# ಸಲೂನ್ ಕೃಷ್ಣ ನನ್ನ ಖಾಯಂ ಹೇರ್ ಡ್ರೆಸರ್ #
ಒಂದು ಕಾಲದಲ್ಲಿ ಈ ವೃತ್ತಿಯವರಲ್ಲಿ ಬಲು ಕಷ್ಟದ ಜೀವನ, ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗೂ ಹೋಗಿ ಎಲ್ಲರ ಕಟಿಂಗ್ ಮಾಡಿ ಸುಗ್ಗಿ ಕಾಲದಲ್ಲಿ ಅವರು ನೀಡುವ ಭತ್ತ, ರಾಗಿ ಕಾಳು ಕಡಿ ಪಡೆಯುವ ವತ೯ನೆ ಹೆಸರಿನ ಪದ್ದತಿ ಇತ್ತು ಅದು ಕೃಷ್ಣನ ಆಜ್ಜನ ಕಾಲಕ್ಕೆ ಮುಗಿಯಿತಾ ಬಂದಿತ್ತು, ನಂತರ ಇವರ ತಂದೆ ಮುನಿಯಣ್ಣ ಅದ೯ ವತ೯ನೆ ಅದ೯ ಸೆಲೂನಿನಲ್ಲಿ ದುಡಿಮೆ ಮಾಡಿದರು.
ಆಗೆಲ್ಲ ವೃತ್ತಿಯ ಬಗ್ಗೆ ಕೀಳರಿಮೆ ಬೆಳೆಸಿಕೊಂಡ ಇವರ ಕುಟುಂಬದಲ್ಲಿ ಅನೇಕರು ಬೇರೆ ವೃತ್ತಿ, ಸಕಾ೯ರಿ ಕೆಲಸಕ್ಕೆ ಸೇರಿದರು, ಬೇರೆ ರಾಜ್ಯದವರು ಬಂದು ಇಲ್ಲೆಲ್ಲ ಭರಪೂರ ದಂದೆ ಮಾಡಲು ಶುರು ಮಾಡಿದ್ದು, ಬ್ಯೂಟಿ ಪಾಲ೯ರ್ ಕಾನ್ಸೆಪ್ಟ್ ಗಳು ಪುನಃ ವಂಶಪಾರಿಖ ವೃತ್ತಿಯನ್ನ ಮುಂದುವರೆಸಲು ಇವರಿಗೆಲ್ಲ ಪ್ರೋತ್ಸಾಹ ನೀಡಿರಬಹುದು.
ಇವರ ಮಗ ಕಾಲೇಜು ಓದುತ್ತಾ ಬಿಡುವಿನಲ್ಲಿ ಸೆಲೂನ್ ಕೆಲಸ ಮಾಡುತ್ತಾನೆ.
ಇವರ ಅಜ್ಜ ದಿವಂಗತ ನಾರಾಯಣಪ್ಪ, ಇವರ ತಂದೆ ದಿ.ಮುನಿಯಣ್ಣ ಈಗ ಮಗ ಕೃಷ್ಣ ಆಗಾಗ ಕೃಷ್ಣ ಇಲ್ಲದಾಗ ಇವರ ಮಗ ನನ್ನ ಕೇಶ ಶೃ೦ಗಾರ ಮಾಡುತ್ತಾನೆ ಹಾಗಾಗಿ ಅವರ ನಾಲ್ಕು ತಲೆಮಾರಿನವರ ಹತ್ತಿರ ನಾನು ವ್ಯವಹರಿಸಿದ್ದೇನೆ.
ಕೃಷ್ಣನ ತಾಯಿಯ ತಂದೆ ನೆಲ್ಲಪ್ಪನವರು ದೂರದ ಕೋಲಾರದ ಆಂದ್ರ ಪ್ರದೇಶದ ಬಾಡ೯ರ್ ನಿಂದ ಬಂದು ನೆಲೆಸಿದವರು, ಬಹಳ ಸಾಹಸಿ ಮತ್ತು ದಯಾಮಯಿ ಅಂತೆ, ಹಾಗೆಯ ಅನ್ಯಾಯದ ವಿರುದ್ದ ಅವರದ್ದೇ ಆದ ಮಾಗ೯ದಲ್ಲಿ ಹೋರಾಟಗಾರರು, ಆನಂದಪುರಂ ಪೇಟೆಯಲ್ಲಿ ಎರಡು ಅಂತಸ್ತಿ ಅತಿ ದೊಡ್ಡ ಕಟ್ಟಡ ಇವರದ್ದೇ ಆಗಿತ್ತು, ಕೃಷಿ ಜಮೀನು ಹೊಂದಿದ್ದರು, ಆಗಿನ ಭೂ ಮಾಲಿಕರು ಮತ್ತು ಸಂಸದರಾಗಿದ್ದ ಬದರಿನಾರಾಯಣ ಅಯ್ಯOಗಾರರ ಕುಟುಂಬದವರು ನೆಲ್ಲಪ್ಪರನ್ನ ಕಂಡರೆ ಭಯ ಪಡುತ್ತಿದ್ದರಂತೆ.
ಈ ನೆಲ್ಲಪ್ಪ ಇಲ್ಲದಿದ್ದರೆ ಅವತ್ತು ಆ ದೊಡ್ಡ ಸಹಾಯ ಮಾಡದಿದ್ದರೆ ನಮ್ಮ ತಂದೆ ಇರುತ್ತಿರಲಿಲ್ಲ, ನಾವು ಹುಟ್ಟುತ್ತಿರಲಿಲ್ಲ ಅವರು ಜೀವದಾನ ಪಡೆದ ಕಥೆ ಕೂಡ ಇದೆ.
ಇವತ್ತು ಕೃಷ್ಣ ಮನೆಗೆ ಬಂದು ಕೇಶ ವಿನ್ಯಾಸ ಮಾಡುವಾಗ ಇದೆಲ್ಲ ನೆನಪಾಯಿತು ಇವರ ಅಜ್ಜ ನೆಲ್ಲಪ್ಪರ ಬಗ್ಗೆ ಮುಂದೆ ಬರೆಯಬೇಕು.
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
Comments
Post a Comment