# ಶ್ರದ್ದಾ೦ಜಲಿಗಳು#
ಪಿ.ಆರ್. ಸೋಮನ್ ನಿವೃತ್ತ ಸೈನಿಕರು, ಕೇರಳ ಮೂಲದವರಾದರೂ ಜೀವನದ ಹೆಚ್ಚಿನ ಅವದಿ ಸಾಗರ ಪಟ್ಟಣದಲ್ಲಿ, ಇವರ ಅಣ್ಣ ಬಾಲ ಕೃಷ್ಣ ಮೇಸ್ತ್ರೀ ಸಾಗರದಲ್ಲಿ ಹೆಸರಾಂತ ಗುತ್ತಿಗೆದಾರರಾಗಿದ್ದರು.
ಸಾಗರದ ತೀ.ನಾ.ಶ್ರೀನಿವಾಸರ ಜೊತೆ 1990ರಲ್ಲಿ ಮೊದಲ ಭೇಟಿ ಅವತ್ತು ಅವರ ಮನೆಯಲ್ಲಿನ ಪ್ರತಿ ವಸ್ತು, ಪೀಟೋ ಪರಣಗಳನ್ನ ಅತ್ಯಂತ ಶಿಸ್ತು ಬದ್ದವಾಗಿ ಜೋಡಿಸಿದ್ದು ನೋಡಿ ಸೋಜಿಗ ಪಟ್ಟಿದ್ದೆ.
ಕಾಂಗ್ರೇಸ್ ಪಕ್ಷವನ್ನ ಪುನರ್ ಸಂಘಟಿಸಿ ಪುನಃ ಬಹಳ ವಷ೯ಗಳ ನಂತರ ಕಾಗೋಡರನ್ನ ಕರೆತರುವ ಆಹಮದ್ ಆಲೀ ಖಾನರ ಯೋಜನೆಯಲ್ಲಿ ಪಿ.ಆರ್.ಸೋಮನ್ ತುಂಬಾ ಶ್ರಮವಹಿಸಿದ್ದರು.
1995ರಲ್ಲಿ ನಾನು ಆನಂದಪುರಂ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಸ್ಪದಿ೯ಸಿದ್ದಾಗ ಬೆಂಬಲಿಸಿ ಅವರ ಟ್ರಾಕ್ಸ್ ಒಂದನ್ನ ಪ್ರಚಾರಕ್ಕಾಗಿ ಉಚಿತವಾಗಿ ನೀಡಿದ್ದನ್ನ ನಾನು ಯಾವತ್ತೂ ಮರೆತಿಲ್ಲ.
ಇವರ ಶ್ರೀಮತಿ ಅತಿಥಿ ಸತ್ಕಾರದಲ್ಲಿ ಪತಿಯ ಆರೈಕೆಯಲ್ಲಿ ಮುಂದು ಈ ಆದಶ೯ ದಂಪತಿಗಳಿಗೆ ಇರುವ ಇಬ್ಬರು ಗಂಡು ಮಕ್ಕಳು ಕೂಡಾ ಸಜ್ಜನರು.
ಸಾಗರದ ರಾಜಕಾರಣದಲ್ಲಿ ಪಿ.ಆರ್.ಸೋಮನ್ ಮತ್ತು ದಿ II ಕೋಯಾರ ಹೆಸರು ಚಿರ ಸ್ಥಾಯಿ ಪಕ್ಷ ಯಾವುದೇ ಇರಲಿ, ಇಬ್ಬರೂ ಕೇರ೪ ಮೂಲದವರಾದರೂ ಅವರ ಕಾಯ೯ಕ್ಷೇತ್ರ ಕನ್ನಡ ನಾಡಾದ ಸಾಗರ ಆಗಿತ್ತು.
ಇವತ್ತಿನ ಪತ್ರಿಕೆಯಲ್ಲಿ ಸೋಮನ್ ವಿದಾಯ ಓದಿ ವಿಷಾದದಿಂದ ಈ ಸಂತಾಪ ಬರೆದೆ, ದೇವರು ಅವರ ಆತ್ಮಕ್ಕೆ ಸದ್ಗತಿ ನೀಡಲಿ ಹಾಗು ಅವರ ಕುಟುಂಬಕ್ಕೆ ದುಖ: ಬರಿಸುವ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment