Skip to main content

Posts

Showing posts from August, 2024

Blog number 2285. ಭಂಗಿ ನೈವೇಧ್ಯ ಅರ್ಪಿಸುತ್ತಿದ್ದ ಭಂಗಿ ಭೂತಪ್ಪ ದೇವಾಲಯ ಬಸವನ ಹೊಂಡ

#ಆನಂದಪುರಂನಿಂದ_ಹೊಸನಗರ_ಮಾರ್ಗದಲ್ಲಿರುವ_ವಿಶೇಷ_ದೇವಸ್ಥಾನ #ನೂತನ_ಕೃಷಿ_ವಿಶ್ವವಿದ್ಯಾಲಯ_ಇಲ್ಲಿಂದಲೇ_ಪ್ರಾರಂಭವಾಗುತ್ತದೆ #ಬಂಗಿ_ಭೂತಪ್ಪ_ದೇವಸ್ಥಾನ #ಬಂಗಿ_ಸಿಗರೇಟು_ಬೀಡಿಯೇ_ನೈವೇದ್ಯ. #ಪಕ್ಕದಲ್ಲಿರುವ_ಕಲ್ಯಾಣಿ_ಶಿಥಿಲಾವಸ್ಥೆಯಲ್ಲಿದೆ #ಸ್ಥಳಿಯರು_ಬಸವನಹೊಂಡ_ಎನ್ನುತ್ತಾರೆ. #ನಾಥ_ಸಂಪ್ರದಾಯದ_ಮಹಂತರ_ಸದಾ_ಉರಿಯುತ್ತಿದ್ದ_ಜೂಲ_ಇಲ್ಲಿತ್ತು. #ಹೊಸನಗರಕ್ಕೆ_ಹಿಂದಿನ_ಹೆಸರು_ಕಲ್ಲೂರಶೆಟ್ಟಿಕೊಪ್ಪ  18ನೆ ಶತಮಾನದವರೆಗೆ ಈ ರಸ್ತೆಗೆ ಆನಂದಪುರಂ ಕಲ್ಲೂರ ಶೆಟ್ಟಿ ಕೊಪ್ಪ ರಸ್ತೆ ಎಂಬ ಹೆಸರಿತ್ತು ಕಾರಣ ಹೊಸನಗರದ ಮೂಲ ಹೆಸರು ಕಲ್ಲೂರ ಶೆಟ್ಟಿ ಕೊಪ್ಪ ಅಂತ ಇತ್ತು ನಂತರ ಹೊಸನಗರ ಎಂದು ನಾಮಕರಣವಾಗಿರಬೇಕು, ಇದು ಕೆಳದಿ ಅರಸರ ಕಾಲದಲ್ಲಿ ಆನಂದಪುರಂ ಕೋಟೆಯಿಂದ ಅವರ ರಾಜದಾನಿ ಬಿದನೂರಿಗೆ ಹೋಗುವ ರಾಜ ಮಾರ್ಗವೂ ಆಗಿತ್ತು.   ಆನಂದಪುರಂ ನಿಂದ ಈಗಿನ ಹೊಸನಗರ ರಸ್ತೆಯಲ್ಲಿ ಈಗ ನೂತನವಾಗಿ ನಿರ್ಮಿಸಿರುವ ಕೃಷಿ ವಿಶ್ವವಿದ್ಯಾಲಯದ ಪ್ರಾರಂಭದಲ್ಲೇ ರಸ್ತೆಯ ಎಡಬದಿಗೆ ದೊಡ್ಡ ಆಲದ ಮರ ಇತ್ತು ಅದರ ಕೆಳಗೆ ಸಣ್ಣದಾದ 3X3 ಅಡಿಯ ಕಲ್ಲಿನ ಚಪ್ಪಡಿಯ ಗುಡಿ ಇತ್ತು ಇಲ್ಲಿ ಅಸ೦ಖ್ಯ ವಿವಿದ ಗಾತ್ರದ ತ್ರಿಶೂಲಗಳು ಇತ್ತು.    ಸದಾ ಅಲ್ಲಿ ಬಂಗಿಯ ದೂಮದ ಘಮ ಇರುತ್ತಿತ್ತು, ನಂತರ ಅದು ಸಿಗರೇಟು ಹಚ್ಚಿ ಸಮರ್ಪಿಸುವಲ್ಲಿಗೆ ಬದಲಾಗಿದೆ.   ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಿಂದ ಕೇವಲ 1 ಕಿ.ಮೀ. ದೂರದಲ್ಲಿ

Blog number 2284. ಎಲ್ ಪಿ ಜಿ ಗ್ಯಾಸ್ ದುರಂತಗಳು ಇದನ್ನು ತಡೆಯಲು ನಮ್ಮ ಮನೆಗಳಿಂದಲೇ ಇವತ್ತಿನಿಂದಲೇ ನಾವು ಮುಂದಾಗಬೇಕು.

#ಶಿವಮೊಗ್ಗ_ಸಮೀಪದ_ಆಯನೂರಿನ_ಬೇಕರಿ_ದುರಂತ #ಕೇವಲ_ಲಿಪ್_ಸಿಂಪತಿ_ವ್ಯಕ್ತಪಡಿಸ_ಬೇಡಿ #ಇದರಿಂದ_ಎಲ್ಲರೂ_ಪಾಠ_ಕಲಿಯಬೇಕು #ನಿಮ್ಮ_ಮನೆ_ವ್ಯವಹಾರದ_ಸ್ಥಳದ_ಅಡುಗೆ_ಮನೆಯ_ಒಳಗೆ_ಅಳವಡಿಸಿದ #ಎಲ್_ಪಿ_ಜಿ_ಸಿಲೆಂಡರ್_ತಕ್ಷಣ_ಹೊರಗೆ_ಸ್ಥಳಾಂತರಿಸಿ #ಸ್ನಾನದ_ಮನೆಯ_ಗ್ಯಾಸ್_ಗೀಜರ್_ಸಂಪರ್ಕ_ಕೂಡ #ಯಾಕೆ_LPG_ಅವಘಡ_ತಡೆಯ_ಬೇಕು. #LPG #lpggas #LPGGasCylinder #lpgfire #lpggeezer #FireAccident #kitchensafety #restaurantfiresafety #DomesticLPG #foodindustries    ಕೆಲವೇ ದಿನದ ಹಿಂದೆ ಶಿವಮೊಗ್ಗ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಅಯನೂರು ಊರಿನ ಮುಖ್ಯಪೇಟೆ ಸ್ಥಳದಲ್ಲಿ ಬೇಕರಿ ಒಂದು ಎಲ್ಪಿಜಿ ಸಿಲಿಂಡರ್ ಅವಘಡದಲ್ಲಿ ಬೆಂಕಿಗೆ ಆಹುತಿ ಆಯಿತು.   ತಕ್ಷಣ ಬೇಕರಿಯ ಸಿಬ್ಬಂದಿಗಳು ಹೊರ ಬಂದರು ಅಕ್ಕಪಕ್ಕದವರು ಊರಿನವರು ಫೈರ್ ಇಂಜಿನ್ ಗೆ ಮಾಹಿತಿ ನೀಡಿದರು.    ಅಷ್ಟರಲ್ಲಿ ಬೆಂಕಿಯ ಕೆನ್ನಾಲಿಗಳು ಚಾಚಿ ಇಡಿ ಅಂಗಡಿಯನ್ನು ಭಸ್ಮ ಮಾಡುತ್ತಿದ್ದು ಇದರ ಮಧ್ಯೆ ಬೇಕರಿ ಒಳಗಿನ ಎಲ್ ಪಿ ಜಿ ಸಿಲಿಂಡರ್ ಸಿಡಿದು ಆಕಾಶದೆತ್ತರಕ್ಕೆ ಹಾರಿ ಬೇಕರಿಯ ಮುಂದಿನ ಮೇಲ್ಚಾವಣಿ ಮೇಲೆ ಬಿದ್ದು ಕೆಳಗೆ ಬಿದ್ದಿತ್ತು.   ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಆಗಲಿಲ್ಲ ಎನ್ನುವುದು ಒಂದು ಸಮಾಧಾನ ಅಷ್ಟೇ.   ಲಕ್ಷಾಂತರ ರೂಪಾಯಿ ವಿನಿಯೋಗಿಸಿ ರೆಸ್ಟೋರೆಂಟ್ ಕ್ಯಾಂಟೀನ್ ಬೇಕರಿಗಳನ್ನು ಸ್ಥಾಪಿಸುತ್ತೇವೆ ಆದರೆ ನ

Blog number 2283. ಭಾಷಾರವರ ಕನಸು ನನಸಾಗಿಸಿದ MH ಕಾಫಿ ಶಾಪ್ ನಿಂದ ಕೆಫೆ ಮಲ್ನಾಡ್ ಭವನ

#M_H_ಕಾಫಿಶಾಪ್_ಶಿವಮೊಗ್ಗದ_ನೆಹರು_ರಸ್ತೆಯ_ಎರಡನೆ_ಕ್ರಾಸಲ್ಲಿ_ಪ್ರಸಿದ್ದಿ_ಪಡೆದಿತ್ತು #ಇದರ_ಮಾಲಿಕ_ಬಾಷಾರಿಗೆ_ರೆಸ್ಟೋರಾಂಟ್_ಮಾಡಬೇಕೆನ್ನುವುದು_ಜೀವಮಾನದ_ಕನಸು #ಈಗ_ಅವರ_ಕನಸು_ನನಸಾಗಿದೆ #ಇದೇ_ಜಾಗದಲ್ಲಿ_ಶುಚಿ_ರುಚಿಯ_ಬಿಸಿ_ಬಿಸಿ_ಊಟ_ಉಪಹಾರದ #ಕೆಫೆ_ಮಲ್ನಾಡ್_ಭವನ_ಪ್ರಾರಂಬಿಸಿದ್ದಾರೆ #ಒಮ್ಮೆ_ಬೇಟಿ_ನೀಡಿ. #Cafemalnadbhavana #shivamogga #neharuroad #shivamoggarestoraunt #hotel  #besthotel  https://youtu.be/WxAp4S6hIUw?si=HWHwFnLwPoRTABsA     ಶಿವಮೊಗ್ಗದ ನೆಹರೂ ರಸ್ತೆಯ ಎರಡನೇ ಕ್ರಾಸಿನಲ್ಲಿ ಶೋಭಾ ಸ್ಟೋರ್ ಪಕ್ಕದ ಕಿರಿದಾದ ಓಣಿಯಲ್ಲಿದೆ MH ಕಾಫೀ ಶಾಪ್ ಇಲ್ಲಿನ ಉತ್ಕೃಷ್ಟ ಪಿಲ್ಟ್ ರ್ ಕಾಫೀ ಮತ್ತು ಟೀಗಾಗಿ ಜನ ಹುಡುಕಿಕೊಂಡು ಬರುತ್ತಿದ್ದರು.   ಹಿಂದೆ ಇವರ ಬಗ್ಗೆ ಬರೆದ ಬ್ಲಾಗ್ ಲೇಖನ ಇಲ್ಲಿ ಕ್ಲಿಕ್ ಮಾಡಿ ಓದಿ... https://arunprasadhombuja.blogspot.com/2022/04/mh.html   ಈಗ ಈ ಕಾಫಿ ಶಾಪ್ #ಕೆಫೆ_ಮಲ್ನಾಡ್_ಭವನ ಆಗಿದೆ ಇಲ್ಲಿ ಈಗ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನದ ಊಟ ಕೂಡ ಲಭ್ಯವಿದೆ.     ಮಾಲೀಕರು ಹಿಂದಿನ ಎಂ ಹೆಚ್ ಕಾಫಿ ಶಾಪಿನ #ಭಾಷಾ ರವರೇ ಈ ಹೊಸ ಕೆಫೆ ಮಲ್ನಾಡ್ ಭವನದ ಮಾಲೀಕರು ಎಂ ಹೆಚ್ ಕಾಫಿ ಶಾಪ್ ಪಕ್ಕದಲ್ಲಿದ್ದ ಜನ ಹೋರಾಟ ಪ್ರಿಂಟಿಂಗ್ ಪ್ರೆಸ್ ಮತ್ತು ಜನ ಹೋರಾಟ ಪತ್ರಿಕೆಯ ಕಚೇರಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗಿದ್ದರಿಂದ ಕಾ

Blog number 2282. ಕವಿ ಪರಮದೇವ ತುರಂಗ ಭಾರತ ರಚಿಸಿದ್ದು ಸಾಗರ ತಾಲೂಕಿನ ಬೀಮನಕೋಣೆ ಸಮೀಪದ ಕೇದಿಗೆಸರದಲ್ಲಿ

#ಸಾಗರ_ತಾಲೂಕಿನ_ಭೀಮನಕೋಣೆ_ಸಮೀಪದ_ಕೇದಿಗೆ_ಸರದಲ್ಲಿ #ಕವಿ_ಪರಮ_ದೇವರು_ತುರಂಗ_ಭಾರತ_ರಚಿಸಿದರು. #ಕೆಳದಿ_ಅರಸರ_ಕಾಲದ_ಮೊದಲ_ಕವಿ #ವ್ಯಾಸಭಾರತದ_18_ಪರ್ವಗಳನ್ನ_ಕನ್ನಡದಲ್ಲಿ_ಬರೆದ_ಮೊದಲ_ಕವಿ #ಶಿವಮೊಗ್ಗ_ಜಿಲ್ಲೆಯ_ಸಾಗರ_ತಾಲ್ಲೂಕಿನ_ಹೆಗ್ಗೋಡು_ಸಮೀಪದ #ಭೀಮನಕೋಣೆಯ_ಕೇದಿಗೆಸರದ_ಅರ್ಚಕರಾಗಿದ್ದ #ಕವಿ_ಪರಮದೇವ_ವಿರಚಿತ_ಶ್ರೀತುರಂಗಭಾರತ. #sriturangabharath #shivamogga #sagar #Heggodu #bhimanakone #kedalasara #vyasabharath #kannada #karnataka  ಕವಿಯ ಕಾಲ ಕಾವ್ಯ  ಕವಿಯ ಜನನ ಕ್ರಿ,  ಶ, ೧೭೨೦. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸುಳಿಗೋಡು ಕವಿಯ ಜನ್ಮ ಸ್ಥಳ. ಇವನು ಹವ್ಯಕ ಬ್ರಾಹ್ಮಣ. ತಂದೆಯ ಹೆಸರು ಶಂಕರನಾರಾಯಣಯ್ಯ, ತಾಯಿಯ ಹೆಸರು ಮಹಾಲಕ್ಷ್ಮಮ್ಮನವರು. ತಂದೆ ವಿದ್ವಾಂಸರು, ಜೋತಿಷಿಗಳು, ಸೂರ್ಯನ ಔಪಾಸಕರು, ಪರಮೇಶ್ವರನ ಭಕ್ತರು. ತಾಳಮದ್ದಳೆಯ ಶ್ರೇಷ್ಠ ಅರ್ಥಧಾರಿಗಳು. ಇವರು ವಂಶಪಾರಂಪರ್ಯವಾಗಿ ಬಂದಿದ್ದ ಗದ್ದೆ, ತೋಟ, ಮನೆ ಹೊಂದಿದ್ದರು. ಇವರ ವಂಶಸ್ಥರು ಸಳಿಗೋಡಿನಲ್ಲಿ ಒಂದು ದೇವಸ್ಥಾನವನ್ನು ಕಟ್ಟಿಸಿ ಅಲ್ಲಿ ಲಕ್ಷ್ಮೀನಾರಾಯಣ ಹಾಗೂ ಒಂದು ಶಿವಲಿಂಗವನ್ನೂ ಸ್ಥಾಪಿಸಿ, ಪೂಜಿಸಿಕೊಂಡು ಬಂದಿದ್ದರು. ಶಂಕರನಾರಾಯಣಯ್ಯನೂ ಈ ಪೂಜೆಯನ್ನು ಮುಂದುವರಿಸಿಕೊಂಡು ಬಂದಿದ್ದನು. ಕವಿಗೆ ತಂದೆಯಿಂದಲೇ ಪ್ರಾರಂಭಿಕ ವಿದ್ಯಾಭ್ಯಾಸವಾಯಿತು. ಶಂಕರನಾರಾಯಣಯ್ಯ ಯಕ್ಷಗಾನ ಬಯಲಾಟಗಳಲ್ಲಿ,  ತಾಳಮದ್ದಳೆಯಲ್ಲಿ ಪ