Skip to main content

# ಜನಾದ೯ನ ಪೂಜಾರರ ಆತ್ಮಚರಿತ್ರೆ ಒಂದು ಜನಸಾಮಾನ್ಯ ಬಡ ಶೂದ್ರನ ಸಂಘಷ೯ ಜೀವನ ಸಂಗ್ರಾಮ#

# ಜನಾದ೯ನ ಪೂಜಾರರ ಆತ್ಮ ಚರಿತ್ರೆ#
  
     ಬಾಲ್ಯದಲ್ಲಿ ಈ ಬಾಲಕ ..ಗೆಳೆಯನ ಮನೆಯ ರಸ್ತೆಯಲ್ಲಿ ಇರುವ ಬಾವಿಕಟ್ಟಿಗೆ ಕೈ ಸವರಿ ಕೊಂಡು ಹೋದದ್ದು ನೋಡಿ ಆ ಮನೆಯವರು ಆಳದಲ್ಲಿ ನೀರು ಇದ್ದ ಆ ಬಾವಿಯ ನೀರು ತೆಗೆದು ಹೊರ ಚೆಲ್ಲುತ್ತಾರೆ.
    ಒಮ್ಮೆ ಇವರ ತಂದೆ ಜೊತೆ ಹೋಟೆಲ್ಗೆ ಹೋದಾಗ ಹೋಟೆಲ್ ಮಾಲಿಕ ಚಹಾ ಗೆರೆಟೆ ಚಿಪ್ಪಿನಲ್ಲಿ ನೀಡುತ್ತಾನೆ.
   ಮಂಗಳೂರಿನ ಪ್ರಸಿದ್ದ ದೇವಾಲಯದಲ್ಲಿನ ಚಿಲುಮೆ ನೀರು ತರಲು ಹೋದಾಗ ಅಲ್ಲಿನ ಏಳು ಕೊಳಗಳಲ್ಲಿ ಮಿಂದು ದೇವರಿಗೆ ಕೈ ಮುಗಿಯುವಾಗ ಅಲ್ಲಿನ ಅಚ೯ಕ ವೃಂದ ಕುತ್ತಿಗೆ ಹಿಡಿದು ಹೊರದಬ್ಬುತ್ತಾರೆ.
   ಪ್ರಾಥಮಿಕ ಶಾಲಾ ವಿದ್ಯಾಭ್ಯಾಸದ ಹಂತದಲ್ಲಿ ಈತನಿಗೆ ದರಿಸಲು ಅಂಗಿ ಇಲ್ಲ, ಒಂದೇ ಒಂದು ಚೆಡ್ಡಿ ಮಾತ್ರ ಇದ್ದಿದ್ದು.
  ಬಿಲ್ಲವರಿಗೆ ದೇವರಿಲ್ಲ, ಅವರು ದೇವರನ್ನು ನೋಡಬಾರದು ಎಂಬುದು ಅವತ್ತಿನ ಪದ್ದತಿ ಆಗಿತ್ತು.
  ಮುಂದೆ ಈ ಬಾಲಕ ಮುಂಬೈನಲ್ಲಿ ವಕೀಲಿ ಕಲಿತು ಮಂಗಳೂರಿನ ಖ್ಯಾತ ವಕೀಲರಾಗಿ ಕಾಂಗ್ರೇಸ್ ಪಕ್ಷದಿಂದ ಸಂಸದರಾಗಿ ಪೈನಾನ್ಸ್ ಮಂತ್ರಿ ಆಗಿ ದೇಶದಾದ್ಯ೦ತ ಬಡವರಿಗೆ ಸಾಲ ಮೇಳ ಮಾಡಿ ಪ್ರಖ್ಯಾತರಾದ ಜನಾದ೯ನ ಪೂಜಾರರ ಆತ್ಮಚರಿತ್ರೆ ಭಾರತದ ಬಡ ಹಿಂದುಳಿದ ಶೂದ್ರನ ದೀಘ೯ ಸಂಘಷ೯ ಜೀವನದ ಕಥೆ.
   ಆಗ ಭಾರತದ ಬ್ಯಾಂಕುಗಳು ಬಡವರು, ಪರಿಶಿಷ್ಟ ಜಾತಿಯವರು, ಅಲ್ಪಸಂಖ್ಯಾತರು ಮತ್ತು ಮುಸ್ಲಿಂರಿಗೆ ಸಾಲ ನೀಡಿದರೆ ಬ್ಯಾಂಕ್ ದಿವಾಳಿ ಆಗುತ್ತೆ ಎಂದು ಬಾವಿಸಿದ ದಿನಗಳು, ಆಗ ಬ್ಯಾಂಕ್ ಗಳಿಗೆ ಶ್ರೀಮಂತರು ಪಾವತಿ ಮಾಡದ ಬಾಕಿ ಒಂದು ಲಕ್ಷದ ಇಪ್ಪತೈದು ಸಾವಿರ ಕೋಟಿ ಆದರೆ ಅದರ ವಸೂಲಾತಿಗೆ ಕ್ರಮ ಕೈಗೊಳ್ಳದ ಬ್ಯಾಂಕು ಬಡವರಿಗೆ ಮಾತ್ರ ಸಾಲ ನೀಡಲು ತಯಾರಿರಲಿಲ್ಲ.
