#ವಾಲೆ ಬೆಲ್ಲ ಉಪು೯ ನೀರಾ ಬೆಲ್ಲ#
ಕಬ್ಬಿನಿಂದ ತಯಾರಿಸಿದ ಬೆಲ್ಲ ಹಾಗೂ ಸಕ್ಕರೆ ಎಲ್ಲರಿಗೂ ಪರಿಚಿತ ಆದರೆ ತಾಳೆಮರದ ಹಾಗೂ ತೆಂಗಿನ ಮರದಿಂದ ಇಳಿಸಿದ ನೀರಾ (ಕಳ್ಳು ಅಥವ ಶೇಂದಿ )ದಿಂದ ತಯಾರಿಸುವ ಬೆಲ್ಲ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ .
ಮೊದಲೆಲ್ಲ ಕರಾವಳಿಯಲ್ಲಿ ಎಲ್ಲಾ ಕಡೆ ಸಿಗುತ್ತಿತ್ತು, ಈ ಬೆಲ್ಲದ ರುಚಿಯು ವಿಶಿಷ್ಟ ಮತ್ತು ಇದನ್ನ ಗಾಲಿ ಆಕಾರದಲ್ಲಿ ಅಚ್ಚಿನಲ್ಲಿ ಹೋಯ್ದು ಅದಕ್ಕೆ ಅಂಚಿಗೆ ತಾಳೆ ಮರದ ಗರಿಯನ್ನ ಸುತ್ತುತ್ತಾರೆ, ಹತ್ತಾರು ವಾಲೆ ಬೆಲ್ಲದ ಗಾಲಿಗಳನ್ನ ದೊಡ್ಡದಾದ ತಾಳೆ ಎಲೆಯ ಕೊಟ್ಟೆಯಲ್ಲಿ ಕಟ್ಟಿರುತ್ತಾರೆ, ಇದನ್ನ ತಯಾರಿಸಿ ಪ್ಯಾಕ್ ಮಾಡುವುದು ಒಂದು ಕಲೆಯೇ ಸರಿ.
ಇದು ಶುದ್ದ ಸಾವಯವ ಬೆಲ್ಲ ಮತ್ತು ಇದನ್ನ ನೈಸಗಿ೯ಕವಾಗಿ ಪ್ಯಾಕ್ ಮಾಡಿ ಸಂರಕ್ಷಿಸುವ ಕಾಯಕ ಈಗ ಕ್ರಮೇಣ ಮಾಯವಾಗಿದೆ.
ಅನೇಕ ಬಾರಿ ಕರಾವಳಿಗೆ ಹೋದಾಗ ಇದನ್ನ ಹುಡುಕಿದರೂ ಸಿಗಲಿಲ್ಲ ಕಾರಣ ಕೇಳಿದರೆ ಈಗ ಯಾರೂ ಇದನ್ನ ಕೇಳುವುದಿಲ್ಲ ಮತ್ತು ಇದನ್ನ ತಯಾರಿಸುವವರೂ ಕಡಿಮೆ ಅಂದರು.
ಕುಂದಾಪುರದ ಸಮೀಪದ ಕೋಟೇಶ್ವರದಿಂದ ತಲಾಷ್ ಮಾಡಿ ಎರೆಡು ಕೊಟ್ಟೆ ವಾಲೆ ಬೆಲ್ಲ ಬಂದುಗಳಾದ ಹಿರಿಯರು ಶ್ರೀ ನಾರಾಯಣ ಮೆಂಡನ್ ಉಪ್ಪಿನಕೊಟೆಯವರು ತಂದು ಕೊಟ್ಟಿದ್ದಾರೆ.
ಇದು ನೋಡಲಿಕ್ಕೆ ಇಷ್ಟು ಸುಂದರವಾಗಿದೆ ಇನ್ನು ಇದರ ರುಚಿ ?! ಹುಡುಕಿ ಖರೀದಿಸಿ ತಿಂದು ನೋಡಿ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment