# ಕಾಗೋಡು ತಿಮ್ಮಪ್ಪ ಅತ್ಯುತ್ತಮ ಸಂಸದೀಯ ಪಟು ಮತ್ತು ಅತ್ಯುತ್ತಮ ಶಾಸಕರು#
ಸಿದ್ದಾoತದ ಭಿನ್ನಾಭಿಪ್ರಾಯ ಬೇರೆ ಆದರೆ ಕಾಗೋಡರ ಹೆಸರೇಳುವ ಬಗ್ಗೆ ಯಾರಿಗೂ ಅವಮಾನ ಆಗುತ್ತೆ ಅಂದರೆ ಅದು ತಪ್ಪು ಗ್ರಹಿಕೆ .
ವೈಯಕ್ತಿಕವಾಗಿ ಕಾಗೋಡು ಮತ್ತು ನನ್ನ ರಾಜಕೀಯ ಸಂಬಂದದಲ್ಲಿ ಹೇಳುವುದಾದರೆ ನನ್ನ ಕೆಲಸವನ್ನ ಕಾಗೋಡು ಸಾವ೯ಜನಿಕವಾಗಿ ಹೊಗಳಿದ್ದು ಇದೆ, ಅವರ ಅನುಯಾಯಿಗಳು ದ್ವೇಷ ಸಾದನೆಗಾಗಿ ಪರಸ್ಪರ ಅಪನಂಬಿಕೆ ಸೃಷ್ಟಿಸಿ ನಿರಂತರ ದೂರು ದಾಖಲಿಸಿ ,ಜೈಲಿಗೆ ಕಳಿಸಿ, ಗೂOಡಾ ಕಾಯ್ದೆಗೆ ಒಳಪಡಿಸಿದ್ದು, ನನ್ನ ವ್ಯವಹಾರಗಳಿಗೆ ಅನೇಕ ತೊಂದರೆ ಆಗಿದ್ದು ಸತ್ಯ ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾಗೋಡು ತಿಮ್ಮಪ್ಪರಂತ ಶಾಸಕರು ಸಿಗುವುದು ವಿರಳ, ಶಾಸಕರು ಯಾರೂ ಆಗಬಹುದು ಆದರೆ ಶಾಸನ ಸಭೆಯಲ್ಲಿ ಶಾಸನ ಮಾಡುವ ಅದನ್ನ ಜಾರಿ ಮಾಡುವ ಶಾಸಕರು ಈಗ ಆಯ್ಕೆ ಆಗುವುದಿಲ್ಲ, ನೇರ ನಿಷ್ಟುರವಾದಿಯಾಗಿ ಕಾಗೋಡು ಲೋಕ ವಿರೋಧಿ ಆದರೆ ಅವರ ಸಾಮಾಜಿಕ ಕಳಕಳಿ ಯಾರು ಅನುಮಾನ ಅವಮಾನ ಪಡುವಂತದ್ದಲ್ಲ ಹಾಗಾಗಿ ವೈಯಕ್ತಿಕವಾಗಿ ವಿರೋದ ವಿದ್ದರೂ ಕಾಗೋಡು ತಿಮ್ಮಪ್ಪ ನಮ್ಮ ಸಾಗರದ ಶಾಸಕರು ಎಂದು ಹೇಳಲು ನನಗೆ ಹೆಮ್ಮೆ ಇದೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment