1999 ರಲ್ಲಿ ಒಂದು ಬೆಳಿಗ್ಗೆ ಹಸಿರು ದೀಪದ ದೊಡ್ಡ ಕಾರು ನಮ್ಮ ಮನೆ ಅಂಗಳದಲ್ಲಿ ಬಂದು ನಿಂತಿತು, ಕೆಂಪು ದೀಪ ಮಂತ್ರಿ ಮಹೋದಯರದ್ದು ಎಂಬುದು ಗೊತ್ತಿತ್ತು ಆದರೆ ಇದು ಹಸಿರು ದೀಪ ಪತ್ರಿಕೆ ಓದುತ್ತಿದ್ದ ನನಗೆ ಕುತೂಹಲ, ಕಾರಿಂದ ಇಳಿದ ವರು ಹಸಿರು ಶಾಲು ಹೊದ್ದ ಪ್ರೊಪೆಸರ್ ನಂಜುಂಡಸ್ವಾಮಿ, ಕೋಡಿ ಹಳ್ಳಿ ಚಂದ್ರಶೇಖರ್ ಮತ್ತು ಸಾಗರದ ರೈತ ಹೋರಾಟ ಪತ್ರಿಕೆ ಸಂಪಾದಕರಾದ ವಸಂತ ಕುಮಾರ್.
ಅವತ್ತು ನನಗಾದ ಸಂತೋಷ ಹೇಳಲಿಕ್ಕೆ ಸಾಧ್ಯವಿಲ್ಲ, ನನ್ನ ತಂದೆ ರೈತ ಹೋರಾಟದ ಹಸಿರು ಶಾಲು ಹೊದ್ದವರು, ಪೋಪೆಸರ್ ಜೈಲ್ ಬರೋ ಕರೆಯಿಂದ ಪ್ರೇರೇಪಿತರಾಗಿ ಜೈಲಿಗೆ ಹೋಗಿ ಬಂದವರು, ಅವರು ಜಿಲ್ಲೆಯಲ್ಲಿ ನಂಜುOಡಸ್ವಾಮಿಯವರ ಸಭೆ ಎಲ್ಲೇ ಇದ್ದರು ಹೋಗಿ ಕೇಳಿ ಬಂದು ಅದನ್ನ ಬಹಳ ದಿನ ವಿಮಷೆ೯ ಮಾಡುತ್ತಿದ್ದರು ಇದೆಲ್ಲ 1983ರ ಹಾಗೂ 1986ರ ಘಟನೆಗಳು.
ನನ್ನ ತಂದೆಯ ಆರಾಧ್ಯ ರೈತ ನಾಯಕರು ಮನೆಗೆ ಬಂದದ್ದು ಕಾಯಿಲೆ ಮತ್ತು ವೃದ್ದಾಪ್ಯದ ಅವರಿಗೆ ಲವಲವಿಕೆ ಉತ್ಸಾಹ ಉಂಟು ಮಾಡಿತು, ಗಣ್ಯರು ಬಂದಾಗ ಅವರಿಗೆ ಅಪಿ೯ಸುವ ಹಾರ ತಂದು ಪ್ರೊಪೆಸರ್ಗೆ ಹಾಕಿದರು ಆ ಸಂದಭ೯ದಲ್ಲಿ ಹಾರ ಹಾಕಿಸಿಕೊಂಡ ಪ್ರೊಪೆಸರ್ ಹೇಳಿದ್ದು ನಾನು ಯಾರಿಂದಲೂ ಹಾರ ಹಾಕಿಸಿ ಕೊಳ್ಳುವುದಿಲ್ಲ ಆದರೆ ಇವತ್ತು ನಿಮ್ಮ ತಂದೆ ಅಭಿಮಾನಕ್ಕೆ ನಿರಾಕರಿಸಲಾಗಲಿಲ್ಲ.
ಚಹಾ, ಸಿಗರೇಟು ಸೇವನೆಯ ಜೊತೆ ನಡೆದ ಸಂಬಾಷಣೆ ಇವತ್ತು ನಿಮ್ಮ ಪಶು ಸಂಗೋಪನೆ ಲೆಕ್ಕಾಚಾರ ನೋಡಿದಾಗ ನೆನಪಾಯಿತು.
ಅವರು ಹೇಳಿದ್ದು 1999ರಲ್ಲಿ "ಇವತ್ತು ಭತ್ತ ಬೆಳೆಯುವ ರೈತ ಎಕರೆಗೆ 2500 ನಷ್ಟ ಮಾಡಿ ಕೊಳ್ಳುತ್ತಿದ್ದಾನೆ ಆದರೆ ಅವನಿಗೆ ಖಚು೯ ವೆಚ್ಚದ ಅರಿವೆ ಇಲ್ಲ, ಅವನ ಕೂಲಿ, ಗೊಬ್ಬರ, ಎತ್ತಿನ ಬೇಸಾಯ ಲೆಖ್ಕ ಮಾಡುತ್ತಿಲ್ಲ ಆದರೆ ಮುಂದಿನ ದಿನದಲ್ಲಿ ರೈತನ ಮಗ ಕಂಪ್ಯೂಟರ್ ಬಳಸುತ್ತಾನೆ ಪ್ರತಿಯೊಂದು ಪೈಸೆಗೂ ಲೆಖ್ಕ ಬರೆಯುತ್ತಾನೆ ಆಗ ಅವನಿಗೆ ಈ ನಷ್ಟ ಅರಿವಾಗುತ್ತಾನೆ ಆಗ ಅವನು ಭತ್ತ ಬೆಳೆಯುವುದು ನಿಲ್ಲಿಸುತ್ತಾನೆ" ಅಂದಿದ್ದರು ಇದು ಇವತ್ತು ನನ್ನ ಎದುರು ಸತ್ಯವಾಗಿ ಕೃಷಿ ಅಲ್ಲದಿದ್ದರೂ ಕೃಷಿಯ ಬಾಗವಾದ ಹೈನುಗಾರಿಕೆಯಲ್ಲಿ ನಿಮ್ಮಿ೦ದ ನೆನಪಾಯಿತು.
ಇದಕ್ಕೆ ಪರಿಹಾರ?ಅನ್ನುವ ನನ್ನ ಪ್ರಶ್ನೆಗೆ ಅವರ ಉತ್ತರ " ಬೀಳುಬೀಳುವ ಸಾವಿರಾರು ಎಕರೆ ಸಾಗುವಳಿ ಮಾಡುವ ಕಾಪೊ೯ರೇಟ್ ಕಂಪನಿಗಳು ಖರೀದಿಸುತ್ತವೆ ಅಲ್ಲಿ ನಮ್ಮ ರೈತ ಕೂಲಿಯಾಗಿ ಕೆಲಸಕ್ಕೆ ಸೇರುತ್ತಾನೆ ಅದಕ್ಕೆ ಅನುಕೂಲವಾದ ಕಾನೂನು ನಮ್ಮ ಪ್ರತಿನಿದಿಗಳು ಮಾಡುತ್ತಾರೆ".
ಪ್ರೊಪೆಸರ್ ನಂಜುಂಡಸ್ವಾಮಿ ಎಂಬ ರೈತ ನಾಯಕರ ಚಿಂತನೆ ನಿಜವಾಗುತ್ತಿರುವ ಸೂಚನೆಗಳ ನೋಡಿ ನನಗೆ ಭಯ ಆಗುತ್ತಿದೆ.
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
Comments
Post a Comment