    ಬಡವರಿಗೆ ಸಾಲ ನೀಡಿದರೆ ಲಕ್ಷಾ೦ತರ ಎಂಟ್ರಿ ಮಾಡಬೇಕು ಅದೇ 500 ಕೋಟಿ ಒಬ್ಬನಿಗೆ ಸಾಲ ನೀಡಿದರೆ ಒಂದೇ ಎಂಟ್ರಿ ಸಾಕು ಎಂಬುದು ಸಿಬ್ಬ೦ದಿಗಳ ಮಾತಾಗಿತ್ತು.
  ಪೂಜಾರರ ಸಾಲ ಮೇಳವನ್ನ ಇವತ್ತು ಅನ್ನ ಬಾಗ್ಯ ವಿರೋಧಿಸಿದಂತೆ ಬಾರೀ ವಿರೋದ ವಿರೋದ ಪಕ್ಷಗಳಿಂದ ಎದುರಾದರೂ ಪೂಜಾರರು ದೃತಿಗೆಡಲಿಲ್ಲ, ಆಂದ್ರ ಪ್ರದೇಶದ ಮೆಹಬೂಬನಗರದಲ್ಲಿ ಸಾಲ ಮೇಳ ವಿರೋಧೀಸಿದವರು ಇವರಿಗೆ ಹಿಂದಿನಿಂದ ಚಾಕುವಿನಿಂದ ಇರಿದಿದ್ದರು.
  ಪಾಲಿ೯ ಮೆಂಟ್ನಲ್ಲಿ ಬಾರಿ ವಿರೋದ ವ್ಯಕ್ತವಾಯಿತು ಆದರೆ ಪೂಜಾರರ ಉತ್ತರ ಅವತ್ತು ಪ್ರದಾನ ಮಂತ್ರಿ ಇಂದಿರಾ ಗಾಂಧಿಯಿಂದ ಮೇಜು ತಟ್ಟಿ  ಬೆಂಬಲ ವ್ಯಕ್ತವಾಗಿತ್ತು.
   ಒಂದು ರೂಪಾಯಿ ಸಾಲ ನೀಡಿದರೆ ಶೇಖಡ 54% ಜನ ನೋಟಿಸ್ ಕೊಡದೆ ಸಾಲ ಕಟ್ಟುತ್ತಾರೆ, ಶೇಕಡ 20 % ಜನ ನೋಟಿಸ್ ಕೊಟ್ಟ ಕೂಡಲೆ ಹಣ ಪಾವತಿ ಮಾಡುತ್ತಾರೆ, ಶೇಕಡ 20 % ಜನರದ್ದು ರೆವಿನ್ಯೂ ಮಸೂಲಿ ಮಾಡಿದ ಹಾಗೆ ಜಪ್ತಿ ಮಾಡುತ್ತಾರೆ, ಶೇಕಡ 6% ಗ್ಯಾರOಟಿ ಸ್ಕಿಂ ಗೆ ಬರುತ್ತೆ. ಶ್ರೀಮಂತರಿಗಾದರೆ ಕೇಸ್ ಹಾಕುವುದುಂಟು, ಬಡವರಿಗೆ ಏನಿಲ್ಲ ಹೋಗಿ ಸಾಮಾನು ಎಳೆದುಕೊಂಡು ಬರುವುದು ಉಳಿದ ಶೇಕಡ 10% ಇನ್ಷೂ ರೆನ್ಸ್ ಗ್ಯಾರOಟಿ ಸ್ಕಿO ಪ್ರೀಮಿಯಮ್ ಅವರೆ ಕಟ್ಟಿರುತ್ತಾರೆ ಹಾಗಾಗಿ ಬಡವರಿಗೆ 1 ರೂಪಾಯಿ ಸಾಲ ನೀಡಿದರೆ ಒಂದು ಪೈಸೆಯೂ ನಷ್ಟವಿಲ್ಲ ಎಂಬುದು ಪೂಜಾರರ ಅಂಕಿ ಅಂಶದ ಸಂಸತ್ತಿನ ಆ ದಿನದ ಬಾಷಣ.
  ನಂತರ ರಾಜೀವ್ ಗಾಂಧಿ ಸಂಪುಟದಲ್ಲಿ ಗ್ರಾಮೀಣಬಿವೃದ್ದಿ ಸಚಿವರಾಗಿ ಪಂಚಾಯತ್ ರಾಜ್ ಕಾಯ್ದೆ ಮಸೂದೆ ಮಂಡನೆ ಸಂಸತ್ನಲ್ಲಿ ಅನುಮೊದನೆಗೊಂಡು ರಾಜ್ಯ ಸಭೆಯಲ್ಲಿ ಒಂದು ಮತದಲ್ಲಿ ತಿರಸ್ಕರಿಸಲಾಯಿತು ನಂತರ ನರಸಿಂಹ ರಾವ್ ಸಕಾ೯ರದಲ್ಲಿ ಮಂಡನೆ ಆಗಿ ಜಾರಿ ಆಯಿತು.
