Skip to main content

ಅರವಿಂದ್ ಚೊಕ್ಕಾಡಿ ಕನ್ನಡದ ಖ್ಯಾತ ಲೇಖಕರು ಅವರು ನನ್ನ ಕಾದಂಬರಿಗೆ ವಿಮಷೆ೯ ಮಾಡಿರುವುದು ನನಗೆ ಹಷ೯ ಉಂಟು ಮಾಡಿದೆ, ಬೆಸ್ತರ ರಾಣಿ ಚಂಪಕಾ ವಿಮಷೆ೯ -1

ಖ್ಯಾತ ಲೇಖಕ ಹಾಗು ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿಯವರು ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಬಗ್ಗೆ ಮಾಡಿರುವ ವಸ್ತು ನಿಷ್ಟ ವಿಮಶೆ೯ .

#ಪುಸ್ತಕ

ಪ್ರೇಮ ಪತ್ರಗಳನ್ನು ಎಲ್ಲರೂ ಓದಬಹುದಾದ ಅಂಚೆ ಕಾರ್ಡಿನಲ್ಲಿ ಬರೆಯಬೇಕೆನ್ನುವುದು ನನ್ನ ವಾದ, ನಂಬಿಕೆ ಮತ್ತು ಆಚರಣೆಯಾಗಿತ್ತು. ಏಕೆಂದರೆ ಅನುಮಾನಕ್ಕೆ ಆಸ್ಪದವೆ ಇರುವುದಿಲ್ಲ. ಸಮಸ್ಯೆ ಇರುವುದು ಬರೆಯುವುದು ಹೇಗೆ? ಎಂಬ ಬಗ್ಗೆ. ಸಂಕೇತಾಕ್ಷರಗಳು, ಸಂಕೇತ ಪದಗಳಿಂದ ಇದು ಕಾರ್ಯ ಸಾಧ್ಯವಾಗುತ್ತದೆ. ಆದರೆ ನಮ್ಮ ಪೂರ್ವೀಕರು ನಮಗಿಂತಲೂ ಬುದ್ಧಿವಂತರಾಗಿದ್ದರು. ಯಾವ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಲಾಗುತ್ತದೆ ಎನ್ನುವುದು ಪ್ರೇಮ ಒಪ್ಪಿಗೆಯೋ ಅಲ್ಲವೊ ಎಂಬುದಕ್ಕೆ ಸಾಕ್ಷಿಯಾಗಿತ್ತು ಎಂದು ಗೊತ್ತಾದದ್ದು ಸ್ನೇಹಿತ ಅರುಣ್ ಪ್ರಸಾದ್ ಅವರು ಕಳುಹಿಸಿಕೊಟ್ಟ 'ಬೆಸ್ತರ ರಾಣಿ ಚಂಪಕಾ' ಕಾದಂಬರಿಯನ್ನು ಓದಿದ ಮೇಲೆಯೇ. ರಂಗೋಲಿಯಲ್ಲಿ ಗಂಡ- ಭೇರುಂಡದ ಚಿತ್ರವನ್ನು ಬಿಡಿಸಿದರೆ ಪ್ರೇಮವನ್ನು ಒಪ್ಪಿಕೊಂಡ ಹಾಗೆಯೇ ಎನ್ನುವುದು ಈ ಇಡೀ ಕಾದಂಬರಿಯ ಕೇಂದ್ರ ವಿಚಾರವಾಗಿದೆ.

ಅನೇಕರು ಸತ್ಯ ಇತಿಹಾಸ ಯಾವುದು? ಎಂದು ಪ್ರಶ್ನಿಸುತ್ತಾರೆ. ಆದರೆ ಅದನ್ನು ಹೇಳಲು ಸಾಧ್ಯವಿಲ್ಲ. ರಾಜಲಾಂಛನವನ್ನು ಯಾವ ಕೋನದಿಂದ ನೋಡಿದರೂ ಮೂರು ಸಿಂಹಗಳೇ ಕಾಣುವುದು. ಆದರೆ ಅದರಲ್ಲಿರುವುದು ನಾಲ್ಕು ಸಿಂಹಗಳು. ಹಾಗೆಯೇ ಇತಿಹಾಸವೂ ಕೂಡ. ಒಬ್ಬ ಒಳ್ಳೆಯ ರಾಜ ಎಂದಾದರೆ ಅವನು ಕರೆ, ಕಾಲುವೆ ತೋಡಿಸಿದ್ದನು, ದಾನ-ದತ್ತಿಗಳನ್ನು ನೀಡಿದ್ದನು ಎಂದೂ, ಕೆಟ್ಟ ರಾಜ ಎಂದಾದರೆ ವಿಪರೀತ ತೆರಿಗೆ ಹಾಕಿ ಜನರನ್ನು ಶೋಷಿಸಿದನು ಎಂದು ಯಾರಿಗೆ ಬೇಕಾದರೂ ಬರೆಯಿರಿ ಎಂದು ಇತಿಹಾಸದಲ್ಲಿ ಅಂಕಗಳನ್ನು ಕೊಡಿಸಬಹುದಷ್ಟೆ. ಇತಿಹಾಸವೆಂದರೆ ರಾಜರ ಇತಿಹಾಸವಷ್ಟೆ ಆಗಿರುವುದಿಲ್ಲ. ರಾಜರ ಇತಿಹಾಸವೆ ಆದಾಗಲೂ ಯುದ್ಧ ಗೆಲ್ಲುವುದು, ಸೋಲುವುದು, ಕೋಟೆ ಕೊತ್ತಲ ಕಟ್ಟುವುದು ಇಷ್ಟೇ ಆ ರಾಜರುಗಳಾಗಿರುವುದಿಲ್ಲ. ಅವರೂ ಮನುಷ್ಯರೇ. ರಾಜರುಗಳೂ ಮಾನವ ಸಹಜವಾದ ಸಂತೋಷ ಪಟ್ಟಿರುತ್ತಾರೆ. ಯುದ್ಧ ಗೆದ್ದೂ ನೊಂದಿರುತ್ತಾರೆ. ಎಡವಟ್ಟು ಮಾಡಿರುತ್ತಾರೆ. ಅದನ್ನೆಲ್ಲ ಇತಿಹಾಸಕಾರರು ಅರ್ಥೈಸುವುದಿಲ್ಲ ಅಷ್ಟೆ. 

ಇತಿಹಾಸಕಾರರು ಅರ್ಥೈಸದೆ ಬಿಟ್ಟದ್ದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಅರುಣ್ ಪ್ರಸಾದ್ ಮಾಡಿದ್ದಾರೆ. ಕತೆಯು ಕೆಳದಿಯ ರಾಜಾ ವೆಂಕಟಪ್ಪ‌ ನಾಯಕನು ಚಂಪಕಾಳನ್ನು ಪ್ರೇಮಿಸಿ ಮದುವೆಯಾಗಿ ದುರಂತವೊಂದರ ಸೃಷ್ಟಿಯಾಗುವ ಐತಿಹಾಸಿಕ ಸಂಗತಿಯನ್ನು ಹೊಂದಿದೆ. "ಯುದ್ಧಕ್ಕೆ ಹೆದರದ ಹೃದಯ ಪ್ರೇಮಕ್ಕೆ ಹೆದರಿತಲ್ಲ" ಎಂದು ವೆಂಕಟಪ್ಪ‌ ನಾಯಕನಿಂದ ಅರುಣ್ ಪ್ರಸಾದ್ ಹೇಳಿಸಿದ ಮಾತು ಇತಿಹಾಸ ವರ್ತಮಾನ ಮತ್ತು ಬಹುಶಃ ಭವಿಷ್ಯವನ್ನು ಸಾಮಾನ್ಯೀಕರಿಸುವ ಮಹತ್ವದ ಮಾತಾಗಿ ಬಂದಿದೆ.

