Skip to main content

Blog number 2303. ಕೇರಳದ ಕುಂಬಳೆ ಸಮೀಪದ ಅನಂತಪುರ ದೇವಾಲಯದ ಕೊಳದಲ್ಲಿ ಹೊಸ ಬಬಿಯ

ಕೇರಳದ ಕುಂಬಳೆ ಸಮೀಪದ ಅನಂತಪುರ ದೇವಾಲಯದ ಕೊಳದಲ್ಲಿ ಹೊಸ ಬಬಿಯ ಪ್ರತ್ಯಕ್ಷ.
    
 ಕೆಳದಿ ಅರಸರ ಎರೆಡು ಆನಂದಪುರಂಗಳಲ್ಲಿ ಒಂದಾದ ಕೇರಳದ ಕುಂಬಳೆ ಸಮೀಪದ ಅನಂತಪುರದ ಅನಂತಪದ್ಮನಾಭ ದೇವಾಲಯದ ಕೊಳದಲ್ಲಿ 70 ವರ್ಷ ಬದುಕಿದ್ದ ಬಬಿಯಾ ಎಂಬ ಮೊಸಳೆಯ ಎರಡನೆ ವರ್ಷದ ಪುಣ್ಯ ಸ್ಮರಣೆ ಇವತ್ತು 

       ಶಿವಮೊಗ್ಗ ಜಿಲ್ಲೆಯ ಆನಂದಪುರಂ ಚಂಪಕ ಸರಸ್ಸು ಕೇರಳದ ಕುಂಬಳೆ ಸಮೀಪದ ಅನಂತಪುರಕ್ಕೂ ಇರುವ ಸಂಬಂದ.

 ಪುರಾತತ್ವ ಇಲಾಖೆ 1993ರಲ್ಲಿ ಕೆಳದಿ ಅರಸರ ನಿದಿಗಾಗಿ ಸಂಶೋದನೆಗೆ ಹಣ ಬಿಡುಗಡೆ ಮಾಡಿತ್ತು

 ಈ ಎರೆಡೂ ಪ್ರದೇಶದಲ್ಲಿನ ಹೆಸರು ಆನಂದಪುರಂ

    ಕೆಂಪು ಜಂಬಿಟ್ಟಿಗೆಯಲ್ಲಿ ಕೊಳ ನಿಮಾ೯ಣ ಕೊಳದ ಮಧ್ಯ ದೇವಾಲಯದ ಸಾಮ್ಯತೆ.

 ಕುಂಬಳೆಯ ಅನಂತಪುರದ ಅನಂತಪದ್ಮನಾಭ ದೇವಾಲಯದ ಕೊಳದಲ್ಲಿ ಕೆಳದಿ ಅರಸರ ನಿದಿ ಕಾಯುತ್ತಿದೆ ಎಂಬ ಪ್ರತೀತಿ ಇದೆ.

#Babiya #keralatourism #Kumble #ananthapuram #ananthapadmanabhaswamytemple #vegcrocodile #Manjeshwara #keladiviral 


     ದಿನಾಂಕ 9- ಅಕ್ಟೋಬರ್ -2022 ಭಾನುವಾರ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಂಬಳೆ ಸಮೀಪದ ಅನಂತಪುರದ ಶ್ರೀ ಅನಂತ ಪದ್ಮನಾಭ ದೇವಾಲಯ ಕೊಳದ ಮಧ್ಯ ಇದ್ದು ಅಲ್ಲಿನ ಸುಮಾರು 70 ವಷ೯ದ ಬಬಿಯಾ ಎಂಬ ಮೊಸಳೆ ಮೃತವಾಯಿತು.
  ಅದರ ಅಂತ್ಯ ಸಂಸ್ಕಾರ ಕೂಡ ಧಾರ್ಮಿಕ ಪದ್ಧತಿಯಲ್ಲಿ ನಡೆಯಿತು ಮತ್ತು ಅಲ್ಲಿ ಸಮಾದಿ ಕೂಡ ನಿರ್ಮಿಸಲಾಗಿದೆ.
   ಈ ದೇವಾಲಯ ಕೂಡ ಕೆಳದಿ ರಾಜ ವೆಂಕಟಪ್ಪ ನಾಯಕರೇ ನಿಮಿ೯ಸಿದ್ದು ಮತ್ತು ಈ ಊರಿನ ಹೆಸರು ಆನಂದಪುರ (ಕೇರಳದ ಮಲೆಯಾಳ ಆಕ್ಸೆಂಟ್ ನಲ್ಲಿ ಅನಂತಪುರ ಆಗಿದೆ) ಹಾಗಾಗಿ ಕೆಳದಿ ಆಡಳಿತದಲ್ಲಿ ಎರೆಡು ಆನಂದಪುರಂ ಇರುವುದು ವಿಶೇಷ ಮತ್ತು ಈ ಎರೆಡೂ ಕೊಳ ನಿರ್ಮಿಸಿದ್ದು ಸ್ಥಳಿಯ ಕೆಂಪುಕಲ್ಲಿನಿಂದ (ಲಾಟರೇಟ್ ಸ್ಟೋನ್) ಹಾಗೂ ಎರೆಡೂ ಕೊಳದ ಮಧ್ಯದಲ್ಲಿ ದೇವಾಲಯ ಇದೆ.
   ಕೇರಳದ ಅನಂತಪುರದ ಈ ಸ್ಥಳ ಪುರಾತತ್ವ ಇಲಾಖೆಗೆ ಸೇರಿದೆ, 1993 ರಲ್ಲಿ ಪುರಾತತ್ವ ಇಲಾಖೆ ಇಲ್ಲಿನ ಕೆಳದಿ ಅರಸರ ಗುಪ್ತ ನಿಧಿ ಸಂಶೋದನೆಗಾಗಿ 15 ಲಕ್ಷ ಮಂಜೂರು ಮಾಡಿ ಇಡೀ ಕೊಳದ ನೀರು ತೆಗೆದು ಕೊಳದ ಆಳದಲ್ಲಿ ಇದ್ದ ಗುಪ್ತ ಸುರಂಗದಲ್ಲಿದ್ದ 3 ಬಾವಿಗಳಲ್ಲಿ 2 ಬಾವಿ ಸಂಶೋಧಿಸಿತ್ತು ಆಗ ಮಳೆಗಾಲ ಪ್ರಾರಂಭವಾಗಿ ಸಂಶೋದನೆ ನಿಂತಿತು ನಂತರ ಈವರೆಗೆ ನಡೆದಿಲ್ಲ, ಈ ಸಂಶೋದನೆಗೆ ಕಾರಣ ರಾಮರಾವ್ ಎಂಬುವ ಕೆಳದಿ ವಂಶಸ್ಥರು ಹಾಜರು ಮಾಡಿದ ಪುರಾತನ ನಕ್ಷೆ ಅದರಲ್ಲಿ ಕೆಳದಿ ಅರಸರ ನಿದಿ ಈ ಕೊಳದ ತನಕ ತಂದ ಮಾಹಿತಿಯ ಚಿತ್ರ ನಕಾಶೆ ಅಂತೆ.
   ಪುರಾತನ ಕಾಲದಿಂದ ಯಾವಾಗಲೂ ಈ ಕೊಳದಲ್ಲಿ ಮೊಸಳೆ ಒಂದು ಇರುತ್ತದೆ ಅದರ ಹೆಸರು ಬಬಿಯಾ ಅದು ಕೆಳದಿ ಅರಸರು ಸಂರಕ್ಷಿಸಿದ ನಿದಿ ಕಾಯುತ್ತದೆ ಎಂಬ ಪ್ರತೀತಿ ಇದೆ, 70 ವರ್ಷದ ಬಬಿಯಾ ಮೊಸಳೆ  ಮೃತವಾಗಿದ್ದು ಇದರ ನಂತರ ಇನ್ನೊಂದು ಮೊಸಳೆ ಬಬಿಯಾ ಹೆಸರಲ್ಲೇ ಸಾಕುವುದು ಪದ್ದತಿ ಆದರೆ ಈ ಕಾಲದಲ್ಲಿ ಅದು ಮುಂದುವರಿಸುವ ಬಗ್ಗೆ ಮಾಹಿತಿ ಇರಲಿಲ್ಲ.
  ಆದರೆ ಕಳೆದ ವರ್ಷ 8 ನವೆಂಬರ್ 2023 ರಂದು ಹೊಸ ಮೊಸಳೆ ಈ ಕೊಳದಲ್ಲಿ ಪ್ರತ್ಯಕ್ಷ ಆಗಿದೆ.
   ಶಿವಮೊಗ್ಗ ಜಿಲ್ಲೆಯ ನಮ್ಮ ಆನಂದಪುರಂ ಮತ್ತು ಕೇರಳದ ಕುಂಬಳೆ ಸಮೀಪದ ಅನಂತಪುರಕ್ಕೆ ಕೆಳದಿ ಅರಸರ ಕಾಲದಿಂದ ಸಂಬಂದವಿದೆ.
   ಕೆಳದಿ ಅರಸರ ಕಾಲದ ನಿಧಿ ಕಾಯುವ ಮೊಸಳೆ ಬಬಿಯ ಎರಡನೆ ಪುಣ್ಯ ತಿಥಿಯಲ್ಲಿ ಅಲ್ಲಿನ ಕೊಳದಲ್ಲಿ ಹೊಸ ಬಬಿಯಾ ತೇಲುತ್ತಿದೆ.
     ನಮ್ಮ ಜಿಲ್ಲೆಯ ಸಾಗರ ತಾಲ್ಲುಕಿನ ಕೆಳದಿ ಅರಸರು ಕೇರಳ ಕಾಸರಗೋಡು ತನಕ ಆಳ್ವಿಕೆ ಮಾಡಿದ್ದಾರೆ ಇವರ ಆಳ್ವಿಕೆಯ ಮತ್ತು ಅನೇಕ ವಿಚಾರಗಳ ಬಗ್ಗೆ ಸಂಶೋದನೆಗಳು ಆಗದೇ ಇರುವುದು ವಿಪಯಾ೯ಸ.
   ಆನಂದಪುರಂನಲ್ಲಿ ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾರ ದುರಂತ ಪ್ರೇಮ ಕಥೆಯ ಸ್ಮಾರಕವಾದ #ಚಂಪಕ_ಸರಸ್ಸು ನಿರ್ಮಾಣವಾಗಿ 400 ವರ್ಷಗಳಾಗುತ್ತಿದೆ ಆದರೆ ಈ ಸುಂದರ ಸ್ಮಾರಕ ಇನ್ನೂ ಪುರಾತತ್ವ ಇಲಾಖೆ ತನ್ನ ವಶಕ್ಕೆ ಪಡೆದಿಲ್ಲ ಮತ್ತು ಅದರ ಮಾಹಿತಿ ಕೂಡ ಸಂಗ್ರಹಿಸಿಲ್ಲ.
  ರಾಜ ವೆಂಕಟಪ್ಪ ನಾಯಕ ಈಗಿನ ಸಾಗರ ಪಟ್ಟಣದ ನಿರ್ಮಾತೃ, ತನ್ನ ಅಜ್ಜ ಸದಾಶಿವ ನಾಯಕರ ಸ್ಮರಣೆಗಾಗಿ ಈ ಪಟ್ಟಣ, ಗಣಪತಿ ದೇವಾಲಯ ಮತ್ತು ಪಕ್ಕದಲ್ಲಿ ಕೆರೆ ನಿರ್ಮಿಸಿ ಸದಾಶಿವ ಸಾಗರ ಎಂದು ನಾಮಕರಣ ಮಾಡಿದ್ದರು.
  ಕೆಳದಿ ಅರಸರಲ್ಲೇ ದೀರ್ಘ 43 ವರ್ಷ ಆಡಳಿತ ಮಾಡಿದ ರಾಜ ವೆಂಕಟಪ್ಪ ನಾಯಕರ ಹೆಸರನ್ನು ಕೆಳದಿ ಆಸ್ಥಾನದ ಕವಿಗಳು ಮತ್ತು ರಾಜವಂಶಸ್ಥರು ಮರೆ ಮಾಚಲು ಕಾರಣ ರಾಜ ಆನಂದಪುರಂನ ಬೆಸ್ತರ ಜಾತಿಯ ಸುಂದರಿ ಚಂಪಕಾಳು ನಿತ್ಯ ಬಿಡಿಸುತ್ತಿದ್ದ ರಂಗೋಲಿಗೆ ಮನಸೋತು ವಿವಾಹ ಆದದ್ದೆ ಕಾರಣ.
    ಪಟ್ಟದ ರಾಣಿ ಇದರಿಂದ ಅಸಮದಾನ ಪಟ್ಟು ಅನ್ನ ಆಹಾರ ಸೇವಿಸದೇ ಜೀವ ತ್ಯಾಗಮಾಡಿದ್ದು ಇದರಿಂದ ರಾಜ್ಯದಲ್ಲಿ ವೆಂಕಟಪ್ಪ ನಾಯಕರ ಮೇಲೆ ಪ್ರಜೆಗಳಲ್ಲಿ ಉಂಟಾದ ಅಸಹನೆಗೆ ನೊಂದು ಆತ್ಮಹತ್ಯೆ ಮಾಡಿಕೊಂಡ ಚಂಪಕಾಳ ಸ್ಮರಣೆಗಾಗಿ ಆನಂದಪುರಂ ಕೋಟೆಗೆ ಸಮೀಪದ  ಉತ್ತರ ಭಾರತದ ನಾಥಪಂಥದ ಮಹಾಂತರ ಮಠದ ಸಮೀಪ ಸರಸ್ಸು (ಕೊಳ) ನಿಮಿ೯ಸಿ ಅದರ ಮಧ್ಯದಲ್ಲಿ ದೇವರ ಗುಡಿ ನಿಮಿ೯ಸಿ ಅಲ್ಲಿ ಚಂಪಕ ನಿತ್ಯ ಪೂಜಿಸುತ್ತಿದ್ದ ಶಿವಲಿಂಗ ಇಟ್ಟಿದ್ದಾರೆಂಬ ಸ್ಥಳ ಪುರಾಣ ಅಥವ ಜನಪದ ಕಥೆಯಲ್ಲಿ ಹೇಳುತ್ತಾರೆ ಅದಕ್ಕೆ ಪೂರಕವಾಗಿ ರಾಣಿ ಭದ್ರಮ್ಮಾಜಿ ಮೃತಳಾದ ಸಂದರ್ಭದಲ್ಲಿ ಇಟಲಿಯ ಪ್ರವಾಸಿ ಡೆಲ್ಲೋ ವಲ್ಲೆ ರಾಜ ವೆಂಕಟಪ್ಪ ನಾಯಕರ ಬೇಟಿಗೆ ಬಂದಾಗ ಈ ಕಾರಣದಿಂದ ರಾಜನ ಬೇಟಿ ವಿಳಂಬವಾಗಿ ಆ ಸಂದರ್ಭದಲ್ಲಿನ ಘಟನೆಗಳನ್ನು ಬರೆದ ಡೆಲ್ಲೊ ವಲ್ಲೆ ಪತ್ರ ಐತಿಹಾಸಿಕ ದಾಖಲೆಗಳಾಗಿದೆ (ಬ್ರಿಟನ್ ನಲ್ಲಿನ ಬ್ರಿಟೀಶ್ ಮ್ಯುಸಿಯಂನಲ್ಲಿ ಸಂರಕ್ಷಿಸಲಾಗಿದೆ).
  ಚಂಪಕಾಳ ನೆನಪಿಗಾಗಿಯೇ ಆನಂದಪುರಂ ಎಂದು ಹೆಸರಿಟ್ಟರೆಂದು ಮೈಸೂರು ಗೆಜೆಟಿಯರ್ ನಲ್ಲಿ ನಮೂದಾಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...