   ಬಾಲ್ಯದ ಜಾತಿ ನಿಂದನೆಯ ಕೆಟ್ಟ ಅನುಭವವೇ ಮುಂದೆ ಮಂಗಳೂರಿನ ಗೋಕಾಣ೯ನಾಥ ದೇವಸ್ಥಾನ ನಿಮಾ೯ಣಕ್ಕೆ ಪ್ರೇರಣೆ ಆಗಿರಬಹುದು, ಕುದ್ರೋಳಿ ಗೋಕಣ೯ನಾಥ ದೇವಸ್ಥಾನ 1908ರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅಮೃತ ಹಸ್ತದಿಂದ ಶಂಕುಸ್ಥಾಪನೆಗೊಂಡು ಅವರಿಂದಲೇ ಉದ್ಘಾಟನೆಗೊಳಪಟ್ಟ ಕನಾ೯ಟಕದ ಏಕೈಕ ದೇವಾಲಯ ಇವರ ಶ್ರಮದಿಂದ ಈಗ ಮಂಗಳೂರಿನ ಪ್ರಸಿದ್ದ ಯಾತ್ರ ಸ್ಥಳವಾಗಿದೆ.
   ಇಲ್ಲಿ ಜಾತಿಯತೆ ಇಲ್ಲ, ಮೂಡನಂಬಿಕೆ ಆಚರಣೆ ಇಲ್ಲ, ವಿದವೆಯರೇ ಅಚ೯ಕರು.
   ಮಂತ್ರಿ ಆಗಿದ್ದರು ತಮ್ಮ ಮಕ್ಕಳನ್ನ ತಾವು ಓದಿದ ಮOಗಳೂರಿನ ಬೊಕ್ಕ ಪಟ್ಟಣದ ಸಕಾ೯ರಿ ಮುನಿಸಿಪಾಲಿಟಿ ಶಾಲೆಯಲ್ಲೇ ವಿದ್ಯಾಭ್ಯಾಸ ನೀಡಿದರು ಅಲ್ಲಿ ಬಡವರ ಮಕ್ಕಳೆ ಇರುವುದು, ಎಲ್ಲಾ ಜಾತಿ ದಮ೯ದವರಿದ್ದಾರೆ ತಮ್ಮ ಮಕ್ಕಳಿಗೆ ಬಡತನ ಗೊತ್ತಾಗಲಿ ಎನ್ನುವ ಉದ್ದೇಶ ಅವರದ್ದು.
   ಈ ಆತ್ಮಚರಿತ್ರೆ ಬರೆಯಲು ನಮ್ಮ ಜಿಲ್ಲೆಯವರೇ ಆದ ಪ್ರಜಾವಾಣಿ ಹಿರಿಯ ವರದಿಗಾರರಾದ ಶ್ರೀ ಲಕ್ಷಮಣ ಕೊಡಸೆ ಪ್ರಮುಖ ಪಾತ್ರವಹಿಸಿದ್ದಾರೆ.
  ರಾಜಕೀಯ ಘಟನೆಗಳನ್ನ ಉಲ್ಲೇಖಿಸಿದ್ದಾರೆ ಅದಕ್ಕೆ ಪರ ವಿರೋದಗಳ ಅನೇಕ ಚಚೆ೯ ಉಂಟಾಗಿದೆ .
   ಒಂದೇ ತಿಂಗಳಲ್ಲಿ ಮರು ಮುದ್ರಣಗೊಂಡಿರುವ ಈ ಆತ್ಮಚರಿತ್ರೆ ಓದಿದದವರಿಗೆ ಪೂಜಾರರ ಸಾಥ೯ಕ ಜೀವನ, ಹಠಮಾರಿತನ ಮತ್ತು ಸಿದ್ದಾ೦ತಕ್ಕಾಗಿ ರಾಜಿ ಆಗದಿದ್ದಕ್ಕಾಗಿ ರಾಜಕೀಯ ದುರಂತಕ್ಕೆ ಈಡಾದರೂ ಸುಖ ಮತ್ತು ಶಾಂತಿಯ ನೆಮ್ಮದಿಯ ಆರೋಗ್ಯವಂತ ನಿವೃತ್ತ ಜೀವನ ಅವರದ್ದಾಗಿದೆ.

 

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