Skip to main content

# ಕೊಲ್ಲೂರಿನಲ್ಲಿ ಅನಾಗರೀಕವಾಗಿ ಜನಸಾಮಾನ್ಯರಿಗೆ ಅನ್ನ ಸಂತಪ೯ಣೆ ಮಾಡುವ ಸಿಬ್ಬOದಿ#

#ಕೊಲ್ಲೂರು ದೇವಾಲಯದ ಜನ ಸಾಮಾನ್ಯರ ಅನ್ನದಾನದ ಪಂಕ್ತಿಯಲ್ಲಿ ನಾವೆಲ್ಲ ಉOಡು ಬಿಸಾಕಿದ ಎಂಜಲೆಲೆಯ ಸಮಾನರು#

        ನಿನ್ನೆ 5- ಪೆಬ್ರವರಿ-2018 ಸೋಮವಾರ ಕೊಲ್ಲೂರು ಮೂಕಾ೦ಬಿಕ ಸನ್ನಿದಾನಕ್ಕೆ ಹೋಗಿದ್ದೆ, ಮದ್ಯಾನ್ನ 12ರ ಪೂಜೆ ನಂತರ ಅನ್ನ ಸಂತಪ೯ಣೆ ಜಾಗಕ್ಕೆ ಹೋದೆ ಅಲ್ಲಿ VIPಗಳಿಗೆ ಮತ್ತು ಬ್ರಾಹಮಣರಿಗೆ ಪ್ರತ್ಯೇಕ ವ್ಯವಸ್ಥೆ ಇದೆ ಅಂತ ಗೊತ್ತಿತ್ತು, ನಮ್ಮOತ ಶೂದ್ರರಿಗೆ ಜನಸಾಮಾನ್ಯರಿಗೆ ಮೀಸಲಾದ ಜಾಗದಲ್ಲಿ ಊಟದ ಪಂಕ್ತಿಯಲ್ಲಿ ಕುಳಿತೆ.
ದಮ೯ಸ್ಥಳದಲ್ಲಿ, ಉಡುಪಿಯಲ್ಲಿ, ಹೊರನಾಡು ಹಾಗು ಪಂಜಾಬಿನ ಅಮೃತಸರದ ಸ್ವಣ೯ ದೇಗುಲದಲ್ಲಿ ಸಹಪಂಕ್ತಿ ಬೋಜನ ಮಾಡಿದ ಅನುಭವ ನನ್ನದು.
      ಆದರೆ ನಿನ್ನೆ ಕೊಲ್ಲೂರಿನಲ್ಲಿನ ಅನುಭವ ಅದ್ಬುತ ಆಗಿತ್ತು, ಒಬ್ಬ ಬಾಳೆ ಎಲೆ ನಿರಾಸಕ್ತಿಯಿ೦ದ ಒಗೆಯುತ್ತಾ ಬಂದ ಅವನ ಹಿಂದಿನಿಂದ ಬಂದವ ದುರಂಹOಕಾರಿ ನೆಲದ ಮೇಲೆ ಬಾಳೆ ಎಲೆ ಹಾಸುವ ಮುನ್ನವೇ ನೀರಿನ ಜಗ್ಗಲ್ಲಿ ನೀರು ದಬದಬ ಸುರಿಯುತ್ತಾ ಬಂದ ಎಲೆ ಒರೆಸುವ ನೀರು ನೆಲಕ್ಕೂ ಬಿದ್ದು ಉಟ್ಟ ಬಟ್ಟಿ, ಸೀರೆಯಲ್ಲ ಒದ್ದೆ ಮಾಡಿದ ಅವನ ಹಿಂದೆ ಬಂದವ ಅನ್ನ ಬಡಿಸುವವ ಎಲೆಗಿಂತ ನೆಲದ ಮೇಲೆ ಅನ್ನ ಚೆಲ್ಲಿ ಓಡಿದ ಅವನ ಹಿಂದೆ ಬಂದ ಸಾರು ಬಡಿಸುವವ ಅನ್ನದ ಮೇಲೆ ಸಾರು ಬಡಿಸಿದ್ದಲ್ಲ ಎತ್ತರದಿಂದ ಸುರಿದು ನೀರಿನವನಂತೆ ಬಟ್ಟೆಗೆಲ್ಲ ಸಾರು ಸಾರಿದ ಇದೇ ರೀತಿ ಪಾಯಸದವ, ಮಜ್ಜಗೆಯವ ಬಲು ಅವಸರದಿಂದ ಕೈ ಮೇಲೆ ಮಜ್ಜಗೆ ಹಾಕಿ ರಂಪಾಟದಲ್ಲಿ ಹೋದ .
          ಇದೆಲ್ಲ ದೇವಾಲಯದಲ್ಲಿ ಹೋಗಿ ದೇವರ ದಶ೯ನ ಮಾಡಿ ಕೃತಾಥ೯ರಾಗಿ, ಅನ್ನ ಪ್ರಸಾದ ಸೇವಿಸಿ ಸಂತೃಪ್ತರಾಗಬೇಕಾದ ಜಾಗದಲ್ಲಿ ದುರಂಹಾ೦ಕಾರದ ಇಂತವರಿಂದ ಅತ್ಯಂತ ಬೇಸರ ಪಡುವಂತೆ ಆಯಿತು.
         ಇದು ನಿತ್ಯ ಮುಕಾಂಬಿಕ ದೇವಿ ದಶ೯ನ ಮಾಡಿದವರು ಅನುಭವಿಸುವ ಯಾತನೆ ಇಲ್ಲಿ ಲೂಟಿ ಹೊಡೆಯಲು ನಿಂತ ಈ ಅಫOಗರಿಗೆ ದೇವಿ ಸದಾ ಅನುಗ್ರಹಿಸಿ ಸುಖ ಸಮ್ರುದ್ದಿ ನೀಡುತ್ತಲೇ ಇದ್ದಾಳೆ.
         ಹಾಗಂತ ಇದೆಲ್ಲ ಓದಿ ನೀವು ಬ್ರಾಹಮಣರ ಮೇಲೆ ಸಿಟ್ಟು ಮಾಡಬೇಡಿ ಏಕೆಂದರೆ ಈ ರೀತಿ ರಣಾ೦ಗದ ಮಾದರಿಯಲ್ಲಿ ಶೂದ್ರ, ಜನಸಾಮಾನ್ಯರನ್ನ ನಿಕೃಷ್ಟವಾಗಿ ಎಂಜಲೆಲೆಯOತೆ ವತಿ೯ಸಿದ ಇವರೆಲ್ಲ ದೇವಾಲಯದ ಸಿಬ್ಬಂದಿಗಳು ಮತ್ತು ಶೂದ್ರರೇ !?!.
         ನನ್ನ ಒತ್ತಾಯ ಸಕಾ೯ರ ಸಂಬಂದಪಟ್ಟವರು ಕ್ರಮ ತೆಗೆದುಕೊಳ್ಳಬೇಕು ಅನ್ನೋದಲ್ಲ ದಯಮಾಡಿ ದೇವಾಲಯದ ಅನ್ನ ಸಂತಪ೯ಣೆ ಹೆಸರಲ್ಲಿ ಅವಮಾನ ಪಡಬಾರದು ಅದಕ್ಕಾಗಿ ಇಂತ ಕಡೆ ಊಟ ಮಾಡಲು ಹೋಗಬೇಡಿ ಅನ್ನುವುದು ನನ್ನ ಮನವಿ.

Comments

  1. ನೀವು ಹೇಳುತ್ತಿರುವುದು ಅವರು ಬಡಿಸಿದ ರೀತಿಯಿಂದ ಅವರು ಶೂದ್ರರೆಂದೆ?
    ಅಥವಾ ಅವರು ನಿಜವಾದ ಶೂದ್ರರೆ?

    ReplyDelete

Post a Comment

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...