Skip to main content

Blog number 2294.ಲೋಕೇಶ್ ಈಸೂರು ಕರ್ನಾಟಕದ ಗದ್ದರ್

#ಲೋಕೇಶ್_ಈಸೂರು_ಹೆಸರು_ಕೇಳದವರು_ಇಲ್ಲ 

#ಅವರ_ಹೋರಾಟಗಳು_ಜನಮಾನಸದಲ್ಲಿದೆ 

#ಅವರು_ಕರ್ನಾಟಕದ_ಗದ್ದರ್.

#ದಲಿತ_ಸಂಘರ್ಷ_ಸಮಿತಿ_ಸಂಸ್ಥಾಪಕರಾದ_ಬಿ_ಕೃಷ್ಣಪ್ಪರು_ಪರಿಚಯಿಸಿದ

#ಈಸೂರು_ಲೋಕೇಶ್_ನಮ್ಮ_ಇಡೀ_ಪರಿವಾರಕ್ಕೆ_ಆಪ್ತರಾಗಿದ್ದರು

#esoorulokesh #dss #bkrishnappa #shivamogga #advocates #gaddar


  ಲೋಕೇಶ್ ಈಸೂರು ಹೆಸರು ಕೇಳದವರು ಇಲ್ಲ ಅವರ ಹೋರಾಟಗಳು ಜನಮಾನಸದಲ್ಲಿದೆ ಅವರು ಕರ್ನಾಟಕದ ಗದ್ದರ್.
    ಅವರನ್ನ ಪ್ರಥಮ ಬಾರಿಗೆ ನಾನು ನೋಡಿದ್ದು1984 ರಲ್ಲಿ ಶಿವಮೊಗ್ಗದಲ್ಲಿ ಅವತ್ತು ದಲಿತ ಸಂಘರ್ಷ ಸಮಿತಿಯನ್ನು ಸಂಸ್ಥಾಪನೆ ಮಾಡಿದ ಬಿ. ಕೃಷ್ಣಪ್ಪನವರು ಆನಂದಪುರಂದ ರೈತ ಬಂಧು ಗ್ರಾಮೋದ್ಯೋಗದ ಕಾರ್ಮಿಕರ ಬೃಹತ್ ಸೈಕಲ್ ರ್ಯಾಲಿ ಶಿವಮೊಗ್ಗ ಸರ್ಕ್ಯೂಟ್ ಹೌಸ್ ಹತ್ತಿರ ಸ್ವಾಗತಿಸಿ ನಂತರ ಡಿಸಿ ಕಚೇರಿಯಲ್ಲಿ ದರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ನಂತರ ಸೈಕಲ್ ರ್ಯಾಲಿಯ ಎಲ್ಲಾ ಗೆಳೆಯರನ್ನು ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿನಿಲಯಕ್ಕೆ ಕರೆದೊಯ್ದು ಅಲ್ಲಿ ವಿದ್ಯಾರ್ಥಿ ನಾಯಕ ಪೈಲ್ವಾನ್ ಲೋಕೇಶ್ ಈಸೂರಿಗೆ ನಮ್ಮನ್ನೆಲ್ಲ ಪರಿಚಯಿಸಿ ಎಲ್ಲರೂ ಊಟ ಮಾಡಿ ಹೋಗುವಂತೆ ತಿಳಿಸಿದ್ದರು.
ವಿದ್ಯಾರ್ಥಿ ನಿಲಯದ ಮುಖಂಡ ಲೋಕೇಶ್ ಈಸೂರು ನಮ್ಮೆಲ್ಲರನ್ನು ಆತ್ಮೀಯವಾಗಿ ಕರೆದು ಹೊಟ್ಟೆ ತುಂಬ ಊಟ ಬಡಿಸಿ ವಿದಾಯ ಹೇಳಿದ್ದರು.
   ಈ ರೀತಿ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಾದ ಬಿ. ಕೃಷ್ಣಪ್ಪರಿಂದ ಪರಿಚಯ ಆದ ಈಸೂರು ಲೋಕೇಶರ ಮತ್ತು ನನ್ನ ಗೆಳೆತನ
ನಂತರ ನಿರಂತರವಾಯಿತು.    
