ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿಯ ರೇಣುಕಮ್ಮ, ದೇವಾಲಯದಲ್ಲಿ ಪ್ರತಿ ವಷ೯ ನಡೆಯುತ್ತಿದ್ದ ಬೆತ್ತಲೆ ಸೇವೆಯನ್ನ ನಿಲ್ಲಿಸಲು ಪ್ರಗತಿಪರರು ಮುಂದಾದಾಗ ಅದಕ್ಕೆ ಅನೇಕ ಅಡಚಣೆ ಬ೦ತು, ಗೌರವಾನ್ವತ ಕುಟುಂಬಗಳ ಪ್ರಾಯದ ಹೆಣ್ಣಮಕ್ಕಳು ತಮ್ಮ ಬಾಲ್ಯದಲ್ಲಿ ತಮ್ಮ ಪೋಷಕರು ಮಾಡಿದ ಹರಕೆ ತೀರಿಸಲು ವರದಾ ನದಿಯಲ್ಲಿ ಮಿಂದು ಬೆತ್ತಲೆಯಾಗಿ ನಾಕಾರು ಕಿ.ಮಿ. ನಡೆದು ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಬೇಕಿತ್ತು.ಬೆತ್ತಲಾಗಿ ಹೋಗುವ ಸಂಕಟ ಈ ಕುಟುಂಬಗಳದ್ದಾದರೆ ಇವರನ್ನ ನೋಡಲು ಪೋಲಿ ಪಟಾಲಂಗಳು ಕೆಲವು ಸಾವಿರ ಅಲ್ಲಿ ಸೇರುತ್ತಿತ್ತು. ಅವತ್ತಿನ ಲೈಂಗಿಕ ಪತ್ರಿಕೆಗಳಾದ ರತಿ ವಿಜ್ಞಾನ ಮುಂತಾದವು ಆ ಚಿತ್ರಗಳನ್ನ ನೇರವಾಗಿ ಪ್ರಕಟಿಸಿ ಹೆಚ್ಚಿನ ಪ್ರಸಾರ ಪಡೆಯುತ್ತಿದ್ದವು. ಅವತ್ತು ದಲಿತ ಸಂಘಷ೯ ಸಮಿತಿ ಸಂಸ್ಥಾಪಕರಾದ ಬಿ.ಕೃಷ್ಣಪ್ಪ ಇದನ್ನೊಂದು ಸವಾಲಾಗಿ ತೆಗೆದು ಕೊಂಡರು.ಸಕಾ೯ರದಲ್ಲಿ ಆಗ ಮಂತ್ರಿ ಆಗಿದ್ದ ಜೆ.ಹೆಚ್.ಪಟೇಲರು ಸಾತ್ ನೀಡಿದರು ಆದರೆ ಸ್ಥಳಿಯ ಶಾಸಕರಾಗಿದ್ದ ಬಂಗಾರಪ್ಪ ಮತ ಗಳಿಗಾಗಿ ತಟಸ್ಥರಾಗಿದ್ದರು.
ಭಕ್ತರನ್ನ ಇದನ್ನ ತಡೆಯಲು ಪ್ರಯತ್ನಿಸಿದವರ ಮೇಲೆ ಎತ್ತಿಕಟ್ಟಿದರು, ಸಾವಿರಾರು ವರುಷದಿಂದ ನಡೆದುಕೊಂಡ ಪದ್ದತಿ ನಿಲ್ಲಿಸಿದರೆ ದೇವಿಯ ಶಾಪ ಎದುರಿಸಬೇಕಾದೀತೆಂಬ ಪಾಪ ಪ್ರಜ್ಞಾ ಪ್ರಚಾರ ಮಾಡಿದರು, ಇದನ್ನ ಅಡ್ಡಗಟ್ಟುತ್ತಿರುವವರು ದಲಿತರು ಅವರನ್ನ ಅಟ್ಟಾಡಿಸಿ ಹೊಡೆಯಿರಿ ಅಂತ ಭೂಮಾಲಿಕರು, ವೈದಿಕರು ಸುಕುಂ ಮಾಡಿದರು,ಜೋಗಪ್ಪಗಳ ದೊಡ್ಡ ಗುಂಪಿಗೆ ಪ್ರಚೋದನೆ ಮಾಡಿ ಬಿಟ್ಟರು ನಂತರ ಸುಯೋ೯ದಯದಿಂದ ಸೂಯಾ೯ ಸ್ತದ ತನಕ ನಡೆದಿದ್ದು ಅಮಾನಿಯ ದೌಜ೯ನ್ಯ ಚಳವಳಿಗಾರರನ್ನ ಜೀವ ಸಹಿತ ಬಿಟ್ಟಿದ್ದೆ ಪುಣ್ಯ ನಂತರ ಪ್ರಚೋದಿತ ಗುಂಪು ರಣೋಲ್ಲಾಸದಲ್ಲಿ ಮೈಮರೆತು ರಕ್ಷಣೆಗೆ ನಿಯೋಜಿತರಾದ ಪೋಲಿಸರನ್ನೂ ಬಿಡಲಿಲ್ಲ ನಂತರದ್ದು ಇತಿಹಾಸ, ಈಗ ಬೆತ್ತಲೆ ಸೇವೆ ನಿಂತಿದೆ.
ಹೀಗೆ ಜನಪರ ಹೋರಾಟ ಹಲವು ಆಯಾಮ ದಾಟಿಯೇ ಗುರಿ ಮುಟ್ಟುತ್ತದೆ ಆದರೆ ಕಾಲದ ವೇಗದಲ್ಲಿ ಎಲ್ಲವೂ ಮರೆಯುತ್ತೇವೆ.
ಬಿ. ಕೃಷ್ಣಪ್ಪರ ಈ ಹೋರಾಟ ಒಮ್ಮೆಯೂ ಯಾರೂ ನೆನಪು ಮಾಡಿಕೊಳ್ಳದಿರುವುದು ವಿಷಾದನೀಯ, ಅವರು ಈ ಹೋರಾಟದಲ್ಲಿ ಅಹಿಂಸೆ, ಕಾನೂನು ಬೆಂಬಲ ಪಡೆದಿದ್ದರು.
ಸಾವ೯ಜನಿಕ ಸ್ಥಳದಲ್ಲಿ ಜಾತಿ ಆಚರಣೆ ನಿವಾರಣೆಗೆ ಇದೇ ರೀತಿ ಚಳವಳಿ ಅಗತ್ಯವಿದೆ. ಈಗ ಪರಸ್ಪರ ಕೆಸರರಚಾಟ ನೋಡಿದರೆ ಬೇಸರ ಅನ್ನಿಸುತ್ತೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment