Skip to main content

Blog number 3381. ಆನಂದಪುರಂ ಕಾಡಾನೆ ಕಾರಿಡಾರ್ ಕೇಂಬ್ರ ಕೊಲ್ಲಿ ಬಚ್ಚಲು ಡ್ಯಾಮ್

#ಅನಂದಪುರಂ_ಆನೇ_ಕಾರಿಡಾರ್ 

#ಈಗ_ಎರಡನೆ_ಕಾಡಾನೆ_ತಂಡ_ಬಂದಿದೆ

#ಮರಿ_ಆನೆ_ಜೊತೆ_ದಂತವಿರುವ_ಸಲಗ_ಇದೆ

  ನಿನ್ನೆ ಆನೆಗಳು ಶಿಕಾರಿಪುರ ರಸ್ತೆಯ ಗೌತಮಪುರ ಮತ್ತು ಬೈರಾಪುರದ ಪೀರನಕಣಿವೆಯಲ್ಲಿ ಮೂರು ಕಾಡನೆಗಳು ಇತ್ತು.

  ಇದು ಈ ವರ್ಷದ ಕಾಡಾನೆಗಳ ಎರಡನೇ ತಂಡ ಮೊದಲ ಬಂದ ಮೂರು ಆನೆಗಳು
ವಾಪಾಸು ಹೋಗಿದೆ.

ಈಗಾಗಲೇ ಆನೆ ಮಾವುತರ ತಂಡ ಒಂದು ಈ ಕಾಡಾನೆಗಳ  ಸ್ಥಳಾಂತರಕ್ಕೆ ಸಹಕರಿಸಲು ಆಗಮಿಸುವ ನಿರೀಕ್ಷೆ ಇದೆ.

ಆನೆ ಮಾವುತರು ಆನೆ ಸಾಗಿದ ಮಾರ್ಗ ಗುರುತು ಹಿಡಿದು ಅದರಲ್ಲೇ ಸಾಗಿ ಆನೆಗಳಿರುವ ಪ್ರದೇಶ ಗುರುತು ಮಾಡಲು ಗುರುತು ಮಾಡಲು ಸಹಕರಿಸುತ್ತಾರೆ ಅವರು ಈ ಕೆಲಸದಲ್ಲಿ ಪರಿಣಿತರಾದ್ದರಿಂದ ಅವರ ಸಹಾಯ ಪಡೆಯುತ್ತಾರೆ.

    ಅವರು ಕಾಡಾನೆ ಸಾಗಿದ ಮಾರ್ಗದ ಹುಲ್ಲು- ಗಿಡ- ಕಾಲು ಹೆಜ್ಜೆ, ಆನೆ ಮೂತ್ರ - ಲದ್ದಿ ಗಳನ್ನು ಗುರುತಿಸುವ ಮೂಲಕ ಆನೆ ಸಾಗಿದ ಮಾರ್ಗ ಕಂಡುಹಿಡಿಯೋ ಪರಿಣತಿ ಹೊಂದಿದ್ದಾರೆ.


#ಆನೆ #ಕಾಡಾನೆ #ಆನೆಕಾರಿಡಾರ್ #ಆನೆಮಾವುತರು 
#Anandapuram #sagar #shivamogga #winter #kollibachalu #badrawildlife #arasalu #ForestDepartment #rangeforest #kavadi 

  ಈ ಹೊಸ ತಂಡದಲ್ಲೂ ಮೂರು ಆನೆಗಳು ಇದೆ, ಕಳೆದ ವಾರ ಮೂಡಾಹಗಲು ಗ್ರಾಮದಲ್ಲಿ ಕಂಡುಬಂದಿದ್ದ ಮರಿ ಆನೆ ಜೊತೆಗೆ ಇದ್ದದ್ದು ಅದರ ತಾಯಿ ಆನೆ ಅಲ್ಲ ಅದು ಕೋರೆಗಳಿರುವ ಗಂಡು ಆನೆ ಎಂದು ತಿಳಿದು ಬಂದಿದೆ.

