Skip to main content

Blog number 3434 ಡಾಕ್ಟರ್ ಅಂಜನಪ್ಪ ಮತ್ತು ನನ್ನ ಭೇಟಿ

#ಡಾಕ್ಟರ್_ಅಂಜನಪ್ಪ

#ಸಮಾಜದಲ್ಲಿ_ಉತ್ತುಂಗಕ್ಕೆೇರಿದರೂ

#ತಳ_ಮರೆಯದ_ಅಪರೂಪದ_ವಿಶೇಷ_ವ್ಯಕ್ತಿ

#ಬಾಲ್ಯದ_ಅವರ_ಕನಸು_ಓದಿ_ಶಿಕ್ಷಕನಾಗಬೇಕು

#ಒಳ್ಳೆ_ಉಡುಗೆ_ತೊಡುಗೆ_ತೊಡಬೇಕು

#ಆದರೆ_ಅವರು_ತಲುಪಿದ್ದು_ಅಂತರಾಷ್ಟ್ರೀಯ_ಶ್ರೇಷ್ಟ_ಸರ್ಜನ್_ಸಾಲಿಗೆ

#ಕೆಂಪೆಗೌಡ_ಇನ್ಸ್ಟಿಟ್ಯೂಟ್_ಆಫ್_ಮೆಡಿಕಲ್_ಸೈನ್ಸ್_ಚೇರ್ಮನ್_ಹುದ್ದೆ_ತನಕ_ಸಾಧನೆ.

#HulikalNataraj #DrAnjanappa #Vtswamy #bdravi #kimshospital #bangalore #hnnarasimhaia #pavadabayalu 

    ಶ್ರೀಮಂತಿಕೆ, ಅಧಿಕಾರ ಮತ್ತು ಪ್ರಖ್ಯಾತಿ ಪಡೆದ ನಂತರ ಅನೇಕರಿಗೆ ತಮ್ಮ ಅಕ್ಕಪಕ್ಕದವರ ಮತ್ತು ಜೊತೆಗಾರರ ಗುರುತು ಸಿಗವುದಿಲ್ಲ.

   ಇಂತಹ ಕಾಲದಲ್ಲಿ ರಾಜ್ಯದ ಪ್ರತಿಷ್ಟಿತ ವೈದ್ಯಕೀಯ ಸಂಸ್ಥೆ ಆಗಿರುವ #ಕೆಂಪೇಗೌಡ_ಇನ್ಸ್ಟಿಟ್ಯೂಟ್_ಆಫ್_ಮೆಡಿಕಲ್_ಸೈನ್ಸ್ ಸಂಸ್ಥೆಯ #ಚೇರ್ಮನ್ ಆಗಿರುವ #ಡಾಕ್ಟರ್_ಅಂಜನಪ್ಪ ಅವರದ್ದು ವಿಭಿನ್ನ ಮತ್ತು ಜನಸಾಮಾನ್ಯರ ಜೊತೆಯ ಅವಿನಾಭಾವ ಸಂಬಂಧವನ್ನು ಇಟ್ಟುಕೊಂಡಿದ್ದಾರೆ.

   ತಾನು ಹುಟ್ಟಿದ ಮಣ್ಣು ಮರೆಯದ ಸಾಧಕರು ಇವರು, ವಿಚಾರವಾದಿ ಹೆಚ್ ಎನ್ ನರಸಿಂಹಯ್ಯ ಅವರ ವಿದ್ಯಾರ್ಥಿ ಆಗಿದ್ದವರು.

  ಬಾಲ್ಯದಲ್ಲಿ ಅತ್ಯಂತ ಬಡತನದಲ್ಲಿ ಬೆಳೆದವರು ಬಾಲ್ಯದ ಅವರ ಕನಸು ಓದಿ ದೊಡ್ಡವನಾದ ಮೇಲೆ ಶಿಕ್ಷಕನಾಗಬೇಕು, ಒಳ್ಳೆಯ ಉಡುಪು ಧರಿಸಬೇಕು ಹಾಗು ಅಂತದ್ದನ್ನ ಖರೀದಿಸಬೇಕು ಅನ್ನುವುದಾಗಿತ್ತಂತೆ.

  ಆದರೆ ಅವರ ನಯ -ವಿನಯ- ವಿಧೇಯತೆಗಳು, ಅವರ ಕಷ್ಟದ ದಿನಗಳನ್ನು ಮರೆಯದ ಅವರ ಮಾನವೀಯತೆ ಗುಣಗಳು ಅವರನ್ನು ಈಗ ಅಂತರರಾಷ್ಟ್ರೀಯ ಮಟ್ಟದ ಶಸ್ತ್ರ ವೈದ್ಯರನ್ನಾಗಿಸಿದೆ.

