Skip to main content

#ಸಾಗರ ಮಾರಿಕಾಂಬಾ ಜಾತ್ರೆ 2020 ಮುಕ್ತಾಯ ಮತ್ತು ಪ್ರತಿ ಜಾತ್ರೆಯಲ್ಲಿ ನೆನಪಾಗುವ ಹರಕೆ ಕೋಳಿ ಹಿಡಿಯುವವರ ಸಾಹಸ#

#ಮಾರೀಕಾ೦ಬಾ ಜಾತ್ರೆಯ ಹರಕೆ ಕೋಳಿ#
 ಈ ವಷ೯ದ ಮಾರೀಕಾಂಬಾ ಜಾತ್ರೆ ಮುಗಿಯುತ್ತಿದೆ ಪ್ರತಿ ಮಾರೀಕಾ೦ಭಾ  ಜಾತ್ರೆ ಪ್ರಾರಂಭದಲ್ಲಿ ತೌರು ಮನೆಯಿಂದ ಗಂಡನ ಮನೆಗೆ ದೇವಿ ಮೆರವಣಿಗೆ ಹೊರಟಾಗ ಸಾಗರ ಹೋಟೆಲ್ ಸಕ೯ಲ್ನಿಂದ ಹರಕೆ ಕೋಳಿಗಳನ್ನ ಹಾರಿ ಬಿಡುವ ಸಂಪ್ರದಾಯವಿದೆ. (ಇದು ಎಲ್ಲಾ ಊರಿನ ಮಾರಿಕಾOಬಾ ಜಾತ್ರೆಯಲ್ಲಿ ಈ ಸಂಪ್ರದಾಯವಿದೆ.)
  ವಷ೯ಕ್ಕೆ 2 ಸಾರಿ ಹೊಸನಗರ ತಾಲ್ಲೂಕಿನ ಕೆಂಚನಾಲದಲ್ಲಿ ಈ ಹರಕೆ ಕೋಳಿಗಳನ್ನ ದೇವಸ್ಥಾನದ ಸಮಿತಿಯವರೇ ಹರಾಜು ಮಾಡುತ್ತಾರೆ.
  ಸಾಗರದಲ್ಲಿ ಹಾರಿ ಬಿಡುವ ಕೋಳಿ ಹಿಡಿಯಲೆಂದೇ ನೂರಾರು ಜನರು ಮಾರಿಕಾಂಬಾ ಮೆರವಣಿಗೆಯಲ್ಲಿ ಸೇರಿರುತ್ತಾರೆ, ಹಾರಿಬಿಟ್ಟ ಕೋಳಿಗಳು ಸ್ವಾತಂತ್ರ ಪಡೆದ ಸಂತೋಷದಲ್ಲಿ ಹಾರಿದವು ಮೆರವಣಿಗೆಯ ದೀಪಾಲಂಕಾರ ವಾದ್ಯದ ಶಬ್ದ ಮತ್ತು ನೆರೆದ ಸಾವಿರಾರು ಜನರ ನೋಡಿ ಭಯದಿಂದ ಇದ್ದ ಬದ್ದ ಶಕ್ತಿಯನ್ನೆಲ್ಲ ಬಳಸಿ ಅತಿ ಎತ್ತರಕ್ಕೆ ಹಾರಿದರು ಕೊನೆಗೆ ಎಲ್ಲೋ ಒಂದು ಕಡೆ ಶಕ್ತಿ ಕಳೆದುಕೊಂಡು ಇಳಿದು ಬಿಡುತ್ತದೆ ಆಗ ಇದಕ್ಕಾಗಿಯೇ ಹೊಂಚು ಹಾಕಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕುವವರ ಕೈ ಸೇರಿ ಆವರೊಡನೆ ಚೀಲ ಹಿಡಿದು ಸಾಗುವ ಬಗಲಿಯ ಕೈಚೀಲ ಸೇರುತ್ತದೆ.
  ನಾನು 8ನೇ ತರಗತಿಯಲ್ಲಿ ಸಾಗರದ ಹಾಸ್ಟೆಲ್ ನಲ್ಲಿದ್ದಾಗ ಈ  ಹರಕೆ ಕೋಳಿ ಹಾರಿಬಿಡುವ ರಾತ್ರಿ ಮೆರವಣಿಗೆ ನೋಡಿದ್ದೆ.
  ಸಾಗರದಲ್ಲಿ ಬ್ರಾಂಡಿ ಶಾಪ್ ನಡೆಸುತ್ತಿದ್ದ ಆಥ೯ರ್ ಡಿಕಾಸ್ಟ ಮಾತ್ರ ಮಾರಿ ಜಾತ್ರೆ ಗಮ್ಮತ್ತಾಗಿ ಮಾಡುತ್ತಿದ್ದರು ಅವರಿಗೆ ಈ ಬೆಳೆದ ಹರಕೆ ಕೋಳಿ ಅಂದರೆ ಭಾರೀ ಇಷ್ಟ ಪ್ರತಿ ಜಾತ್ರೆಯಲ್ಲಿ ಇಂತಾ ಹತ್ತಾರು ಕೋಳಿ ಸಂಪಾದಿಸುತ್ತಾರೆ ಅಂತ ಅವರ ಗೆಳೆಯರು ಹೇಳುತ್ತಿದ್ದರು ಒಮ್ಮೆ ಅವರ ಹತ್ತಿರ ಈ ಬಗ್ಗೆ ಕೇಳಿದಾಗ ಅವರ ಸುಲಭ ಮಾಗ೯ ತಿಳಿದು ನಗು ತಡೆಯಲಾಗಲಿಲ್ಲ ಅದೇನೆಂದರೆ ಮೆರವಣಿಗೆಯಲ್ಲಿರುತ್ತಿದ್ದ ಪೋಲಿಸರಿಗೆ ಇವರು ಪಾಟಿ೯ಕೊಟ್ಟು ಅವರ ಹಿಂದೆ ದೊಡ್ಡ ಚೀಲ ಹಿಡಿದು ಕೊಂಡು ಹೋಗುತ್ತಿದ್ದರಂತೆ ಹಾರಿ ಬಿಟ್ಟ ಹರಕೆ ಕೋಳಿ ಕೆಳಗೆ ಬಂದು ಅದಕಾಗಿ ಕಾಯುವವರ ಕೈ ಸೇರುವಾಗ ನಡೆಯುವ ಫೈಪೋಟಿ ಮದ್ಯ ಫೋಲಿಸರು ನೆರೆದವರನ್ನ ಸರಿಸಿ ಕೋಳಿ ಹಿಡಿದು ಆಥ೯ರ್ ಚೀಲಕ್ಕೆ ಹಾಕುತ್ತಿದ್ದರಂತೆ, ಕ್ರಮೇಣ ಪೋಲಿಸ್ ಇಲಾಖೆಯಲ್ಲಿ ವಿದ್ಯಾವಂತ ಯುವಕರ ಸೇಪ೯ಡೆ ಜಾಸ್ತಿ ಆಗಿ ಇದು ಕಡಿಮೆ ಆಯಿತಂತೆ.
  ಆಥ೯ರ್ ಡಿಕಾಸ್ಟ ನಂತರ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿದ್ದರು ಈಗ ಮಂಗಳೂರಲ್ಲಿ ನೆಲೆಸಿದ್ದಾರೆಂದು ಹೇಳುತ್ತಾರೆ.
  ಸಾಗರದ ಮಾರಿಕಾಂಬಾ ಜಾತ್ರೆ ಬಂದಾಗೆಲ್ಲ ಅವರ ಹರಕೆ ಕೋಳಿ ಶಿಕಾರಿ ನೆನಪಾಗುತ್ತದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...