸ್ಥಳಿಯರು #ಮಲೆನಾಡು_ಗಿಡ್ಡ   ಎಂದೇ ಕರೆಯುತ್ತಿದ್ದರಿಂದ ಇದೇ ಹೆಸರು ಈ ತಳಿಗೆ ಉಳಿಯಿತು ಮತ್ತು ನ್ಯಾಷನಲ್ ಬ್ಯೂರೋ ಆಫ್ ಎನಿಮಲ್ ಜೆನಿಟಿಕ್ ರಿಸೋರ್ಸ್ಸ್ ಪಟ್ಟಿಯಲ್ಲಿ ಕೂಡ ಮಲೆನಾಡು ಗಿಡ್ಡ ತಳಿ ಎಂದೇ ನಮೂದಾಗಿದೆ.
   ಮನುಷ್ಯ ದೇಹಕ್ಕೆ ಬೇಕಾದ ಲ್ಯಾಕ್ಟೋಪೆರಿಸ್ ಈ ತಳಿಯಲ್ಲಿ ಯಥೇಚ್ಚವಾಗಿರುವುದು, ಇದರ ಸಂಗೋಪನ ವೆಚ್ಚ ಅತ್ಯಂತ ಕಡಿಮೆ, ಹೆಚ್ಚು ವರ್ಷ ಬದುಕುವ ಹೆಚ್ಚು ಕರು ಹಾಕುವ ಈ ತಳಿಯ ಸಂರಕ್ಷಣೆಗೆ ಸಕಾ೯ರ ಸಂಘ ಸಂಸ್ಥೆಗಳು ಮತ್ತು ಮಠಾದೀಶರು ಹೆಚ್ಚು ಪ್ರಚಾರ ನೀಡುತ್ತಿದ್ದಾರೆ.
  ಆದರೆ 2007ರಲ್ಲಿ ಜಾನುವಾರು ಗಣತಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 6 ಲಕ್ಷದಷ್ಟಿದ್ದ ಮಲೆನಾಡು ಗಿಡ್ದ,2012ರ ಜಾನುವಾರು ಸಮೀಕ್ಷೆಯಲ್ಲಿ 4.45 ಲಕ್ಷಕ್ಕೆ ಇಳಿದಿದೆ ಅಷ್ಟೇ ಅಲ್ಲ ಪ್ರತಿ ವರ್ಷ 50 ಸಾವಿರ ಕಡಿಮೆ ಆಗುತ್ತಿದೆ ಎಂಬ ಮಾಹಿತಿ ಇದೆ.
  ಇದಕ್ಕಾಗಿ ಮಲೆನಾಡು ಗಿಡ್ಡ ಸಂಗೋಪನೆಗೆ ಆಸಕ್ತರು ಮುಂದೆ ಬರುತ್ತಿದ್ದಾರೆ, ಈ ತಳಿಯ ಮೂತ್ರ, ಸಗಣಿ ಕೂಡ ಸದ್ಬಳಕೆ ಮಾಡುತ್ತಾರೆ.
   ಗೆಳೆಯರು ಹೇಳಿದ್ದು ಕೇಳಿ ಆಶ್ಚಯ೯ ಆಯಿತು ಏನೆಂದರೆ ಬ್ಯಾಂಕ್ ಗಳು ಡೈರಿಗಾಗಿ ಈ ತಳಿ ಸಾಗಾಣಿಕೆಗಾಗಿ ಸಾಲ ಮಾತ್ರ ನೀಡುವುದಿಲ್ಲವಂತೆ, ಮಲೆನಾಡು ಗಿಡ್ಡ ತಳಿ ಸಂರಕ್ಷಣೆ ಇತ್ಯಾದಿಗಳೆಲ್ಲ ಬರೀ ಪ್ರಚಾರಕ್ಕಾಗಿ ಸೀಮಿತವಾಗಿದೆ ಎಂಬುದು ಇದರಲ್ಲಿ ಅರ್ಥವಾಗುತ್ತದೆ, ಇದರಿಂದಲೇ ಉತ್ಕೃಷ್ಟವಾದ ನಮ್ಮ ಮಲೆನಾಡು ಗಿಡ್ಡ ತಳಿ ಕಣ್ಮರೆ ಆಗುತ್ತಿದೆ.
  ಮೈಸೂರಿನ ಎ.ಪಿ.ಚಂದ್ರಶೇಖರ್ ಮಲೆನಾಡು ಗಿಡ್ದ ಪುಸ್ತಕ ಪ್ರಕಟ ಮಾಡಿದ್ದಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...