Skip to main content

#ಸಾಗರ ಮಾರಿಕಾಂಬಾ ಜಾತ್ರೆ 2020 ಮುಕ್ತಾಯ ಮತ್ತು ಪ್ರತಿ ಜಾತ್ರೆಯಲ್ಲಿ ನೆನಪಾಗುವ ಹರಕೆ ಕೋಳಿ ಹಿಡಿಯುವವರ ಸಾಹಸ#

#ಮಾರೀಕಾ೦ಬಾ ಜಾತ್ರೆಯ ಹರಕೆ ಕೋಳಿ#
 ಈ ವಷ೯ದ ಮಾರೀಕಾಂಬಾ ಜಾತ್ರೆ ಮುಗಿಯುತ್ತಿದೆ ಪ್ರತಿ ಮಾರೀಕಾ೦ಭಾ  ಜಾತ್ರೆ ಪ್ರಾರಂಭದಲ್ಲಿ ತೌರು ಮನೆಯಿಂದ ಗಂಡನ ಮನೆಗೆ ದೇವಿ ಮೆರವಣಿಗೆ ಹೊರಟಾಗ ಸಾಗರ ಹೋಟೆಲ್ ಸಕ೯ಲ್ನಿಂದ ಹರಕೆ ಕೋಳಿಗಳನ್ನ ಹಾರಿ ಬಿಡುವ ಸಂಪ್ರದಾಯವಿದೆ. (ಇದು ಎಲ್ಲಾ ಊರಿನ ಮಾರಿಕಾOಬಾ ಜಾತ್ರೆಯಲ್ಲಿ ಈ ಸಂಪ್ರದಾಯವಿದೆ.)
  ವಷ೯ಕ್ಕೆ 2 ಸಾರಿ ಹೊಸನಗರ ತಾಲ್ಲೂಕಿನ ಕೆಂಚನಾಲದಲ್ಲಿ ಈ ಹರಕೆ ಕೋಳಿಗಳನ್ನ ದೇವಸ್ಥಾನದ ಸಮಿತಿಯವರೇ ಹರಾಜು ಮಾಡುತ್ತಾರೆ.
  ಸಾಗರದಲ್ಲಿ ಹಾರಿ ಬಿಡುವ ಕೋಳಿ ಹಿಡಿಯಲೆಂದೇ ನೂರಾರು ಜನರು ಮಾರಿಕಾಂಬಾ ಮೆರವಣಿಗೆಯಲ್ಲಿ ಸೇರಿರುತ್ತಾರೆ, ಹಾರಿಬಿಟ್ಟ ಕೋಳಿಗಳು ಸ್ವಾತಂತ್ರ ಪಡೆದ ಸಂತೋಷದಲ್ಲಿ ಹಾರಿದವು ಮೆರವಣಿಗೆಯ ದೀಪಾಲಂಕಾರ ವಾದ್ಯದ ಶಬ್ದ ಮತ್ತು ನೆರೆದ ಸಾವಿರಾರು ಜನರ ನೋಡಿ ಭಯದಿಂದ ಇದ್ದ ಬದ್ದ ಶಕ್ತಿಯನ್ನೆಲ್ಲ ಬಳಸಿ ಅತಿ ಎತ್ತರಕ್ಕೆ ಹಾರಿದರು ಕೊನೆಗೆ ಎಲ್ಲೋ ಒಂದು ಕಡೆ ಶಕ್ತಿ ಕಳೆದುಕೊಂಡು ಇಳಿದು ಬಿಡುತ್ತದೆ ಆಗ ಇದಕ್ಕಾಗಿಯೇ ಹೊಂಚು ಹಾಕಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕುವವರ ಕೈ ಸೇರಿ ಆವರೊಡನೆ ಚೀಲ ಹಿಡಿದು ಸಾಗುವ ಬಗಲಿಯ ಕೈಚೀಲ ಸೇರುತ್ತದೆ.