   ಅರಣ್ಯ ಇಲಾಖೆ ಸಿಬ್ಬಂದಿಗಳು ಈ ಎರಡನೇ ಕಾಡಾನೆ ತಂಡವನ್ನು ಗೌತಮಪುರ ಮತ್ತು ಬೈರಾಪುರ ಮಧ್ಯದ ಪೀರನ ಕಣಿವೆಯಿಂದ ನಿನ್ನೆ ಸಂಜೆ ತನಕ (2 - ಜನವರಿ - 2025 ಗುರುವಾರ) ದಣಂದೂರು ಊರಿನ ತನಕ ಬೆದರಿಸಿ ಕಳಿಸಿದ್ದಾರೆ.

 ಅವುಗಳು ನಿನ್ನೆ ರಾತ್ರಿಯಲ್ಲಿ ಕೊಲ್ಲಿ ಬಚ್ಚಲು ಡ್ಯಾಮ್ ಹಿನ್ನೀರು ಪ್ರದೇಶ ಸೇರಿಕೊಳ್ಳುವ ನಿರೀಕ್ಷೆ ಇದೆ.

   ಅಲ್ಲಿನಿಂದ ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸಿ
 ಅರಸಾಳು ರೇಂಜಿನ ಕಡೆ ಕಾಡಾನೆ ಓಡಿಸುವ ಪ್ರಯತ್ನ ಅರಣ್ಯ ಇಲಾಖೆ ಮಾಡುತ್ತಿದೆ.

     ಈಗಾಗಲೇ ಆನೆ ಮಾವುತರ ತಂಡ ಒಂದು ಈ ಕಾಡಾನೆಗಳ  ಸ್ಥಳಾಂತರಕ್ಕೆ ಸಹಕರಿಸಲು ಆಗಮಿಸುವ ನಿರೀಕ್ಷೆ ಇದೆ.

    ಆನೆ ಮಾವುತರು ಆನೆ ಸಾಗಿದ ಮಾರ್ಗ ಗುರುತು ಹಿಡಿದು ಅದರಲ್ಲೇ ಸಾಗಿ ಆನೆಗಳಿರುವ ಪ್ರದೇಶ ಗುರುತು ಮಾಡಲು ಗುರುತು ಮಾಡಲು ಸಹಕರಿಸುತ್ತಾರೆ ಅವರು ಈ ಕೆಲಸದಲ್ಲಿ ಪರಿಣಿತರಾದ್ದರಿಂದ ಅವರ ಸಹಾಯ ಪಡೆಯುತ್ತಾರೆ.

    ಅವರು ಕಾಡಾನೆ ಸಾಗಿದ ಮಾರ್ಗದ ಹುಲ್ಲು- ಗಿಡ- ಕಾಲು ಹೆಜ್ಜೆ, ಆನೆ ಮೂತ್ರ - ಲದ್ದಿ ಗಳನ್ನು ಗುರುತಿಸುವ ಮೂಲಕ ಆನೆ ಸಾಗಿದ ಮಾರ್ಗ ಕಂಡುಹಿಡಿಯೋ ಪರಿಣತಿ ಹೊಂದಿದ್ದಾರೆ.
 
    ಈ ವರ್ಷ ಕಾಡಾನೆಗಳು ಒಂದು ತಂಡ ಬಂದಿರುವುದಲ್ಲ, ಎರಡು ತಂಡದಲ್ಲಿ ಆನಂದಪುರಂ ಆನೆ ಕಾರಿಡಾರ್ ಪ್ರವೇಶ ಮಾಡಿ ವಾಪಸ್ ಸಾಗುತ್ತಿದೆ, ಕಾಡಾನೆಗಳು ಈ ವರ್ಷ ಕಳೆದ ವರ್ಷಕ್ಕಿಂತ 20 ಕಿಲೋ ಮೀಟರ್ ಹೆಚ್ಚು  ದೂರ ಸಾಗಿ ಹೊಸ ಸ್ಥಳ ಅನ್ವೇಷಿಸಿದೆ.

    ಅದು ಅಂಬ್ಲಿಗೊಳ ಡ್ಯಾಮಿನ ಮೇಲೆ ಸಾಗಿ ಸಾಗರ ತಾಲ್ಲೂಕಿನ ತ್ಯಾಗರ್ತಿ ಮತ್ತು ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾವಿಗೆರೆ,ಇಡುವಳ್ಳಿ ಮತ್ತು ಮೈಲಾರಿಕೊಪ್ಪದ ಪ್ರದೇಶ ತಲುಪಿತ್ತು ಹಾಗೆಯೇ ತಂಗಳವಾಡಿಯಿಂದ ಎಡಕ್ಕೆ ಹೊರಳಿ ಹೊಸಕೊಪ್ಪ ಊರಿನಲ್ಲಿ ಸಾಗಿ ಹೋಗಿತ್ತು.

     ಭದ್ರಾ ಅಭಯಾರಣ್ಯದಿಂದ ಬಂದ ಇನ್ನೊಂದು ಆನೆ ಗುಂಪು ಅರಸಾಳು ಅರಣ್ಯದಿಂದ ಹುಂಚ ಹೋಬಳಿಯ ಹೆದ್ದಾರಿಪುರ - ಗರ್ತಿಕೆರೆ -ಬಿದರಳ್ಳಿ ಭಾಗದ ಕೃಷಿ ಜಮೀನುಗಳಿಗೆ ಪ್ರವೇಶ ಮಾಡಿತ್ತು.

   ಕಳೆದ ವರ್ಷ ಡಿಸೆಂಬರ್ 28ಕ್ಕೆ ಕಾಡಾನೆಗಳು ಈ ಪ್ರದೇಶದಿಂದ ವಾಪಸ್ ಹೋಗಿದ್ದು ದಾಖಲಾಗಿತ್ತು ಆದರೆ ಈ ವಷ೯  ಬಂದ ಈ ಕಾಡಾನೆಗಳ ತಂಡ ಇನ್ನು ಇಲ್ಲೇ ಸಂಚಾರ ಮಾಡುತ್ತಿದೆ.

   ಅರಣ್ಯ ಇಲಾಖೆ ಈ ಬಗ್ಗೆ ಹೆಚ್ಚು ಗಮನ ಹರಿಸಿದೆ ಮತ್ತು ಕಾಳಜಿ ವಹಿಸಿದೆ ಅದೇ ರೀತಿ ಈ ಭಾಗದ ಸಾರ್ವಜನಿಕರು ಕಳೆದ ವರ್ಷದ ರೀತಿ ಭಯ ಬೀಳದೆ ಆನೆಗಳ ಜೊತೆ ಸಹಬಾಳ್ವೆ ಅನಿವಾರ್ಯ ಎಂಬ ಅರಿವು ಪಡೆದಿದ್ದು ಆನೆಗಳ ವಾಪಾಸಾತಿಗೆ ಸುಗಮ ಸಂಚಾರ ಮಾಗ೯ ಸುಲಭವಾಗಿ ಕಲ್ಪಿಸಲು ಸಹಕರಿಸುತ್ತಿದ್ದಾರೆ.

   ಈ ಕೆಳಗಿನ ಚಿತ್ರದಲ್ಲಿ ಕೆಂಪು ಗೆರೆ ಆವರಣ ಹಾಲಿ ಕಾಡಾನೆ ಸಂಚರಿಸುತ್ತಿರುವ ಪ್ರದೇಶ ಮತ್ತು ಪಕ್ಕದ ಕೊಲ್ಲಿಬಚ್ಚಲು ಡ್ಯಾಮ್ ಆನಂದಪುರಂ ಅನೇ ಕಾರಿಡಾರ್ ಕೇಂದ್ರವಾಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...