Skip to main content

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಮೆಮೋರಿಯಲ್ ರೀಸಚ್೯ ಸೆಂಟರ್ ನಲ್ಲಿ ಪಿ ಹೆಚ್ ಡಿ ಮಾಗ೯ದಶ೯ಕರಾದ ಡಾ. ಜನಾದ೯ನ ಭಟ್ಟರು ಮಾಡಿರುವ ಬೆಸ್ತರ ರಾಣಿ ಚ೦ಪಕಾ ವಿಮಷೆ೯ - 10

#ನಾನೆಲ್ಲಿ_ನನ್ನ_ಚೊಚ್ಚಲ_ಕಾದಂಬರಿ_ಎಲ್ಲಿ_ಇದನ್ನು_ವಿದ್ವಾ೦ಸರು_ವಿಮಷಿ೯ಸುತ್ತಾರೆಂದರೆ 
ನನಗೆ ನನ್ನನ್ನೇ ನಂಬಲಾಗುತ್ತಿಲ್ಲ?!

  #ಡಾ_ಜನಾದ೯ನ_ಭಟ್ಟರು ಬರಹಗಾರರು, ವಿಮಷ೯ಕರು ಅವರ ಬಳಗ ದೊಡ್ಡದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಮೆಮೋರಿಯಲ್ ರೀಸಚ್೯ ಸೆಂಟರ್ ನಲ್ಲಿ ಪಿ.ಹೆಚ್.ಡಿ. ಮಾಗ೯ದಶ೯ಕರಾಗಿ ದೊಡ್ಡ ಹುದ್ದೆ ನಿವ೯ಹಿಸುತ್ತಿದ್ದಾರೆ.
  ಖ್ಯಾತ ಸಾಹಿತಿ ಮತ್ತು ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿಯವರ ಮೊದಲ ವಿಮಶೆ೯ ಇವರಿಗೆ ಈ ಪುಸ್ತಕ ಓದಲು ಪ್ರೇರೇಪಿಸಿದೆ.
   ತಮ್ಮ ಕಾಯಾ೯ಭಾರದ ಸಮಯ ಅಭಾವದಲ್ಲೂ ಸಮಯ ಹೊಂದಿಸಿ ಓದಿ ವಿಮಷೆ೯ ಮಾಡಿದ್ದು ನನಗೆ ಸಂತೋಷ ಆಗಿದೆ.
  ಕುಂಬಳೆಯ ಅನಂದಪುರದ ಕೊಳದಲ್ಲಿ ರಹಸ್ಯವಾಗಿ ನಿಧಿ ಇದೆ ಎಂಬ ಬಗ್ಗೆ ಕೇಂದ್ರದ ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆ ಸಂಶೋದನೆಗಾಗಿ 15 ಲಕ್ಷ ಹಣ ಮಂಜೂರು ಮಾಡಿದೆ ಅಂತ ಕುಂಬಳೆಯ ಅರಮನೆ ವಂಶಸ್ಥರಾದ ರಮಾಕಾಂತ ಕುಂಬಳೆ ಈ ಪುಸ್ತಕದ ಬಗ್ಗೆ ಅವರಲ್ಲಿ ಹೋಗಿ ಚಚಿ೯ಸಿದಾಗ ತಿಳಿಸಿದ್ದರು.
  ಸಂಶೋದಕರಿಗೆ ಕೆಳದಿ ಇತಿಹಾಸದ ಇನ್ನೊಂದು ಆಸಕ್ತಿಕರ ವಿಷಯ ಇದೆ ಅದೇನೆಂದರೆ ಕೆಳದಿ ರಾಜ ಮನೆತನ ಲಿಂಗಾಯಿತ ವೀರಶೈವರಾಗಿದ್ದದ್ದು ಅಂತ್ಯದಲ್ಲಿ ರಾಮಕ್ಷತ್ರಿಯರಾಗುತ್ತದೆ ಇದು ಇನ್ನೊಂದು ಪುಸ್ತಕ ಬರೆಯುವಷ್ಟು ಇದೆ.
 ಅವರ ವಸ್ತು ನಿಷ್ಟ ವಿಮಷೆ೯ ನಿಮಗಾಗಿ

#ಶಿವಮೊಗ್ಗ_ಜಿಲ್ಲೆಯ_ಆನಂದಪುರಂನ_ಕೆ_ಅರುಣಪ್ರಸಾದ್_ಅವರು_ಬರೆದ_ಬೆಸ್ತರರಾಣಿ_ಚಂಪಕಾ ಎನ್ನುವ ಐತಿಹಾಸಿಕ ಕಾದಂಬರಿಯನ್ನ ಓದಿದೆ. ಗೆಳೆಯ ಅರವಿಂದ ಚೊಕ್ಕಾಡಿಯವರು ಈ ಕಾದಂಬರಿಯ ಬಗ್ಗೆ ಬರೆದುದನ್ನು ಓದಿ, ಕಾದಂಬರಿಯನ್ನು ಓದುವ ಆಸೆಯಾಗಿ ತರಿಸಿಕೊಂಡೆ.‌
      ಕಾದಂಬರಿ ನನಗೆ ತುಂಬಾ ಇಷ್ಟವಾಯಿತು. ಕೆಳದಿ ನಾಯಕರು ನಮ್ಮ ಕರಾವಳಿಯನ್ನೂ ಆಳಿ ಸಾಕಷ್ಟು ನೆನಪುಗಳನ್ನು ಉಳಿಸಿದ್ದಾರೆ. ಹಾಗಾಗಿ ಈ ಕಾದಂಬರಿಯಲ್ಲಿ ರಾಜಾ ವೆಂಕಟಪ್ಪ ನಾಯಕ ಮತ್ತು ಚಂಪಕಾರಾಣಿ ಅವರ ದುರಂತ ಪ್ರೇಮಕಥೆಯ ಜತೆಗೆ ನಮಗೆ ಹೊಸ ವಿಚಾರಗಳೂ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು. ಈ ಕಾದಂಬರಿ ನನ್ನ ನಿರೀಕ್ಷೆಗಳನ್ನೆಲ್ಲ ತೃಪ್ತಿಪಡಿಸಿದೆ. ಹೊಸ ಅಧ್ಯಯನಗಳಿಗೆ, ಕ್ಷೇತ್ರಕಾರ್ಯಕ್ಕೆ ಪ್ರೇರಣೆ ನೀಡಿದೆ. ಉದಾಹರಣೆಗೆ, ಕುಂಬಳೆ ಸಮೀಪದ ಅನಂತಪುರದ ದೇವಸ್ಥಾನದ ಕೆರೆಯಲ್ಲಿ ಕೆಳದಿ ಅರಸರ ನಿಧಿಯಿದೆ ಎಂದು ಈ ಪುಸ್ತಕದಲ್ಲಿದೆ. ಅಲ್ಲಿ ಈಗಲೂ ಇರುವ, ಅರ್ಚಕರ ಕೈಯಿಂದ ನೈವೇದ್ಯ ಸ್ವೀಕರಿಸುವ ಬಬಿಯಾ ಮೊಸಳೆಯನ್ನು ನಿಧಿಯ ಕಾವಲಿಗೆ ಇಟ್ಟದ್ದು ಎಂದಿದೆ. (ಇದು ಆನುಷಂಗಿಕ ವಿಚಾರ ಅಷ್ಟೆ. ನನ್ನ ಕುತೂಹಲ ಕೆರಳಿಸಿದ್ದರಿಂದ ಉಲ್ಲೇಖಿಸಿದೆ. ಅಲ್ಲಿಗೆ ಹೋಗಿದ್ದಾಗ ಈ ವಿಚಾರವನ್ನು ಯಾರೂ ಹೇಳಿಲ್ಲ).
   ಈ ಕಾದಂಬರಿಯ ಕೇಂದ್ರದಲ್ಲಿ ರಾಜಮನೆತನದ ಒಂದು ಅಂತರ್ಜಾತೀಯ ವಿವಾಹದ ದುರಂತ ಕತೆಯಿದೆ. ಆನಂದಪುರದ ಗಂಗಾಮತಸ್ಥ (ಬೆಸ್ತ) ಸುಂದರಿ ಚಂಪಕಾಳನ್ನು‌ ರಾಜಾ ವೆಂಕಟಪ್ಪ ನಾಯಕರು ಪ್ರೀತಿಸಿ ಮದುವೆಯಾಗುತ್ತಾರೆ. ರಾಜರು ಒಂದಕ್ಕಿಂತ ಹೆಚ್ಚು ಮದುವೆಯಾಗುವುದು ಸಾಮಾನ್ಯ ಆದರೂ ಸಸ್ಯಾಹಾರಿ‌ ರಾಜಮನೆತನಕ್ಕೆ ಮಾಂಸಾಹಾರಿ ಹುಡುಗಿ ಪ್ರವೇಶಿಸುವುದು ಹಿರಿಯ ರಾಣಿಗೆ ಇಷ್ಟವಾಗುವುದಿಲ್ಲ. ಅವರು ತಮ್ಮಿಂದಾದ ಪ್ರಯತ್ನವನ್ನು ಮಾಡಿದರೂ ಈ ಮದುವೆಯನ್ನು ತಪ್ಪಿಸಲಾಗದೆ ವಿರಕ್ತಿಯನ್ನು ತಾಳುತ್ತಾರೆ. ಹೆಚ್ಚು ಸಮಯ ಬದುಕದೆ ಪ್ರಾಣತ್ಯಾಗ ಮಾಡುತ್ತಾರೆ.‌ ಚಂಪಕಾ ವಜ್ರ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
    ಅವಳ ನೆನಪಿಗೆ ರಾಜರು ಕಟ್ಟಿಸಿದ್ದೇ ಚಂಪಕ ಸರಸ್ಸು. ಈ ಸ್ಮಾರಕವೂ ಜನೋಪಯೋಗಿ ಆಗಿರುವುದು ಕನ್ನಡ ನಾಡಿನ ಅರಸರ ಪ್ರಜಾವಾತ್ಸಲ್ಯವನ್ನು‌ ಸೂಚಿಸುತ್ತದೆ.
    ಈ ಕಾದಂಬರಿಯಲ್ಲಿ ಆ ಕಾಲದ ರಾಜಕೀಯ, ಪೋರ್ಚುಗೀಸರ ಉಪಟಳ, ವಿದೇಶ ವ್ಯಾಪಾರ ಇತ್ಯಾದಿ ಹಲವು ವಿಷಯಗಳು ಬರುತ್ತವೆ. ರಾಜ ಸಾಂಸಾರಿಕ ತುಡಿತಗಳ ಜತೆಗೆ ಇಂತಹ ಹಲವು ಸಂಗತಿಗಳನ್ನು‌ ಗಮನಿಸಬೇಕಾದ್ದನ್ನು ಹೀಗೆ ತೋರ್ಪಡಿಸಲಾಗಿದೆ.‌ ಆ ಕಾಲದ ಚಿತ್ರಣ ಇದರಿಂದ ಪರಿಪುಷ್ಟವಾಗಿದೆ.
   ಇಷ್ಟು ಅಧ್ಯಯನಪೂರ್ಣ ಕಾದಂಬರಿಯನ್ನು ಬರೆದರೂ ಅರುಣಪ್ರಸಾದ್ ಈ ಕಾದಂಬರಿಯಲ್ಲಿ ಚಿತ್ರಿಸಿದ ವಿಚಾರಗಳಲ್ಲಿ‌ ಮಾಹಿತಿಯ ಕೊರತೆ ಇದ್ದರೆ ತಮ್ಮ ಗಮನಕ್ಕೆ ತರಲು ಕೋರಿದ್ದಾರೆ. 
    ನನ್ನ ಸಂಗ್ರಹದಲ್ಲಿ ಈ ಕಾದಂಬರಿಯನ್ನು ಸೇರಿಸಿಕೊಳ್ಳಲು ಸಂತೋಷವಾಗಿದೆ. ನನಗೆ ಲೇಖಕರು ಈ ಕೃತಿಯನ್ನು ರಚಿಸಿದ ಹಿನ್ನೆಲೆ ಇಷ್ಟವಾಗಿದೆ. ಚಂಪಕಾ ಎನ್ನುವ ವೇಶ್ಯೆಗಾಗಿ ರಾಜರು ಕಟ್ಟಿಸಿದ ಸರಸ್ಸು ಇದು ಎಂದು ಒಮ್ಮೆ ಪತ್ರಿಕೆಗಳು ಇದರ ಬಗ್ಗೆ ಬರೆದಿದ್ದವಂತೆ. ಆಗ ಅರುಣಪ್ರಸಾದ್ ಅದಕ್ಕೆ ಪ್ರತಿಕ್ರಿಯಿಸಿ ನಿಜವಾದ ಇತಿಹಾಸವನ್ನು ‌ತಿಳಿಸಿದ್ದರಂತೆ. ಇಂತಹ ತಪ್ಪು ಅಭಿಪ್ರಾಯವನ್ನು ದೂರಮಾಡಲು ಅವರು ಈ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ಒಂದು ಕಾದಂಬರಿಯನ್ನೇ ಬರೆದಿದ್ದಾರೆ. ಈ ಊರಿನ ಯುವಕರು ಈ ಸರಸ್ಸಿನ ಬಗ್ಗೆ ಇಟ್ಟುಕೊಂಡಿರುವ ಅಭಿಮಾನವೂ ಮಾದರಿಯಾಗಿದೆ. ಆನಂದಪುರಂನ ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಸಮಿತಿ ಪ್ರತಿವರ್ಷ ಚಂಪಕರಾಣಿ ನೆನಪಿಗೆ ಸರೋವರ ಸ್ವಚ್ಛ ಮಾಡುತ್ತಾರಂತೆ. ಆನಂದಪುರಂ ಕನ್ನಡ ಯುವಕ ಸಂಘ ಈ ಪುಸ್ತಕವನ್ನು ಪ್ರಕಟಿಸಿದೆ.
    ಈ ಪುಸ್ತಕದ ಲೇಖಕ ಅರುಣಪ್ರಸಾದ್ ಅವರಿಗೆ ಅಭಿನಂದನೆಗಳು. ಅವರ ದೂರವಾಣಿ ಸಂಖ್ಯೆ: 9449253788

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...