Skip to main content

ಟ್ಯಾಪಿಯೋಕ ಎಂಬ ಹೆಸರು ಪೋಚು೯ಗೀಸರಿಂದ ಪಡೆದ, ಮಲೆಯಾಳದಲ್ಲಿ ಕಪ್ಪಾ ಅಂತ ಮನೆ ಮಾತಾಗಿರುವ ಈ ಮರ ಗೆಣಸು 1880 - 85 ರ ಕೇರಳದ ಬೀಕರ ಬರಗಾಲದಲ್ಲಿ ಟ್ರಯೊ೦ಕರಮ್ ನ ರಾಜನ ಕಿರಿಯ ಸಹೋದರ ವಿಶಾ ರಾಮ್ ತಿರುಮಲ ರಾಮ ವಮಾ೯ರಿಂದ ಪರಿಚಯಸಲ್ಪಟ್ಟದ್ದಾಗಿದೆ

#ಕೇರಳದ_ಮರಗೆಣಿಸಿನ_ಇತಿಹಾಸ
 
 ಮೊನ್ನೆ ನನ್ನ ಮಲೆಯಾಳಿ ಮಿತ್ರ ಕುಟ್ಟಿಚನ್ ತಾನು ಬೆಳೆದ ಪೊಪ್ಪಾಯಿ, ಅನಾನಸ್, ಸುವಣ೯ಗೆಡ್ಡೆ, ಪೇರಲೆ ಮತ್ತು ಕೆಲ ತುಂಡು ಮರಗೆಣಸು ತಂದು ಕೊಟ್ಟ ಮತ್ತು ಬೇಯಿಸಿ ತಿನ್ನುವ ನೆಂದ್ರ ಬಾಳೆ ಹಣ್ಣು ಇನ್ನು ಬಂದಿಲ್ಲ ಅ೦ತಂದ.
 ಆನಂದಪುರದ ಮುಂಬಾಳಿನ ಗೋಕುಲ್ ಪಾರಂ ನ ಹಿಂಬಾಗದಲ್ಲಿ 3 ಎಕರೆ ಬಗರ್ ಹುಕುಂ ಜಾಗದಲ್ಲಿ ರಬ್ಬರ್ ಜೊತೆ ಇವೆಲ್ಲ ಬೆಳೆಯುತ್ತಾರೆ ಮತ್ತು ಸಾಗರ ಶಿವಮೊಗ್ಗದ ಸಂತೆಯಲ್ಲಿ ತಪ್ಪದೇ ಮರಗೆಣಸು ಜೊತೆ, ನೇಂದ್ರ ಬಾಳೆ ಹಣ್ಣು, ಸುವರ್ಣ ಗೆಡ್ಡೆ ಮತ್ತಿತರ ತರಕಾರಿ ಮಾರುತ್ತಾರೆ ಇದಕಾಗಿ ಒಂದು ಲಗೇಜ್ ಕ್ಯಾರಿಯರ್ ಇದೆ ಇವರ ಹತ್ತಿರ ಇದೆ,ತುಂಬಾ ಶ್ರಮಜೀವಿ.
  ಕಪ್ಪಾ ಅಂತ ಕೇರಳದವರು ಕರೆಯುವ ಕನ್ನಡಿಗರ ಬಾಯಲ್ಲಿ ಮರಗೆಣಸು ಆಗಿರುವ ಇದರ ಮೂಲ ಬ್ರಿಜಿಲ್, ಅತಿ ಕಡಿಮೆ ಮಳೆ ಆಶ್ರಿತ ಬೆಳೆ, ಹೆಚ್ಚು ಪೈಬ್ರಾಯಿಡ್ ಹೊಂದಿದೆ.
   ಕೇರಳಿಗರಿಗೆ ನಿತ್ಯ ಆಹಾರವಾಗಿದೆ, ಉಳಿದ ಪ್ರದೇಶದಲ್ಲಿ ಸಬ್ಬಕ್ಕಿ ರೂಪದಲ್ಲಿ ಮತ್ತು ಗಾಮೆ೯೦ಟ್ ಗಳಲ್ಲಿ ಬಟ್ಟೆಗೆ ಹಾಕುವ ಗ೦ಜಿಯಾಗಿ ಹೆಚ್ಚು ಬಳಕೆ.
  ದೂರದ ಬ್ರಿಜಿಲ್ ನಿಂದ ಇದು ಕೇರಳಕ್ಕೆ ಬಂದ ಒಂದು ಇತಿಹಾಸವಿದೆ, ಇದು ಬ್ರಿಜಿಲ್ ನ ಮೂಲ ನಿವಾಸಿಗಳ ಆಹಾರ ಅವರು ಅವರ ಬಾಷೆಯಲ್ಲಿ ಇದನ್ನು ಟೂಪಿ ಅಂತ ಕರೆಯುವುದರಿಂದ ಈ ಪ್ರದೇಶ ಮೊದಲ ಬಾರಿಗೆ ತಲುಪಿದ ಪೋಚು೯ಗಿಸರಿಂದ ಟಾಪಿಯೋಕ ಅಂತ ಕರೆಯಲ್ಪಟ್ಟಿತಂತೆ.
   1880 - 85 ರಲ್ಲಿ ದಕ್ಷಿಣ ಕೇರಳ ಟ್ರೂವೆಂಕೂರ್ ರಾಜ್ಯದಲ್ಲಿ ಬೀಕರ ಬರಗಾಲ ಬಂದಾಗ ಅಲ್ಲಿನ ರಾಜನ ಕಿರಿಯ ಸಹೋದರ ವಿಶಾ ರಾಮ್ ತಿರುಮಲ ರಾಮ ವಮಾ೯ ಇದನ್ನು ಕೇರಳಕ್ಕೆ ಪರಿಚಯಿಸುತ್ತಾರೆ ಸ್ವತಃ ಸಸ್ಯ ಶಾಸ್ತ್ರಜ್ಞರಾದ ಇವರು ರಾಜನಿಂದ ಸ್ಟತಃ ಅಡಿಗೆ ಮಾಡಿ ತಿಂದು ತೋರಿಸಿದ್ದರಿಂದ ಜನ ದೈಯ೯ದಿಂದ ಬೆಳೆದು ಬೆಳೆಸಿ ತಿನ್ನುತ್ತಾರಂತೆ.
 ಎರಡನೇ ಮಹಾಯುದ್ಧದಲ್ಲಿ ಸೌತ್ ಈಸ್ಟ್ ಏಷಿಯಾದಲ್ಲಿ ಬಹಳಷ್ಟು ನಿರಾಶ್ರಿತರು ಇದರಿಂದ ಬದುಕಿದ ಇತಿಹಾಸ ಇದೆ.
  ಹಾಗಾಗಿ ಕೇರಳದ ಮಲೆಯಾಳಿಗಳಿಗೆ ಈ ಮರಗೆಣಸು ಹೆಚ್ಚು ಪರಿಚಿತ ಆಹಾರ ಆಗಿದೆ ಆದರೆ ಇದರ ಇತಿಹಾಸ ಅವರಾರಿಗೂ ನೆನಪಿಲ್ಲ.
  1995 ರಲ್ಲಿ ಇದೇ ಕುಟ್ಟಿಚನ್ ನೇತೃತ್ವದಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಈ ಗೆಣಸು ಬೆಳೆದಿದ್ದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...