ದೇವರನ್ನ ಮಾರಾಟಕ್ಕೆ ಇಟ್ಟಿರುವ ದೇವಾಲಯದ ಮತ್ತು ಮಠಗಳ ಮಾಲಿಕರಾದ ಅಚ೯ ಕರು, ಸ್ವಾಮೀಜಿಗಳು ಹಣ, ಖ್ಯಾತಿ ಮತ್ತು ಅಧಿಕಾರ ಹೊಂದಿರುವವರನ್ನ ಹೇಗಾದರೂ ಮಾಡಿ ತಮ್ಮಲ್ಲಿಗೆ ಕರೆಸಿ ಅದನ್ನ ಪತ್ರಿಕೆ ಟಿವಿಗಳಲ್ಲಿ ಸುದ್ದಿ ಮಾಡುವ ವರದಿಗಾರರನ್ನ ತಾಜಾ ಮಾಡಿ ಸುದ್ದಿ ಮಾಡಿಸಿದರೆ ನಮ್ಮoತ ಸಾಮಾನ್ಯರು ಜಾಹಿರಾತು ನೋಡಿ ಸೋಪು, ಶಾಂಪು ಖರೀದಿಸಲು ಮುಗಿ ಬೀಳುವಂತೆ ಸದರಿ ದೇವಸ್ಥಾನಕ್ಕೆ ಹೋಗುತ್ತೇವೆ, ಅಲ್ಲಿನ ಸೇವಾ ಬೋಡ್೯ನOತೆ ಮೆನು ಆಯ್ಕೆ ಮಾಡಿ ಹಣ ಪಾವತಿ ಮಾಡಿ, ಹುಂಡಿ ತುಂಬಿಸಿ, ಅಚ೯ಕರಿಗೆ ಟಿಪ್ಸ್ ನೀಡಿ ಪಾಪ ಕಳೆದು ಕೊಂಡ ಭ್ರಮೆಯಲ್ಲಿ ಶೂದ್ರರಿಗೆ ಮೀಸಲಿಟ್ಟ ಜಾಗದಲ್ಲಿ ಉಂಡು ಬರುತ್ತಾರೆ.
ಅಂಗಡಿ ಮಾಲಿಕರು ಲಾಭದಿಂದ ಸುಖ ಪಟ್ಟಿ, ಸಕಾ೯ರದಿಂದ ಹೆಚ್ಚಿನ ಸವಲತ್ತು, ಪ್ರಶಸ್ತಿ ಪಡೆದು, ಹೆಚ್ಚು ಲಾಭ ನೀಡುವ ಪಕ್ಷಕ್ಕೆ ಓಟು ಕೊಡಿಸಲು ವ್ಯವಹಾರ ಕುದುರಿಸುತ್ತಾರೆ.
ದೇವರು ಸವಾ೯೦ತರಯಾಮಿ ಅನ್ನುವುದು ಮರೆಸಿ ಬಿಡುತ್ತಾರೆ ಹಾಗೆ ಭಕ್ತರೂ ಮರೆಯುತ್ತಾರೆ ಇದು ಇವತ್ತಿನ ದೇವಸ್ಥಾನ ಮತ್ತು ಮಠಗಳು ಕಾಪೊ೯ರೇಟ್ ಮಟ್ಟಕ್ಕೆ ಬೆಳೆಯುತ್ತಿರುವ ಕ್ರಮ.
ISO,ISI ಮುಂತಾದ ಸಟಿ೯ಫಿಕೇಟು ಈಗಾಗಲೆ ಗೋಕಣ೯ ದೇವಸ್ಥಾನಕ್ಕೆ ಬಂದಿದೆ ಅಂತ ಅಲ್ಲಿನ ಸ್ವಾಮಿಗಳು ಪತ್ರಿಕಾ ಹೇಳಿಕೆ ನೀಡಿರುವುದು ಇದಕ್ಕೆ ಸಾಕ್ಷಿ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment