Skip to main content

ಬೆಸ್ತರ ರಾಣಿ ಚಂಪಕಾ ವಿಮಷೆ೯-6

#ರಾಣಿ_ಚಂಪಕಾಳ_ಆತ್ಮ_ಇನ್ನೂ_ಅಲ್ಲೇ_ಇದೆಯಾ

   ಅಂತ ನನಗೆ ಅನ್ನಿಸುತ್ತದೆ ರಾಣಿ ಚಂಪಕಳ ಸ್ಮಾರಕ ನಿಮಾ೯ಣವಾಗಿ 2024ಕ್ಕೆ 400 ವರ್ಷ ಆಗಲಿದೆ, ಇದು ಸತ್ಯ ಘಟನೆ ಆಧರಿಸಿ 10 ವರ್ಷದ ಹಿಂದೆ ಬರೆದದ್ದು ಇದನ್ನು ಮೊದಲು ಓದಿದವರು ಕೆಂಗಲ್ ಹನುಮಂತಯ್ಯ, ಹುಚ್ಚು ಮಾಸ್ತಿ ಗೌಡ, ದೇವರಾಜ ಅರಸ್ಸು, ದೇವೇಗೌಡರು, ಜೆ.ಹೆಚ್.ಪಟೇಲ ಮತ್ತು ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪರ ಆತ್ಮಚರಿತ್ರೆ ಬರೆದ ಕೋಣಂದೂರು ವೆಂಕಪ್ಪ ಗೌಡರು.
    ನಾನು ಬರೆದದ್ದು ಅನೇಕ ಸಣ್ಣ ಕಥೆ ಅದರ ನಂತರ ಈ ಕಾದ೦ಬರಿ ಪ್ರಕಟಿಸುವ ಅಪೇಕ್ಷೆ ಮಿತ್ರರಾದ ಶೃಂಗೇಶ್ ರಿಂದ ಬದಲಾಗಿ ಕಾದಂಬರಿ ಮೊದಲಾಯಿತು.
    ಈ ಕಾದಂಬರಿ ಬಗ್ಗೆ ಅನೇಕರು ಬರೆಯುತ್ತಿರುವ ವಿಮಷೆ೯ ಮತ್ತು ಪುಸ್ತಕದ ಬೇಡಿಕೆ ನೋಡಿದರೆ ಇನ್ನೋಂದು ಮುದ್ರಣ ಆಗಲಿದೆ ಅನ್ನಿಸುತ್ತೆ.
   ಇದೆಲ್ಲ ಏನನ್ನಿಸುತ್ತದೆಂದರೆ ಕೆಳದಿ ಸಾಮ್ರಾಜ್ಯದ ದುರಂತ ರಾಣಿ ಚಂಪಕಾ ಆತ್ಮ 400 ನೇ ವಷ೯ದ ವಷಾ೯ಚರಣೆಗೆ ಕಾದಿದೆಯಾ ಅನ್ನಿಸುತ್ತೆ.
   ಈಗಷ್ಟೆ ಕಾನಲೆಯ ಕಿರಿಯ ಗೆಳೆಯ ಆದರೆ ಓದು ಬರಹ ಮತ್ತು ಕ್ರಿಯಾಶೀಲತೆಯಲ್ಲಿ ನಮಗಿಂತ ಹಿರಿಯರೆನ್ನಿಸುವ ಕಾನಲೆ ಗುರುಪ್ರಸಾದ್ ತಮ್ಮ ಬಿಡುವಿಲ್ಲದ ಚಟುವಟಿಕೆಯ ಮಧ್ಯ ಓದಿ ವಸ್ತು ನಿಷ್ಠ ವಿಮಷೆ೯ ಮಾಡಿದ್ದಾರೆ.

#ಓದಿ_ಓದಿಸಿ ( ಪುಸ್ತಕ ಪರಿಚಯ 17 ) ( ಬೆಸ್ತರರಾಣಿ ಚಂಪಕಾ-ಕಾದಂಬರಿ – ಕೆ.ಅರುಣ್ ಪ್ರಸಾದ್ )

ಛೆ...! ಏನಾಗಿಹೋಯಿತು..!! ಎಂಬ ಭಾವವೊಂದು ಮನಸ್ಸನ್ನು ಆವರಿಸಿತು. ಶ್ರೀಯುತ ಕೆ.ಅರುಣ್ ಪ್ರಸಾದ್ Arun Prasad  ಅವರು ಬರೆದ “ ಬೆಸ್ತರರಾಣಿ ಚಂಪಕಾ” ಕಾದಂಬರಿ ಓದುತ್ತಿದ್ದೆ. 

ಇದು, ಸುಮಾರು ಕ್ರಿ.ಶ.1586 ರಿಂದ 1629 ರವರೆಗೆ ಕೆಳದಿ ಸಂಸ್ಥಾನವನ್ನು ಆಳಿದ, ಕೆಳದಿಯ ಖ್ಯಾತ ದೊರೆ ರಾಜಾ ವೆಂಕಟಪ್ಪನಾಯಕ ಮತ್ತು ನತದೃಷ್ಟ ಚಂಪಕಾರಾಣಿ ಇವರ ದುರಂತ ಪ್ರೇಮಕಥೆ. ಸರ್ಕಾರಗಳ ನಿರ್ಲಕ್ಷ್ಯಕ್ಕೊಳಗಾದ ಸ್ಮಾರಕವೊಂದನ್ನು ಕುರಿತು ಬಂದ ಪತ್ರಿಕಾವರದಿಗಳಲ್ಲಿ, ಚಂಪಕ ಸರಸ್ಸು ಎಂಬುದು ಕೆಳದಿ ಅರಸರು ವೇಶ್ಯೆಯೊಬ್ಬಳ ಸಲುವಾಗಿ ಕಟ್ಟಿಸಿದ್ದು ಎಂಬ ಉಲ್ಲೇಖವಿದ್ದುದನ್ನು ಕಂಡು ಶ್ರೀ ಅರುಣ್ ಪ್ರಸಾದ್ ಅವರು ಮನನೊಂದು ಬರೆದ ಕಾದಂಬರಿ.   ಕೆಳದಿ ಅರಸರ ಮತ್ತು ಚಂಪಕಾರಾಣಿ ಇಬ್ಬರ ಬಗ್ಗೆ  ಜನಮನದಲ್ಲಿ ಈಗಲೂ ಉಳಿದಿರುವ ಭಾವನೆಗಳೇನು ಎಂಬುದನ್ನು ಎಲ್ಲರಿಗೂ ತಲುಪಿಸುವ ಯತ್ನ ಇದು ಎಂದರೂ ತಪ್ಪಾಗಲಾರದು. ಇತಿಹಾಸದ ಪುಟಗಳಲ್ಲಿ ದಾಖಲಾಗದೆ ಹೋದರೂ, ಅಥವಾ ತಪ್ಪಾಗಿ ಊಹಿಸಲ್ಪಟ್ಟಿದ್ದರೂ,  ಆನಂದಪುರಂ ಸುತ್ತಮುತ್ತಲಿನ ಪ್ರದೇಶದಲ್ಲಿ ಚಂಪಕಾರಾಣಿ ಇನ್ನೂ ಜನಮಾನಸದಲ್ಲಿ ಇದ್ದಾಳೆ ಎಂಬುದನ್ನು ಇಲ್ಲಿ ಲೇಖಕರು ತೆರೆದಿಟ್ಟಿದ್ದಾರೆ.
ಇತಿಹಾಸದಲ್ಲಿ ಈಗಾಗಲೇ ಉಲ್ಲೇಖವಾಗಿರುವ, ಜನರಲ್ಲಿ ಕಥೆಯಾಗಿ ಉಳಿದಿರುವ ಅಂಶಗಳು ಹಾಗೂ 1624 ರಲ್ಲಿ ಇಕ್ಕೇರಿ ಸಂದರ್ಶಿಸಿದ್ದ ಇಟಲಿಯ ಪ್ರವಾಸಿ ಪಿಯೆತ್ರೊದೆಲ್ಲಾವಲ್ಲೆಯ ಉಲ್ಲೇಖದ ಆಧಾರದಲ್ಲಿ, ಈ ಕಾದಂಬರಿ ಬೆಳೆಯುತ್ತಾ ಹೋಗಿದೆ. ರಂಗೋಲಿ ಎಂಬುದೂ ಒಂದು ಕಲೆ ಮತ್ತು ಅದು ಕೆಳದಿಯ ಪ್ರಸಿದ್ದ ಅರಸ ರಾಜಾ ವೆಂಕಟಪ್ಪನಾಯಕರ ಜೀವನದಲ್ಲಿ ಹೇಗೆ ತಿರುವು ತರುತ್ತದೆ ಎಂಬಲ್ಲಿಂದ ಮೊದಲ್ಗೊಂಡು ರಾಜ್ಯದ ಉಳಿವಿಗಾಗಿ ಚಂಪಕಾಳನ್ನು ಅರಸರು ಮದುವೆಯಾಗುವವರೆಗೆ, ಆನಂತರ ತನ್ನದಲ್ಲದ ತಪ್ಪಿಗಾಗಿ ಎಲ್ಲರೂ ಚಂಪಕಾರಾಣಿಯನ್ನು ದೂಷಿಸುವುದು, ಚಂಪಕಾಳ ಜಾತಿ, ಆಹಾರ ವಿಚಾರವಾಗಿ  ತಪ್ಪುತಿಳುವಳಿಕೆಯಿಂದಾಗಿ ಮಹಾರಾಣಿ ಭದ್ರಮ್ಮಾಜಿ  ಮನನೊಂದು ಅಸುನೀಗುವುದು, ಎಲ್ಲ ಘಟನೆಗಳೂ ನಿರ್ದೋಶಿ ಚಂಪಕಾರಾಣಿಯನ್ನು ಘಾಸಿಗೊಳಿಸುವುದುಮುತಾದವುಗಳನ್ನು ಇಲ್ಲಿ ಲೇಖಕರು ಅತ್ಯಂತ ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ. ಇದು ಅರುಣ್ ಪ್ರಸಾದರ ಮೊದಲ ಪುಸ್ತಕ ಎಂದರೆ ನಂಬಲಾಗುವುದಿಲ್ಲ. 

ಇದು ಇತಿಹಾಸವನ್ನಾಧರಿಸಿದ ಕಾಲ್ಪನಿಕ ಕಾದಂಬರಿ (Historical Fiction) ಆದರೆ, ಈ ಕಾದಂಬರಿಯನ್ನು ಓದಿದ ನಂತರ ನಾನು ಕೆಳದಿಯ ಇತಿಹಾಸವನ್ನು ತಿಳಿಸುವ ಡಾ|| ಕೆಳದಿ ವೆಂಕಟೇಶ ಜೋಯಿಸ್ ಅವರ ಸಂಶೋಧನಾ ಪುಸ್ತಕ “ ಕೆಳದಿ ಇತಿಹಾಸ ವೈಭವ “ ವನ್ನೂ ಮೊತ್ತೊಮ್ಮೆ ತಿರುವಿಹಾಕಿದೆ. ಶ್ರೀ ಅರುಣ್ ಪ್ರಸಾದ್ ಅವರು ವಸ್ತುನಿಷ್ಠವಾಗಿ ರಾಜಾ ವೆಂಕಟಪ್ಪನಾಯಕರ ಆಡಳಿತ, ಸಾಧನೆಗಳನ್ನು ವಿವರಿಸಿದ್ದಾರೆ. ಎಲ್ಲೂ ಅನಗತ್ಯ ವೈಭವೀಕರಣ ಇಲ್ಲ. ಮತ್ತು ಕಾದಂಬರಿಯನ್ನು ಸಣ್ಣ ಸಣ್ಣ ಅಧ್ಯಾಯಗಳನ್ನಾಗಿ ವಿಂಗಡಿಸಿರುವುದು ಓದುಗನ ಓದಿಗೆ ಚುರುಕುತನವನ್ನು ನೀಡುತ್ತದೆ. ಪುಸ್ತಕ ಓದಲು ಪ್ರಾರಂಭಿಸಿದರೆ ಕೆಳಗಿಡಲು ಮನಸ್ಸಾಗುವುದಿಲ್ಲ. ಕೊನೆಕೊನೆಗೆ ಘಟನೆಗಳು ಮನಸ್ಸನ್ನು ಭಾರವಾಗಿಸುತ್ತವೆ ಎಂಬುದೂ ನಿಜ. 

ಸುಮಾರು ನಾಲ್ಕು ನೂರು ವರ್ಷಗಳ ಮೊದಲು, ಈಗಿನಂತೆ ಸಂಪರ್ಕ ಸಾಧನ, ವ್ಯವಸ್ಥೆಗಳಿಲ್ಲದ ಕಾಲದಲ್ಲಿ, ಕೇವಲ, ಪ್ರತಿನಿತ್ಯ ಅಂಗಳದಲ್ಲಿನ ರಂಗೋಲಿಯನ್ನು ನೋಡಿ, ಆ ರಂಗೋಲಿಯ ಹಿಂದಿನ ಕರ್ತೃವಿನ ಬಗ್ಗೆ ಆಸಕ್ತಿ ಮೂಡಿ, ಆ ಬಗ್ಗೆ ರಾಜರು ವಿಚಾರಿಸುತ್ತಾರೆ. ಇಲ್ಲಿ ರಂಗೋಲಿ ಎಂಬುದು ಪ್ರೇಮಕ್ಕೂ, ಕೊನೆಗೆ ಪ್ರೇಮದ ಒಪ್ಪಿಗೆಗೂ ರೂಪಕವಾಗಿದೆ. “ಗಂಡಬೇರುಂಡ” ದ ಚಿತ್ರವನ್ನೂ ಸುಲಭದಲ್ಲಿ ಬಿಡಿಸುವ ಚಂಪಕಾಳ ಕಲೆಗೂ ಹಿಡಿದ ಕನ್ನಡಿಯಾಗಿದೆ. ಇದರ ನಡುವೆಯೇ ಹಲವು ತರಹದ ರಾಜಕಾರ್ಯಗಳೂ, ಶತ್ರುನಿಗ್ರಹ ಕಾರ್ಯವೂ, ಸಾಮ್ರಾಜ್ಯ ಬಲಪಡಿಸುವಿಕೆಯೂ ಬರುತ್ತವೆ. ಅವುಗಳಲ್ಲಿ ಮಗ್ನರಾಗಿ ರಾಜರು ಚಂಪಕಾಳನ್ನು ಮರೆತರೆನೋ ಎನ್ನುವಷ್ಟರಲ್ಲಿ ರಾಜರ ವೈಯುಕ್ತಿಕ ಜೀವನದಲ್ಲಿ ನಡೆಯುವ ಆಘಾತಗಳಿಂದ ಅವರು ಜರ್ಜರಿತರಾಗುತ್ತಾರೆ. ಸಾಮ್ರಾಜ್ಯ ಕೈ ತಪ್ಪಬಹುದೇನೋ ಎಂಬ ಆತಂಕದಿಂದ ಮಂತ್ರಿಗಳು, ಸೇನಾಧಿಕಾರಿಗಳು ತರಾತುರಿಯಲ್ಲಿ ಚಂಪಕಾಳೊಂದಿಗೆ ರಾಜರ ವಿವಾಹ ಮಾಡಿಸುತ್ತಾರೆ. ಆದರೆ, ಅದರಿಂದ ಉಂಟಾಗಬಹುದಾದ ಅಡ್ಡಪರಿಣಾಮಗಳ ಬಗ್ಗೆ ಆಗ ಯಾರಿಗೂ ಅರಿವಿರುವುದಿಲ್ಲ. 

ಇಲ್ಲಿ ನನಗೆ ಆಶ್ಚರ್ಯವಾಗುವುದು ಅರುಣ್ ಪ್ರಸಾದರಿಗೆ ಇರುವ ಸ್ಥಳೀಯ ಊರುಗಳ, ಪರಿಸರಗಳ, ವಿಸ್ತಾರವಾದ ಮಾಹಿತಿ. ಪಶ್ಚಿಮಘಟ್ಟಗಳಲ್ಲಿ ದೊರಕುವ ಕಾಳುಮೆಣಸು, ಯಾಲಕ್ಕಿ, ಅರಣ್ಯ ಸಂಪನ್ಮೂಲ ಇತ್ಯಾದಿಗಳೊಂದಿಗೆ ಈ ಮಲೆನಾಡು ಭಾಗದಲ್ಲಿ ಮಾತ್ರವೇ ದೊರೆಯಬಹುದಾದ ಜಂಬಿಟ್ಟಿಗೆ ಅಥವಾ ಕೆಂಪುಕಲ್ಲು ಅಥವಾ ಚಿರೆಕಲ್ಲು ಎಂಬ ಕಲ್ಲು, ಇತ್ಯಾದಿಗಳ ಬಗ್ಗೆ ಇರುವ ಮಾಹಿತಿ. ಜಾತಿಪದ್ದತಿಯ ಬಗ್ಗೆ, ಆಯಾಯಾ ಜಾತಿಗಳ ಸಂಪ್ರದಾಯಗಳ ಬಗ್ಗೆಯೂ ಇಲ್ಲಿ ಬಹಳ ವಿವರಗಳಿವೆ. 

ವೈಯುಕ್ತಿಕವಾಗಿ ನನಗೆ ಗಮನ ಸೆಳೆದ ಅಂಶ ಎಂದರೆ, ನಮ್ಮೂರು ಸಾಗರದ ಹುಟ್ಟಿನ ಬಗ್ಗೆ ಇರುವ ಒಂದಷ್ಟು ವಿವರಗಳು. ಕೆಳದಿ ಮತ್ತು ಇಕ್ಕೇರಿ ಎಂಬ ಪುರಾತನ ನಗರಗಳ ನಡುವೆ ಈ ಸಾಗರ ಇದೆ. ವೆಂಕಟಪ್ಪ ನಾಯಕರ ಅಜ್ಜ ಸದಾಶಿವ ನಾಯಕರ ನೆನಪಿಗಾಗಿ ಇಲ್ಲಿ ಸದಾಶಿವ ಸಾಗರ ಎಂಬ ಕೆರೆ ನಿರ್ಮಾಣ ಮಾಡಿದರು ಎಂಬುದಾಗಿ ಡಾ|| ಕೆಳದಿ ವೆಂಕಟೇಶ ಜೋಯಿಸರ “ ಕೆಳದಿ ಇತಿಹಾಸ ವೈಭವ “ ಪುಸ್ತಕದಲ್ಲಿಯೂ ವಿವರಣೆ ಇದೆ. ಸದಾಶಿವ ಸಾಗರದ ಸುತ್ತಮುತ್ತಲಿನ ಜಾಗದಲ್ಲಿ ನಗರ ನಿರ್ಮಾಣ ನಡೆಯುತ್ತದೆ. ಈಗ ಎಲ್ಲ ಕಡೆಯೂ ಸಾಗರ ಪಟ್ಟಣ ವಿಸ್ತರಿಸಿದೆ. 

ಕೆಲವು ಕಡೆ, ಅತಿವಿರಳವಾಗಿ, ಮುದ್ರಣದೋಷ ಇದೆಯಾದರೂ, ಈ ಕಾದಂಬರಿಯ ಓದಿನ ಓಟಕ್ಕೆ ಅದು ತಡೆಯಾಗುವುದಿಲ್ಲ. ಓದಲು ಪ್ರಾರಂಭಿಸಿದರೆ ಒಂದೇ ಗುಕ್ಕಿಗೆ ಸರಸರ ಓದಿಸಿಕೊಂಡು ಹೋಗುವಂತೆ ಕಾದಂಬರಿಯನ್ನು ಬರೆಯುವ ಮೂಲಕ ಶ್ರೀಯುತ ಅರುಣ್ ಪ್ರಸಾದ್ ಅವರು ತಾವೊಬ್ಬ ಸಶಕ್ತ ಬರಹಗಾರ ಎಂಬುದನ್ನು ಇಲ್ಲಿ ನಿರೂಪಿಸಿದ್ದಾರೆ. ಲೇಖಕರ ಲೇಖನಿಯಿಂದ ಇನ್ನೂ ಹೆಚ್ಚಿನ ಕೃತಿಗಳು ಮೂಡಿಬರಲಿ ಎಂದು ಹಾರೈಸುತ್ತೇನೆ. ಧನ್ಯವಾದಗಳೊಂದಿಗೆ. 
==========================
ಪುಸ್ತಕ : ಬೆಸ್ತರರಾಣಿ ಚಂಪಕಾ 
ಲೇಖಕರು : ಶ್ರೀ ಕೆ.ಅರುಣ್ ಪ್ರಸಾದ್ 
ಪ್ರಕಾಶಕರು : ಪಶ್ಚಿಮಘಟ್ಟದ ಶಿವಮೊಗ್ಗ ಓದುಗ-ವಿಮರ್ಶಕ ಬಳಗ.
ಬೆಲೆ : 100 ರೂಪಾಯಿಗಳು 
ಲಭ್ಯತೆ : ಲೇಖಕರು. ಮತ್ತು ಶ್ರೀ ಟ್ರೇಡರ್ಸ್ ಸಾಗರ 
==========================
( ಈ ಲೇಖನದಲ್ಲಿ ಅಂತರ್ಜಾಲದ ಕೆಲವು ಚಿತ್ರಗಳನ್ನು, ಡಾ|| ಕೆಳದಿ ವೆಂಕಟೇಶ ಜೋಯಿಸರ “ ಕೆಳದಿ ಇತಿಹಾಸ ವೈಭವ “ ಪುಸ್ತಕದಿಂದ ಕೆಲವು ವಿವರಗಳನ್ನು ಬಳಸಿಕೊಂಡಿದ್ದೇನೆ.)
==========================
ಗೌತಮಾಯನ - Gouthamaayana
13/09/2020
https://www.facebook.com/gouthamaayana/
==========================

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