ಬಲು ಪುಟ್ಟ ಪುಟ್ಟ ವಾಕ್ಯಗಳು ಮತ್ತು ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ಶಕ್ತಿಶಾಲಿ ಭಾಷೆಯ ಮೂಲಕ ಬರೆಯಲಾಗಿರುವ ಈ ಕೃತಿಯಲ್ಲಿ ರಾಮಕ್ಷತ್ರಿಯರ ವಿವರ, ಪೋರ್ಚುಗೀಸರು, ಅರಬ್ಬರು, ಜಮೋರಿನ್ ದೊರೆ, ವಿಜಯನಗರ, ಗೋವಾ, ಇಟಲಿಯ ಪ್ರವಾಸಿ ಮುಂತಾದ ಬಹಳ ಐತಿಹಾಸಿಕ ವಿಷಯಗಳು ಉದ್ದೇಶಿತ ಗುರಿಯನ್ನು ತಲುಪುವ ಸಾಧನಗಳಾಗಿ ಬರುತ್ತವೆ‌. ಆದ್ದರಿಂದ ಬೋರ್ ಎನಿಸುವುದಿಲ್ಲ. ಈ ವಿವರಗಳಲ್ಲಿ ಗಂಗಾಮತಸ್ಥ ಬೋವಿಯವರದೆ ಆದ ಒಂದು ಮಠ ಇತಿಹಾಸದ ಭಾಗವಾಗಿ ಬಂದಿರುವುದು ಆಸಕ್ತಿದಾಯಕ ವಿಷಯವಾಗಿದೆ.

ಅರುಣ್ ಪ್ರಸಾದ್ ಅವರ ಗೆಲುವು ವಸ್ತುವನ್ನು ವಸ್ತುವಿನ ಸಹಜತೆಯಿಂದ ಪ್ರತ್ಯೇಕಗೊಳಿಸದೆ ಇರುವುದರಲ್ಲಿದೆ. ವೆಂಕಟಪ್ಪ ನಾಯಕ ಮತ್ತು ಚಂಪಕಾಳ ದುರಂತ ಪ್ರೇಮ ಅವರ ವಸ್ತು. ಆದರೆ ರಾಜನ ಸಹಜ ಕಾರ್ಯಗಳಾದ ಆಡಳಿತ, ರಕ್ಷಣೆ,ವ್ಯಾಪಾರ ಮುಂತಾದ ಜವಾಬ್ದಾರಿಗಳ ಜೊತೆಯಲ್ಲಿಯೇ ಪ್ರೇಮ ಕತೆಯೂ ಬರುತ್ತದೆ ಹೊರತು ಸಹಜ ಕಾರ್ಯಗಳನ್ನು ಕಾದಂಬರಿಯು ಕಡೆಗಣಿಸಿಲ್ಲ. ಈ ಅಂಶವು ಕೆಳದಿ ಅರಸರ ಬೇಕಲ ಕೋಟೆ ಸಂಬಂಧ, ಕಡಲ್ ಕಾವಲು ಮುಂತಾದ ಇತಿಹಾಸವನ್ನೂ ಬಿಚ್ಚಿಡಲು ಯಶಸ್ವಿಯಾಗಿದೆ.ಹಾಗೆಂದು ಅದು ತಾನು ಬೆಳೆಯಿಸಬೇಕಾದ ಪ್ರೇಮದ ಕಥಾವಸ್ತುವನ್ನು ಬೆಳೆಯಿಸುವುದರಲ್ಲಿ ಎಲ್ಲಿಯೂ ವಿಫಲವಾಗುವುದಿಲ್ಲ.ಹಿನ್ನಡೆಯನ್ನೂ ಪಡೆಯುವುದಿಲ್ಲ. ಸಮಗ್ರತೆಯ ಒಡಲನ್ನು ತಟ್ಟಬಲ್ಲ ಕತೆಗಾರನಿಗೆ ಮಾತ್ರ ಈ ರೀತಿಯ ಕೌಶಲವು ಸಾಧ್ಯವಾಗುತ್ತದೆ.

ತಾಯಿಯನ್ನು ಕಳೆದುಕೊಂಡ ಬೆಸ್ತರ ಹುಡುಗಿ ಚಂಪಕಾಳನ್ನು ವೆಂಕಟಪ್ಪ ನಾಯಕ ಪ್ರೀತಿಸುವುದು, ಆತನ ಪಟ್ಟದ ರಾಣಿ ಭದ್ರಮ್ಮಾಜಿಗೆ ಈ ಸಂಬಂಧ ಇಷ್ಟವಾಗದೆ ಕಿರುಕುಳಗಳು ಸೃಷ್ಟಿಯಾಗುವುದು, ಈ ಸನ್ನಿವೇಶವನ್ನು ಸಾಮ್ರಾಜ್ಯವನ್ನು ದುರ್ಬಲಗೊಳಿಸುವುದಕ್ಕಾಗಿ ಬಳಸುವವರು ರೂಪಿಸುವ ಕಾರ್ಯತಂತ್ರಗಳು, ನೊಂದ ಚಂಪಕಾ ವಜ್ರದ ಹುಡಿಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದು, ವೆಂಕಟಪ್ಪ ನಾಯಕ ಆಕೆಗಾಗಿ ಸ್ಮಾರಕವನ್ನು ನಿರ್ಮಿಸುವುದು ಕಥೆ.

ಆದರೆ ಇಲ್ಲಿನ ಸಂಬಂಧಗಳು ತುಂಬ ಸಂವೇದನಾಶೀಲವಾದವುಗಳು. ಲಿಂಗಾಯಿತ ರಾಜ. ವೀರಶೈವ ರಾಣಿ ಭದ್ರಮ್ಮಾಜಿ. ಸಸ್ಯಾಹಾರಿಗಳು. ಭದ್ರಮ್ಮಾಜಿಗೆ ಸವತಿ ಮಾತ್ಸರ್ಯವಿಲ್ಲ. ಆಕೆಯೂ ಗಂಡನ ಶ್ರೇಯಸ್ಸನ್ನೆ ಬಯಸುವವಳು. ಇನ್ನೊಬ್ಬ ರಾಣಿಯ ಬಗ್ಗೆಯೂ ಆಕೆಯ ತಕರಾರುಗಳಿಲ್ಲ. 'ಜಾತಿ' ಆಕೆಯ ತಕರಾರಿನ ಕಾರಣ ಎಂಬಂತೆ ಕಂಡರೂ ಕತೆಯ ಒಡಲಿನಲ್ಲಿ ಮೂಡಿ ಬರುವ ಅನುಭವ ಶಿಲ್ಪವು ಜಾತಿಯೂ ತಕರಾರಿನ ಕಾರಣ ಅಲ್ಲ ಎಂಬುದನ್ನೆ ಹೇಳುತ್ತದೆ. ತಕರಾರಿನ ಮುಖ್ಯ ಕಾರಣ ಆಹಾರ ಪದ್ಧತಿಯೇ. ಆ ನಂಬಿಕೆಯು ಸರಿಯೋ ತಪ್ಪೋ ಎನ್ನುವುದಕ್ಕಿಂತ ಅದು ಭದ್ರಮ್ಮಾಜಿಯ ನಂಬಿಕೆ. ಆ ನಂಬಿಕೆಗೆ ಆಕೆ ನಿಷ್ಠಳು. ಅದಕ್ಕಾಗಿ ಆಕೆಯನ್ನು ಆರೋಪಿಯ ಸ್ಥಾನದಲ್ಲಿ ನಿಲ್ಲಿಸಲು ಬರುವುದಿಲ್ಲ. ಪಟ್ಟದ ರಾಣಿ ರಾಜನಿಗೆ,"ಇನ್ನು‌ ಮುಂದೆಯೂ ನಿಮ್ಮೆಲ್ಲ ಕಾರ್ಯಗಳಲ್ಲಿ ಜೊತೆಯಾಗಿರುತ್ತೇನೆ. ಆದರೆ ವೈಯಕ್ತಿಕ ಸಂಬಂಧದಲ್ಲಿ ಮಾತ್ರ ನಿಮಗೆ ಮಗಳಾಗಿ ಇರುತ್ತೇನೆ" ಎನ್ನಬೇಕಾದರೆ ಆಕೆಗೆ ಆಗಿರಬಹುದಾದ ಆಘಾತ ಮತ್ತು ವೇದನೆಯ ಸ್ವರೂಪವನ್ನು ಅರ್ಥ ಮಾಡಿಕೊಳ್ಳಬೇಕು. ಭದ್ರಮ್ಮಾಜಿಯನ್ನು ಸುಲಭವಾಗಿ ವಿಲನೆಸ್ ಮಾಡಬಹುದಾಗಿದ್ದ ಸನ್ನಿವೇಶವನ್ನು ಭದ್ರಮ್ಮಾಜಿಯನ್ನು ಅರಿತುಕೊಳ್ಳುವ ಪ್ರಕ್ರಿಯೆಯಾಗಿ ರೂಪಿಸಿರುವಲ್ಲಿಯೇ ಅರುಣ್ ಪ್ರಸಾದ್ ಒಬ್ಬ ನಿಜವಾದ ಅರ್ಥದಲ್ಲಿ ಲೇಖಕ ಎನ್ನುವುದಕ್ಕೆ ಸಾಕ್ಷಿಯೂ ದೊರೆಯುತ್ತದೆ.

ಹಾಗಾದರೆ ರಾಜನದು ತಪ್ಪಾ? ಅಲ್ಲ. ಸಹಜ ಅದು. ಚಂಪಕಾಳದ್ದು ತಪ್ಪಾ?ಆಕೆ ಅತ್ಯಂತ ಪ್ರಾಮಾಣಿಕಳು. ಭದ್ರಮ್ಮಾಜಿಗಾಗಿ ನೊಂದುಕೊಳ್ಳುವ ಮನಸಿರುವ ಹೆಣ್ಣು. ಹಾಗಾದರೆ ತಪ್ಪು ಯಾರದು? ಯಾರದೂ ಅಲ್ಲ. ಆದರೂ ದುರಂತವೊಂದು ಘಟಿಸುತ್ತದೆ ಎನ್ನುವಲ್ಲಿ ಅರುಣ್ ಪ್ರಸಾದ್ ಅವರು ಗ್ರಹಿಸಿಕೊಂಡಿರುವ ಭವ್ಯ ಜೀವನದೃಷ್ಟಿಯ ಅನಾವರಣವು ನಡೆಯುತ್ತದೆ. ಇಲ್ಲಿ ಪ್ರಜ್ಞಾಪೂರ್ವಕವಾಗಿಯೆ ಭವ್ಯ ಜೀವನದೃಷ್ಟಿ ಎಂಬ ಪದವನ್ನು ಬಳಸಿದ್ದೇನೆ. ಯಾರದ್ದು ಸರಿ, ಯಾರದ್ದು ತಪ್ಪು ಎನ್ನುವವನು ನ್ಯಾಯಾಧೀಶನಾಗಿರುತ್ತಾನೆ. ಲೇಖಕನಿಗೆ ಅವರವರ ನೆಲೆಯಲ್ಲಿ ಪ್ರತಿಯೊಬ್ಬರೂ ಸರಿಯೇ ಎಂದು ಗೊತ್ತಿರುತ್ತದೆ. ಅವನ ಕಾಳಜಿ ಮತ್ತು ಚಡಪಡಿಕೆಗಳು ದುರಂತದ ಬಗ್ಗೆ ಇರುತ್ತದೆಯೆ ಹೊರತು ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷೆ ಕೊಡಿಸುವುದರಲ್ಲಿ ಇರುವುದಿಲ್ಲ. ಇದು ಭವ್ಯ ಜೀವನ ದೃಷ್ಟಿ.