  ನಾನು 8ನೇ ತರಗತಿಯಲ್ಲಿ ಸಾಗರದ ಹಾಸ್ಟೆಲ್ ನಲ್ಲಿದ್ದಾಗ ಈ  ಹರಕೆ ಕೋಳಿ ಹಾರಿಬಿಡುವ ರಾತ್ರಿ ಮೆರವಣಿಗೆ ನೋಡಿದ್ದೆ.
  ಸಾಗರದಲ್ಲಿ ಬ್ರಾಂಡಿ ಶಾಪ್ ನಡೆಸುತ್ತಿದ್ದ ಆಥ೯ರ್ ಡಿಕಾಸ್ಟ ಮಾತ್ರ ಮಾರಿ ಜಾತ್ರೆ ಗಮ್ಮತ್ತಾಗಿ ಮಾಡುತ್ತಿದ್ದರು ಅವರಿಗೆ ಈ ಬೆಳೆದ ಹರಕೆ ಕೋಳಿ ಅಂದರೆ ಭಾರೀ ಇಷ್ಟ ಪ್ರತಿ ಜಾತ್ರೆಯಲ್ಲಿ ಇಂತಾ ಹತ್ತಾರು ಕೋಳಿ ಸಂಪಾದಿಸುತ್ತಾರೆ ಅಂತ ಅವರ ಗೆಳೆಯರು ಹೇಳುತ್ತಿದ್ದರು ಒಮ್ಮೆ ಅವರ ಹತ್ತಿರ ಈ ಬಗ್ಗೆ ಕೇಳಿದಾಗ ಅವರ ಸುಲಭ ಮಾಗ೯ ತಿಳಿದು ನಗು ತಡೆಯಲಾಗಲಿಲ್ಲ ಅದೇನೆಂದರೆ ಮೆರವಣಿಗೆಯಲ್ಲಿರುತ್ತಿದ್ದ ಪೋಲಿಸರಿಗೆ ಇವರು ಪಾಟಿ೯ಕೊಟ್ಟು ಅವರ ಹಿಂದೆ ದೊಡ್ಡ ಚೀಲ ಹಿಡಿದು ಕೊಂಡು ಹೋಗುತ್ತಿದ್ದರಂತೆ ಹಾರಿ ಬಿಟ್ಟ ಹರಕೆ ಕೋಳಿ ಕೆಳಗೆ ಬಂದು ಅದಕಾಗಿ ಕಾಯುವವರ ಕೈ ಸೇರುವಾಗ ನಡೆಯುವ ಫೈಪೋಟಿ ಮದ್ಯ ಫೋಲಿಸರು ನೆರೆದವರನ್ನ ಸರಿಸಿ ಕೋಳಿ ಹಿಡಿದು ಆಥ೯ರ್ ಚೀಲಕ್ಕೆ ಹಾಕುತ್ತಿದ್ದರಂತೆ, ಕ್ರಮೇಣ ಪೋಲಿಸ್ ಇಲಾಖೆಯಲ್ಲಿ ವಿದ್ಯಾವಂತ ಯುವಕರ ಸೇಪ೯ಡೆ ಜಾಸ್ತಿ ಆಗಿ ಇದು ಕಡಿಮೆ ಆಯಿತಂತೆ.
  ಆಥ೯ರ್ ಡಿಕಾಸ್ಟ ನಂತರ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿದ್ದರು ಈಗ ಮಂಗಳೂರಲ್ಲಿ ನೆಲೆಸಿದ್ದಾರೆಂದು ಹೇಳುತ್ತಾರೆ.
  ಸಾಗರದ ಮಾರಿಕಾಂಬಾ ಜಾತ್ರೆ ಬಂದಾಗೆಲ್ಲ ಅವರ ಹರಕೆ ಕೋಳಿ ಶಿಕಾರಿ ನೆನಪಾಗುತ್ತದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...