Skip to main content

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಮೆಮೋರಿಯಲ್ ರೀಸಚ್೯ ಸೆಂಟರ್ ನಲ್ಲಿ ಪಿ ಹೆಚ್ ಡಿ ಮಾಗ೯ದಶ೯ಕರಾದ ಡಾ. ಜನಾದ೯ನ ಭಟ್ಟರು ಮಾಡಿರುವ ಬೆಸ್ತರ ರಾಣಿ ಚ೦ಪಕಾ ವಿಮಷೆ೯ - 10

#ನಾನೆಲ್ಲಿ_ನನ್ನ_ಚೊಚ್ಚಲ_ಕಾದಂಬರಿ_ಎಲ್ಲಿ_ಇದನ್ನು_ವಿದ್ವಾ೦ಸರು_ವಿಮಷಿ೯ಸುತ್ತಾರೆಂದರೆ 
ನನಗೆ ನನ್ನನ್ನೇ ನಂಬಲಾಗುತ್ತಿಲ್ಲ?!

  #ಡಾ_ಜನಾದ೯ನ_ಭಟ್ಟರು ಬರಹಗಾರರು, ವಿಮಷ೯ಕರು ಅವರ ಬಳಗ ದೊಡ್ಡದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಮೆಮೋರಿಯಲ್ ರೀಸಚ್೯ ಸೆಂಟರ್ ನಲ್ಲಿ ಪಿ.ಹೆಚ್.ಡಿ. ಮಾಗ೯ದಶ೯ಕರಾಗಿ ದೊಡ್ಡ ಹುದ್ದೆ ನಿವ೯ಹಿಸುತ್ತಿದ್ದಾರೆ.
  ಖ್ಯಾತ ಸಾಹಿತಿ ಮತ್ತು ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿಯವರ ಮೊದಲ ವಿಮಶೆ೯ ಇವರಿಗೆ ಈ ಪುಸ್ತಕ ಓದಲು ಪ್ರೇರೇಪಿಸಿದೆ.
   ತಮ್ಮ ಕಾಯಾ೯ಭಾರದ ಸಮಯ ಅಭಾವದಲ್ಲೂ ಸಮಯ ಹೊಂದಿಸಿ ಓದಿ ವಿಮಷೆ೯ ಮಾಡಿದ್ದು ನನಗೆ ಸಂತೋಷ ಆಗಿದೆ.
  ಕುಂಬಳೆಯ ಅನಂದಪುರದ ಕೊಳದಲ್ಲಿ ರಹಸ್ಯವಾಗಿ ನಿಧಿ ಇದೆ ಎಂಬ ಬಗ್ಗೆ ಕೇಂದ್ರದ ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆ ಸಂಶೋದನೆಗಾಗಿ 15 ಲಕ್ಷ ಹಣ ಮಂಜೂರು ಮಾಡಿದೆ ಅಂತ ಕುಂಬಳೆಯ ಅರಮನೆ ವಂಶಸ್ಥರಾದ ರಮಾಕಾಂತ ಕುಂಬಳೆ ಈ ಪುಸ್ತಕದ ಬಗ್ಗೆ ಅವರಲ್ಲಿ ಹೋಗಿ ಚಚಿ೯ಸಿದಾಗ ತಿಳಿಸಿದ್ದರು.
  ಸಂಶೋದಕರಿಗೆ ಕೆಳದಿ ಇತಿಹಾಸದ ಇನ್ನೊಂದು ಆಸಕ್ತಿಕರ ವಿಷಯ ಇದೆ ಅದೇನೆಂದರೆ ಕೆಳದಿ ರಾಜ ಮನೆತನ ಲಿಂಗಾಯಿತ ವೀರಶೈವರಾಗಿದ್ದದ್ದು ಅಂತ್ಯದಲ್ಲಿ ರಾಮಕ್ಷತ್ರಿಯರಾಗುತ್ತದೆ ಇದು ಇನ್ನೊಂದು ಪುಸ್ತಕ ಬರೆಯುವಷ್ಟು ಇದೆ.
 ಅವರ ವಸ್ತು ನಿಷ್ಟ ವಿಮಷೆ೯ ನಿಮಗಾಗಿ

#ಶಿವಮೊಗ್ಗ_ಜಿಲ್ಲೆಯ_ಆನಂದಪುರಂನ_ಕೆ_ಅರುಣಪ್ರಸಾದ್_ಅವರು_ಬರೆದ_ಬೆಸ್ತರರಾಣಿ_ಚಂಪಕಾ ಎನ್ನುವ ಐತಿಹಾಸಿಕ ಕಾದಂಬರಿಯನ್ನ ಓದಿದೆ. ಗೆಳೆಯ ಅರವಿಂದ ಚೊಕ್ಕಾಡಿಯವರು ಈ ಕಾದಂಬರಿಯ ಬಗ್ಗೆ ಬರೆದುದನ್ನು ಓದಿ, ಕಾದಂಬರಿಯನ್ನು ಓದುವ ಆಸೆಯಾಗಿ ತರಿಸಿಕೊಂಡೆ.‌
      ಕಾದಂಬರಿ ನನಗೆ ತುಂಬಾ ಇಷ್ಟವಾಯಿತು. ಕೆಳದಿ ನಾಯಕರು ನಮ್ಮ ಕರಾವಳಿಯನ್ನೂ ಆಳಿ ಸಾಕಷ್ಟು ನೆನಪುಗಳನ್ನು ಉಳಿಸಿದ್ದಾರೆ. ಹಾಗಾಗಿ ಈ ಕಾದಂಬರಿಯಲ್ಲಿ ರಾಜಾ ವೆಂಕಟಪ್ಪ ನಾಯಕ ಮತ್ತು ಚಂಪಕಾರಾಣಿ ಅವರ ದುರಂತ ಪ್ರೇಮಕಥೆಯ ಜತೆಗೆ ನಮಗೆ ಹೊಸ ವಿಚಾರಗಳೂ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು. ಈ ಕಾದಂಬರಿ ನನ್ನ ನಿರೀಕ್ಷೆಗಳನ್ನೆಲ್ಲ ತೃಪ್ತಿಪಡಿಸಿದೆ. ಹೊಸ ಅಧ್ಯಯನಗಳಿಗೆ, ಕ್ಷೇತ್ರಕಾರ್ಯಕ್ಕೆ ಪ್ರೇರಣೆ ನೀಡಿದೆ. ಉದಾಹರಣೆಗೆ, ಕುಂಬಳೆ ಸಮೀಪದ ಅನಂತಪುರದ ದೇವಸ್ಥಾನದ ಕೆರೆಯಲ್ಲಿ ಕೆಳದಿ ಅರಸರ ನಿಧಿಯಿದೆ ಎಂದು ಈ ಪುಸ್ತಕದಲ್ಲಿದೆ. ಅಲ್ಲಿ ಈಗಲೂ ಇರುವ, ಅರ್ಚಕರ ಕೈಯಿಂದ ನೈವೇದ್ಯ ಸ್ವೀಕರಿಸುವ ಬಬಿಯಾ ಮೊಸಳೆಯನ್ನು ನಿಧಿಯ ಕಾವಲಿಗೆ ಇಟ್ಟದ್ದು ಎಂದಿದೆ. (ಇದು ಆನುಷಂಗಿಕ ವಿಚಾರ ಅಷ್ಟೆ. ನನ್ನ ಕುತೂಹಲ ಕೆರಳಿಸಿದ್ದರಿಂದ ಉಲ್ಲೇಖಿಸಿದೆ. ಅಲ್ಲಿಗೆ ಹೋಗಿದ್ದಾಗ ಈ ವಿಚಾರವನ್ನು ಯಾರೂ ಹೇಳಿಲ್ಲ).
   ಈ ಕಾದಂಬರಿಯ ಕೇಂದ್ರದಲ್ಲಿ ರಾಜಮನೆತನದ ಒಂದು ಅಂತರ್ಜಾತೀಯ ವಿವಾಹದ ದುರಂತ ಕತೆಯಿದೆ. ಆನಂದಪುರದ ಗಂಗಾಮತಸ್ಥ (ಬೆಸ್ತ) ಸುಂದರಿ ಚಂಪಕಾಳನ್ನು‌ ರಾಜಾ ವೆಂಕಟಪ್ಪ ನಾಯಕರು ಪ್ರೀತಿಸಿ ಮದುವೆಯಾಗುತ್ತಾರೆ. ರಾಜರು ಒಂದಕ್ಕಿಂತ ಹೆಚ್ಚು ಮದುವೆಯಾಗುವುದು ಸಾಮಾನ್ಯ ಆದರೂ ಸಸ್ಯಾಹಾರಿ‌ ರಾಜಮನೆತನಕ್ಕೆ ಮಾಂಸಾಹಾರಿ ಹುಡುಗಿ ಪ್ರವೇಶಿಸುವುದು ಹಿರಿಯ ರಾಣಿಗೆ ಇಷ್ಟವಾಗುವುದಿಲ್ಲ. ಅವರು ತಮ್ಮಿಂದಾದ ಪ್ರಯತ್ನವನ್ನು ಮಾಡಿದರೂ ಈ ಮದುವೆಯನ್ನು ತಪ್ಪಿಸಲಾಗದೆ ವಿರಕ್ತಿಯನ್ನು ತಾಳುತ್ತಾರೆ. ಹೆಚ್ಚು ಸಮಯ ಬದುಕದೆ ಪ್ರಾಣತ್ಯಾಗ ಮಾಡುತ್ತಾರೆ.‌ ಚಂಪಕಾ ವಜ್ರ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
    ಅವಳ ನೆನಪಿಗೆ ರಾಜರು ಕಟ್ಟಿಸಿದ್ದೇ ಚಂಪಕ ಸರಸ್ಸು. ಈ ಸ್ಮಾರಕವೂ ಜನೋಪಯೋಗಿ ಆಗಿರುವುದು ಕನ್ನಡ ನಾಡಿನ ಅರಸರ ಪ್ರಜಾವಾತ್ಸಲ್ಯವನ್ನು‌ ಸೂಚಿಸುತ್ತದೆ.
    ಈ ಕಾದಂಬರಿಯಲ್ಲಿ ಆ ಕಾಲದ ರಾಜಕೀಯ, ಪೋರ್ಚುಗೀಸರ ಉಪಟಳ, ವಿದೇಶ ವ್ಯಾಪಾರ ಇತ್ಯಾದಿ ಹಲವು ವಿಷಯಗಳು ಬರುತ್ತವೆ. ರಾಜ ಸಾಂಸಾರಿಕ ತುಡಿತಗಳ ಜತೆಗೆ ಇಂತಹ ಹಲವು ಸಂಗತಿಗಳನ್ನು‌ ಗಮನಿಸಬೇಕಾದ್ದನ್ನು ಹೀಗೆ ತೋರ್ಪಡಿಸಲಾಗಿದೆ.‌ ಆ ಕಾಲದ ಚಿತ್ರಣ ಇದರಿಂದ ಪರಿಪುಷ್ಟವಾಗಿದೆ.
   ಇಷ್ಟು ಅಧ್ಯಯನಪೂರ್ಣ ಕಾದಂಬರಿಯನ್ನು ಬರೆದರೂ ಅರುಣಪ್ರಸಾದ್ ಈ ಕಾದಂಬರಿಯಲ್ಲಿ ಚಿತ್ರಿಸಿದ ವಿಚಾರಗಳಲ್ಲಿ‌ ಮಾಹಿತಿಯ ಕೊರತೆ ಇದ್ದರೆ ತಮ್ಮ ಗಮನಕ್ಕೆ ತರಲು ಕೋರಿದ್ದಾರೆ. 
    ನನ್ನ ಸಂಗ್ರಹದಲ್ಲಿ ಈ ಕಾದಂಬರಿಯನ್ನು ಸೇರಿಸಿಕೊಳ್ಳಲು ಸಂತೋಷವಾಗಿದೆ. ನನಗೆ ಲೇಖಕರು ಈ ಕೃತಿಯನ್ನು ರಚಿಸಿದ ಹಿನ್ನೆಲೆ ಇಷ್ಟವಾಗಿದೆ. ಚಂಪಕಾ ಎನ್ನುವ ವೇಶ್ಯೆಗಾಗಿ ರಾಜರು ಕಟ್ಟಿಸಿದ ಸರಸ್ಸು ಇದು ಎಂದು ಒಮ್ಮೆ ಪತ್ರಿಕೆಗಳು ಇದರ ಬಗ್ಗೆ ಬರೆದಿದ್ದವಂತೆ. ಆಗ ಅರುಣಪ್ರಸಾದ್ ಅದಕ್ಕೆ ಪ್ರತಿಕ್ರಿಯಿಸಿ ನಿಜವಾದ ಇತಿಹಾಸವನ್ನು ‌ತಿಳಿಸಿದ್ದರಂತೆ. ಇಂತಹ ತಪ್ಪು ಅಭಿಪ್ರಾಯವನ್ನು ದೂರಮಾಡಲು ಅವರು ಈ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ಒಂದು ಕಾದಂಬರಿಯನ್ನೇ ಬರೆದಿದ್ದಾರೆ. ಈ ಊರಿನ ಯುವಕರು ಈ ಸರಸ್ಸಿನ ಬಗ್ಗೆ ಇಟ್ಟುಕೊಂಡಿರುವ ಅಭಿಮಾನವೂ ಮಾದರಿಯಾಗಿದೆ. ಆನಂದಪುರಂನ ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಸಮಿತಿ ಪ್ರತಿವರ್ಷ ಚಂಪಕರಾಣಿ ನೆನಪಿಗೆ ಸರೋವರ ಸ್ವಚ್ಛ ಮಾಡುತ್ತಾರಂತೆ. ಆನಂದಪುರಂ ಕನ್ನಡ ಯುವಕ ಸಂಘ ಈ ಪುಸ್ತಕವನ್ನು ಪ್ರಕಟಿಸಿದೆ.
    ಈ ಪುಸ್ತಕದ ಲೇಖಕ ಅರುಣಪ್ರಸಾದ್ ಅವರಿಗೆ ಅಭಿನಂದನೆಗಳು. ಅವರ ದೂರವಾಣಿ ಸಂಖ್ಯೆ: 9449253788

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