ಅಧಿಕಾರದ ಸಂವೇದನಾರಾಹಿತ್ಯವನ್ನು ಚಂಪಕಾಳ ಒಂದು ಮಾತಿನಲ್ಲಿ ಅರುಣ್ ಪ್ರಸಾದ ಎಷ್ಟು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತಾರೆಂದರೆ ಅದು ಸಾರ್ವಕಾಲಿಕ ಸತ್ಯ. "ಸುಖ-ದುಃಖ ಎರಡೂ ಅರಮನೆಯ ಅಂತಃಪುರದಲ್ಲಿ ಇಲ್ಲವೇ ಇಲ್ಲ" ಎಂಬ ಒಂದೇ ಮಾತು ಎಲ್ಲವನ್ನೂ ಹೇಳಿಬಿಡುತ್ತದೆ. ಈ ಮಾತನ್ನು ಹೇಳುವುದು ಭದ್ರಮ್ಮಾಜಿಯಲ್ಲ; ಚಂಪಕಾ. ಏಕೆಂದರೆ ಸ್ವತಂತ್ರ ಬದುಕಿನ ಅನುಭವವಿರುವ ಆಕೆ ಮಾತ್ರವೇ ಇದನ್ನು ಗುರುತಿಸಲು ಸಾಧ್ಯ. ಆದರೆ ಆಕೆಗೆ ಅನುಭವವೇದ್ಯವಾಗುವುದನ್ನು ಆಕೆಯ ತಂದೆ ಮಸ್ಯಾಬೋವಿ ಮೊದಲೇ ಗ್ರಹಿಸಿದ್ದಾನೆ. ಮಸ್ಯಾಬೋವಿಯೂ ಮದುವೆಗೆ ವಿರೋಧಿಯೇ. ರಾಜನ ಬಗ್ಗೆ ವಿರೋಧ ಅಲ್ಲ. ತನ್ನ ಮಗಳು ರಾಣಿಯಾಗಬಾರದೆಂದೂ ಅಲ್ಲ. ಆದರೆ ಮಗಳಿಗೆ ಮುಂದೆ ಆಗಲಿರುವ ಅನುಭವದ ಅರಿವು ಆತನಿಗಿದೆ. ಈ ಮುಖಾಂತರ ಅರುಣ್ ಪ್ರಸಾದ್ ತಮ್ಮ ಪಾತ್ರಗಳ ಸೈಕಾಲಜಿಯನ್ನು ಎಷ್ಟು ಚೆನ್ನಾಗಿ ಓದಿಕೊಂಡಿದ್ದಾರೆಂದರೆ ಅರುಣ್ ಪ್ರಸಾದ್ ಸುಮ್ಮನೇ ಇದ್ದರೂ ಪಾತ್ರಗಳೇ ಕತೆಯನ್ನು‌ ನಿರೂಪಿಸಬಲ್ಲವು ಎನ್ನುವ ಹಾಗೆ.

ಇತಿಹಾಸವೆಂದರೆ ಘಟನಾವಳಿಗಳ ಸರಮಾಲೆ. ಯಾಂತ್ರಿಕ ನಿರೂಪಣೆ. ಒಳ್ಳೆಯವರು ಕೆಟ್ಟವರು ಎಂಬ ಕಪ್ಪು ಬಿಳುಪಿನ ಚಿತ್ರಣ ಎಂದುಕೊಂಡಿರುವ ಹೊತ್ತಿನಲ್ಲಿ ಇತಿಹಾಸದ ಮಾನವೀಕರಣವನ್ನು ಸಾಧಿಸಲು ತೊಡಗುವ ಅರುಣ್ ಪ್ರಸಾದ್ ಅವರಂತಹ ಲೇಖಕರು ಮುಖ್ಯರಾಗುತ್ತಾರೆ. ಇತಿಹಾಸದ ಅರಿವಿನೊಂದಿಗೆಯೇ ಮನುಷ್ಯನನ್ನು ಜೀವನ್ಮುಖಿಯಾಗಿ ಇಡಲು ತೊಡಗುವ ಈ ರಚನೆಗಾಗಿ ಅರುಣ್ ಪ್ರಸಾದ್ ಅವರನ್ನು ನಾನು ಅಭಿನಂದಿಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