   ಪ್ರಗತಿಪರ ವಿದ್ಯಾರ್ಥಿ ಕೇಂದ್ರ (PVK) ಇತ್ಯಾದಿ ಸಂಘಟನೆಗಳ ಕಾರ್ಯಕ್ರಮಕ್ಕಾಗಿ ನಮ್ಮ ಕೈಲಾದ ಸಹಾಯ ನೀಡುವಂತೆ ಲೋಕೇಶರ ವಿನಂತಿಗೆ ನಾನು ಕೈ ಜೋಡಿಸುತ್ತಿದ್ದೆ.
      ನಮ್ಮ ಊರ ಮಾರ್ಗದಲ್ಲಿ ಬಂದಾಗೆಲ್ಲ ಊಟ ವಾಸ್ತವ್ಯ ನಮ್ಮ ಮನೆಯಲ್ಲೇ ಆಗುತ್ತಿತ್ತು  ಈ ರೀತಿ ಲೋಕೇಶ್ ಈಸೂರು  ನನಗೆ ಮಾತ್ರ ಅಲ್ಲ ನನ್ನ ಇಡೀ ಕುಟುಂಬಕ್ಕೆ ಆತ್ಮೀಯರಾದರು.
   ಸಾಗರ ತಾಲೂಕಿನ ಕೃಷಿ ಇಲಾಖೆಯ ಅವ್ಯವಹಾರ ಬಯಲು ಮಾಡುವ ನಮ್ಮ ಹೋರಾಟದಲ್ಲಿ ಅವರು ನೀಡಿದ ಮಾರ್ಗದರ್ಶನ ನಾನು ಶಿರಸಾ ವಹಿಸಿ ಪಾಲಿಸಿದೆ ಆದ್ದರಿಂದ ಹೋರಾಟ ಅಂತಿಮವಾಗಿ ಗುರಿ ಮುಟ್ಟಿ ತಪ್ಪು ಮಾಡಿದವರು ಜೈಲಿಗೆ ಹೋಗುವಂತಾಯಿತು.
   ಆನಂದಪುರಂ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಅನೇಕ ಜನಜಾಗೃತಿ ಕಾರ್ಯಕ್ರಮಗಳನ್ನ ಲೋಕೇಶ್ ಈಸೂರ್ ಅವರ ಸಲಹೆ ಮೇರೆಗೆ ಮಾರ್ಗದರ್ಶನದ ಮೇರೆಗೆ ಹಮ್ಮಿಕೊಂಡಿದ್ದೇವು.
    ಜನರ ಸಹಭಾಗಿತ್ವದೊಂದಿಗೆ ಸರ್ಕಾರದ ಕಾಮಗಾರಿಗಳ ಗುಣಮಟ್ಟದ ನಿರ್ವಹಣೆಗೆ ಹಳ್ಳಿಹಳ್ಳಿಗಳಲ್ಲಿ ನಾನು ಗ್ರಾಮ ಸಮಿತಿ ರಚಿಸಿದೆ ಆ ಸಮಿತಿಗಳಿಗೆ ಮಾರ್ಗದರ್ಶನ ನೀಡಲು ಲೋಕೇಶ್ ಈಸೂರು ಬರುತ್ತಿದ್ದರು.
   ಆನಂದಪುರಂನಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಲೋಕೇಶ್ ಈಸೂರ್ ಅವರನ್ನೇ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳ ತೀರ್ಪುಗಾರರ ಮುಖ್ಯಸ್ಥರನ್ನಾಗಿ ನೇಮಿಸಿದ್ದೆ ಇದು ದೊಡ್ಡಸುದ್ದಿ ಆಗಿತ್ತು, ಅಧಿಕಾರಿಗಳು ಮತ್ತು ಹಳೆಯ ತೀರ್ಪುಗಾರರು ಇವರ ಆಯ್ಕೆ ದೊಡ್ಡದಾಗಿ ವಿರೋಧಿಸಿದ್ದರು.
   ಆದರೆ ನಮಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಕೆ ಶಿವರಾಂ ಅವರ ಬೆಂಬಲ ಇದ್ದಿದ್ದರಿಂದ ನಮ್ಮ ಮಾತೇ ನಡೆಯಿತು.
