# ಮಲೆನಾಡಿನಲ್ಲಿ ಹೊಟ್ಟೆಗೆ ಮದ್ದು ಹಾಕುವರು ಇದ್ದಾರಾ?#
ಗೋಸುಂಬೆ ಸಾಯಿಸಿ ಅದರ ಬಾಲಕ್ಕೆ ಹಗ್ಗ ಕಟ್ಟಿ ನೇತಾಡಿಸಿಟ್ಟರೆ ಅದು ಕೊಳೆತು ಅದರ ಬಾಯಿ೦ದ ತೊಟಕುವ ರಸಗಳು ಕೆಳಗೆ ಎಲೆಯಲ್ಲಿ ಮುಷ್ಟಿಯಷ್ಟು ಅಕ್ಕಿ ಹರಡಿಟ್ಟು ಅದರ ಮೇಲೆ ಬೀಳುವಂತೆ ಮಾಡಬೇಕು ಪೂಣ೯ ಪ್ರಮಾಣದ ರಸ ಸ್ರವಿಸಿದ ನಂತರ ಈ ಅಕ್ಕಿ ಒಣಗಿಸಿ ನಂತರ ಹಿಟ್ಟು ಮಾಡಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು, ಯಾರ ಮೇಲಾದರು ಈ ಮದ್ದು ಪ್ರಯೋಗಿಸಬೇಕಾದರೆ ಒಂದು ಹತ್ತಿಯ ದೀಪದ ಬತ್ತಿಯಲ್ಲಿ ಸಂಗ್ರಹಿಸಿದ ಹಿಟ್ಟಲ್ಲಿ ಬತ್ತಿ ಅದ್ದಿ ಅದನ್ನ ಕಾಪಿ, ಟಿಯಲ್ಲಿ ಅಥವ ಊಟ, ಉಪಹಾರದಲ್ಲಿ ಅದ್ದಿದರೆ ಆಯಿತು ಅದನ್ನ ತಿಂದವರು ಕ್ರಮೇಣ ಜೀಣ೯ ಶಕ್ತಿ ಕಳೆದು ಕೊಳ್ಳುತ್ತಾರೆ, ಊಟ ಸೇರುವುದಿಲ್ಲ ದೇಹ ಕೃಷವಾಗುತ್ತೆ, ವೈದ್ಯರ ಹತ್ತಿರ ಹೋದರೆ ಏನೂ ಕಾಯಿಲೆ ಇಲ್ಲ ಅಂತಾರೆ ದಿನದಿಂದ ದಿನಕ್ಕೆ ಆರೋಗ್ಯ ಬಿಗಡಾಯಿಸಿ ಸಾವು ಬರುತ್ತೆ ಇದೊಂದು ಥರ ಸ್ಲೋ ಪಾಯಿಸನ್ ಇದ್ದಂತೆ ಅಂತ ಅವರು ವಿವರಿಸುತ್ತಿದ್ದರು ಹಾಗಾದರೆ ಇದಕ್ಕೆ ಪರಿಹಾರ ಅಂದೆ? .
ಅವರ ಪ್ರಕಾರ ಹಳ್ಳಿಗಳಲ್ಲಿ ಇದನ್ನ ಪರಿಹರಿಸುವ ಕೆಲ ಪಾರಂಪರಿಕ ಮನೆ ವೈದ್ಯರಿದ್ದಾರೆ ಅವರು ಕಾಯಿ ಅಥವ ಹಣ ಪಡೆದು ಔಷಧ ನೀಡುತ್ತಾರೆ ಅಲ್ಲೇ ಸ್ವಲ್ಪ ಹೊತ್ತಲ್ಲಿ ವಾಂತಿ ಆಗುತ್ತೆ ಯಾವುದರಲ್ಲಿ ಮದ್ದು ಹಾಕಿದ್ದಾರೆ ಅದು ಹೊರಬೀಳುತ್ತೆ ಇದೇ ರೀತಿ ಇನ್ನೊಂದು ರೀತಿ ಮದ್ದು ತೆಗೆಯುವ ಸಂಪ್ರದಾಯವಿದೆ ಒಂದು ಪಾತ್ರೆಯಲ್ಲಿ ನೀರು ಜಾಷದ ಹಾಕಿ ಕೈ ತೊಳೆಸುತ್ತಾರೆ ಆಗ ಪಾತ್ರೆಯಲ್ಲಿ ಯಾವುದರಲ್ಲಿ ಮದ್ದು ಹಾಕಿದ್ದಾರೆ ಆ ಆಕೃತಿ ಬರುತ್ತೆ ಅವತ್ತಿಂದ ಮದ್ದಿನ ಬಾದೆ ಮುಕ್ತಿ ಆಗಿ ರೋಗಿಯ ಜೀಣ೯ ಶಕ್ತಿ ಸರಿ ಆಗಿ ಮೊದಲಿನ ಸ್ಥಿತಿಗೆ ಬರುತ್ತಾರೆ ಅಂದರು.
ಇದು ನಿಜಾನಾ? ಆದರೆ ಹಳ್ಳಿಗಳಲ್ಲಿ ಈಗಲೂ ಇದನ್ನ ನಂಬುವವರಿದ್ದಾರೆ, ಈ ರೀತಿ ಆದವರು ಅವರಿಗಾಗದವರಾರು ಇದ್ದಾರೋ ಅವರನ್ನ ಅನುಮಾನದಿಂದ ನೋಡುತ್ತಾರೆ.
ಮದ್ದು ದೊಸೆ, ಹೋಳಿಗೆ ಅಥವ ಇಡ್ಲಿ ರೂಪದಲ್ಲಿ ಹಾಕಿದ್ದು ಅಂತಾದರೆ ಈ ಹಿಂದೆ ಯಾರ ಮನೆಯಲ್ಲಿ ತಿಂದಿದ್ದರೋ ಅವರೆ ಅಪರಾದಿ ಆಗುತ್ತಾರೆ.
ಇತ್ತೀಚಿಗೆ ಬ್ರಾಹಮಣರ ಬಾಣಂತಿಗೆ ಈ ಸಮಸ್ಯೆ ಆಗಿತ್ತು, ಮದ್ದು ತೆಗೆದವ ದೊಸೆಯಲ್ಲಿ ಮದ್ದು ಹಾಕಿದ್ದು ಅಂದಾಗ ಬಸಿರಿ ಹೆಂಗಸು ಒಮ್ಮೆ ತನ್ನ ಸಂಬಂದಿ ಹತ್ತಿರ ದೊಸೆ ತಿನ್ನುವ ಆಸೆ ಅಂದಾಗ ಅವರು ಮನೆಯಿ೦ದ ಪ್ರೀತಿಯಿ೦ದ ದೊಸೆ ಮಾಡಿ ಒಯ್ದದ್ದರಿಂದ ಅವರೇ ಅಪರಾದಿ ಆಗಿ ಬಿಟ್ಟರು.
ಇದೆಲ್ಲ ಮೌಡ್ಯನಾ? ಹಾಗಾದರೆ ವಿದ್ಯಾವಂತರು, ಮೇಲ್ಜಾತಿ ಜನರಲ್ಲಿ ಈ ನಂಬಿಕೆ ಯಾಕೆ?ಗೊತ್ತಿಲ್ಲ.
ಈ ರೀತಿ ಮದ್ದು ಹಾಕುವ ಕಳಂಕ ಹೊತ್ತ ಮನೆಗಳಲ್ಲಿ ಆಹಾರ ಸೇವಿಸಲು ಹೆದರುತ್ತಾರೆ ಹೆಚ್ಚಾಗಿ ಇಂತಹ ಕಳಂಕದ ಕುಟುಂಬಗಳು ಬ್ರಾಹಮಣ, ಲಿಂಗಾಯಿತರಲ್ಲಿ ಇದೆ.
ನಮ್ಮ ಊರಲ್ಲಿ ಇತ್ತಿಚಿಗೆ ಪ್ರತಿ ಮನೇಲಿ ಒಬ್ಬ ಈ ರೀತಿ ಜಾಷದಿ ಹಾಕಿದ್ದರು ರಿಪ್ಪನ್ ಪೇಟೆ ಹತ್ತಿರದ ಗತಿ೯ ಕೆರೆಯಲ್ಲಿ ತೆಗೆಸಿ ಕೊಂಡು ಸರಿ ಆದೆ ಅನ್ನುವವರು ಸಿಗುತ್ತಾರೆ.
ನನಗೆ ಈ ಬಗ್ಗೆ ಕುತೂಹಲ ಅನೇಕರಲ್ಲಿ ವಿಚಾರಿಸಿದಾಗ ಇಂತಹ ಒಂದು ವಿಷಪ್ರಾಶನ ಹಿಂದಿನ ಕಾಲದಲ್ಲಿತ್ತು ನಂತರ ಇಲ್ಲವಾಗಿದೆ ಎಲ್ಲೋ ಕೆಲವರು ಈ ವಿದ್ಯ ತಿಳಿದಿರಬಹುದು ಆದರೆ ತಮಗೆ ಆಗದವರ ಮೇಲೆ ಅನುಮಾನ ಮೂಡಿಸಿ ಸಮಾಜದಲ್ಲಿ ಅವರನ್ನ ಒಂದು ರೀತಿಯ ಬಹಿಷ್ಕರಿಸಲು ಈ ರೀತಿ ವದಂತಿ ಬರುತ್ತೆ ಅಂತ ಅವರು ಹೇಳುತ್ತಾರೆ.
ಹೀಗಿರುವಾಗಲೇ ನಾನು ಮೊನ್ನೆ ಬೇಟಿ ಮಾಡಿದ ಒಬ್ಬ ಪ್ರಸಿದ್ದ ಬ್ರಾಹಮಣ ಮೂಖಂಡರು ತಮಗೆ ತಮ್ಮ ದಾಯಾದಿಗಳಿಂದ ಹೊಟ್ಟೆಗೆ ಮದ್ದು ಬಿದ್ದಿದೆ ತೆಗೆಸಿಕೊಳ್ಳಬೇಕು ಅಂದಾಗ ಇದೆಲ್ಲ ಬರೆಯಬೇಕಾಯಿತು.
ಇದು ಸತ್ಯನಾ? ಮಿಥ್ಯನಾ? ನಿಮ್ಮ ಅನುಭವ ಬರೆಯಿರಿ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment