Skip to main content

# HANDIGODU SYNDROME DIESEAS# ಹಂದಿ ಗೋಡು ನಿಗೂಡ ಕಾಯಿಲೆ#

ಹಂದಿಗೋಡು ನಿಗೂಡ ಕಾಯಿಲೆ

  ಇವತ್ತು ಔಷದಿ ಕಂಡು ಹಿಡಿಯದ ಕಾಯಿಲೆ ಯಾವುದು ಎಂದರೆ ಏಡ್ಸ್ ಅನ್ನುತ್ತಾರೆ ಆದರೆ ನಮ್ಮ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹಂದಿಗೋಡು ಎಂಬಲ್ಲಿ ಮೊದಲಿಗೆ ಕಂಡು ಬಂದ ಈ ಕಾಯಿಲೆಗೆ ಈವರೆಗೆ ಔಷದಿ ಕಂಡು ಹಿಡಿದಿಲ್ಲ, ಯಾವ ಕಾರಣದಿಂದ ಬರುತ್ತೆ ಎನ್ನುವ ಸಂಶೋದನೆಯು ಆಗಿಲ್ಲ. ವೈದ್ಯಲೋಕದಲ್ಲಿ ಹಂದಿ ಗೋಡು ನಿಗೂಡ ಕಾಯಿಲೆ ಎಂಬ ಹೆಸರು ಇಟ್ಟಿದ್ದಾರೆ.
   ದೇಹದ ಸಂದುಗಳ ಮೂಳೆ ಅಡ್ಡಾ ದಿಡ್ಡಿ ಬೆಳೆಯುವುದರಿಂದ ರೋಗಿಯಾದವರು ವಕ್ರವಾಗಿ ನಡೆದಾಡಲು ಪ್ರಾರಂಭಿಸುತ್ತಾರೆ, ಕ್ರಮೇಣ ವಿಪರೀತ ನೋವಿನಿಂದ ನರಳುತ್ತಾರೆ, ನಿಲ್ಲಲು ಸಾಧ್ಯವಿಲ್ಲ, ಕುಳಿತುಕೊಳ್ಳಲು ಸಾಧ್ಯವಿಲ್ಲ, ಮಲಗಲು ಸಾಧ್ಯವಿಲ್ಲದಂತ ನರಕಯಾತನೆ.
  ಇದರಿಂದ ಕುಬ್ಜರಾಗುತ್ತಾರೆ ಇಂತಹ 300ಕ್ಕೂ ಹೆಚ್ಚು ರೋಗ ಪೀಡಿತರು ಸಾಗರ ತಾಲ್ಲೂಕಿನಲ್ಲಿದ್ದಾರೆ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ ಮತ್ತು ಎನ್ ಆರ್ ಪುರದಲ್ಲೂ ಈ ಕಾಯಿಲೆ ಪೀಡಿತರಿದ್ದಾರೆ.
   ಸಾಗರ ಪಟ್ಟಣದಿಂದ ಕೆಳದಿಗೆ ಹೋದರೆ ಅಲ್ಲಿ೦ದ ಒಂದೆರೆಡು ಕಿ.ಮಿ. ದೂರದಲ್ಲಿ ಹಂದಿಗೋಡು ಹಳ್ಳಿ ಇದೆ, ಈ ಹಳ್ಳಿಯ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಈ ಕಾಯಿಲೆ ಪೀಡಿತರಿದ್ದಾರೆ ಆದರೆ ಇವರ ಪಕ್ಕದಲ್ಲೇ ಹವ್ಯಕ ಬ್ರಾಹ್ಮಣರ ಕಾಲೋನಿ ಇದೆ ಅಲ್ಲಿ ಈ ಕಾಯಿಲೆ ಯಾರಿಗೂ ಬಂದಿಲ್ಲ.
  ಜಿನೆಟಿಕ್ ಕಾರಣದಿಂದ ಈ ಕಾಯಿಲೆ ವಂಶಪಾರಂಪರ್ಯವಾಗಿ ಬರುತ್ತೆ ಅಂತ ವೈದ್ಯರು ಹೇಳುತ್ತಾರೆ ಆದರೆ ನಮ್ಮ ದೇಶಕ್ಕೆ ಸ್ವಾತಂತ್ರ ಬಂದು ಇಷ್ಟು ವಷ೯ವಾದರೂ ಇವರ ಕಾಯಿಲೆ ವಿಮೋಚನೆಗೆ ಸರಿಯಾದ ಚಾಲನೆ ಸಿಗದಿರುವುದು ನೋವಿನ ಸಂಗತಿ.
  1995 ರಲ್ಲಿ ಜಿಲ್ಲಾ ಪಂಚಾಯತನ ಮೊದಲ ಸಭೆಯಲ್ಲಿ ಹಂದಿಗೋಡು ಕಾಯಿಲೆ ಬಗ್ಗೆ ನಾನು ಮಾತಾಡಿದಾಗ ಉಪಸ್ಥಿತರಿದ್ದ ಆಗಿನ ಉಪ ಮುಖ್ಯಮಂತ್ರಿ ಜೆ.ಹೆಚ್.ಪಟೇಲರು ನನಗೆ ಈವರೆಗೆ ಈ ಕಾಯಿಲೆ ಪೀಡಿತರ ಬಗ್ಗೆ ಮಾಹಿತಿ ಇದ್ದಿಲ್ಲ ಸೂಕ್ತ ಕ್ರಮ ತೆಗೆದು ಕೊಳ್ಳುವುದಾಗಿ ಭರವಸೆ ನೀಡಿದ್ದರು, ಈ ಸಭೆಯಲ್ಲಿ ಅವತ್ತು ಯಡೂರಪ್ಪ, ಈಶ್ವರಪ್ಪ ಕೂಡ ಇದ್ದರು.
  1999ರಲ್ಲಿ ಈ ಬಗ್ಗೆ ಕೇಂದ್ರ ಸಕಾ೯ರದ ಸಹಾಯ ಪಡೆಯಲು ದೆಹಲಿಗೆ ನಿಯೋಗ ಒಂದನ್ನ ಒಯ್ದು ರಿಪ್ಪನ್ ಪೇಟೆ ಸಮೀಪದ ಬರುವೆ ಎಂಬ ಹಳ್ಳಿಯ ಶ್ರೀದರ ಎಂಬ ಹಂದಿಗೋಡು ಕಾಯಿಲೆ ಪೀಡಿತ ಯುವಕರಿoದ ಕೇಂದ್ರ ಸಚಿವರಿಗೆ ಮನವಿ ಅಪಿ೯ಸುವ ಕೆಲಸ ನಾವೆಲ್ಲ ಸಮಾನ ಮನಸ್ಕ ಮಿತ್ರರು ಮಾಡಿದ್ದೆವು.
  2007 ರಲ್ಲಿ ಆಗಿನ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ್ದರು.

  ನಂತರ ನನಗೆ ಈ ಜನರ ಬಗ್ಗೆ ನನ್ನ ಮಿತಿಯಲ್ಲಿ ಏನೂ ಮಾಡಲಾಗಲಿಲ್ಲ ಆದ್ದರಿಂದ ಈ ಜನರ ಬಗ್ಗೆ ಸದಾ ಸಹಾಯ ಮಾಡುವ ಹಂದಿಗೋಡು ಚಂದ್ರಶೇಖರರಿಗೆ ನಿಮಗೇನು ಸಹಾಯ ಮಾಡಬಹುದು ಅಂತ ಕೇಳಿದಾಗ ಅವರು ನನಗೆ ಒಡಾಡಲು TVS ಒಂದನ್ನ ಸಕಾ೯ರ ನೀಡಿತ್ತು ಈಗ ವಾಪಾಸ್ ಪಡೆದಿದ್ದಾರೆ ಅಂದರು ನಾನು ಅವರಿಗೆ ಒಂದು TVS ಬೈಕ್ ಖರೀದಿಸಿ ನೀಡಿದ್ದು (2006)ಅವರು  ಸದಾ ಸ್ಮರಿಸುತ್ತಾರೆ ಅದನ್ನ ಇವಾಗಲು ಹoದಿಗೋಡು ಕಾಯಿಲೆ ಪೀಡಿತರ ಪರವಾಗಿ ಉಪಯೋಗಿಸುತ್ತಾರೆ ಅದು ನನಗೆ ನೆಮ್ಮದಿ, ತೃಪ್ತಿ ತಂದಿದೆ.

Comments

  1. SattaKing में कई बार हारा लेकिन आज Bikaner Super में जीतने का मज़ा ही अलग था। अब हर दिन सोच-समझकर नंबर लगाता हूँ।"

    ReplyDelete
  2. Gali, Desawar, Faridabad – jitne bhi results chahiye hote hain sab ek jagah mil jate hain Satta King pe. Time bhi bachta hai aur hassle bhi nahi hoti.

    ReplyDelete

Post a Comment

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...