   ಈ ಫೋಟೋದ ಬ್ಯಾನರ್ ಪ್ರಕಾರ 1999 ಮಾರ್ಚ್ ತಿಂಗಳಲ್ಲಿ ಆನಂದಪುರಂನಲ್ಲಿ ನಡೆದ ನಮ್ಮ ಪ್ರತಿಭಟನಾ ಸಭೆ,ಸುಮಾರು 25 ವರ್ಷದ ಹಿಂದಿನ ಚಿತ್ರ ಆನಂದಪುರಂನ ಬಸ್ ನಿಲ್ದಾಣದ ಸಮೀಪ ನಡೆದ ಪ್ರತಿಭಟನಾ ಸಭೆಯ ಚಿತ್ರ ಯಾವ ಪ್ರತಿಭಟನೆ ಎನ್ನುವುದು ಮರೆತು ಹೋಗಿದೆ.
  ಈ ಚಿತ್ರದಲ್ಲಿ ನಮ್ಮ ವೇದಿಕೆ ಹಳೆಯ ಲಾರಿ ಒಂದರ ಹಿಂಭಾಗ, ಅದರ ಮೇಲೆ ವೇದಿಕೆ ಮಾಡಿ ನಾವೆಲ್ಲ ಕುಳಿತಿದ್ದೇವೆ.
   ನನ್ನ ಹಿರಿಯ ಗೆಳೆಯರಾದ ಗನ್ನಿಸಾಹೇಬರು ಇದ್ದಾರೆ,
ವೇದಿಕೆಯಲ್ಲಿ ಭಾಷಣ ಮಾಡುತ್ತಿರುವುದು ಲೋಕೇಶ್ ಈಸೂರು. 
   ನಂತರ ಲೋಕೇಶ್ ಈಸೂರು ನೋ ಎಂಟ್ರಿಗೆ ಸೇರಿದರು, ಅವರು ನಕ್ಸಲೈಟ್ ಹೋರಾಟದ ಕಡೆ ಆಕರ್ಷಿತರಾದರು ನಂತರ ನನ್ನ ಅವರ ಸಂಪರ್ಕ ಕಡಿಮೆ ಆಯಿತು ಅದರ ನಂತರ ಅವರು ಕಾನೂನು ಪದವಿ ವಿದ್ಯಾಭ್ಯಾಸ ಪ್ರಾರಂಭಿಸಿ ವಕೀಲರೂ ಆದರು ಆನಂತರ ಅನಾರೋಗ್ಯದಿಂದ ಸಣ್ಣ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.
   ಜನಪರ ಹೋರಾಟಗಾರರಾದ ಈಸೂರು ಲೋಕೇಶ್ ಅವರು ಅತ್ಯುತ್ತಮ ವಾಗ್ಮಿ ಆಗಿದ್ದರು.
  ವೇದಿಕೆಯ ಮೇಲೆ ಗಂಡು ಧ್ವನಿಯಲ್ಲಿ ಗದ್ದರ್ ರಂತೆ ಹಾಡುವ ಚಾತುರ್ಯ ಅವರದ್ದು.
   ಪೈಲ್ವಾನರಾಗಿದ್ದ ಈಸೂರು ಲೋಕೇಶ್ ಗೆ ಹುಟ್ಟಿನಿಂದಲೇ ಬಂದಿದ್ದ ಈ ಬಳುವಳಿಗಳಿಂದ ಅವರ ಮಾತು ಹಾಡು ಕೇಳಲು ಜನ ಹಾತೊರೆಯುತ್ತಿದ್ದರು ಮತ್ತು ಗಂಟೆಗಟ್ಟಲೆ ಕಾಯುತ್ತಿದ್ದರು.
  ಆ ಕಾಲದಲ್ಲಿ ನಮ್ಮ ಹೋರಾಟಗಳು ಕ್ಯಾಮರದಲ್ಲಿ ಚಿತ್ರಿಕರಿಸಲು ಬೇಕಾದ ಹಣ ಹೊಂದಿಸಲು ಸಾಧ್ಯವಿಲ್ಲದ ಕಾಲವಾದ್ದರಿಂದ ಲೋಕೇಶ್ ಈಸೂರು ಅವರ ಫೋಟೋಗಳು ನನ್ನಲ್ಲಿ ಇಲ್ಲವೇ ಇಲ್ಲ.
  ಈ ಫೋಟೋ 25 ವರ್ಷದ ಹಿಂದಿನ ನೆನಪು ಮರುಕಳಿಸಿದೆ ಈ ಲೇಖನ ಗೆಳೆಯ ದಿವಂಗತ ಲೋಕೇಶ್ ಈಸೂರಿಗೆ ಅರ್ಪಣೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...