ಈ ವ್ಯವಸ್ಥೆ ಎಷ್ಟು ಕೆಟ್ಟದ್ದೆ೦ದರೆ ಮುಗ್ದರಿಗೆ ಪ್ರಾಮಾಣಿಕರಿಗೆ ಸತ್ಯವಂತರಿಗೆ ಬದುಕಲು ಬಿಡದ ಕಪಿ ಮುಷ್ಟಿ ಅದರದ್ದು ಅದನ್ನ ಬೇದಿಸಿ ಚೇದಿಸಿ ಬದುಕಲು ನಾವು ಕನಿಷ್ಟ 64 ವಿದ್ಯೆಯ ಕೆಲ ಅಂಶ ಬಳಸಲು ಕಲಿಯಲೇ ಬೇಕಾಗಿದೆ.
ಈ ವ್ಯವಸ್ಥೆಯನ್ನ ಕನಿಷ್ಟ ಬದಲಾಯಿಸಲೂ ಪ್ರಯತ್ನ ಮಾಡದ ಎಲ್ಲರೂ ಅಪರಾಧಿಗಳೆ.
ನಿಮ್ಮ ಆ ದಿನದ ಪರಿಸ್ಥಿತಿ ನನ್ನ ತಾಯಿ ನನಗೆ 10 ವಷ೯ ಇದ್ದಾಗ ಶಿವಮೊಗ್ಗದಲ್ಲಿನ ಮೆಗಾನ್ ಆಸ್ಪತ್ರೆಯಲ್ಲಿ ಗಭ೯ಕೋಶದ ಗೆಡ್ಡೆ ಆಪರೇಷನ್ ಗೆ ಆಪರೇಷನ್ ಥಿಯೇಟರ್ ಗೆ ಹೋಗುವಾಗ ನನ್ನ ಅಪ್ಪಿಕೊಂಡು ಅಳುತ್ತಾ ಹೋದವಳು ಅಲ್ಲಿ ವೈದ್ಯರ ನಿಲ೯ಕ್ಷದಿಂದ ಅನೇಸ್ತಿಯಾ ಇಂಜಕ್ಷ್ ನ್ ನ ರಿಯಾಕ್ಷನ್ ನಿಂದ ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೋದ ಘಟನೆ ನೆನಪಾಯಿತು.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment