# ಬಿದನೂರು ನಗರದ ಈ ಸು೦ದರ ಈಜು ಕೊಳಗಳ ಸಂಕೀಣ೯ಕ್ಕೆ ಒಮ್ಮೆಯಾದರೂ ಬೇಟಿ ನೀಡಿ.#
ಬಿದನೂರು ನಗರದ ಕೋಟೆಯಿ೦ದ ಕೊಲ್ಲೂರು ಮಾಗ೯ದಲ್ಲಿ 5-6 ಕಿ.ಮಿ. ಸಾಗಿದರೆ ಅಲ್ಲಿ ಬೈಸೆ ಎಂಬ ಹಳ್ಳಿ ಸಿಗುತ್ತದೆ, ಈ ಹಳ್ಳಿಯ ಬಲ ಬಾಗದಲ್ಲಿ ಕೆಳದಿ ಅರಸರ ಶಿಥಿಲ ಸಮಾದಿಗಳು ಇದೆ.
ಇಲ್ಲೇ ಒಂದು ರಸ್ತೆ ಬಲಕ್ಕೆ ದೇವಗಂಗೆಗೆ ಹೋಗುತ್ತದೆ, ಇಲ್ಲಿಯೇ ಕೆಳದಿ ಅರಸರ ಅದ್ಬುತ ನಿಮಾ೯ಣದ ಈಜು ಕೊಳಗಳ ಸಂಕೀಣ೯ವಿದೆ.
ಈಗೆಲ್ಲ ನೈಸಗಿ೯ಕ ಈಜುಕೊಳಗಳ ಬಗ್ಗೆ ವಿದೇಶಗಳಲ್ಲಿ ವಿಪರೀತ ಕಯಾಲಿಪ್ರಾರಂಭ ಆಗಿದೆ ಆದರೆ 350 - 400 ವಷ೯ದ ಹಿಂದೆ ಕೆಳದಿ ಅರಸರು ನಿಮಿ೯ಸಿದ ಈ ನೈಸಗಿ೯ಕ ಈಜು ಕೊಳಗಳ ಸಂಕೀಣ೯ ಸಂಶೋದನೆಗೆ ಆಹ೯ವಾಗಿದೆ.
ವಷ೯ ಪೂತಿ೯ ಈ ಈಜು ಕೊಳದಲ್ಲಿ ಒಂದೇ ಮಟ್ಟದಲ್ಲಿ ನೀರು ಇರುತ್ತದೆ ಮತ್ತು ನೀರು ಸದಾ ಹರಿಯುತ್ತಿರುತ್ತದೆ.
ದೊಡ್ಡ ಕೊಳ ಸಂಪೂಣ೯ ಶಿಲೆ ಕಲ್ಲಿನಿಂದ ನಿಮಿ೯ಸಿದ್ದಾರೆ, ಇದರ ಮದ್ಯೆ ರಾಣಿ ಪರಿವಾರದವರಿಗಾಗಿ ಕಲ್ಲಿನ ಸುಂದರ ತೊಟ್ಟಿಲು ಅಲ್ಲಿಗೆ ತಲುಪಲು ಕಲ್ಲಿನ ಸಂಕ ಇದೆ.
ಈಜು ಕೊಳದ ಸುತ್ತಲೂ ಸುಂದರವಾದ ಕಟಾಂಜನ, ಕೊಳಕ್ಕೆ ಇಳಿಯಲು ವಿಶಾಲವಾದ ಪಾವಟಿಗೆಗಳಿದೆ.
ದೊಡ್ಡ ಕೊಳದ ನೀರು ಹರಿಯುವ ದಿಕ್ಕಿನಲ್ಲಿ ವಿವಿಧ ಆಕೃತಿಯ, ಅಳತೆಯ ಮತ್ತು ಆಳದ 7 ಕೊಳಗಳಿದೆ.
ವಷ೯ ಪೂತಿ೯ ಈ ಕೊಳಗಳಲ್ಲಿ ನೀರು ಹರಿಯುವುದರಿಂದ ಇದರ ನೀರು ಮಲೀನವಾಗುವುದಿಲ್ಲ, ಈ ಕೊಳಕ್ಕೆ ಬೆಟ್ಟದ ಮೇಲಿನ ದೊಡ್ಡಕೆರೆಯಿOದ ನೀರು ಹರಿದು ಬರಲು ಭೂಮಿ ಆಳದಲ್ಲಿ ಹಿತ್ತಾಳೆಯ ಕೊಳವೆ ಮತ್ತು ಕಲ್ಲಿನ ಕೊಳವೆ ಅಳವಡಿಸಿದ್ದಾರೆ.
ಈಜು ಕೊಳದ ಸ೦ಕಿಣ೯ ನೆಲದಿಂದ ಸುಮಾರು 15 ಅಡಿ ಆಳದಲ್ಲಿ ನಿಮಿ೯ಸಿರುವುದು ರಾಣಿ ವಾಸದ ಖಾಸಾಗಿ ತನಕ್ಕಾಗಿ, ದೂರದಿಂದ ಈಜು ಕೊಳ ಕಾಣುವುದಿಲ್ಲ.
ಕೊಳದ ಒಂದು ಭಾಗದಿಂದ ಪಾವಟಿಗೆ ಹತ್ತಿ ಹೋದರೆ ಸುಂದರವಾದ ಈಶ್ವರ ದೇವಸ್ಥಾನ, ಇನ್ನೊಂದು ಬಾಗದ ಪಾವಟಿಗೆ ಹತ್ತಿ ಮೇಲೆ ಹೋದರೆ ಸುಂದರ ಉದ್ಯಾನವನ ಸುತ್ತಲೂ ಕಲ್ಲು ಪಗಾರವಿದೆ.
ಇದರ ಸುತ್ತಲೂ ನೂರಾರು ಎಕರೆ ದೇಶ, ವಿದೇಶಗಳ ಹಣ್ಣುಗಳ ಸುಂದರ ತೋಟವಿತ್ತಂತೆ ಅದು ಈಗಿಲ್ಲ.
ಕೆಳದಿ ಅರಸರು ಕೆಲವು ಶತಮಾನದ ಹಿಂದೆ ನಿಮಿ೯ಸಿರುವ ಈಗಲೂ ಹಾಗೇ ಇರುವ ಈ ನೈಸಗಿ೯ಕ ಈಜು ಕೊಳ ಅಧ್ಯಯನ, ಸಂಶೋದನೆಗೆ ಅಹ೯ವಾಗಿದೆ ಈ ಎಲ್ಲಾ ದೃಷ್ಟಿಕೋನದಿಂದ ಬಿದನೂರು ನಗರದ ದೇವಗಂಗೆ ಸಂದಶಿ೯ಸಿದರೆ ನಿಜಕ್ಕೂ ನೀವು ಪುಳಕಿತರಾಗುತ್ತೀರಿ.
ನನ್ನ ಬಾಲ್ಯದಲ್ಲಿ ಈಜು ಈ ಕೊಳದಲ್ಲೆ ಕಲಿಯುವ ಅವಕಾಶ ದೊರೆತಿದ್ದು ಕೂಡ ನನಗೆ ಸದಾ ದೇವಗಂಗೆಯ ಒಂದು ನೆನಪು.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment