Skip to main content

# ಜನಾದ೯ನ ಪೂಜಾರರ ಆತ್ಮಚರಿತ್ರೆ ಒಂದು ಜನಸಾಮಾನ್ಯ ಬಡ ಶೂದ್ರನ ಸಂಘಷ೯ ಜೀವನ ಸಂಗ್ರಾಮ#

# ಜನಾದ೯ನ ಪೂಜಾರರ ಆತ್ಮ ಚರಿತ್ರೆ#
  
     ಬಾಲ್ಯದಲ್ಲಿ ಈ ಬಾಲಕ ..ಗೆಳೆಯನ ಮನೆಯ ರಸ್ತೆಯಲ್ಲಿ ಇರುವ ಬಾವಿಕಟ್ಟಿಗೆ ಕೈ ಸವರಿ ಕೊಂಡು ಹೋದದ್ದು ನೋಡಿ ಆ ಮನೆಯವರು ಆಳದಲ್ಲಿ ನೀರು ಇದ್ದ ಆ ಬಾವಿಯ ನೀರು ತೆಗೆದು ಹೊರ ಚೆಲ್ಲುತ್ತಾರೆ.
    ಒಮ್ಮೆ ಇವರ ತಂದೆ ಜೊತೆ ಹೋಟೆಲ್ಗೆ ಹೋದಾಗ ಹೋಟೆಲ್ ಮಾಲಿಕ ಚಹಾ ಗೆರೆಟೆ ಚಿಪ್ಪಿನಲ್ಲಿ ನೀಡುತ್ತಾನೆ.
   ಮಂಗಳೂರಿನ ಪ್ರಸಿದ್ದ ದೇವಾಲಯದಲ್ಲಿನ ಚಿಲುಮೆ ನೀರು ತರಲು ಹೋದಾಗ ಅಲ್ಲಿನ ಏಳು ಕೊಳಗಳಲ್ಲಿ ಮಿಂದು ದೇವರಿಗೆ ಕೈ ಮುಗಿಯುವಾಗ ಅಲ್ಲಿನ ಅಚ೯ಕ ವೃಂದ ಕುತ್ತಿಗೆ ಹಿಡಿದು ಹೊರದಬ್ಬುತ್ತಾರೆ.
   ಪ್ರಾಥಮಿಕ ಶಾಲಾ ವಿದ್ಯಾಭ್ಯಾಸದ ಹಂತದಲ್ಲಿ ಈತನಿಗೆ ದರಿಸಲು ಅಂಗಿ ಇಲ್ಲ, ಒಂದೇ ಒಂದು ಚೆಡ್ಡಿ ಮಾತ್ರ ಇದ್ದಿದ್ದು.
  ಬಿಲ್ಲವರಿಗೆ ದೇವರಿಲ್ಲ, ಅವರು ದೇವರನ್ನು ನೋಡಬಾರದು ಎಂಬುದು ಅವತ್ತಿನ ಪದ್ದತಿ ಆಗಿತ್ತು.
  ಮುಂದೆ ಈ ಬಾಲಕ ಮುಂಬೈನಲ್ಲಿ ವಕೀಲಿ ಕಲಿತು ಮಂಗಳೂರಿನ ಖ್ಯಾತ ವಕೀಲರಾಗಿ ಕಾಂಗ್ರೇಸ್ ಪಕ್ಷದಿಂದ ಸಂಸದರಾಗಿ ಪೈನಾನ್ಸ್ ಮಂತ್ರಿ ಆಗಿ ದೇಶದಾದ್ಯ೦ತ ಬಡವರಿಗೆ ಸಾಲ ಮೇಳ ಮಾಡಿ ಪ್ರಖ್ಯಾತರಾದ ಜನಾದ೯ನ ಪೂಜಾರರ ಆತ್ಮಚರಿತ್ರೆ ಭಾರತದ ಬಡ ಹಿಂದುಳಿದ ಶೂದ್ರನ ದೀಘ೯ ಸಂಘಷ೯ ಜೀವನದ ಕಥೆ.
   ಆಗ ಭಾರತದ ಬ್ಯಾಂಕುಗಳು ಬಡವರು, ಪರಿಶಿಷ್ಟ ಜಾತಿಯವರು, ಅಲ್ಪಸಂಖ್ಯಾತರು ಮತ್ತು ಮುಸ್ಲಿಂರಿಗೆ ಸಾಲ ನೀಡಿದರೆ ಬ್ಯಾಂಕ್ ದಿವಾಳಿ ಆಗುತ್ತೆ ಎಂದು ಬಾವಿಸಿದ ದಿನಗಳು, ಆಗ ಬ್ಯಾಂಕ್ ಗಳಿಗೆ ಶ್ರೀಮಂತರು ಪಾವತಿ ಮಾಡದ ಬಾಕಿ ಒಂದು ಲಕ್ಷದ ಇಪ್ಪತೈದು ಸಾವಿರ ಕೋಟಿ ಆದರೆ ಅದರ ವಸೂಲಾತಿಗೆ ಕ್ರಮ ಕೈಗೊಳ್ಳದ ಬ್ಯಾಂಕು ಬಡವರಿಗೆ ಮಾತ್ರ ಸಾಲ ನೀಡಲು ತಯಾರಿರಲಿಲ್ಲ.
    ಬಡವರಿಗೆ ಸಾಲ ನೀಡಿದರೆ ಲಕ್ಷಾ೦ತರ ಎಂಟ್ರಿ ಮಾಡಬೇಕು ಅದೇ 500 ಕೋಟಿ ಒಬ್ಬನಿಗೆ ಸಾಲ ನೀಡಿದರೆ ಒಂದೇ ಎಂಟ್ರಿ ಸಾಕು ಎಂಬುದು ಸಿಬ್ಬ೦ದಿಗಳ ಮಾತಾಗಿತ್ತು.
  ಪೂಜಾರರ ಸಾಲ ಮೇಳವನ್ನ ಇವತ್ತು ಅನ್ನ ಬಾಗ್ಯ ವಿರೋಧಿಸಿದಂತೆ ಬಾರೀ ವಿರೋದ ವಿರೋದ ಪಕ್ಷಗಳಿಂದ ಎದುರಾದರೂ ಪೂಜಾರರು ದೃತಿಗೆಡಲಿಲ್ಲ, ಆಂದ್ರ ಪ್ರದೇಶದ ಮೆಹಬೂಬನಗರದಲ್ಲಿ ಸಾಲ ಮೇಳ ವಿರೋಧೀಸಿದವರು ಇವರಿಗೆ ಹಿಂದಿನಿಂದ ಚಾಕುವಿನಿಂದ ಇರಿದಿದ್ದರು.
  ಪಾಲಿ೯ ಮೆಂಟ್ನಲ್ಲಿ ಬಾರಿ ವಿರೋದ ವ್ಯಕ್ತವಾಯಿತು ಆದರೆ ಪೂಜಾರರ ಉತ್ತರ ಅವತ್ತು ಪ್ರದಾನ ಮಂತ್ರಿ ಇಂದಿರಾ ಗಾಂಧಿಯಿಂದ ಮೇಜು ತಟ್ಟಿ  ಬೆಂಬಲ ವ್ಯಕ್ತವಾಗಿತ್ತು.
   ಒಂದು ರೂಪಾಯಿ ಸಾಲ ನೀಡಿದರೆ ಶೇಖಡ 54% ಜನ ನೋಟಿಸ್ ಕೊಡದೆ ಸಾಲ ಕಟ್ಟುತ್ತಾರೆ, ಶೇಕಡ 20 % ಜನ ನೋಟಿಸ್ ಕೊಟ್ಟ ಕೂಡಲೆ ಹಣ ಪಾವತಿ ಮಾಡುತ್ತಾರೆ, ಶೇಕಡ 20 % ಜನರದ್ದು ರೆವಿನ್ಯೂ ಮಸೂಲಿ ಮಾಡಿದ ಹಾಗೆ ಜಪ್ತಿ ಮಾಡುತ್ತಾರೆ, ಶೇಕಡ 6% ಗ್ಯಾರOಟಿ ಸ್ಕಿಂ ಗೆ ಬರುತ್ತೆ. ಶ್ರೀಮಂತರಿಗಾದರೆ ಕೇಸ್ ಹಾಕುವುದುಂಟು, ಬಡವರಿಗೆ ಏನಿಲ್ಲ ಹೋಗಿ ಸಾಮಾನು ಎಳೆದುಕೊಂಡು ಬರುವುದು ಉಳಿದ ಶೇಕಡ 10% ಇನ್ಷೂ ರೆನ್ಸ್ ಗ್ಯಾರOಟಿ ಸ್ಕಿO ಪ್ರೀಮಿಯಮ್ ಅವರೆ ಕಟ್ಟಿರುತ್ತಾರೆ ಹಾಗಾಗಿ ಬಡವರಿಗೆ 1 ರೂಪಾಯಿ ಸಾಲ ನೀಡಿದರೆ ಒಂದು ಪೈಸೆಯೂ ನಷ್ಟವಿಲ್ಲ ಎಂಬುದು ಪೂಜಾರರ ಅಂಕಿ ಅಂಶದ ಸಂಸತ್ತಿನ ಆ ದಿನದ ಬಾಷಣ.
  ನಂತರ ರಾಜೀವ್ ಗಾಂಧಿ ಸಂಪುಟದಲ್ಲಿ ಗ್ರಾಮೀಣಬಿವೃದ್ದಿ ಸಚಿವರಾಗಿ ಪಂಚಾಯತ್ ರಾಜ್ ಕಾಯ್ದೆ ಮಸೂದೆ ಮಂಡನೆ ಸಂಸತ್ನಲ್ಲಿ ಅನುಮೊದನೆಗೊಂಡು ರಾಜ್ಯ ಸಭೆಯಲ್ಲಿ ಒಂದು ಮತದಲ್ಲಿ ತಿರಸ್ಕರಿಸಲಾಯಿತು ನಂತರ ನರಸಿಂಹ ರಾವ್ ಸಕಾ೯ರದಲ್ಲಿ ಮಂಡನೆ ಆಗಿ ಜಾರಿ ಆಯಿತು.
   ಬಾಲ್ಯದ ಜಾತಿ ನಿಂದನೆಯ ಕೆಟ್ಟ ಅನುಭವವೇ ಮುಂದೆ ಮಂಗಳೂರಿನ ಗೋಕಾಣ೯ನಾಥ ದೇವಸ್ಥಾನ ನಿಮಾ೯ಣಕ್ಕೆ ಪ್ರೇರಣೆ ಆಗಿರಬಹುದು, ಕುದ್ರೋಳಿ ಗೋಕಣ೯ನಾಥ ದೇವಸ್ಥಾನ 1908ರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅಮೃತ ಹಸ್ತದಿಂದ ಶಂಕುಸ್ಥಾಪನೆಗೊಂಡು ಅವರಿಂದಲೇ ಉದ್ಘಾಟನೆಗೊಳಪಟ್ಟ ಕನಾ೯ಟಕದ ಏಕೈಕ ದೇವಾಲಯ ಇವರ ಶ್ರಮದಿಂದ ಈಗ ಮಂಗಳೂರಿನ ಪ್ರಸಿದ್ದ ಯಾತ್ರ ಸ್ಥಳವಾಗಿದೆ.
   ಇಲ್ಲಿ ಜಾತಿಯತೆ ಇಲ್ಲ, ಮೂಡನಂಬಿಕೆ ಆಚರಣೆ ಇಲ್ಲ, ವಿದವೆಯರೇ ಅಚ೯ಕರು.
   ಮಂತ್ರಿ ಆಗಿದ್ದರು ತಮ್ಮ ಮಕ್ಕಳನ್ನ ತಾವು ಓದಿದ ಮOಗಳೂರಿನ ಬೊಕ್ಕ ಪಟ್ಟಣದ ಸಕಾ೯ರಿ ಮುನಿಸಿಪಾಲಿಟಿ ಶಾಲೆಯಲ್ಲೇ ವಿದ್ಯಾಭ್ಯಾಸ ನೀಡಿದರು ಅಲ್ಲಿ ಬಡವರ ಮಕ್ಕಳೆ ಇರುವುದು, ಎಲ್ಲಾ ಜಾತಿ ದಮ೯ದವರಿದ್ದಾರೆ ತಮ್ಮ ಮಕ್ಕಳಿಗೆ ಬಡತನ ಗೊತ್ತಾಗಲಿ ಎನ್ನುವ ಉದ್ದೇಶ ಅವರದ್ದು.
   ಈ ಆತ್ಮಚರಿತ್ರೆ ಬರೆಯಲು ನಮ್ಮ ಜಿಲ್ಲೆಯವರೇ ಆದ ಪ್ರಜಾವಾಣಿ ಹಿರಿಯ ವರದಿಗಾರರಾದ ಶ್ರೀ ಲಕ್ಷಮಣ ಕೊಡಸೆ ಪ್ರಮುಖ ಪಾತ್ರವಹಿಸಿದ್ದಾರೆ.
  ರಾಜಕೀಯ ಘಟನೆಗಳನ್ನ ಉಲ್ಲೇಖಿಸಿದ್ದಾರೆ ಅದಕ್ಕೆ ಪರ ವಿರೋದಗಳ ಅನೇಕ ಚಚೆ೯ ಉಂಟಾಗಿದೆ .
   ಒಂದೇ ತಿಂಗಳಲ್ಲಿ ಮರು ಮುದ್ರಣಗೊಂಡಿರುವ ಈ ಆತ್ಮಚರಿತ್ರೆ ಓದಿದದವರಿಗೆ ಪೂಜಾರರ ಸಾಥ೯ಕ ಜೀವನ, ಹಠಮಾರಿತನ ಮತ್ತು ಸಿದ್ದಾ೦ತಕ್ಕಾಗಿ ರಾಜಿ ಆಗದಿದ್ದಕ್ಕಾಗಿ ರಾಜಕೀಯ ದುರಂತಕ್ಕೆ ಈಡಾದರೂ ಸುಖ ಮತ್ತು ಶಾಂತಿಯ ನೆಮ್ಮದಿಯ ಆರೋಗ್ಯವಂತ ನಿವೃತ್ತ ಜೀವನ ಅವರದ್ದಾಗಿದೆ.

 

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...