  ಇವತ್ತು ರಾಜ್ಯದ ಪ್ರತಿಷ್ಠಿತ ಕೆಂಪೇಗೌಡ ಇನ್ ಸ್ಟಿಟ್ಯೂಟ್ ಆಪ್ ಮೆಡಿಕಲ್ ಸೈನ್ಸ್ ಸಂಸ್ಥೆಯ ಚೇರ್ಮನ್ ಆಗಿದ್ದಾರೆ,ಅವರು ಕೊರೊನಕಾಲದಲ್ಲಿ ಪ್ರಾರಂಭಿಸಿದ ಅವರ ಯೂಟ್ಯೂಬ್ ಕೋಟ್ಯಾಂತರ ಜನರನ್ನು ತಲುಪಿತು ಅದರಲ್ಲಿ ಅವರು ಜನರ ಆರೋಗ್ಯದ ಬಗ್ಗೆ ಮತ್ತು ಸಮಾಜದಲ್ಲಿರುವ ಶೋಷಣೆಯ ವಿರುದ್ಧ ಜನರಿಗೆ ಮಾಹಿತಿ ಕೊಡುತ್ತಾ ಬಂದಿದ್ದಾರೆ.

  ಅವರು ಸಾಮಾಜಿಕ ಜಾಲತಾಣದಲ್ಲಿ ಇಷ್ಟೆಲ್ಲ ಪ್ರಸಿದ್ಧಿಯಾಗಿದ್ದರಿಂದ ರಾಜ್ಯ ಒಕ್ಕಲಿಗರ ಮಹಾ ಸಂಘದ ಚುನಾವಣೆಯಲ್ಲಿ ಸುಲಭವಾಗಿ ಗೆದ್ದು ಬಂದರು ಆ ಸಂಸ್ಥೆಯ ನಿರ್ದೇಶಕರೂ ಆದರು.

   ಅವರು ಎಲ್ಲೇ ಹೋದರು ಜನ ಅವರನ್ನು ಗುರುತಿಸುತ್ತಾರೆ ಆದರೆ ಪ್ರಸಿದ್ಧಿಯ ಹಮ್ಮು- ಬಿಮ್ಮು ಅವರ ಹತ್ತಿರ ಬಂದಿಲ್ಲ.

   ಅವರ ತಂದೆ ಎರಡನೇ ತರಗತಿವರೆಗೆ ಓದಿದವರು, ಇವರ ತಾಯಿ ಶಿಕ್ಷಣ ಪಡೆಯಲಾಗದವರು.

   ಕರ್ನಾಟಕ ರಾಜ್ಯ ವಿಜ್ಞಾನ ಸಂಶೋಧನಾ ಪರಿಷತ್ ಉಪಾಧ್ಯಕ್ಷರು ಆಗಿದ್ದಾರೆ, ಈ ಸಂಸ್ಥೆಯ ಅಧ್ಯಕ್ಷರಾದ ಪವಾಡ ಬಯಲು ಖ್ಯಾತಿಯ #ಹುಲಿಕಲ್_ನಟರಾಜ್ ಮತ್ತು ಆ ಸಂಸ್ಥೆಯ ಪದಾಧಿಕಾರಿಗಳ ಜೊತೆ ನನ್ನ ಕಛೇರಿಗೆ ಬಂದಿದ್ದರು.

    ತಮ್ಮ ಮುಂದಿನ ಜೀವನದಲ್ಲಿ ರಾಜ್ಯದ ಜನತೆಗೆ ಮೂಡನಂಬಿಕೆಯ ವಿರುದ್ಧ ಜನಜಾಗ್ರತಿ ಮಾಡುವ ಉದ್ದೇಶ ಹೊಂದಿದ್ದಾರೆ ಅದಕ್ಕಾಗಿ ಅವಕಾಶ ನೀಡಿದ ಹುಲಿಕಲ್ ನಟರಾಜ್ ರವರನ್ನು ಅಭಿನಂದಿಸುತ್ತಾರೆ.

  ನಮ್ಮ ಸಂಸ್ಥೆಯ ವತಿಯಿಂದ ಅವರಿಗೆ ಶಾಲು ಹೊದಿಸಿ ಗೌರವ ಸಮರ್ಪಿಸಿ ನಮ್ಮ #ಮಲ್ಲಿಕಾ_ವೆಜ್_ರೆಸ್ಟೋರೆಂಟ್ ನ ಉಪಹಾರ ಚಹಾ ದೊಂದಿಗೆ ಅವರನ್ನ ಬೀಳ್ಕೊಟ್ಟೆವು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...