Skip to main content

Blog number 2287. ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯೋತ್ಸವ

#ಆನಂದಪುರಂ_ಹೋಬಳಿ_ಬ್ರಹ್ಮಶ್ರೀ_ನಾರಾಯಣಗುರು_ಈಡಿಗ_ಸಂಘ

#ಪ್ರಜ್ಞಾವಂತ_ಯುವಕರ_ಸಂಘಟನೆ

#ಹೊಸ_ಅನುಭವ_ಹೊಸ_ತಲೆಮಾರಿನ_ವಿದ್ಯಾವಂತ_ಯುವಕರಿಂದ...

#narayanguru #anandapuram #sagara #idigasanga #janardhanpujari #kagoduthimmappa 


   ಈ ವಿಚಾರ ಯಾಕೆಂದರೆ ಸಾಮಾನ್ಯವಾಗಿ ನಾನು ನನ್ನ ತಂದೆ ತಾಯಿ ಹೆಸರಲ್ಲಿ ಕಟ್ಟಿಸಿದ ಕಲ್ಯಾಣ ಮಂಟಪ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ಅನೇಕ ಜನಪರ ಕಾಳಜಿಯ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡುತ್ತೇನೆ
  ಇದೇ ರೀತಿ ಸ್ಥಳೀಯರಿಗೆ ಆರ್ಥಿಕ ಸಹಾಯವಾಗಲಿ ಎಂಬ ದೃಷ್ಟಿಯಿಂದ ಅವರ ವಿವಾಹ ಇತ್ಯಾದಿ ಕಾರ್ಯಕ್ರಮಗಳಿಗೆ ಕೂಡ ವಿನಾಯಿತಿ ದರದಲ್ಲಿ ಕೆಲವೊಮ್ಮೆ ಸಂಪೂರ್ಣ ಉಚಿತವಾಗಿ ನೀಡುತ್ತೇನೆ
 ಆದರೆ ಕಾರ್ಯಕ್ರಮದ ನಂತರ ಅವರ್ಯಾರು ಕೃತಜ್ಞತೆ ಬಂದು ಹೇಳುವ ವ್ಯವಧಾನದಲ್ಲಿ ಇರುವುದಿಲ್ಲ, ಸ್ವಲ್ಪ ದಿನದಲ್ಲಿ ಮರೆತುಬಿಡುತ್ತಾರೆ ಇನ್ನು ಕೆಲವರು ಉಚಿತ ರಿಯಾಯಿತಿ ಪಡೆದು ಅಲ್ಲಿ ಬಹಳ ದುಡ್ಡು ಕೇಳುತ್ತಾರೆ ಅಂತ  ಅಪವಾದ ಕೂಡ ಮಾಡುತ್ತಾರೆ ಮತ್ತೆ ಕೆಲವರು ಹಣ ಬಾಕಿ ಕೊಡದೆಯೂ ಹೆಚ್ಚು ಹಣ ಪಾವತಿ ಮಾಡಿದ್ದೆವೆಂದು ಅಪಪ್ರಚಾರ ಮಾಡುತ್ತಾರೆ ಇಂತದ್ದೆಲ್ಲ ಬೇಸರ ಮೂಡಿಸದೇ ಇರುವುದಿಲ್ಲ.
  ಇಡೀ ಜಿಲ್ಲೆಯಲ್ಲೇ ನನ್ನಷ್ಟು ಕಡಿಮೆ ಹಣ ಪಡೆಯುವ ಕಲ್ಯಾಣ ಮಂಟಪ ಬೇರಾವುದೂ ಇಲ್ಲ ಅನ್ನುವವರೂ ಇದ್ದಾರೆ.
  ಕಳೆದ ಬುಧವಾರ ದಿನಾಂಕ 25 ಸೆಪ್ಟೆಂಬರ್ 2024 ನಮ್ಮ ಕಲ್ಯಾಣ ಮಂಟಪಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತ್ಯೋತ್ಸವವನ್ನು ಆನಂದಪುರಂ ಹೋಬಳಿಯ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ಸಂಘದಿಂದ ಹಮ್ಮಿಕೊಂಡಿದ್ದರು.
   ಇದಕ್ಕೆ ನಾನು ಸಂಘಟನೆಯವರಿಗೆ ಕೇವಲ ಸ್ವಚ್ಛತೆಯ ಮತ್ತು ವಿದ್ಯುತ್ ಬಿಲ್ ಮಾತ್ರ ಪಾವತಿ ಮಾಡಲು ತಿಳಿಸಿದ್ದೆ.
  ಕಾರ್ಯಕ್ರಮದ ನಂತರ ನನ್ನ ಕಚೇರಿಗೆ ಬಂದ ಈ ಸಂಘಟನೆಯ ಯುವಕರು ಕಾರ್ಮಿಕರ ಸಂಬಳ ಪಾವತಿ ಮಾಡಿ ಕಲ್ಯಾಣ ಮಂಟಪದ ವಿದ್ಯುತ್ ಬಿಲ್ ರೂ 500 ನೀಡಲು ಬಂದಿದ್ದರು.
   ಆ ಸಂದರ್ಭದಲ್ಲಿ ನನ್ನ ಸಹೋದರ ನಾಗರಾಜಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು ಮತ್ತು ನನಗೆ ಶಿವಗಿರಿ ದರ್ಶನ ಎಂಬ ಶ್ರೀ ನೆಕ್ಕಿದಪುಣಿ ಗೋಪಾಲಕೃಷ್ಣ ಬರೆದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಬದುಕು ಮತ್ತು ಸಾಧನೆಗಳ ಸಂಕ್ಷಿಪ್ತ ಬರಹದ ಪುಸ್ತಕ ನೀಡಿದ್ದಾರೆ.
  ಈ ಯುವಕರ ಕೃತಜ್ಞತೆ ಸಮರ್ಪಣೆ ನೋಡಿ ನನಗೆ ಅತ್ಯಂತ ಖುಷಿಯಾಯಿತು, ಹಿಂದಿನ ಎಷ್ಟೋ ಸಂದರ್ಭದಲ್ಲಿ ನಮ್ಮ ಕಲ್ಯಾಣಮಂಟಪದ ವಿಚಾರದಲ್ಲಿ ಇಂತಹ ನೆನಪಿಟ್ಟುಕೊಳ್ಳುವಂತಹ ಘಟನೆ ನಡೆದೇ ಇರಲಿಲ್ಲ.
  ಜೊತೆಗೆ ಯುವಕರು ನಿಮ್ಮ ಸಹಾಯ ನಮ್ಮ ಕಾರ್ಯಕ್ರಮಕ್ಕೆ ದೊಡ್ಡ ಉಪಕಾರ ಆಯ್ತು ಅನ್ನುವ ಮಾತುಗಳು ಕೂಡ ಹೇಳಿದರು.
  ಇವರೆಲ್ಲರೂ ನಿತ್ಯ ನನ್ನ ಪೇಸ್ ಬುಕ್ ಓದುಗರು ಮತ್ತು ನನ್ನ ಬರವಣಿಗೆಯಿಂದ ದಿನಕ್ಕೊಂದು ಹೊಸ ವಿಷಯ ತಿಳಿಯುತ್ತದೆ ಎಂದು ಆತ್ಮೀಯವಾಗಿ ತಿಳಿಸಿದರು ಇವರೆಲ್ಲರಿಗೂ ನಮ್ಮ ಮಲ್ಲಿಕಾ ವೆಜ್  ಚಹಾದ ಆತಿಥ್ಯದ ನಂತರ ಬಿಳ್ಕೊಟ್ಟೆ.
 ನಮ್ಮ ಆನಂದಪುರಂ ಹೋಬಳಿಯ ಈ ಎಲ್ಲಾ ಯುವಕರ ತಂದೆಯಂದಿರು ನನಗೆ ಚಿರಪರಿಚಿತರು ಇದಕ್ಕೆ ಕಾರಣ ನಾನು ಈ ಭಾಗದ ರೈಸ್ ಮಿಲ್ ಮಾಲಿಕನಾಗಿದ್ದು ಮತ್ತು 1995 ರಿಂದ 2000 ಇಸವಿ ತನಕ ನಾನು ಈ ಆನಂದಪುರಂ ಹೋಬಳಿಯ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ.
   ಆ ಸಮಯದಲ್ಲಿ ಇವರೆಲ್ಲ ಐದಾರು ವರ್ಷದ ಚಿಕ್ಕ ಬಾಲಕರು ಇರಬಹುದು, ಈಗ ದೊಡ್ಡವರಾಗಿರುವ ಈ ಯುವಕರು ವಿದ್ಯಾವಂತರಾಗಿದ್ದಾರೆ,ಬುದ್ದಿವಂತರಾಗಿದ್ದಾರೆ ಮತ್ತು ಕೃಷಿ- ವ್ಯವಹಾರ ಕೂಡ ಅತ್ಯುತ್ತಮವಾಗಿ ಮಾಡಿ ತಮ್ಮ ತಮ್ಮ ಕುಟುಂಬವನ್ನು ಎತ್ತರಕ್ಕೆ ಒಯ್ಯುತ್ತಿದ್ದಾರೆ ಹಾಗೂ ಸಮಾಜದಲ್ಲಿ ತಮ್ಮ ಕುಟುಂಬದ ಅಂತಸ್ತಿನ ಗೌರವ   ಕಾಪಾಡಿಕೊಂಡು ಬರುತ್ತಿದ್ದಾರೆ.
  ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕು ಸಾದನೆಯ ಅವರು ನೀಡಿದ ಪುಸ್ತಕ ಓದುತ್ತಿದ್ದೇನೆ.   
 ಈ ಬುದ್ಧಿವಂತ ಪ್ರಜ್ಞಾವಂತ ಯುವ ಸಮೂಹ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತಗಳನ್ನ ಮೈಗೂಡಿಸಿಕೊಂಡು ಮುಂದಿನ ದಿನಗಳಲ್ಲಿ ಒಳ್ಳೆಯ ಸಮಾಜವನ್ನು ಕಟ್ಟಲಿ ಎಂದು ಹಾರೈಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...